Homeಕರ್ನಾಟಕಒಂದು ದಿನ, ಮೂರು ಪಾರ್ಟಿ, ಆಯಾರಾಮ್ ಗಯಾರಾಮ್ : ಪಕ್ಷಾಂತರ ಎಂಬ ಅಸಹ್ಯದ ಇತಿಹಾಸ

ಒಂದು ದಿನ, ಮೂರು ಪಾರ್ಟಿ, ಆಯಾರಾಮ್ ಗಯಾರಾಮ್ : ಪಕ್ಷಾಂತರ ಎಂಬ ಅಸಹ್ಯದ ಇತಿಹಾಸ

ಸದ್ಯ ಸದನದಲ್ಲಿ ಪಕ್ಷಾಂತರ ಮತ್ತು 30-40 ಕೋಟಿಗಳ ಆಪರೇಷನ್ ಕಮಲದ ಆಫರ್ ಕುರಿತಾಗಿಯೇ ಚರ್ಚೆ-ಗದ್ದಲ ಸಂಭವಿಸುತ್ತಿದೆ. ಈ ಪಕ್ಷಾಂತರ ಪಿಡುಗಿನ ಇತಿಕಾಸ ಇಲ್ಲಿದೆ...

- Advertisement -
- Advertisement -

ಪಕ್ಷಾಂತರ ಎಂಬ ಅಸಹ್ಯವೂ, ಆಪರೇಷನ್ ಕಮಲ ಎಂಬ ಬಿಜೆಪಿ ದಂಧೆಯೂ…

ಸದ್ಯ ಸದನದಲ್ಲಿ ಪಕ್ಷಾಂತರ ಮತ್ತು 30-40 ಕೋಟಿಗಳ ಆಪರೇಷನ್ ಕಮಲದ ಆಫರ್ ಕುರಿತಾಗಿಯೇ ಚರ್ಚೆ-ಗದ್ದಲ ಸಂಭವಿಸುತ್ತಿದೆ. ಈ ಹೊತ್ತಿನಲ್ಲಿ ಪಕ್ಷಾಂತರದ ಪಿಡುಗು ಬೆಳೆದ ಬಂದ ಅಸಹ್ಯ ಇತಿಹಾಸವನ್ನು ಇಲ್ಲಿ ನೀಡಿದ್ದೇವೆ.

ನಿನ್ನೆ (ಗುರುವಾರ) ಸದನದಲ್ಲಿ ಸಿದ್ದರಾಮಯ್ಯನವರು ವಿಶ್ವಾಸ ಮತದ ಮೇಲೆ ಮಾತನಾಡುತ್ತ, ಕ್ರಿಯಾಲೋಪ ಎತ್ತುವ ಮೊದಲು ಪಕ್ಷಾಂತರ ಪಿಡುಗಿನ ಇತಿಹಾಸದ ಒಂದು ವಿಲಕ್ಷಣ, ವಿಕೃತ ಪ್ರಸಂಗವನ್ನು ಜನರ ಎದರು ಇಟ್ಟರು. ‘ಒಂದೇ ದಿನದಲ್ಲಿ ಮೂರು ಬಾರಿ ವಿವಿಧ ಪಾರ್ಟಿಗಳಲ್ಲಿ ಕಾಣಿಸಿಕೊಂಡ ಗಯಾಲಾಲ್’ ಎಂಬ ಶಾಸಕನ ಕುರಿತು ಅವರು ಪ್ರಸ್ತಾಪಿಸಿದ್ದರು.

