HomeಅಂಕಣಗಳುFund Transfer from center to states : ’ಸುದ್ದಿಯೇನೆ, ಮನೋಲ್ಲಾಸಿನಿ?’

Fund Transfer from center to states : ’ಸುದ್ದಿಯೇನೆ, ಮನೋಲ್ಲಾಸಿನಿ?’

- Advertisement -
- Advertisement -

ಕೋಟ್ಯಾಂತರ ಜನ ಅತ್ತೂ ಕರದೂ ಹಾಕಿದ ಮೇಲೆ? ನೆರೆ ಪರಿಹಾರಕ್ಕೆ ಅಂತ ಇಟಗೊರಿ? ಅಂತ ಕೇಂದ್ರದವರು ರಾಜ್ಯಕ್ಕೆ 1,200 ಕೋಟಿ ರೂಪಾಯಿ ಕೊಟ್ಟಾರ.

ಇದಕ್ಕ ಥರಾಥರಾ ಪ್ರತಿಕ್ರಿಯೆ ಬಂದಾವ.

‘ಇದು ಕಮ್ಮಿ’ ಅಂತ ಕೆಲವು ಜನಾ, ‘ಇದ ಹೆಚ್ಚು, ಇದಕ್ಕಿಂತ ಹೆಚ್ಚು ಏನ್ ಕೊಡತಾರ’ ಅಂತ ಕೆಲವರು ಅಂದರ, ಇನ್ನೂ ಕೆಲವರು ‘ಅವರು ದೇವರು ಇದ್ದಂಗೆ, ಅವರು ಕೃಪಾ ಮಾಡತಾರ. ಸ್ವಲ್ಪ ತಡಾ ಆಗಬಹುದು, ಅಷ್ಟ- ಖುದಾ ಕೆ ಘರ್ ಮೆ ದೇರ್ ಹೈ, ಅಂಧೇರಾ ನಹಿ,’ ಅಂತನೂ ಹೇಳ್ಯಾರ.

ಈ ಗನಗಂಬೀರ ವಿಷಯವನ್ನು ನಮ್ಮಂತಾ ಹುಲು ಮಾನವರು ಸ್ವಲ್ಪ ತಿಳಕೊಳ್ಳೋಣ, ಬನ್ನಿ

‘ಧನ ವಿನಿಯೋಗ’

ಒಂದು ವರ್ಷದಲ್ಲಿ ಕೇಂದ್ರ ಸರಕಾರದಿಂದಾ ರಾಜ್ಯಗಳಿಗೆ ಬರಬಹುದಾದ ರೊಕ್ಕಕ್ಕ ಧನ ವಿನಿಯೋಗ ಅಂತಾರ
ಇದು ಮೂರು ರೀತಿಯದು-

1. ಹಣಕಾಸು ಆಯೋಗ ಹೇಳಿದಷ್ಟು ಕೊಡುವುದು ಹಾಗೂ ಬ್ಯಾರೆ ರೀತಿ ಹಣ ಹಂಚಿಕೆ.

2. ಕೇಂದ್ರದ ಯೋಜನೆಗಳು

3. ಕೇಂದ್ರ ಹಾಗೂ ರಾಜ್ಯದ ಹೆಸರಿನಲ್ಲಿ ವಸೂಲು ಮಾಡುವ ತೆರಿಗೆ ಅಥವಾ ಸುಂಕ. ನಮ್ಮ ಉತ್ತರ ಕರ್ನಾಟಕದಾಗ ಸುಂಕ ಅಂತೇವೆಲ್ಲಾ, ಅಂತಾ ಸುಂಕ ಅಲ್ಲ ಮತ್ತ.

