Homeಮುಖಪುಟಫ್ಯಾಕ್ಟ್‌ಚೆಕ್‌: ಸ್ಮೃತಿ ಇರಾನಿಯವರನ್ನು ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್‌ ತುಚ್ಛವಾಗಿ ಟೀಕಿಸಿದರೆ?

ಫ್ಯಾಕ್ಟ್‌ಚೆಕ್‌: ಸ್ಮೃತಿ ಇರಾನಿಯವರನ್ನು ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್‌ ತುಚ್ಛವಾಗಿ ಟೀಕಿಸಿದರೆ?

ಯುವ ಕಾಂಗ್ರೆಸ್‌ ಅಧ್ಯಕ್ಷರ ಪ್ರತಿಷ್ಠೆಗೆ ಕಳಂಕ ತರುವ ಈ ಪ್ರಯತ್ನದ ವಿರುದ್ಧ ಕಾನೂನು ಕ್ರಮ ಜರುಗಿಸಲು ಕಾಂಗ್ರೆಸ್ ಮುಂದಾಗಿದೆ

- Advertisement -
- Advertisement -

ಯುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಅವರು ಸಾರ್ವಜನಿಕ ರ್‍ಯಾಲಿಯಲ್ಲಿ ಮಾಡಿದ ಭಾಷಣದ ತುಣುಕ್ಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

“ಸ್ಮೃತಿ ಇರಾನಿ ಥೋರಾ ಗುಂಗೆ ಬೆಹ್ರಿ ಹೋ ಗಯಾ ಹೈ, ಮೈನ್ ಉಂಕೋ ಕೆಹನಾ ಚಾಹ್ತಾ ಹೂ – ಉಸಿ ದಯಾನ್ ಕೋ, ಮೆಹೆಂಗಾಯಿ ದಯಾನ್ ಕೋ ಡಾರ್ಲಿಂಗ್ ಬನಾಕೆ ಬೆಡ್‌ರೂಮ್ ಮೇ ಬೈತಾನೆ ಕಾ ಕಾಮ್ ಕಿಯಾ ಹೈ” (ಸ್ಮೃತಿ ಇರಾನಿ ಮೂಕ ಮತ್ತು ಕಿವುಡರಾಗಿದ್ದಾರೆ. ಈಗ ಅದೇ ಮಾಟಗಾತಿ ಹಣದುಬ್ಬರವೆಂಬ ದೆವ್ವವನ್ನು ‘ಡಾರ್ಲಿಂಗ್’ ಆಗಿ ಪರಿವರ್ತಿಸಿ ಮಲಗುವ ಕೋಣೆಯಲ್ಲಿ ಇರಿಸಿದ್ದಾರೆ) ಎಂದು ಶ್ರೀನಿವಾಸ್ ಹೇಳಿರುವುದಾಗಿ ಈ ವಿಡಿಯೊ ಕ್ಲಿಪ್‌ ಮೂಲಕ ಪ್ರತಿಪಾದಿಸಲಾಗುತ್ತಿದೆ.

ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಕ್ಲಿಪ್ ಅನ್ನು ಟ್ವೀಟ್ ಮಾಡಿದ್ದಾರೆ. “ಈ ಅಸಭ್ಯ, ಸೆಕ್ಸಿಸ್ಟ್ ವ್ಯಕ್ತಿ ಭಾರತೀಯ ಯುವ ಕಾಂಗ್ರೆಸ್ ಅಧ್ಯಕ್ಷ” ಎಂದು ಬರೆದುಕೊಂಡಿದ್ದಾರೆ. ಅಮೇಥಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ಗೆದ್ದಿದ್ದಕ್ಕಾಗಿ ಸ್ಮೃತಿ ಇರಾನಿ ಅವರನ್ನು “ಡಾರ್ಲಿಂಗ್ ಬನಾ ಕರ್ ಬೆಡರೂಮ್ ಮೆನ್” ಎಂದು ಬಿ.ವಿ.ಶ್ರೀನಿವಾಸ್ ಹೇಳಿರುವುದಾಗಿ ಆರೋಪಿಸಿದ್ದಾರೆ.

