Homeಮುಖಪುಟಜಮ್ಮುಕಾಶ್ಮೀರದ ನ್ಯಾಯಾಲಯಗಳಿಗೆ ’ಇ-ಸಂಪರ್ಕ’ ಅಳವಡಿಸುವಂತೆ ಹೈಕೋರ್ಟ್ ನಿರ್ದೇಶನ

ಜಮ್ಮುಕಾಶ್ಮೀರದ ನ್ಯಾಯಾಲಯಗಳಿಗೆ ’ಇ-ಸಂಪರ್ಕ’ ಅಳವಡಿಸುವಂತೆ ಹೈಕೋರ್ಟ್ ನಿರ್ದೇಶನ

- Advertisement -
- Advertisement -

ಕೊರೊನಾ ಲಾಕ್‌ಡೌನ್ ಸಮಯದಲ್ಲಿ ನ್ಯಾಯಾಲಯಗಳಿಗೆ “ಇ-ಸಂಪರ್ಕ” ದ ಮಹತ್ವವನ್ನು ಜಮ್ಮು ಕಾಶ್ಮೀರ ಹೈಕೋರ್ಟ್ ಬುಧವಾರ ಎತ್ತಿ ಹಿಡಿದಿದೆ.

ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಮತ್ತು ನ್ಯಾಯಮೂರ್ತಿ ರಜನೇಶ್ ಓಸ್ವಾಲ್ ಅವರನ್ನೊಳಗೊಂಡ ನ್ಯಾಯಪೀಠ, “ನ್ಯಾಯಾಲಯಗಳಿಗೆ ಇ-ಸಂಪರ್ಕ ಲಭ್ಯತೆಯು ನಾಗರಿಕರಿಗೆ ನ್ಯಾಯ ದೊರಕಿಸಿಕೊಡುವ ವಿಷಯವಾಗಿದೆ. ಇದು ಮೂಲಭೂತ ಹಕ್ಕು ಮತ್ತು ಅದನ್ನು ಯಾವುದೇ ರೀತಿಯಲ್ಲಿ ತಡೆಯಲು ಸಾಧ್ಯವಿಲ್ಲ. ”

“ಕೊರೊನಾ ಸಾಂಕ್ರಾಮಿಕ ಮತ್ತು ಅದರ ಪರಿಣಾಮವಾಗಿ ಉಂಟಾಗುವ ನಿರ್ಬಂಧಗಳ ಪ್ರಸ್ತುತ ಕಾಲದಲ್ಲಿ, ಇ-ಸಂಪರ್ಕದ ಲಭ್ಯತೆ ಇಲ್ಲದಿದ್ದರೆ ಯಾವುದೇ ನ್ಯಾಯಾಲಯವು ಅಗತ್ಯ ನ್ಯಾಯಾಂಗ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಿಲ್ಲ” ಎಂದು ಅದು ಹೇಳಿದೆ.

ನ್ಯಾಯಾಲಯವು ಈಗ ಕೇಂದ್ರಾಡಳಿತ ಪ್ರದೇಶ ಆಗಿರುವ ಜಮ್ಮುಕಾಶ್ಮೀರದ ಲಾಕ್‌ಡೌನ್ ಪರಿಸ್ಥಿತಿಯ ಕುರಿತು ಹಲವಾರು ಅರ್ಜಿಗಳನ್ನು ಆಲಿಸುತ್ತಿತ್ತು. ವೈದ್ಯರಿಗೆ ಪಿಪಿಇಗಳನ್ನು ಪೂರೈಸುವುದು ಹಾಗೂ ಆರೋಗ್ಯ ಕಾರ್ಯಕರ್ತರ ಸುರಕ್ಷತೆ, ದಾರಿತಪ್ಪಿ ದನಕರುಗಳು ಹಾಗೂ ಪ್ರಾಣಿಗಳಿಂದ ಎದುರಿಸುತ್ತಿರುವ ತೊಂದರೆಗಳವರೆಗೆ ಹಲವಾರು ಸಮಸ್ಯೆಗಳನ್ನು ಬಗೆಹರಿಸಿತು.

