Homeಮುಖಪುಟಬಿಜೆಪಿ 120, ಕಾಂಗ್ರೆಸ್ 6, ಎಎಪಿ 0: ಗುಜರಾತ್‌ ಚುನಾವಣಾ ಜಾಹೀರಾತಿನಲ್ಲಿ ಬಿಜೆಪಿ ಕ್ಲೀನ್‌ಸ್ವೀಪ್- ನ್ಯೂಸ್‌ಲಾಂಡ್ರಿ...

ಬಿಜೆಪಿ 120, ಕಾಂಗ್ರೆಸ್ 6, ಎಎಪಿ 0: ಗುಜರಾತ್‌ ಚುನಾವಣಾ ಜಾಹೀರಾತಿನಲ್ಲಿ ಬಿಜೆಪಿ ಕ್ಲೀನ್‌ಸ್ವೀಪ್- ನ್ಯೂಸ್‌ಲಾಂಡ್ರಿ ವರದಿ

- Advertisement -
- Advertisement -

ಬಿಜೆಪಿ: 120, ಕಾಂಗ್ರೆಸ್: 6, ಎಎಪಿ: 0. – ಇದು ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಮೂರು ಪ್ರಮುಖ ಪಕ್ಷಗಳು ಗೆದ್ದಿರುವ ಸ್ಥಾನಗಳ ಸಂಖ್ಯೆ ಅಲ್ಲ. ಇದು ಕಳೆದ 15 ದಿನಗಳಲ್ಲಿ ಈ ಪಕ್ಷಗಳು ಗುಜರಾತ್‌ನ ಮೂರು ಪ್ರಮುಖ ದಿನಪತ್ರಿಕೆಗಳಾದ ‘ಸಂದೇಶ್, ದಿವ್ಯ ಭಾಸ್ಕರ್ ಮತ್ತು ಗುಜರಾತ್ ಸಮಾಚಾರ’ದಲ್ಲಿ ನೀಡಿದ ಜಾಹೀರಾತುಗಳ ಸಂಖ್ಯೆಯಾಗಿದೆ.

ನವೆಂಬರ್ 21ರಿಂದ ಹಿಡಿದು ಡಿಸೆಂಬರ್ 5ರವರೆಗೆ ಅಹಮದಾಬಾದ್ ಆವೃತ್ತಿಗಳಲ್ಲಿ ಬಂದ ಜಾಹೀರಾತುಗಳನ್ನು ‘ನ್ಯೂಸ್‌ಲಾಂಡ್ರಿ’ ಜಾಲತಾಣ ವಿಶ್ಲೇಷಣೆ ಮಾಡಿದೆ. ಸರಾಸರಿಯಾಗಿ ಕಾಂಗ್ರೆಸ್‌ ವಿರುದ್ಧ ಬಿಜೆಪಿ ಮೂರು ಪತ್ರಿಕೆಗಳಲ್ಲಿ ಪ್ರತಿದಿನ ಎಂಟು ಜಾಹೀರಾತುಗಳನ್ನು ನೀಡಿದೆ ಎಂದು ಜಾಲತಾಣ ವರದಿ ಮಾಡಿದೆ.

