Homeಸಾಹಿತ್ಯ-ಸಂಸ್ಕೃತಿಪುಸ್ತಕ ವಿಮರ್ಶೆಬರಿಯ ನೆನಪಲ್ಲ: ಪ್ಯಾಲಸ್ತೇನ್ ಸಮಸ್ಯೆಯ ಬಗ್ಗೆ ವಿಮರ್ಶಾತ್ಮಕ ಅನುಸಂಧಾನ

ಬರಿಯ ನೆನಪಲ್ಲ: ಪ್ಯಾಲಸ್ತೇನ್ ಸಮಸ್ಯೆಯ ಬಗ್ಗೆ ವಿಮರ್ಶಾತ್ಮಕ ಅನುಸಂಧಾನ

- Advertisement -
- Advertisement -

ಕನ್ನಡದಲ್ಲಿ ಪ್ರತಿವರ್ಷ ನೂರಾರು ಅನುವಾದ ಕೃತಿಗಳು ಪ್ರಕಟವಾಗುತ್ತವೆ. ಹೆಚ್ಚಿನವು ಕಥೆ ಕಾದಂಬರಿ ಕಾವ್ಯಗಳು. ವಿಚಾರಸಾಹಿತ್ಯ, ಚರಿತ್ರೆ, ಆತ್ಮಕಥನ, ಪ್ರವಾಸಕಥನಗಳು ಕಡಿಮೆ. ಹೀಗಿರುತ್ತ ಯುವಲೇಖಕ ಆರ್.ಕೆ. ಆಕರ್ಷ, ಭೂಮಂಡಲದ ಗಾಯವೆನಿಸಿಕೊಂಡಿರುವ ಪ್ಯಾಲಸ್ತೇನಿಗೆ ಸಂಬಂಧಿಸಿದ ಅನುಭವ ಕಥನವೊಂದನ್ನು ಅನುವಾದಿಸಿರುವುದು ವಿಶಿಷ್ಟವಾಗಿದೆ. ಇದು ಏಶ್ಯಾ-ಆಫ್ರಿಕಾದ ಬೇರೆಬೇರೆ ದೇಶಗಳಿಗೆ ಹೋಗಿ, ಅಲ್ಲಿನ ಜನರೊಂದಿಗೆ ಮಾತುಕತೆಯಾಡಿ, ಆ ನಾಡುಗಳ ಸಂಘರ್ಷಮಯ ಕಥನಗಳನ್ನು ರಚಿಸುವುದಕ್ಕೆ ಖ್ಯಾತರಾಗಿರುವ ಕೆನಡಾದ ಲೇಖಕ ಸಿಂಟಿಯೊ ಅವರ ‘ಪೇ ನೋ ಹೀಡ್ ಟು ದಿ ರಾಕೆಟ್ಸ್: ಪ್ಯಾಲೆಸ್ಟೈನ್ ಇನ್ ಪ್ರೆಸೆಂಟ್ ಟೆನ್ಸ್’ ಕೃತಿಯ ತರ್ಜುಮೆ. ‘ನಾನು ಅರೆಬಿಕ್‌ನಲ್ಲಿ ಪ್ರೀತಿಸುತ್ತೇನೆ’ ‘ನಾನೀಗ ಸೈರನ್ನುಗಳಿಗೆ ಹೆದರುವುದಿಲ್ಲ’ ‘ನಿಮ್ಮದೇ ಮುಳ್ಳುಗಳನ್ನು ನಿಮ್ಮ ಕೈಯಿಂದ ಕಿತ್ತುಕೊಳ್ಳುತ್ತ’ ಮೊದಲಾದ ಎಂಟು ಅಧ್ಯಾಯಗಳುಳ್ಳ ಪುಸ್ತಕವಿದು. ಪ್ರತಿ ಅಧ್ಯಾಯವೂ ಒಬ್ಬೊಬ್ಬ ಪ್ಯಾಲಸ್ತೇನಿ ಹೋರಾಟಗಾರ-ಲೇಖಕರನ್ನು ಭೇಟಿಯಾಗಿ ನಡೆಸಲಾದ ಮಾತುಕತೆ ಮತ್ತು ವಿಶ್ಲೇಷಣೆಯನ್ನು ಒಳಗೊಂಡಿದೆ. ಇಸ್ರೇಲ್ ಮತ್ತು ಅಮೆರಿಕಗಳು ಆಕ್ರಮಣಕಾರಿ ರಾಜಕೀಯ ಧೋರಣೆಯ ಫಲವಾಗಿ ಲೋಕದ ಕಣ್ಣಲ್ಲಿ ಉಗ್ರಗಾಮಿಗಳಾಗಿರುವ, ಆದರೆ ತಮ್ಮ ಪೂರ್ವಜರಿಂದ ಬಂದ ಜಮೀನು ಮನೆ ತೋಟ ಗ್ರಂಥಭಂಡಾರಗಳನ್ನು ಕಳೆದುಕೊಂಡು, ಘನತೆಯ ಬದುಕಿಗಾಗಿ ಹೋರಾಡುತ್ತಿರುವ ಜನರ ದುಃಖದುಮ್ಮಾನಗಳ ಅನುಭವ ಮತ್ತು ಚಿಂತನೆಯನ್ನು ಇಲ್ಲಿರುವ ಕಥನವು ಒಳಗೊಂಡಿದೆ. ಇದನ್ನು ಓದುತ್ತಿದ್ದರೆ ಸಾಹಿತ್ಯಕ ತಾತ್ವಿಕ ರಾಜಕೀಯ ತತ್ವಗಳ ಕಿಡಿಗಳೇ ತುಂಬಿದ ಕೊಂಡದಲ್ಲಿ ಹಾಯುವಂತಹ ಅನುಭವವಾಗುತ್ತದೆ.

