Homeಮುಖಪುಟಅಸ್ಸಾಂ: ರಾಜಕೀಯ ಪಕ್ಷಗಳಿಗೆ ಚುನಾವಣಾ ಪ್ರಣಾಳಿಕೆ ರಚಿಸಿಕೊಟ್ಟ 4 ಸಾವಿರ ಮಕ್ಕಳು!

ಅಸ್ಸಾಂ: ರಾಜಕೀಯ ಪಕ್ಷಗಳಿಗೆ ಚುನಾವಣಾ ಪ್ರಣಾಳಿಕೆ ರಚಿಸಿಕೊಟ್ಟ 4 ಸಾವಿರ ಮಕ್ಕಳು!

"ಇಲ್ಲಿನ ರಾಜಕೀಯ ಪಕ್ಷಗಳು ಮುಂದಿನ ಚುನಾವಣೆಗಾಗಿ ತಯಾರಿಸುವ ಪ್ರಣಾಳಿಕೆಗಳಲ್ಲಿ ನಮ್ಮ ಬೇಡಿಕೆಗಳನ್ನು ಸೇರಿಸುವಂತೆ ಒತ್ತಾಯಿಸಿ, ಈ ಪ್ರಣಾಳಿಕೆಯ ಮೂಲಕ ಶಿಫಾರಸ್ಸುಗಳನ್ನು ಮಾಡುತ್ತಿದ್ದೇವೆ..."

- Advertisement -
- Advertisement -

ಅಸ್ಸಾಂನ 17 ಜಿಲ್ಲೆಯ ಸುಮಾರು 4 ಸಾವಿರ ಮಕ್ಕಳು ಸೇರಿ ಅಲ್ಲಿನ ರಾಜಕೀಯ ಪಕ್ಷಗಳಿಗೆ ಚುನಾವಣಾ ಪ್ರಣಾಳಿಕೆ ರಚಿಸಿಕೊಟ್ಟಿದ್ದು, ಅದರಲ್ಲಿ “ಉಚಿತ ಮತ್ತು ಖಡ್ಡಾಯ ಶಿಕ್ಷಣ, ಹಿಂಸಾಚಾರ ಮುಕ್ತ ಮತ್ತು ಲಿಂಗ ಸಮಾನತೆಯಂತಹ ಭರವಸೆಗಳ ಬೇಡಿಕೆಯನ್ನು” ಇಟ್ಟಿದ್ದಾರೆ. 2021 ರಲ್ಲಿ ಅಸ್ಸಾಂ ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.

ನಿನ್ನೆ ವಿಶ್ವ ಮಕ್ಕಳ ದಿನದ ಅಂಗವಾಗಿ ಗೌಹಾತಿ ಪತ್ರಿಕಾ ಭವನದಲ್ಲಿ ಈ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಯಿತು. 

ಇಲ್ಲಿ, ಮಜುಲಿ ಜಿಲ್ಲೆಯ 16 ವರ್ಷದ ಕುಲದೀಪ್ ನಾರಾಯಣ್ ಬೋರಾ ಮಾತನಾಡಿ, “ಇಲ್ಲಿನ ರಾಜಕೀಯ ಪಕ್ಷಗಳು ಮುಂದಿನ ಚುನಾವಣೆಗಾಗಿ ತಯಾರಿಸುವ ಪ್ರಣಾಳಿಕೆಗಳಲ್ಲಿ ನಮ್ಮ ಬೇಡಿಕೆಗಳನ್ನು ಸೇರಿಸುವಂತೆ ಒತ್ತಾಯಿಸಿ, ಈ ಪ್ರಣಾಳಿಕೆಯ ಮೂಲಕ ಶಿಫಾರಸ್ಸುಗಳನ್ನು ಮಾಡುತ್ತಿದ್ದೇವೆ” ಎಂದು ಹೇಳಿದರು.

ಇದನ್ನೂ ಓದಿ: ಅಸ್ಸಾಂ ಹೋರಾಟಗಾರ ಅಖಿಲ್ ಗೊಗೋಯ್ ಚಿತ್ರ ಬಿಡಿಸಿದ ಕಲಾವಿದರ ಬಂಧನ!

ಈ ಪ್ರಣಾಳಿಕೆಯ ಮೇಲುಸ್ತುವಾರಿಯನ್ನು ರಾಷ್ಟ್ರೀಯ ಮಟ್ಟದ ಎನ್‌ಜಿಓ ‘ಪ್ರತ್ಯೇಕ್’ ವಹಿಸಿಕೊಂಡಿದ್ದು, ಇದಕ್ಕೆ ಯುನಿಸೆಫ್ ತಾಂತ್ರಿಕ ಸಹಕಾರವನ್ನು ನೀಡಿ, “ರಿ-ಇಮ್ಯಾಜಿನ್” ಟ್ವಿಟ್ಟರ್‌ ಅಭಿಯಾನವನ್ನು ಪ್ರಾರಂಭಿಸಿ ಕೊರೊನೋತ್ತರದ ಜಗತ್ತನ್ನು ಸೃಜನಾತ್ಮಕವಾಗಿ ನಿರ್ಮಿಸಲು ಕರೆ ನೀಡಿದೆ.

