Homeಮುಖಪುಟಬಿಲ್ಕಿಸ್ ಪ್ರಕರಣ - ಹದ್ದುಬಸ್ತುಗಳಿಲ್ಲವೇ ಅಮಾನವೀಯತೆಗೆ? : ಡಿ.ಉಮಾಪತಿ

ಬಿಲ್ಕಿಸ್ ಪ್ರಕರಣ – ಹದ್ದುಬಸ್ತುಗಳಿಲ್ಲವೇ ಅಮಾನವೀಯತೆಗೆ? : ಡಿ.ಉಮಾಪತಿ

- Advertisement -
- Advertisement -

ಗರ್ಭಿಣಿಯಾದ ಆಕೆಯ ಮೇಲೆ ಬಿಟ್ಟೂಬಿಡದೆ 22 ಬಾರಿ ಅತ್ಯಾಚಾರ ನಡೆಯುತ್ತದೆ. ಮೂರು ವರ್ಷದ ಮಗಳ ತಲೆಯನ್ನು ನೆಲಕ್ಕೆ ಅಪ್ಪಳಿಸಿ ಕೊಲ್ಲಲಾಗುತ್ತದೆ. ಆಕೆಯ ತಾಯಿಯೂ ಸೇರಿದಂತೆ ಕುಟುಂಬದ ಇತರೆ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಸಿ ಕೊಚ್ಚಿ ಹಾಕಲಾಗುತ್ತದೆ.ಕಣ್ಣೆದುರಿಗೇ ಕುಟುಂಬದ 14 ಹೆಣಗಳು ಉರುಳುತ್ತವೆ. ಈ ಅಪರಾಧವನ್ನು ಹೀನಾತಿಹೀನ ಎಂದು ಒಪ್ಪಿಕೊಳ್ಳಲು ತಯಾರಿಲ್ಲ ಗುಜರಾತ್ ಸರ್ಕಾರ.

ಕೋಮುವಾದಿ ಹಿಂಸೆಯ ದಳ್ಳುರಿಯ ನಡುವೆ ಸಾಮೂಹಿಕ ಅತ್ಯಾಚಾರಕ್ಕೆ ಗುರಿಯಾದ ಬಡ ಹೆಣ್ಣುಮಗಳೊಬ್ಬಳಿಗೆ 50 ಲಕ್ಷರೂಪಾಯಿ ಪರಿಹಾರ ನೀಡುವಂತೆ ಸುಪ್ರೀಮ್‍ ಕೋರ್ಟ್‍ತೀರ್ಪು ನೀಡಿ ನಾಲ್ಕು ತಿಂಗಳುಗಳೇ ಉರುಳಿವೆ. ಈ ಮುನ್ನತನಗೆ ನ್ಯಾಯ ಬೇಡಿ 17 ವರ್ಷಗಳ ಕಾಲ ಕೋರ್ಟುಗಳ ಕಂಬ ಸುತ್ತಿದ್ದಳು ಆಕೆ.

ಬಿಲ್ಕಿಸ್‍ ಗುಜರಾತ್ ಸರ್ಕಾರದ ವಿರುದ್ಧ ಸಲ್ಲಿಸಿದ್ದ ನ್ಯಾಯಾಲಯ ನಿಂದನೆ ಮೊಕದ್ದಮೆ ಕಳೆದ ವಾರ ಸುಪ್ರೀಮ್‍ಕೋರ್ಟ್ ಮುಂದೆ ವಿಚಾರಣೆಗೆ ಬಂದಿತ್ತು. ಪರಿಹಾರದ ಆದೇಶದ ವಿರುದ್ಧ ಮರುವಿಮರ್ಶೆಅರ್ಜಿ ಸಲ್ಲಿಸುವ ಇರಾದೆ ತನಗಿರುವ ಕಾರಣ ಪರಿಹಾರವನ್ನು ನೀಡಿಲ್ಲ ಎಂದು ಗುಜರಾತ್ ಸರ್ಕಾರ ಹೇಳಿಕೊಂಡಿತು. ಒಂದು ಪ್ರಕರಣದಲ್ಲಿ 50 ಲಕ್ಷ ನೀಡಿದರೆ ಇತರೆ ಪ್ರಕರಣಗಳ ಪಾಲಿಗೆ ಅದು ಪೂರ್ವನಿದರ್ಶನ ಆಗುತ್ತದೆಂಬುದು ಗುಜರಾತ್ ಸರ್ಕಾರದ ಬಾಧೆ.