ಒಂದು ವರ್ಷಕ್ಕ ಕೇಂದ್ರ ರಾಜ್ಯಗಳಿಗೆ ಹಂಚುವ ಹಣ ಸುಮಾರು 50 ಲಕ್ಷ ಕೋಟಿ. ಇದರಾಗ 39 ಲಕ್ಷ ಕೋಟಿ ತೆರಿಗೆಯ ಮರು ಹಂಚಿಕೆ, 6 ಲಕ್ಷ ಕೋಟಿ ಮತ್ತ 5 ಲಕ್ಷ ಕೋಟಿ ವಿನಿಯೋಗ. ಇದನ್ನು ಬಿಟ್ಟು ಸುಮಾರು 3 ಲಕ್ಷ ಕೋಟಿ ನೇರ ಹಾಗೂ ನೇರವಲ್ಲದ ಸಬ್ಸಿಡಿ ಬಿಡುಗಡೆಯಾಗುತ್ತದೆ- ಪೆಟ್ರೋಲು, ಪೆಟ್ರೋಲಿನಿಂದ ಮಾಡಿದ ಗೊಬ್ಬರ, ಹಾಗೂ ಗೊಬ್ಬರದಿಂದ ಬೆಳೆದ ಧಾನ್ಯಗಳಿಗೆ.

ಇನ್ನು ಪ್ರಕೃತಿ ವಿಕೋಪ ಮುಂತಾದ ತುರ್ತುಗಳಿಗೆ ಕೊಡುವ ಧನಸಹಾಯ, ಅದು ಬ್ಯಾರೇನ.

ಸುಂಕ- ತೆರಿಗೆಯೊಳಗ ಎರಡು ಥರಾ. ನೇರ ಹಾಗೂ ನೇರವಲ್ಲದ ಅಥವಾ ಅಪ್ರತ್ಯಕ್ಷ. ಸರಕಾರಕ್ಕ ನಾವೆಲ್ಲಾ ಡೈರೆಕ್ಟಾಗಿ ರೊಕ್ಕ ಕೊಟ್ಟರ ಅದು ನೇರ. ಇನ್ನೊಬ್ಬರ ಮೂಲಕ ಕೊಟ್ಟರ ಅದು ಇನ್‍ಡೈರೆಕ್ಟ್ ತೆರಿಗೆ.

ಕೇಂದ್ರ ನೇರವಾಗಿ ವಸೂಲು ಮಾಡುವ ಆದಾಯ ತೆರಿಗೆಯನ್ನು ಅದು ರಾಜ್ಯಗಳಿಗೆ ಕೊಡೋದಿಲ್ಲ. ಸೆಸ್ ಅನ್ನುವ ಸಂಶಯಾಸ್ಪದ ಹೆಸರಿನ ತೆರಿಗೆ ಒಂದು ಅದ. ಈ ಕೆಲಸಕ್ಕೆ ಇದನ್ನು ಉಪಯೋಗಸ್ತೇವಿ ಅಂತೇಳಿ ವಸೂಲು ಮಾಡೋದು ಸೆಸ್ಸು. ಇದನ್ನೂ ರಾಜ್ಯಗಳ ಜೊತೆ ಹಂಚಿಕೊಳ್ಳಬೇಕಾಗಿಲ್ಲ. ಕಳೆದ 10 ವರ್ಷದಾಗ ಈ ಸೆಸ್ಸುಗಳ ಸಂಖ್ಯೆ ಸುಮಾರು 100 ಶೇಕಡಾ ಹೆಚ್ಚಾಗೇದ.

ಇನ್ನು ಜಿಎಸ್‍ಟಿ ಅಥವಾ ಸರಕು ಹಾಗೂ ಸೇವಾ ತೆರಿಗೆ. ಸಿಂಪಲ್ ಆಗಿ ಹೇಳಬೇಕಂದರೆ ಆದಾಯ ಬಿಟ್ಟರ ಉಳಿದ ಎಲ್ಲಾ ತೆರಿಗೆ ಇದರಾಗ ಬರ್ತಾವ. ಅದು ಆದಾಯದ ಮ್ಯಾಲೆ ಆದರ ಇದು ಖರ್ಚಿನ ಮ್ಯಾಲೆ. ಇದರಾಗ ಏನ್ರಿ, ಯಾವುದರ ಹೆಸರಾಗ ರೊಕ್ಕ ಕಸಗೊಳೋದು ಅಂತೀರೇನು? ಅದಕ್ಕ ಹೇಳೋದು ಸಾವಿನ ನಂತರ ಈ ಜೀವನದಾಗ ಖಾತ್ರಿ ಇರೋದು ತೆರಿಗೆ ಮಾತ್ರ ಅಂತ.

