Homeಮುಖಪುಟಜಾಮೀನು ಆದೇಶಗಳ ಸಂವಹನ ವಿಳಂಬ ಗಂಭೀರವಾದ ದೋಷವಾಗಿದೆ: ನ್ಯಾ. ಚಂದ್ರಚೂಡ್‌

ಜಾಮೀನು ಆದೇಶಗಳ ಸಂವಹನ ವಿಳಂಬ ಗಂಭೀರವಾದ ದೋಷವಾಗಿದೆ: ನ್ಯಾ. ಚಂದ್ರಚೂಡ್‌

ಆರ್ಯನ್‌ ಖಾನ್‌ಗೆ ಬಾಂಬೆ ಹೈಕೋರ್ಟ್‌ ಜಾಮೀನು ನೀಡಿದ ಮೇಲೂ ಆ ಆದೇಶ ಜೈಲು ಅಧಿಕಾರಿಯನ್ನು ತಲುಪಲು ವಿಳಂಬವಾದ ಕಾರಣಕ್ಕೆ ಎರಡು ದಿನಗಳ ಕಾಲ ಜೈಲಿನಲ್ಲಿರಬೇಕಾಗಿತ್ತು.

- Advertisement -
- Advertisement -

ಜಾಮೀನು ಆದೇಶಗಳನ್ನು ಜೈಲು ಅಧಿಕಾರಿಗಳಿಗೆ ತಿಳಿಸುವಲ್ಲಿ ಆಗುವ ವಿಳಂಬವು ‘ಅತ್ಯಂತ ಗಂಭೀರವಾದ ದೋಷ’ವಾಗಿದ್ದು, ಇದು ಪ್ರತಿಯೊಬ್ಬ ವಿಚಾರಣಾಧೀನ ಕೈದಿಯ ‘ಮಾನವ ಸ್ವಾತಂತ್ಯ್ರ’ವನ್ನು ಕಸಿದುಕೊಳ್ಳುತ್ತದೆ. ಹಾಗಾಗಿ ಇಂತಹ ಸಮಸ್ಯೆಗಳನ್ನು ‘ಯುದ್ಧೋಪಾದಿ’ಯಲ್ಲಿ ಪರಿಹರಿಸುವುದು ಅತ್ಯಗತ್ಯ ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಒತ್ತಿ ಹೇಳಿದ್ದಾರೆ.

ಅಲಹಾಬಾದ್‌ ಹೈಕೋರ್ಟ್‌ ಆಯೋಜಿಸಿದ್ದ ‘ಅರ್ಜಿದಾರರಿಗೆ ಆನ್‌ಲೈನ್‌ ಕಾನೂನು ನೆರವು ನೀಡಲು ವರ್ಚುವಲ್‌ ಕೋರ್ಟ್‌‌ಗಳು ಮತ್ತು ಇ-ಸೇವಾ ಕೇಂದ್ರಗಳು’ ಎಂಬ ವಿಷಯದ ಕುರಿತ ಆನ್‌ಲೈನ್‌ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಚಂದ್ರಚೂಡ್‌ ಮಾತನಾಡಿದ್ದಾರೆ.

ಕ್ರೂಸ್ ಹಡಗಿನ ಡ್ರಗ್ಸ್‌ ಪ್ರಕರಣದಲ್ಲಿ ಬಂಧಿಸಲಾಗಿದ್ದ ಬಾಲಿವುಡ್‌ ನಟ ಶಾರುಖ್‌ಖಾನ್‌ ಅವರ ಮಗ ಆರ್ಯನ್‌ ಖಾನ್‌ಗೆ ಬಾಂಬೆ ಹೈಕೋರ್ಟ್‌ ಜಾಮೀನು ನೀಡಿದ ಮೇಲೂ ಆ ಆದೇಶ ಜೈಲು ಅಧಿಕಾರಿಯನ್ನು ತಲುಪಲು ವಿಳಂಬವಾದ ಕಾರಣಕ್ಕೆ ಎರಡು ದಿನಗಳ ಕಾಲ ಜೈಲಿನಲ್ಲಿರಬೇಕಾಗಿತ್ತು.

ಈ ಮೊದಲು ಸುಪ್ರೀಂ ಕೋರ್ಟ್‌‌ನ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ನೇತೃತ್ವದ ಪೀಠವು ಜಾಮೀನು ಆದೇಶ ಜಾರಿ ವಿಳಂಬದ ವರದಿಗಳ ಬಗ್ಗೆ ತೀವ್ರ ಅಸಮಧಾನ ವ್ಯಕ್ತಪಡಿಸಿತ್ತು. ಅದರೊಂದಿಗೆ ಜಾಮೀನು ಆದೇಶಗಳ ರವಾನೆಗಾಗಿ ’ಸುರಕ್ಷಿತ, ವಿಶ್ವಾಸಾರ್ಹ ಮತ್ತು ಅಧಿಕೃತ ಚಾನಲ್‌’ ಅನ್ನು ಸ್ಥಾಪಿಸುವುದಾಗಿ ತಿಳಿಸಿದ್ದರು. “ನಾವು ಡಿಜಿಟಲ್‌ ಯುಗದಲ್ಲಿಯೂ ಆದೇಶಗಳ ಸಂವಹನಕ್ಕಾಗಿ ಆಕಾಶದಲ್ಲಿ ಪಾರಿವಾಳಗಳನ್ನು ನಿರೀಕ್ಷಿಸುತ್ತಿದ್ದೇವೆ’ ಎಂದು ಪೀಠ ಅಭಿಪ್ರಾಯಪಟ್ಟಿತ್ತು.