2002ರ ಫೆಬ್ರವರಿ 27ರ ಮುಂಜಾನೆ ಗುಜರಾತಿನ ಗೋಧ್ರಾ ಬಳಿ ಸಾಬರಮತಿ ಎಕ್ಸ್ ಪ್ರೆಸ್‍ನ ಕರಸೇವಕರಿದ್ದ ಬೋಗಿಗೆ ಬೆಂಕಿ ಬಿದ್ದು 59 ಮಂದಿ ಆಹುತಿಯಾಗಿದ್ದರು. ಆಗ ಹೊತ್ತಿಕೊಂಡ ಕೋಮು ಗಲಭೆಗಳ ದಳ್ಳುರಿ ಗುಜರಾತಿನ ಉದ್ದಗಲಕ್ಕೆ ಅಲ್ಪಸಂಖ್ಯಾತರ ಮಾರಣ ಹೋಮಕ್ಕೆ ಕಾರಣವಾಯಿತು.

ಅಹ್ಮದಾಬಾದ್ ನಿಂದ 200 ಕಿ.ಮೀ. ದೂರದ ದಾಹೋದ್ ನ ಒಂದು ಹಳ್ಳಿ ರಾಧಿಕಾಪುರ ಬಿಲ್ಕಿಸ್ ಬಾನುವಿನ ಹುಟ್ಟೂರು. ನೆರೆ ಹೊರೆಯವರು ಮುಸಲ್ಮಾನರಎಲ್ಲ 60 ಮನೆಗಳಿಗೆ ಬೆಂಕಿ ಇಟ್ಟಿದ್ದರು. ಬಿಲ್ಕಿಸ್ ಮತ್ತು ಆಕೆಯ ಕುಟುಂಬ ಬೆದರಿ ಹೊಲಗಳತ್ತ ಪರಾರಿಯಾಗಿತ್ತು. ಒಂದೆಡೆಯಿಂದ ಇನ್ನೊಂದೆಡೆಗೆ ಪರಾರಿಯಾಗುತ್ತಲೇ ತಲೆಮರೆಸಿಕೊಂಡಿದ್ದಾಗ ಆಕೆಯ ರಕ್ತಸಂಬಂಧಿ ಶಮೀಮ್ ಹೆಣ್ಣುಮಗುವನ್ನು ಪ್ರಸವಿಸಿದ್ದಳು.

ಸುತ್ತಮುತ್ತಲ ಅಡವಿಯ ಗಿಡಮರಗಳ ನೆರಳುಗಳಲ್ಲಿ ಅಡಗಿಕೊಳ್ಳುತ್ತಿದ್ದ ಅವರು ಹೇಗಾದರೂ ಮಾಡಿ ಮುಸ್ಲಿಂ ಬಾಹುಳ್ಯದ ವಸತಿಯನ್ನು ತಲುಪಬೇಕಿತ್ತು. ಹೆದ್ದಾರಿಗಳನ್ನು ಹಿಡಿಯುವಂತಿರಲಿಲ್ಲ. ಒಳನಾಡಿನ ಕಚ್ಚಾದಾರಿಗಳಲ್ಲೇ ಸಾಗಬೇಕಿತ್ತು. ಭೀತಿಯ ಪಯಣದಲ್ಲಿಕರುಣೆ ಸಹಾನುಭೂತಿಯುಳ್ಳ ಜನ ಅವರನ್ನು ಕಾಪಾಡಿದ್ದುಂಟು.

