Homeಕರ್ನಾಟಕದಲಿತರ ದೇವಾಲಯ ಪ್ರವೇಶದ ಸುತ್ತ ಅಸಹನೆಯ ಹುತ್ತ

ದಲಿತರ ದೇವಾಲಯ ಪ್ರವೇಶದ ಸುತ್ತ ಅಸಹನೆಯ ಹುತ್ತ

- Advertisement -
- Advertisement -

ಮುಜರಾಯಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಇತಿಹಾಸವು ಮೈಸೂರು ಅರಸರ ಆಳ್ವಿಕೆಯ ಕಾಲಕ್ಕೆ ಹೋಗುತ್ತದೆ. ರಾಜ್ಯದಲ್ಲಿ ಸುಮಾರು 35,000 ದೇವಾಲಯಗಳನ್ನು ಹೊಂದಿರುವ ಈ ಇಲಾಖೆ ಅತ್ಯಂತ ಸೂಕ್ಷ್ಮ ನಡೆಗಳೊಂದಿಗೆ ವ್ಯವಹರಿಸಬೇಕಾದ ಜವಾಬ್ದಾರಿಯನ್ನು ಹೊಂದಿದೆ.

’ಮುಜರಾಯಿ’ ಎಂಬ ಪದವು ಪರ್ಷಿಯನ್ ಪದವಾದ ’ಮುಜ್ರಾ’ದಿಂದ ಬಂದಿದೆ; ಇದರರ್ಥ
ಕಡಿತ ಅಥವಾ ಭತ್ಯೆ ಎಂಬುದಾಗಿದೆ. ಜನ ಬಳಕೆಯಲ್ಲಿ ಮುಜರಾಯಿ ಎಂಬುದೇ ಉಳಿದುಬಂದಿದೆ. ಸಾಮಾನ್ಯವಾಗಿ ಧಾರ್ಮಿಕ ಅಥವಾ ದತ್ತಿ ಉದ್ದೇಶಕ್ಕಾಗಿ, ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳ ಪಾಲನೆಗಾಗಿ ನೀಡಲಾದ ಭತ್ಯೆಗೆ ಮುಜರಾಯಿ ಪದವನ್ನು ಅನ್ವಯಿಸಲಾಯಿತು.

ಮೈಸೂರು ಅರಸರಾದ ಚಿಕ್ಕದೇವರಾಜ ಒಡೆಯರ್ ಅವರ ಕಾಲದಲ್ಲಿ ಈ ಇಲಾಖೆ ’ದೇವಸ್ಥಾನ ಚಾವಡಿ’ ಎಂದು ಜನಪ್ರಿಯವಾಗಿತ್ತು. ಬ್ರಾಹ್ಮಣರಿಗೆ ದಿನನಿತ್ಯದ ಅನ್ನದಾನ, ದೇವಸ್ಥಾನಗಳ ದೀಪಾಲಂಕಾರ, ಧಾರ್ಮಿಕ ಸಂಸ್ಥೆಗಳ ಸ್ಥಾಪನೆ ಇತ್ಯಾದಿಗಳಿಗೆ ಮಂಜೂರಾದ ಈ ಇಲಾಖೆಗೆ ಲೆಕ್ಕಪತ್ರಗಳನ್ನು ಇಡುವ ಜವಾಬ್ದಾರಿಯೂ ಇತ್ತು. ಬಹುಶಃ ಈ ಇಲಾಖೆಯನ್ನು ಟಿಪ್ಪು ಸುಲ್ತಾನ್ ಆಳ್ವಿಕೆಯ ಕಾಲದಲ್ಲಿ ಮುಜರಾಯಿ ಎಂದು ಕರೆಯಲಾಗುತ್ತಿತ್ತು. 1956ರಲ್ಲಿ ಮುಜರಾಯಿ ಇಲಾಖೆಯನ್ನು ಧಾರ್ಮಿಕ ಮತ್ತು ದತ್ತಿ ಇಲಾಖೆ ಎಂದು ಹೆಸರಿಸಲಾಯಿತು.

1831ರಿಂದ 1881ರ ಅವಧಿಯಲ್ಲಿ ಮೈಸೂರು ರಾಜ್ಯವು ಬ್ರಿಟಿಷ್ ಕಮಿಷನರ್‌ಗಳ ಆಳ್ವಿಕೆಯಲ್ಲಿದ್ದಾಗ, ರಾಜ್ಯದಲ್ಲಿನ ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳನ್ನು ಭಾರತೀಯ ಅಧಿಕಾರಿಗಳು ನಿರ್ವಹಿಸುತ್ತಿದ್ದರು. ಅಂತಿಮ ಅಧಿಕಾರವನ್ನು ಶಿರಸ್ತೇದಾರ್‌ಗೆ ವಹಿಸಲಾಯಿತು. 1881ರ ನಂತರದಲ್ಲಿ ಮುಜರಾಯಿ ಇಲಾಖೆಯು ದಿವಾನರ ನಿಯಂತ್ರಣಕ್ಕೆ ಬಂದಿತು.

