Homeಮುಖಪುಟ'ದಲಿತರು' ದೇವಾಲಯ ಪ್ರವೇಶಿಸಿದ್ದಕ್ಕೆ ಪ್ರತ್ಯೇಕ ಸ್ಥಳದಲ್ಲಿ 'ಹೊಸ ವಿಗ್ರಹ' ಪ್ರತಿಷ್ಠಾಪನೆ!

‘ದಲಿತರು’ ದೇವಾಲಯ ಪ್ರವೇಶಿಸಿದ್ದಕ್ಕೆ ಪ್ರತ್ಯೇಕ ಸ್ಥಳದಲ್ಲಿ ‘ಹೊಸ ವಿಗ್ರಹ’ ಪ್ರತಿಷ್ಠಾಪನೆ!

- Advertisement -
- Advertisement -

ತಿರುವಣ್ಣಾಮಲೈ ಜಿಲ್ಲೆಯ ತಂದರಂಪೇಟೆ ಬಳಿಯ ತೆನ್ಮುಡಿಯನೂರ್ ಗ್ರಾಮದ ನೂರಾರು ದಲಿತರು ಜನವರಿ 30, 2023ರಂದು ಮುತ್ತುಮಾರಿಯಮ್ಮನ್ ದೇವಸ್ಥಾನವನ್ನು ಪ್ರವೇಶಿಸಿದ್ದರು. 80 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ದಲಿತರಿಗೆ ಆ ದೇವಸ್ಥಾನಕ್ಕೆ ಪ್ರವೇಶಕ್ಕೆ ಮೊದಲ ಬಾರಿಗೆ ಅವಕಾಶವನ್ನು ನೀಡಲಾಗಿದ್ದು, ಇದು ತಮಿಳುನಾಡು ಸರಕಾರದ ಐತಿಹಾಸಕ ಕ್ರಮ ಎಂದು ಬಣ್ಣಿಸಲಾಗಿತ್ತು.

ಆದರೆ ಇದಾದ ಬಳಿಕ ಗ್ರಾಮದ ಉದಯರ್, ಆಗಮುದಯ್ಯರ್, ರೆಡ್ಡಿ, ನಾಯ್ಡು, ಚೆಟ್ಟಿಯಾರ್ ಮತ್ತು ವನ್ನಿಯಾರ್ ಸಮುದಾಯದ ಜನರು ದೇವಸ್ಥಾನಕ್ಕೆ ಬರುವುದನ್ನು ನಿಲ್ಲಿಸಿದ್ದಾರೆ. ದೇವಸ್ಥಾನದಿಂದ ಪ್ರತ್ಯೇಕ ಸ್ಥಳದಲ್ಲಿ ಹೊಸ ಮುತ್ತುಮಾರಿಯಮ್ಮನ್ ವಿಗ್ರಹವನ್ನು ಸ್ಥಾಪಿಸಿದ್ದಾರೆ. ಅವರು ಹೊಸ ವಿಗ್ರಹಕ್ಕೆ ಪೂಜೆಗಳನ್ನು ಸಹ ಮಾಡುತ್ತಿದ್ದಾರೆ, ಜನವರಿ 22, 2024ರಂದು ಹೊಸ ವಿಗ್ರಹದೊಂದಿಗೆ ಗ್ರಾಮದಲ್ಲಿ ಮೆರವಣಿಗೆಯನ್ನು ಕೂಡ ನಡೆಸಿದ್ದಾರೆ. ದಲಿತರು ದೇವಾಲಯಕ್ಕೆ ಪ್ರವೇಶಿಸಿದ ನಂತರ ಮೂಲ ದೇವಾಲಯಕ್ಕೆ ಇತರರು ಬರುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಈ ಬಗ್ಗೆ ಮಾತನಾಡಿದ ದಲಿತ ಸಮುದಾಯಕ್ಕೆ ಸೇರಿದ ಕೆಲ ಜನರು, ಅವರು ಹೊಸ ದೇವಾಲಯವನ್ನು ನಿರ್ಮಿಸಲು ಸರ್ಕಾರಿ ಪೋರಂಬೋಕೆ ಭೂಮಿಯನ್ನು ಅತಿಕ್ರಮಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ತೆನ್ಮುಡಿಯನೂರಿನ ದಲಿತ ನಿವಾಸಿ ಸಿ ಮುರುಗನ್ ಅವರು ಈ ಬಗ್ಗೆ ಮಾತನಾಡಿದ್ದು, ಈ ದೇವಸ್ಥಾನ ಕೇವಲ ಪ್ರಬಲ ಜಾತಿಯ ಜನರಿಗೆ ಮಾತ್ರವಾಗಿದೆ. ಸಮುದಾಯ ಕೊಳದ ಬಳಿ ಹೊಸ ದೇವಸ್ಥಾನವನ್ನು ನಿರ್ಮಿಸಲು ಸವರ್ಣಿಯರು ಯೋಚಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಕೊಳದ ಬಳಿ ವಿಗ್ರಹದ ಮೆರವಣಿಗೆ ಮತ್ತು ನಂತರದ ಪೂಜೆಗಳು ಇದನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ.