ಬಿಜೆಪಿ ಕರ್ನಾಟಕ ಕೂಡ ಇದೇ ವಿಡಿಯೊವನ್ನು ಟ್ವೀಟ್ ಮಾಡಿದೆ. ಅಮೇಥಿಯಲ್ಲಿ ರಾಹುಲ್ ಗಾಂಧಿಯವರಿಗೆ ಸ್ಮೃತಿ ಇರಾನಿ ಅವರು ಉಂಟುಮಾಡಿದ ಸೋಲನ್ನು ಅರಗಿಸಿಕೊಳ್ಳಲು ಕಾಂಗ್ರೆಸ್‌ಗೆ ಸಾಧ್ಯವಾಗಲಿಲ್ಲ. ಕಾಂಗ್ರೆಸ್‌ ಪಕ್ಷವು ಸ್ತ್ರೀದ್ವೇಷಿಯಾಗಿದೆ, ವಿಕೃತತೆಯ ಕೂಪವಾಗಿ ಮಾರ್ಪಟ್ಟಿದೆ ಎಂದು ದೂರಿದೆ.

ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವರೂ ಟ್ವೀಟ್ ಮಾಡಿದ್ದಾರೆ. “ಶ್ರೀನಿವಾಸ್ ಬಿ.ವಿ. ಅವರ ಟೀಕೆಗಳು ಶೋಚನೀಯವಾಗಿವೆ, ಕಾಮಪ್ರಚೋದಕವಾಗಿವೆ. ಪ್ರಿಯಾಂಕಾ ಗಾಂಧಿಯವರು ಈ ಭಾಷಣವನ್ನು ಖಂಡಿಸಬೇಕು” ಎಂದು ಆಗ್ರಹಿಸಿದ್ದಾರೆ. ಹೀಗೆ ಅನೇಕರು ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ.

ಸತ್ಯಾಂಶವೇನು?

ಈ ವಿಡಿಯೋ ಬಿಜೆಪಿ ಕಾರ್ಯಕರ್ತರಿಂದ ವ್ಯಾಪಕ ಆಕ್ರೋಶಕ್ಕೆ ಕಾರಣವಾದ ನಂತರ, ಶ್ರೀನಿವಾಸ್ ಬಿ.ವಿ. ಅವರು ತಮ್ಮ ಭಾಷಣದ ದೀರ್ಘ ಕ್ಲಿಪ್ ಅನ್ನು ಟ್ವೀಟ್ ಮಾಡಿದ್ದಾರೆ.

“ಸಂಘಿಗಳು ಸುಧಾರಿಸುವುದಿಲ್ಲ. ಪೂರ್ಣ ಹೇಳಿಕೆಯನ್ನು ಅಪೂರ್ಣವಾಗಿ ತೋರಿಸಿದ್ದಾರೆ. 2014 ರ ಮೊದಲು ನೀವು ನೀಡಿದ ಹೇಳಿಕೆಯನ್ನು ನಾನು ಉಲ್ಲೇಖಿಸಿದ್ದೇನೆ. ₹ 400 ಎಲ್‌ಪಿಜಿ ಸಿಲಿಂಡರ್‌ನ ಹಣದುಬ್ಬರವು ನಿಮಗೆ ‘ಮಾಟಗಾತಿ’ಯಂತೆ ಕಾಣಿಸುತ್ತಿತ್ತು. ಇಂದು ಎಲ್‌ಪಿಜಿ ಬೆಲೆ ₹ 1100 ರೂ. ಆಗಿದೆ. ಅಂದು ದಯಾನ್‌ (ಮಾಟಗಾತಿ/ದೆವ್ವ) ಆಗಿದ್ದ ಹಣದುಬ್ಬರ ‘ಡಾರ್ಲಿಂಗ್’ ಆಗಿದೆ” ಎಂದಿದ್ದಾರೆ.