ಈ ಸಂಸ್ಥೆಗಳ ದಕ್ಷ ನಿಯಂತ್ರಣಕ್ಕಾಗಿ, ದುರುಪಯೋಗಗಳನ್ನು ತಪ್ಪಿಸುವುದಕ್ಕಾಗಿ ಪ್ರತ್ಯೇಕ ಮುಜರಾಯಿ ಅಧೀಕ್ಷಕರನ್ನು 1891ರಲ್ಲಿ ದಿವಾನ್ ಶೇಷಾದ್ರಿ ಅಯ್ಯರ್ ಅವರು ನೇಮಿಸಿದರು. ಆರ್ಕಾಟ್ ಶ್ರೀನಿವಾಸಾಚಾರ್ ಅಧೀಕ್ಷಕರಾಗಿ ನೇಮಕವಾಗಿ ಬಂದು ಹಲವು ಸುಧಾರಣೆಗಳನ್ನು ತಂದರು. ದೇವಾಲಯಗಳಲ್ಲಿ ನೈರ್ಮಲ್ಯ, ಛತ್ರಗಳಲ್ಲಿ ಆಹಾರ ವಿತರಣೆಯ ದುರುಪಯೋಗ, ದೇವಾಲಯಗಳಲ್ಲಿ ನೃತ್ಯ ನಿಷೇಧ ಹೀಗೆ ಹಲವು ಸಂಗತಿಗಳಿಗೆ ಸಂಬಂಧಿಸಿದಂತೆ ಕ್ರಮ ಜರುಗಿಸಿದರು. ಹೀಗೆ ಕಾಲಕಾಲಕ್ಕೆ ಬದಲಾವಣೆಗಳನ್ನು ಮುಜರಾಯಿ ಇಲಾಖೆ ಕಾಣಲು ಯತ್ನಿಸಿದೆ.

ರಾಜ್ಯದಲ್ಲಿ ಮುಜರಾಯಿ ಸಂಸ್ಥೆಗಳ ಆಡಳಿತ ಮತ್ತು ನಿಯಂತ್ರಣಕ್ಕಾಗಿ 1913ರ ಮುಜರಾಯಿ ನಿಯಂತ್ರಣ ಕಾಯಿದೆ 1914ರಲ್ಲಿ ಜಾರಿಗೆ ಬಂದಿತು. 1921ರಲ್ಲಿ ಮುಜರಾಯಿ ಸೂಪರಿಂಟೆಂಡೆಂಟ್ ಹುದ್ದೆಯನ್ನು ರದ್ದುಪಡಿಸಲಾಯಿತು. ಇಲಾಖೆಯ ಆಡಳಿತಕ್ಕಾಗಿ ಮುಜರಾಯಿ ಆಯುಕ್ತರನ್ನು ನೇಮಿಸಲಾಯಿತು. 1927ರಲ್ಲಿ ಮೈಸೂರು ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳ ಕಾಯಿದೆ-1927ಅನ್ನು ಅಂಗೀಕರಿಸಲಾಯಿತು. ಈ ಕಾಯಿದೆ 1997 ರವರೆಗೆ ಜಾರಿಯಲ್ಲಿತ್ತು. 1997ರಲ್ಲಿ ಕರ್ನಾಟಕದಲ್ಲಿ ಹಿಂದೂ ಧಾರ್ಮಿಕ ಮತ್ತು ದತ್ತಿ ದತ್ತಿಗಳ ನಿರ್ವಹಣೆ ಮತ್ತು ಮೇಲ್ವಿಚಾರಣೆಗಾಗಿ ಏಕೀಕೃತ ಕಾಯಿದೆಯನ್ನು ರೂಪಿಸಲಾಯಿತು. ಈ ಕಾಯಿದೆಯನ್ನು ನಂತರ 2011ರಲ್ಲಿ ತಿದ್ದುಪಡಿ ಮಾಡಲಾಯಿತು.