ಪನ್ನಿವೇಲ್ ಎಂಬ ಹಳ್ಳಿ ಸೇರಿದ್ದರೆ ಈ ಕುಟುಂಬದ ಪ್ರಾಣಗಳು ಉಳಿಯುತ್ತಿದ್ದವು. ಆದರೆ ಹಾಗಾಗಲಿಲ್ಲ. ಈ ಕುಟುಂಬ ಪಯಣಿಸುತ್ತಿದ್ದ ಟ್ರಕ್‍ನ್ನು ಎರಡು ಟ್ರಕ್‍ಗಳು ಅಡ್ಡ ಹಾಕಿದ್ದವು. 20- 30 ಮಂದಿಯ ಕೈಗಳಲ್ಲಿ ಹಿರಿದಿದ್ದಕತ್ತಿ ಕುಡುಗೋಲುಗಳು. ಬಿಲ್ಕಿಸ್‍ ಅಪ್ಪನಿಗೆ ಚಿಕಿತ್ಸೆ ನೀಡಿದ್ದ, ಅದೇ ಬೀದಿಯ ಎದುರಿಗಿದ್ದ ವೈದ್ಯನ ಮಗ, ಬಳೆ ಅಂಗಡಿ ನಡೆಸುತ್ತಿದ್ದ ವ್ಯಕ್ತಿ, ಹೊಟೇಲು ಇಟ್ಟು ಕೊಂಡಿದ್ದಾತ, ಗ್ರಾಮಪಂಚಾಯಿತಿ ಸದಸ್ಯೆಯಗಂಡ… ಇವರೆಲ್ಲ ಬಿಲ್ಕಿಸ್ ಗೆ ಚಿರ ಪರಿಚಿತರೇ. ಬಾಲ್ಯದಿಂದತನ್ನನ್ನು ಬಲ್ಲವರೇಆದರೂತನ್ನನ್ನು ಎಷ್ಟು ಕ್ರೌರ್ಯದಿಂದ ಉಲ್ಲಂಘಿಸಿದರಲ್ಲ ಎಂಬುದು ಆಕೆಯನ್ನು ಬಹುಕಾಲ ಅಲ್ಲಾಡಿಸಿದ ಕಟು ವಾಸ್ತವ.

ಬಗಲಲ್ಲಿ ಮೂರು ವರ್ಷದ ಮಗಳು ಸಾಲೇಹ. ಅವಳನ್ನು ಕಸಿದುಕೊಂಡು ತಲೆಯನ್ನು ನೆಲಕ್ಕೆ ಅಪ್ಪಳಿಸಿ ಅರೆನಿಮಿಷದಲ್ಲೇಕೊಂದು ಹಾಕಿದನೊಬ್ಬ. ತನ್ನದೇ ಹಳ್ಳಿಯ ಮೂವರು ಪುರುಷರು ಆಕೆಯನ್ನು ಎಳೆದುಕೊಂಡು ಬಟ್ಟೆಗಳನ್ನು ಹರಿದೆಸೆದರು. ಗರ್ಭಿಣಿಯೆಂದು ಆಕೆ ಅಲವತ್ತು ಕೊಂಡಳು. ನೀವೆಲ್ಲ ನನ್ನ ಅಣ್ಣಂದಿರು, ಚಿಕ್ಕಪ್ಪಂದಿರಿದ್ದಂತೆ ಎಂದರೂ ಬಿಡದೆ ಅತ್ಯಾಚಾರ ನಡೆಸಿದರು.

ಹತ್ಯೆಅತ್ಯಾಚಾರದ ಅಮಾನುಷತೆಯ ವಿಕೃತ ವಿಜೃಂಭಣೆಗೆ 14 ಮಂದಿ ಬಲಿಯಾದರು. ಹಿಂದಿನ ದಿನವಷ್ಟೇ ಹೆಣ್ಣುಮಗುವನ್ನು ಹಡೆದಿದ್ದ ಶಮೀಮ್‍ಳನ್ನು ಅವಳ ಹಸುಳೆಯ ಸಹಿತ ಹತ್ಯೆ ಮಾಡಲಾಗಿತ್ತು.ಮೂರ್ಛೆ ಹೋಗಿದ್ದ ಬಿಲ್ಕಿಸ್ ಸತ್ತೇ ಹೋಗಿದ್ದಾಳೆಂದು ಭಾವಿಸಿದ ದಾಳಿಕೋರರು ಮಾರಣಹೋಮದತಾಣವನ್ನುತೊರೆದಿದ್ದರು.

ಎಚ್ಚ ಬಂದಾಗ ಪೂರ್ಣ ಬೆತ್ತಲಾಗಿದ್ದದ್ದು ತಿಳಿಯಿತು. ಸುತ್ತಮುತ್ತಕೊಚ್ಚಿ ಹಾಕಲಾಗಿದ್ದತನ್ನದೇಕುಟುಂಬದ ರಕ್ತಸಿಕ್ತ ಕಳೇಬರಗಳು. ಪೆಟ್ಟಿಕೋಟಿನಿಂದ ಮೈ ಮುಚ್ಚಿಕೊಂಡು ಪಕ್ಕದಲ್ಲಿದ್ದ ಗುಡ್ಡ ಹತ್ತಿ ಅಲ್ಲಿಯೇದುಃಖ ಭೀತಿಯಲ್ಲಿ ಮುಳುಗಿ ಇರುಳು ಕಳೆದಳು. ಮರುದಿನ ನೀರಿಗಾಗಿ ಅರಸುತ್ತಿದ್ದವಳನ್ನು ಕೊಳವೆ ಬಾವಿಯೊಂದರ ಬಳಿ ಕಂಡ ಆದಿವಾಸಿ ಹೆಣ್ಣುಮಗಳು ಬಟ್ಟೆಗಳನ್ನಿತ್ತಳು. ಪೊಲೀಸ್‍ ಅಧಿಕಾರಿಯೊಬ್ಬನನ್ನು ಸಂಪರ್ಕಿಸಿದಳು. ಆತ ಆಕೆಯನ್ನು ತನ್ನ ವಾಹನದಲ್ಲಿ ಲಿಮ್ಖೇಡ ಪೊಲೀಸ್‍ಠಾಣೆಗೆ ಕರೆದೊಯ್ದ.