ಈ ಗಯಾಲಾಲ್‍ನ ಪ್ರಸಂಗವನ್ನು ಇಲ್ಲಿ ನೀಡುತ್ತಲೇ 60ರ ದಶಕದ ಅಂತ್ಯದಲ್ಲಿ ರಾಜಕಾರಣವು ಪಕ್ಷಾಂತರ ಪರ್ವದ ಕಾಲಘಟ್ಟವಾಗಿದ್ದ ಇತಿಹಾಸವನ್ನು ಮೆಲುಕು ಹಾಕೋಣ. ಪಕ್ಷಾಂತರ ನಿಷೇಧ ಕಾಯ್ದೆ ಇದ್ದರೂ, ಸುಪ್ರಿಂಕೋರ್ಟಿನ ಅಭಯದಿಂದಾಗಿ ಸದನಕ್ಕೆ ಬರದೇ ಮುಂಬೈಯಲ್ಲಿರುವ ಶಾಸಕರ ಸ್ವೇಚ್ಛಾಚಾರದ ಹಿನ್ನೆಲೆಯಲ್ಲಿ ಇದನ್ನೆಲ್ಲ ಅರಿಯುವುದು ಅಗತ್ಯ ಎನಿಸುತ್ತದೆ.

ಒಂದು ದಿನ, ಮೂರು ಪಾರ್ಟಿ, ಆಯಾರಾಮ್ ಗಯಾರಾಮ್
ಗಯಾಲಾಲ್ 15 ದಿನದ ಬಿರುಸಿನ ಚಟುವಟಿಕೆಯಲ್ಲಿ ಮೂರು ಪಕ್ಷಗಳಲ್ಲಿ ಕಾಣಿಸಿಕೊಂಡಿದ್ದರು. ಅದೆಲ್ಲಕ್ಕಿಂತ ಮುಖ್ಯವಾಗಿ ಒಂದೇ ದಿನದ ಮುಂಜಾನೆ ಒಂದು ಪಕ್ಷದಲ್ಲಿದ್ದ ಅವರು ಅಂದು ಮತ್ತೆರಡು ಸಲ ಪಕ್ಷ ಬದಸಲಿಸುವ ಮೂಲಕ ಒಂದೇ ದಿನ ಮೂರು ಪಾರ್ಟಿಗಳಲ್ಲಿ ಕಾಣಿಸಿಕೊಂಡು ಪಕ್ಷಾಂತರದ ವಿಕೃತ ಇತಿಹಾಸದಲ್ಲಿ ‘ಮೈಲಿ(ಗೆ)ಗಲ್ಲು’ ಆಗಿ ಉಳಿದು ಬಿಟ್ಟಿದ್ದಾರೆ.

ಈ ಪುಣ್ಯಾತ್ಮನ ಕಾರಣಕ್ಕೆ ‘ಆಯಾರಾಮ್ ಗಯಾರಾಮ್’ ಎಂಬ ನುಡಿಗಟ್ಟು ಚಾಲ್ತಿಗೆ ಬಂದು ಪಕ್ಷದಿಂದ ಪಕ್ಷ ಬದಲಿಸುವವರನ್ನು ವ್ಯಂಗ್ಯ ಮಾಡಲು ಈ ನುಡಿಗಟ್ಟು ಇನ್ನೂ ಬಳಕೆಯಲ್ಲಿದೆ. ‘ಆಯಾರಾಮ್ ಗಯಾರಾಮ್’ ಕುರಿತಾಗಿಯೇ ಬಂದ ಜೋಕುಗಳು, ಕಾರ್ಟೂನುಗಳಿಗೆ ಲೆಕ್ಕವಿಲ್ಲ!

1967ರಲ್ಲಿ ಒಂದು ದಿನ, ತಾನು ಹರ್ಯಾಣ ವಿಧಾನಸಭೆಗೆ ಶಾಸಕನಾಗಿ ಆರಿಸಿಬಂದಿದ್ದ ಕಾಂಗ್ರೆಸ್ ಪಕ್ಷದಿಂದ ಜನತಾ ಪಾರ್ಟಿಗೆ (ಉನೈಟೆಡ್ ಫ್ರಂಟ್ ಭಾಗವಾಗಿತ್ತು), ನಂತರ ಮತ್ತೆ ಸ್ವಲ್ಪ ತಾಸುಗಳಲ್ಲೇ ಮರಳಿ ತವರು ಪಕ್ಷ ಕಾಂಗ್ರೆಸ್‍ಗೆ…. ಕೇವಲ ಒಂಭತ್ತು ತಾಸುಗಳ ಅವಧಿಯಲ್ಲಿ ಮತ್ತೆ ಜನತಾ ಪಾರ್ಟಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಗಯಾಲಾಲ್ ಪಕ್ಷಾಂತರ ಪರ್ವ ಎಂಬ ಪದಕ್ಕೆ ಅನ್ವರ್ಥವಾಗಿ ಉಳಿದುಬಿಟ್ಟಿದ್ದಾರೆ.