ಮುಜರಾಯಿ ಇಲಾಖೆಯ ಇತಿಹಾಸ ಹೀಗೆ ದೊಡ್ಡ ಮಟ್ಟದಲ್ಲಿದೆ. ಕಾಲಕಾಲಕ್ಕೆ ಬದಲಾವಣೆಗಳನ್ನು ಮುಜರಾಯಿ ಇಲಾಖೆ ಕಂಡಿದ್ದರೂ ಸಾಮಾಜಿಕ ಚಲನೆ ಎಂಬುದು ನಿಂತನೀರಾಗಿಯೇ ಇರುವುದು ವಿಪರ್ಯಾಸದ ಸಂಗತಿ. ದಲಿತರು ದೇವಾಲಯ ಪ್ರವೇಶಿಸಬೇಕು ಎಂಬ ವಿಚಾರ ಮುನ್ನೆಲೆಗೆ ಬಂದಾಗ, ಕಾನೂನು, ಸಂವಿಧಾನ ಬಿಳಿಹಾಳೆಯ ಮೇಲಿನ ಬರಹದಂತೆ ಭಾಸವಾಗುತ್ತದೆ. ಒಂದು ವೇಳೆ ದೇವಾಲಯಗಳಿಗೆ ಪ್ರವೇಶಿಸಿದರೂ ದಲಿತರು ಪ್ರವೇಶೋತ್ತರ ಪರಿಣಾಮಗಳನ್ನು ಎದುರಿಸುವಂತಾಗಿದೆ.

ದೇವಾಲಯ ಪ್ರವೇಶ ಮಾಡಿದ ತಕ್ಷಣ ದಲಿತರು ಅಸಮಾನ ಜಗತ್ತಿನಿಂದ ಹೊರಬರುವುದಿಲ್ಲ. ದೇವಾಲಯ ಪ್ರವೇಶದ ಆಸಕ್ತಿ ತೊರೆದು ಬೌದ್ಧತತ್ವದತ್ತ ದಲಿತರು ಹೆಜ್ಜೆ ಇಡಬೇಕು ಎಂಬ ಆಶಯಗಳು ಚಿಂತಕ ವಲಯದಲ್ಲಿವೆ. ದೇವಾಲಯ ಪ್ರವೇಶವೆಂಬುದು ಆಧ್ಯಾತ್ಮಿಕ ನೆಲೆಯ ಚಿಂತನೆಗಿಂತ, ಅದೊಂದು ಸಾಮಾಜಿಕ ಸುಧಾರಣೆಯ ಪ್ರಕ್ರಿಯೆಯಾಗಿದೆ. ಸಂವಿಧಾನ ಅಸ್ಪೃಶ್ಯತೆ ಆಚರಣೆಯನ್ನು ನಿಷೇಧಿಸಿದ್ದರೂ ದೇವಾಲಯಗಳ ಒಳಗೆ ದಲಿತರು ಪ್ರವೇಶಿಸಿದರೆ ಅಸಹನೆ ವ್ಯಕ್ತವಾಗುವುದು ಏತಕ್ಕೆ?

ಮೇಲ್ಜಾತಿಗಳು ದೇವಾಲಯಗಳ ಮೇಲೆ ಪ್ರಾಬಲ್ಯ ಸಾಧಿಸಿ, ದಲಿತರು ದೇವಾಲಯ ಪ್ರವೇಶಿಸುವುದನ್ನು ತಡೆಯಲು ಯತ್ನಿಸುವುದು, ದೈವಶಕ್ತಿ, ಕಾನೂನಿನ ಶಕ್ತಿಗಿಂತ ಮನುಷ್ಯನ ಮೇಲರಿಮೆಯ ಅಹಂಕಾರವೇ ಪ್ರಾಬಲ್ಯ ಸಾಧಿಸುವುದು ಕುಚೋದ್ಯದ ಸಂಗತಿಯೇ ಸರಿ.