ಈ ಅವಧಿಯಲ್ಲಿ ಮೂರು ಪತ್ರಿಕೆಗಳು ತಮ್ಮ ಮೊದಲ ಹಾಗೂ ಕೊನೆಯ ಪುಟಗಳಲ್ಲಿ ಬಿಜೆಪಿಯ ಒಟ್ಟು 72 ಜಾಹೀರಾತುಗಳನ್ನು ಪ್ರಕಟಿಸಿದವು. ಡಿಸೆಂಬರ್ 1 ರಂದು ಅಹಮದಾಬಾದ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರೋಡ್‌ಶೋ ನಡೆಸಲಿರುವ ಕುರಿತು ಪೂರ್ಣಪುಟದ ಜಾಹೀರಾತುಗಳನ್ನು ನೀಡಲಾಗಿತ್ತು. ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಒಂದು ದಿನದ ನಂತರ ನವೆಂಬರ್ 27ರಂದು ಪೂರ್ಣ ಪುಟ ಜಾಹೀರಾತುಗಳು ಕಾಣಿಸಿಕೊಂಡವು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಬಿಜೆಪಿಯ ಹೆಚ್ಚಿನ ಜಾಹೀರಾತುಗಳು ಗುಜರಾತ್‌ನಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸಲಿರುವ ಪಕ್ಷದ ನಾಯಕರ ಕುರಿತು ಇರುತ್ತಿದ್ದವು. ಮೋದಿಯವರ ವೇಳಾಪಟ್ಟಿಯೇ ಮೊದಲ ಪುಟದ ಅರ್ಧದಷ್ಟು ಭಾಗವನ್ನು ಆಕ್ರಮಿಸಿಕೊಂಡಿದ್ದನ್ನು ಗಮನಿಸಬಹುದು. ಪ್ರಮುಖವಾಗಿ ಪ್ರಚಾರ ಮಾಡಲಾದ ಇತರ ವೇಳಾಪಟ್ಟಿಗಳು ಕೇಂದ್ರ ಸಚಿವರಾದ ಅಮಿತ್ ಶಾ, ಸ್ಮೃತಿ ಇರಾನಿ, ಪರ್ಷೋತ್ತಮ್ ರೂಪಾಲಾ, ಮನ್ಸುಖ್ ಮಾಂಡವಿಯಾ ಮುಖ್ಯಮಂತ್ರಿಗಳಾದ ಭೂಪೇಂದ್ರ ಪಟೇಲ್, ಹಿಮಂತ ಬಿಸ್ವಾ ಶರ್ಮಾ, ಜೈರಾಮ್ ಠಾಕೂರ್, ಯೋಗಿ ಆದಿತ್ಯನಾಥ್ ಮತ್ತು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮೊದಲಾದವರಿಗೆ ಸೇರಿದ್ದವು.

ನವೆಂಬರ್ 22 ರಂದು ಅತಿ ಹೆಚ್ಚಿನದಾಗಿ ಬಿಜೆಪಿ ಜಾಹೀರಾತುಗಳನ್ನು ಪ್ರಕಟಿಸಲಾಗಿದೆ.  ರೂಪಲಾ, ಫಡ್ನವಿಸ್, ಮಾಂಡವಿಯಾ, ಶರ್ಮಾ ಮತ್ತು ಠಾಕೂರ್ ಅವರನ್ನು ಒಳಗೊಂಡ ಸಾರ್ವಜನಿಕ ಸಭೆಗಳ ವಿವರಗಳನ್ನು ಪ್ರತಿ ಪತ್ರಿಕೆಯಲ್ಲಿ ಎಂಟು ಜಾಹೀರಾತುಗಳನ್ನು ಪ್ರಕಟಿಸಲಾಗಿದೆ. ಕೊನೆಯ ಪುಟದಲ್ಲಿ ಮೂರು ಮತ್ತು ಒಳಪುಟಗಳಲ್ಲಿ ಐದು ಜಾಹೀರಾತುಗಳು ಕಾಣಿಸಿಕೊಂಡಿವೆ. ಪ್ರತಿ ಪತ್ರಿಕೆಯ ಕೊನೆಯ ಪುಟದ ಕಾಲುಭಾಗವು ಸಾರ್ವಜನಿಕ ಸಭೆಯ ವಿವರಗಳನ್ನು ಒಳಗೊಂಡಿದ್ದವು. ಬನಸ್ಕಾಂತ, ಅಹಮದಾಬಾದ್ ಮತ್ತು ಆನಂದ್‌ನಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಗಳ ಕುರಿತು ವಿವರಗಳನ್ನು ನೀಡಲಾಗಿತ್ತು. ಅಮಿತ್ ಶಾ ಅವರ ಚಿತ್ರಗಳೊಂದಿಗೆ ಜಾಹೀರಾತು ಪ್ರಕಟಗೊಂಡಿದ್ದವು. ಭೂಪೇಂದ್ರ ಪಟೇಲ್ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರನ್ನೂ ಇಲ್ಲಿ ಒಳಗೊಳ್ಳಲಾಗಿತ್ತು.

ಇದನ್ನೂ ಓದಿರಿ: ವಡ್ಗಾಮ್‌ ಫಲಿತಾಂಶ ಘೋಷಣೆಗೂ ಮುನ್ನವೇ ಜಿಗ್ನೇಶ್ ಸೋತಿದ್ದಾರೆಂದು ಮಾಧ್ಯಮಗಳು ವರದಿ ಪ್ರಕಟಿಸಿದ್ದೇಕೆ?