ಆದರೆ, ಇಲ್ಲಿ ನಮ್ಮದೊಂದು ಪ್ರಶ್ನೆಯಿದೆ
ನಿನ್ನೆ ಸಿದ್ದರಾಮಯ್ಯರು ಪ್ರಸ್ತಾಪಿಸಿದಂತೆ ಬಹಳಷ್ಟು ಸದನಗಳಲ್ಲಿ ವಿಶ್ವಾಸಮತದ ಚರ್ಚೆ ನಡೆದಾಗ, ಪಕ್ಷಾಂತರದ ಆಟ ಸಾಗಿದಾಗ ಗಯಾಲಾಲ್ ಹೆಸರು ಪ್ರಸ್ತಾಪಿಸಿ ವ್ಯಂಗ್ಯ ಮಾಡಲಾಗುತ್ತದೆ, ಅದೇನೋ ಸರಿ. ಆದರೆ, ಅವತ್ತು ಗಯಾಲಾಲ್‍ರನ್ನು ಫುಟ್‍ಬಾಲ್‍ನಂತೆ ಆಟ ಆಡಿದ್ದು ಕಾಂಗ್ರೆಸ್ ಮತ್ತು ಜನತಾ ಪಾರ್ಟಿಗಳು.

ಸ್ವಾತಂತ್ರ್ಯಾ ನಂತರ ಸಂಸತ್ ಮತ್ತು ವಿಧಾನಸಭೆಗಳಲ್ಲಿ ಅಧಿಕಾರ ಹಿಡಿಯುತ್ತಲೇ ಬಂದಿದ್ದ ಕಾಂಗ್ರೆಸ್‍ಗೆ 1967ರಲ್ಲಿ ಜನ ದೊಡ್ಡ ಪಾಠವನ್ನೇ ಕಲಿಸಿದ್ದರು. ಅಧಿಕಾರ ಉಂಡೂ ಉಂಡೂ ಮೈಯುಂಡು ಬಿಟ್ಟಿದ್ದ ಕಾಂಗ್ರೆಸ್ ಆಗ ಚಡಪಡಿಸತೊಡಗಿತ್ತು. ಅದರ ಪರಿಣಾಮವಾಗಿಯೇ ದೇಶಾದ್ಯಂತ ಕಾಂಗ್ರೆಸ್ ಬೇರೆ ಚಿಹ್ನೆಗಳಿಂದ ಗೆದ್ದವರನ್ನು ಬೇಟೆಯಾಡಿ, ಅವಕಾಶವಾದಿ ರಾಜಕಾರಣದ ಮೂಲಕ ವಿವಿಧ ರಾಜ್ಯಗಳಲ್ಲಿ ಅಧಿಕಾರ ಹಿಡಿಯುವ ಸಂಚು ಮಾಡಿತ್ತು. ಅದರ ಪರಿಣಾಮವಾಗಿ ಹಲವು ಕಡೆ ಕಾಂಗ್ರೆಸ್ ಪಕ್ಷವೇ ಹೋಳಾಗಿತ್ತು.