“ಯಾವುದೇ ಜಾತಿ, ಜನಾಂಗ, ಲಿಂಗ ಭೇದವಿಲ್ಲದೆ ದೇವಾಲಯ ಪ್ರವೇಶಿಸಬಹುದು” ಎಂದು ಮುಜರಾಯಿ ಇಲಾಖೆ ಹಾಕುವ ಸೂಚನಾ ಫಲಕವನ್ನೇ ವಿರೂಪಗೊಳಿಸುವ ವಿದ್ಯಮಾನಗಳು ಕಂಡುಬರುತ್ತಿವೆ. ಇಂತಹ ಘಟನೆಗಳು ನಡೆದಾಗ ದಲಿತರು ಅವುಗಳನ್ನು ಪ್ರಶ್ನಿಸುವ ವಿದ್ಯಮಾನಗಳೂ ನಡೆಯುತ್ತಿವೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಚಿಂತಿಸುವ ಹೊಸ ತಲೆಮಾರಿನ ದಲಿತರು ಅಸ್ಪೃಶ್ಯತೆ ಆಚರಣೆಯನ್ನು ಪ್ರಶ್ನಿಸುತ್ತಿದ್ದಾರೆ. ದಲಿತ ಸಂಘಟನೆಗಳು ಎಚ್ಚೆತ್ತುಕೊಂಡು ದಲಿತರಿಗೆ ಧೈರ್ಯ ತುಂಬಿ ದೇವಾಲಯ ಪ್ರವೇಶಕ್ಕೆ ಬೆನ್ನೆಲುಬಾಗಿ ನಿಲ್ಲುತ್ತಿವೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ದಿಂಡಿಗನೂರು (ದಿಂಡಗೂರು) ಗ್ರಾಮದಲ್ಲಿ ಭೀಮ್ ಆರ್ಮಿಯ ನೇತೃತ್ವದಲ್ಲಿ ದೇವಾಲಯಗಳಿಗೆ ದಲಿತರು ಕೆಲವು ತಿಂಗಳ ಹಿಂದೆ ಪ್ರವೇಶಿಸಿದ್ದರು. ಮುಜರಾಯಿ ಇಲಾಖೆಯ ಅಧಿಕಾರಿಗಳು ಹಾಜರಿದ್ದರು. ಬಳಿಕ ಇಡೀ ಗ್ರಾಮ ಬೂದಿಮುಚ್ಚಿದ ಕೆಂಡದಂತಾಗಿತ್ತು. ಒಂದಲ್ಲ ಒಂದು ಕಡೆ ದಲಿತರು ದೇವಾಲಯ ಪ್ರವೇಶಿಸುವ ಸುದ್ದಿಗಳನ್ನು ಕೇಳುತ್ತಿದ್ದೇವೆ. ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೂಕಿನ ದಾಸರಕಲ್ಲಹಳ್ಳಿ, ಬ್ಯಾಲಹಳ್ಳಿ ಗ್ರಾಮದಲ್ಲಿ ದಲಿತರು ಮುಜರಾಯಿ ದೇವಾಲಯಗಳಿಗೆ ಪ್ರವೇಶಿಸಿ ಸ್ವಾಭಿಮಾನ ಮೆರೆದಿದ್ದರು. ಇದರ ಜೊತೆಗೆ ದೇವಾಲಯ ಪ್ರವೇಶಿಸಿದಾಗ ದಬ್ಬಾಳಿಕೆಯನ್ನು ನಡೆಸುತ್ತಿರುವುದು ಹೆಚ್ಚಾಗುತ್ತಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಿಯಾಪುರ ಗ್ರಾಮದಲ್ಲಿ ದಲಿತ ಸಮುದಾಯದ ಮಗುವೊಂದು ಆಕಸ್ಮಿಕವಾಗಿ ದೇವಸ್ಥಾನ ಪ್ರವೇಶಿಸಿದ್ದಕ್ಕೆ ಮಗುವಿನ ಕುಟುಂಬಕ್ಕೆ ಗ್ರಾಮಸ್ಥರು ದಂಡ ವಿಧಿಸಿದ್ದನ್ನು ಕಂಡು ಪ್ರಜ್ಞಾವಂತರು ಘಾಸಿಯಾಗಿದ್ದಾರೆ.