ಮೂರು ಪತ್ರಿಕೆಗಳಲ್ಲಿ ಬಿಜೆಪಿಯ ಏಕೈಕ ಜಾಕೆಟ್ ಜಾಹೀರಾತು ಡಿಸೆಂಬರ್ 1 ರಂದು ಪ್ರಕಟಗೊಂಡಿತ್ತು. ಅಹಮದಾಬಾದ್‌ನಲ್ಲಿ ಮೋದಿಯವರು 50-ಕಿಮೀಯಷ್ಟು ರೋಡ್‌ಶೋ ನಡೆಸಲಿರುವುದನ್ನು ಇಲ್ಲಿ ನೀಡಲಾಗಿತ್ತು. ಮೂರು ಗಂಟೆಗಳಲ್ಲಿ 16 ವಿಧಾನಸಭಾ ಕ್ಷೇತ್ರಗಳನ್ನು 35 ನಿಲುಗಡೆಗಳೊಂದಿಗೆ ಮೋದಿ ಕ್ರಮಿಸಲಿರುವ ವಿವರಗಳನ್ನು ಜಾಹೀರಾತಿನಲ್ಲಿ ನೀಡಲಾಗಿತ್ತು.

ನವೆಂಬರ್ 27 ರಂದು, ಬಿಜೆಪಿಯು ಪ್ರತಿ ಮೂರು ಪತ್ರಿಕೆಗಳ ಒಳಪುಟಗಳಲ್ಲಿ ಪೂರ್ಣ ಪುಟದ ಜಾಹೀರಾತುಗಳನ್ನು ನೀಡಿತ್ತು. ಪಕ್ಷದ ಪ್ರಣಾಳಿಕೆಯ ಪ್ರಮುಖ ಅಂಶಗಳನ್ನು ಪಟ್ಟಿ ಮಾಡಲಾಗಿತ್ತು. ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದು, ‘ಆಂಟಿ ರ್‍ಯಾಡಿಕಲ್‌’ ಕೋಶವನ್ನು ಸ್ಥಾಪಿಸುವುದು, 2036ರ ಒಲಂಪಿಕ್ಸ್ ಅನ್ನು ಆಯೋಜಿಸಲು ವಿಶ್ವ ದರ್ಜೆಯ ಕ್ರೀಡಾ ಮೂಲಸೌಕರ್ಯಗಳನ್ನು ನಿರ್ಮಿಸುವುದು, 20 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವುದು, ಏಮ್ಸ್ ತರಹದ ವೈದ್ಯಕೀಯ ಸೌಲಭ್ಯಗಳನ್ನು ಸ್ಥಾಪಿಸುವುದು – ಸೇರಿದಂತೆ ಮೊದಲಾದ ಭರವಸೆಗಳನ್ನು ನೀಡಲಾಗಿತ್ತು.

ಕಳೆದ 15 ದಿನಗಳಲ್ಲಿ ಮೋದಿಯವರ ಸಾರ್ವಜನಿಕ ಸಭೆಗಳ ಕುರಿತ 18 ಮುಖಪುಟದ ಜಾಹೀರಾತುಗಳನ್ನು ‘ನ್ಯೂಸ್‌ಲಾಂಡ್ರಿ’ ಪಟ್ಟಿ ಮಾಡಿದೆ. ಮೋದಿಯವರ ರೋಡ್‌ಶೋ ಕುರಿತ ಜಾಹೀರಾತು ಹೊರತುಪಡಿಸಿ ಉಳಿದೆಲ್ಲವೂ ಮೊದಲ ಪುಟದ ಅರ್ಧದಷ್ಟು ಭಾಗವನ್ನು ಆಕ್ರಮಿಸಿಕೊಂಡಿವೆ. ಉದಾಹರಣೆಗೆ ನವೆಂಬರ್ 24ರಂದು, ಎಲ್ಲಾ ಮೂರು ಪತ್ರಿಕೆಗಳ ಮುಖಪುಟಗಳಲ್ಲಿ ಜಾಹೀರಾತು ನೀಡಿ, ‘ಅರಾವಳಿ, ಬನಸ್ಕಾಂತ, ಗಾಂಧಿನಗರ ಮತ್ತು ಅಹಮದಾಬಾದ್‌’ನಲ್ಲಿ ಮೋದಿಯವರು ಪಾಲ್ಗೊಳ್ಳಲಿರುವ ಸಾರ್ವಜನಿಕ ಸಭೆಗಳ ಮಾಹಿತಿಗಳನ್ನು ನೀಡಲಾಗಿತ್ತು. ಷಾ ಅವರ ಸಾರ್ವಜನಿಕ ಸಭೆಗಳ ಜಾಹೀರಾತುಗಳು ಸಾಮಾನ್ಯವಾಗಿ ಕೊನೆಯ ಪುಟದಲ್ಲಿ ಕಾಣಿಸಿಕೊಳ್ಳುತ್ತಿದ್ದವು. ಮೂರು ಪತ್ರಿಕೆಗಳಲ್ಲಿ ಸಾಮಾನ್ಯವಾಗಿ ಕಾಲುಪುಟದ ಒಟ್ಟು 24 ಜಾಹೀರಾತುಗಳನ್ನು ನೀಡಲಾಗಿತ್ತು.

