Homeಕರ್ನಾಟಕಭಾರಿ ವಿರೋಧದ ನಡುವೆಯೂ ಐಟಿ ಕಂಪನಿಗಳಿಗೆ ನೇಮಕಾತಿ ನಿಯಮದಲ್ಲಿ ಮತ್ತೆ ವಿನಾಯ್ತಿ: ಉದ್ಯೋಗಿಗಳಿಗೆ ಶಾಕ್

ಭಾರಿ ವಿರೋಧದ ನಡುವೆಯೂ ಐಟಿ ಕಂಪನಿಗಳಿಗೆ ನೇಮಕಾತಿ ನಿಯಮದಲ್ಲಿ ಮತ್ತೆ ವಿನಾಯ್ತಿ: ಉದ್ಯೋಗಿಗಳಿಗೆ ಶಾಕ್

ಸದ್ಯ ಸಿಗುವ ಸಂಬಳ ಮತ್ತು ಸವಲತ್ತನ್ನಷ್ಟೇ ಸಮಾಜದ ಎದುರು ಪ್ರತಿಷ್ಠೆ ಎಂಬಂತೆ ವೈಭವೀಕರಣ ಮಾಡಿಕೊಳ್ಳುತ್ತಿರುವ ಐಟಿ/ಐಟಿಇಎಸ್ ಕಂಪನಿಗಳ ಉದ್ಯೋಗಿಗಳು ತಮಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ‘ಹೈಟೆಕ್ ಬಾಂಡೆಡ್ ಲೇಬರ್’ಗಳಾಗಿ ಹೋಗಿದ್ದಾರೆ.

- Advertisement -
- Advertisement -

| ಪಿ.ಕೆ. ಮಲ್ಲನಗೌಡರ್ |

ರಾಜ್ಯ ಮೈತ್ರಿ ಸರ್ಕಾರ ಮೇಲಿಂದ ಮೇಲೆ ಎಡವಟ್ಟು ಮಾಡುತ್ತ ಬಂಡವಾಳಶಾಹಿಗಳ ಮುಂದೆ ಬಗ್ಗುತ್ತಿದೆ. ಕಾನೂನು ಇಲಾಖೆಯ ವ್ಯತಿರಿಕ್ತ ಅಭಿಪ್ರಾಯದ ನಂತರವೂ ಜಿಂದಾಲ್ ಕಂಪನಿಗೆ ರಾಜ್ಯದ 3,667 ಎಕರೆ ಭೂಮಿಯನ್ನು ಜಜುಬಿ ಬೆಲೆಗೆ ಮಾರಲು ಒಪ್ಪಿರುವ ಅದು, ಈಗ ಟ್ರೇಡ್ ಯುನಿಯನ್‍ಗಳ ಭಾರಿ ವಿರೋಧದ ನಡವೆಯೂ ಐಟಿ/ಐಟಿಇಎಸ್ ಕಂಪನಿಗಳ ಲಾಬಿಗೆ ಮಣಿದು ನೇಮಕಾತಿ ನಿಯಮಗಳಲ್ಲಿ ಇನ್ನೂ ಐದು ವರ್ಷಗಳ ವಿನಾಯ್ತಿ ನೀಡುವ ಆದೇಶ ಹೊರಡಿಸಿದೆ…

ಲೋಕಸಭೆ ಚುನಾವಣೆಯ ಹೀನಾಯ ಸೋಲಿನ ನಂತರ ‘ಎಚ್ಚೆತ್ತು’ಕೊಂಡಿರುವ ರಾಜ್ಯ ಸರ್ಕಾರ ಪ್ರತಿ ದಿನವೂ ಹೊಸ ಹೊಸ ಆದೇಶಗಳನ್ನು ಹೊರಡಿಸುತ್ತಿದೆ. ಆದರೆ ಅದರ ಆದ್ಯತೆ ಬಲಿತ ಬಂಡವಾಳಶಾಹಿಗಳ ಬೇಡಿಕೆಗಳಿಗೆ ಸ್ಪಂದಿಸುವುದೇ ಹೊರತು, ರಾಜ್ಯದ ಬರ ಪರಿಸ್ಥಿತಿ, ಕುಡಿಯುವ ನೀರು ಮತ್ತು ಮೇವಿನ ಸಮಸ್ಯೆಗೆ ಪರಿಹಾರ ರೂಪಿಸುವ ರಚನಾತ್ಮಕ ಕೆಲಸವಲ್ಲ. ರಾಷ್ಟ್ರೀಯ ಬಿಜೆಪಿ ಇಂತಹ ನೀತಿಗಳ ಕಾರಣದಿಂದಾಗಿಯೇ ಅಭೂತಪೂರ್ವ ಪಾರ್ಟಿ ಫಂಡು ಸಂಗ್ರಹಿಸಿದ್ದೇ ರಾಜ್ಯದ ಮೈತ್ರಿ ಪಕ್ಷಗಳಿಗೂ ಆದರ್ಶ ಎನಿಸಿದೆಯೇನೋ?