“ಗ್ರಾಮಗಳಲ್ಲಿ ದಲಿತರು ಬಹುತೇಕ ಸವರ್ಣೀಯರ ಮನೆಗಳಿಗೆ, ಹೊಲಗಳಿಗೆ ಕೆಲಸಕ್ಕೆ ಹೋಗುತ್ತಾರೆ. ಒಂದು ವೇಳೆ ದೇವಾಲಯ ಪ್ರವೇಶಿಸಿದರೆ ನಮ್ಮನ್ನು ಕೆಲಸಕ್ಕೆ ಕರೆಯುವುದನ್ನು ನಿಲ್ಲಿಸಿಬಿಡುತ್ತಾರೆ ಎಂಬ ಭಯದಲ್ಲಿ ಅನೇಕರು ದೇವಾಲಯ ಪ್ರವೇಶಿಸಲು ಹಿಂಜರಿಯುತ್ತಾರೆ. ಜೊತೆಗೆ ದಲಿತರಲ್ಲಿನ ಹೆದರಿಕೆ, ಮೂಢನಂಬಿಕೆಗಳೂ ಇದಕ್ಕೆ ಕಾರಣ. ನಾನು ನಮ್ಮೂರಿನಲ್ಲಿ ಇತ್ತೀಚೆಗೆ ದೇವಾಲಯ ಪ್ರವೇಶಿಸಿದೆ. ನಮ್ಮ ಊರಿನಲ್ಲಿ ಯಾವುದೇ ವ್ಯವಹಾರ ವಹಿವಾಟನ್ನು ನಾನು ಹೊಂದಿಲ್ಲ. ಕೆಲವು ಪ್ರಜ್ಞಾವಂತ ಸವರ್ಣೀಯರು ನನ್ನೊಂದಿಗೆ ಆತ್ಮೀಯವಾಗಿದ್ದಾರೆ. ಅವರೊಂದಿಗೆ ನನ್ನ ವ್ಯವಹಾರ ಚಟುವಟಿಕೆಗಳು ಇವೆಯಷ್ಟೇ. ಹೀಗಾಗಿ ದಲಿತರು ತಮ್ಮ ಜೀವನ ನಡೆಸಲು ಸವರ್ಣೀಯರನ್ನು ಅವಲಂಬಿಸುವುದು ತಪ್ಪಬೇಕು. ನಾಗರಿಕರಂತೆ ವರ್ತಿಸುವುದನ್ನು ಸವರ್ಣಿಯರೂ ಕಲಿಯಬೇಕು. ನಾನು ದೇವಾಲಯ ಪ್ರವೇಶಿಸಿದಾಗ ಒಬ್ಬಾತ ನಿನಗೆ ದೇವರು ಒಳ್ಳೆಯದು ಮಾಡಲ್ಲ ಎಂದು ಅಸಹನೆ ಹೊರಹಾಕಿದ. ಕಾನೂನಿನ ಅರಿವು, ಸಂವಿಧಾನದ ಮಹತ್ವವನ್ನು ಸ್ಪೃಶ್ಯರು ಅನಿಸಿಕೊಂಡಿರುವವರು ಬೆಳೆಸಿಕೊಂಡರೆ ಸಮಾಜ ಬದಲಾಗುತ್ತದೆ” ಎನ್ನುತ್ತಾರೆ ಬ್ಯಾಲಹಳ್ಳಿ ಗ್ರಾಮದ ದಲಿತ ಮುಖಂಡ ಬಿ.ಸಿ.ರೇಣುಕಪ್ಪ.

“ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿದಾಗ ದಲಿತರಿಗೂ ಪ್ರವೇಶ ನೀಡಬೇಕಾಗುತ್ತದೆ. ಇದನ್ನು ತಪ್ಪಿಸಬೇಕೆಂದರೆ ಮುಜರಾಯಿ ವ್ಯಾಪ್ತಿಯಿಂದ ಹೊರಬರುವುದೇ ದಾರಿ” ಎಂದು ಸವರ್ಣೀಯ ಸಮುದಾಯಗಳು ಚಿಂತಿಸುವುದನ್ನು ಅನೇಕ ಪ್ರಕರಣಗಳಲ್ಲಿ ಕಾಣುತ್ತೇವೆ. ಆದರೆ ಇದು ಅರಿವಿನ ಕೊರತೆಯಿಂದಾದ ಅಸ್ಪೃಶ್ಯತೆಯ ಆಚರಣೆಯಾಗಿದೆ. “ವಾಸ್ತವದಲ್ಲಿ ದೇವಾಲಯ ಮುಜರಾಯಿ ಇಲಾಖೆಗೆ ಸೇರಿರಲಿ, ಸೇರಿರದೆ ಇರಲಿ; ದಲಿತರಿಗೆ ಪ್ರವೇಶವನ್ನು ನಿರಾಕರಿಸುವುದು ಶಿಕ್ಷಾರ್ಹ ಅಪರಾಧ ಎನ್ನುತ್ತಾರೆ” ಜಸ್ಟೀಸ್ ಎಚ್.ಎನ್.ನಾಗಮೋಹನ ದಾಸ್.

ಈ ಕುರಿತು ವಿಸ್ತೃತವಾಗಿ ತಮ್ಮ ಚಿಂತನೆಯನ್ನು ನ್ಯಾಯಪಥ ಪತ್ರಿಕೆಯೊಂದಿಗೆ ಹಂಚಿಕೊಂಡ ಜಸ್ಟಿಸ್ ನಾಗಮೋಹನ ದಾಸ್ ಅವರು, “ಖಾಸಗಿ ದೇವಾಲಯಗಳೂ ಸಾರ್ವಜನಿಕರಿಗೆ ಸಂಬಂಧಿಸಿರುತ್ತವೆ. ದೇವಾಲಯದ ವ್ಯವಸ್ಥಾಪಕ ಮಂಡಳಿ ಖಾಸಗಿಯವರ ಬಳಿ ಇರಬಹುದು. ಉದಾಹರಣೆಗೆ ಉಡುಪಿ ಕೃಷ್ಣ ದೇವಾಲಯ, ಧರ್ಮಸ್ಥಳದ ಮಂಜುನಾಥ ದೇವಾಲಯಗಳು ಖಾಸಗಿ ಅಧೀನದಲ್ಲಿವೆ. ಅವುಗಳು ಮುಜರಾಯಿ ವ್ಯಾಪ್ತಿಗೆ ಬರುವುದಿಲ್ಲ. ಆದರೆ ಎಲ್ಲ ಜನವರ್ಗವೂ ದೇವಾಲಯ ಪ್ರವೇಶಿಸಬಹುದು. ದಲಿತರು ದೇವಾಲಯಕ್ಕೆ ಬರುವಂತಿಲ್ಲ ಎಂಬುದು ಸಂವಿಧಾನಬಾಹಿರ. ನಮ್ಮ ಸಂವಿಧಾನವೂ ಎಲ್ಲ ವಿಧದ ಅಸ್ಪೃಶ್ಯತೆ ಆಚರಣೆಯನ್ನು ನಿಷೇಧಿಸಿದೆ” ಎನ್ನುತ್ತಾರೆ.

