Homeಕರ್ನಾಟಕಕನ್ನಡಿಗರ ಮನಸೆಳೆದಿದ್ದ ಚಿರಂಜೀವಿ ಸರ್ಜಾ ನಟನೆಯ ’ಅಮ್ಮಾ ಐ ಲವ್‌ ಯೂ’

ಕನ್ನಡಿಗರ ಮನಸೆಳೆದಿದ್ದ ಚಿರಂಜೀವಿ ಸರ್ಜಾ ನಟನೆಯ ’ಅಮ್ಮಾ ಐ ಲವ್‌ ಯೂ’

- Advertisement -
- Advertisement -

ಕನ್ನಡಿಗರು ಭಾವನಾ ಜೀವಿಗಳು, ಕರ್ನಾಟಕದಲ್ಲಿ ಭಾವನೆಗಳಿಗೆ ಬೆಲೆ ಜಾಸ್ತಿ ಎಂಬ ಮಾತುಗಳು ಚಿತ್ರರಂಗದಲ್ಲಿ ಬಹಳ ಕಾಲದಿಂದಲೂ ಕೇಳಿಬರುತ್ತಿದೆ. ಅಂತೆಯೇ ಕೆಲವು ಸಿನಿಮಾಗಳಲ್ಲಿ ಕನ್ನಡಿಗರು ಸೆಂಟಿಮೆಂಟಲ್ ಫೂಲ್ಸ್ ಎಂದೂ ಸಹ ನಯವಾಗಿ ಬೈಸಿಕೊಂಡಿರುವುದೂ ಇದೆ. ಕನ್ನಡ ಚಿತ್ರರಂಗವು ಸೆಂಟಿಮೆಂಟ್‍ಗೆ ಹೆಚ್ಚು ಹೊತ್ತು ಕೊಡುತ್ತಾ ಬಂದಿದೆ, ಸಂಬಂಧಗಳ ಭಾವನೆಗಳನ್ನಿಟ್ಟುಕೊಂಡು ಮಾಡಿದ ಸಿನಿಮಾಗಳು ಫೈಲ್ ಆಗಿದ್ದೇ ಇಲ್ಲ.

ಅದರಲ್ಲೂ ತಾಯಿಯ ಪ್ರೀತಿ ವಾತ್ಸಲ್ಯಕ್ಕೆ ಬೆಲೆ ಕಟ್ಟಲಾಗದಷ್ಟು ಅನುಕಂಪ. ಅಮ್ಮ ಎಂದರೆ ಸ್ಥೈರ್ಯ, ಅಮ್ಮಾ ಎಂದರೆ ಅನುಕಂಪ, ತಾಯಿಯೇ ಸ್ಫೂರ್ತಿ ಎಂಬ ಹೆಗ್ಗಳಿಕೆ ಕನ್ನಡಿಗರದು. ಹೆತ್ತವಳು ಕಣ್ಣೆದುರೇ ಮರೆಯಾಗುತ್ತಾಳೆಂದಾಗ ಅವಳನ್ನು ಉಳಿಸಿಕೊಳ್ಳಲು ಮಗನ ಒದ್ದಾಟ ಹಾಗೂ ತಳಮಳವನ್ನು ಕಥೆಯನ್ನಾಗಿಟ್ಟುಕೊಂಡು ನಿರ್ದೇಶಕ ಕೆ.ಎಂ.ಚೈತನ್ಯ ‘ಅಮ್ಮ ಐ ಲವ್ ಯೂ’ ಸಿನಿಮಾ ಮಾಡಿದ್ದಾರೆ.

ಪ್ರೀತಿಯ ಪ್ರಜ್ಞೆಯನ್ನು ಕೇಂದ್ರವಾಗಿಟ್ಟುಕೊಂಡಿರುವ ಈ ಚಿತ್ರ ಅಮ್ಮ ಮಗನ ಸೆಂಟಿಮೆಂಟ್ ಅಷ್ಟೇ ಅಲ್ಲದೆ ಸಮಾಜದ ಹಲವು ಸಂಬಂಧಗಳನ್ನು ಬೆಸೆಯುವ ಮಾನವೀಯ ಮೌಲ್ಯಗಳನ್ನು ಒಳಗೊಂಡಿದೆ. ಭಿಕ್ಷುಕರ ಬದುಕಿನ ತೊಳಲಾಟದೊಂದಿಗೆ ಬದುಕಿನ ಅರ್ಥವನ್ನು ಕಟ್ಟಿಕೊಟ್ಟಿದೆ.