ರಾಷ್ಟ್ರಮಟ್ಟದಲ್ಲಿ ಮಾಹಿತಿ ತಂತ್ರಾಜ್ಞಾನ (ಐಟಿ) ಮತ್ತು ಮಾಹಿತಿ ತಂತ್ರಜ್ಞಾನ ಆಧರಿತ ಸೇವಾ (ಐಟಿಇಎಸ್) ಕಂಪನಿಗಳ ಹಿತಾಸಕ್ತಿಯನ್ನು ಕಾಪಾಡಲೆಂದೇ ಇರುವ ನ್ಯಾಸ್ಕಾಮ್ ಎಂಬ ಸಂಸ್ಥೆಯು ಕೆಂದ್ರ ಮತ್ತು ವಿವಿಧ ರಾಜ್ಯಗಳ ಬಜೆಟ್‍ಗಳಿಗೂ ಮೊದಲು ಸರ್ಕಾರಗಳ ಎದುರು ತನ್ನ ಹಿತಾಸಕ್ತಿಗಳಿಗೆ ಧಕ್ಕೆ ಬರದಂತೆ ವ್ಯವಸ್ಥೆ ಮಾಡುತ್ತ ಬಂದಿದೆ. ಇಂತಹ ‘ಸಾಫ್ಟ್’ ಲಾಬಿ ಮಾಡುವುದೇ ಈ ನ್ಯಾಸ್ಕಾಮ್‍ನ ಮೂಲ ಕಸುಬುದಾಂತಿದೆ.

ಈಗ ಆಗಿರುವುದೇನು?
ಕಳೆದ ಎರಡು ದಶಕಗಳಿಂದ ಈ ಐಟಿ/ಐಟಿಇಎಸ್ ಕಂಪನಿಗಳಿಗೆ 1946ರ ಕೈಗಾರಿಕಾ ಉದ್ಯೋಗ (ಸ್ಟ್ಯಾಂಡರ್ಡ್ ಆರ್ಡರ್ಸ್) ಕಾಯ್ದೆಯಿಂದ ವಿನಾಯ್ತಿ ನೀಡುತ್ತ ಬರಲಾಗಿದೆ. ಈ ಕಾಯ್ದೆ ಎಲ್ಲ ಕೈಗಾರಿಕೆಗಳಿಗೂ ಅನ್ವಯ ಆದರೂ ನವ ಉದ್ಯಮ ಎಂಬ ಕಾರಣಕ್ಕಾಗಿ ಮತ್ತು ಈ ಉದ್ಯಮದಲ್ಲಿ ಕಾರ್ಯನಿರ್ವಹಣೆಯ ಪ್ರಕ್ರಿಯೆಗಳು ಅಂತರಾಷ್ಟ್ರೀಯ ಕಾಲಮಾನಕ್ಕೆ ಸಂಬಂಧವನ್ನೂ ಹೊಂದಿವೆ ಎಂಬ ಕಾರಣಕ್ಕಾಗಿ ಈ ಉದ್ಯಮಗಳಿಗೆ ಇಪ್ಪತ್ತು ವರ್ಷಗಳಿಂದ ಈ ಕಾಯ್ದೆಯಿಂದ ವಿನಾಯ್ತಿ ನೀಡುತ್ತ ಬರಲಾಗಿದೆ. ಈ ಕಾಯ್ದೆಯು ಯಾವುದೇ ಕೈಗಾರಿಕಾ ಘಟಕದ ಉದ್ಯೋಗಿಗಳ/ಕಾರ್ಮಿಕರ ಹಿತಾಸಕ್ತಿಗಳನ್ನು ಕಾಪಾಡಲೆಂದು ಇರುವ ಮಹತ್ವದ ಕಾಯ್ದೆ.