1967: ವಿ.ಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್‍ಗೆ ಪೆಟ್ಟು
1967ರಲ್ಲಿ 16 ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆದು ಕಾಂಗ್ರೆಸ್ ಎಂಟು ರಾಜ್ಯಗಳಲ್ಲಿ ಬಹುಮತ ಕಳೆದುಕೊಂಡಿತ್ತು ಮತ್ತು ಏಳರಲ್ಲಿ ಸರ್ಕಾರ ರಚಿಸಲು ವಿಫಲವಾಗಿತ್ತು. ಕಾಂಗ್ರೆಸ್‍ಗೆ ಅದು ಮರ್ಮಾಘಾತದ ವಿಷಯವೇ ಆಗಿತ್ತು. ಆ ಸಂದರ್ಭವೇ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಅಡಿಯಲ್ಲಿ ಸಮ್ಮಿಶ್ರ ಸರ್ಕಾರಗಳ ಯುಗಕ್ಕೆ ನಾಂದಿ ಹಾಡಿತು. ಇದು ದೊಡ್ಡ ಪ್ರಮಾಣದ ಪಕ್ಷಾಂತರವನ್ನೂ ಉದ್ಘಾಟನೆ ಮಾಡಿತು.

1967-71ರ ನಾಲ್ಕು ವರ್ಷಗಳ ಅವಧಿಯಲ್ಲಿ ಸಂಸತ್ತಿನಲ್ಲಿ 142 ಪಕ್ಷಾಂತರಗಳು ಮತ್ತು ವಿವಿಧ ರಾಜ್ಯ ವಿಧಾನಸಭೆಗಳಲ್ಲಿ 1969 ಪಕ್ಷಾಂತರ ಪ್ರಕರಣಗಳು ಸಂಭವಿಸಿಬಿಟ್ಟವು! ಇದೆ ದೇಶ ಕಂಡ ಅಸಹ್ಯ ಪಕ್ಷಾಂತರ ಪರ್ವದ ಕಾಲಾವಧಿ. ಇದರ ಪರಿಣಾಮವಾಗಿ 32 ಸರ್ಕಾರಗಳು ಲಗಾಟಿ ಹೊಡೆದವು ಮತ್ತು 212 ಪಕ್ಷಾಂತರಿಗಳಿಗೆ ಸಚಿವ ಸ್ಥಾನಗಳು ಲಭಿಸಿದ್ದವು! (ಕಳೆದ ಶುಕ್ರವಾರ ಈ ಅಂಕಿಅಂಶಗಳನ್ನು ಸ್ಪೀಕರ್ ರಮೇಶಕುಮಾರ್ ಸದನದಲ್ಲಿ ಉಲ್ಲೇಖಿಸಿದ್ದರು).

ಹರ್ಯಾಣದಲ್ಲಿ ಕಾಂಗ್ರೆಸ್ ಸರ್ಕಾರ ಬುಡಮೇಲಾಯಿತು. ಕಾಂಗ್ರೆಸ್‍ನ ಭಿನ್ನಮತೀಯರ ಗುಂಪು ವಿಪಕ್ಷದೊಂದಿಗೆ ಸೇರಿ ಸರ್ಕಾರ ರಚಿಸಿತ್ತು. ಈ ಕಾಲಾವಧಿಯಲ್ಲಿಯೇ ಗಯಾಲಾಲ್ ಪ್ರಸಂಗ ನಡೆದಿತ್ತಷ್ಟೇ.