ಶೀಘ್ರ ಹಾಗೂ ಸುರಕ್ಷಿತ ವಿದ್ಯುನ್ಮಾನ ದಾಖಲೆಗಳ ಪ್ರಸರಣ (ಫಾಸ್ಟ್‌ ಅಂಡ್‌ ಸೆಕ್ಯೂರ್‌ ಟ್ರಾನ್ಸ್‌ ಮಿಷನ್‌ ಆಫ್‌ ಎಲೆಕ್ಟ್ರಾನಿಕ್‌ ರೆಕಾರ್ಡ್ಸ್‌ – FASTER) ಯೋಜನೆಯ ಅನುಷ್ಠಾನಕ್ಕೆ ಸುಪ್ರೀಂ ಕೋರ್ಟ್‌ ಆದೇಶ ನೀಡಿತ್ತು. ಇದಕ್ಕಾಗಿ ಪ್ರತಿ ಜೈಲಿನಲ್ಲಿಯೂ ವೇಗವಾದ ಇಂಟರ್‌ನೆಟ್ ಸೌಲಭ್ಯವನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಕೇಳಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ನ್ಯಾಯಮುರ್ತಿ ಚಂದ್ರಚೂಡ್‌ ಅವರು, ಒರಿಸ್ಸಾ ಹೈಕೋರ್ಟ್‌ ಪ್ರತಿ ವಿಚಾರಣಾಧೀನ ಕೈದಿ ಮತ್ತು ಜೈಲು ಶಿಕ್ಷೆಗೆ ಒಳಗಾಗುವ ಅಪರಾಧಿಗಳಿಗೆ ‘ಇ-ಕಸ್ಟಡಿ ಪ್ರಮಾಣಪತ್ರ’ ಮಂಜೂರು ಮಾಡಲು ಆರಂಭಿಸಿದೆ ಎಂದು ಹೇಳಿದ್ದಾರೆ.

‘ಈ ಪ್ರಮಾಣಪತ್ರವು  ನಿರ್ದಿಷ್ಟ ವಿಚಾರಣೆಗೆ ಒಳಪಡುವ ಅಥವಾ ಅಪರಾಧಿಗೆ ಸಂಬಂಧಿಸಿದಂತೆ ಬಂಧನದಿಂದ ಹಿಡಿದು ಪ್ರತಿ ಪ್ರಕರಣದ ಪ್ರಗತಿಯ ಎಲ್ಲಾ ದತ್ತಾಂಶಗಳನ್ನು ನಮಗೆ ನೀಡುತ್ತದೆ. ಇದು ಜಾಮೀನು ಆದೇಶಗಳನ್ನು  ಜೈಲುಗಳೊಂದಿಗೆ ಸಂವಹನ ನಡೆಸಲು ನಮಗೆ ಸಹಾಯ ಮಾಡುತ್ತದೆ’ ಎಂದು ಅವರು ತಿಳಿಸಿದ್ದಾರೆ.

ದೇಶಾದ್ಯಂತ 99.43 ಲಕ್ಷ ಪ್ರಕರಣಗಳ ವಿಚಾರಣೆ ಮುಗಿಸಿದ್ದು, 18.35 ಲಕ್ಷ ಪ್ರಕರಣಗಳಲ್ಲಿ ದಂಡ ವಸೂಲಿ ಮಾಡಲಾಗಿದೆ. ಈವರೆಗೂ ಒಟ್ಟು 119 ಕೋಟಿ ರೂಪಾಯಿ ದಂಡ ವಸೂಲಿಯಾಗಿದೆ’ ಎಂದು ನ್ಯಾಯಾಧೀಶರು ಹೇಳಿದರು.

ದೇಶದ ಜಿಲ್ಲಾ ನ್ಯಾಯಾಲಯಗಳಲ್ಲಿ 2.95 ಕೋಟಿ ಕ್ರಿಮಿನಲ್‌ ಪ್ರಕರಣಗಳು ಇನ್ನೂ ಬಾಕಿ ಉಳಿದಿದ್ದು, ಶೇ. 77 ಕ್ಕೂ ಹೆಚ್ಚು ಪ್ರಕರಣಗಳು ಒಂದು ವರ್ಷಕ್ಕಿಂತ ಹಳೆಯವು ಎಂದು ನ್ಯಾಯಮೂರ್ತಿ ಚಂದ್ರಚೂಡ್‌ ತಿಳಿಸಿದ್ದಾರೆ.

“ನಾವು ಇಲ್ಲಿಯೂ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು ಬಳಸಬಹುದು. ಪ್ರಸ್ತುತ ಸುಪ್ರೀಂ ಕೋರ್ಟ್‌ನ ಇ-ಸಮಿತಿಯಲ್ಲಿ ಈ ಬಗ್ಗೆ ಕೆಲಸ ಕೆಲಸ ಮಾಡುತ್ತಿದ್ದೇವೆ” ಎಂದು ನ್ಯಾಯಮೂರ್ತಿ ಚಂದ್ರಚೂಡ್ ವಿವರಿಸಿದ್ದಾರೆ.


ಇದನ್ನೂ ಓದಿ: ರಾಜಕೀಯ ಮುಖಂಡರ ಆರ್‌ಎಸ್‌ಎಸ್ ವಿರೋಧವಷ್ಟೇ ಸಾಲದು; ವಿಷಪೂರಿತ ಸಿದ್ಧಾಂತವನ್ನು ತೊಲಗಿಸುವ ಹೋರಾಟಕ್ಕೆ ಸಜ್ಜಾಗಬೇಕು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...