“ಮುಜರಾಯಿ ದೇವಾಲಯದಲ್ಲಿ ಬೋರ್ಡ್ ಹಾಕಬೇಕೆಂದು ಸರ್ಕಾರ ಸುತ್ತೋಲೆ ಹೊರಡಿಸಿದೆ. ಸರ್ಕಾರದ ಸುತ್ತೋಲೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಯಾರಾದರೂ ತಡೆಯಲು ಬಂದರೆ ಸರ್ಕಾರ ಕಠಿಣ ಕ್ರಮ ಜರುಗಿಸಬೇಕು. ಕಠಿಣ ಕ್ರಮ ಎಂದರೆ ಸಂಘರ್ಷಕ್ಕೆ ಎಡೆಮಾಡಬಾರದು. ನೂರಾರು ವರ್ಷಗಳಿಂದ ಈ ಅಸಮಾನತೆ ನಡೆದು ಬಂದಿರುವುದರಿಂದ ಒಂದೇ ಬಾರಿಗೆ ಬದಲಾವಣೆ ಸಾಧ್ಯವಾಗದು. ಆದರೆ ಇಷ್ಟು ವರ್ಷಗಳು ಈ ರೀತಿಯ ಆಚರಣೆ ಮುಂದುವರಿದಿರುವುದು ಅಸಮಾಧಾನದ ಸಂಗತಿ. ಮೇಲ್ಜಾತಿಯ ಜನರೂ ಇದಕ್ಕೆ ಸ್ಪಂದಿಸಬೇಕು. ಮನಪರಿವರ್ತನೆ ಮಾಡಿಕೊಳ್ಳಬೇಕು. ತಿರುಪತಿ, ನಂಜನಗೂಡು, ಚಾಮುಂಡಿ ಬೆಟ್ಟದಲ್ಲಿ ದಲಿತರಿಗೆ ಪ್ರವೇಶವಿದೆ. ನಮ್ಮೂರಿನ ದೇವಾಲಯ ಆ ದೇವಾಲಯಗಳಿಗಿಂತ ದೊಡ್ಡದೇ ಎಂದು ಪ್ರಶ್ನಿಸಿಕೊಳ್ಳಬೇಕು. ದೇವರು ಒಂದು ಜಾತಿಯ ಸ್ವತ್ತಲ್ಲ. ಈ ಆಯಾಮದಲ್ಲಿ ನೋಡಬೇಕು” ಎನ್ನುತ್ತಾರೆ ಜಸ್ಟೀಸ್.

ದಿಂಡಿಗನೂರಿನಲ್ಲಿ ಅಘೋಷಿತ ಬಹಿಷ್ಕಾರ

ಹಾಸನ ಜಿಲ್ಲೆಯ ದಿಂಡಿಗನೂರಿನಲ್ಲಿ ದೇವಾಲಯಗಳಿಗೆ ದಲಿತರು ಪ್ರವೇಶಿಸಿದ ಬಳಿಕ ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಸವರ್ಣೀಯರನ್ನು ದಲಿತರು ಅವಲಂಬಿಸಿರುವುದೇ ಈ ಸಮಸ್ಯೆಗೆ ಕಾರಣವಾಗಿದೆ. ದೇವಾಲಯ ಪ್ರವೇಶವನ್ನೇ ನೆಪವಾಗಿಟ್ಟುಕೊಂಡು ದಲಿತರನ್ನು ಮೂಲೆಗುಂಪು ಮಾಡುವ ಪ್ರವೃತ್ತಿಯನ್ನು ಎಲ್ಲೆಡೆ ಕಾಣಬಹುದು. ಇದಕ್ಕೆ ದಿಂಡಿಗನೂರು ಗ್ರಾಮ ಒಂದು ಉದಾಹರಣೆಯಷ್ಟೇ.

