Homeಮುಖಪುಟಮಿಡತೆ ದಾಳಿ ಜುಲೈ ತಿಂಗಳಿನವರೆಗೂ ಮುಂದುವರೆಯಲಿದೆ: ಆಹಾರ ಮತ್ತು ಕೃಷಿ ಸಂಸ್ಥೆ

ಮಿಡತೆ ದಾಳಿ ಜುಲೈ ತಿಂಗಳಿನವರೆಗೂ ಮುಂದುವರೆಯಲಿದೆ: ಆಹಾರ ಮತ್ತು ಕೃಷಿ ಸಂಸ್ಥೆ

- Advertisement -
- Advertisement -

ಭಾರತದಲ್ಲಿ ಮಿಡತೆಗಳ ದಾಳಿ ಜುಲೈ ತಿಂಗಳವರೆಗೂ ಮುಂದುವರೆಯಲಿದ್ದು, ಇದಕ್ಕೆ ಕನಿಷ್ಠ ಏಳು ರಾಜ್ಯಗಳು ಗುರಿಯಾಗುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆಯ ‘ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಓ)’ ಹೇಳಿದೆ.

ಜೂನ್ ತಿಂಗಳಿನ ಅಂತ್ಯದೊಳಗೆ ಮಿಡತೆಗಳ ದಾಳಿಯನ್ನು ತಡೆಯುವಲ್ಲಿ ಸರ್ಕಾರಗಳ ವಿಫಲವಾದರೆ, ದೊಡ್ಡ ಪ್ರಮಾಣದಲ್ಲಿ ಬೆಳೆ ನಷ್ಟವವನ್ನು ಎದುರಿಸಬೇಕಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಜೂನ್ ಅಂತ್ಯದಲ್ಲಿ ಮಿಡತೆಗಳು ರಾಜಸ್ಥಾನಕ್ಕೆ ಮರಳುವ ಮೊದಲು ಉತ್ತರ ಭಾರತದಲ್ಲಿ ವ್ಯಾಪಕವಾಗು ಹರಡಲಿರುವ ಬಗ್ಗೆ ಮರುಭೂಮಿ ಮಿಡತೆ ಬುಲೆಟಿನ್‌ನಲ್ಲಿ ಎಫ್‌ಎಓ ತಿಳಿಸಿದೆ.

ಭಾರತವು ಕಳೆದ ದಶಕಗಳಲ್ಲಿ ಇಂದೆದೂ ಎದುರಿಸಂದತಹ ಮಿಡತೆ ದಾಳಿಯನ್ನು ಕಳೆದ ತಿಂಗಳು ಎದುರಿಸಿದೆ. ಮಿಡತೆಗಳು ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ ಮತ್ತು ಹರಿಯಾಣದಲ್ಲಿ ಬೆಳೆಗಳನ್ನು ನಾಶಪಡಿಸಿದ್ದು, ನಂತರ ಮಿಡತಗಳು ಹಿಂಡು ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಪಂಜಾಬ್‌ಗೆ ನುಗ್ಗಿವೆ.

“ಇರಾನ್ ಮತ್ತು ಪಾಕಿಸ್ತಾನದಿಂದ ಬಂದಿರುವ ಮಿಡತೆಗಳ ಹಿಂಡುಗಳು ಜೂನ್‌ ಅಂತ್ಯದಲ್ಲಿ ರಾಜಸ್ಥಾನಕ್ಕೆ ಬರಲಿದ್ದು, ಅದರ ಜೊತೆಗೆ ಜುಲೈ ಆರಂಭದಲ್ಲಿ ಪೂರ್ವ ಆಫ್ರಿಕಾದಿಂದ   ಹೆಚ್ಚುವರಿ ಹಿಂಡುಗಳು ಗುಜರಾತ್ ಮತ್ತು ರಾಜಸ್ಥಾನಕ್ಕೆ ಬರುತ್ತವೆ” ಎಂದು ಬುಲೆಟಿನ್ ಹೇಳಿದೆ.

ಮಿಡತೆಗಳು ಬೆಳೆ ಪ್ರದೇಶಗಳಲ್ಲಿ ನೆಲೆಸುತ್ತಿದ್ದು, ಮಧ್ಯಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ, ಛತ್ತಿಸ್‌ಘಡ ಮತ್ತು ಪೂರ್ವಕ್ಕೆ ಬಿಹಾರ ಮತ್ತು ಒಡಿಶಾದವರೆಗೆ ಮುಂದುವರಿಯುವ ಸಾಧ್ಯತೆಯಿದೆ. ಈ ವೇಳೆಗೆ ವ್ಯಾಪಕಗೊಳ್ಳುವ ಹಿಂಡುಗಳು ಜುಲೈ ಆರಂಭದಲ್ಲಿ ಮಾನ್ಸೂನ್ ಆರಂಭದೊಂದಿಗೆ ರಾಜಸ್ಥಾನಕ್ಕೆ ಬರುತ್ತವೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

ಮಾನ್ಸೂನ್‌ಗೆ ಮುಂಚಿತವಾಗಿ ಮೇ ತಿಂಗಳಲ್ಲಿ ನೈರುತ್ಯ ಪಾಕಿಸ್ತಾನದಿಂದ ರಾಜಸ್ಥಾನಕ್ಕೆ ಮಿಡತೆ ಹಿಂಡುಗಳ ವಲಸೆ ಆರಂಭವಾಗಿದ್ದು, 1962ರ ನಂತರ ಮೊದಲ ಬಾರಿಗೆ ಉತ್ತರ ರಾಜ್ಯಗಳಿಗೆ ಪ್ರಯಾಣ ಬೆಳೆಸಿವೆ ಎಂದು ಎಂದು ಎಫ್‌ಎಒ ಹೇಳಿದೆ.