ಶ್ರೀನಿವಾಸ್ ಅವರು ಸ್ಮೃತಿ ಇರಾನಿಯವರನ್ನು ಮಾಟಗಾತಿ (ದಯಾನ್) ಎಂದು ಉಲ್ಲೇಖಿಸಿಲ್ಲ. ಕೆಲವರು ಪ್ರತಿಪಾದಿಸುತ್ತಿರುವುದಕ್ಕೆ ವಿರುದ್ಧವಾಗಿ ಇಲ್ಲಿನ ವಿಡಿಯೊವಿದೆ. ಬಿಜೆಪಿ ರಾಜಕಾರಣಿಗಳು ತಮ್ಮ ಹಿಂಬಾಲಕರಿಗೆ ತಪ್ಪಾಗಿ ವಿಡಿಯೊವನ್ನು ಒದಗಿಸಿದ್ದಾರೆ. ‘ಮಹಾಂಗೈ ದಯಾನ್’ ಎಂಬ ಸಾಲು ಪೀಪ್ಲಿ ಲೈವ್ (2010) ಚಿತ್ರದ ನಂತರ ಪ್ರಸಿದ್ಧವಾಗಿದೆ. ಇದೇ ಸಾಲಿನ ಹಾಡು ಆ ಸಿನಿಮಾದಲ್ಲಿದೆ. ಬೆಲೆ ಏರಿಕೆಯಿಂದಾಗುವ ಪ್ರಮುಖ ಸಾಮಾಜಿಕ-ಆರ್ಥಿಕ ಸಮಸ್ಯೆಯ ಕಡೆಗೆ ಈ ಹಾಡು ಗಮನ ಸೆಳೆಯುತ್ತದೆ.

ಚುನಾವಣಾ ಪ್ರಚಾರದ ಸಮಯದಲ್ಲಿ ರಾಜಕೀಯ ವಾಕ್‌ಚಾತುರ್ಯದ ಭಾಗವಾಗಿ ಈ ಹಾಡನ್ನು ಹೆಚ್ಚಾಗಿ ಬಳಸಲಾಗುತ್ತದೆ.  2012ರ ಹಿಂದೆ ಮಾಜಿ ಸಚಿವೆ ದಿವಂಗತ ಸುಷ್ಮಾ ಸ್ವರಾಜ್ ಅವರು ‘ಮಹಾಂಗೈ ದಯಾನ್‌’ ಹಾಡನ್ನು ಗುನುಗಿದ್ದರು.

ಶ್ರೀನಿವಾಸ್ ಬಿ.ವಿ ಅವರೂ ಇದೇ ರೀತಿಯಲ್ಲಿ ರಾಜಕೀಯ ವಾಗ್ದಾಳಿ ನಡೆಸಿದ್ದಾರೆ. ಬೆಲೆ ಏರಿಕೆಯನ್ನು ಪ್ರಶ್ನಿಸಿದ್ದಾರೆ. 2014ಕ್ಕಿಂತ ಮೊದಲು ‘ಮಹಾಂಗೈ ದಯಾನ್’ ಹಾಡನ್ನು ಬಳಸಿದ ಅದೇ ಬಿಜೆಪಿ, ಈಗ ಹಣದುಬ್ಬರದ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಟೀಕಿಸಿದ್ದಾರೆ.