ಜಿಎಸ್‍ಟಿಯ ಪಾಲು ರಾಜ್ಯಗಳಿಗೆ ಸಿಗತದ. ಇನ್ನು ಕೇಂದ್ರಕ್ಕ ಕೊಡಲಾರದ ತಾವ ಹಾಕಿ ತಾವೇ ಬಳಸೋ ತೆರಿಗೆ ಕೆಲವು ಅವ. ಹೊಟೆಲ್ ಒಳಗ ಊಟಾ ಮಾಡಿ, ಬೀರ್ ಬಾಟಲ್ ಕೈಯಾಗ ಹಿಡಕೊಂಡು ಸಿನಿಮಾಕ್ಕ ಹೋದವರು ರಾಜ್ಯಕ್ಕೆ ಮೂರು ಥರದ ಸುಂಕ ಸೇವಾ ಮಾಡಿರತಾರ.

ಕೇಂದ್ರ ಸರಕಾರದ ಯೋಜನೆಗಳು- ಒಟ್ಟು 99. ಇದರೊಳಗ ಮೂರು ಥರಾ. ಹಳೇ ಯೋಜನೆ, ನಡುವೆ ನಿಂತು ಹೋಗಿ, ಮತ್ತೆ ಶುರು ಆದ ಹಳೇ ಯೋಜನೆ, ಹಾಗೂ ಹೊಸಾ ಹೆಸರಿನ ಹಳೇ ಯೋಜನೆ.

ಮನೆ ಕಟ್ಟುವುದು, ಮನೆಯಲ್ಲಿ ಸಂಡಾಸು ಕಟ್ಟುವುದು, ಹಾದಿ ಮ್ಯಾಲೆ ಹೋಗೋರು ಹಾದಿ ಮ್ಯಾಲಿನ ಕಸಾ ಗುಡಸೋದು, ಇಂತಾ ಯೋಜನೆ ಒಂದಿಷ್ಟು. ಇನ್ನ ಉತ್ತರಾಖಂಡೀ ಶುದ್ಧ ಹಿಂದೀ ಯಲ್ಲಿ ಹೆಸರಿಟ್ಟ ಉನ್ನತೀಕರಣ್ ಯೋಜನಾ, ವಿಕಾಸ್ ಯೋಜನಾ, ಆಯೋಜನಾ, ನೀತಿ, ಗೀತಿ, ಅವೆಲ್ಲಾ ಬ್ಯಾರೆ.
ಇದರೊಳಗ ಸಂಪೂರ್ಣ ಕೇಂದ್ರ ತಮ್ಮದೇ ದುಡ್ಡು ಹಾಕಿ ನೇರವಾಗಿ ಜಾರಿ ಮಾಡೋ ಅಂಥಾವು 27 ಸ್ಕೀಮು. ಇನ್ನು ಇದರಾಗ ರಾಜ್ಯದವರದೂ ಪಾಲು ಇರಲಿ ಅಂತೇಳಿ, ರಾಜ್ಯದ ನಿಗರಾಣಿಯಲ್ಲಿ ಮಾಡೋ ಅಂಥಾವು 72. ಇವಕ್ಕ ಬರೋ ಫಂಡು ಬ್ಯಾರೆ.

‘ಅಣಕಾಸು ಹಾಯೋಗ’

