Homeಅಂತರಾಷ್ಟ್ರೀಯ'ತೈವಾನ್‌' ಸ್ವಾತಂತ್ರ್ಯವನ್ನು 'ಅಮೆರಿಕ' ಬೆಂಬಲಿಸುವುದಿಲ್ಲ!

‘ತೈವಾನ್‌’ ಸ್ವಾತಂತ್ರ್ಯವನ್ನು ‘ಅಮೆರಿಕ’ ಬೆಂಬಲಿಸುವುದಿಲ್ಲ!

- Advertisement -
- Advertisement -

ತೈವಾನ್ ನೂತನ ಅಧ್ಯಕ್ಷರಾಗಿ ಡೆಮಾಕ್ರಟಿಕ್ ಪ್ರೋಗ್ರೆಸ್ಸೀವ್ ಪಕ್ಷದ ಲಾಯ್ ಚಿಂಗ್ ಟೆ ನಿನ್ನೆ ಆಯ್ಕೆಯಾಗಿದ್ದಾರೆ. ಚೀನಾದ ತೀವ್ರ ವಿರೋಧ, ಬೆದರಿಕೆ ಮಧ್ಯೆ ತೈವಾನ್ ಪ್ರಜಾಪ್ರಭುತ್ವದಲ್ಲಿ ಲಾಯ್ ಚಿಂಗ್ ಟೆ ಹೊಸ ಅಧ್ಯಾಯ ಬರೆದಿದ್ದಾರೆ. ಮತದಾನಕ್ಕೆ ಮುನ್ನ ಲಾಯ್ ಅವರನ್ನು ಸೋಲಿಸುವಂತೆ ತೈವಾನ್ ಜನರಿಗೆ ‘ಚೀನಾ’ ಕೇಳಿಕೊಂಡಿತ್ತು. ಆದರೆ ತೈವಾನ್‌ನ ಮತದಾರರು ಚೀನಾದ ಬೇಡಿಕೆಯನ್ನು ತಿರಸ್ಕರಿಸಿ ಆಡಳಿತ ಪಕ್ಷಕ್ಕೆ 3ನೇ ಬಾರಿಗೆ ಗೆಲುವನ್ನು ನೀಡಿದ್ದಾರೆ. ತೈವಾನ್‌ನ ಮತದಾರರು ಚೀನಾ ವಿರೋಧಿ ಸರ್ಕಾರವನ್ನು ಆಯ್ಕೆ ಮಾಡಿರುವುದು ‘ಯುಎಸ್‌’ನ ಗೆಲುವು ಎಂದು ಹೇಳಲಾಗುತ್ತಿದ್ದರೂ, ತೈವಾನ್‌ನ ಸ್ವಾತಂತ್ರ್ಯವನ್ನು ಯುಎಸ್ ಬೆಂಬಲಿಸುವುದಿಲ್ಲ ಎಂದು ಬಿಡೆನ್ ಹೇಳಿದ್ದಾರೆ.

ಚೀನಾದೊಂದಿಗೆ ವ್ಯಾಪಾರ ಮತ್ತು ರಾಜತಾಂತ್ರಿಕತೆಯನ್ನು ವಿಸ್ತರಿಸಲು ಪ್ರತಿಜ್ಞೆ ಮಾಡಿದ್ದ ತೈವಾನ್‌ನ ವಿರೋಧ ಪಕ್ಷವಾದ  ನ್ಯಾಶನಲಿಸ್ಟ್ ಪಾರ್ಟಿಯ ಹೌ ಯು-ಇಹ್ ಅವರು ಸೋತಿದ್ದಾರೆ. ಯುಎಸ್‌ನೊಂದಿಗೆ ನಿಕಟ ಸಂಬಂಧವನ್ನು ಇಟ್ಟುಕೊಂಡಿರುವ ಲಾಯ್ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿದ್ದಾರೆ.

