Homeಮುಖಪುಟವಿವರಗಳನ್ನು ತಪ್ಪಾಗಿ ದಾಖಲಿಸಿದ ಬರೋಡಾ ಬ್ಯಾಂಕ್; ರೈತರಿಗೆ ಫಸಲ್ ಭೀಮಾ ವಿಮೆಯ ನಿರಾಕರಣೆ

ವಿವರಗಳನ್ನು ತಪ್ಪಾಗಿ ದಾಖಲಿಸಿದ ಬರೋಡಾ ಬ್ಯಾಂಕ್; ರೈತರಿಗೆ ಫಸಲ್ ಭೀಮಾ ವಿಮೆಯ ನಿರಾಕರಣೆ

ನಿಜವಾಗಿಯೂ ಭೂಮಿ ಇರುವುದು ಟ್ಯೂಬ್‌ವೆಲ್-ನೀರಾವರಿ ಪ್ರದೇಶದಲ್ಲಿ, ಆದರೆ ಪಾಲಿಸಿ-ಡಾಕುಮೆಂಟ್‌ಗಳು ಕಾಲುವೆ-ನೀರಾವರಿ ಪ್ರದೇಶ ಎಂದು ತಪ್ಪಾಗಿ ದಾಖಲಿಸಿವೆ.

- Advertisement -
- Advertisement -

ರಾಜಸ್ತಾನದ ಶ್ರೀ ಗಂಗಾನಗರ ಜಿಲ್ಲೆಯ ಕಿಸಾನ್ ಕಾರ್ಡ್ ಹೊಂದಿರುವ ರೈತರು 2019 ರ ’ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ’ಯ ವಿಮಾ ಹಣ ಪಡೆಯಲು ಪರದಾಡುತ್ತಿದ್ದಾರೆ. ವಿಮಾ ಪಾಲಿಸಿಯಲ್ಲಿ ಬ್ಯಾಂಕ್ ಆಫ್ ಬರೋಡ ರೈತರ ಭೂ ವಿವರಗಳನ್ನು ತಪ್ಪಾಗಿ ದಾಖಲಿಸಿರುವುದೇ ಇದಕ್ಕೆ ಕಾರಣ.

ಶ್ರೀ ಗಂಗಾನಗರ ಜಿಲ್ಲೆಯ ಸುರತ್‌ಘರ್ ಹೋಬಳಿಯ ರಾಕೇಶ್ ಕುಮಾರ್ ಎಂಬ ರೈತರು ಕೌನ್‌ಪಲ್ಸಾರ್ ಎಂಬ ಗ್ರಾಮದಲ್ಲಿ ಜಮೀನು ಹೊಂದಿದ್ದಾರೆ. ತಹಸೀಲ್ದಾರ್ ನೀಡಿರುವ ಭೂ ದಾಖಲೆ ಇದನ್ನು ಪುಷ್ಟಿಕರಿಸುತ್ತದೆ.
ಆದರೆ ರಾಕೇಶ್ ಅವರ ಫಸಲ್ ಭೀಮಾ ಪಾಲಿಸಿ (2019 ರ ಮುಂಗಾರು ಮತ್ತು ಹಿಂಗಾರು)ಗಳಲ್ಲಿ ಜಮೀನು ಎರಡು ಗ್ರಾಮಗಳಲ್ಲಿ ಇದೆಯೆಂದು ದಾಖಲಾಗಿದೆ. ಮುಂಗಾರು ಅವಧಿಯ ಪಾಲಿಸಿಯಲ್ಲಿ ಜಮೀನು 16 ಎಸ್‌ಎಲ್‌ಡಿ ಎಂಬ ಗ್ರಾಮದಲ್ಲಿ ಇರುವುದಾಗಿ, ಹಿಂಗಾರು ಅವಧಿಯ ಪಾಲಿಸಿಯಲ್ಲಿ ಜಮೀನು ತಿಲಾವಳಿ ಗ್ರಾಮದಲ್ಲಿ ಇರುವುದಾಗಿ ನಮೂದಿತವಾಗಿದೆ.

