Homeಮುಖಪುಟ‘ಜೈ ಭೀಮ್’ಗೆ ಪ್ರಶಂಸೆಯ ಮಹಾಪೂರ: ಇಲ್ಲಿದೆ ಜನರ ಅಭಿಪ್ರಾಯ

‘ಜೈ ಭೀಮ್’ಗೆ ಪ್ರಶಂಸೆಯ ಮಹಾಪೂರ: ಇಲ್ಲಿದೆ ಜನರ ಅಭಿಪ್ರಾಯ

- Advertisement -
- Advertisement -

ನವೆಂಬರ್‌ 2ರಂದು ಬಹು ನಿರೀಕ್ಷಿತ ‘ಜೈ ಭೀಮ್‌’ ಸಿನಿಮಾ ಅಮೆಜಾನ್‌ ಪ್ರೈಮ್‌ ವಿಡಿಯೊದಲ್ಲಿ ಬಿಡುಗಡೆಯಾಗಿದೆ. ನಿರೀಕ್ಷೆಯನ್ನು ಹುಸಿಗೊಳಿಸದೆ ಸಮತಾ ಸಮಾಜದ ನಿರ್ಮಾಣಕ್ಕೆ ಮಿಡಿದಿದೆ.

ಜ್ಯೋತಿಕಾ-ಸೂರಿಯ ಅವರ 2ಡಿ ಎಂಟರ್‌ಟೈನ್‌ಮೆಂಟ್‌ ಪ್ರೊಡಕ್ಷನ್ಸ್‌ನಲ್ಲಿ ತಯಾರಾದ, ನಿಜ ಘಟನೆಯನ್ನು ಆಧರಿಸಿದ ತಮಿಳು ಸಿನಿಮಾ ‘ಜೈ ಭೀಮ್‌’, ಕನ್ನಡ, ತೆಲುಗು, ಮಲಯಾಳಂ, ಹಿಂದಿ ಭಾಷೆಗೂ ಡಬ್‌ ಆಗಿರುವುದರಿಂದ ಅದ್ಭುತ ಕಥನವೊಂದು ಬಹುಭಾಷಾ ಸಮುದಾಯವನ್ನು ಪರಿಣಾಮಕಾರಿಯಾಗಿ ತಲುಪಲು ಕಾರಣವಾಗಿದೆ.

ಟಿ.ಜೆ.ಜ್ಞಾನವೇಲ್‌ ನಿರ್ದೇಶನಕ್ಕೆ ಸಂವೇದನಾಶೀಲ ಮನಸ್ಸುಗಳು ಮಿಡಿದಿವೆ. ಸೂರಿಯ, ಪ್ರಕಾಶ್‌ ರಾಜ್‌, ಕೆ.ಮಣಿಕಂದನ್‌, ಲಿಜೊಮೊಲ್‌ ಜೋಸ್‌‌, ರಾವ್‌ ರಮೇಶ್‌, ರಜಿಶಾ ವಿಜಯನ್‌ ಮೊದಲಾದವರು ನಟಿಸಿರುವ ಜೈ ಭೀಮ್‌, ನ್ಯಾಯಾಂಗದ ಸುತ್ತ ನಡೆಯುವ ಕಥೆಯನ್ನು ಒಳಗೊಂಡಿದೆ. ಅಧಿಕಾರಶಾಹಿ ಕ್ರೌರ್ಯವನ್ನು ಬಿಚ್ಚಿಡುತ್ತಾ ನ್ಯಾಯಾಂಗದ ಮೇಲಿನ ಭರವಸೆಯನ್ನು ಎತ್ತಿ ಹಿಡಿಯುತ್ತದೆ. ಸಿನಿಮಾ ನೋಡಿದವರು ಸಾಮಾಜಿಕ ಮಾಧ್ಯಮಗಳಲ್ಲಿ ಅಭಿನಂದನೆಯ ಮಹಾಪೂರವನ್ನೇ ಹರಿಸಿದ್ದಾರೆ. ಇಂತಹ ಸಿನಿಮಾಗಳು ಹೆಚ್ಚು ಹೆಚ್ಚು ಮೂಡಿಬರಬೇಕೆಂದು ಪ್ರೋತ್ಸಾಹಿಸಿದ್ದಾರೆ.