ಇದನ್ನೂ ಓದಿ:  ಸ್ಯಾಂಡಲ್‌ವುಡ್ ಚಿತ್ರ ನಟ ಚಿರಂಜೀವಿ ಸರ್ಜಾ ನಿಧನ


ಸಿದ್ದಾರ್ಥ್ ತನ್ನ ಹೆತ್ತ ತಾಯಿ ಸಾವು ಬದುಕಿನ ನಡುವೆ ಹೋರಾಟ ಮಾಡುವಾಗ ಅವಳನ್ನು ಉಳಿಸಿಕೊಳ್ಳಲು ಹಲವು ಆಸ್ಪತ್ರೆಗಳನ್ನು ಸುತ್ತಿದರು ತಾಯಿ ಗುಣಮುಖಳಾಗದಿದ್ದ ಚಿಂತೆಯಲ್ಲಿದ್ದವನು ಒಬ್ಬ ಸನ್ಯಾಸಿಯ ಮಾತು ಕೇಳಿ ತನ್ನ ವೈಚಾರಿಕತೆಯನ್ನು ಬದಿಗೊತ್ತಿ ಶ್ರೀಮಂತಿಯ ವೇಷ ಮರೆಸಿ ಭಿಕ್ಷುಕನ ವೇಷ ಧರಿಸಿ ಭಿಕ್ಷಾಟನೆಯ ಅಜ್ಞಾತವಾಸಕ್ಕೆ ತೆರಳುತ್ತಾನೆ, ಇಲ್ಲಿ ತಾಯಿಯ ಮೇಲಿನ ಮಮತೆ ಔಷಧಿಗಳಿಂದ ಸಾಧ್ಯವಾಗದ್ದು ಹರಕೆಯಿಂದ ಸಾಧ್ಯವೇ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಲಾರದು. ಇಂತಹ ಸಂದರ್ಭಗಳು ಜನರು ಮೌಢ್ಯದ ಮೊರೆಹೊಗುವ ಪರಿಸ್ಥಿತಿಗೆ ಕನ್ನಡಿ ಇಟ್ಟಂತೆ ತಿಳಿಸುತ್ತವೆ.

ಆ ದಿನಗಳಲ್ಲಿ ಭಿಕ್ಷುಕರ ನೋವು-ನಲಿವು, ಅವರು ಎದುರಿಸುವ ಮಾನಸಿಕ ದೈಹಿಕ ಹಿಂಸೆಗಳನ್ನು ಬಿಡಿಸಿಟ್ಟಿರುವ ಚಿತ್ರ, ಭಿಕ್ಷುಕರೆಂದರೆ ಅಸಹ್ಯ ಪಡುವ ಜನರು ಹಾಗೂ ಕೆಲವು ಸಿನಿಮಾಗಳನ್ನು ನೋಡಿ ಭಿಕ್ಷುಕರು ಭಾರಿ ಸಂಪಾದಿಸುತ್ತಾರೆಂದು ಅವರನ್ನು ದೂಷಿಸುವ ಜನರಿಗೆ ಭಿಕ್ಷುಕರನ್ನು ಕಾಮೆಡಿ ಸೀನ್‍ಗಳಾಗಿ ತೋರುವ ಬೇರೆಲ್ಲ ಸಿನಿಮಾಗಳಿಗಿಂತ ಭಿಕ್ಷುಕರ ಬದುಕಿನ ನೈಜತೆಯನ್ನು ಚಿತ್ರಿಸಿದೆ. ಭಿಕ್ಷುಕರೂ ಮನುಷ್ಯರೇ ಅವರಿಗೂ ಒಂದು ಬದುಕಿದೆ, ಉಳ್ಳವರ ಮಧ್ಯೆ ಅವರ ದೌರ್ಜನ್ಯಗಳಿಂದ ತೊಳಲಾಡುವ ಇಲ್ಲದವರ ಬದುಕಿನ ಪ್ರತಿಬಿಂಬವಾಗಿ ಭಿಕ್ಷುಕರ ಬದುಕು ಕಾಣದೆ ಇರಲಾರದು.

