Homeಕರ್ನಾಟಕಜಾತಿ ಗಣತಿ: ಪತ್ರಕರ್ತರಿಗೆ ರಾಹುಲ್ ಗಾಂಧಿ ಕೇಳಿದ ಪ್ರಶ್ನೆ ದೇಶದ ವಾಸ್ತವಕ್ಕೆ ಹಿಡಿದ ಕನ್ನಡಿ- ನಟ...

ಜಾತಿ ಗಣತಿ: ಪತ್ರಕರ್ತರಿಗೆ ರಾಹುಲ್ ಗಾಂಧಿ ಕೇಳಿದ ಪ್ರಶ್ನೆ ದೇಶದ ವಾಸ್ತವಕ್ಕೆ ಹಿಡಿದ ಕನ್ನಡಿ- ನಟ ಕಿಶೋರ್ ಕುಮಾರ್

- Advertisement -
- Advertisement -

ಜಾತಿಜನಗಣತಿಯ ಪ್ರಾಮುಖ್ಯತೆ ಕುರಿತು ವಿಪಕ್ಷದ ನಾಯಕ ರಾಹುಲ್ ಗಾಂಧಿ ಪತ್ರಕರ್ತರಿಗೆ ಕೇಳಿದ ಪ್ರಶ್ನೆಯು ಇಂದಿನವರೆಗೆ ಧರ್ಮದ ಮುಸುಕಲ್ಲಿ ಮುಚ್ಚಿಟ್ಟ ಡೆಮಾಕ್ರೆಸಿಯ ತಾಯಿ ಭಾರತ ದೇಶದ ಕಠೋರ ವಾಸ್ತವಕ್ಕೆ, ಸತ್ಯಕ್ಕೆ ಕನ್ನಡಿ ಹಿಡಿದದ್ದಂತೂ ಸತ್ಯ.. ಎಂದು ಬಹುಭಾಷಾ ನಟ ಕಿಶೋರ್ ಕುಮಾರ್ ಹೇಳಿದ್ದಾರೆ.

ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಪತ್ರಕರ್ತರ ಪೈಕಿ ದಲಿತ ಹಾಗೂ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಸೇರಿದವರು ಎಷ್ಟು ಜನ ಇದ್ದಾರೆ ಎಂಬುದನ್ನು ಕೈ ಎತ್ತಿ ತೋರಿಸುವಂತೆ ಕೇಳಿದ್ದರು. ಈ ವಿಚಾರವಾಗಿ ನಟ ಕಿಶೋರ್ ಕುಮಾರ್ ಅವರು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

 

View this post on Instagram

 

A post shared by Kishore Kumar Huli (@actorkishore)

”ಜಾತಿಜನಗಣತಿಯ ಪ್ರಾಮುಖ್ಯತೆಯ ಬಗೆಗಿನ ಪತ್ರಿಕಾ ಗೋಷ್ಠಿಯಲ್ಲಿ ವಿಪಕ್ಷದ ನಾಯಕ ರಾಹುಲ್ ಗಾಂಧಿಯವರ ಅಚಾನಕ್ ಪ್ರಶ್ನೆ- ಈ ಕೋಣೆಯಲ್ಲಿ ಎಷ್ಟು ಜನ ಓಬಿಸಿ, ದಲಿತರು ಮತ್ತು ಆದಿವಾಸಿಗಳಿದ್ದೀರಿ??
ಈ ಪ್ರಶ್ನೆ ಇಂದಿನವರೆಗೆ ಧರ್ಮದ ಮುಸುಕಲ್ಲಿ ಮುಚ್ಚಿಟ್ಟ ಡೆಮಾಕ್ರೆಸಿಯ ತಾಯಿ ಭಾರತ ದೇಶದ ಕಠೋರ ವಾಸ್ತವಕ್ಕೆ, ಸತ್ಯಕ್ಕೆ ಕನ್ನಡಿ ಹಿಡಿದದ್ದಂತೂ ಸತ್ಯ..” ಎಂದು ಹೇಳಿದ್ದಾರೆ.

”ತುಂಬಿದ ಸಭೆಯಲ್ಲಿ ಒಬ್ಬ ಓಬಿಸಿ, ದಲಿತ, ಆದಿವಾಸಿ ಪತ್ರಕರ್ತನೂ ಇರಲಿಲ್ಲ. (ದೇಶದಲ್ಲಿ ಇವರ ಒಟ್ಟು ಸಂಖ್ಯೆ ಸುಮಾರು 70% ). ಸಮಾನತೆಯ ಢೋಂಗಿ ನಾಟಕವಾಡುವ ಅಧಿಕಾರ ಹಿಡಿದವರ ರಾಜಕೀಯ ದಾಳ, ಪ್ರಮುಖ ಬಂಡವಾಳ, ಯಾವುದನ್ನು ಉಳಿಸಿಕೊಳ್ಳಲು ಏನು ಬೇಕಾದರೂ ಮಾಡಲೂ ತಯಾರಿದ್ದರೋ ಆ ಮಾಸ್ಟರ್ ಸ್ಟ್ರೋಕ್ ‘ಸನಾತನ ಧರ್ಮ’ದ ಅರ್ಥ ಹುಡುಕುತ್ತಿದ್ದ ನನಗೆ ಇದರಿಂದ ಉತ್ತರ ಸಿಕ್ಕಂತಾಯ್ತು” ಎಂದು ಬರೆದಿದ್ದಾರೆ.

ಇದನ್ನೂ ಓದಿ: ನಾವು ಹಿಂದೂಗಳಲ್ಲವೇ? ಇದಾವುದು ಹೊಸ ಧರ್ಮ, ಸನಾತನ??: ನಟ ಕಿಶೋರ್ ಕುಮಾರ್ ಪ್ರಶ್ನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರ ಸಚಿವ ಅಮಿತ್‌ ಶಾ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲು

0
ಚುನಾವಣೆ ಪ್ರಚಾರದಲ್ಲಿ ಮಕ್ಕಳನ್ನು ಬಳಸಿಕೊಂಡ ಹಿನ್ನೆಲೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ತೆಲಂಗಾಣದ ಹೈದರಾಬಾದ್‌ನಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ. ಚುನಾವಣಾ...