ಉದಯರ್ ಸಮುದಾಯದ ಮಾಜಿ ಪಂಚಾಯತ್ ಅಧ್ಯಕ್ಷರಾದ ನಲ್ಲತಂಬಿ ಅವರು ಹೊಸ ದೇವಾಲಯವನ್ನು ನಿರ್ಮಿಸಬಹುದು ಎಂಬ ಆರೋಪವನ್ನು ಅಲ್ಲಗಳೆದಿಲ್ಲ. ಹೊಸ ದೇವಾಲಯವನ್ನು ನಿರ್ಮಿಸಿದರೆ, ಅದನ್ನು ಪಟ್ಟಾ ಭೂಮಿಯಲ್ಲಿ ನಿರ್ಮಿಸಲಾಗುವುದು, ಪೋರಂಬೋಕೆ ಭೂಮಿಯಲ್ಲಿ ಅಲ್ಲ. ಮುತ್ತುಮಾರಿಯಮ್ಮನ ದೇವಸ್ಥಾನದಲ್ಲಿ ಪೂಜೆ ಮಾಡುವುದರ ವಿರುದ್ಧ ಗ್ರಾಮದಲ್ಲಿ ಯಾವುದೇ ಸಾಮಾಜಿಕ ನಿರ್ಬಂಧಗಳನ್ನು ವಿಧಿಸಲಾಗಿಲ್ಲ. ದಲಿತರ ಪ್ರವೇಶದ ನಂತರ ಕೆಲವರು ದೇವಸ್ಥಾನಕ್ಕೆ ಹೋಗಲು ನಿರಾಕರಿಸಿದ್ದಾರೆ ಎಂದು ಹೇಳಿದ್ದಾರೆ.

ಈ ಕುರಿತು ಮಾತನಾಡಿದ ತಂಡರಂಪೇಟೆ ತಹಶೀಲ್ದಾರ್ ಅಬ್ದುಲ್ ರಹೀಂ, ಸಮುದಾಯದ ಹೊಂಡದ ಬಳಿಯಿರುವ ಮೈದಾನವನ್ನು ಪೊಂಗಲ್ ಆಚರಣೆಗೆ ಮಾತ್ರ ತೆರವುಗೊಳಿಸಲಾಗಿದ್ದು, ಅಲ್ಲಿ ದೇವಸ್ಥಾನ ನಿರ್ಮಿಸುವ ಬಗ್ಗೆ ಯಾವುದೇ ಸುಳಿವು ಇಲ್ಲ ಎಂದು ಹೇಳಿದ್ದಾರೆ.

ಮುತ್ತುಮಾರಿಯಮ್ಮ ದೇವಸ್ಥಾನ:

80 ವರ್ಷ ಹಳೆಯದಾದ ಮುತ್ತುಮಾರಿಯಮ್ಮನ್ ದೇವಸ್ಥಾನವು ಕಳೆದ 30 ವರ್ಷಗಳಿಂದ ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ನಿಯಂತ್ರಣದಲ್ಲಿದೆ. ಕಳೆದ ವರ್ಷ ಜನವರಿಯಲ್ಲಿ ದಲಿತ ಸಮುದಾಯಕ್ಕೆ ಸೇರಿದ ಜನರು ಮೊದಲ ಬಾರಿಗೆ ಪೊಲೀಸ್ ರಕ್ಷಣೆಯೊಂದಿಗೆ ದೇವಾಲಯಕ್ಕೆ ಪ್ರವೇಶಿಸಿದ್ದಾರೆ. ಇದನ್ನು ಖಂಡಿಸಿ ಉದಯರ್, ಆಗಮುದಯ್ಯರ್, ರೆಡ್ಡಿ, ನಾಯ್ಡು, ಚೆಟ್ಟಿಯಾರ್ ಮತ್ತು ವನ್ನಿಯಾರ್ ಸಮುದಾಯದ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ನಂತರ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ದೇವಸ್ಥಾನವನ್ನು ಸೀಲ್ ಮಾಡಲಾಗಿತ್ತು. ಸುತ್ತಲೂ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಸಂಭವನೀಯ ಜಾತಿ ಹಿಂಸೆ ಹಿನ್ನೆಲೆ ಸುಮಾರು 7 ತಿಂಗಳ ಕಾಲ ದೇವಾಲಯವನ್ನು ಮುಚ್ಚಲಾಗಿತ್ತು.