1984ರಲ್ಲಿ ಇಂದಿರಾ ಗಾಂಧಿ ಅವರ ಹತ್ಯೆಯಾದ ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಬಹುದೊಡ್ಡ ಬಹುಮತ ಸಿಕ್ಕಿ, ರಾಜೀವ್ ಗಾಂಧಿ ಅವರಿಗೆ ಪ್ರಧಾನಮಂತ್ರಿಯಾದರು. ಅಂದು ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ್ದ ರಾಷ್ಟ್ರಪತಿ ಅವರು ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ತರುತ್ತೇವೆಂದು ಪ್ರಸ್ತಾಪ ಮಾಡಿದ್ದರು. 1985ರಲ್ಲಿ ಪಕ್ಷಾಂತರ ಕಾಯ್ದೆ ಜಾರಿಗೆ ಬಂತು. ಆಗ ಮೂರನೇ ಒಂದು ಭಾಗದಷ್ಟು ಕಡಿಮೆ ಶಾಸಕರು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ವಲಸೆ ಹೋದಲ್ಲಿ ಅವರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಸ್ಪೀಕರ್ ಅಥವಾ ರಾಜ್ಯಸಭಾ ಮತ್ತು ವಿಧಾನಪರಿಷತ್ತು ಅಧ್ಯಕ್ಷರು ಅವರನ್ನು ಅನರ್ಹಗೊಳಿಸಬಹುದು ಎಂಬ ನಿಯಮವನ್ನು ತಂದು ಸಂವಿಧಾನದ 10ನೇ ಶೆಡ್ಯುಲ್‍ನಲ್ಲಿ ಸೇರಿಸಲಾಯಿತು. ಹೀಗೆ ಒಂದು ಸಾಂವಿಧಾನಿಕ ತಿದ್ದುಪಡಿಯನ್ನೇ ತರಲಾಯಿತು.

ಇದು ಪಕ್ಷಾಂತರವನ್ನು ಕಡಿಮೆ ಮಾಡಿತೆ ಅಥವಾ ತಡೆಗಟ್ಟಿತೆ ಎಂದು ನೋಡುವುದಾದರೆ ಅದು ಹಾಗೆ ಆಗಲಿಲ್ಲ. ಬದಲಿಗೆ ಮೂರನೇ ಒಂದು ಭಾಗದಷ್ಟು ಶಾಸಕರು ಒಟ್ಟಿಗೆ ಸೇರಿ ವಲಸೆ ಹೊಗಲಿಕ್ಕೆ ಆರಂಭ ಮಾಡಿದರು. ನಂತರ 2003ರಲ್ಲಿ ಅಟಲ್ ಬಿಹಾರಿ ವಾಜಪೆಯಿ ಪ್ರಧಾನಮಂತ್ರಿಯಾಗಿದ್ದಾಗ ಪುನಃ ಪಕ್ಷಾಂತರ ನಿಷೇಧ ಕಾಯ್ದೆ ಚರ್ಚೆಗೆ ಬಂತು. ಆಗ ಮೂರನೆ ಒಂದು ಭಾಗವಲ್ಲ, ಮೂರನೆ ಎರಡು ಭಾಗದಷ್ಟು ಶಾಸಕರು ಸಂಸದರು ಪಕ್ಷಾಂತರ ಮಾಡಿದ್ದಲ್ಲಿ ಅದನ್ನು ವಿಲೀನ ಎಂದು ಪರಿಗಣಿಸಲಾಗುತ್ತದೆ. ಹಾಗೆ ವಿಲೀನ ಮಾಡಿದಾಗ ಹಳೆ ಪಕ್ಷದಲ್ಲಿ ಉಳಿಯುವವರು ಅವರ ಪಾಡಿಗೆ ಇರುತ್ತಾರೆ ಮತ್ತು ಪಕ್ಷಾಂತರ ಮಾಡಿದವರೂ ಸಹ ಅನರ್ಹರಾಗುವುದಿಲ್ಲ ಎಂಬ ತಿದ್ದುಪಡಿಯನ್ನು ಸಂವಿಧಾನದ 91ನೇ ತಿದ್ದುಪಡಿ ಮಾಡಿ ಮುಂದಿಡಲಾಯಿತು.