ಈ ಬದಲಾವಣೆಯ ಕಾರಣಕ್ಕೆ ರಾಕೇಶ್ ಅವರಿಗೆ ವಿಮಾ ಹಣ ಪಡೆಯಲು ಸಾಧ್ಯವಾಗುತ್ತಿಲ್ಲ. ’ಪರಿಹಾರ ಒದಗಿಲಸಲು ವಿಮಾ ಕಂಪನಿಗಳು ಇನ್ನು ಮುಂದೆ ಜವಾಬ್ದಾರರಾಗಿರುವುದಿಲ್ಲ. ಅವು ತಮ್ಮ ಲಾಭವನ್ನು ಗರಿಷ್ಠಗೊಳಿಸುವುದಕ್ಕೆ ಯತ್ನಿಸಲಿವೆ. ಇದಕ್ಕೆ ಪೂರಕವಾಗಿ ಬ್ಯಾಂಕ್ ಉದ್ದೇಶಪೂರ್ವಕವಾಗಿಯೇ ತಪ್ಪಾದ ವಿವರಗಳನ್ನು ನಮೂದಿಸಿದೆ’ ಎಂದು ರಾಕೇಶ್ ಆರೋಪಿಸಿದ್ದಾರೆ.

ಇದನ್ನೂ ಓದಿ: ರೈತ ಪ್ರತಿಭಟನೆಯಲ್ಲಿ ಪಂಜಾಬಿನ ರೈತ ಕೂಲಿಯಾಳುಗಳ ಕತೆ

’ರೈತರ ಜಮೀನುಗಳು ಬಾವಿ ಆಶ್ರಯಿತ ನೀರಾವರಿ ಪ್ರದೇಶದಲ್ಲಿವೆ ಎಂದು ಬ್ಯಾಂಕ್ ತೋರಿಸುತ್ತಿದೆ. ಈ ಪ್ರದೇಶದಲ್ಲಿ ಸಾಮಾನ್ಯವಾಗಿ ಒಳ್ಳೆ ಫಸಲು ಬರುವುದರಿಂದ, ಬೆಳೆ ನಷ್ಟಕ್ಕೆ ನೀಡಲ್ಪಡುವ ಪರಿಹಾರ/ವಿಮಾಹಣ ತುಂಬ ನಗಣ್ಯವಾಗಿರುತ್ತದೆ’ ಎಂದು ರಾಕೇಶ್ ಹೇಳುತ್ತಾರೆ. ’ನನ್ನ ಜಮೀನಿನ ವಿಷಯಕ್ಕೆ ಬಂದರೆ ಅದು ಇರುವುದು ಟ್ಯೂಬ್‌ವೆಲ್ ನೀರಾವರಿ ಪ್ರದೇಶದಲ್ಲಿ. ಆದರೆ ಬ್ಯಾಂಕ್ ಅದನ್ನು ಕಾಲುವೆ-ನೀರಾವರಿ ಪ್ರದೇಶದ ಹಳ್ಳಿಯಲ್ಲಿದೆ ಎಂದು ತಪ್ಪಾದ ಗ್ರಾಮವನ್ನು ನಮೂದು ಮಾಡಿದೆ’ ಎಂದು ಅವರು ಆಕ್ರೋಶ ವ್ಯಕಶಪಡಿಸಿದ್ದಾರೆ.

ಟ್ಯೂಬ್‌ವೆಲ್ ನೀರಾವರಿ ಪ್ರದೇಶದಲ್ಲಿ ಅನುಕೂಲಕರವಲ್ಲದ ಹೊತ್ತಿನಲ್ಲಿ ನೀರು ಬಿಡುವುದು ಮತ್ತು ವಿದ್ಯುತ್‌ನ ಅಸಮರ್ಪಕ ಸರಬರಾಜು ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದು ಅವರ ಫಸಲನ್ನು ಬಾಧಿಸಿ, ಅವರಿಗೆ ನಷ್ಟವುಂಟು ಮಾಡುತ್ತದೆ. ಈ ನಷ್ಟವನ್ನು ವಿಮಾ ಪರಿಹಾರದಲ್ಲಿ ಪಡೆಯಲು ರೈತರು ಬಯಸುತ್ತಿದ್ದಾರೆ.