ಮಾಲೀಕನ ಕೈ ಕೆಳಗೆ ದುಡಿದು ಕಷ್ಟದ ದಿನಗಳಲ್ಲಿ ಎದುರಿಸಿ ಉದ್ಯಮಿಯಾಗಿ ಬೆಳೆದುಬಂದ ಸಿದ್ದಾರ್ಥನ ತಾಯಿ, ಕಂಪನಿಯ ಮಾಲಕಿಯಾಗಿ, ದುಡಿಯುವ ಜನರ ಸ್ನೇಹಿತೆಯಾಗಿದ್ದು, ನೌಕರರನ್ನು ರೋಬೋಟ್‍ಗಳಂತೆ ದುಡಿಸಿಕೊಳ್ಳುವ ವ್ಯವಸ್ಥೆಯೊಳಗೆ ಕಷ್ಟದ ಅರಿವಿರುವ ತಾಯಿ ತನ್ನ ಕಂಪನಿಯಲ್ಲಿ ದುಡಿಯುವ ಶ್ರಮಿಕರ ಹಿತವನ್ನೂ ಕಾಯುವ, ಅವರ ಬದುಕಿನಲ್ಲಿ ನೆರವಾಗುತ್ತಾ ಎಲ್ಲರನ್ನೂ ನಿಸ್ವಾರ್ಥವಾಗಿ ಒಳಗೊಳ್ಳುವಳು, ಈ ಒಳಗೊಳ್ಳುವಿಕೆ ಇಲ್ಲದವರ ಶ್ರಮದಿಂದ ಉಳ್ಳವರು ಕಟ್ಟಿಕೊಳ್ಳುವ ಮೊಹಲ್ಲಗಳ ಮಧ್ಯೆ ಸದೃಢ ಸಮಾಜದಲ್ಲಿ ದುಡಿಯುವ ಕೈಗಳಿಸಿ ತಮ್ಮ ಶ್ರಮಕ್ಕೆ ಸಿಗಬೇಕಾದ ಪಾಲಿನ ಸಂಕೇತವಾಗಿದೆ. ತಮ್ಮ ದುಡಿವ ಕೈಗಳಿಗೆ ಕೆಲಸಕೊಟ್ಟ ಅವಳ ಉಳಿವಿಗಾಗಿ ಪ್ರಾರ್ಥಿಸುವ ಸಿಬ್ಬಂದಿಗಳು, ಮಾಲಿಕ ಮತ್ತು ಶ್ರಮಿಕರ ಹೊಂದಾಣಿಕೆಗೆ ಸ್ಪೂರ್ತಿ ತುಂಬುತ್ತದೆ.

ಮತ್ತೊಂದೆಡೆ ಇಂದಿನ ಯುವಜನರು ಸಮಾಜದಲ್ಲಿ ಮಾಡಬೇಕಾದ ಸಹಾಯಾಸ್ತದ ಕನಿಷ್ಟ ಮೌಲ್ಯವನ್ನು ತೋರಿಸುವ ನಾಯಕಿಯ ಪಾತ್ರ, ತಾಯಿಗಾಗಿ ಭಿಕ್ಷೆ ಬೇಡುವ ಪ್ರೇಮಿಯ ಪ್ರೀತಿ ಬಯಸುವ ಪ್ರೇಯಸಿ. ಈ ಎಲ್ಲಾ ಪಾತ್ರಗಳೂ ಜೀವನ ಸಂಗ್ರಾಮದ ಹಲವು ದಿಕ್ಕುಗಳನ್ನು ತೋರುತ್ತವೆ.