ನಾನು ಇಸ್ರೇಲ್ ಮತ್ತು ಪ್ಯಾಲೆಸ್ತೇನಿನ ಪ್ರವಾಸ ಮಾಡಿದ್ದೆ. ರಾಜಕೀಯ ಚರ್ಚೆ ಮಾಡುವುದಕ್ಕೆಂದೇ ಇರುವ ಕಾಫಿಕ್ಲಬ್ಬುಗಳನ್ನು ಬೆತ್ಲೆಹೆಂನಲ್ಲಿ ನೋಡಿದ್ದೆ. ಪಶ್ಚಿಮದಂಡೆಯ ಹೆಬ್ರೋನ್ ಜೆರಿಕಾ ಮೊದಲಾದ ಪಟ್ಟಣಗಳಲ್ಲಿ ತಿರುಗಾಡುವಾಗ, ಪ್ಯಾಲಸ್ಟೇನಿಯರ ಊರುಗಳನ್ನು ಬೆಟ್ಟತೋಟಗಳನ್ನು ಒತ್ತುವರಿ ಮಾಡುತ್ತ ಇಸ್ರೇಲಿ ಸರ್ಕಾರವು ಯಹೂದಿಗಳಿಗೆ ಮನೆಗಳನ್ನು ಕಟ್ಟಿಕೊಡುವುದನ್ನು, ಬೃಹತ್ ಗೋಡೆಗಳನ್ನು ನಿರ್ಮಿಸುವುದನ್ನು ಗಮನಿಸಿದ್ದೆ. ಆದರೆ ಅಲ್ಲಿನ ಹೋರಾಟಗಳ ಬಗ್ಗೆ ನೇರವಾಗಿ ಯಾರೊಟ್ಟಿಗೂ ಮಾತಾಡಲು ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನನಗೆ ಈ ಪುಸ್ತಕವು ನನ್ನ ತಿರುಗಾಟದ ಕೊರತೆಗಳನ್ನು ತುಂಬಿಕೊಡುವ ಸಮೃದ್ಧ ಅನುಭವ ನೀಡಿತು. ಇಸ್ರೇಲಿನ ಸೈನಿಕರ ನಿಷ್ಠುರ ತಪಾಸಣೆಯಲ್ಲಿ ಒಂದೇ ಊರಲ್ಲಿರುವ ಬೇರೆಬೇರೆ ಭಾಗಗಳಿಗೆ ಹೋಗಲು ಚೆಕ್‌ಪಾಯಿಂಟುಗಳನ್ನು ದಾಟುವ ಕಷ್ಟವನ್ನು ಕುರಿತ ಇಲ್ಲಿನ ಭಾಗಗಳು ಪ್ರವಾಸಿಗರಾಗಿ ಹೋಗುವ ಎಲ್ಲರ ಅನುಭವಕ್ಕೂ ಬರುತ್ತವೆ. ಆದರೆ ಪ್ಯಾಲೆಸ್ತೇನಿಯರಿಗೆ ಈ ಅಪಮಾನಜನಕ ದಾಟುವಿಕೆ ನಿತ್ಯದ ಅನುಭವವಾಗಿದೆ.