“ಹಣದುಬ್ಬರವನ್ನು ತಮ್ಮ ಮಲಗುವ ಕೋಣೆಗೆ ಬಿಜೆಪಿ ತಂದಿದೆ. ಅದನ್ನು ತಮ್ಮ ಪ್ರಿಯತಮೆಯನ್ನಾಗಿ ಮಾಡಿಕೊಂಡಂತಿದೆ” ಎಂದಿದ್ದಾರೆ. ಸ್ಮೃತಿ ಇರಾನಿ ಅವರು ಬಡವರ ಬೇಡಿಕೆಗಳಿಗೆ ಕಿವುಡರಾಗಿದ್ದಾರೆ ಎಂದು ಹೇಳುವ ಮೂಲಕ ಬಿ.ವಿ.ಶ್ರೀನಿವಾಸ್ ಅವರು ಟಾರ್ಗೆಟ್ ಆಗಿರುವುದು ನಿಜವಾದರೂ, ಅವರು ಮೇಲಿನ ಹೇಳಿಕೆಯನ್ನು ಕೇವಲ ರೂಪಕವಾಗಿ ಬಳಸಿರುವುದು ಸ್ಪಷ್ಟವಾಗುತ್ತದೆ.

‘ನಾನುಗೌರಿ.ಕಾಂ’ ಜೊತೆಯಲ್ಲಿ ಮಾತನಾಡಿದ ಬಿ.ವಿ.ಶ್ರೀನಿವಾಸ್ ಅವರು, “ಮನಮೋಹನ್ ಸಿಂಗ್ ಅವರು ಪ್ರಧಾನಿ ಮಂತ್ರಿಯಾಗಿದ್ದ ಅವಧಿಯಲ್ಲಿ ಇದೇ ಮಾತನ್ನು ಹೇಳಿದ್ದರು. ಗ್ಯಾಸ್ ಸಿಲಿಂಡರ್ ಬೆಲೆ 400 ರೂ ಇದ್ದಾಗ ‘ಮೆಹಂಗಾಯಿ ದಾಯನ್’ ಎಂದು ಹೇಳುತ್ತಿದ್ದ ಅವರು, ಈಗ ಬೆಲೆ 1100 ರೂ.ಗೆ ತಲುಪಿದಾಗ ಮಾತನಾಡುತ್ತಿಲ್ಲ. ಈ ‘ದಾಯನ್‌’ (ದೆವ್ವ) ಈಗ ಪ್ರಿಯತಮೆಯಾಗಿದೆ. ಇದರಲ್ಲಿ ತಪ್ಪೇನಿದೆ?” ಎಂದು ಪ್ರಶ್ನಿಸಿದರು.

“ಅವರಿಗೆ ಹಳೆಯ ದಿನಗಳನ್ನು ನೆನಪಿಸಿದೆ. ಅವರಿಗೆ ಕಿವಿ ಕೇಳಿಸುವುದಿಲ್ಲ. ಬೆಲೆ ಏರಿಕೆಯೆಂದು ರಸ್ತೆಯಲ್ಲಿ ಕುಣಿಯುತ್ತಿದ್ದವರು ಈಗ ಎಲ್ಲಿ ಹೋಗಿದ್ದಾರೆ? ಸ್ಮೃತಿ ಇರಾನಿಯವರು ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವರಾಗಿದ್ದಾರೆ. ಮಹಿಳೆಯರು ಮತ್ತು ಮಕ್ಕಳ ಮೇಲೆ ಅತ್ಯಾಚಾರಗಳಾದಾಗ ಇವರು ಮಾತನಾಡುವುದಿಲ್ಲ. ಹತ್ರಾಸ್‌ ಪ್ರಕರಣ ಇರಬಹುದು, ಉನ್ನಾವೋ ಪ್ರಕರಣ ಇರಬಹುದು- ಇದ್ಯಾವುಕ್ಕೂ ಪ್ರತಿಕ್ರಿಯಿಸಲಿಲ್ಲ. ಕಾನ್ಫುರದಲ್ಲಿ ತಾಯಿ ಮತ್ತು ಮಗಳನ್ನು ಬೆಂಕಿಯಲ್ಲಿ ಹಾಕಿ ಸುಡಲಾಯಿತು. ನಿಶಿಕಾಂತ್ ದುಬೆ ಎಂಬಾತ ಬಿಜೆಪಿಯ ಸಂಸದ. ಮತ್ತೊಬ್ಬ ಮಹಿಳಾ ಜನಪ್ರತಿನಿಧಿಗೆ ಹೀನಾಯವಾಗಿ ನಿಂದಿಸಿ, ಇವರೆಲ್ಲ ರೆಡ್‌ಲೈಟ್‌ ಪ್ರದೇಶದವರು ಎಂದನು. ಅದ್ಯಾವುದಕ್ಕೂ ಸ್ಮೃತಿಯವರು ಪ್ರತಿಕ್ರಿಯಿಸಲಿಲ್ಲ. ಮಹಿಳಾ ಇಲಾಖೆಗೆ ಅವರು ರಾಜೀನಾಮೆ ಕೊಡಬೇಕು” ಎಂದು ಒತ್ತಾಯಿಸಿದರು.

ಕಾನೂನು ಕ್ರಮಕ್ಕೆ ಚಿಂತನೆ

“ಯುವ ಕಾಂಗ್ರೆಸ್‌ ಅಧ್ಯಕ್ಷರ ಪ್ರತಿಷ್ಠೆಗೆ ಕಳಂಕ ತರುವ ಶೋಚನೀಯ ಪ್ರಯತ್ನವನ್ನು ನಾವು ಖಂಡಿಸುತ್ತೇವೆ. ಅಧಿಕಾರದಲ್ಲಿರುವ ಕೆಲವರು ಆರೋಪಿಸಿರುವ ಇಂತಹ ಯಾವುದೇ ಆಲೋಚನೆಗಳಿಗೆ ನಾವು ಅವಕಾಶ ನೀಡುವುದಿಲ್ಲ. ಈ ಸಂಬಂಧ ಕಾನೂನು ಕ್ರಮ ಜರುಗಿಸುತ್ತೇವೆ” ಎಂದು ಯುವ ಕಾಂಗ್ರೆಸ್‌ ಕಾನೂನು ಕೋಶದ ಅಧ್ಯಕ್ಷ ರೂಪೇಶ್ ಭದೌರಿಯಾ ತಿಳಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಂದೇ ಮಾತರಂ ಗೀತೆಯ 6 ಚರಣಕ್ಕೆ ಕರ್ನಾಟಕ ಸರ್ಕಾರದ ಬ್ರೇಕ್

ವಂದೇ ಮಾತರಂ ಗೀತೆಯ ಗಾಯನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಿರ್ಧಾರ ಮತ್ತು ಕಡ್ಡಾಯ ನೀತಿಗೆ ಕರ್ನಾಟಕ ಸರ್ಕಾರ ನೇರವಾಗಿ ಸೆಡ್ಡು ಹೊಡೆದಿದೆ. ರಾಜ್ಯ ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಸಂಪೂರ್ಣ...

ಸಿಜೆಪಿ ಪ್ರತಿಭಟನೆಯಲ್ಲಿ ಬಾಲಕಿ ನಿಶು ಆಜಾದ್‌ಗೆ ಬೆದರಿಕೆ; ಕ್ರಮಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ 14 ವರ್ಷದ ನಿಶು ಆಜಾದ್‌ಗೆ ಕಿಡಿಗೇಡಿಗಳು ಅತ್ಯಾಚಾರದ ಬೆದರಿಕೆ ಹಾಕಿದ್ದಾರೆ ಹಾಗೂ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂಬ...