ವಿವಿಧ ದಿನಗಳಲ್ಲಿ, ಒಳಪುಟಗಳಲ್ಲಿ ಬಿಜೆಪಿಯ ಸಾಧನೆಗಳ ಕುರಿತು ಅನೇಕ ಜಾಹೀರಾತುಗಳು ಇದ್ದವು. ಈ ಜಾಹೀರಾತುಗಳು “ಭಾಜ್ಪ್ ಎಟ್ಲೆ ಭರೋಸೋ” ( ಬಿಜೆಪಿ ಎಂದರೆ ನಂಬಿಕೆ) ಎಂಬ ಪಠ್ಯದೊಂದಿಗೆ ಸಾಮಾನ್ಯವಾಗಿ ಪ್ರಾರಂಭವಾಗುತ್ತಿತ್ತು ಅಥವಾ ಕೊನೆಗೊಳ್ಳುತ್ತಿತ್ತು. ನವೆಂಬರ್ 24ರಂದು ಒಂದು ಜಾಹೀರಾತಿನಲ್ಲಿ, “ಬಿಜೆಪಿ ಎಂದರೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ, ರಾಜ್ಯದಲ್ಲಿ ಶಾಂತಿಯನ್ನು ಖಾತ್ರಿಪಡಿಸುವ, ಮಾ ಶಕ್ತಿಯ ಭದ್ರತೆಯನ್ನು ಖಾತ್ರಿಪಡಿಸುವ, ಮಹಿಳೆಯರಿಗೆ ಸುರಕ್ಷೆ ನೀಡುವ ಪಕ್ಷವಾಗಿದೆ. ಬಿಜೆಪಿಗೆ ಮತ ನೀಡಿ ಅಧಿಕಾರ ದೊರಕಿಸಬೇಕು” ಎಂದು ಮನವಿ ಮಾಡಲಾಗಿತ್ತು.

ಮತ್ತೊಂದು ಜಾಹೀರಾತಿನಲ್ಲಿ ಕೋವಿಡ್ ಸಮಯದಲ್ಲಿ ಬಿಜೆಪಿ ಮಾಡಿರುವ ಸಾಧನೆಗಳೆಂದು ಪಟ್ಟಿ ಮಾಡಲಾಗಿತ್ತು. ಬಡವರಿಗೆ ಉಚಿತ ಪಡಿತರ, ಗ್ಯಾರಂಟಿ ಇಲ್ಲದೆ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ, ಕಾರ್ಮಿಕರಿಗೆ ಪೌಷ್ಟಿಕ ಆಹಾರ ಮೊದಲಾದ ವಿಚಾರಗಳನ್ನು ಪ್ರಸ್ತಾಪಿಸಲಾಗಿತ್ತು.

ಡಿಸೆಂಬರ್ 5 ರಂದು ಎಲ್ಲಾ ಮೂರು ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಿ, ಎರಡನೇ ಹಂತದ ಮತದಾನದತ್ತ ಗಮನ ಸೆಳೆಯಲಾಯಿತು. “ಗುಜರಾತ್‌ನ ಹೆಮ್ಮೆ”, “ಗುಜರಾತ್ ವಿರೋಧಿಗಳ ವಿರುದ್ಧ ಹೋರಾಡುವ ಮತ್ತು ಭಯೋತ್ಪಾದಕರನ್ನು ಪ್ರವೇಶಿಸದಂತೆ ತಡೆಯುವ ಒಬ್ಬರಿಗೆ ಮತ ಚಲಾಯಿಸಬೇಕು” ಎಂದು ಕೋರಲಾಗಿತ್ತು. “ಏಕರೂಪ ನಾಗರಿಕ ಸಂಹಿತೆಯ ಪ್ರಕ್ರಿಯೆಯನ್ನು ಆರಂಭಿಸಿದ ರಾಜ್ಯ, ಜಗತ್ತೇ ಗುಜರಾತ್‌ಗೆ ಜಯಕಾರ ಹಾಕಿದೆ” ಎಂದು ಪ್ರಕಟಿಸಲಾಗಿತ್ತು. ಅಮಿತ್ ಷಾ, ನಡ್ಡಾ, ಭೂಪೇಂದ್ರ ಪಟೇಲ್ ಮತ್ತು ಸಿಆರ್ ಪಾಟೀಲ್ ಅವರ ಸಣ್ಣ ಭಾವಚಿತ್ರಗಳ ಜೊತೆಗೆ ಮೋದಿಯವರ ಕಟೌಟ್‌ ಬಳಿಸಲಾಗಿತ್ತು. ಮೊದಲ ಪುಟದ ಅರ್ಧದಷ್ಟು ಭಾಗವನ್ನು ಜಾಹೀರಾತು ಆಕ್ರಮಿಸಿಕೊಂಡಿತ್ತು.