ಅಲಕ್ಷಿತ ಸಮುದಾಯಗಳ ಕುರಿತು ತಮಿಳು ಚಿತ್ರದಲ್ಲಿ ಮೂಡಿಬರುತ್ತಿರುವ ಸಾಲು ಸಾಲು ಸಿನಿಮಾಗಳ ಕುರಿತು ಪ್ರಶಂಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಪ.ರಂಜಿತ್‌ ಅವರ ‘ಕಾಲಾ’, ‘ಮದ್ರಾಸ್‌’, ‘ಸರಪಟ್ಟ ಪರಂಬರೈ’, ವೆಟ್ಟಿಮಾರನ್‌ ಅವರ ‘ಅಸುರನ್‌’, ‘ವಿಸಾರಣೈ’, ಮಾರಿ ಸೆಲ್ವರಾಜ್‌ ಅವರ ‘ಪೆರಿಯೇರುಮ್‌ ಪೆರುಮಾಳ್‌’, ‘ಕರ್ಣ‌ನ್‌’ ಸಾಲಿಗೆ ಟಿ.ಜೆ.ಜ್ಞಾನವೇಲ್‌‌ ಅವರ ‘ಜೈಭೀಮ್‌’ ಸೇರಿದೆ ಎಂದು ಕನ್ನಡದ ಮನಸ್ಸುಗಳು ಮೆಚ್ಚುಗೆ ವ್ಯಕ್ತಪಡಿಸಿವೆ. ಸಾಮಾಜಿಕ ಮಾಧ್ಯಮದಲ್ಲಿ ಪ್ರಶಂಸೆಯ ಮಹಾಪೂರವೇ ಹರಿದುಬಂದಿದ್ದು, ಸಾಂಕೇತಿಕವಾಗಿ ಕೆಲವು ಲೇಖಕರ ಟಿಪ್ಪಣಿಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿರಿ: ‘ಜೈ ಭೀಮ್‌’ ನಂತಹ ಮತ್ತಷ್ಟು ಚಿತ್ರಗಳು ಬರಲಿ: ಚಿತ್ರತಂಡಕ್ಕೆ ತಮಿಳುನಾಡು ಸಿಎಂ ಸ್ಟಾಲಿನ್ ಶ್ಲಾಘನೆ

ಜಗದೀಶ್‌ ಕೊಪ್ಪ ಅವರ ಅಭಿಪ್ರಾಯ

“…. ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾದ ತಮಿಳು ಚಿತ್ರ ಜೈ ಭೀಮ್ ನಾಯಕ ನಟ ಸೂರ್ಯನ ಪ್ರತಿಭೆ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ. ತಮಿಳು ಚಿತ್ರರಂಗದಲ್ಲಿ ದುಬಾರಿ ಎನಿಸಬಹುದಾದ ಸಂಭಾವನೆ ಪಡೆಯುವ ನಟರಲ್ಲಿ ಧನುಷ್ ಮತ್ತು ಸೂರ್ಯ ಮುಖ್ಯರಾದವರು. ಆದರೆ, ಚಿತ್ರಕಥೆಗೆ ಸರಿ ಸಮಾನರಾಗಿ ತಮ್ಮ ಸ್ಟಾರ್ ಗಿರಿಯ ಇಮೇಜ್ ಅನ್ನು ಪಕ್ಕಕ್ಕೆ ಇಟ್ಟು ಅಭಿನಯಿಸುವುದರಲ್ಲಿ ಈ ಇಬ್ಬರು ನಾಯಕರು ಇಡೀ ದಕ್ಷಿಣ ಭಾರತಕ್ಕೆ ಮಾದರಿಯಾಗಿದ್ದಾರೆ. ಇತ್ತೀಚೆಗೆ ವಿಜಯ್ ಸೇತುಪತಿ ಹೆಸರನ್ನು ಸಹ ಸೇರಿಸಬಹುದು.”

ನಿನ್ನೆ ಬೆಳಿಗ್ಗೆ ಚೆನ್ನೈ ನಗರದಲ್ಲಿ ನಡೆದ ಪ್ರೀಮಿಯರ್ ಷೋ ನಂತರ ಸಂಜೆ ವೇಳೆಗೆ ದಿ ಹಿಂದೂ, ಟೈಮ್ಸ್ ಆಫ್ ಇಂಡಿಯಾ, ಇಂಡಿಯನ್ ಎಕ್ಸ್‌ಪ್ರೆಸ್‌ ಹಾಗೂ ಎನ್.ಡಿ.ಟಿ.ವಿ. ಮಾಧ್ಯಮಗಳ ಜಾಲತಾಣಗಳಲ್ಲಿ ಹರಿದು ಬಂದ ವಿಮರ್ಶೆ ನೋಡಿ ಆಶ್ಚರ್ಯಪಟ್ಟೆ. ಇತ್ತೀಚಿನ ದಿನಗಳಲ್ಲಿ ಬಂದ ಶ್ರೇಷ್ಠ ಮಟ್ಟದ ವಿಮರ್ಶೆ ಅದಾಗಿತ್ತು. ಕಳೆದ ವರ್ಷ ನಮ್ಮ ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಅವರ ಕಥೆ ಆದರಿಸಿದ ಸಿನಿಮಾ ನಿರ್ಮಿಸಿ ಯಶಸ್ವಿಯಾಗಿದ್ದ ಸೂರಿಯ, ಈಗ 1995ರ ನೈಜ ಘಟನೆ ಆದರಿಸಿದ ಕಥೆಯನ್ನು ಆಯ್ಕೆ ಮಾಡಿಕೊಂಡು ಪ್ರಶಂಸೆಗೆ ಪಾತ್ರನಾಗಿದ್ದಾನೆ. ನಮ್ಮ ಅಪ್ಪುವಿನ ವಯಸ್ಸು ಸೂರ್ಯನದು. (46) ಆದರೆ, ಪೇರಳಗನ್ ಹಾಗೂ ಸಿಂಘಂ ಸರಣಿಯ ಚಿತ್ರಗಳ ಮೂಲಕ ತಮಿಳು ರಸಿಕರ ಮನಗೆದ್ದ ನಟ.