ಕನ್ನಡಿಗರ ಮನಸೆಳೆದಿದ್ದ ಚಿರಂಜೀವಿ ಸರ್ಜಾ ನಟನೆಯ ’ಅಮ್ಮಾ ಐ ಲವ್‌ ಯೂ’ಪ್ರೀತಿ, ಮಮತೆಯ ಹುಡುಕಾಟದೊಂದಿಗೆ ಸಾಗುವ ಚಿತ್ರ ನೋಡುಗರ ಮನಮನ ಮಿಡಿಯುವ ಕಥಾಹಂದರವನ್ನು ಒಳಗೊಂಡಿದೆ. ಆದರೆ ಇಂತಹ ಕತೆಯನ್ನು ತೆರೆಯ ಮೇಲೆ ನಿರೂಪಿಸುವಾಗ ಪ್ರೇಕ್ಷಕರ ಮನಸಲ್ಲಿ ಕ್ಯೂರಿಯಾಸಿಟಿಯನ್ನಾಗಲಿ ಅಥವಾ ನೋಡುಗರ ಗಮನ ಮತ್ತೊಂದೆಡೆಗೆ ಜಾರದಂತೆ ತನ್ನತ್ತ ಸೆಳೆದಿಟ್ಟುಕೊಳ್ಳುವಲ್ಲಿ ತಂಡ ಕೊಂಚ ಎಡವಿದೆಯಾದರೂ, ಭಿಕ್ಷುಕನ ಪಾತ್ರದಲ್ಲಿ ಚಿರು, ಹಾಗೂ ನಾಯಕಿಯಾಗಿ ಹೊಸ ನಟಿ ನಿಶ್ಚಿಕಾ ಸೌಂದರ್ಯ ಉತ್ತಮ ಅಭಿನಯ ನೀಡಿದ್ದಾರೆ.


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತಪ್ಪಾಗಿ ಸುದ್ದಿ ಪ್ರಕಟ : ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಲ್ಲಿ ಕ್ಷಮೆಯಾಚಿಸಿದ PTI

ತಮ್ಮ ಹೇಳಿಕೆಯನ್ನು ತಪ್ಪಾಗಿ ಪ್ರಸಾರ ಮಾಡಿದ್ದ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (PTI) ಅಧಿಕೃತವಾಗಿ ಕ್ಷಮೆಯಾಚಿಸಿದರೂ, ಅದರಿಂದ ಈಗಾಗಲೇ ಉಂಟಾಗಿರುವ ಹಾನಿ ಸರಿಪಡಿಸಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಆ....

‘ನುಡಿಯು ಸಿರಿಯಲ್ಲ ಬದುಕು’ ಕರಾವಳಿಯಲ್ಲಿ ಮತ್ತೆ ಪ್ರತಿರೋಧದ ಧ್ವನಿ: ನವೆಂಬರ್ 28-29ಕ್ಕೆ ‘ಜನನುಡಿ-2026’

"ನವೆಂಬರ್ ಕೊನೆಯ ಶನಿವಾರ ಮತ್ತು ಭಾನುವಾರ ಮಂಗಳೂರಿನಲ್ಲಿ ಕೇವಲ ವಿಚಾರ ಸಂಕಿರಣ ಮಾತ್ರವಲ್ಲ, ಹರಟೆ, ಚರ್ಚೆ, ಸೌಹಾರ್ದತೆಯ ಮೀನೂಟ ಹಾಗೂ ಪ್ರೀತಿಯೊಂದಿಗೆ ಸಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಹೊಸ ಬೆಳಕನ್ನು ಕಂಡುಕೊಳ್ಳಲಿದ್ದೇವೆ," ಎಂದು 'ಅಭಿಮತ...