ತೈವಾನ್ ದ್ವೀಪವು ತನ್ನ ಭೂಪ್ರದೇಶ ಎಂದು ಚೀನಾ ದೀರ್ಘಕಾಲ ಹೇಳಿಕೊಂಡಿದೆ ಮತ್ತು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಏಕೀಕರಣಕ್ಕಾಗಿ ಪ್ರತಿಪಾದಿಸಿದ್ದರು ಮತ್ತು ಮಿಲಿಟರಿ ಹಸ್ತಕ್ಷೇಪವನ್ನು ತಳ್ಳಿಹಾಕಲು ನಿರಾಕರಿಸಿದ್ದರು. 1949ರಲ್ಲಿ ಚೀನಾದಿಂದ ಬೇರ್ಪಟ್ಟ ತೈವಾನ್‌ ಬಳಿಕ ಚೀನಾವನ್ನು ಸೇರಿಕೊಂಡೇ ಇಲ್ಲ. ಆದರೆ ತೈವಾನ್ ಯಾವತ್ತಿದ್ದರೂ ತನ್ನ ಭಾಗವೇ ಎಂದು ಚೀನಾ ಹೇಳುತ್ತಿದೆ. ಯಾವುದೇ ರಾಷ್ಟ್ರ ತೈವಾನ್‌ನೊಂದಿಗೆ ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳುವುದನ್ನು ತಾನು ಒಪ್ಪುವುದಿಲ್ಲ ಎಂದು ಚೀನಾ ಹೇಳಿಕೊಂಡಿತ್ತು.

ಯುಎಸ್ 1970 ರಿಂದ ‘ಒನ್ ಚೀನಾ ನೀತಿ’ಯನ್ನು ನಿರ್ವಹಿಸುತ್ತಿದೆ ಮತ್ತು ತೈವಾನ್‌ನ್ನು ಚೀನಾದ ಭಾಗವಾಗಿ ಗುರುತಿಸಿದೆ. ಆದರೆ ಅದೇ ಸಮಯದಲ್ಲಿ ಅವರು ತೈವಾನ್ ಜೊತೆಗೆ ಅನಧಿಕೃತ ಸಂಬಂಧವನ್ನು ಸಹ ಇಟ್ಟುಕೊಂಡಿದೆ. ಈ ಬೆಳವಣಿಗೆಯ ಉದ್ದೇಶ ಅಸ್ಪಷ್ಟವಾಗಿದೆ ಎಂದು ಹೇಳಲಾಗಿದೆ. ಚೀನಾ ತೈವಾನ್ ಮೇಲೆ ಆಕ್ರಮಣ ಮಾಡಿದರೆ ಯುಎಸ್ ಮಿಲಿಟರಿ ಮಧ್ಯಪ್ರವೇಶಿಸುತ್ತದೆ ಎಂಬ ಬಿಡೆನ್ ಅವರ ಹೇಳಿಕೆಗಳು ಯುಎಸ್ ಮತ್ತು ಬೀಜಿಂಗ್ ನಡುವಿನ ಸಂಬಂಧವನ್ನು ಹದಗೆಡಿಸಿವೆ. ತೈವಾನ್‌ ಮೇಲೆ ಯುಎಸ್‌ಗೆ ಇರುವ ಕಾಳಜಿಯನ್ನು ಬಹಿರಂಗಪಡಿಸುತ್ತದೆ.