2008ರಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯನ್ನೆ ಅಣಕಿಸುವಂತೆ ಕರ್ನಾಟಕದಲ್ಲಿ ಆಪರೇಷನ್ ಕಮಲ ಎಂಬ ಹೇಸಿಗೆ ರಾಜಕಾರಣ ಶುರುವಾಗಿತು. ಅಂದರೆ ಅವರು ಕೋಟಿ ಕೋಟಿ ಹಣ ಮತ್ತು ಮಂತ್ರಿಗಿರಿಯ ಆಸೆಗೆ ಮೊದಲು ಅವರು ತಮ್ಮ ಪಕ್ಷಕ್ಕೆ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ನಂತರ ಇನ್ನೊಂದು ಪಕ್ಷವನ್ನು ಸೇರಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಮಂತ್ರಿಯಾಗುವುದು. ಅದನ್ನು ಉದ್ಘಾಟಿಸಿದ ಬಿಜೆಪಿಯೇ ಈಗ ಮತ್ತೆ 15 ಶಾಸಕರನ್ನು ಮುಂಬೈಯಲ್ಲಿ ‘ಹಿಡಿದಿಟ್ಟು’ ಅಧಿಕಾರದ ಹಪಾಹಪಿಯಲ್ಲಿ ತೊಳಲಾಡುತ್ತಿದೆ, ಇನ್ನೊಂದು ಕಡೆ ಅರ್ಜೆಂಟಾಗಿ ಅಧಿಕಾರ ಸಿಗಲಿದೆ ಎಂಬ ಆಶೆಯಲ್ಲಿ ಖುಷಿ ಅನುಭವಿಸುತ್ತಿದೆ…..

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಮತಾ ಬ್ಯಾನರ್ಜಿಗೆ ಬಿಗ್ ಶಾಕ್: ನೇಮಕಗೊಂಡ ತಿಂಗಳಲ್ಲೇ ಟಿಎಂಸಿ ರಾಜ್ಯಾಧ್ಯಕ್ಷೆ ಚಂದ್ರಿಮಾ ಭಟ್ಟಾಚಾರ್ಯ ರಾಜೀನಾಮೆ

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಹಿನ್ನೆಲೆಯಲ್ಲಿ, ಅತ್ಯಂತ ನಿರ್ಣಾಯಕವಾದ ಸಾಂಸ್ಥಿಕ ಜವಾಬ್ದಾರಿಗೆ ನೇಮಕಗೊಂಡ ಕೇವಲ ಒಂದು ತಿಂಗಳ ಒಳಗಾಗಿಯೇ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ರಾಜ್ಯ ಘಟಕದ ಅಧ್ಯಕ್ಷೆ ಚಂದ್ರಿಮಾ...

ಜಿಲ್ಲಾ ನ್ಯಾಯಾಧೀಶೆ ತಬಸ್ಸುಮ್ ಖಾನ್‌ಗೆ ಬಲಪಂಥೀಯರಿಂದ ಬೆದರಿಕೆ : ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್

ನರ್ಮದಾಪುರಂ ಜಿಲ್ಲಾ ನ್ಯಾಯಾಧೀಶರಾದ ತಬಸ್ಸುಮ್ ಖಾನ್ ಅವರು ತಮ್ಮ ಕರ್ತವ್ಯ ನಿರ್ವಹಣೆಯ ಕಾರಣಕ್ಕಾಗಿ ಬೆದರಿಕೆ ಮತ್ತು ನಿಂದನೆಗೆ ಒಳಗಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಮಧ್ಯಪ್ರದೇಶ ಹೈಕೋರ್ಟ್, ಅವರಿಗೆ ಸೂಕ್ತ ರಕ್ಷಣೆ ನೀಡುವಂತೆ ಮತ್ತು ಅಪರಾಧಿಗಳನ್ನು ಪತ್ತೆಹಚ್ಚಲು ಕೈಗೊಂಡಿರುವ...

ಎಸ್ಐಆರ್ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗದ ಪಕ್ಷಪಾತದ ಬಗ್ಗೆ ಸಿಜೆಐಗೆ ಪ್ರತಿಪಕ್ಷಗಳಿಂದ ಪತ್ರ: ‘ಪ್ರಜಾಪ್ರಭುತ್ವ ಅಪಾಯದಲ್ಲಿದೆ’ ಎಂದು ಆರೋಪ

ದೇಶದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರತೀಯ ಚುನಾವಣಾ ಆಯೋಗವು (ECI) ಪಕ್ಷಪಾತ ಧೋರಣೆ ತಳೆದಿದೆ ಎಂದು ಆರೋಪಿಸಿ, 24 ವಿರೋಧ ಪಕ್ಷಗಳ ನಾಯಕರು ಹಾಗೂ ಒಬ್ಬರು ಸ್ವತಂತ್ರ...

