HomeದಿಟನಾಗರFact Check: ತೆಲಂಗಾಣದಲ್ಲಿ ಐಸ್‌ಕ್ರೀಂಗೆ ವೀರ್ಯ ಬೆರೆಸಿದ್ದಾನೆ ಎನ್ನಲಾದ ಆರೋಪಿ ಮುಸ್ಲಿಂ ಅಲ್ಲ

Fact Check: ತೆಲಂಗಾಣದಲ್ಲಿ ಐಸ್‌ಕ್ರೀಂಗೆ ವೀರ್ಯ ಬೆರೆಸಿದ್ದಾನೆ ಎನ್ನಲಾದ ಆರೋಪಿ ಮುಸ್ಲಿಂ ಅಲ್ಲ

- Advertisement -
- Advertisement -

ಹಸ್ತ ಮೈಥುನ ಮಾಡಿ ವೀರ್ಯವನ್ನು ಐಸ್‌ಕ್ರೀಂಗೆ ಬೆರೆಸಿದ ಆರೋಪದ ಮೇಲೆ ತೆಲಂಗಾಣದ ವಾರಂಗಲ್‌ನ ನೆಕ್ಕೊಂಡ ಎಂಬಲ್ಲಿ ರಾಜಸ್ಥಾನ ಮೂಲದ ವ್ಯಾಪಾರಿಯನ್ನು ಇತ್ತೀಚೆಗೆ ಬಂಧಿಸಲಾಗಿದೆ.

ಸಾಮಾನ್ಯವಾಗಿ ಇತರ ಪ್ರಕರಣಗಳಲ್ಲಿ ಆರೋಪಿಸುವಂತೆ ಈ ಪ್ರಕರಣದಲ್ಲೂ ಬಂಧಿತ ಆರೋಪಿ ಮುಸ್ಲಿಂ ಸಮುದಾಯದವನು ಎಂಬರ್ಥದಲ್ಲಿ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗ್ತಿದೆ.

ಫೋಸ್ಟ್ ಲಿಂಕ್ ಇಲ್ಲಿದೆ 

ಪೋಸ್ಟ್ ಲಿಂಕ್ ಇಲ್ಲಿದೆ 

ಫ್ಯಾಕ್ಟ್‌ಚೆಕ್ : ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಸಂದೇಶದ ಸತ್ಯಾಸತ್ಯತೆಯನ್ನು ನಾನುಗೌರಿ.ಕಾಂ ಪರಿಶೀಲನೆ ಮಾಡಿದೆ.

ಇದಕ್ಕಾಗಿ ನಾವು ಪ್ರಕರಣದ ಕುರಿತು ಪತ್ರಿಕೆಗಳಲ್ಲಿ ಬಂದಿರುವ ವರದಿಗಳನ್ನು ಗಮನಿಸಿದ್ದೇವೆ. ಮಾರ್ಚ್ 20ರಂದು “Caught on camera: Hawker ‘masturbates’ into ice cream in Telangana, arrested” ಎಂಬ ಶೀರ್ಷಿಕೆಯಲ್ಲಿ ಇಂಡಿಯಾ ಟುಡೇ ಪ್ರಕಟಿಸಿದ ವರದಿಯಲ್ಲಿ ಆರೋಪಿಯ ಹೆಸರನ್ನು ‘ಕಲುರಾಮ್ ಕುರ್ಬಿಯಾ’ ಎಂದು ಉಲ್ಲೇಖಿಸಲಾಗಿದೆ.

ಸುದ್ದಿ ಲಿಂಕ್ ಇಲ್ಲಿದೆ 

ಮಾರ್ಚ್ 20ರಂದು “Telangana Ice Cream Vendor Held After Video of Masturbating, Mixing Semen in ‘Faluda’ Goes Viral” ಎಂಬ ಶೀರ್ಷಿಕೆಯಲ್ಲಿ ನ್ಯೂಸ್‌ 18 ಇಂಗ್ಲಿಷ್ ಪ್ರಕಟಿಸಿದ ಸುದ್ದಿಯಲ್ಲೂ ಆರೋಪಿಯ ಹೆಸರು ‘ಕಲುರಾಮ್ ಕುರ್ಬಿಯಾ’ ರಾಜಸ್ಥಾನ ಮೂಲದವನು ಎಂದು ಉಲ್ಲೇಖಿಸಲಾಗಿದೆ.

ಸುದ್ದಿ ಲಿಂಕ್ ಇಲ್ಲಿದೆ 

ಆರೋಪಿಯ ವಿರುದ್ದ ವಾರಂಗಲ್ ಜಿಲ್ಲೆ ನೆಕ್ಕೊಂಡ ಪೊಲೀಸ್ ಠಾಣೆಯಲ್ಲಿ ಮಾರ್ಚ್ 19,2024ರಂದು ದಾಖಲಾದ ಎಫ್‌ಐಆರ್ ಪ್ರತಿ ನಮಗೆ ಲಭ್ಯವಾಗಿದ್ದು, ಅದರಲ್ಲೂ ‘ಕಲುರಾಮ್ ಕುರ್ಬಿಯಾ’ ಎಂದು ಸ್ಪಷ್ಟವಾಗಿ ಬರೆಯಲಾಗಿದೆ.

ಮೇಲಿನ ಎಲ್ಲಾ ಮೂಲಗಳ ಪ್ರಕಾರ ಆರೋಪಿ ಮುಸ್ಲಿಂ ಅಲ್ಲ ಎಂಬುವುದು ಖಚಿತವಾಗಿದೆ.

ಸತ್ಯಾಸತ್ಯತೆ ಪರಿಶೀಲನೆಯ ಮೂಲಕ ಆರೋಪಿ ಮುಸ್ಲಿಂ ಅಲ್ಲ ಹಿಂದೂ ಎಂದು ಬಿಂಬಿಸುವುದು ನಮ್ಮ ಉದ್ದೇಶವಲ್ಲ. ತಪ್ಪು ಯಾರೂ ಮಾಡಿದರೂ ಅವರ ವಿರುದ್ಧ ಕಾನೂನು ಪ್ರಕಾರ ಕ್ರಮವಾಗಲಿ. ಆದರೆ, ಯಾವುದೇ ಪುರಾವೆಗಳಿಲ್ಲದೆ ಒಂದು ಸಮುದಾಯದ ವಿರುದ್ಧ ದ್ವೇಷಪೂರಿತ ಸುಳ್ಳು ಸಂದೇಶ ಹರಡುವುದು. ಪ್ರಕರಣಕ್ಕೆ ಕೋಮು ಬಣ್ಣ ಬಳಿಯುವುದನ್ನು ತಪ್ಪಿಸುವುದು ನಮ್ಮ ಉದ್ದೇಶವಾಗಿದೆ.

ಇದನ್ನೂ ಓದಿ : Fact Check: ಕೇರಳದ ಕಾಂಗ್ರೆಸ್ ಅಭ್ಯರ್ಥಿ ಪಾಕಿಸ್ತಾನದ ಧ್ವಜಗಳೊಂದಿಗೆ ಚುನಾವಣಾ ಪ್ರಚಾರ ಮಾಡಿದ್ರಾ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...