ಜಾದವ್‌ಪುರ ವಿವಿ ವಿರುದ್ಧ ಸುವೇಂದು ಅಧಿಕಾರಿಯ ‘ಕೇಸರಿ ಯಾತ್ರೆ’: ‘ಆಜಾದಿ’, ‘ಲಾಲ್ ಸಲಾಂ’ ಕೂಗುವವರನ್ನು ಬೇರುಸಹಿತ ಕಿತ್ತುಹಾಕುತ್ತೇನೆ ಎಂದು ಬೆದರಿಕೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಹಾಗೂ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಕೋಲ್ಕತ್ತಾದ ಜಾದವ್‌ಪುರ ವಿಶ್ವವಿದ್ಯಾಲಯದತ್ತ ನಡೆದ ‘ಗೆರುವಾ ಸಮ್ಮಾನ್ ಯಾತ್ರೆ’ (ಕೇಸರಿ ಗೌರವ ಮೆರವಣಿಗೆ) ಇದೀಗ ರಾಜ್ಯದ ರಾಜಕೀಯ ವಲಯದಲ್ಲಿ...

SIR : ಒಂದೇ ಮತಗಟ್ಟೆಯ 729 ಮತದಾರರಲ್ಲಿ 728 ಮಂದಿಯ ಹೆಸರು ಡಿಲೀಟ್!

ದೆಹಲಿಯ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್‌) ಮುನ್ನ, ಯಮುನಾ ನದಿ ಪಾತ್ರದ ಕೊಳಗೇರಿ ಪ್ರದೇಶವಾದ ಬೇಲಾ ಎಸ್ಟೇಟ್‌ನ ಭಾಗವೊಂದನ್ನು ಒಳಗೊಂಡಿರುವ ಮತಗಟ್ಟೆಯಲ್ಲಿ 729 ನೋಂದಾಯಿತ ಮತದಾರರಿದ್ದರು. ಆದರೆ, ಆಗಸ್ಟ್‌ನಲ್ಲಿ ಕರಡು...

ಬಂಗಾಳದ ನಾನ್‌ವೆಜ್ ವಿವಾದ: ಬಾಗೇಶ್ವರ್ ಬಾಬಾ ಹೇಳಿಕೆಗೆ ಹಿಂದೂ ವಲಯದಲ್ಲೇ ವಿರೋಧ; ‘ಹಿಂದೂ ಧರ್ಮ ಆಹಾರದ ಕೋಡ್ ಅಲ್ಲ!

ದುರ್ಗಾ ಪೂಜೆಯ ಸಂದರ್ಭದಲ್ಲಿ ಮೀನು, ಮಾಂಸ ಸೇವನೆ ಹಾಗೂ ಮಾರಾಟದ ವಿರುದ್ಧ ಬಾಗೇಶ್ವರ್ ಧಾಮದ ಮುಖ್ಯಸ್ಥ ಧೀರೇಂದ್ರ ಕೃಷ್ಣ ಶಾಸ್ತ್ರಿ ನೀಡಿದ್ದ ಹೇಳಿಕೆ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ವಿವಾದ ಹುಟ್ಟುಹಾಕಿದ ಬೆನ್ನಲ್ಲೇ, ಇದೀಗ...

SIR: ಪಂಜಾಬ್‌ ಮತದಾರರ ಪಟ್ಟಿಯಿಂದ ಡಿಲೀಟ್ ಆಗಿದ್ದ ರಾಘವ್ ಚಡ್ಡಾ ಹೆಸರು ದೆಹಲಿಯಲ್ಲಿ ಎಂಟ್ರಿ!

ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಹೆಸರು ಪಂಜಾಬ್‌ನ ಕರಡು ಮತದಾರರ ಪಟ್ಟಿಯಿಂದ ತೆಗೆದುಹಾಕಲ್ಪಟ್ಟ ಕೆಲವೇ ದಿನಗಳಲ್ಲಿ, ದೆಹಲಿಯ ಮತದಾರರ ಪಟ್ಟಿಯಲ್ಲಿ ದಿಢೀರನೆ ಪ್ರತ್ಯಕ್ಷವಾಗಿರುವುದು ದೇಶಾದ್ಯಂತ ಭಾರಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ...