ಐಟಿ/ಐಟಿಇಎಸ್ ಕಂಪನಿಗಳಿಗೆ ಇದರಿಂದ ವಿನಾಯ್ತಿ ಎಂದರೆ, ಅವು ಸರ್ಕಾರದ ಯಾವ ನೇಮಕಾತಿಯ ನಿಯಮವನ್ನು ಪಾಲಿಸದೇ ತಮ್ಮ ಮಾನದಂಡಗಳಲ್ಲಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಬಹುದು, ಉದ್ಯೋಗಿಗಳಿಗೆ ಸಂಬಳ ಇತ್ಯಾದಿ ಸವಲತ್ತನ್ನು ತಮ್ಮ ನಿಯಮಗಳ ಅಡಿಯಲ್ಲಿ ಕೊಡಬಹುದು, ಸ್ತ್ರೀಯರು ಸೇರಿದಂತೆ ಎಲ್ಲ ಉದ್ಯೋಗಿಗಳೂ ರಾತ್ರಿ ಪಾಳಯ ಮತ್ತು ರಜಾದಿನಗಳಲ್ಲಿ ಕೆಲಸ ಮಾಡಬೇಕು… ಎಲ್ಲಕ್ಕಿಂತ ಅಮಾನವೀಯವಾದದು ಎಂದರೆ, ಯಾವ ಕಾರಣವನ್ನೂ ನೀಡದೇ, ಮುನ್ಸೂಚನೆಯನ್ನೂ ನೀಡದೇ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಬಹುದು. ಇಲ್ಲಿ ಟ್ರೇಡ್ ಯುನಿಯನ್‍ಗಳನ್ನು ಕಟ್ಟಲು ಅವಕಾಶವೇ ಇರದಂತಾಗಿರುವುದರಿಂದ ಉಚ್ಛಾಟಿತ ಯಾವ ನೌಕರನೂ ಪ್ರತಿಭಟನೆ ಸಲ್ಲಿಸಲಾರ. ಕಾಯ್ದೆಯೇ ಈ ಕಂಪನಿಗಳ ಪರ ಇರುವುದರಿಂದ ಕಂಪನಿಯ ತೀರ್ಮಾನವೇ ಅಂತಿಮ! ಒಟ್ಟಿನಲ್ಲಿ ಯಾವ ಕಾರ್ಮಿಕ ಕಾನೂನುಗಳೂ ಈ ಕಂಪನಿಗಳಿಗೆ ಅನ್ವಯವಾಗದು.

ಕೃಷ್ಣ-ಬಾಬು ಎಂಬ ಐಟಿ ‘ಸ್ಪೂನ್’ಗಳು!
ಈ ಉದ್ಯಮ ತಂತ್ರಜ್ಞಾನದಲ್ಲಿ ತನ್ನದೇ ಛಾಪು ಮೂಡಿಸಲಿ ಎಂಬ ಸದುದ್ದೇಶದಿಂದ ವಿವಿಧ ರಾಜ್ಯ ಸರ್ಕಾರಗಳು ಮೇಲಿನ ವಿನಾಯ್ತಿಗಳನ್ನು ಸ್ಪರ್ಧೆಗೆ ಬಿದ್ದವರಂತೆ ನೀಡುತ್ತ ಬಂದವು. 1999-2004ರ ಅವಧಿಯಲ್ಲಿ ಎಸ್‍ಎಂ ಕೃಷ್ಣ ಮತ್ತು ಚಂದ್ರಬಾಬು ನಾಯ್ಡು ನೇತೃತ್ವದ ಕರ್ನಾಟಕ ಮತ್ತು ಆಂಧ್ರ ಪ್ರದೇಶ ಸರ್ಕಾರಗಳು ಈ ಕಂಪನಿಗಳ ಓಲೈಕೆಗೆ ಬಿದ್ದು ತಮ್ಮ ತಮ್ಮ ರಾಜ್ಯಗಳ ಗ್ರಾಮೀಣ ಭಾಗಗಳನ್ನೆಲ್ಲ ನಿರ್ಲಕ್ಷಿಸಿ, ಕೇವಲ ಬೆಂಗಳೂರು ಮತ್ತು ಹೈದರಾಬಾದ್ ಅಭಿವೃದ್ಧಿಯೇ ತಮ್ಮ ಗುರಿ ಎಂಬಂತೆ ವರ್ತಿಸಿದವು. ಆ ಕಾರಣಕ್ಕೇ ಈ ಇಬ್ಬರು ನಾಯಕರು ಇಂಗ್ಲಿಷ್ ಮೀಡಿಯಾಗಳ ಡಾರ್ಲಿಂಗ್ ಆದರು. ಎರಡೂ ಸರ್ಕಾರಗಳ ಇತರ ನೀತಿಗಳನ್ನು ನಿರ್ಧರಿಸುವ ಹಂತಕ್ಕೂ ಇನ್ಪೋಸಿಸ್ ನಾರಾಯಣಮೂರ್ತಿ ಮತ್ತು ‘ಸತ್ಯಂ’ನ ರಾಮಲಿಂಗರಾಜು ‘ವರ್ಚಸ್ಸು’ ಬೆಳೆಸಿಕೊಂಡಿದ್ದರು. (ಮುಂದೆ ಶೇರು ಅಕ್ರಮದಿಂದಾಗಿ ಸತ್ಯಂನ ರಾಮಲಿಂಗರಾಜು ಜೈಲು ಪಾಲಾದರು, ಅದೇ ಒಂದು ದೊಡ್ಡ ಕತೆ ಬಿಡಿ!)… 2004ರ ವಿಧಾನಸಭೆ ಚುನಾವಣೆಯಲ್ಲಿ ಕೃಷ್ಣ ಮತ್ತು ಬಾಬು ಎಂಬ ಈ ಎರಡು ‘ಮಾಡೆಲ್’ ನಾಯಕರನ್ನು ಜನ ಕಿತ್ತೊಗೆದಿದ್ದರು.

ಮತ್ತೆ ಐದು ವರ್ಷ ರಿಯಾಯ್ತಿ!
ಆ ನಂತರ ನೇರ ಕಾರ್ಯಾಚರಣೆ ಮಾಡದ ಈ ನವೋದ್ಯಮ ಕಂಪನಿಗಳು ತಮ್ಮ ಪ್ರಾತಿನಿಧಿಕ ಸಂಸ್ಥೆ ನ್ಯಾಸ್ಡಾಕ್ ಮೂಲಕ ಐಟಿ ಮತ್ತು ಐಟಿಇಎಸ್ ಕಂಪನಿಗಳ ಹಿತ ಕಾಪಾಡಲು ಸರ್ಕಾರದ ಜೊತೆ ಲಾಬಿ ನಡೆಸುತ್ತಿವೆ. ಈ ಸಲವೂ ಅವು 1946ರ ಕೈಗಾರಿಕಾ ಉದ್ಯೋಗ (ಸ್ಟ್ಯಾಂಡರ್ಡ್ ಆರ್ಡರ್ಸ್) ಕಾಯ್ದೆಯಿಂದ ವಿನಾಯ್ತಿ ಪಡೆಯುವಲ್ಲಿ ಸಫಲವಾಗಿವೆ. ಮೊದಲಿಂದಲೂ ಇತರ ಕ್ಯಗಾರಿಕೆಗಳ ಎಲ್ಲ ಟ್ರೇಡ್ ಯುನಿಯನ್‍ಗಳು ಸರ್ಕಾರ ಈಗಲೂ ಐಟಿ ಕಂಪನಿಗಳಿಗೆ ನೀಡುತ್ತಿರುವ ಈ ಕಾರ್ಮಿಕ ವಿರೋಧಿ ವಿನಾಯ್ತಿಯನ್ನು ವಿರೋಧಿಸುತ್ತ ಬಂದಿವೆ. ಈ ಸಲವಂತೂ ಈ ಯುನಿಯನ್‍ಗಳು ಇದಕ್ಕೆ ಸಾಕಷ್ಟು ವಿರೋಧ ಮಾಡಿದ್ದವು. ಆದರೆ ಸದ್ದಿಲ್ಲದೇ, ಐಎಎಸ್ ಲಾಬಿಯ ಮೂಲಕ ಸರ್ಕಾರವನ್ನು ‘ಅಂದರ್’ ಮಾಡಿಕೊಳ್ಳುವ ನ್ಯಾಸ್ಡಾಕ್ ಸಂಸ್ಥೆ ಈ ಸಲವೂ ತನ್ನ ಕಾರ್ಯಾಚರಣೆಯಲ್ಲಿ ಸಫಲವಾಗಿದೆ.

ಈ ಜನವರಿ 24ಕ್ಕೆ ಈ ವಿನಾಯ್ತಿ ಅವಧಿ ಮುಗಿದಿತ್ತು. ಆದರೆ ಇದೀಗ ರಾಜ್ಯ ಸರ್ಕಾರವು ಹೊಸ ನೊಟೊಫಿಕೇಷನ್ ಹೊರಡಿಸಿ ಇದೇ ಮೇ 25ರಿಂದ ಇನ್ನೂ ಐದು ವರ್ಷಗಳ ಕಾಲ ಈ ವಿನಾಯ್ತಿಯನ್ನು ಮುಂದುವರೆಸಲು ಕಾರ್ಮಿಕ ಇಲಾಖೆಯ ಮೂಲಕ ಆದೇಶ ಹೊರಡಿಸಿದೆ. ಸದ್ಯ ಸಿಗುವ ಸಂಬಳ ಮತ್ತು ಸವಲತ್ತನ್ನಷ್ಟೇ ಸಮಾಜದ ಎದುರು ಪ್ರತಿಷ್ಠೆ ಎಂಬಂತೆ ವೈಭವೀಕರಣ ಮಾಡಿಕೊಳ್ಳುತ್ತಿರುವ ಐಟಿ/ಐಟಿಇಎಸ್ ಕಂಪನಿಗಳ ಉದ್ಯೋಗಿಗಳು ತಮಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ‘ಹೈಟೆಕ್ ಬಾಂಡೆಡ್ ಲೇಬರ್’ಗಳಾಗಿ ಹೋಗಿದ್ದಾರೆ. ಈ ಉದ್ಯೋಗಿಗಳಲ್ಲಿ ಶೇ 60ಕ್ಕೂ ಹೆಚ್ಚಿನ ಇಂಜಿನಿಯರ್‍ಗಳು ಮತ್ತು ಪದವೀಧರರು ಕೇವಲ ‘ಕಟ್ ಆ್ಯಂಡ್ ಪೇಸ್ಟ್’ ಕೆಲಸಕ್ಕೆ ಸಿಮೀತವಾಗಿ ಅಥವಾ ಕೋಡ್ ಮೆಂಟೆನನ್ಸ್ ತರಹದ ಪುನರಾವರ್ತಿ ಕೆಲಸಕ್ಕೆ ನಿಯೋಜನೆಗೊಂಡು ತಮ್ಮ ಜೀವನ ಸೃಜನಶೀಲತೆಯನ್ನೇ ಕಳದುಕೊಳ್ಳ ತೊಡಗಿದ್ದಾರೆ. ಇಂತಹ ಸಾಫ್ಟಿಗಳೇ ಇವತ್ತು ಅಧಿಕ ಪ್ರಮಾಣದ ಮೋದಿ ಭಕ್ತರು ಎಂಬುದರಲ್ಲಿ ಅನುಮಾನವೇ ಬೇಡ!

ಈಗಲೂ ವಿನಾಯ್ತಿ. ರಿಯಾಯ್ತಿ ಬೇಕಾ?
ಕಳೆದ ಎರಡು ವರ್ಷಗಳಿಂದ ಕಾರ್ಮಿಕ ನೀತಿಗಳಲ್ಲಿ ಎಲ್ಲ ರಿಯಾಯ್ತಿಗಳನ್ನು, ಸರ್ಕಾರದಿಂದ ಭೂಮಿ ಮತ್ತು ವಿದ್ಯುತ್ ಪಡೆಯುವಲ್ಲಿ ರಿಯಾಯ್ತಿಗಳನ್ನು ಪಡೆದು ‘ದೈತ್ಯ, ಆದರ್ಶ’ ಕಂಪನಿಗಳೆಂದು ಬೀಗುತ್ತಿರುವ ಮತ್ತು ಮೀಡಿಯಾಗಳಿಂದ ಜೈಪರಾಕ್ ಹೇಳಿಸಿಕೊಳ್ಳುತ್ತಿರುವ ಕಂಪನಿಗಳು ಈ ರಿಯಾಯ್ತಿ, ವಿನಾಯ್ತಿಗಳೆಲ್ಲ ನಮಗಿನ್ನು ಸಾಕು ಎಂದು ಏಕೆ ಹೇಳುತ್ತಿಲ್ಲ? ಇಲ್ಲೇ ಇರುವುದು ಅವುಗಳ ಕಾರ್ಯ ವಿಧಾನದ ಅಸಲಿಯತ್ತು. ಕಾರ್ಮಿಕ ನೀತಿಗಳೆಲ್ಲ ಅನ್ಯವಾದರೆ ಅಲ್ಲಿ ಟ್ರೇಡ್ ಯುನಿಯನ್‍ಗಳ ಸ್ಥಾಪನೆಗೆ ಅವಕಾಶ ಮಾಡಿಕೊಡಬೇಕಾಗುತ್ತದೆ. ಈಗಿನಂತೆ ಕಂಪನಿ ಹಿನ್ನಡೆ ಅನುಭವಿಸಿದಾಗ ಉದ್ಯೋಗಿಗಳನ್ನು ಬೇಕಾಬಿಟ್ಟಿ ತೆಗೆದು ಹಾಕುವಂತಿಲ್ಲ. ರಾತ್ರಿ ಪಾಳೆಯದ ನಿಯಮಗಳೂ ಬದಲು ಆಗುತ್ತವಾದ್ದರಿಂದ ಈ ಕಂಪನಿಗಳ ಉಸಿರೇ ನಿಲ್ಲುತ್ತದೆ.

ಇವತ್ತಿಗೂ ಈ ಕಂಪನಿಗಳಲ್ಲಿ ಬಹುಪಾಲು ಜನ ಕಾಂಟ್ರ್ಯಾಕ್ಟ್ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಈ ಉದ್ಯೋಗಿಗಳನ್ನು ‘ಕನ್ಸಲ್ಟನ್ಸಿ’ ಎಂಬ ಆಧುನಿಕ ದಲ್ಲಾಳಿಗಳ ಮೂಲಕ ನೇಮಿಸಿಕೊಳ್ಳುತ್ತಿದ್ದು, ಇವರೆಲ್ಲತಮ್ಮ ಸಂಬಳಗಳನ್ನು ಈ ಕನ್ಸಲ್ಟನ್ಸಿಗಳ ಮೂಲಕ ಪಡೆಯುತ್ತಿದ್ದಾರೆ. ಈ ಹೊಂದಾಣಿಕೆ ಬೆವರೇ ಹರಿಸದ ಕನ್ಸಲ್ಟನ್ಸಿಗಳಿಗೂ ಮತ್ತು ಉದ್ಯೋಗಿಗಳನ್ನು ಜೀತಕ್ಕೆ ದುಡಿಸಿಕೊಳ್ಳುತ್ತಿರುವ ಐಟಿ/ಐಟಿಇಎಸ್ ಕಂಪನಿಗಳಿಗೆ ವರದಾನವಾಗಿದೆ. ರಿಯಾಯ್ತಿಯಲ್ಲಿ ಭೂಮಿ, ವಿದ್ಯುತ್ ಮತ್ತು ಇತರ ವಿನಾಯ್ತಿ ಪಡೆಯಲರಂದೇ ನೂರಾರು ರಿಯಲ್ ಎಸ್ಟೇಟ್ ಕಂಪನಿಗಳು ಐಟಿ/ಐಟಿಇಎಸ್ ಕಂಪನಿಗಳ ಹೆಸರಲ್ಲಿ ಅಖಾಡಕ್ಕೆ ಧುಮುಕಿ ದಂಧೆ ನಡೆಸಿವೆ. ಇದರಲ್ಲಿ ರಾಜಕಾರಣಿಗಳ ನೇತೃತ್ವದ ಬಿಸಿನೆಸ್ ಕಂಪನಿಗಳೂ ಪಾಲುದಾರಿಕೆ ಹೊಂದಿವೆ.

1946ರ ಕೈಗಾರಿಕಾ ಉದ್ಯೋಗ (ಸ್ಟ್ಯಾಂಡರ್ಡ್ ಆರ್ಡರ್ಸ್) ಕಾಯ್ದೆಯಿಂದ ವಿನಾಯ್ತಿ ಪಡೆದಾಗ ಮಾತ್ರ ಈ ಎಲ್ಲ ಕಾರ್ಮಿಕ ವಿರೋಧಿನ ನೀತಿಗಳನ್ನು ಅನುಸರಿಸಲು ಅವಕ್ಕೆ ಸಾಧ್ಯವಾಗಿದೆ. ಈ ಮೋಸಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಾನೂನಿನ ಮಾನ್ಯತೆ ನೀಡಿರುವುದರಿಂದ ಈ ಕಂಪನಿಗಳು ಸಿಕ್ಕಾಪಟ್ಟೆ ಲಾಭ ಹೊಂಚುತ್ತಿವೆ. ಭೂಮಿ, ವಿದ್ಯುತ್, ವಿದೇಶಿ ರಫ್ತು ಸುಂಕ-ಹೀಗೆಲ್ಲ ರಿಯಾಯ್ತಿ, ವಿನಾಯ್ತಿ ಪಡೆಯುತ್ತಿರುವ ಈ ಕಂಪನಿಗಳ ಒಕ್ಕೂಟಗಳು ಪ್ರಮುಖ ಮುಖ್ಯವಾಹಿನಿ ಪಕ್ಷಗಳಿಗೆಲ್ಲ ಗುಟ್ಟಾಗಿ ಫಂಡ್ ನೀಡುತ್ತ ಭ್ರಷ್ಟಾಚಾರ ಎಸಗುತ್ತಲೇ ಬಂದಿವೆ.

ಇಂತಹ ಕಂಪನಿಗಳಿಗೆ ನಮ್ಮರಾಜ್ಯ ಸರ್ಕಾರ ಮತ್ತೆ ಐದು ವರ್ಷಗಳ ಕಾಲ ಕಾರ್ಮಿಕ ನೀತಿಗಳಿಂದ ವಿನಾಯ್ತಿ ನೀಡಿದ್ದೂ ಆಶ್ಚರ್ಯದ ವಿಷಯವೂ ಅಲ್ಲ, ವಿಸ್ಮಯವೂ ಅಲ್ಲ! ಈಗ ಕಾರ್ಮಿಕ ಪರವಿರುವ ಟ್ರೇಡ್ ಯುನಿಯನ್‍ಗಳು ಸರ್ಕಾರದ ಈ ನಡೆಯ ವಿರುದ್ಧ ಕಾನೂನಾತ್ಮಕ ಹೋರಾಟಕ್ಕೆ ಸಿದ್ಧವಾಗುವ ಕಾಲ ಬಂದಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಛತ್ತೀಸ್‌ಗಢ | ವೇದಾಂತ ವಿದ್ಯುತ್ ಸ್ಥಾವರದಲ್ಲಿ ಬಾಯ್ಲರ್ ಸ್ಫೋಟ: ಮೃತರ ಸಂಖ್ಯೆ 14ಕ್ಕೆ ಏರಿಕೆ

ಛತ್ತೀಸ್‌ಗಢದ ವೇದಾಂತ ವಿದ್ಯುತ್ ಸ್ಥಾವರದಲ್ಲಿ ಸಂಭವಿಸಿದ ಬಾಯ್ಲರ್ ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ ಮತ್ತು 40ಕ್ಕೂ ಹೆಚ್ಚು ಕಾರ್ಮಿಕರು ಗಾಯಗೊಂಡಿದ್ದಾರೆ. ಮಂಗಳವಾರ (ಏ.14) ಮಧ್ಯಾಹ್ನ ಸುಮಾರು 2:30ರ ವೇಳೆ ಕಾರ್ಮಿಕರು ಊಟ ಮಾಡುತ್ತಿದ್ದ ಸಮಯದಲ್ಲಿ ಈ...

ಕ್ಷೇತ್ರ ಮರುವಿಂಗಡಣೆ ವಿವಾದ : ಡಿಎಂಕೆ ಸಂಸದರ ತುರ್ತು ಸಭೆ ಕರೆದ ಸಿಎಂ ಸ್ಟಾಲಿನ್

ಕೇಂದ್ರದ ಪ್ರಸ್ತಾವಿತ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯಿಂದ ರಾಜ್ಯದ ಮೇಲೆ ಉಂಟಾಗುವ ಸಂಭಾವ್ಯ ಪರಿಣಾಮಗಳ ಕುರಿತು ಚರ್ಚಿಸಲು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಬುಧವಾರ (ಏ.15) ಡಿಎಂಕೆ ಸಂಸದರ ತುರ್ತು ಸಭೆ ಕರೆದಿದ್ದಾರೆ. ಸ್ಟಾಲಿನ್ ಚುನಾವಣೆ...

ತಮಿಳುನಾಡು: ಕ್ಷೇತ್ರ ಪುನರ್ವಿಂಗಡೆ ವಿರುದ್ಧ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ: ಕೇಂದ್ರ ಸರ್ಕಾರಕ್ಕೆ ಎಂ.ಕೆ. ಸ್ಟಾಲಿನ್ ಎಚ್ಚರಿಕೆ

ಚೆನ್ನೈ: ಏಪ್ರಿಲ್ 16 ರಂದು ಸಂಸತ್ತಿನ ವಿಶೇಷ ಅಧಿವೇಶನ ಕರೆಯಲಾಗಿರುವ ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯ ವಿರುದ್ಧ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಗಳ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಎಂಕೆ ಅಧ್ಯಕ್ಷರು ಮಂಗಳವಾರ ಬಿಜೆಪಿ...

ಪಶ್ಚಿಮ ಏಷ್ಯಾ ಸಂಘರ್ಷವು 25 ಲಕ್ಷ ಭಾರತೀಯರನ್ನು ಬಡತನಕ್ಕೆ ತಳ್ಳುವ ಅಪಾಯವಿದೆ : ವಿಶ್ವಸಂಸ್ಥೆ ವರದಿ

ಪಶ್ಚಿಮ ಏಷ್ಯಾ ಸಂಘರ್ಷವು 25 ಲಕ್ಷ ಭಾರತೀಯರನ್ನು ಬಡತನದ ಕೂಪಕ್ಕೆ ತಳ್ಳಬಹುದು ಮತ್ತು ದೇಶದ ಮಾನವ ಅಭಿವೃದ್ಧಿ ಪ್ರಗತಿಯಲ್ಲಿ ಸ್ವಲ್ಪ ಮಟ್ಟಿನ ಹಿನ್ನಡೆಯನ್ನುಂಟು ಮಾಡಬಹುದು ಎಂದು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ (ಯುಎನ್‌ಡಿಪಿ) ಹೊಸ...

ಗೋ-ರಕ್ಷಕರ ದಾಳಿಯ ನಂತರ ವ್ಯಕ್ತಿ ನಾಪತ್ತೆ: ಜಮ್ಮುವಿನ ರಾಂಬನ್‌ನಲ್ಲಿ ತೀವ್ರ ಪ್ರತಿಭಟನೆ; ಸಾಮಾಜಿಕ ಮಾಧ್ಯಮಗಳಲ್ಲೂ ಆಕ್ರೋಶ

ಗೋರಕ್ಷಕರ ದಾಳಿಗೆ ಸಂಬಂಧಿಸಿ ಸ್ಥಳೀಯ ನಿವಾಸಿ ತನ್ವೀರ್ ಅಹ್ಮದ್ ಚೋಪನ್ ನಾಪತ್ತೆಯಾದ ನಂತರ ಸೋಮವಾರ ರಾಂಬನ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಸಾವಿರಾರು ಜನರು ಸಂಚಾರ ತಡೆದು ಪ್ರತಿಭಟಿಸಿದ್ದಾರೆ. ಪೊಲೀಸರ ಪ್ರಕಾರ,...

ನಿತೀಶ್ ಕುಮಾರ್ ರಾಜೀನಾಮೆ : ಬಿಹಾರದ ಹೊಸ ಸಿಎಂ ಆಗಿ ಬಿಜೆಪಿಯ ಸಾಮ್ರಾಟ್ ಚೌಧರಿ ಆಯ್ಕೆ

ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ನೀಡಿದ್ದು, ಹೊಸ ಮುಖ್ಯಮಂತ್ರಿಯಾಗಿ ಬಿಜೆಪಿಯ ಸಾಮ್ರಾಟ್ ಚೌಧರಿ ಅವರನ್ನು ಆಯ್ಕೆ ಮಾಡಲಾಗಿದೆ. ಪಾಟ್ನಾದ ಲೋಕ ಭವನದಲ್ಲಿ ಮಂಗಳವಾರ (ಏ.14) ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ (ನಿವೃತ್ತ)...

ಮುಂಬೈ ಸಂಗೀತ ಕಾರ್ಯಕ್ರಮದಲ್ಲಿ ಮಾದಕ ದ್ರವ್ಯ ಸೇವನೆಯಿಂದ ಇಬ್ಬರು ವಿದ್ಯಾರ್ಥಿಗಳು ಸಾವು, ಐವರ ಬಂಧನ; ತನಿಖೆ

ಮಂಗಳವಾರ ಮುಂಬೈನಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಮಾದಕ ದ್ರವ್ಯ ಸೇವಿಸಿದ ಆರೋಪದ ಮೇಲೆ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ. ದಕ್ಷಿಣ ಮುಂಬೈನ ಪ್ರತಿಷ್ಠಿತ ಸಂಸ್ಥೆಯ ವಿದ್ಯಾರ್ಥಿಗಳು ಎಂಬಿಎ ಓದುತ್ತಿದ್ದರು ಎಂದು...

ನಸೀರ್ ಅಹ್ಮದ್‌ರನ್ನು ವಜಾಗೊಳಿಸಿದ್ದೇಕೆ… ಡಿಕೆಶಿ ಹೇಳಿದ್ದೇನು?  

ಮುಖ್ಯಮಂತ್ರಿಗಳು ತಮ್ಮದೇ ಆದ ವಿವಿಧ ಮೂಲಗಳಿಂದ ಮಾಹಿತಿ ಪಡೆದು, ಪಕ್ಷದ ಹಿತದೃಷ್ಟಿಯಿಂದ ನಸೀರ್ ಅಹ್ಮದ್ ವಿಚಾರದಲ್ಲಿ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಮಂಗಳವಾರ (ಏ.14)...

ಆಟೋ ಪರ್ಮಿಟ್‌ಗಳಿಗೆ ಮರಾಠಿ ಭಾಷೆ ಕಡ್ಡಾಯ ನಿಯಮ; ಆರ್‌ಟಿಒ ಅಧಿಕಾರಿಗೆ ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿಕೆ

ಕಳವಳಕಾರಿ ಬೆಳವಣಿಗೆಯಲ್ಲಿ, ಆಟೋ-ರಿಕ್ಷಾ ಪರ್ಮಿಟ್ ಪರಿಶೀಲನೆಗೆ ಮರಾಠಿ ಜ್ಞಾನವನ್ನು ಕಡ್ಡಾಯಗೊಳಿಸುವ ರಾಜ್ಯ ಸರ್ಕಾರದ ಆದೇಶಕ್ಕೆ ವಿರೋಧ ವ್ಯಕ್ತವಾಗಿದ್ದು, ಇದರಲ್ಲಿ ಬಿಷ್ಣೋಯ್ ಗ್ಯಾಂಗ್ ಭಾಗಿಯಾಗಿದೆ ಎಂದು ಆರೋಪಿಸಲಾಗಿದೆ. ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಅಧಿಕಾರಿ...

‘ನಾನು ಪ್ರೀತಿಯಲ್ಲಿ ನಂಬಿಕೆ ಇಡುತ್ತೇನೆ, ಬುಲ್ಡೋಜರ್‌ ರಾಜಕೀಯದಲ್ಲಿ ಅಲ್ಲ’: ಯುಪಿ ಮಾದರಿ ವಿವಾದದ ನಡುವೆ ಯೋಗಿ ವಿರುದ್ಧ ಮಮತಾ ದಾಳಿ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ದಾಳಿ ನಡೆಸಿದ್ದಾರೆ. ಅವರು ಬುಲ್ಡೋಜರ್ ರಾಜಕೀಯದಲ್ಲಿ ನಂಬಿಕೆ ಇಡುವುದಿಲ್ಲ ಎಂದು ಹೇಳಿದ್ದಾರೆ ಮತ್ತು ಉತ್ತರ ಪ್ರದೇಶದಲ್ಲಿ...