ಸಣ್ಣ ವಯಸ್ಸಿನಲ್ಲಿಯೇ ದೊಡ್ಡ ವಕೀಲರಾಗಿ, ಭಾರಿ ಭಯಂಕರ ಭಾಷಣಕಾರರಾಗಿ, ‘ಸೋಷಿಯಲ್ ಮೀಡಿಯಾ ಸ್ಟಾರ್’ ಅನ್ನುವ ಬಿರುದಿಗೆ ಭೀಷಣರಾಗಿ, ಆ ನಂತರ ‘ಇದನ್ನ ಯಾಕ್ ಬಿಡೋದ್, ಟ್ರೈಮಾಡೇ ಬಿಡೋಣ’ ಅಂತ ಸಂಸತ್ ಸದಸ್ಯರಾಗಿಯೇ ಬಿಟ್ಟ ನಾಯಕರೊಬ್ಬರು ಕೇಂದ್ರದ ಹತ್ತಿರ ನಾವು ಯಾಕ್ ಕೇಳ್ ಬೇಕು? ನಮ್ಹತ್ರಾನೆ ಇದೆಯಲ್ಲಾ ಬೇಕಾದಷ್ಟು ದುಡ್ಡು, ಮೋದೀಜೀ 14 ನೇ ಅಣಕಾಸು ಹಾಯೋಗದ ಅಡಿಯಲ್ಲಿ ಬೇಕಷ್ಟು ಕೊಟ್ಟಿದಾರೆ, ಅಲ್ವಾ, ಅಂತಂದ್ರು. ನೆನಪ ಅದನ, ಆ ಡೀಪು ಥಾಟಿನ ಗೂಡಾರ್ಥ ಏನು ಹಂಗಂದರೆ?

ಆ ಆಯೊಗದ ಕತಿ ಮಜಾ ಐತಿ. ಸಂವಿಧಾನದ 280ನೇ ಕಲಮಿನ ಪ್ರಕಾರ ಪ್ರತಿ ಐದು ವರ್ಷಕ್ಕೊಮ್ಮೆ ಒಂದು ಹಣಕಾಸು ಆಯೋಗ ಆಗಬೇಕು. ತಾನು ತೆರಿಗೆದಾರರಿಂದ ಸಂಗ್ರಹಿಸಿದ ಹಣವನ್ನ ರಾಜ್ಯಗಳ ಗ್ರಾಮ ಪಂಚಾಯಿತಿ ಹಾಗೂ ನಗರಸಭೆಗಳಿಗೆ ಎಷ್ಟೆಷ್ಟು ಪ್ರಮಾಣದಾಗ ಎಷ್ಟೆಷ್ಟು ಕಂತಿನೊಳಗ ಕೊಡಬೇಕು ಅಂತ ನಿರ್ಧಾರ ಮಾಡೋದು ಈ ಆಯೋಗ. ಈಗ ರಿಸರ್ವ ಬ್ಯಾಂಕಿನ ಮಾಜಿ ಗವರ್ನರ್ ವೈ ವಿ ರೆಡ್ಡಿ ಅವರ ಸದಾರತ್ತಿನೊಳಗ 14ನೇ ಆಯೋಗ ಹಣಕಾಸು ಸಂಗ್ರಹದ 42 ಶೇಕಡಾ ರಾಜ್ಯಗಳಿಗೆ ಕೊಡಬೇಕು ಅಂತ ಹೇಳಿತು. ಕೇಂದ್ರ ಸರಕಾರ ಒಪ್ಪಿಕೊಂಡಿತು. ಆದರೆ ಆ ರೊಕ್ಕಾನ ನಾವು ಹೇಳಿದಂಗ ಖರ್ಚು ಮಾಡಬೇಕು ಅನ್ನೋ ಷರತ್ತು ಹಾಕಿತು.

ಹಿಂದಿಗಿಂತ ಹಣ ವಿನಿಯೋಗದ ಪ್ರಮಾಣ ಹೆಚ್ಚಾದರೂ ಖರ್ಚು ಮಾಡುವ ಸ್ವಾತಂತ್ರ್ಯದ ಪ್ರಮಾಣ ಕಮ್ಮಿ ಆಯಿತು.

ಹಂಗೂ ಸ್ವಾತಂತ್ರ್ಯ ಯಾರಿಗೆ ಬೇಕಾಗೇದ ಬಿಡ್ರಿ. ರೊಕ್ಕ ಇದ್ದರ ಸಾಕು.
“ತುಮ್ ಆಜಾದ್ ಹೋ ಸೋನೆ ಕಿ ಪಿಂಜರೇ ಮೆ.
ಚೀಖನೆ ಕೀ ಆಜಾದೀ ಹೈ ತುಮ್ಹೆ
ಮಗರ್ ಆವಾಜ್ ನಹೀ ಉಠಾನಾ,”
ಅನ್ನೋ ಶಾಯರಿ ಅದಅಲ್ಲಾ, ಹಂಗ.
ಹಣಕಾಸು ಆಯೋಗದ ಶಿಫಾರಸಿನ ಮೇರೆಗೆ ಬಂದ ಹಣವನ್ನು ನಗರ ಹಾಗೂ ಗ್ರಾಮೀಣ ಪ್ರದೇಶದ ಆಡಳಿತಕ್ಕಾಗಿ ಖರ್ಚು ಮಾಡಬೇಕು. ಇದು ಕಾನೂನು ಹಾಗೂ ಸಂಪ್ರದಾಯ.