ಬೆಂಗಳೂರು| ಕೆ.ಆರ್. ವೃತ್ತದ ಬಳಿ ಬಿಎಂಟಿಸಿ ಬಸ್‌ಗಳ ನಡುವೆ ಅಪಘಾತ; ಹಲವರಿಗೆ ಗಾಯ

ಇಂದು ಬೆಳಿಗ್ಗೆ ವಿಧಾನಸೌಧದಿಂದ ಸ್ವಲ್ಪ ದೂರದಲ್ಲಿರುವ ಜನನಿಬಿಡ ಕೆ.ಆರ್. ವೃತ್ತ ಜಂಕ್ಷನ್ ಬಳಿ ಎರಡು ಬಿಎಂಟಿಸಿ ಬಸ್‌ಗಳು ಡಿಕ್ಕಿ ಹೊಡೆದ ಪರಿಣಾಮ ಹಲವಾರು ಪ್ರಯಾಣಿಕರು ಗಾಯಗೊಂಡರು. ಡಿಕ್ಕಿಯ ಪರಿಣಾಮ ಬಸ್ಸಿನೊಳಗೆ ಹಲವಾರು ಪ್ರಯಾಣಿಕರು...

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಲೋಪ ಆರೋಪ; ಕೋಲಾರ-ಮೈಸೂರಿನ ಅಧಿಕಾರಿಗಳಿಗೆ ನೋಟಿಸ್ ಜಾರಿ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಗೆ ಸಂಬಂಧಿಸಿದಂತೆ, ಕೋಲಾರ ಮತ್ತು ಮೈಸೂರಿನಲ್ಲಿ ನಡೆದ ಕಾರ್ಯವಿಧಾನದಲ್ಲಿ ನಿಯಮ ಉಲ್ಲಂಘನೆ ಆರೋಪ ಕೇಳಿಬಂದೆ. ಕೋಲಾರದಲ್ಲಿ, ಪರಿಷ್ಕರಣಾ ಕಾರ್ಯದ ಸಮಯದಲ್ಲಿ ಕರ್ತವ್ಯ...

ಸೂರತ್ ಧ್ವಂಸ ಕಾರ್ಯಾಚರಣೆ ಸಂಪೂರ್ಣ ‘ಕಾನೂನುಬಾಹಿರ’: 100 ನಿರಾಶ್ರಿತ ಕುಟುಂಬಗಳ ಪುನರ್ವಸತಿಗೆ ಗುಜರಾತ್ ಹೈಕೋರ್ಟ್ ಆದೇಶ

ಅಹಮದಾಬಾದ್: ಗುಜರಾತ್‌ನ ಸೂರತ್‌ನ ನಾಸಿರ್ ನಗರದಲ್ಲಿ ನಡೆದ ಮನೆಗಳ ಧ್ವಂಸ ಕಾರ್ಯಾಚರಣೆಯನ್ನು ತೀವ್ರವಾಗಿ ಖಂಡಿಸಿರುವ ಗುಜರಾತ್ ಹೈಕೋರ್ಟ್, ಇದನ್ನು "ಸಂಪೂರ್ಣ ಕಾನೂನುಬಾಹಿರ" ಎಂದು ಕರೆದಿದೆ. ಮೇ 30 ರಂದು ನಡೆದ ಈ "ಅನಧಿಕೃತ"...

