Homeಕರ್ನಾಟಕಚಿಕ್ಕಬಳ್ಳಾಪುರ: ವಶಪಡಿಸಿಕೊಂಡ ನಗದು ಹಿಂತಿರುಗಿಸುವಂತೆ ಐಎಎಸ್ ಅಧಿಕಾರಿಗೆ ಸಂಪರ್ಕಿಸಿದ್ದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್!

ಚಿಕ್ಕಬಳ್ಳಾಪುರ: ವಶಪಡಿಸಿಕೊಂಡ ನಗದು ಹಿಂತಿರುಗಿಸುವಂತೆ ಐಎಎಸ್ ಅಧಿಕಾರಿಗೆ ಸಂಪರ್ಕಿಸಿದ್ದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್!

- Advertisement -
- Advertisement -

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಫ್‌ಎಸ್‌ಟಿ ಅಧಿಕಾರಿಗಳು 4.8 ಕೋಟಿ ನಗದು ವಶಪಡಿಸಿಕೊಂಡಿದ್ದು, ಈ ಕುರಿತು ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ವಿರುದ್ಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಇದರ ಬೆನ್ನಲ್ಲಿ ಮಹತ್ವದ ಅಂಶವೊಂದು ಬಯಲಾಗಿದ್ದು, ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿರುವ 4.8 ಕೋಟಿ ರೂಪಾಯಿ ನಗದು ವಾಪಾಸ್ಸು ಮಾಡಲು ಹಿರಿಯ ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್‌ಗೆ ಮಾಜಿ ಆರೋಗ್ಯ ಸಚಿವ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ ಸುಧಾಕರ್ ಕರೆ ಮಾಡಿದ್ದರು ಎನ್ನಲಾಗಿದೆ.

ಬಿಜೆಪಿ ಅಭ್ಯರ್ಥಿ ಕೆ ಸುಧಾಕರ್ ವಿರುದ್ಧ ಮಾದನಾಯಕನಹಳ್ಳಿ ಪೊಲೀಸರು ಏಪ್ರಿಲ್ 25ರಂದು ಎಫ್‌ಐಆರ್‌ ದಾಖಲಿಸಿದ್ದಾರೆ. ಬೆಂಗಳೂರು ನಗರ ಜಿಲ್ಲೆಗೆ ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿಯಾಗಿರುವ ಮುನೀಶ್ ಅವರ ಪೋನ್‌ಗೆ ಸುಧಾಕರ್ ಅವರ ದೂರವಾಣಿ ಸಂಖ್ಯೆಯಿಂದ ವಾಟ್ಸಾಪ್ ಕರೆ ಬಂದಿದೆ. ಕರೆಯಲ್ಲಿ ‘ಬಿಟ್ಬಿಡಿ’ ಎಂದು ಸುಧಾಕರ್‌ ಆಗ್ರಹಿಸಿದ್ದಾರೆ. ಇದಲ್ಲದೆ ವಾಟ್ಸಾಫ್‌ ಸಂದೇಶವನ್ನು ಕೂಡ ಕಳುಹಿಸಿದ್ದಾರೆ, ಸಂದೇಶದಲ್ಲಿ ನಗದು ವಾಪಾಸ್ಸು ಮಾಡುವಂತೆ ಕೇಳಿಕೊಂಡಿದ್ದಾರೆ.