ಉತ್ತರ ಕರ್ನಾಟಕದ ಮೇಲೆ 118 ವರ್ಷಗಳಲ್ಲಿ ಬೀಳದಷ್ಟು ಮಳಿ ಬಿದ್ದು, ಕೃಷ್ಣಾ ನದಿಯಲ್ಲಿ ಕೇವಲ ಮೂರು ವಾರದಲ್ಲಿ 600 ಟಿಎಂಸಿ ನೀರು ಬಂದು ಜನರ ಜೀವಾ, ಜೀವನ ಎರಡನ್ನೂ ಹರಿಸಿಕೊಂಡು ಹೋತಲ್ಲಾ, ಅದು ಪ್ರಕೃತಿ ವಿಕೋಪ ಅಲ್ಲಾ.

14 ನೇ ಹಣಕಾಸು ಆಯೋಗದ ದುಡ್ಡನ್ನು ನೆರೆ ಪರಿಹಾರದಂತ ಕೆಲಸಕ್ಕೆ ಬಳಸಿಗೋಬೇಕು, ಕೇಂದ್ರದಿಂದ ಹೆಚ್ಚಿನ ಹಣ ಕೇಳಬಾರದು ಎನ್ನುವ ಫರಮಾನು ಕೊಡಿಸುವ ಯುವ, ಶಿಕ್ಷಿತ, ನಾಯಕರನ್ನು ನಾವು ಆರಿಸಿ ಕಳಿಸಿದ್ದೇವಲ್ಲಾ, ಅದು ವಿಕೋಪ.

ಅದು ನೈಸರ್ಗಿಕವೋ ಕೃತ್ರಿಮವೋ ಅದು ಇನ್ನೊಂದು ದಿನದ ಚರ್ಚೆಯ ವಿಷಯ, ಅಲ್ಲವೇ ಮನೋಲ್ಲಾಸಿನೀ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸತೀಶ್‌ ಜಾರಕಿಹೊಳಿ ಮೇಲಿನ ಇಡಿ ದಾಳಿಯನ್ನು ‘ಚಾರಿತ್ರ್ಯ ಹರಣ’ ಎಂದ ವಿಜಯ್ ಮಲ್ಯ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯವು (ಇಡಿ) ನಡೆಸಿದ ದಾಳಿಯನ್ನು ಮಾಜಿ ಸಂಸದ ಮತ್ತು ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಸಾರ್ವಜನಿಕವಾಗಿ ಚಾರಿತ್ರ್ಯ...

ಒಗ್ಗಟ್ಟಿನ ಮಾತುಗಳಷ್ಟೇ ಸಾಲದು, ಕೃತಿಯಲ್ಲಿರಲಿ ದಿಟ್ಟತನ : ಬ್ರಿಕ್ಸ್ ವಿಚಾರದಲ್ಲಿ ಕೇಂದ್ರಕ್ಕೆ ಕಾಂಗ್ರೆಸ್ ಚಾಟಿ

ಜಾಗತಿಕ ಮಟ್ಟದಲ್ಲಿ ಬ್ರಿಕ್ಸ್ (BRICS) ಒಕ್ಕೂಟದ ಪ್ರಭಾವ ಹೆಚ್ಚುತ್ತಿರುವುದನ್ನು ಸ್ವಾಗತಿಸಿರುವ ಕಾಂಗ್ರೆಸ್, ಈ ಒಕ್ಕೂಟದ ಅಧ್ಯಕ್ಷತೆಯನ್ನು ವಹಿಸಿರುವ ಭಾರತವು ‘ಗ್ಲೋಬಲ್ ಸೌತ್’ (Global South) ರಾಷ್ಟ್ರಗಳ ನಡುವೆ ತನ್ನ ರಾಜತಾಂತ್ರಿಕ ಸ್ಥಾನಮಾನವನ್ನು ಮರುಸ್ಥಾಪಿಸಲು...