ಈ ಚುನಾವಣೆಯು ತೈವಾನ್‌ನ ದೃಢವಾದ ಪ್ರಜಾಪ್ರಭುತ್ವ ವ್ಯವಸ್ಥೆಯ ಶಕ್ತಿಯನ್ನು ತೋರಿಸುತ್ತದೆ ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಹೇಳಿದರು. ಯುಎಸ್ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಮತ್ತು ಬಲಾತ್ಕಾರ ಮತ್ತು ಒತ್ತಡದಿಂದ ಮುಕ್ತವಾಗಿ ಭಿನ್ನಾಭಿಪ್ರಾಯಗಳ ಬಗ್ಗೆ ಶಾಂತಿಯುತ ಪರಿಹಾರವನ್ನು ಕಾಪಾಡಿಕೊಳ್ಳಲು ಬದ್ಧವಾಗಿದೆ ಎಂದು ಪುನರುಚ್ಚರಿಸಿದರು. ಯುಎಸ್ ನ ಒನ್‌-ಚೀನಾ ನೀತಿಗೆ ಅನುಗುಣವಾಗಿ ನಮ್ಮ ದೀರ್ಘಕಾಲದ ಸಂಬಂಧವನ್ನು ಹೆಚ್ಚಿಸಲು ಲೈ ಮತ್ತು ತೈವಾನ್‌ನ ಎಲ್ಲಾ ಪಕ್ಷದ ನಾಯಕರೊಂದಿಗೆ ಯುಎಸ್ ಕೆಲಸ ಮಾಡುತ್ತದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತೈವಾನ್ ದ್ವೀಪ:

ಚೀನಾದ ಆಗ್ನೇಯ ಕರಾವಳಿಯಿಂದ ಸುಮಾರು 160 ಕಿಮೀ ದೂರದಲ್ಲಿ ತೈವಾನ್ ದ್ವೀಪವಿದೆ, ಅದರ ಮುಂದೆ ಚೀನಾದ ಫುಝೌ, ಕ್ವಾಝೌ ಮತ್ತು ಕ್ಸಿಯಾಮೆನ್ ನಗರಗಳಿವೆ. ಇಲ್ಲಿ ಮೊದಲು ರಾಜವಂಶದ ಸಾಮ್ರಾಜ್ಯವಿತ್ತು, ಆದರೆ 1895ರಲ್ಲಿ ಅದು ಜಪಾನ್‌ನ ಆಕ್ರಮಣಕ್ಕೆ ಒಳಗಾಯಿತು. ಎರಡನೆಯ ಮಹಾಯುದ್ಧದಲ್ಲಿ ಚೀನಾ ಜಪಾನ್‌ನ್ನು ಸೋಲಿಸಿದ ನಂತರ ಈ ದ್ವೀಪದ ನಿಯಂತ್ರಣವು ಚೀನಾದ ಕೈಗೆ ಬಂದಿತ್ತು. ಇದರ ನಂತರ ಕಮ್ಯುನಿಸ್ಟ್ ನಾಯಕ ಮಾವೋ ಝೆಡಾಂಗ್ ಚೀನಾದ ಮೇನ್‌ಲ್ಯಾಂಡ್‌ನಲ್ಲಿ ಅಂತರ್ಯುದ್ಧವನ್ನು ಗೆದ್ದರು, ಈ ಸಮಯದಲ್ಲಿ ನ್ಯಾಶನಲಿಸ್ಟ್ ಕೌಮಿಂಟಾಂಗ್ ಪಕ್ಷದ ನಾಯಕ ಚಿಯಾಂಗ್ ಕೈ-ಶೆಕ್ 1949ರಲ್ಲಿ ತೈವಾನ್‌ಗೆ ಪಲಾಯನಗೈದಿದ್ದರು.