ಸುಧಾಕರ್ ವಿರುದ್ಧ ಚುನಾವಣಾ ಆಯೋಗದ ಫ್ಲೈಯಿಂಗ್ ಸ್ಕ್ವಾಡ್ ಸದಸ್ಯ ದಶರಥ ವಿ ಕುಂಬಾರ್ ಸಲ್ಲಿಸಿರುವ ದೂರಿನಲ್ಲಿ, ಏಪ್ರಿಲ್ 25ರಂದು ಬೆಳಿಗ್ಗೆ 11.45 ರ ಸುಮಾರಿಗೆ ಎಂಸಿಸಿ ನೋಡಲ್ ಅಧಿಕಾರಿ ಮುನೀಶ್ ಮೌದ್ಗಿಲ್ ಅವರಿಗೆ ಯಲಹಂಕದ ಮನೆಯೊಂದರಲ್ಲಿ ಸುಮಾರು 10 ಕೋಟಿ ರೂ.ನಗದು ಇರುವ ಬಗ್ಗೆ ಮಾಹಿತಿ ನೀಡಲಾಗಿದೆ. ಬೆಂಗಳೂರಿನಲ್ಲಿ ಮತದಾರರಿಗೆ ಲಂಚ ನೀಡುವುದಕ್ಕಾಗಿ ಮತ್ತು ಚುನಾವಣೆ ಸಮಯದಲ್ಲಿ ದುರ್ಬಳಕೆಗಾಗಿ ನಗದು ಕೂಡಿಟ್ಟಿರುವ ಬಗ್ಗೆ ಆರೋಪಿಸಿದ್ದರು. ಇದಲ್ಲದೆ ಕರೆ ಮಾಡಿದವರು ನಗದು ಇರುವ ಮನೆಯ ಜಿಪಿಎಸ್ ಲೊಕೇಶನ್‌ ಕೂಡ ನೀಡಿದ್ದರು.

ಇದರ ಬೆನ್ನಲ್ಲಿ ಮುನೀಶ್ ಮೌದ್ಗಿಲ್ ಅವರು ಮಧ್ಯಾಹ್ನ 1ಗಂಟೆ ಸುಮಾರಿಗೆ ಆದಾಯ ತೆರಿಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅವರ ನಿರ್ದೇಶನದಂತೆ ನಡೆದ ದಾಳಿಯಲ್ಲಿ ಸುಧಾಕರ್‌ ಆಪ್ತ ಗುತ್ತಿಗೆದಾರನ ಮನೆಯಿಂದ 4.8 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ.

ದಾಳಿಯ ನಂತರ ಬಿಜೆಪಿ ಅಭ್ಯರ್ಥಿ ಡಾ.ಕೆ ಸುಧಾಕರ್ ಚುನಾವಣಾ ನಾಮಪತ್ರದಲ್ಲಿ ಉಲ್ಲೇಖಿಸಿರುವ ಸಂಖ್ಯೆಯಿಂದ ಮುನೀಶ್ ಮೌದ್ಗಿಲ್‌ಗೆ ಕರೆ ಮತ್ತು ವಾಟ್ಸಾಪ್‌ ಸಂದೇಶ ಹೋಗಿದೆ.

ಮೌದ್ಗಿಲ್ ಅವರಿಗೆ ಮಧ್ಯಾಹ್ನ 2.04ಕ್ಕೆ ಮಾಧವರ ಗೋವಿಂದಪ್ಪ ಐಟಿ ತಂಡ ಎಂದು ಉಲ್ಲೇಖಿಸಿದ ಒಂದು ಸಂದೇಶ ಹೋಗಿದೆ, ನಂತರ 2.07ಕ್ಕೆ ಇನ್ನೊಂದು ಸಂದೇಶವು ದಯವಿಟ್ಟು ಸಹಾಯ ಮಾಡಿ ನಾನು ನಿಮಗೆ ತುಂಬಾ ಕೃತಜ್ಞರಾಗಿರುತ್ತೇನೆ, ವಂದನೆಗಳು ಎಂದು ಉಲ್ಲೇಖಿಸಲಾಗಿದೆ. ಮಧ್ಯಾಹ್ನ 2.14ಕ್ಕೆ ಸುಧಾಕರ್ ಮೌದ್ಗಿಲ್ ಅವರಿಗೆ ಕಳುಹಿಸಿದ ಕೊನೆಯ ಸಂದೇಶದಲ್ಲಿ “9945141601 ಆನಂದ್ ರತ್ಕಲ್” ಎಂದು ಬರೆದಿತ್ತು. ಐಆರ್‌ಎಸ್ ಅಧಿಕಾರಿ ಆನಂದ್ ರತ್ಕಲ್ ಅವರು ಬೆಂಗಳೂರು ನಗರ ಜಿಲ್ಲೆಯ ಐಟಿ ನೋಡಲ್ ಅಧಿಕಾರಿಯಾಗಿದ್ದು, ಇವರೇ ದಾಳಿ ನಡೆಸಿ ನಗದನ್ನು ವಶಪಡಿಸಿಕೊಂಡಿದ್ದರು ಎನ್ನಲಾಗಿದೆ. ಅವರಿಗೆ ನಗದನ್ನು ಬಿಟ್ಟು ಬಿಡುವಂತೆ ಸೂಚಿಸಲು ಮೌದ್ಗಿಲ್‌ಗೆ ನಂಬರ್ ಕಳುಹಿಸಿದ್ದರು ಎಂದು ಅಂದಾಜಿಸಲಾಗಿದೆ.