ನೋವು ಹೋರಾಟ ಸಾವು ಹೊರದಬ್ಬುವಿಕೆ ಅನಾಥಪ್ರಜ್ಞೆಗಳ ಅಗ್ನಿಪರ್ವತದಂತಿರುವ ಸಂಘರ್ಷಮಯ ಪ್ರದೇಶದಲ್ಲಿ ಸಾಹಿತ್ಯದಂತಹ ಕಲೆಯೊಂದು ಏನು ಮಾಡಬಲ್ಲದು ಎಂಬುದಕ್ಕೆ, ಈ ಕೃತಿಯಲ್ಲಿರುವ ದಾಖಲೆ ಮಾತುಕತೆ ವಿಶ್ಲೇಷಣೆ ವ್ಯಾಖ್ಯಾನಗಳು ಸಾಕ್ಷಿಯಂತಿವೆ. ಪ್ಯಾಲೆಸ್ತೇನಿ ಲೇಖಕರು ಹೇಳಿಕೊಂಡಿರುವ ಅನುಭವಗಳು ಮೈಜುಂ ಅನಿಸುವಂತಿವೆ. ಒಮ್ಮೆ ಕವಿ ಮೊಹಮ್ಮದ ಕುರ್ದ್ ಅವರು ತಮ್ಮ ಮೂಲಮನೆಯನ್ನು ಯಹೂದಿ ಆಕ್ರಮಣಕಾರರಿಂದ ಕಳೆದುಕೊಂಡ ಅನುಭವದ ಆಧಾರದಲ್ಲಿ ನಿರ್ಮಿಸಿದ ‘ಮೈ ನೈಬರ್‌ಹುಡ್’ ಸಾಕ್ಷ್ಯಚಿತ್ರದೊಂದಿಗೆ ಅಮೆರಿಕಕ್ಕೆ ಹೋಗಬೇಕಾಗುತ್ತದೆ. ಅವರಿಗೆ ರೈಲನ್ನು ನಡುನಡುವೆ ನಿಲ್ಲಿಸಿ ಸೈನಿಕರಿಂದ ತಪಾಸಣೆಗೆ ಒಳಗಾಗದೆ ಪಯಣ ಮಾಡುವುದರ ಅನುಭವವು ಹೊಸತೆನಿಸುತ್ತದೆ. ನಿತ್ಯವೂ ಪ್ರತಿಭಟನ ಘೋಷಣೆ ಹಾಕುತ್ತ ವಿಮೋಚನ ಚಳವಳಿ ನಡೆಸುತ್ತಿರುವ ಪ್ಯಾಲೆಸ್ತೇನಿಯರು ಎಷ್ಟೆಲ್ಲ ಸಣ್ಣಪುಟ್ಟ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದಾರೆ ಎಂಬುದನ್ನು ಕೂಡ ಇದು ಮನದಟ್ಟುಮಾಡುತ್ತದೆ.

 

