ಕಾಂಗ್ರೆಸ್ ಪಕ್ಷ ದಲಿತರಿಗೆ ನಿರಂತರವಾಗಿ ಅನ್ಯಾಯ ಮಾಡುತ್ತಾ ಬಂದಿದೆ ಎಂದು ಆರೋಪಿಸಿರುವ ಬಿಜೆಪಿಗೆ ಕರ್ನಾಟಕ ಕಾಂಗ್ರೆಸ್ ತಿರುಗೇಟು ನೀಡಿದೆ. ಕೇಂದ್ರ ಸಂಪುಟದಲ್ಲಿರುವ ದಲಿತ ಮಂತ್ರಿಗಳೆಷ್ಟು? ಎಷ್ಟು ದಲಿತರನ್ನು ಸಿಎಂ ಮಾಡಿದ್ದಿರಾ? ಎಂದು ಪ್ರಶ್ನಿಸಿ ಕಿಡಿಕಾರಿದೆ.
ಕನ್ನಡ ಪತ್ರಿಕೆಯೊಂದರಲ್ಲಿ ಬಂದಿದ್ದ ವರದಿಯನ್ನು ಉಲ್ಲೇಖಿಸಿ ಬಿಜೆಪಿ ಕರ್ನಾಟಕ ಟ್ವಿಟರ್ ಖಾತೆಯಲ್ಲಿ ಕಾಂಗ್ರೆಸ್ ದಲಿತ ವಿರೋಧಿ, ಕಾಂಗ್ರೆಸ್ ಪಕ್ಷ ನಿರಂತರವಾಗಿ ದಲಿತರಿಗೆ ಅನ್ಯಾಯ ಮಾಡುತ್ತಲೇ ಬಂದಿದೆ. ಕಾಂಗ್ರೆಸ್ ಪಕ್ಷದ ಅನೇಕರು ಈ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದಾರೆ ಎಂದು ಹೇಳಲಾಗಿತ್ತು.
“ದಲಿತರನ್ನು ತುಳಿದ ಇತಿಹಾಸ ಇರುವ ಏಕಮಾತ್ರ ಪಕ್ಷವೆಂದರೆ ಅದು ಕಾಂಗ್ರೆಸ್. ಅಧಿಕಾರ ಸಿಕ್ಕಾಗಲೆಲ್ಲಾ ದಲಿತರನ್ನು ಕಾಂಗ್ರೆಸ್ ಕಡೆಗಣಿಸಿದೆ” ಎಂದು ಬಿಜೆಪಿ ಆರೋಪಿಸಿತ್ತು.
ಇದಕ್ಕೆ ಉತ್ತರವಾಗಿ, ಕರ್ನಾಟಕ ಕಾಂಗ್ರೆಸ್ ಟ್ವಿಟರ್, “ಕಾಂಗ್ರೆಸ್ ಹಲವು ದಲಿತ ನಾಯಕರನ್ನು ಸೃಷ್ಟಿಸಿದೆ, ಬೆಳೆಸಿದೆ, ಆ ಪಟ್ಟಿ ದೊಡ್ಡದಿದೆ. ದಲಿತರನ್ನು ತುಳಿಯಲೆಂದೇ ಹುಟ್ಟಿದ ಮನುವಾದಿ ಬಿಜೆಪಿ, ತಾಕತ್ತಿದ್ದರೆ ಉತ್ತರಿಸಿ” ಎಂದು ಮೂರು ಪ್ರಶ್ನೆಗಳನ್ನು ಎತ್ತಿದೆ.
ಇದನ್ನೂ ಓದಿ: ಕೇರಳದಲ್ಲಿ ಹಿಂದೂಗಳ ಬೆಂಬಲದಿಂದ BJP 10ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತದೆ: ನಳಿನ್ ಕುಮಾರ್ ಕಟೀಲ್
“ಕೇಂದ್ರ ಸಂಪುಟದಲ್ಲಿರುವ ದಲಿತ ಮಂತ್ರಿಗಳೆಷ್ಟು…?, ಯಾವ ರಾಜ್ಯದಲ್ಲಿ ದಲಿತರನ್ನು ಸಿಎಂ ಮಾಡಿದ್ದಿರಿ…?, ಎಷ್ಟು ದಲಿತ ರಾಷ್ಟ್ರ ನಾಯಕರನ್ನು ಹೊಂದಿದ್ದೀರಿ…?” ಈ ಪ್ರಶ್ನೆಗಳಿಗೆ ಉತ್ತರಿಸಿ ಎಂದಿದೆ.
ಕಾಂಗ್ರೆಸ್ ಹಲವು ದಲಿತ ನಾಯಕರನ್ನು ಸೃಷ್ಟಿಸಿದೆ, ಬೆಳೆಸಿದೆ, ಆ ಪಟ್ಟಿ ದೊಡ್ಡದಿದೆ.
ದಲಿತರನ್ನು ತುಳಿಯಲೆಂದೇ ಹುಟ್ಟಿದ ಮನುವಾದಿ @BJP4Karnataka,
ತಾಕತ್ತಿದ್ದರೆ ಉತ್ತರಿಸಿ●ಕೇಂದ್ರ ಸಂಪುಟದಲ್ಲಿರುವ ದಲಿತ ಮಂತ್ರಿಗಳೆಷ್ಟು?
●ಯಾವ ರಾಜ್ಯದಲ್ಲಿ ದಲಿತರನ್ನು ಸಿಎಂ ಮಾಡಿದ್ದಿರಿ?
●ಎಷ್ಟು ದಲಿತ ರಾಷ್ಟ್ರ ನಾಯಕರನ್ನು ಹೊಂದಿದ್ದೀರಿ? https://t.co/lqVEUMbq8X
— Karnataka Congress (@INCKarnataka) April 6, 2021
ಕರ್ನಾಟಕ ಕಾಂಗ್ರೆಸ್ ಮತ್ತು ಬಿಜೆಪಿ ಕರ್ನಾಟಕ ಟ್ವಿಟರ್ನಲ್ಲಿ ಹೆಚ್ಚು ಆಕ್ಟಿವ್ ಆಗಿದ್ದು, ಆರೋಪ-ಪ್ರತ್ಯಾರೋಪದಲ್ಲಿ ತೊಡಗಿಸಿಕೊಂಡಿವೆ. ಹೊಸ ಹೊಸ ಹ್ಯಾಷ್ಟ್ಯಾಗ್ಗಳ ಮೂಲಕ ಇಬ್ಬರು ಪರಸ್ಪರ ಕೆಸರೆರಚಾಟ ನಡೆಸುತ್ತಿವೆ.
ಇದನ್ನೂ ಓದಿ: ಟ್ವಿಟರ್ ಅಭಿಯಾನದ ಮೂಲಕ ಸಾಮಾಜಿಕ ಹೋರಾಟಗಳಿಗೆ ಜೊತೆಯಾದ ಕರ್ನಾಟಕ ಕ್ರಾಂತಿಕಾರಿ ಪಡೆ!