ಎಂಟು ಸಾಮೂಹಿಕ ಅತ್ಯಾಚಾರಗಳು ಮತ್ತು 14 ಹತ್ಯೆಗಳನ್ನು ನೋಡಿದ ನಂತರವೂ ಪ್ರಾಣಸಹಿತ ಉಳಿದಿದ್ದ ಏಕೈಕ ಸಾಕ್ಷಿ ಬಿಲ್ಕಿಸ್ ಬಾನು.ಆದರೆ ಪೊಲೀಸರುದೂರು ದಾಖಲಿಸಿಕೊಳ್ಳುವುದಿಲ್ಲ. ಒತ್ತಾಯಿಸಿದರೆ ವಿಷದ ಸೂಜಿಮದ್ದು ನೀಡಿಕೊಲ್ಲುವ ಬೆದರಿಕೆ ಹಾಕಲಾಗುತ್ತದೆ. ಪರಿಹಾರ ಶಿಬಿರವೊಂದಕ್ಕೆ ಆಕೆಯನ್ನು ಸಾಗ ಹಾಕಲಾಗುತ್ತದೆ. ಅಲ್ಲಿತನ್ನ ಪತಿಯಾಕೂಬ್‍ರಸೂಲನನ್ನು ಸೇರಿಕೊಳ್ಳುತ್ತಾಳೆ.

ಬಿಲ್ಕಿಸ್‍ ಕುಟುಂಬದ ಹತ್ಯೆ ನಡೆದಎರಡು ದಿನಗಳ ನಂತರಎಂಟು ಶವಗಳನ್ನು ಕಂಡವರು ಕೆಲ ಸ್ಥಳೀಯ ಛಾಯಾ ಚಿತ್ರಕಾರರು. ಪೊಲೀಸರು ಕಾರ್ಯಪ್ರವೃತ್ತರಾಗುತ್ತಾರೆ. ಅತ್ಯಾಚಾರಜರುಗಿದ ನಾಲ್ಕು ದಿನಗಳ ನಂತರ ಗೋಧ್ರಾ ಸಿವಿಲ್ ಆಸ್ಪತ್ರೆಯಲ್ಲಿ ಆಕೆಯ ವೈದ್ಯಕೀಯ ಪರೀಕ್ಷೆ ನಡೆಯಿತು.

ಕಳೇಬರಗಳ ಮಹಜರು ನಡೆಯುವುದಿಲ್ಲ. ಕೊಳೆಯಲು ಬಿಡಲಾಗುತ್ತದೆ. ಮರಣೋತ್ತರ ಪರೀಕ್ಷೆ ಮಾಡಿದ ವೈದ್ಯರು ಮಹತ್ವದ ಸಾಕ್ಷ್ಯ ಪುರಾವೆಗಳಾಗಬೇಕಿದ್ದ ರಕ್ತ ಮತ್ತು ಇತರೆ ಜೈವಿಕ ಸ್ಯಾಂಪಲ್ ಗಳನ್ನು ಸಂಗ್ರಹಿಸಲಿಲ್ಲ. ಶವಗಳನ್ನು ಸಾಮೂಹಿಕವಾಗಿ ದಫನು ಮಾಡಲಾಗುತ್ತದೆ. ಎರಡು ವರ್ಷಗಳ ನಂತರ 2004ರಲ್ಲಿ ಸಿಬಿಐ ಈ ತನಿಖೆಯನ್ನುಕೈಗೆತ್ತಿಕೊಂಡಾಗ ಹೂತಿದ್ದ ಶವಗಳನ್ನು ಹೊರತೆಗೆದಾಗಯಾವ ಶವಕ್ಕೂ ರುಂಡವಿರುವುದಿಲ್ಲ. ಮರಣೋತ್ತರ ಪರೀಕ್ಷೆಯ ನಂತರಗುರುತು ಸಿಗದಿರಲೆಂದು ರುಂಡಗಳನ್ನು ಬೇರ್ಪಡಿಸಲಾಗಿತ್ತು. ಶವಗಳು ಬೇಗನೆ ಕೊಳೆತು ಹೋಗಲೆಂದು ಅವುಗಳ ಮೇಲೆ ಉಪ್ಪು ಸುರಿದು ಹುಗಿಯಲಾಗಿರುತ್ತದೆ.