ಹಿಂದೂಸ್ತಾನ್ ಟೈಮ್ಸ್ ಪ್ರಕಾರ, ರಾಜಸ್ಥಾನದ ಬಾರ್ಮರ್ ಮತ್ತು ಜೋಧ್ಪುರ್ ಜಿಲ್ಲೆಗಳ ಅನೇಕ ಗ್ರಾಮಗಳು ಮಿಡತೆ ದಾಳಿಗೆ ಒಳಗಾಗುತ್ತವೆ ಎಂದು ಕೇಂದ್ರ ಕೃಷಿ ಸಚಿವಾಲಯದ ಲೋಕಸ್ಟ್ ಎಚ್ಚರಿಕೆ ಸಂಸ್ಥೆ ತಿಳಿಸಿದೆ.

“ಇದುವರೆಗೆ 65,000 ಹೆಕ್ಟೇರ್ ಪ್ರದೇಶದಲ್ಲಿ ಮಿಡತೆಗಳನ್ನು ನಿಯಂತ್ರಿಸಲಾಗಿದೆ. ಮುಂಬ

ರುವ ದಿನಗಳಲ್ಲಿ ಮಿಡತೆಯ ಮೇಲೆ ಆಕ್ರಮಣಕ್ಕಾಗಿ ಜಾಗರೂಕತೆ ಮುಂದುವರಿಯುತ್ತದೆ” ಎಲ್‌ಡಬ್ಲ್ಯುಒ ಉಪನಿರ್ದೇಶಕ ಕೆ.ಎಲ್.ಗುರ್ಜರ್ ತಿಳಿಸಿದ್ದಾರೆ.

“ಮಿಡತೆಗಳ ನಿಯಂತ್ರಣ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದೆ ಮತ್ತು ಪೀಡಿತ ರಾಜ್ಯಗಳಲ್ಲಿ ಕೀಟನಾಶಕಗಳನ್ನು ವೈಮಾನಿಕವಾಗಿ ಸಿಂಪಡಿಸಲು ಡ್ರೋನ್‌ಗಳನ್ನು ನಿಯೋಜಿಸಲಾಗುವುದು ಎಂದು ಕೃಷಿ ಸಚಿವಾಲಯವು ಮೇ 27 ರಂದು ತಿಳಿಸಿತ್ತು.

ರಾಜಸ್ಥಾನದ 21, ಮಧ್ಯಪ್ರದೇಶದಲ್ಲಿ 18, ಗುಜರಾತ್‌ನಲ್ಲಿ ಎರಡು ಮತ್ತು ಪಂಜಾಬ್‌ನಲ್ಲಿ ಒಂದು ಜಿಲ್ಲೆಗಳಲ್ಲಿ ಬುಧವಾರದವರೆಗೆ 47,000 ಹೆಕ್ಟೇರ್‌ಗಿಂತಲೂ ಹೆಚ್ಚು ವಿಸ್ತಾರವಾದ 303 ಸ್ಥಳಗಳಲ್ಲಿ ಮಿಡತೆ ನಾಶಕ್ಕೆ ಔಷಧಿ ಸಿಂಪಡಿಸುವ ಕಾರ್ಯಾಚರಣೆ ನಡೆಸಲಾಗಿದೆ.

ಸಾಮಾನ್ಯವಾಗಿ, ಮಾನ್ಸೂನ್ ಆಗಮನದ ಸಂದರ್ಭದಲ್ಲಿ, ಮಿಡತೆ ಹಿಂಡುಗಳು ಜೂನ್-ಜುಲೈನಲ್ಲಿ ಸಂತಾನೋತ್ಪತ್ತಿಗಾಗಿ ಪಾಕಿಸ್ತಾನದ ಮೂಲಕ ಭಾರತದ ಮರುಭೂಮಿ ಪ್ರದೇಶಗಳಿಗೆ ಪ್ರವೇಶಿಸುತ್ತವೆ. ಆದರೆ ಈ ವರ್ಷ ಏಪ್ರಿಲ್ 30ಕ್ಕೂ ಹಿಂದೆಯೇ ರಾಜಸ್ಥಾನ ಮತ್ತು ಪಂಜಾಬ್‌ನಲ್ಲಿ ಮಿಡತೆಗಳು ಧಾವಿಸಿರುವುದು ವರದಿಯಾಗಿವೆ.

ಮಿಡತೆಗಳ ಸೈನ್ಯವು ಈ ವರ್ಷ ಭಾರತದ ಕೃಷಿಗೆ “ತೀವ್ರ ಅಪಾಯ” ಉಂಟುಮಾಡುತ್ತದೆ ಎಂದು ವಿಶ್ವಸಂಸ್ಥೆಯು ಈ ತಿಂಗಳ ಆರಂಭದಲ್ಲಿ ಎಚ್ಚರಿಸಿತ್ತು.


ಓದಿ: ಭಾರತಕ್ಕೆ ದಾಳಿ ಇಟ್ಟ ಮಿಡತೆಗಳು, ಕರ್ನಾಟಕಕ್ಕಿಲ್ಲ ಭಯ; ಏಕೆ ಗೊತ್ತಾ?


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read