ಚಿಯಾಂಗ್ ಕೈ-ಶೇಕ್ ಈ ದ್ವೀಪದಲ್ಲಿ ಚೀನಾ ಗಣರಾಜ್ಯದ ಸರ್ಕಾರವನ್ನು ಸ್ಥಾಪಿಸಿದರು ಮತ್ತು 1975ರವರೆಗೆ ಅದರ ಅಧ್ಯಕ್ಷರಾಗಿದ್ದರು. ಬೀಜಿಂಗ್ ತೈವಾನ್‌ನ್ನು ಸ್ವತಂತ್ರ ದೇಶವೆಂದು ಎಂದಿಗೂ ಒಪ್ಪಿಕೊಂಡಿಲ್ಲ ಮತ್ತು ಅದನ್ನು ಯಾವಾಗಲೂ ಚೀನಾದ ಅವಿಭಾಜ್ಯ ಅಂಗವೆಂದೇ ಹೇಳಿಕೊಂಡು ಬಂದಿದೆ. ಮತ್ತೊಂದೆಡೆ ತೈವಾನ್ ಆಧುನಿಕ ಚೀನೀ ರಾಜ್ಯವು 1911ರ ಕ್ರಾಂತಿಯ ನಂತರ ಅಸ್ತಿತ್ವಕ್ಕೆ ಬಂದಿತು. ತೈವಾನ್ ಕಮ್ಯುನಿಸ್ಟ್ ಕ್ರಾಂತಿಯ ನಂತರ ಸ್ಥಾಪಿತವಾದ ರಾಜ್ಯ, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಭಾಗವಾಗಿರಲಿಲ್ಲ ಎಂದು ವಾದಿಸುತ್ತದೆ. ಅಂದಿನಿಂದ ಈ ರಾಜಕೀಯ ಉದ್ವಿಗ್ನತೆ ಮುಂದುವರಿದಿದೆ, ಚೀನಾ ಮತ್ತು ತೈವಾನ್ ನಡುವೆ ಆರ್ಥಿಕ ಸಂಬಂಧಗಳು ಸಹ ಇದ್ದವು. ಅನೇಕ ತೈವಾನ್‌  ವಲಸಿಗರು ಚೀನಾದಲ್ಲಿ ಕೆಲಸ ಮಾಡುತ್ತಾರೆ ಮತ್ತು ಚೀನಾ ಕೂಡ ತೈವಾನ್‌ನಲ್ಲಿ ಹೂಡಿಕೆ ಮಾಡಿದೆ.

ಯುಎಸ್-ತೈವಾನ್:

ಯುಎಸ್ ತೈವಾನ್ ಅನ್ನು ಪ್ರತ್ಯೇಕ ದೇಶವೆಂದು ಗುರುತಿಸುವುದಿಲ್ಲ. ವಿಶ್ವದ ಕೇವಲ 13 ದೇಶಗಳು ತೈವಾನ್ ಅನ್ನು ಒಂದು ದೇಶವೆಂದು ಗುರುತಿಸುತ್ತಿವೆ. ಇದರಲ್ಲಿ ಮುಖ್ಯವಾಗಿ ದಕ್ಷಿಣ ಅಮೇರಿಕಾ, ಕೆರಿಬಿಯನ್, ಓಷಿಯಾನಿಯಾ ಮತ್ತು ವ್ಯಾಟಿಕನ್ ದೇಶಗಳು ಸೇರಿವೆ. ಈ ವಿಷಯದಲ್ಲಿ ಅಮೆರಿಕ ಯಾವಾಗಲೂ ತನ್ನ ಕಾರ್ಯತಂತ್ರವನ್ನು ಅಸ್ಪಷ್ಟವಾಗಿ ಇರಿಸಿದೆ. ಜೂನ್‌ನಲ್ಲಿ ಅಧ್ಯಕ್ಷ ಬೈಡೆನ್ ಅವರು ತೈವಾನ್‌ನ ಮೇಲೆ ದಾಳಿಯಾದರೆ ಅದನ್ನು ಯುಎಸ್ ರಕ್ಷಿಸುತ್ತದೆ ಎಂದು ಹೇಳಿದ್ದರು. ಆದರೆ ತೈವಾನ್‌ನ ಸ್ವಾತಂತ್ರ್ಯವನ್ನು ಯುಎಸ್ ಬೆಂಬಲಿಸುವುದಿಲ್ಲ ಎಂದು ಹೇಳಿದ್ದರು. ತೈವಾನ್ ಜೊತೆ US ಯಾವುದೇ ಔಪಚಾರಿಕ ಸಂಬಂಧವನ್ನು ಹೊಂದಿಲ್ಲ. ಯುಎಸ್‌ ಅಂತಾರಾಷ್ಟ್ರೀಯವಾಗಿ ತೈವಾನ್‌ಗೆ  ಬೆಂಬಲಿಸುತ್ತದೆ ಮತ್ತು ಶಸ್ತ್ರಾಸ್ತ್ರಗಳ ಪೂರೈಕೆಯನ್ನು ಮಾಡುತ್ತದೆ.

ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಈ ಹಿಂದೆ ತೈವಾನ್‌ಗೆ ತೆರಳಿದ್ದರು. ತೈವಾನ್‌ನಲ್ಲಿ ಅಮೆರಿಕದ ಹಿರಿಯ ವ್ಯಕ್ತಿಯ ಉಪಸ್ಥಿತಿಯು ಯುಎಸ್ ತನ್ನ ಸ್ವಾತಂತ್ರ್ಯಕ್ಕಾಗಿ ತೈವಾನ್‌ನ್ನು ಬೆಂಬಲಿಸುತ್ತದೆ ಎಂದು ಸ್ಪಷ್ಟವಾಗಿ ಸೂಚಿಸುತ್ತದೆ ಎಂದು ಚೀನಾ ಭಾವಿಸಿತ್ತು.

ಇದನ್ನು ಓದಿ: ‘ಒಬಿಸಿ’ ಸಮುದಾಯವನ್ನು ಅವಮಾನಿಸಿದ ಬಾಬಾ ರಾಮ್‌ದೇವ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೂ. 170 ಕೋಟಿ ದಂಡ ಪಾವತಿಸಲು ಮುಂದಾದ ಅದಾನಿ : ಏನಿದು ಪ್ರಕರಣ?

ಅಮೆರಿಕದ ನ್ಯಾಯಾಲಯದಲ್ಲಿ ದಾಖಲಾಗಿದ್ದ ವಂಚನೆ ಮತ್ತು ಲಂಚದ ಪ್ರಕರಣಕ್ಕೆ ಸಂಬಂಧಿಸಿದಂತೆ, ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಟ್ಟು 18 ಮಿಲಿಯನ್ ಡಾಲರ್ (ಸುಮಾರು 170 ಕೋಟಿ ರೂಪಾಯಿ) ದಂಡ ಪಾವತಿಸಲು ಒಪ್ಪಿಕೊಳ್ಳುವ ಮೂಲಕ...

ಭೋಜಶಾಲಾ-ಕಮಲ್ ಮೌಲಾ ಪ್ರಕರಣದಲ್ಲಿ ಹಿಂದೂಗಳ ಪರ ತೀರ್ಪು…ಮಸೀದಿಯಲ್ಲ ದೇವಸ್ಥಾನವೆಂದ ಕೋರ್ಟ್ : ಏನಿದು ವಿವಾದ?

ಸುಮಾರು 100 ವರ್ಷಗಳ ಹಳೆಯ ವಿವಾದವಾದ ಭೋಜಶಾಲಾ-ಕಮಲ್ ಮೌಲಾ ಮಸೀದಿ ಪ್ರಕರಣದಲ್ಲಿ ಶುಕ್ರವಾರ (ಮೇ 15) ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿದ್ದು, ಭೋಜಶಾಲಾದಲ್ಲಿರುವ ಐತಿಹಾಸಿಕ ಸ್ಥಳವು ಸರಸ್ವತಿ ದೇವಿಗೆ ಸಮರ್ಪಿತವಾದ ದೇವಾಲಯವಾಗಿದೆ ಎಂದು...