ಉದಂಪೂರ್ ನ್ಯಾಯಾಲಯದಲ್ಲಿ ಇಂಟರ್ನೆಟ್ ಉಪಕರಣಗಳನ್ನು ಅಳವಡಿಸಲು ಬಿಎಸ್ಎನ್ಎಲ್‌ಗೆ ಹೈಕೋರ್ಟ್ ನಿರ್ದೇಶನ ನೀಡಿದೆ

ವಿಚಾರಣೆ ನಂತರ, ಉದಂಪೂರ್‌ನ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಪ್ರಥಮ ದರ್ಜೆ ನ್ಯಾಯಾಲಯದಲ್ಲಿ ಇಂಟರ್ನೆಟ್ ಉಪಕರಣಗಳನ್ನು ಅಳವಡಿಸಲಾಗಿರುವ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಲಾಯಿತು. ನ್ಯಾಯಾಲಯದ ಅಧಿಕಾರಿಗಳ ಕಾರಣದಿಂದಾಗಿ ಉಪಕರಣಗಳು ಸುಟ್ಟುಹೋಗಿವೆ ಎಂದು ಆರಂಭದಲ್ಲಿ ನ್ಯಾಯಾಲಯಕ್ಕೆ ತಿಳಿಸಲಾಗಿದ್ದರೂ, ಐಟಿ ರಿಜಿಸ್ಟ್ರಾರ್ ಸಲ್ಲಿಸಿದ ವರದಿಯನ್ನು ನ್ಯಾಯಪೀಠ ಗಮನಕ್ಕೆ ತೆಗೆದುಕೊಂಡಿತು.

ಇದು ನ್ಯಾಯಾಲಯದ ಅಧಿಕಾರಿಗಳ ಮೇಲೆ ಆರೋಪ ಹೊರಿಸುವ ಪ್ರಯತ್ನ ಎಂದು ಪ್ರತಿಪಾದಿಸಿದ ನ್ಯಾಯಪೀಠ, ಉಧಂಪುರ್ ನ್ಯಾಯಾಲಯದಲ್ಲಿ ಕನ್ವರ್ಟರ್‌ ಮತ್ತು ರೂಟರ್ ಅನ್ನು ಸ್ಥಾಪಿಸುವಂತೆ ಬಿಎಸ್ಎನ್ಎಲ್‌ಗೆ ನಿರ್ದೇಶನ ನೀಡಿತು. ಬಿಎಸ್ಎನ್ಎಲ್‌ನಿಂದ ಕೇಂದ್ರಾಡಳಿತದ ನ್ಯಾಯಾಲಯಗಳಿಗೆ ಇ-ಸಂಪರ್ಕವನ್ನು ಒದಗಿಸುವ ಸ್ಥಿತಿಯ ಬಗ್ಗೆ ಹೊಸ ವರದಿಯನ್ನು ಕೇಳಿದೆ.

10 ತಾಣಗಳಿಗೆ ವಿಎಸ್ಎಟಿ ಸೌಲಭ್ಯಗಳ ಅಗತ್ಯತೆಯ ಬಗ್ಗೆ ಬಿಎಸ್ಎನ್ಎಲ್ ಕಳೆದ ವರ್ಷ ನವೆಂಬರ್‌ನಲ್ಲಿ ನ್ಯಾಯಾಂಗ ಇಲಾಖೆಗೆ ಪತ್ರವನ್ನು ಕಳುಹಿಸಿದೆ ಎಂದು ಅದು ಉಲ್ಲೇಖಿಸಿದೆ. ಆದರೆ, ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಆದ್ದರಿಂದ ನ್ಯಾಯಾಲಯವು ನ್ಯಾಯಾಂಗ ಇಲಾಖೆಯ ಕಾರ್ಯದರ್ಶಿಗೆ ಇದನ್ನು ತುರ್ತಾಗಿ ಪರಿಶೀಲಿಸಲು ಹಾಗೂ ಜೂನ್ 10 ರಂದು ನಡೆಯುವ ಮುಂದಿನ ವಿಚಾರಣೆಯ ದಿನಾಂಕದ ಮೊದಲು ಮಾಡಲು ಕೇಳಿದೆ.


ಓದಿ:  2020ರ ಪ್ರತಿಷ್ಟಿತ ಪುಲಿಟ್ಜೆರ್ ಪ್ರಶಸ್ತಿ ಗೆದ್ದ ಕಾಶ್ಮೀರದ ಪತ್ರಕರ್ತರು, ಅವರು ಕ್ಲಿಕ್ಕಿಸಿದ ಫೋಟೋಗಳನ್ನು ವೀಕ್ಷಿಸಿ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read