ದಿಂಡಿಗನೂರಿನ ದಲಿತ ಮುಖಂಡ, ಭೀಮ್ ಆರ್ಮಿಯ ಸಂಘಟಕ ನಟರಾಜ್ ನ್ಯಾಯಪಥದೊಂದಿಗೆ ಮಾತನಾಡಿ ದೇವಾಲಯ ಪ್ರವೇಶೋತ್ತರ ಪರಿಸ್ಥಿತಿಗಳನ್ನು ಬಿಚ್ಚಿಟ್ಟರು: “ನಾವು ದೇವಾಲಯ ಪ್ರವೇಶ ಮಾಡಿದ್ದು ಸಾಮಾಜಿಕ ನ್ಯಾಯಕ್ಕಾಗಿ. ನಾವು ಕೂಡ ಮನುಷ್ಯರು ಎಂಬುದನ್ನು ಸಾರುವುದಕ್ಕಾಗಿ. ನಮ್ಮ ಧಾರ್ಮಿಕ ಹಕ್ಕಿಗಾಗಿ ದೇವಾಲಯ ಪ್ರವೇಶಿಸಿದೆವು. ಆದರೆ, ಆನಂತರದಲ್ಲಿ ನಮ್ಮ ಮೇಲೆ ಅಘೋಷಿತ ಸಾಮಾಜಿಕ ಬಹಿಷ್ಕಾರ ಹಾಕುವುದು ನಡೆಯುತ್ತಿದೆ. ನಮ್ಮ ಊರಿನಲ್ಲಿ ದಲಿತರು ಸೇರಿ ಸುಮಾರು ಏಟೆಂಟು ಜಾತಿಗಳಿವೆ. ದಲಿತರಿಗೆ ಮಾತ್ರ ಬಹಿಷ್ಕಾರ ಹಾಕುವ ಪದ್ಧತಿ ರೂಢಿಗೆ ಬಂದಿದೆ. ನಾವು ದೇವಾಲಯ ಪ್ರವೇಶಿಸಿದ ಬಳಿಕ ಸವರ್ಣೀಯ ಮುಖಂಡರು ಸಭೆ ಸೇರಿ ಅಘೋಷಿತ ಬಹಿಷ್ಕಾರಕ್ಕೆ ನಿರ್ಧರಿಸಿದ್ದಾರೆ. ದಲಿತರ ಬಳಿ ಯಾವುದೇ ಮಾತುಕತೆ, ವ್ಯವಹಾರ ಮಾಡಬೇಡಿ ಎಂದು ತಮ್ಮ ಜಾತಿಯ ಜನರಿಗೆ ತಿಳಿಸಿದ್ದಾರೆ. ನಮ್ಮ ಜೊತೆ ಮಾತನಾಡಿದವರಿಗೆ ದಂಡ ಹಾಕುವ ಪದ್ಧತಿಯನ್ನು
ಆಂತರಿಕವಾಗಿ ಮಾಡಿಕೊಂಡಿದ್ದಾರೆ. ಈಗಲೂ ಅದು ಚಾಲ್ತಿಯಲ್ಲಿದೆ” ಎಂದು ವಿಷಾದಿಸುತ್ತಾರೆ
ನಟರಾಜ್.

“ಕೂಲಿಯನ್ನೇ ನಂಬಿಕೊಂಡಿದ್ದ ದಲಿತರನ್ನು ಕೂಲಿಗೆ ಕರೆಯುತ್ತಿಲ್ಲ. ಕೇಳಿದರೆ ಅದಕ್ಕೆ ಸಬೂಬುಗಳನ್ನು ಹೇಳುತ್ತಿದ್ದಾರೆ. ಇಷ್ಟು ದಿನ ಕೆಲಸ ಇತ್ತು, ಕರೆಯುತ್ತಿದ್ದೆವು; ಈಗ ಕೆಲಸ ಇಲ್ಲ ಎನ್ನುತ್ತಾರೆ. ಮಿಲ್ ಅಂಗಡಿಗೆ ದಲಿತರು ಹೋದರೆ ನಮಗೆ ಹುಷಾರಿಲ್ಲ, ನಾವು ಮಿಲ್ ನಿಲ್ಲಿಸಬೇಕೆಂದಿದ್ದೇವೆ ಎನ್ನುತ್ತಾರೆ. ಅವರಿಗೆ ಸರಿಸಮಾನವಾಗಿ ದೇವಾಲಯ ಪ್ರವೇಶಿಸಿದ್ದೇ ಅವರ ಈ ಅಸಹನೆಗೆ ಕಾರಣ. ನಾವು ಯಾವಾಗಲೂ ಅವರ ಕಾಲಡಿ ಇರಬೇಕೆಂಬುದು ಅವರ ಮನಸ್ಥಿತಿ. ಹೊರಗಿನ ಪ್ರಪಂಚಕ್ಕೆ ಇದು ಗೊತ್ತಾಗುತ್ತಿಲ್ಲ” ಎಂದು ವಿವರಿಸುತ್ತಾರೆ ನಟರಾಜ್.