ಹನ್ನೊಂದು ಮಂದಿ ಅಪರಾಧಿಗಳಿಗೆ ಅಧೀನ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಮುಂಬಯಿ ಹೈಕೋರ್ಟ್ 2017ರ ಮೇ 4ರಂದು ಎತ್ತಿ ಹಿಡಿದಿತ್ತು. ಮಹತ್ವದ ಸಾಕ್ಷ್ಯ ಪುರಾವೆಗಳನ್ನು ತಿದ್ದಿದ ಮತ್ತು ನಾಶ ಮಾಡಿದ ಏಳು ಮಂದಿ ಪೊಲೀಸರು ಹಾಗೂ ವೈದ್ಯರಖುಲಾಸೆಯ ಆದೇಶವನ್ನು ತಳ್ಳಿ ಹಾಕಿತ್ತು.

ಮನುಷ್ಯಳಾಗಿ, ನಾಗರಿಕಳಾಗಿ, ಮಹಿಳೆಯಾಗಿ, ತಾಯಿಯಾಗಿ ತನ್ನ ಹಕ್ಕುಗಳನ್ನು ಅತ್ಯಂತ ಪಾಶವೀತನದಿಂದ ಉಲ್ಲಂಘಿಸಲಾಗಿದೆ ಎಂದು ಬಿಲ್ಕಿಸ್ ಬಾನು ನ್ಯಾಯಾಲಯದ ಮುಂದೆ ಅರಿಕೆ ಮಾಡಿಕೊಂಡಿದ್ದಳು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...

ನಾವು ದಾಖಲೆಗಳನ್ನು ಕೊಟ್ಟರೂ ನಮ್ಮನ್ನು ಹಕ್ಕುಗಳಿಂದ ವಂಚಿಸಲಾಗುತ್ತದೆ ಎಚ್ಚರ- ಡಿ.ಹೆಚ್.ಕಂಬಳಿ

ಸಿಂಧನೂರು: SIR ವಿರೋಧಿಸಿ ನಡೆಸಲಾಗುತ್ತಿರುವ ಜಾಗೃತಿ ಜಾಥ ರಾಯಚೂರು ಜಿಲ್ಲೆಯ ಸಿಂಧನೂರು ಪ್ರವೇಶಿಸಿತ್ತು. ನಗರದ ಜಮಾತ್ ಎ ಇಸ್ಲಾಂ ಹಿಂದ್ ಕಚೇರಿಯಲ್ಲಿ ಹಲವು ಸಮುದಾಯದ ಮುಖಂಡರು ಹಾಗೂ ಹೋರಾಟಗಾರರು ಹಾಜರಿದ್ದರು. ಜಾಥಾದ ಭಾಗವಾಗಿ...

ಹುಬ್ಬಳ್ಳಿಯಲ್ಲಿ ಎಸ್‌ಐಆರ್ ವಿರೋಧಿ ಜನಜಾಗೃತಿ ಸಭೆ ; ಒಗ್ಗಟ್ಟಿನ ಹೋರಾಟಕ್ಕೆ ಕರೆ

ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರೋಧಿಸಿ ಹುಬ್ಬಳ್ಳಿಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜ್ಞಾನ ಮಂಟಪದಲ್ಲಿ ಮಂಗಳವಾರ (ಜೂ.16) ಸಂಜೆ ವಿವಿಧ ಜನ ಸಂಘಟನೆಗಳು ಮತ್ತು...

ಎಸ್ಐಆರ್ ಮೂಲಕ ಮನುವಾದದ ಮರು ಜಾರಿಗೆ ಯತ್ನ : ಡಾ. ಗಣೇಶ್ ದೇವಿ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಮೂಲಕ ಮನುವಾದದ ಮರು ಜಾರಿಗೆ ಪ್ರಯತ್ನಿಸಲಾಗುತ್ತಿದೆ ಎಂದು ಪದ್ಮಶ್ರೀ ಪುರಸ್ಕೃತ ಡಾ. ಗಣೇಶ್ ದೇವಿ ಹೇಳಿದರು. ಮಂಗಳವಾರ (ಜೂ.16) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಬಳಿಯ...