ಇಲಿ, ಹಾವು ಹಿಡಿದು ಬದುಕುವ ಇರುಳರು ಎಂಬ ಮುಗ್ದ ಬುಡಕಟ್ಟು ಜನಾಂಗ ಪೋಲಿಸರ ಕಪಿಮುಷ್ಟಿಗೆ ಸಿಲುಕಿ ನರಳಿದ ಇತಿಹಾಸವನ್ನು ಈ ಚಿತ್ರದಲ್ಲಿ ನಿರ್ದೇಶಕ ಜ್ಞಾನವೇಲ್ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾನೆ. ಈ ಹಿಂದೆ ರಾಷ್ಟ್ರಪ್ರಶಸ್ತಿ ಪಡೆದ ವಿಸಾರಣೈ ಸಿನಿಮಾದ ಹಾಗೆ ಈ ಸಿನಿಮಾ ಕೂಡ ಪ್ರೇಕ್ಷರನ್ನು ಗಂಭೀರ ಚಿಂತನೆಗೆ ದೂಡುತ್ತದೆ.

ನತದೃಷ್ಟರಿಗೆ ನ್ಯಾಯ ದೊರಕಿಸಿಕೊಡುವ ವಕೀಲನ ಪಾತ್ರದಲ್ಲಿ ಸೂರಿಯ ಅಭಿನಯ ಬಹುಕಾಲ ನಮ್ಮಲ್ಲಿ ಉಳಿಯುವಂತಹದ್ದು. ನಾಯಕಿ, ಹಾಡು, ಡ್ಯಾನ್ಸ್ , ಪೈಟಿಂಗ್ ಗಳಿಲ್ಲದ ಚಿತ್ರಗಳಲ್ಲಿ ಸ್ಟಾರ್ ನಟರು ಅಭಿನಯಿಸಬಲ್ಲರೆ? ಎಂಬ ಪ್ರಶ್ನೆಗೆ ಈ ಸಿನಿಮಾ ಸಾಕ್ಷಿಯಾಗಿದೆ.

ಧನುಷ್ ಅಭಿನಯದ ಅಸುರನ್ ಸಿನಿಮಾ ನಂತರ ನಾನು ನೋಡಿದ ಅತ್ಯುತ್ತಮ ತಮಿಳು ಚಿತ್ರಗಳಲ್ಲಿ ಜೈ ಭೀಮ್ ಒಂದು. ತಪ್ಪದೇ ಪ್ರಜ್ಞಾವಂತರು ನೋಡಬೇಕಾದ ಸಿನಿಮಾ ಇದು.