ಸಾಂಕ್ರಾಮಿಕ ರೋಗದ ನಂತರದ ಜಗತ್ತನ್ನು ಕಟ್ಟುವ ಪ್ರಯತ್ನಗಳಿಗೆ ಮತ್ತು ಶಿಕ್ಷಣದ ರೂಪವನ್ನು ಉನ್ನತೀಕರಿಸಲು ಮಕ್ಕಳು ಮತ್ತು ಯುವಜನರು ಸಹಕರಿಸಬೇಕೆಂದು ರಿ-ಇಮ್ಯಾಜಿನ್ ಅಭಿಯಾನವು ವಿಶ್ವ ಮಕ್ಕಳ ದಿನಾಚರಣೆಯಂದು ಕರೆ ನೀಡಿದೆ.

ಇದನ್ನೂ ಓದಿ: ಅಸ್ಸಾಂ ಚುನಾವಣೆ: ಹೊಸ ಪ್ರಾದೇಶಿಕ ಪಕ್ಷ ಸ್ಥಾಪನೆ. ಅಖಿಲ್ ಗೊಗೊಯ್ ಸಿಎಂ ಅಭ್ಯರ್ಥಿ!

ಮಕ್ಕಳೇ ರಚಿಸಿರುವ ಈ ಪ್ರಣಾಳಿಕೆಯನ್ನು ಮುಖ್ಯಮಂತ್ರಿ, ವಿಧಾನಸಭೆ ಸ್ಪೀಕರ್, ಪ್ರತಿಪಕ್ಷದ ನಾಯಕ ಮತ್ತು ಅಸ್ಸಾಂನ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳು ಮತ್ತು ರಾಜಕೀಯ ನಾಯಕರುಗಳಿಗೆ ನೀಡಲಾಗುವುದು.

ಈ ಪ್ರಣಾಳಿಕೆ ತಯಾರಿಕೆಗಾಗಿ, ಆನ್‌ಲೈನ್ ಮತ್ತು ಆಫ್‌ಲೈನ್ ಸ್ಕೋರ್‌ಕಾರ್ಡ್‌ಗಳನ್ನು ಬಳಸಿಕೊಂಡು ಒಂದು ಸಮೀಕ್ಷೆಯನ್ನು ನಡೆಸಲಾಯಿತು. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ವಿವಿಧ ಸಂಸ್ಥೆಗಳ ಕ್ಷೇತ್ರ ಸಂಯೋಜಕರು, ಮಕ್ಕಳು ಮತ್ತು ಯುವಜನರನ್ನು ತಲುಪಿ ಕೆಲವು ಸಂದರ್ಭಗಳಲ್ಲಿ ನೇರ ಮುಖಾಮುಖಿಯಾಗಿ ಮಾಹಿತಿ ಸಂಗ್ರಹಿಸಲಾಗಿದೆ.

ಇದನ್ನೂ ಓದಿ: ನಾನು ಅಸ್ಸಾಂನ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಲ್ಲ: ಮಾಜಿ ಸಿಜೆಐ ರಂಜನ್ ಗೊಗೊಯ್

ಈ ಸಮೀಕ್ಷೆಯ ಫಲಿತಾಂಶಗಳ ಪ್ರಕಾರ, ಶೇಕಡಾ 70 ರಷ್ಟು ಮಕ್ಕಳು ವೃತ್ತಿಪರ ತರಬೇತಿ ಮತ್ತು ವೃತ್ತಿ ಸಮಾಲೋಚನೆಯ ಅಗತ್ಯವನ್ನು ವ್ಯಕ್ತಪಡಿಸಿದ್ದಾರೆ. ಇನ್ನೂ ಶೇಕಡ 70 ರಷ್ಟು ಮಕ್ಕಳು ಮಾನಸಿಕ ಆರೋಗ್ಯವನ್ನು ತಮ್ಮ ಪಠ್ಯಕ್ರಮದಲ್ಲಿ ಸೇರಿಸಿಕೊಳ್ಳಬೇಕೆಂದು ಬಯಸುತ್ತಾರೆ. ಶೇಕಡಾ 92 ರಷ್ಟು ಜನರು ಲಿಂಗ ಸಂವೇದನೆಯ ಕುರಿತು ಪಠ್ಯದಲ್ಲಿ ಸೇರಿಸಲು ಬಯಸಿದ್ದು, ಜೊತೆಗೆ ಲೈಂಗಿಕತೆ ಮತ್ತು ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆಯೂ ವಿಷಯಗಳನ್ನ ಸೇರಿಸುವಂತೆ ಅಭಿಪ್ರಾಯಪಟ್ಟಿದ್ದಾರೆ. ಗ್ರಾಮೀಣ ಪ್ರದೇಶದ ಹೆಚ್ಚಿನ ಜನರಿಗೆ ಕೈಗೆಟುಕುವ ಆರೋಗ್ಯ ಸೇವೆ ಮತ್ತು ಪೌಷ್ಠಿಕ ಆಹಾರದ ಲಭ್ಯತೆಯಿಲ್ಲ ಎಂದೂ ಮಕ್ಕಳು ಅಭಿಪ್ರಾಯಪಟ್ಟಿದ್ದಾರೆ.