ವಿದ್ಯುತ್ ಖಾಸಗೀಕರಣ ವಿರುದ್ದದ ಹೋರಾಟಕ್ಕೆ ಗೆಲುವು: ಅರ್ಜಿ ಹಿಂಪಡೆದ ಟಾಟಾ ಪವರ್ ಕಂಪನಿ

ರಾಜ್ಯದಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಖಾಸಗೀಕರಣದ ಹೆಜ್ಜೆ ಇಡಲು ಮುಂದಾಗಿದ್ದ ಟಾಟಾ ಪವರ್ ಕಂಪನಿಗೆ ಭಾರಿ ಹಿನ್ನಡೆಯಾಗಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (KERC) ಮುಂದೆ ರಾಜ್ಯದ 19 ಕಂದಾಯ ಜಿಲ್ಲೆಗಳಿಗೆ ಸಂಬಂಧಿಸಿದಂತೆ ತಾನು...

SIR: ಮತದಾರರ ಮನೆಗೆ ಹೋಗದೆ ಕಚೇರಿಯಲ್ಲೇ ಕುಳಿತು ಫಾರ್ಮ್ ವಿತರಣೆ ಆರೋಪ, BLO ಗಳಿಗೆ ಎಚ್ಚರಿಕೆ ನೀಡಿದ ಆಯೋಗ

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬಂದ ಬೆನ್ನಲ್ಲೇ, ರಾಜ್ಯ ಚುನಾವಣಾ ಆಯೋಗವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮತದಾರರ ಮನೆ-ಮನೆಗೆ ಭೇಟಿ...

ಅಳುವ ಕಂದಮ್ಮಗಳನ್ನು ವಾಷಿಂಗ್ ಮೆಷಿನ್‌ನಲ್ಲಿ ಕೂಡಿಹಾಕ್ತಿದ್ದ ಇಬ್ಬರು ಕೇರ್‌ಟೇಕರ್ ಅರೆಸ್ಟ್

ಸಿಲಿಕಾನ್ ಸಿಟಿಯ ಬ್ರೂಕ್‌ಫೀಲ್ಡ್‌ನಲ್ಲಿರುವ ಪ್ರಮುಖ ಐಟಿ ಸಂಸ್ಥೆ 'ಕ್ಯಾಪ್‌ಜೆಮಿನಿ' ಕ್ಯಾಂಪಸ್‌ನ ಡೇ-ಕೇರ್ ಸೆಂಟರ್‌ನಲ್ಲಿ ಪುಟ್ಟ ಕಂದಮ್ಮಗಳನ್ನು ಬಾತ್‌ರೂಮ್ ಹಾಗೂ ವಾಷಿಂಗ್ ಮೆಷಿನ್‌ಗಳಲ್ಲಿ ಕೂಡಿಹಾಕಿ ವಿಕೃತಿ ಮೆರೆದಿದ್ದ ಪ್ರಕರಣದಲ್ಲಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಪ್ರಕರಣದ...

“ನಾಗರಿಕರು ಸರ್ಕಾರದ ಗುಲಾಮರಲ್ಲ”: ಸಿಎಎ, ಜ್ಞಾನವಾಪಿ ವಿರೋಧಿ ಪ್ರತಿಭಟನೆ ಸಂಬಂಧ ಎಸ್‌ಡಿಪಿಐ ನಾಯಕನ ಗಡಿಪಾರು ಪ್ರಶ್ನಿಸಿದ ಬಾಂಬೆ ಹೈಕೋರ್ಟ್

“ದೇಶದ ನಾಗರಿಕರು ಸರ್ಕಾರದ ಗುಲಾಮರಲ್ಲ. ಕೇವಲ ಸರ್ಕಾರದ ನಿರ್ಧಾರಗಳನ್ನು ವಿರೋಧಿಸುವುದು ಅಥವಾ ಆಡಳಿತ ವ್ಯವಸ್ಥೆಯ ವಿರುದ್ಧ ಘೋಷಣೆಗಳನ್ನು ಕೂಗುವುದು ಒಬ್ಬ ನಾಗರಿಕನನ್ನು ಗಡಿಪಾರು ಮಾಡಲು ಕಾನೂನಾತ್ಮಕ ಕಾರಣವಾಗಲಾರದು,” ಎಂದು ಬಾಂಬೆ ಹೈಕೋರ್ಟ್‌ ಐತಿಹಾಸಿಕ...