’ಚಲಿಗಾಲ ಆರಂಭವಾದ ಕೂಡಲೇ ರಾತ್ರಿ 9 ರಿಂದ ಬೆಳಗಿನ 3 ರವರೆಗೆ ವಿದ್ಯುತ್ ಸರಬರಾಜು ಮಾಡುವುದರಿಂದ ನೀರು ಹಾಯಿಸಲು ರೈತರಿಗೆ ಕಷ್ಟವಾಗುತ್ತಿದೆ ಎಂದು ರಾಕೇಶ್ ಹೇಳುತ್ತಾರೆ. ಸುರತ್‌ಘರ್ ‌ಹೋಬಳಿಯಲ್ಲಿ ಬಹುಪಾಲು ರೈತರು ಟ್ಯೂಬ್‌ವೆಲ್‌ಗಳಿಂದ ಪಡೆಯುವ ನೀರನ್ನು ಹನಿ ನೀರಾವರಿ ಪದ್ಧತಿ ಬಳಸಿ ನೀರಾವರಿ ಮಾಡುತ್ತಾರೆ. ರಾತ್ರಿ ಸಂದರ್ಭದಲ್ಲಿ ವಿದ್ಯುತ್ ಸರಬರಾಜು ಮಾಡುವುದರಿಂದ ಆ ಚಳಿಯಲ್ಲಿ ಡ್ರಿಪ್ ಪೈಪ್‌ಗಳನ್ನು ಆ ಕಡೆಯಿಂದ ಈ ಕಡೆಗೆ ಶಿಫ್ಟ್‌ ಮಾಡುವುದು ಕಷ್ಟ. ಈ ನಡುವೆ ನೀರು ಸೋರಿಕೆಯಾಗಿದೆಯಾ ಎಂದು ಪರೀಕ್ಷಿಸುತ್ತಿರಬೇಕು. ಹೆಚ್ಚು ಪ್ರಮಾಣದ ಅಥವಾ ಕಡಿಮೆ ಪ್ರಮಾಣದ ನೀರನ್ನು ಬೆಳೆಗಳಿಗೆ ಹಾಯಿಸಿದರೆ ಅದು ಫಸಲಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: ರೈತರ ವಿರುದ್ಧವೂ ಝಳಪಿಸಿದ ಹತಾರ: ’ದೇಶದ್ರೋಹ’ವೆಂಬ ಹಳೆಯ ಹುನ್ನಾರ

ಸುರತ್‌ಘರ್ ರೈತರು ವಿದ್ಯುತ್ ಮಂಡಳಿ ಕಚೇರಿ ವಿರುದ್ಧ ಆಗಾಗ ಪ್ರತಿಭಟನೆ ನಡೆಸಿ ವಿದ್ಯುತ್ ಸರಬರಾಜು ಸಮಯವನ್ನು ಹಗಲಿನಲ್ಲಿ ನಿಗದಿಪಡಿಸಿ ಎಂದ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಟ್ಯೂಬ್-ವೆಲ್ ನೀರಾವರಿಯ ಕಷ್ಟಗಳು ಕಾಲುವೆ-ನೀರಾವರಿಯಲ್ಲಿ ಅಷ್ಟಾಗಿ ಇಲ್ಲ. ಕಾಲುವೆ ನೀರು ನೇರವಾಗಿ ಜಮೀನು ತಲುಪತ್ತದೆ. ವಿದ್ಯುತ್‌ನ ಹಂಗೂ ಇರುವುದಿಲ್ಲ.ಇಂತಹ ಸಂದರ್ಭದಲ್ಲೇ ಟ್ಯೂಬ್‌ವೆಲ್ ನೀರಾವರಿ ಪ್ರದೇಶವನ್ನು ಕಾಲುವೆ-ನೀರಾವರಿ ಪ್ರದೇಶ ಎಂದು ತೋರಿಸಿದ ಬ್ಯಾಂಕ್ ರೈತರಿಗೆ ವಿಮಾ ಪರಿಹಾರ ನಿರಾಕರಿಸುತ್ತಿದೆ.

ದಿ ವೈರ್ ಜೊತೆ ಮಾತನಾಡಿರುವ ಸುರತ್‌ಘರ್ ಬರೋಡಾ ಬ್ಯಾಂಕ್ ಫೀಲ್ಡ್ ಆಫೀಸರ್ ಕಾಲ್ರಾಮ್, “2019 ಕ್ಕೆ ಸಂಬಂಧಿಸಿದಂತೆ ವ್ಯವಸ್ಥೆಯಲ್ಲಿ ಸಮಸ್ಯೆಯಾಗಿದೆ. ನಾವು ಆಧಾರ್ ವಿವರಗಳನ್ನು ಎಂಟ್ರಿ ಮಾಡಿದಾಗ, ಅದು ಹಿಂದಿನ ವರ್ಷದ ವಿವರಗಳನ್ನೇ ತೆಗೆದುಕೊಂಡ ಪರಿಣಾಮ ಮಿಸ್‌ಮ್ಯಾಚ್ ಸಂಭವಿಸಿದೆ. ಈಗ ಮ್ಯಾನುವಲ್ ಆಗಿ ವಿವರ ಸೇರಿಸುತ್ತಿದ್ದು, ಅಂತಹ ಸಮಸ್ಯೆ ಮತ್ತೆ ಸಂಭವಿಸದು’ ಎನ್ನುತ್ತಾರೆ.