ಆಕರ್ಷ ರಮೇಶ ಕಮಲ

ಈ ಕೃತಿಯಲ್ಲಿ ಧೀಮಂತರಾದ ಲೇಖಕಿಯರ ಜತೆಗಿನ ಮಾತುಕತೆಗಳಂತೂ ಉಜ್ವಲವಾಗಿವೆ. ಹೋರಾಟದ ಗರ್ಭದಲ್ಲಿರುವ ಸಾಮಾನ್ಯ ಜನ ರೂಪಕಗಳಲ್ಲಿ ಮಾತಾಡುವ ಕವಿಗಳಾಗಿರುತ್ತಾರೆ. ಹೋರಾಟಗಾರರು ದಾರ್ಶನಿಕರಾಗಿರುತ್ತಾರೆ ಮತ್ತು ಲೇಖಕರು ರಾಜಕೀಯ ಪ್ರಜ್ಞೆಯುಳ್ಳವರಾಗಿರುತ್ತಾರೆ ಎಂಬುದನ್ನು ಇಲ್ಲಿನ ಮಾತುಕತೆಗಳು ಸೂಚಿಸುತ್ತವೆ. ಲೇಖಕ ಸಿಂಟಿಯೊ, ಪ್ಯಾಲಸ್ತೇನಿಯರ ಹೋರಾಟ ಮತ್ತು ಸಾಹಿತ್ಯಗಳ ಬಗ್ಗೆ ಸಹಾನುಭೂತಿ ಉಳ್ಳವರು. ಆದರೂ ಇಸ್ರೇಲಿನ ಅಸ್ತಿತ್ವವನ್ನೇ ನಿರಾಕರಿಸುವ ಅತಿರೇಕದ ಅವಾಸ್ತವಿಕ ವಾದಗಳ ಬಗ್ಗೆ ಭಿನ್ನಮತವುಳ್ಳವರು. ಹೀಗಾಗಿ ಇದೊಂದು ಪ್ಯಾಲಸ್ತೇನ್ ಸಮಸ್ಯೆಯ ಬಗ್ಗೆ ವಿಮರ್ಶಾತ್ಮಕ ಅನುಸಂಧಾನವಿರುವ ಕೃತಿ ಕೂಡ ಆಗಿದೆ.

ಹೊಸಕಾಲದ ತರುಣ-ತರುಣಿಯರಲ್ಲಿ ಮತೀಯ ರಾಜಕಾರಣಕ್ಕೆ ಒಲಿದವರು ಸಾಕಷ್ಟು ಜನರಿದ್ದಾರೆ. ಯಾವುದೇ ರಾಜಕೀಯ ಪ್ರಜ್ಞೆಯ ಅಗತ್ಯವನ್ನು ನಿರಾಕರಿಸುತ್ತ ಭೋಗವಾದವನ್ನೇ ನಂಬಿದವರೂ ಇದ್ದಾರೆ. ಆದರೆ ಇಂಜಿನಿಯರಿಂಗ್ ಪದವೀಧರರಾದ ಆಕರ್ಷ ಅವರಂತೆ ಕೆಲವರು, ನಾಡಿನ ಮತ್ತು ದೇಶದ ನೋವುಗಳಿಗೆ ಮಿಡಿಯುವವರೂ ಇದ್ದಾರೆ. ಅನುವಾದಕ್ಕೆ ಈ ಕೃತಿಯ ಆಯ್ಕೆಯೇ ಅವರ ಕಾಳಜಿಯನ್ನು ಲೋಕದೃಷ್ಟಿಯನ್ನು ಕಾಣಿಸುತ್ತದೆ. ತಾಯಿ ಎಂ.ಆರ್. ಕಮಲ ಕನ್ನಡಿಗರಿಗೆ ಅಮೆರಿಕದ ಆಫ್ರಿಕನರ ಹೋರಾಟಗಳ ಕಥನಗಳನ್ನು ಕೊಟ್ಟಿದ್ದರು. ಅವರ ಮಗ ಜಗತ್ತಿನ ಇನ್ನೊಂದು ಭೂಭಾಗದ ಹೋರಾಟದ ಕಥನವನ್ನು ಕೊಟ್ಟಿದ್ದಾರೆ.

ಬರಿಯ ನೆನಪಲ್ಲ
ಮೂಲ: ಪೇ ನೋ ಹೀಡ್ ಟು ದಿ ರಾಕೆಟ್ಸ್
ಲೇಖಕ: ಮಾಸೆಲ್ಲೊ ಟಿ ಸಿಂಟಿಯೊ
ಅನು: ಆಕರ್ಷ ರಮೇಶ್ ಕಮಲ
ಕಥನ ಪ್ರಕಾಶನ, ಬೆಂಗಳೂರು, 2021, ಬೆಲೆ: 225

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ.


ಇದನ್ನೂ ಓದಿ: ನೀಲಕುರಿಂಜಿ: ಹೊಸ ಅಸ್ಮಿತೆಗಳ ಆತ್ಮ ನಿವೇದನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಿಶಾ ಸಾಲ್ಯಾನ್ ಸಾವು ಪ್ರಕರಣ: ಸಿಬಿಐ ತನಿಖೆಗೆ ಬಾಂಬೆ ಹೈಕೋರ್ಟ್ ಆದೇಶ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ಆಗಿದ್ದ ದಿಶಾ ಸಾಲಿಯಾನ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಬುಧವಾರ (ಸೆಪ್ಟೆಂಬರ್ 2) ಸಿಬಿಐ ತನಿಖೆಗೆ ಆದೇಶಿಸಿದೆ. ಜೂನ್...

