Homeಮುಖಪುಟಅಲ್ಪಸಂಖ್ಯಾತರ ಇಲಾಖೆಯ ಸ್ಕಾಲರ್‌ಶಿಪ್ ಹಗರಣ: ಪ್ರಕರಣ ದಾಖಲಿಸಿಕೊಂಡ ಸಿಬಿಐ

ಅಲ್ಪಸಂಖ್ಯಾತರ ಇಲಾಖೆಯ ಸ್ಕಾಲರ್‌ಶಿಪ್ ಹಗರಣ: ಪ್ರಕರಣ ದಾಖಲಿಸಿಕೊಂಡ ಸಿಬಿಐ

- Advertisement -
- Advertisement -

ಅಲ್ಪಸಂಖ್ಯಾತರ ಇಲಾಖೆಯ ವಿದ್ಯಾರ್ಥಿ ವೇತನದಲ್ಲಿ ಭಾರೀ ಹಗರಣ ನಡೆದಿದ್ದು,  830 ನಕಲಿ ಸಂಸ್ಥೆಗಳು ಇದರ ಲಾಭ ಪಡೆದಿದೆ. 2017-22ರ ಅವಧಿಯಲ್ಲಿ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯಕ್ಕೆ  ಇದರಿಂದಾಗಿ ಸುಮಾರು 144 ಕೋಟಿ ನಷ್ಟ ಉಂಟಾಗಿದೆ ಇದೀಗ ಸಿಬಿಐನಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಕುರಿತು ಬ್ಯಾಂಕ್‌ಗಳು, ಸಂಸ್ಥೆಗಳು ಮತ್ತು ಇತರ ಅಪರಿಚಿತರ ವಿರುದ್ಧ ಕ್ರಿಮಿನಲ್ ಪಿತೂರಿ, ವಂಚನೆ, ಫೋರ್ಜರಿ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ನಿಬಂಧನೆಗಳ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.

ವಿದ್ಯಾರ್ಥಿವೇತನದ ಯೋಜನೆಗಳ ಅಡಿಯಲ್ಲಿ ಹಣಕಾಸಿನ ದುರುಪಯೋಗದ ಕುರಿತ ವರದಿಗಳನ್ನು ಪರಿಗಣಿಸಿ,  ಸಚಿವಾಲಯವು ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಲೈಡ್ ಎಕನಾಮಿಕ್ ರಿಸರ್ಚ್ (NCAER) ಸಂಸ್ಥೆಗೆ ಮೌಲ್ಯಮಾಪನಕ್ಕೆ ಸೂಚಿಸಿತ್ತು.

ಇದಲ್ಲದೆ ಸಚಿವಾಲಯವು ಅನುಮಾನಾಸ್ಪದ ಸಂಸ್ಥೆಗಳು/ಅರ್ಜಿದಾರರ  ಬಗ್ಗೆ ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ (ಎನ್‌ಎಸ್‌ಪಿ) ಮೂಲಕ ಮೌಲ್ಯಮಾಪನವನ್ನು ನಡೆಸಿದೆ ಎಂದು ಸಚಿವಾಲಯವು ತನ್ನ ದೂರಿನಲ್ಲಿ ತಿಳಿಸಿದೆ.

ಎನ್‌ಎಸ್‌ಪಿಯಲ್ಲಿ ಮೌಲ್ಯಮಾಪನಕ್ಕಾಗಿ ಒಟ್ಟು 1,572 ಸಂಸ್ಥೆಗಳನ್ನು ಗುರುತಿಸಲಾಗಿತ್ತು.  21 ರಾಜ್ಯಗಳ 1,572 ಸಂಸ್ಥೆಗಳಲ್ಲಿ, 830 ಸಂಸ್ಥೆಗಳು ನಕಲಿ ಅಥವಾ ಭಾಗಶಃ ನಕಲಿ ಎಂದು ಕಂಡುಬಂದಿದೆ ಎಂದು ಇಲಾಖೆ ಹೇಳಿದೆ.

ಈ ವಂಚನೆಯಿಂದ 2017ರಿಂದ 22ರವರೆಗೆ 830 ಸಂಸ್ಥೆಗಳಿಂದ 144.33ಕೋಟಿ ಅಲ್ಪಸಂಖ್ಯಾತರ ಇಲಾಖೆಯ ಖಜಾನೆಗೆ ನಷ್ಟವಾಗಿದೆ ಎಂದು ಇಲಾಖೆ ಅಂದಾಜಿಸಿದೆ.

ಇದನ್ನು ಓದಿ: ದಲಿತ ಎಂಬ ಕಾರಣಕ್ಕೆ ನನಗೆ ತಾರತಮ್ಯ ಮಾಡುತ್ತಿದ್ದಾರೆ: ಹಿರಿಯ ಐಎಎಸ್ ಅಧಿಕಾರಿ ಆರೋಪ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ಲೈಂಗಿಕ ದೌರ್ಜನ್ಯದ ಸಂತ್ರಸ್ತೆಯರಿಗೆ ರಾಜ್ಯ ಸರ್ಕಾರದಿಂದ ಆರ್ಥಿಕ ನೆರವು: ಸುರ್ಜೇವಾಲ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ರಾಜ್ಯ ಸರ್ಕಾರ ಆರ್ಥಿಕ ನೆರವು ನೀಡಲಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ...