HomeUncategorizedನೊವೆಲ್ ಕೊರೋನಾ ವೈರಸ್ ಭಾರತಕ್ಕೆ ಬಂದರೆ?ಬೈ ಡೇಟಾಮ್ಯಾಟಿಕ್ಸ್

ನೊವೆಲ್ ಕೊರೋನಾ ವೈರಸ್ ಭಾರತಕ್ಕೆ ಬಂದರೆ?ಬೈ ಡೇಟಾಮ್ಯಾಟಿಕ್ಸ್

- Advertisement -
- Advertisement -

ತಮ್ಮ ಪ್ರಾಮಾಣಿಕ ಸೇವೆಯಿಂದಾಗಿ ರಾಷ್ಟ್ರವ್ಯಾಪಿ ಖ್ಯಾತಿ ಗಳಿಸಿದ ಕರ್ನಾಟಕದ ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ಅವರು ಸಣ್ಣ ವಯಸ್ಸಿನಲ್ಲಿಯೇ ತೀರಿಹೋದರು.

ಈ ಭ್ರಷ್ಟ ವ್ಯವಸ್ಥೆಯ ವಿರುದ್ಧ ಹೋರಾಡುತ್ತಲೇ ಜೀವನ ಸವೆಸಿದ ಅವರು ಒಂದು ಅರ್ಥದಲ್ಲಿ ಅಭಿನವ ಅಭಿಮನ್ಯು. ಹೈದರಾಬಾದಿನ ಪೋಲೀಸ್ ಅಕಾಡೆಮಿಯಲ್ಲಿ ಯುವ ಅಧಿಕಾರಿಗಳಿಗೆ ಜಂಗಲ್ ಹೋರಾಟದ ತರಬೇತಿ ನೀಡುತ್ತಿದ್ದಾಗ ಅವರಿಗೆ ಸೋಂಕು ತಗುಲಿತು. ಒಂದೇ ದಿವಸದಾಗ ಅದು ಅವರ ಹೃದಯಕ್ಕೆ ವ್ಯಾಪಿಸಿತು. ಅಮೆರಿಕೆಯಲ್ಲಿ ಇದ್ದ ಅವರ ಪತ್ನಿ ಹಾಗೂ ಮಗಳು ಭಾರತಕ್ಕೆ ಬರೋ ಮುಂಚೆ ಅವರ ಕೊನೆಯುಸಿರು ಎಳೆದಿದ್ದರು. ಅದು ಎಚ್1 ಎನ್1 ವೈರಸ್ ಇರಬಹುದು ಅಂತ ಕೆಲವರು ಹೇಳಿದರು.

ಅವರಿಗೆ ಏನಾಗಿತ್ತು? ಅದಕ್ಕೆ ಔಷಧ ಏನು? ಅದನ್ನು ಗುಣಪಡಿಸಲಿಕ್ಕೆ ಯಾಕೆ ಆಗಲಿಲ್ಲ? ಈ ಪ್ರಶ್ನೆಗಳು ಜನರನ್ನು ಕಾಡಿದವು. ಐಜಿಪಿ ಮಟ್ಟದ ಐಪಿಎಸ್ ಅಧಿಕಾರಿಗೆ ಈ ಪರಿಸ್ಥಿತಿಯಾದರೆ ಇತರರಿಗೆ ಏನು ಅಂತ ಎಲ್ಲಾರೂ ಮಾತಾಡಲಿಕ್ಕೆ ಹತ್ತಿದರು. ಇದನ್ನು ಪತ್ತೆ ಹಚ್ಚಲಿಕ್ಕೆ ರಾಜ್ಯಸರಕಾರ ಡಾ. ದೇವಿಪ್ರಸಾದ ಶೆಟ್ಟಿ ಅವರ ಅಧ್ಯಕ್ಷತೆಯೊಳಗ ಒಂದು ಸಮಿತಿ ನೇಮಿಸಿತು. ಅದರ ವರದಿ ಇನ್ನೂ ಬಂದಿಲ್ಲ.

ಈ ವಾರದ ಸುದ್ದಿ ಏನಪಾ ಅಂದರ ಚೈನಾದಾಗ ನೊವೆಲ್ ಕೊರೋನಾ ಅಥವಾ ಹೊಸಾ ಕಿರೀಟಿ ವೈರಸ್ ಅಂತ ಪತ್ತೆ ಆಗೇದ.