ಸಮೀಕ್ಷೆಯಲ್ಲಿ 85 ಶೇಕಡಾ ಮಕ್ಕಳು ನಾಯಕರು ಮಕ್ಕಳೊಂದಿಗೆ ಮಾತನಾಡಬೇಕು ಮತ್ತು ಪರಿಸರದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಾಗ ಅವರ ಅನುಭವಗಳು ಮತ್ತು ಆಲೋಚನೆಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದ್ದಾರೆ. ಮಾದಕ ದ್ರವ್ಯ ಸೇವನೆ, ಮಕ್ಕಳ ಕಳ್ಳಸಾಗಣೆ, ಮಾನವ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಪ್ರಚಾರದ ವಿಷಯಗಳಿಗೂ ಸಹ ಈ ಸಮೀಕ್ಷೆಯಲ್ಲಿ ಪ್ರಮುಖ ಆದ್ಯತೆಯಿದೆ.

ಇದನ್ನೂ ಓದಿ: 2024 ರ ಚುನಾವಣೆಗೆ ಸಜ್ಜು: 100 ದಿನ ರಾಷ್ಟ್ರೀಯ ಪ್ರವಾಸ ಕೈಗೊಳ್ಳಲಿರುವ ಜೆ.ಪಿ.ನಡ್ಡಾ!

ಮಕ್ಕಳ ಪ್ರಣಾಳಿಕೆಯಲ್ಲಿನ ಶಿಫಾರಸುಗಳು:

  • ಎಲ್ಲಾ ರೀತಿಯ ಹಿಂಸಾಚಾರದಿಂದ ರಕ್ಷಣೆ.
  • ಕೈಗೆಟುಕುವ ಆರೋಗ್ಯ ಸೇವೆ ಮತ್ತು ಪೌಷ್ಠಿಕ ಆಹಾರದ ಲಭ್ಯತೆ.
  • ವರ್ಗ, ಜಾತಿ, ಲಿಂಗ, ಧರ್ಮ ಅಥವಾ ಯಾವುದೇ ಆಧಾರದ ಮೇಲೆ ಯಾವುದೇ ತಾರತಮ್ಯವಿರಬಾರದು.
  • ಎಲ್ಲಾ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ.
  • ಶಿಕ್ಷಣ ಸಂಸ್ಥೆಗಳ ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲಗಳನ್ನು ಸುಧಾರಿಸಲು ಕ್ರಮ ಕೈಗೊಳ್ಳುವುದು.
  • ಅಸ್ಸಾಂನಾದ್ಯಂತ ಎಲ್ಲಾ ಕುಟುಂಬಗಳಿಗೆ ಸುರಕ್ಷಿತ ಕುಡಿಯುವ ನೀರು ಮತ್ತು ನೈರ್ಮಲ್ಯತೆಯ ವ್ಯವಸ್ಥೆ.
  • ಆಟವಾಡಲು, ಬೆಳೆಯಲು ಮಕ್ಕಳಿಗೆ ಸುರಕ್ಷಿತ ಸ್ಥಳಗಳು.
  • ಗೌರವಯುತ ಜೀವನವನ್ನು ನಡೆಸಲು ಅವರಿಗೆ ಸಾಕಷ್ಟು ಪುನರ್ವಸತಿ ಮತ್ತು ಸಾಮಾಜಿಕ ಬೆಂಬಲವನ್ನು ಒದಗಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ವಿಭಿನ್ನ ಕ್ರಮಗಳನ್ನು ತೆಗೆದುಕೊಳ್ಳುವುದು.

ಹೀಗೆ ಇನ್ನೂ ಹತ್ತಾರು ಅಂಶಗಳನ್ನು ಮಕ್ಕಳು ಬೇಡಿಕೆಯ ರೂಪದ ಈ ಪ್ರನಾಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.


ಇದನ್ನೂ ಓದಿ: ಭಾರತ ಒಕ್ಕೂಟ ವ್ಯವಸ್ಥೆ ಎಂಬ ಒಂದು ಅಣಕು ಪ್ರಹಸನ: ಬಿ.ಶ್ರೀಪಾದ್ ಭಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...