ಸಂವಿಧಾನ ಬದಲಿಸಿ ಮನುಸ್ಮೃತಿ ತರಲು SIR ಷಡ್ಯಂತ್ರ: ನಟ ಕಿಶೋರ್

ದೇಶದ ಬಹುಕೋಟಿ ಉದ್ಯಮಿ ಗೌತಮ್ ಅದಾನಿಯದ್ದೇ ಇರಲಿ ಅಥವಾ ಒಬ್ಬ ಬಡ ರೈತನದ್ದೇ ಇರಲಿ, ಪ್ರಜಾಪ್ರಭುತ್ವದಲ್ಲಿ ಎಲ್ಲರ ಮತವೂ ಒಂದೇ ಸಮ. ಪ್ರಜೆಗಳನ್ನೆಲ್ಲ ಸಮಾನವಾಗಿ ಕಾಣುವ ಏಕೈಕ ಅಸ್ತ್ರ ಎಂದರೆ ಅದು ಮತದಾನದ...

Nepal: ಭೀಕರ ಪ್ರವಾಹಕ್ಕೆ ಸವಾಲೆಸೆದು ನಿಂತ ‘ಗ್ರೀನ್ ಹೌಸ್’ ಸ್ಟೋರಿ

'ನಮ್ಮ ಬದುಕು ಇಷ್ಟಕ್ಕೇ ಅಂತ್ಯವಾಯಿತು ಎನಿಸುವ ಕ್ಷಣಗಳು ಎದುರಾದಾಗ ಮನಸ್ಸಿನಲ್ಲಿ ಏನು ಓಡಬಹುದು? ಪ್ರವಾಹ ಬಂದಾಗ ನನಗೂ ಅದೇ ಅನಿಸಿತ್ತು' ಇದು ನೇಪಾಳದ ನುವಾಕೋಟ್ ಜಿಲ್ಲೆಯ ತ್ರಿಶೂಲಿ ನದಿಯಲ್ಲಿ ಹರಿದುಬಂದ ಭೀಕರ ಪ್ರವಾಹದಿಂದ...

NEET: ದೇಶಾದ್ಯಂತ ಪ್ರತಿಭಟನಾಕಾರರ ವಿರುದ್ದ ದಾಖಲಾಗಿದ್ದ ಎಲ್ಲಾ FIRಗಳನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಮರುಪರೀಕ್ಷೆ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ಯ (CJP) ಪ್ರತಿಭಟನಾಕಾರರ ವಿರುದ್ಧ ದಾಖಲಾಗಿದ್ದ ಎಲ್ಲಾ FIR ಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಗೊಳಿಸಿದೆ. ಕೇಂದ್ರ ಸರ್ಕಾರವು ಈ...

ಚುನಾವಣಾ ಆಯೋಗ ಚಲೋ: ನಟ ಪ್ರಕಾಶ್ ರಾಜ್ ಸೇರಿದಂತೆ ನೂರಾರು SIR ಸಂತ್ರಸ್ತರು, ಹೋರಾಟಗಾರರನ್ನು ವಶಕ್ಕೆ ಪಡೆದ ಪೊಲೀಸರು

ಕರ್ನಾಟಕ ರಾಜ್ಯದ ಅರ್ಹ ಮತದಾರರ ‘ಮತಹರಣ’ ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಮ್ಮಿಕೊಂಡಿದ್ದ ‘ಚುನಾವಣಾ ಆಯೋಗ ಚಲೋ’ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್, ಕಿಶೋರ್ ಹಾಗೂ ಪ್ರಮುಖ ನಾಯಕರು ಸೇರಿದಂತೆ...

‘ಚುನಾವಣಾ ಆಯೋಗ ಚಲೋ’: ‘ಮುಚ್ಚಿದ ಬಾಗಿಲಿನ ಮಾತುಕತೆ ಬೇಡ, ಎಲ್ಲವೂ ಸಾರ್ವಜನಿಕರ ಮುಂದೆಯೇ ಇತ್ಯರ್ಥವಾಗಬೇಕು’: ನೂರ್ ಶ್ರೀಧರ್ ಆಗ್ರಹ

ಬೆಂಗಳೂರು: ಕರ್ನಾಟಕದಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ರಾಜ್ಯದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಬೃಹತ್ ಕಳವಳವನ್ನು ಸೃಷ್ಟಿಸಿದೆ. ಕೇಂದ್ರ ಚುನಾವಣಾ ಆಯೋಗವು ಬಿಡುಗಡೆ ಮಾಡಿರುವ ನೂತನ ಕರಡು ಮತದಾರರ...