ಇದನ್ನೂ ಓದಿ: ರೈತ ಹೋರಾಟದಲ್ಲಿ ಗಾಂಧಿ- ಅಂಬೇಡ್ಕರ್ ವಿಚಾರಗಳು

ಫಸಲ್ ಬೀಮಾ ಯೋಜನೆಯ ಪೋರ್ಟಲ್‌ನಲ್ಲೇ ಹಲವಾರು ಸಮಸ್ಯೆಗಳಿದ್ದು, ಅದರ ಪರಿಣಾಮಗಳನ್ನು ರೈತರು ಅನುಭವಿಸುತ್ತಿದ್ದಾರೆ. ಹಿರಿಯ ಕೃಷಿ ವಿಜ್ಞಾನಿಯೊಬ್ಬರ ಪ್ರಕಾರ, ಈ ಪೋರ್ಟಲ್‌ನ ಡ್ರಾಪ್ ಬಾಕ್ಸ್‌ನಲ್ಲಿ ನೂರಾರು ಗ್ರಾಮಗಳ ಹೆಸರು ಗೋಚರಿಸುವುದೇ ಇಲ್ಲ. ಹೀಗಾಗಿ ಸಮೀಪದ ಯಾವುದೋ ಗ್ರಾಮದ ಹೆಸರು ನಮೂದಿತಗೊಂಡು ರೈತರು ಪರಿತಪಿಸಬೇಕಾಗಿದೆ’ ಎಂದಿದ್ದಾರೆ.

2018 ರ ಸೆಪ್ಟೆಂಬರ್‌ನಲ್ಲಿ ಹನುಮಾನಘರ್ ಜಿಲ್ಲೆಯ ಹಲವು ಗ್ರಾಮಗಳ ರೈತರಿಗೆ ವಿಮಾ ಪರಿಹಾರ ನಿರಾಕರಿಸಲ್ಪಟ್ಟಿತ್ತು. ಅಲ್ಲಿನ ಎಸ್‌ಬಿಐ ಶಾಖೆಯು ರೈತರ ಪ್ರಿಮಿಯಂ ಹಣವನ್ನು ಬಜಾಜ್ ಅಲಾಯನ್ಸ್ ವಿಮಾ ಕಂಪನಿಗೆ ಕಟ್ಟದಿದುದೇ ಇದಕ್ಕೆ ಕಾರಣವಾಗಿತ್ತು. ಈ ವಿಮಾ ಕಂಪನಿಗೆ ಪ್ರಿಮಿಯಂ ಕಟ್ಟುವ ಬದಲು ಅಗ್ರಿಕಲ್ಚರಲ್ ಇನ್ಸುರನ್ಸ್ ಕಂಪನಿಗೆ ಪ್ರಿಮಿಯಂ ಹಣವನ್ನು ಎಸ್‌ಬಿಐ ಶಾಖೆ ವರ್ಗಾಯಿಸಿತ್ತು! ಈ ವಿಮಾ ಕಂಪನಿ ಹಣ ವಾಪಸ್ ಮಾಡಿತಾದರೂ ಅಷ್ಟು ಹೊತ್ತಿಗೆ ಪಾವತಿಸುವ ಅವಧಿ ಮುಗಿದಿತ್ತು.

2019 ರ ಏಪ್ರಿಲ್‌ನಲ್ಲಿ ಹನುಮಾನ್‌ಘರ್ ಹೋಬಳಿಯ ನೊಹಾರ್ ಹೋಬಳಿಯ 135 ಕಿಸಾನ್ ಕಾರ್ಡುದಾರ ರೈತರಿಗೆ ವಿಮಾ ಹಣ ನಿರಾಕರಿಸಲಾಗಿತು. ಅವರ 2017ರ ಪ್ರಿಮಿಯಂ ಹಣವನ್ನು ಆಕ್ಸಿಸ್ ಬ್ಯಾಂಕ್ ಆ ರೈತರು ಬೆಳೆಯದೇ ಇದ್ದ ಹತ್ತಿ ಬೆಳೆಗೆ ವರ್ಗಾಯಿಸಿತ್ತು!

ಇದನ್ನೂ ಓದಿ: ಬಹುತ್ವದ ದೇಶದಲ್ಲಿ ಸಂಧಾನ-ಚೌಕಾಶಿಗೆ ಕದ ಮುಚ್ಚುತ್ತಿರುವ ಪ್ರಭುತ್ವಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...