ಆರ್ಥೋ ಕರೋನೊವಿರಿನೆ ಜಾತಿಯ ನಿಡೋವಿರಲೇ ಉಪಜಾತಿಯ ಈ ವೈರಸ್ಸು ನೋಡಲಿಕ್ಕೆ ಕಿರೀಟದಂಗ ಕಾಣತದ ಅಂತ ಇದಕ್ಕ ಕೊರೋನಾ ಅಥವಾ ಕಿರೀಟಿ ವೈರಸ್ ಅಂತಾರ. ಇದು ಆರ್‍ಎನ್‍ಎ ವೈರಸ್ಸು, ಪ್ರಾಣಿ ಹಾಗೂ ಮನುಷ್ಯನಲ್ಲಿ ಇದು ಪುಪ್ಪಸದ ಕೆಲಸ ನಿಲ್ಲಸತದ. ಉಸಿರಾಟ ಸಾಧ್ಯವಾಗದೇ ಸಾವು ಬರತದ. ಇದಕ್ಕೆ ಪರಿಹಾರವಾಗಲಿ, ಲಸಿಕೆ ಆಗಲೀ, ಇನ್ನೂ ಇಲ್ಲ.

ಅದು ವುಹಾನ್ ಪ್ರಾಂತದ ಸುಮಾರು 5,000 ಜನಕ್ಕ ಸೋಂಕಿರಬಹುದು ಅಂತ ಅಂದಾಜು. ಅದರಿಂದ ಸುಮಾರು 100 ಜನ ಸತ್ತು ಹೋಗ್ಯಾರ. ಅಲ್ಲಿಂದ ಬಂದವರು ಕೆಲವರಿಗೆ ಅದು ಬಂದಿರಬಹುದು ಅಂತ ಅಮೆರಿಕಾದ ಅವರನ್ನು ಡಾಕ್ಟರ್‍ಗಳ ನೋಡಕೊಳ್ಳಲಿಕ್ಕೆ ಹತ್ಯಾರ. ಭಾರತದಾಗೂ ಸಹ ಕೆಲವರಿಗೆ ಅದು ಬಂದಿರಬಹುದು ಅಂತ ಸಂಶಯ. ಇಲ್ಲಿಯವರೆಗೂ ಅದು ಯಾರಿಗೂ ಬಂದಿರೋ ಖಾತ್ರಿ ಆಗಿಲ್ಲ ಅಂತ ಸರಕಾರ ಹೇಳೇದ. ಭಾರತದ ಎಲ್ಲಾ ವಿಮಾನ ನಿಲ್ದಾಣದೊಳಗ ಒಂದು ವಿಶೇಷ ಕೌಂಟರ್ ಮಾಡಿ ಅವರನ್ನು ಚೆಕ್ ಮಾಡಲಿಕ್ಕೆ ಹತ್ಯಾರ.

ಆದರ ಇದು ಸುದ್ದಿ ಅಲ್ಲ.
ಚೈನಾದ ವುಹಾನ್ ಪ್ರಾಂತದಾಗ ಈ ಸೋಂಕು ಪತ್ತೆ ಆದಮ್ಯಾಲೆ ಅಲ್ಲಿಯವರು ಏನು ಮಾಡಿದರು ಅಂತ ಅನ್ನೋದು ವಿಶೇಷ. ಮೊದಲನೇ ರೋಗಿ ಪತ್ತೆ ಆದ 24 ತಾಸಿನೊಳಗ ಆ ವೈರಸ್ಸಿನ ಸಂಪೂರ್ಣ ಅಧ್ಯಯನ ನಡೀತು. ಅದರ ಜೀನೋಮು ಮ್ಯಾಪಿಂಗ್ ಅಂದರ ವಿಜ್ಞಾನಿಗಳು ಅದರ ವಂಶವಾಹಿನಿ ತಳಿಯನ್ನ ಪ್ರತ್ಯೇಕಿಸಿ ಅಭ್ಯಾಸ ಮಾಡಿದರು. ರೋಗಿಗಳ ಸಂಖ್ಯೆ ಹೆಚ್ಚು ಆದಂಗೆಲ್ಲಾ ಅವರನ್ನ ಪ್ರತ್ಯೇಕಿಸಿ ಇಡಲಾತು. ಇನ್ನೂ ಹೆಚ್ಚು ಆದಂಗ ಇವರ ಸಲುವಾಗೇನ ಒಂದು ವಿಶೇಷ ಆಸ್ಪತ್ರೆ ಕಟ್ಟಬೇಕು ಅಂತ ನಿರ್ಧಾರ ಆತು. ಹತ್ತು ದಿನದಾಗ ಆ ಆಸ್ಪತ್ರೆ ಕಟ್ಟಡ ಕಟ್ಟಬೇಕು ಅಂತ ಒಂದು ನೂರು ಭೂಚಾಲಕ ಯಂತ್ರಗಳನ್ನು ಕೆಲಸಕ್ಕೆ ಹಚ್ಚಲಾಗೇದ. ಅದು ಮುಗೀಲಿಕ್ಕೆ ಬಂದದ. ಅದಕ್ಕೆ ವಿಶೇಷ ತರಬೇತಿ ಪಡೆದ ಡಾಕ್ಟರಗಳನ್ನು ನೇಮಿಸಲಾಗೇದ.

ಸೋಂಕು ಹಬ್ಬೇದ ತಪ್ಪಸಬೇಕು ಅಂತ ಚೈನಾ ಸರಕಾರ ವುಹಾನ ಪ್ರಾಂತದ ಸುಮಾರು 50 ಲಕ್ಷ ಜನರನ್ನು ಒಂದು ವಾರದಾಗ ಬೇರೆ ಕಡೆ ಸ್ಥಳಾಂತರ ಮಾಡೇದ. ಇನ್ನೂ ತೊಂಬತ್ತು ಲಕ್ಷ ಜನರನ್ನು ಸ್ಥಳಾಂತರಿಸತೇವಿ ಅಂತ ಅಲ್ಲಿನ ಸರಕಾರಿ ವಕ್ತಾರರು ಹೇಳ್ಯಾರ. `2012′ ಅನ್ನೋ ಹೆಸರಿನ ಸಿನಿಮಾದಾಗ ವಿಶ್ವದ ಎಲ್ಲಾ ನಾಯಕರು ಲಕ್ಷಾಂತರ ಜನರನ್ನ ಸಮುದ್ರದಾಗ ಬೇರೆ ಕಡೆ ಕರಕೊಂಡು ಹೋಗಬೇಕು ಅಂತ ನಿರ್ಧಾರ ಮಾಡತಾರ. ಆದರ ಅಷ್ಟು ಜನರನ್ನ ಕರಕೊಂಡು ಹೋಗೋವಂಥಾ ಹಡಗು ಕಟ್ಟುವವರು ಯಾರು ಅಂತ ಒಬ್ಬವ ಕೇಳಿದಾಗ ಅಮೆರಿಕದ ವಿಜ್ಞಾನಿಯೊಬ್ಬ ಇಂಥದೆಲ್ಲಾ ಮಾಡೋರ ಚೈನಾದವರಷ್ಟ, ಅಂತ ಹೇಳತಾನ.  ಅಷ್ಟೋತ್ತಿಗೆ ಚೈನಾದವರು ನಾವಾಗಲೇ ಮಾಡಿ ಬಿಟ್ಟೇವಿ ಅಂತ ಹೇಳತಾರ. ಅವರೆಲ್ಲರನ್ನೂ ಸುರಕ್ಷಿತ ಕರಕೊಂಡು ಹೋಗತಾರ.

ಚೈನಾದವರ ಚುರುಕುತನ ಎಲ್ಲರಿಗೂ ಜಗಜ್ಜಾಹೀರು ಆಗೇದ ಅಂತ ಆತು. ನಾವು ಹಿಂಗ ಆಗೋದು ಯಾವಾಗ? ನಮ್ಮಲ್ಲೆ ಒಂದೊಂದು ನಿರ್ಧಾರ ತೊಗೊಳ್ಳೋದು ವರ್ಷಾನುಗಟ್ಟಲೇ ತಡ ಆಗತದ. ಸ್ವಾತಂತ್ರ ಬಂದು 70 ವರ್ಷ ಆದರೂ ಸಹ ‌ ಎಷ್ಟೋ ಜಿಲ್ಲೆ / ತಾಲೂಕುದಾಗ ಶಿಕ್ಷಿತ ಡಾಕ್ಟರುಗಳು ಇಲ್ಲ. ಗಡಿ ತಾಲೂಕುಗಳಾದ ಔರಾದ, ಖಾನಾಪುರ, ಕೊಳ್ಳೇಗಾಲ ಮುಂತಾದ ಕಡೆ ಸ್ನಾತಕೋತ್ತರ ಪದವಿ ಪಡೆದ ಒಬ್ಬ ವೈದ್ಯರೂ ಇಲ್ಲ. ಎಷ್ಟೋ ಜಿಲ್ಲಾ ಆಸ್ಪತ್ರೆಯೊಳಗ ಹಾವು ಕಡಿತಕ್ಕ ಔಷಧಿ ಇಲ್ಲ. ಬ್ರಿಟಿಷರ ಕಾಲದಾಗ ಶುರುವಾದ ಮಲೇರಿಯಾ ಕಂಟ್ರೋಲ್ ಪ್ರೋಗ್ರಾಮು ಇನ್ನೂ ನಡಿಲಿಕ್ಕೆ ಹತ್ತೇದ. ಪ್ರತಿ ಮಾನಸೂನಿನ್ಯಾಗ ಅತಿ ಮುಂದುವರೆದ ಮಂಗಳೂರು ನಗರದಾಗ ಅತಿಹೆಚ್ಚು ಮಲೇರಿಯಾ ರೋಗಿಗಳು ಆಸ್ಪತ್ರೆಗೆ ದಾಖಲಾಗತಾರ. ಆಸ್ಪತ್ರೆಯೊಳಗ ಆಮ್ಲಜನಕ ಇಲ್ಲದೇ ಕೂಸು ಸಾಯತಾವ. ಐದು ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣ ಅತಿ ಹೆಚ್ಚಿರುವ ದೇಶಗಳೊಳಗ ನಮ್ಮದೂ ಒಂದು. ಬಾಣಂತಿಯರ ಸಾವು, ಗುಣಪಡಿಸಬಹುದಾದ ರೋಗದಿಂದ ಸಾಯುವವರ ಸಂಖ್ಯೆ ನಮ್ಮ ಸುತ್ತಮುತ್ತಲಿನ ದೇಶಗಳಿಗಿಂತ ನಮ್ಮಲ್ಲಿ ಹೆಚ್ಚು. ಇವು ಯಾವಾಗ ಸಮಾ ಆಗಬೇಕು? ಛಲೋ ಪರಿಚಯ, ಅನುಭವ ಇರೋ ರೋಗಗಳ ಹಣೆಬರಹಾನ ಹಿಂಗ ಅಂದರ ನಮಗೇನರ ಹೊಸಾ ರೋಗ ಬಂದರ ಹೆಂಗ?

ಅಂದಂಗ ಒಂದು ಮಾತು. ಇದು ಜೋಕು ಅಲ್ಲ. ನಡೆದುಹೋದ ವಿಷಯ.

ಕನ್ನಡವನ್ನು ಬಾಳೆಹಣ್ಣು ಸುಲದು ಸಿಪ್ಪಿ ಬಿಸಾಡುವಷ್ಟು ಸುಲಲಿತವಾಗಿ ಮಾತಾಡುವ ಯುವ ನಾಯಕ ಶ್ರೀರಾಮುಲು ಅವರು ಹಿಂದೊಮ್ಮೆ ಆರೋಗ್ಯ ಸಚಿವರಾಗಿದ್ದಾಗ ಒಂದು ಧುರಂದರ ಘೋಷಣೆ ಮಾಡಿದ್ದರು. ನಮ್ಮ ಆಡಳಿತದಾಗ ಆರೋಗ್ಯ ಇಲಾಖೆ ಎಷ್ಟು ಗಟ್ಟಿ ಆಗೇದ ಅಂದರ ನಾವು ಎಚ್1 ಎನ್1 ಅಲ್ಲಾ, ಎಚ್10 ಎನ್10 ಇದ್ದರೂ ನಾವು ಸಂಭಾಳಸತೇವಿ ಅಂತ. ಆ ಅಚ್ಛೇ ದಿನ ಬಂದೀತು ಅಂತ ನಾವೆಲ್ಲಾ ಕಾಯಕೊಂಡು ಇದ್ದೇವಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭೀಕರ ಪ್ರವಾಹಕ್ಕೆ ಕೊಚ್ಚಿಹೋದ 3 ಸಾವಿರ LPG ಸಿಲಿಂಡರ್

ಮಹಾರಾಷ್ಟ್ರದಲ್ಲಿ ವಾರದಿಂದ ಸುರಿಯುತ್ತಿರುವ ಮಳೆ ಇಡೀ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದು, ಪ್ರಕೃತಿಯ ವಿಕೋಪದ ನಡುವೆ ರಾಯಗಢ ಜಿಲ್ಲೆಯಿಂದ ಅತ್ಯಂತ ಆಘಾತಕಾರಿ ವಿಡಿಯೋವೊಂದು ವೈರಲ್ ಆಗಿದೆ. ಇಲ್ಲಿನ ಎಚ್‌ಪಿಸಿಎಲ್ (HPCL) ಪಾತಾಳಗಂಗಾ ಎಲ್‌ಪಿಜಿ ಬಾಟ್ಲಿಂಗ್...

ಹೈದರಾಬಾದ್‌| ಪವನ್‌ ಕಲ್ಯಾಣ್‌ ಟೀಕಿಸಿದ ಯೂಟ್ಯೂಬರ್ ರಾವಣ್ ಮೇಲೆ ಯುಎಪಿಎ ಕೇಸ್; ನಿವಾಸದಲ್ಲಿ ಪೊಲೀಸರ ಶೋಧ

ತೆಲುಗು ಯೂಟ್ಯೂಬರ್, ಸಾಮಾಜಿಕ ಕಾರ್ಯಕರ್ತ ರಾವಣ್‌ (ಬಚಲಕೂರಿ ಜೋಸೆಫ್) ಅವರನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಬಂಧಿಸಿದ್ದು, ಆಂಧ್ರಪ್ರದೇಶ ಪೊಲೀಸರು ಹೈದರಾಬಾದ್‌ನಲ್ಲಿರುವ ಯೂಟ್ಯೂಬರ್ ರಾವಣ್ ನಿವಾಸದಲ್ಲಿ...

ಬೀದಿಬದಿ ವ್ಯಾಪಾರಿಗಳ ಒಕ್ಕಲೆಬ್ಬಿಸುವಿಕೆ ಖಂಡಿಸಿ ಸರ್ಕಾರದ ವಿರುದ್ದ ಬೃಹತ್ ಪ್ರತಿಭಟನೆ

ಬೆಂಗಳೂರು ನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರವಿನ ಹೆಸರಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ನಡೆಸುತ್ತಿರುವ ಏಕಪಕ್ಷೀಯ ಕಾರ್ಯಾಚರಣೆ ಬಡ ಬೀದಿಬದಿ ವ್ಯಾಪಾರಿಗಳ ಬದುಕನ್ನು ಬೀದಿಗೆ ತಳ್ಳಿದೆ. ಪ್ರಾಧಿಕಾರದ ಈ ಜನವಿರೋಧಿ ‘ಆಪರೇಷನ್’ ಖಂಡಿಸಿ,...

ಬಿಹಾರ| ಹಿಜಾಬ್ ತೆಗೆದು ಹಣೆಗೆ ಸಿಂಧೂರ ಇಟ್ಟುಕೊಳ್ಳುವಂತೆ ಮುಸ್ಲಿಂ ಮಹಿಳೆಗೆ ಒತ್ತಾಯಿಸಿದ ಗುಂಪು

ಪುರುಷರ ಗುಂಪೊಂದು ದಾರಿಯಲ್ಲಿ ಹೋಗುತ್ತಿದ್ದ ಮುಸ್ಲಿಂ ಮಹಿಳೆಯನ್ನು ತಡೆದು ದೌರ್ಜನ್ಯ ಎಸಗಿದ್ದು, ಆಕೆ ಧರಿಸಿದ್ದ ಹಿಜಾಬ್ ತಗೆದು ಹಣೆಗೆ ಸಿಂಧೂರ ಇಟ್ಟುಕೊಳ್ಳುವಂತೆ ಹಿಂದುತ್ವ ಕಿಡಿಗೇಡಿಗಳು ಒತ್ತಾಯಿಸಿರುವ ವಿಡಿಯೊ ವೈರಲ್ ಆಗಿದೆ. ಜುಲೈ 8 ರ...

ಕೃಷಿ ಭೂಮಿ ಉಳಿಸಲು ರೈತ ಸಂಘಟನೆಗಳಿಂದ ಜುಲೈ 11ಕ್ಕೆ ‘ಬಿಡದಿ ಚಲೋ’

ಬಿಡದಿ ಉಪನಗರ (ಟೌನ್‌ಶಿಪ್) ಯೋಜನೆಗಾಗಿ ರೈತರ ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರದ ಜನವಿರೋಧಿ ಧೋರಣೆಯನ್ನು ಖಂಡಿಸಿ, ಜುಲೈ 11 ರಂದು ಬೃಹತ್ ‘ಬಿಡದಿ ಚಲೋ’ ಹಸಿರು ಹೆದ್ದಾರಿ ಪ್ರತಿಭಟನೆಯನ್ನು...

ಅಮೆರಿಕ-ಇರಾನ್ ನಡುವೆ ಮತ್ತೆ ಕಾಳಗ : ಕದನ ವಿರಾಮ ಮುಕ್ತಾಯಗೊಂಡಿದೆ ಎಂದ ಟ್ರಂಪ್

ಮಂಗಳವಾರ ರಾತ್ರಿಯಿಂದ (ಭಾರತೀಯ ಕಾಲಮಾನ) ಅಮೆರಿಕ-ಇರಾನ್ ನಡುವೆ ಮತ್ತೆ ಕಾಳಗ ಶುರುವಾಗಿದ್ದು, ಕದನ ವಿರಾಮ ಮುಕ್ತಾಯಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಟರ್ಕಿಯಲ್ಲಿ ನಡೆದ ನ್ಯಾಟೋ ಶೃಂಗಸಭೆಯಲ್ಲಿ ಮಾತನಾಡಿದ ಟ್ರಂಪ್...

ಅಯೋಧ್ಯೆ ದೇಣಿಗೆ ಹಗರಣ: ಕೇವಲ 45 ದಿನಗಳಲ್ಲಿ 70 ಬಾರಿ ಕಳ್ಳತನ, SIT ವರದಿ

ಅಯೋಧ್ಯೆಯ ರಾಮಮಂದಿರಕ್ಕೆ ಬಂದ ಸಾರ್ವಜನಿಕರ ದೇಣಿಗೆ ದುರುಪಯೋಗದ ಆರೋಪದ ಕುರಿತು ವಿಶೇಷ ತನಿಖಾ ತಂಡ (SIT) ನಡೆಸಿದ ಪ್ರಾಥಮಿಕ ತನಿಖೆಯಲ್ಲಿ, ಕೇವಲ 45 ದಿನಗಳಲ್ಲಿ ಸುಮಾರು 70 ಸಂಶಯಾಸ್ಪದ ಕಳ್ಳತನಗಳು ನಡೆದಿರುವುದಕ್ಕೆ ಪ್ರಾಥಮಿಕ...

ಬರುಯಿಪುರ ಅತ್ಯಾಚಾರ-ಕೊಲೆ ಪ್ರಕರಣ: ಪ್ರಮುಖ ಆರೋಪಿಯ ಎನ್‌ಕೌಂಟರ್; ‘ನನ್ನ ಮಗನ ಶವ ನನಗೆ ಬೇಡ’ ಎಂದ ಹೆತ್ತ ತಾಯಿ!

ಬರುಯಿಪುರ/ಕೋಲ್ಕತ್ತಾ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಬರುಯಿಪುರದಲ್ಲಿ 12 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಮತ್ತು ಕ್ರೂರ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪ್ರಭಾಸ್ ಮೊಂಡೋಲ್ ಬುಧವಾರ...

ವಯನಾಡ್ ಭೂಕುಸಿತ: ಕಾಣೆಯಾದ ಐವರಿಗಾಗಿ ಮುಂದುವರೆದ ಹುಡುಕಾಟ

ಬೆಟ್ಟದ ಜಿಲ್ಲೆಯ ವಯನಾಡ್‌ನಲ್ಲಿ ನಡೆಯುತ್ತಿರುವ ಸುರಂಗ ರಸ್ತೆ ನಿರ್ಮಾಣ ಸ್ಥಳದಲ್ಲಿ ಭೂಕುಸಿತ ಸಂಭವಿಸಿ ಮೂರು ಜೀವಗಳು ಬಲಿಯಾದ ಒಂದು ದಿನದ ನಂತರ, ಕಾಣೆಯಾಗಿರುವ ಐವರಿಗಾಗಿ ಹುಡುಕಾಟ ಮುಂದುವರೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ವಯನಾಡ್...

ನನ್ನನ್ನು ಕೊಂಡುಕೊಳ್ಳಲು ಯಾರ ಕೈಲೂ ಸಾಧ್ಯವಿಲ್ಲ: ಮಹುವಾ ಮೋಯಿತ್ರಾ ವಿಶೇಷ ಸಂದರ್ಶನ

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಜಯಭೇರಿ ಬಾರಿಸಿದ ಬೆನ್ನಲ್ಲೇ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಭದ್ರಕೋಟೆ ಧೂಳೀಪಟವಾಗಿದೆ. ಚುನಾವಣಾ ಸೋಲಿನ ನಂತರ ಸಾಲು...