9/11 ರ ಹಿಂದಿನ ದಾಳಿಯನ್ನು ಇರಾನ್ ಜೊತೆಗಿನ ಇಂದಿನ ಯುದ್ಧಕ್ಕೆ ಜೋಡಿಸಿದ ಡೊನಾಲ್ಡ್‌ ಟ್ರಂಪ್

"ಸೆಪ್ಟೆಂಬರ್ 11, 2001 ರ ದಾಳಿಯನ್ನು ಯುನೈಟೆಡ್ ಸ್ಟೇಟ್ಸ್ ಎಂದಿಗೂ ಮರೆಯುವುದಿಲ್ಲ. 25 ವರ್ಷಗಳ ನಂತರವೂ ಇರಾನ್ ಮೇಲೆ ದಾಳಿ ಮಾಡುವ ಮೂಲಕ ದೇಶವು ಭಯೋತ್ಪಾದನೆ ವಿರುದ್ಧದ ಯುದ್ಧವನ್ನು ಮುಂದುವರೆಸಿದೆ" ಎಂದು ಅಧ್ಯಕ್ಷ...

SIR ನೋಟಿಸ್ ಮತ್ತು ವಿಚಾರಣೆಯಲ್ಲಿ ಅಕ್ರಮ : ಚು. ಆಯೋಗದ ವಿರುದ್ಧ ನಾಗರಿಕ ಸಂಘಟನೆಗಳಿಂದ 2ನೇ ಎಫ್‌ಐಆರ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಭಾಗವಾಗಿ, ಆಗಸ್ಟ್ 24ರಂದು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದ ಕರಡು ಮತದಾರರ ಪಟ್ಟಿಯನ್ನು ತಿರಸ್ಕರಿಸಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಫ್‌ಐಆರ್ ಬಿಡುಗಡೆ...

‘ಕೊಂಕಣಿ – ಮಾಲ್ವಣಿ ಸಮುದಾಯಗಳು ಹಿಂದುತ್ವದ ಬೆಂಬಲಿಗರು..’; ಮಹಾರಾಷ್ಟ್ರ ಬಿಜೆಪಿ ನಾಯಕ ಅಮೀತ್ ಸತಮ್

ಮುಂಬೈನಲ್ಲಿ ವಾಸಿಸುತ್ತಿರುವ ಕೊಂಕಣಿ ಮತ್ತು ಮಾಲ್ವಣಿ ಸಮುದಾಯಗಳು ಸೇರಿದಂತೆ ಕೊಂಕಣ ಪ್ರದೇಶದ ಜನರು ಹಿಂದುತ್ವವನ್ನು ಬೆಂಬಲಿಸುತ್ತಾರೆ ಎಂದು ಬಿಜೆಪಿ ನಾಯಕ ಅಮೀತ್ ಸತಮ್ ಹೇಳಿದ್ದಾರೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದ ಸಾವಂತವಾಡಿಗೆ ಗಣಪತಿ ಭಕ್ತರಿಗಾಗಿ ಛತ್ರಪತಿ...

SIR! ಸಾಮಾನ್ಯರಿಗೆ ಸಂಕಷ್ಟ; ಗಣ್ಯರಿಗೆ ಮನೆ ಬಾಗಿಲಲ್ಲೇ ಸೇವೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕರ್ನಾಟಕದಲ್ಲಿ ಮುಂದುವರೆದಿರುವ ನಡುವೆಯೇ, ಅದರ ಜಾರಿಯಲ್ಲಿ ಸಾಮಾನ್ಯ ಮತದಾರರು ಮತ್ತು ಪ್ರಭಾವಿ ವ್ಯಕ್ತಿಗಳ ಅನುಭವದ ನಡುವಿನ ವ್ಯತ್ಯಾಸದ ಕುರಿತು ಪ್ರಶ್ನೆಗಳು ಎದ್ದಿವೆ. ಮತದಾರರ ಪಟ್ಟಿಯಲ್ಲಿನ...