“ನಾವು ಕೂಲಿನಾಲಿ ಮಾಡಿಕೊಂಡು ಹೇಗೋ ಇದ್ದೆವು. ಸಂಘಟಕರೆಲ್ಲ ಸೇರಿ ದೇವಾಲಯಕ್ಕೆ ಕರೆದುಕೊಂಡು ಹೋಗಿದ್ದೇ ಇದಕ್ಕೆಲ್ಲ ಕಾರಣ ಎಂದು ಕೆಲವು ದಲಿತರೇ ನಮ್ಮ ವಿರುದ್ಧ ಮಾತನಾಡುತ್ತಿದ್ದಾರೆ. ಕಾನೂನಾತ್ಮಕವಾಗಿ ಬಹಿಷ್ಕಾರ ಹಾಕಿದ್ದೇವೆ ಎಂದು ಯಾರೂ ತೋರ್ಪಡಿಸಿಕೊಳ್ಳುತ್ತಿಲ್ಲ. ದೇವಾಲಯಕ್ಕೆ ಹೋಗಿ ನಮಗೆ ಆರ್ಥಿಕವಾಗಿ ಹಿನ್ನಡೆಯಾಯಿತು. ಆದರೆ ಧಾರ್ಮಿಕ ಸ್ವತಂತ್ರವನ್ನು ಪಡೆದುಕೊಂಡಿದ್ದೇವೆ” ಎನ್ನುತ್ತಾರವರು.

ಸ್ವಾವಲಂಬನೆಗೆ ಹೆಗಲಾಗುವುದೇ ಸರ್ಕಾರ?

ದಲಿತರು ದೇವಾಲಯ ಪ್ರವೇಶಿಸಿದ ಬಳಿಕ ಅವರನ್ನು ಕೂಲಿ ಕೆಲಸಗಳಿಗೆ ಕರೆಯುವುದನ್ನು ಸವರ್ಣೀಯರು ನಿಲ್ಲಿಸುತ್ತಾರೆ. ಹೀಗಾಗಿ ಸರ್ಕಾರ ಮುಂದೆ ಬಂದು ದಲಿತರನ್ನು ಸ್ವಾವಲಂಬಿಗಳನ್ನಾಗಿ ಮಾಡಬೇಕು. ವಿವಿಧ ಯೋಜನೆಗಳ ಅಡಿಯಲ್ಲಿ ಸಹಕಾರ ನೀಡಿ, ಸ್ವ-ಉದ್ಯೋಗ ಕೈಗೊಳ್ಳಲು ಪ್ರೋತ್ಸಾಹಿಸಬೇಕು.

“ನಮಗೆ ಸರ್ಕಾರಿ ಸವಲತ್ತುಗಳನ್ನು ದೊರಕಿಸಿ, ಸ್ವಾವಲಂಬಿಗಳಾಗಲು ಅವಕಾಶವನ್ನು ಸರ್ಕಾರ ನೀಡಬೇಕು. ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಕ್ರಮ ಜರುಗಿಸುತ್ತಿಲ್ಲ. ಶಾಸಕರ ಗಮನಕ್ಕೆ ತರುವ ಕೆಲಸ ಮಾಡುತ್ತಿದ್ದೇವೆ. ದಲಿತರ ಸ್ವಯಂ ಉದ್ಯೋಗಕ್ಕೆ ಜನಪ್ರತಿನಿಧಿಗಳು ಪ್ರೋತ್ಸಾಹಿಸಬೇಕು. ಈ ನಿಟ್ಟಿನಲ್ಲಿ ಸ್ತ್ರೀಶಕ್ತಿ ಸಂಘವನ್ನು ಆರಂಭಿಸಿದ್ದೇವೆ. ಎಷ್ಟು ದಿನ ಸವರ್ಣೀಯರನ್ನೇ ಅವಲಂಬಿಸಲು ಸಾಧ್ಯ?” ಎಂದು ಕೇಳುವ ನಟರಾಜ್ ಅವರ ಪ್ರಶ್ನೆಯಲ್ಲಿ ಬಿಡುಗಡೆಯ ಮಾರ್ಗ ಎದ್ದುತೋರುತ್ತದೆ.


ಇದನ್ನೂ ಓದಿ: ದಿಂಡಗನೂರು: ದೇವಾಲಯ ಪ್ರವೇಶದ ಬಳಿಕ ದಲಿತರಿಗೆ ಅಘೋಷಿತ ಸಾಮಾಜಿಕ ಬಹಿಷ್ಕಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...