ಪೊಂಗಲ್ ಆಚರಣೆಯ ನಂತರ ದೇವಾಲಯದ 12 ದಿನಗಳ ಉತ್ಸವದಲ್ಲಿ ಭಾಗವಾಗಲು ಅವಕಾಶ ನೀಡುವಂತೆ ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ಮನವಿ ಸಲ್ಲಿಸಿದ್ದೇವೆ. ಆದರೆ ಈ ವರ್ಷ ತಮ್ಮ ಮನವಿಯನ್ನು ನಿರ್ಲಕ್ಷಿಸಲಾಗಿದೆ ಎಂದು ಗ್ರಾಮದ ದಲಿತ ನಿವಾಸಿ ಸತ್ಯಶೀಲನ್ ಹೇಳಿದ್ದಾರೆ. ತೆನ್ಮುಡಿಯನೂರಿನಲ್ಲಿ ಪ್ರಬಲ ಜಾತಿಯ ಜನರು ಪೊಂಗಲ್ ನಂತರ ಹಬ್ಬಗಳನ್ನು 12 ದಿನಗಳ ಕಾಲ ಆಚರಿಸುತ್ತಾರೆ. ಗ್ರಾಮದಲ್ಲಿ 10ಕ್ಕಿಂತ ಹೆಚ್ಚು ಜಾತಿಗಳ ಜನರಿದ್ದಾರೆ. ಪ್ರತಿ ದಿನದ ಆಚರಣೆಯನ್ನು ಒಂದು ನಿರ್ದಿಷ್ಟ ಸಮುದಾಯಕ್ಕೆ ಮೀಸಲಿಡಲಾಗುತ್ತದೆ. ದಲಿತ ನಿವಾಸಿಗಳು ತಮ್ಮನ್ನು ಆಚರಣೆಯಲ್ಲಿ ಸೇರಿಸಬೇಕೆಂದು ದೀರ್ಘಕಾಲದಿಂದ ಬೇಡಿಕೆಯಿಟ್ಟರೂ ಏನೂ ಪ್ರಯೋಜನವಿಲ್ಲದಾಗಿದೆ.

ಆ ಪ್ರದೇಶದಲ್ಲಿ ದಲಿತರು ದೇವಸ್ಥಾನಕ್ಕೆ ಪ್ರವೇಶಿಸಿದ ಬಳಿಕ ದಲಿತರ ಮೇಲೆ ಸಾಮಾಜಿಕ ಮತ್ತು ಆರ್ಥಿಕ ಬಹಿಷ್ಕಾರವನ್ನು ಹೇರುವುದರ ಜೊತೆಗೆ ಅವರ ಮೇಲೆ ಹಿಂಸಾಚಾರವನ್ನು ಕೂಡ ನಡೆಸಿದ್ದಾರೆ. ದಲಿತರ ಒಡೆತನದ ಸಣ್ಣ ಕೃಷಿ ಭೂಮಿಗಳಿಗೆ ನೀರು ಸರಬರಾಜು ಮಾಡುವುದನ್ನು ಸಹ ಸ್ಥಗಿತಗೊಳಿಸಲಾಗಿದೆ. ಹಳ್ಳಿಯ ಅನೇಕ ದಲಿತ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಗ್ರಾಮದಲ್ಲಿ ದಲಿತ ಒಂಟಿ ಮಹಿಳೆಯ ಮಾಲೀಕತ್ವದ ಅಂಗಡಿಯನ್ನು ಸುಟ್ಟು ಹಾಕಿ ದುಷ್ಕೃತ್ಯವನ್ನು ಮೆರೆಯಲಾತ್ತು.

ಇದನ್ನು ಓದಿ: ರಾಜಸ್ಥಾನ: ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಭುಗಿಲೆದ್ದ ಹಿಜಾಬ್‌ ವಿವಾದ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣಗೆ ಶಿಕ್ಷೆಯಾಗದಿದ್ದರೆ ಮತ್ತೆ ಹಾಗೆ ಮಾಡ್ತಾರೆ: ಅತ್ಯಾಚಾರ ಸಂತ್ರಸ್ತೆಯ ಸಹೋದರಿ ಹೇಳಿಕೆ

0
"ಪ್ರಜ್ವಲ್ ಮತ್ತು ರೇವಣ್ಣ ಯಾವತ್ತೂ ತಲೆ ಎತ್ತಿ ನಡೆಯಬಾರದು, ಅಂತಹ ಶಿಕ್ಷೆಯಾಗಬೇಕು" ಎಂದು ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯೊಬ್ಬರ ಸಹೋದರಿ ಮಾಲಾ (ಹೆಸರು ಬದಲಿಸಲಾಗಿದೆ) ಹೇಳಿರುವುದಾಗಿ thenewsminute.com ವರದಿ ಮಾಡಿದೆ. ಮಾಲಾಗೆ ತನ್ನ ಸಹೋದರಿ...