ರಾಜ್ಯ ಕಾಂಗ್ರೆಸ್‌ಗೆ 35 ನೂತನ ಜಿಲ್ಲಾಧ್ಯಕ್ಷರ ನೇಮಕ; ಹೈಕಮಾಂಡ್ ಪಟ್ಟಿಯಲ್ಲಿ ಮಹಿಳೆಯರಿಗಿಲ್ಲ ಪ್ರಾತಿನಿಧ್ಯ!

ಕರ್ನಾಟಕ ಕಾಂಗ್ರೆಸ್‌ನ ಬಹುನಿರೀಕ್ಷಿತ ಜಿಲ್ಲಾ ಪುನರ್‌ರಚನೆಗೆ ಕೊನೆಗೂ ಚಾಲನೆ ದೊರೆತಿದ್ದು, ರಾಜ್ಯದ 35 ಸಾಂಸ್ಥಿಕ ಜಿಲ್ಲಾ ಕಾಂಗ್ರೆಸ್ ಸಮಿತಿಗಳಿಗೆ (DCC) ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ....

ತ್ರಿಪುರ| ಬಿಜೆಪಿ ಬೇಡಿಕೆಗೆ ಸ್ಪಂದಿಸಿದ ಇಸಿಐ; ಗ್ರಾಮ ಸಮಿತಿ ಚುನಾವಣೆ ಹಿನ್ನೆಲೆಯಲ್ಲಿ ಎಸ್‌ಐಆರ್ ಪ್ರಕ್ರಿಯೆ ಮುಂದೂಡಿಕೆ

ಆಡಳಿತರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಬೇಡಿಕೆಗೆ ಸ್ಪಂದಿಸಿರುವ ಭಾರತೀಯ ಚುನಾವಣಾ ಆಯೋಗ (ಇಸಿಐ), ರಾಜ್ಯದ ಬುಡಕಟ್ಟು ಪ್ರದೇಶಗಳಲ್ಲಿ ಸೆಪ್ಟೆಂಬರ್ 28 ರಂದು ನಡೆಯಲಿರುವ ಗ್ರಾಮ ಸಮಿತಿ...

SIR: ಸ್ವತಃ BLO ಗೆ ನೋಟಿಸ್ ನೀಡಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ತಾಂತ್ರಿಕ ಎಡವಟ್ಟುಗಳು ಮತ್ತು ಗೊಂದಲಗಳು ಪ್ರತಿದಿನವೂ ಒಂದಲ್ಲ ಒಂದು ವಿಲಕ್ಷಣ ಘಟನೆಗಳಿಗೆ ಕಾರಣವಾಗುತ್ತಿದ್ದು, ಇದೀಗ ಸ್ವತಃ ಮತದಾರರ ಪಟ್ಟಿ ಪರಿಷ್ಕರಣೆ...

‘ಎಸ್‌ಐಆರ್ ಪ್ರಜಾಪ್ರಭುತ್ವಕ್ಕೆ ವಂಚನೆ’: 2025ಕ್ಕೆ ಹೋಲಿಸಿದರೆ ದೆಹಲಿಯ 58.60 ಲಕ್ಷ ಮತದಾರರ ಹೆಸರುಗಳು ಮಾಯ: ನಾಗರೀಕ ಸಂಘಟನೆಗಳ ಆಕ್ರೋಶ

ನವದೆಹಲಿ: ದೆಹಲಿಯಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಮತದಾರರ ಪಟ್ಟಿಯ ಶುದ್ಧೀಕರಣದ ಸಾಮಾನ್ಯ ಆಡಳಿತಾತ್ಮಕ ಕ್ರಮವಲ್ಲ, ಬದಲಾಗಿ ನಾಗರಿಕರ ಮತದಾನದ ಹಕ್ಕಿನ ಮೇಲೆ ಗಂಭೀರ ಪರಿಣಾಮ ಬೀರುವ...