ಈ ಕುರಿತು ಅಧಿಕಾರಿಯೋರ್ವರು ಮಾತನಾಡಿದ್ದು, ಚುನಾವಣೆ ವೇಳೆ ನಡೆದ ದಾಳಿಗಳಲ್ಲಿ ಹಣ ಮತ್ತು ಸರಕುಗಳನ್ನು ವಶಪಡಿಸಿಕೊಳ್ಳಲಾಗುತ್ತದೆ. ಗುತ್ತಿಗೆದಾರರು ಅಥವಾ ಇತರರ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ. ನಂತರ ಐಟಿ ಇಲಾಖೆಯು ದಂಡ ಪಾವತಿಸಿದ ನಂತರ ಹಣವನ್ನು ಬಿಡುಗಡೆ ಮಾಡುತ್ತದೆ. ಈ ಪ್ರಕರಣದಲ್ಲೂ ಸುಧಾಕರ್ ಕರೆ ಮಾಡದೆ ಇದ್ದಿದ್ದರೆ ಯಾವ ರಾಜಕಾರಣಿಗೂ ಲಿಂಕ್ ಆಗುತ್ತಿರಲಿಲ್ಲ. ಹಣ ವಶಪಡಿಸಿಕೊಂಡಾಗ ರಾಜಕಾರಣಿಯೊಬ್ಬರು ಕರೆ ಮಾಡಿದರೂ ಇತರ ಹಲವು ಅಧಿಕಾರಿಗಳು ದೂರು ದಾಖಲಿಸದೇ ಇರಬಹುದು, ಆದರೆ ಮೌದ್ಗಿಲ್‌ ಇದನ್ನು ಮಾಡಿದ್ದಾರೆ. ಈಗ ಸುಧಾಕರ್ ಅವರು ಆ ಸಂದೇಶಗಳನ್ನು ಏಕೆ ಕಳುಹಿಸಿದ್ದಾರೆ ಎಂಬುವುದನ್ನು ವಿವರಿಸಬೇಕಿದೆ ಎಂದು ಹೇಳಿದ್ದಾರೆ.

ಮಾದನಾಯಕನಹಳ್ಳಿ ಪೊಲೀಸರು ಸುಧಾಕರ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 171 ಇ (ಲಂಚ), 171 ಎಫ್, 171 ಬಿ, 171 ಸಿ (ಚುನಾವಣೆಯಲ್ಲಿ ಅನಗತ್ಯ ಪ್ರಭಾವ) ಮತ್ತು ಸೆಕ್ಷನ್ 123ರಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನು ಓದಿ: ಬರಪರಿಹಾರ: ಮೋದಿಗೆ ಶ್ಲಾಘಿಸಿ ಕನ್ನಡಿಗರಿಂದ ಉಗಿಸಿಕೊಂಡ ಬಿಜೆಪಿ ನಾಯಕರು: ರಿಪೋರ್ಟ್ ಓದಿ..

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...