ಎಡದೊರೆಯ ನಾಡಿನಲ್ಲಿ ಮೊಳಗಿದ SIR ವಿರೋಧಿ ಕೂಗು

ಕರ್ನಾಟಕದಲ್ಲಿ ಅವೈಜ್ಞಾನಿಕವಾಗಿ ಜಾರಿಮಾಡಲು ಹೊರಟಿರುವ SIR ಅನ್ನು ವಿರೋಧಿಸಿ ಜನಜಾಗೃತಿ ಜಾಥಾವು ಇಂದು ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಜಿಲ್ಲೆಯನ್ನು ಪ್ರವೇಶಿಸಿತು. ಹೋರಾಟಗಳ ನೆಲ ರಾಯಚೂರಿನಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಹೋರಾಟಗಾರರು, ವಿವಿಧ ಸಮುದಾಯದ...

ಜೂನ್ 20ರ ಬೆಂಗಳೂರಿನ ‘SIR’ ವಿರೋಧಿ ಸಮಾವೇಶಕ್ಕೆ ಶಿವಮೊಗ್ಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಹಿರಿಯ ವಕೀಲರಾದ ಶ್ರೀಪಾಲ್ ಕರೆ

ಜೂನ್ 20 ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿರುವ ‘SIR’ ವಿರೋಧಿ ಜನಜಾಗೃತಿ ಸಮಾವೇಶಕ್ಕೆ ಶಿವಮೊಗ್ಗ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕೆಂದು ಹಿರಿಯ ವಕೀಲರಾದ ಶ್ರೀಪಾಲ್ ಕರೆ ನೀಡಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಪ್ರಗತಿಪರ ಸಂಘಟನೆಗಳ...

ಮತದಾನದ ಹಕ್ಕು ಪ್ರಜಾಪ್ರಭುತ್ವದ ಜೀವಾಳ: ತರೀಕೆರೆಯಲ್ಲಿ ಶಾಸಕ G.H ಶ್ರೀನಿವಾಸ್ ಅಭಿಮತ

ರಾಜ್ಯಾದ್ಯಂತ ನಡೆಯುತ್ತಿರುವ ಎಸ್‌ಐಆರ್ (SIR) ವಿರೋಧಿ ಜನಜಾಗೃತಿ ಜಾಥಾದ ನಾಲ್ಕನೇ ದಿನದ ಪಯಣ ಇಂದು ತರೀಕೆರೆಗೆ ತಲುಪಿತು. ಪ್ರಜಾಪ್ರಭುತ್ವದ ಅಡಿಪಾಯವಾಗಿರುವ ಮತದಾನದ ಹಕ್ಕನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಈ ಜಾಥಾವನ್ನು, ತರೀಕೆರೆಯ ಜಾಗೃತ...

ಬೆಳಗಾವಿಯ ವಿವಿದೆಡೆ ಎಸ್‌ಐಆರ್‌ ವಿರೋಧಿ ಜನಜಾಗೃತಿ ಜಾಥಾ

ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧ ಬೆಳಗಾವಿಯ ವಿವಿಧ ಭಾಗಗಳಲ್ಲಿ ಸೋಮವಾರ (ಜೂ.15) ಜನಜಾಗೃತಿ ಜಾಥಾ ನಡೆಯಿತು. ಬಾಗಲಕೋಟೆಯಿಂದ ಆಗಮಿಸಿದ ಜಾಥಾ ತಂಡವನ್ನು ಯರಗಟ್ಟಿ ಪಟ್ಟಣದಲ್ಲಿ...

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಯಶಸ್ವಿಯಾದ ಎಸ್‌ಐಆರ್ ವಿರೋಧಿ ಜಾಥಾ; ಜನಪರ ಸಂಘಟನೆಗಳ ಬೆಂಬಲ

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರೋಧಿಸಿ ನಡೆಯುತ್ತಿರುವ ರಾಜ್ಯ ಮಟ್ಟದ ಜಾಥಾ ಇಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಯಿತು. ಜಾಥಾದ ಮೂರನೇ ದಿನವಾದ ಇಂದು ಗೌರಿಬಿದನೂರು ತಾಲ್ಲೂಕಿನ ಕಾದಲವೇಣಿ ಗ್ರಾಮದಿಂದ ಆರಂಭವಾದ...