“ಮಹಿಳಾ ಮೀಸಲಾತಿ ಮುಖವಾಡದಲ್ಲಿ ಡಿಲಿಮಿಟೇಷನ್ ಕುತಂತ್ರ ವಿಫಲ” ಬಿಜೆಪಿಗೆ ದಕ್ಷಿಣ ಭಾರತದ ಎಚ್ಚರಿಕೆ

ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2026ರ ಏಪ್ರಿಲ್ 16ರಂದು ಸಂಸತ್ತಿನ ವಿಶೇಷ ಅಧಿವೇಶನ ಕರೆದು, ಮಹಿಳಾ ಮೀಸಲಾತಿ ಅನುಷ್ಠಾನವನ್ನು ತ್ವರಿತಗೊಳಿಸುವ ನೆಪವನ್ನು ಮುಂದುಮಾಡಿ ಮೂರು ಮಸೂದೆಗಳನ್ನು ಮಂಡಿಸಿತು. ಇವುಗಳಲ್ಲಿ ಪ್ರಮುಖವಾದ ಸಂವಿಧಾನ (131ನೇ...

ಹೊಸ ಕಾರ್ಮಿಕ ಕಾನೂನು ಶ್ರಮಿಕರ ಮೂಲಭೂತ ಹಕ್ಕುಗಳಿಗೆ ಕತ್ತರಿ!

"8 ಗಂಟೆ ಕೆಲಸ, 8 ಗಂಟೆ ಮನರಂಜನೆ, 8 ಗಂಟೆ ವಿಶ್ರಾಂತಿ" ಎಂಬ ತತ್ವವು ಸುಲಭವಾಗಿ ದೊರೆತದ್ದಲ್ಲ, ಇದು ದೀರ್ಘಕಾಲದ ಹೋರಾಟ, ತ್ಯಾಗ ಮತ್ತು ಏಕತೆಯ ಫಲವಾಗಿದೆ. ಕೆಲಸದ ಹೊರೆ ಅತಿಯಾಗಿ ಇದ್ದ...

ಮನರೇಗಾ ಯಶೋಗಾಥೆ: ಭಾಗ-1 ದಲಿತರು-ಮಹಿಳೆಯರಿಗೆ ಆರ್ಥಿಕ ಭದ್ರತೆ; ಗ್ರಾಮ ಸಬಲೀಕರಣಕ್ಕೆ ಮನರೇಗಾ ಕೊಟ್ಟ ಕೊಡುಗೆ ಅಪಾರ

2001-2004 ರವರೆಗಿನ ನಿರಂತರ ಬರ ಕರ್ನಾಟಕದ ಬಹುತೇಕ ಹಳ್ಳಿಗಳನ್ನು ಕಂಗಾಲಾಗಿಸಿದ್ದಂತೂ ನಿಜ. ಎಲ್ಲ ಕೆರೆಗಳು ಬತ್ತಿಹೋಗಿದ್ದರಿಂದ ದನಕರುಗಳಿಗೆ ನೀರು ಕುಡಿಸಲೂ ಜನ ಅಲೆದಾಡುತ್ತಿದ್ದರು. ಜನರಿಗೆ ಕುಡಿಯುವ ನೀರು ಪೂರೈಕೆ ಸಹ ಆ ಸಂದರ್ಭದಲ್ಲಿ...

ಮಣಿಪುರ: ಬುಡಕಟ್ಟು ಚರ್ಚ್ ನಾಯಕರ ಮೇಲೆ ಉಗ್ರ ದಾಳಿ:  ಹಲವೆಡೆ ಮೇಣದ ಬತ್ತಿಯ ಜೊತೆಗೆ ಶೋಕ ವ್ಯಕ್ತ ಪಡಿಸಿದ ಕುಕಿ ಸಮುದಾಯ 

ಇಂಫಾಲ್: ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೂವರು ಪ್ರಮುಖ ಕುಕಿ ಚರ್ಚ್ ನಾಯಕರನ್ನು ಹೊಂಚು ಹಾಕಿ ದಾಳಿ ನಡೆಸಿ ಕೊಲ್ಲಲಾಗಿದೆ. ಈ ಘಟನೆಯು ರಾಜ್ಯದಲ್ಲಿ ಜನಾಂಗೀಯ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.  ಮೇ 13ರಂದು ಬೆಳಿಗ್ಗೆ ಚುರಾಚಂದ್‌ಪುರನಲ್ಲಿ...