SIR ಎಂಬುದು ಪ್ರಜಾಪ್ರಭುತ್ವವನ್ನು ಹಾಳುಮಾಡುವ ದೊಡ್ಡ ಸಂಚು ಮತ್ತು ಮೋಸ: ಪ್ರಕಾಶ್ ರಾಜ್

"ನಾನು ಸಣ್ಣವನಿದ್ದಾಗ ಮುಕ್ಕೂಟಿ ಕನ್ನಡಿಗರು ಎನ್ನುತ್ತಿದ್ದರು. ದಶಕಗಳ ನಂತರ ಪಂಚಕೋಟಿ ಕನ್ನಡಿಗರಾಗಿ, ಈಗ ಶತಕೋಟಿ ಆಗಬೇಕಿತ್ತು. ಆದರೆ ಮತದಾರರ ಪಟ್ಟಿ ವಿಶೇಷ ಸಾಂದ್ರ ಪರಿಷ್ಕರಣೆ (SIR) ಹೆಸರಿನಲ್ಲಿ ಮತ್ತೆ ಮುಕ್ಕೂಟಿಗೆ ತಂದು ನಿಲ್ಲಿಸಲಾಗುತ್ತಿದೆ....

‘ಚುನಾವಣಾ ಆಯೋಗ ಚಲೋ’: ಎಸ್ಐಆರ್ ಅನ್ಯಾಯವನ್ನು ಪ್ರಶ್ನಿಸಲು ನಾವು ಚುನಾವಣಾ ಆಯೋಗಕ್ಕೆ ಮುತ್ತಿಗೆ ಹಾಕುತ್ತಿದ್ದೇವೆ: ಯೂಸುಫ್ ಕನ್ನಿ

ಬೆಂಗಳೂರು: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಅರ್ಹ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ವೇದಿಕೆಯು 2026 ಸೆಪ್ಟಂಬರ್ 01, ಮಂಗಳವಾರ ಹಮ್ಮಿಕೊಂಡಿದ್ದ...

SIR:‘ನಾವು ಕಳ್ಳರಲ್ಲ, ಈ ದೇಶದ ಮೂಲ ನಿವಾಸಿಗಳು’ SIR ಸಂತ್ರಸ್ತರ ಜೊತೆ ಪ್ರಕಾಶ್ ರಾಜ್ ಸಂವಾದ

"ನಾವು ಈ ದೇಶದ ನಾಗರಿಕರು, ಕಳ್ಳರಲ್ಲ. ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡಿ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರಲಾಗುತ್ತಿದೆ. ನಮ್ಮ ಹಕ್ಕನ್ನು ಉಳಿಸಿಕೊಳ್ಳಲು ನಾವು ಹೋರಾಟ ನಡೆಸುತ್ತಿದ್ದೇವೆ," ಎಂದು ಬಹುಭಾಷಾ ನಟ ಹಾಗೂ...

‘ವಿದೇಶದಲ್ಲಿ ಚಿನ್ನ ಖರೀದಿಸಬೇಡಿ, ವಿವಾಹವಾಗಬೇಡಿ’: ಭಾರತೀಯರಿಗೆ ಮೋದಿ ಮನವಿ

ಭಾರತೀಯರು ಅನಗತ್ಯವಾಗಿ ವಿದೇಶಿ ಪ್ರವಾಸ ಕೈಗೊಳ್ಳುವುದನ್ನು, ವಿದೇಶಗಳಲ್ಲಿ ವಿವಾಹವಾಗುವುದನ್ನು ಹಾಗೂ ಅಗತ್ಯವಿಲ್ಲದಿದ್ದರೆ ವಿದೇಶದಿಂದ ಚಿನ್ನ ಖರೀದಿಸುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಸ್ವಾವಲಂಬನೆಗೆ ಉತ್ತೇಜನ ನೀಡುವುದರ...