‘ಟ್ರಂಪ್’ ಗಾಗಿ ಭಾರತದ ಹಿತವನ್ನು ಬಲಿ ಕೊಟ್ಟ ಕೇಂದ್ರ: E20 ಎಥೆನಾಲ್ ನೀತಿ ಹಿಂಪಡೆಯಲು ಕೇಜ್ರಿವಾಲ್ ಪಟ್ಟು

ವಾಹನಗಳ ಎಂಜಿನ್‌ಗೆ ಹಾನಿಯುಂಟುಮಾಡುತ್ತಿದೆ ಎಂದು ಆರೋಪಿಸಲಾದ ಇ20 (E20) ಎಥೆನಾಲ್ ಮಿಶ್ರಿತ ಪೆಟ್ರೋಲ್ ನೀತಿಯನ್ನು ಹಿಂಪಡೆಯುವಂತೆ ಆಗ್ರಹಿಸಿ, ದೇಶಾದ್ಯಂತ ಸಂಗ್ರಹಿಸಲಾಗಿದ್ದ 2.30 ಲಕ್ಷಕ್ಕೂ ಅಧಿಕ ಸಾರ್ವಜನಿಕ ಸಹಿಗಳ ಮನವಿ ಪತ್ರದೊಂದಿಗೆ ಪ್ರಧಾನಿ ನರೇಂದ್ರ...

ಗಾಝಾ | ಇಸ್ರೇಲ್ ನರಮೇಧಕ್ಕೆ ಬಲಿಯಾದ ಎರಡು ಕುಟುಂಬಗಳ 112 ಸದಸ್ಯರ ಸಾಮೂಹಿಕ ಅಂತ್ಯಸಂಸ್ಕಾರ: ಸಾವಿರಾರು ಜನರಿಂದ ಕಣ್ಣೀರ ವಿದಾಯ

ಇಸ್ರೇಲ್ ಬಾಂಬ್ ದಾಳಿಯಿಂದ ಧ್ವಂಸಗೊಂಡಿದ್ದ ಮನೆಗಳ ಅವಶೇಷಗಳ ಅಡಿಯಲ್ಲಿ ಇತ್ತೀಚೆಗೆ ಪತ್ತೆಯಾದ ಗಾಝಾದ ಹಸಾಯ್ನ ಮತ್ತು ಅಬು ಶರಿಯಾ ಕುಟುಂಬಗಳ 112 ಸದಸ್ಯರ ಮೃತದೇಹಗಳ ಅಂತ್ಯ ಸಂಸ್ಕಾರ ಮಂಗಳವಾರ (ಆ.4) ನಡೆಯಿತು. ಸಾವಿರಾರು...

E20 ಇಂಧನ ರಾದ್ಧಾಂತ: ನಾಗ್ಪುರದಲ್ಲಿ ಗಡ್ಕರಿ ಮನೆಗೆ ಮುತ್ತಿಗೆ ಯತ್ನ, ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ

ಎಥೆನಾಲ್ ಮಿಶ್ರಿತ ಇ20 (E20) ಇಂಧನದಿಂದ ದೇಶದ ಲಕ್ಷಾಂತರ ವಾಹನ ಮಾಲೀಕರು ಎಂಜಿನ್ ಹಾನಿ ಮತ್ತು ಮೈಲೇಜ್ ಅಭಾವ ಎದುರಿಸುತ್ತಿದ್ದಾರೆ ಎಂಬ ಆಕ್ರೋಶದ ನಡುವೆಯೇ, ನಾಗ್ಪುರದಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್...

ರಾಜ್ಯದಲ್ಲಿ ‘SIR’ ಅವಾಂತರ: 1.ಕೋಟಿಗೂ ಹೆಚ್ಚು ಮತದಾರರನ್ನು ಹೊರಗಿಡಲು ಸಂಚು, ‘SIR ವಿರೋಧಿ ಕರ್ನಾಟಕ’ ಆಕ್ರೋಶ

ಕರ್ನಾಟಕದಲ್ಲಿ ಜಾರಿಯಲ್ಲಿರುವ ಬೂತ್ ಮಟ್ಟದ ಮತದಾರರ ಪಟ್ಟಿ ಸರಿಪಡಿಸುವ 'ಎಸ್‌ಐಆರ್' (SIR) ಪ್ರಕ್ರಿಯೆಯಲ್ಲಿ ಭಾರೀ ಅವ್ಯವಹಾರ ಮತ್ತು ಕಪಟತನ ನಡೆದಿದ್ದು, ರಾಜ್ಯದ ಶೇ. 20 ರಷ್ಟು (ಆಗಸ್ಟ್ 2026ರ ಹೊತ್ತಿಗೆ ಸುಮಾರು 1.10...