ಗುಜರಾತ್| ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡಿದ ದಲಿತ ವರನ ಮೇಲೆ ಹಲ್ಲೆ

ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಮಡಿ ಗ್ರಾಮದಲ್ಲಿ ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡುತ್ತಿದ್ದ ದಲಿತ ವರನ ಮೇಲೆ ಮೇಲ್ಜಾತಿಯ ಪುರುಷರ ಗುಂಪೊಂದು ಜಾತಿ ನಿಂದನೆ ಮಾಡಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮೇ 10 ರಂದು...

ಆತಂಕಕಾರಿಯಾದ ಆನೆ ದಾಳಿ

ಆನೆ ದಾಳಿ ಹಿಂದೆಂದಿಗಿಂತಲೂ ದುಪ್ಪಟ್ಟಾಗಿದೆ. ಅರಣ್ಯಮಂತ್ರಿ ಈಶ್ವರ್ ಖಂಡ್ರೆಯವರ ಪ್ರಕಾರ ಆನೆಗಳ ಸಂಖ್ಯೆ ದುಪ್ಪಟ್ಟಾಗಿದೆ. ಕಾಡಿನ ಪ್ರಮಾಣ ಅಷ್ಟೆ ಇದೆ. ಅಂದರೆ ಕಾಡಿನ ಪ್ರಮಾಣ ಹೆಚ್ಚು ಮಾಡಬೇಕೆಂದರೆ ಮನುಷ್ಯರ ಆವಾಸ ಇಲ್ಲದೆ ಆನೆಗಳಿಗಾಗಿ...

ವೈದ್ಯಕೀಯ ಸೀಟುಗಳ ಹಂಚಿಕೆ ಕೇಂದ್ರೀಕರಣಕ್ಕೆ ದಕ್ಷಿಣದ ವಿರೋಧ; ನೀಟ್ ಪರೀಕ್ಷೆಯನ್ನೇ ರದ್ದುಗೊಳಿಸಲು ಇದು ಸಕಾಲ

ರಾಜ್ಯಪಟ್ಟಿಯಲ್ಲಿದ್ದ ಶಿಕ್ಷಣದ ಹಕ್ಕನ್ನು ನೀಟ್‌ ಹೆಸರಿನಲ್ಲಿ ಕೇಂದ್ರದ ಜಂಟಿ ಪಟ್ಟಿಗೆ ಸೇರಿಸುವ ಒಕ್ಕೂಟ ಸರ್ಕಾರದ ನಿರ್ಧಾರದಿಂದ ದಕ್ಷಿಣದ ರಾಜ್ಯಗಳು ಭಾರಿ ನಷ್ಟ ಅನುಭವಿಸುತ್ತಿವೆ. ಜೊತೆಗೆ, ನೀಟ್ ಪಾಸ್‌ ಮಾಡುವ ಒತ್ತಡ ತಾಳಲಾರದೆ ದೇಶದಾದ್ಯಂತ...

‘ಮತ’ ವ್ಯರ್ಥ ಮಾಡದ ಮತದಾರ: 2026ರಲ್ಲಿ ಕುಸಿಯಿತು ‘ನೋಟಾ’ ಅಬ್ಬರ

2026ರ ವಿಧಾನಸಭಾ ಚುನಾವಣೆಯಲ್ಲಿ ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಾದ್ಯಂತ ಸುಮಾರು 10.9 ಲಕ್ಷ ಮತಗಳು 'ನೋಟಾ' (ಯಾರಿಗೂ ಮತವಿಲ್ಲ) ಪಾಲಾಗಿವೆ. ಆದರೆ, 2016 ಮತ್ತು 2021ರ ಚುನಾವಣೆಗಳಿಗೆ ಹೋಲಿಸಿದರೆ...