ಇದನ್ನೂ ಓದಿರಿ: ಮೊರ್ಬಿ ವಿವಾದ: ಜಾಮೀನಿನ ಬಳಿಕ ಟಿಎಂಸಿ ನಾಯಕ ಸಾಕೇತ್‌ ಮತ್ತೆ ಬಂಧನ

ಕಾಂಗ್ರೆಸ್‌ ಪಾಡೇನು?

ಡಿಸೆಂಬರ್ 4 ಮತ್ತು 5ರಂದು ಎರಡನೇ ಹಂತದ ಮತದಾನಕ್ಕೆ ಒಂದು ದಿನ ಮೊದಲು ಮೂರು ಪತ್ರಿಕೆಗಳಲ್ಲಿ ಕಾಲುಪುಟದಷ್ಟು ಜಾಹೀರಾತುಗಳನ್ನು ಕಾಂಗ್ರೆಸ್ ನೀಡಿತ್ತು. ಮೊದಲ ಜಾಹೀರಾತಿನಲ್ಲಿ ಕಾಂಗ್ರೆಸ್‌ನ ಚುನಾವಣಾ ಭರವಸೆಗಳನ್ನು ಪ್ರಸ್ತಾಪಿಸಲಾಗಿತ್ತು. ಉಚಿತ ವಿದ್ಯುತ್, 500 ರೂ.ನಲ್ಲಿ ಗ್ಯಾಸ್ ಸಿಲಿಂಡರ್, ಹೆಚ್ಚಿನ ಉದ್ಯೋಗವಕಾಶ ಮತ್ತು ರೈತರ ಸಾಲ ಮನ್ನಾದ ಕುರಿತು ಕಾಂಗ್ರೆಸ್‌ ಮಾತನಾಡಿತ್ತು.

ಡಿಸೆಂಬರ್ 5 ರಂದು ಜಾಹೀರಾತಿನಲ್ಲಿ ಹೆಚ್ಚಿದ ಹಣದುಬ್ಬರ, ನಿರುದ್ಯೋಗ ಮತ್ತು “ವ್ಯಾಪಕ” ಭ್ರಷ್ಟಾಚಾರದ ಕುರಿತು ತಿಳಿಸಲಾಗಿತ್ತು. ಕಾಂಗ್ರೆಸ್‌ಗೆ ಮತ ಹಾಕಿದರೆ, ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಲಾಗುತ್ತದೆ, ಯುವಕರಿಗೆ ಉದ್ಯೋಗಗಳನ್ನು ಒದಗಿಸಲಾಗುತ್ತದೆ, ಹಣದುಬ್ಬರವನ್ನು ತಡೆಯಲಾಗುತ್ತದೆ ಮತ್ತು ಗುಜರಾತ್ ಅನ್ನು ಡ್ರಗ್ ಮುಕ್ತ ಮಾಡಲಾಗುತ್ತದೆ ಎಂದು ಭರವಸೆ ನೀಡಲಾಗಿತ್ತು. “ಬದಲಾವಣೆ ಒಂದೇ ಪರ್ಯಾಯ” ಎಂದು ಜಾಹೀರಾತು ಕೊನೆಗೊಂಡಿತ್ತು.

ನವೆಂಬರ್ 21 ರಿಂದ ಡಿಸೆಂಬರ್ 5 ರವರೆಗೆ ಈ ಮೂರು ಪತ್ರಿಕೆಗಳಲ್ಲಿ ಎಎಪಿ ಯಾವುದೇ ಜಾಹೀರಾತುಗಳನ್ನು ನೀಡಿಲ್ಲ.

(ಹೆಚ್ಚಿನ ವಿವರಗಳಿಗೆ ‘ನ್ಯೂಸ್‌ಲಾಂಡ್ರಿ’ ವರದಿ ಓದಬಹುದು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...