‘ಜನರು ಬಿಜೆಪಿಯಿಂದ ಅತೃಪ್ತರಾಗಿದ್ದಾರೆ…’: ದಾಟಿಯಾ ಉಪಚುನಾವಣೆಯಲ್ಲಿ ಗೆಲುವಿನ ನಂತರ ಆಡಳಿತ ಪಕ್ಷದ ವಿರುದ್ಧ ಘನಶ್ಯಾಮ್ ಸಿಂಗ್ ವಾಗ್ದಾಳಿ

ಭೋಪಾಲ್ (ಮಧ್ಯಪ್ರದೇಶ): ಮಧ್ಯಪ್ರದೇಶದ ದಾಟಿಯಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಶಾಸಕ ಘನಶ್ಯಾಮ್ ಸಿಂಗ್ ಅವರು, ತಮ್ಮ ಅಭೂತಪೂರ್ವ ಗೆಲುವನ್ನು ಬಿಜೆಪಿಯ 'ಭ್ರಷ್ಟಾಚಾರ'ಕ್ಕೆ ಸಾರ್ವಜನಿಕರು ನೀಡಿದ ತಕ್ಕ ಹಾಗೂ ಸೂಕ್ತ...

ಇಂದಿನ ವಿಚಾರಣೆ ಬಳಿಕ ಉದಯನಿಧಿ ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ನಿರ್ದೇಶನ

ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಬಂಧಿತರಾದ ತಮಿಳುನಾಡು ವಿಧಾನಸಭೆಯ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು, ವಿಚಾರಣೆಯಯ ಬಳಿಕ ಸ್ಟೇಷನ್ ಬೇಲ್ (ಠಾಣಾ ಜಾಮೀನು) ಮೇಲೆ ಬಿಡುಗಡೆ ಮಾಡುವಂತೆ ಮದ್ರಾಸ್ ಹೈಕೋರ್ಟ್...

ರಾಜೀನಾಮೆ ನೀಡಿದರೆ ಕೆಲವೇ ನಿಮಿಷಗಳಲ್ಲಿ ಅಂಗೀಕರಿಸುವೆ, ಸಚಿವ ಸ್ಥಾನ ವಂಚಿತರ ಬೆದರಿಕೆಗೆ ಸಿಎಂ ಡಿ.ಕೆ. ಶಿವಕುಮಾರ್ ವಾರ್ನಿಂಗ್

ಪಕ್ಷದ ಹಿತವೇ ಎಲ್ಲಕ್ಕಿಂತ ಮುಖ್ಯ. ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಯಾರಾದರೂ ರಾಜೀನಾಮೆ ಸಲ್ಲಿಸಿದರೆ, ಕೆಲವೇ ನಿಮಿಷಗಳಲ್ಲಿ ಅದನ್ನು ನಾನು ಅಂಗೀಕರಿಸುತ್ತೇನೆ" ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಶಾಸಕರ...

ನಮಗೆ ಚುನಾವಣಾ ರಾಜಕೀಯದ ಉದ್ದೇಶವಿಲ್ಲ, ಜನಾಂದೋಲನವೇ ನಮ್ಮ ಗುರಿ: ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ

ಕಾಕ್ರೋಚ್ ಜನತಾ ಪಾರ್ಟಿ (CJP) ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಯಾವುದೇ ಉದ್ದೇಶವನ್ನು ಹೊಂದಿಲ್ಲ, ಬದಲಾಗಿ ದೇಶದ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲಿನ ಜನರ ನಂಬಿಕೆಯನ್ನು ಮರುಸ್ಥಾಪಿಸಲು ಬೃಹತ್ ಜನಾಂದೋಲನವನ್ನು ಕಟ್ಟುವುದೇ ನಮ್ಮ ಮೂಲ ಗುರಿ...