ದಲಿತ ಬಾಲಕಿ ನಿಶು ಆಜಾದ್ ಕುಟುಂಬಕ್ಕೆ ನಿಲ್ಲದ ಕಿರುಕುಳ; ಅಸಭ್ಯ ಭಾಷೆ – ಬೆದರಿಕೆ ಸಂದೇಶ ರವಾನೆ

ಸಿಜೆಪಿ ಪ್ರತಿಭಟನೆಯಲ್ಲಿ ಗಮನ ಸೆಳೆದಿದ್ದ ಹದಿನಾಲ್ಕು ವರ್ಷ ವಯಸ್ಸಿನ ದಲಿತ ಸಮುದಾಯದ ಕಂಟೆಂಟ್ ಕ್ರಿಯೇಟರ್ ನಿಶು ಆಜಾದ್ ಮತ್ತು ಅವರ ಕುಟುಂಬಕ್ಕೆ ಮೊಬೈಲ್‌ ಫೋನ್‌ ಮೂಲಕ ನಿರಂತರ ಕಿರುಕುಳ ಸಂದೇಶ ಬರುತ್ತಿವೆ ಎಂದು...

ಉತ್ತರ ಪ್ರದೇಶ| 8ನೇ ತರಗತಿಯ ದಲಿತ ವಿದ್ಯಾರ್ಥಿಗೆ ಶಿಕ್ಷಕಿಯಿಂದ ಜಾತಿ ತಾರತಮ್ಯ

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯೊಬ್ಬರು ಶಿಕ್ಷಕಿಯಿಂದ ಜಾತಿ ಆಧಾರಿತ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿದ್ದಾನೆ. ಕೃಷ್ಣ ಎಂದು ಗುರುತಿಸಲ್ಪಟ್ಟ ಈ ವಿದ್ಯಾರ್ಥಿ ಪರಿಶಿಷ್ಟ...

ಯೆಮನ್ | ಸಂಪೂರ್ಣ ರೆಡ್ ಸೀ ಕರಾವಳಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಹೌತಿ ಪಡೆ : ಮಂದೇಬ್ ಜಲಸಂಧಿ ಮೇಲೆಯೂ ಹಿಡಿತ ಸಾಧಿಸಿರುವುದಾಗಿ ವರದಿ

ಮಹತ್ವದ ಬೆಳವಣಿಗೆಯಲ್ಲಿ, ಹೌತಿ ಬಂಡುಕೋರರು ಯೆಮನ್‌ನ ಇಡೀ ಕೆಂಪು ಸಮುದ್ರದ (ರೆಡ್ ಸೀ) ಕರಾವಳಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇರಾನ್ ಬೆಂಬಲಿತ ಹೌತಿ ಸಶಸ್ತ್ರ ಪಡೆಗಳು ಯೆಮನ್ ಸರ್ಕಾರದ ನಿಯಂತ್ರಣದಲ್ಲಿದ್ದ...

ಭಾರತದ ಚುನಾವಣಾ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿದೆ: ಸಿಇಸಿ ಜ್ಞಾನೇಶ್ ಕುಮಾರ್

ಭಾರತದ ಚುನಾವಣಾ ಪ್ರಕ್ರಿಯೆಯು ವಿಶ್ವದಲ್ಲೇ ಅತ್ಯಂತ ಪಾರದರ್ಶಕವಾದದ್ದು ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ (ಸೆ.11) ಹೇಳಿದ್ದಾರೆ. ಗುಜರಾತ್ ವಿಶ್ವವಿದ್ಯಾಲಯದ ಅಟಲ್ ಕಲಾಂ ಸಭಾಂಗಣದಲ್ಲಿ ನಡೆದ 'ಮತಗಟ್ಟೆ ಮಟ್ಟದ ಅಧಿಕಾರಿಗಳೊಂದಿಗೆ...