ಇದನ್ನೂ ಓದಿರಿ: ಪುನೀತ್‌ ನಿಧನ: ಅರ್ಧಕ್ಕೆ ನಿಂತು ಹೋಯಿತು ಸಾಲು ಸಾಲು ಸಿನಿಮಾ

ರಘೋತ್ತಮ ಹೋ.ಬ. ಅವರ ಅಭಿಪ್ರಾಯ

“…ಬುಡಕಟ್ಟು ಸಮುದಾಯದ ಆ ವ್ಯಕ್ತಿಯ ಹತ್ಯೆಯ ಆ ಪ್ರಕರಣವನ್ನು ಚಿತ್ರದುದ್ದಕ್ಕು ವಕೀಲ ಚಂದ್ರು ಎತ್ತಿಕೊಂಡು ಸಾಗುವ ಪರಿ ಸಿಂಪ್ಲಿ ಥ್ರಿಲ್ಲಿಂಗ್, ನ್ಯಾಯಾಲಯದ ಹೋರಾಟದ ಜೊತೆಗೆ ಕಮ್ಯುನಿಸ್ಟ್ ಪಕ್ಷವೊಂದರ ಅಡಿಯಲ್ಲು ಚಂದ್ರು ಹೋರಾಟಕ್ಕೆ ಅಣಿಯಾಗುತ್ತಾರೆ ಎಂದರೆ ಚಿತ್ರದ ಬಿರುಸು ಎಂತಹದ್ದು ಎಂಬುದನ್ನು ಯಾರಾದರೂ ಊಹಿಸಬಹುದು. ಈ ನಡುವೆ ಹಾದಿ ತಪ್ಪುತ್ತಿದ್ದ ತನಿಖೆಯನ್ನು ಸರಿ ದಾರಿಗೆ ತರುವ ಮೂಲಕ ಚಂದ್ರು ತನಿಖೆಯನ್ನು ಉನ್ನತ ಮಟ್ಟದ ಪೊಲೀಸ್ ಅಧಿಕಾರಿಯೊಬ್ಬರ ಕೈಗೆ ಕೊಡಿಸುವಲ್ಲಿ ಯಶಸ್ವಿಯಾಗುತ್ತಾನೆ. ಆ ಉನ್ನತ ಅಧಿಕಾರಿಯ ಪಾತ್ರ ನಮ್ಮ ಕನ್ನಡದ ಪ್ರಕಾಶ್ ರೈ ರದ್ದು ಎಂದರೆ ಅದರ ಕಟ್ಟುವಿಕೆ ಹೇಗಿರುತ್ತದೆ ಎಂಬುದನ್ನು ಇಲ್ಲಿ ಬಿಡಿಸಿ ಹೇಳುವ ಅಗತ್ಯವಿಲ್ಲ…”

***

ವಿ.ಎಲ್‌.ನರಸಿಂಹಮೂರ್ತಿಯವರ ಅಭಿಪ್ರಾಯ

“Felt ashamed and guilty after watching this movie. Hats off to ‘Jai Bhim’ team. ಇಂತಹ ಎಷ್ಟು ತಬ್ಬಲಿ ಸಮುದಾಯಗಳ ಅಸಹಾಯಕತೆಯ ನಿಟ್ಟುಸಿರನ್ನ ಉಸಿರಾಡಿಕೊಂಡು ಬದುಕಿದೆ ಈ ದೇಶ !”

***

ಹರ್ಷಕುಮಾರ್‌ ಕುಗ್ವೆ ಹೀಗೆ ಬರೆಯುತ್ತಾರೆ:

“ಬುಡಕಟ್ಟು ಅಲೆಮಾರಿ ಜನರಿಗೂ ಸುಂದರವಾದ ಕನಸುಗಳಿರುತ್ತವೆ ಮತ್ತು ಆ ಕನಸುಗಳನ್ನು ನಮ್ಮ ಸೋ ಕಾಲ್ಡ್ ನಾಗರಿಕ ವ್ಯವಸ್ಥೆ ಮತ್ತು ಪ್ರಭುತ್ವಗಳು ಕ್ರೂರವಾಗಿ ಹೊಸಕಿ ಹಾಕುತ್ತವೆ ಎಂಬ ಸಾಮಾಜಿಕ ವಾಸ್ತವವನ್ನು ತೋರಿಸುವ ಸಿನಿಮಾ. ಬಹುದಿನಗಳ ವರೆಗೆ ನಮ್ಮನ್ನು ಕಾಡಬಲ್ಲ ಸಿನಿಮಾ ಇದು.

ಸಿನಿಮೀಯ ಹೀರೋಯಿಸಂನಿಂದಾಚೆಗೆ ನಿಜ ಜೀವನದ ನಿಜವಾದ ಹೀರೋ ಒಬ್ಬನ ಕೆಚ್ಚೆದೆಯ ಹೋರಾಟವನ್ನು ತಮಿಳು ಸೂಪರ್ ಸ್ಟಾರ್ ಸೂರ್ಯ ತೆರೆಯ ಮೇಲೆ ಅಭಿನಯಿಸಿ ತೋರಿಸಿರುವ ರೀತಿಯೂ ಅನನ್ಯ. ನಿರ್ದೇಶಕ ಟಿ ಜೆ ಜ್ಞಾನವೇಲುಗೆ ಕೋಟಿ ವಂದನೆ. ಪರಭಾಷೆಯ ಅದ್ಭುತ ಸಿನಿಮಾವೊಂದನ್ನು ಅಷ್ಟೇ ಒರಿಜಿನಲ್ ಆದ ರೀತಿಯಲ್ಲಿ ಡಬ್ಬಿಂಗ್ ನಿಂದಾಗಿ ಕನ್ನಡದಲ್ಲೇ ನೋಡುವಂತಾಗಿದ್ದು ಬಹಳ ಖುಷಿ. ಅಮೇಜಾನ್ ಪ್ರೈಂ ನಲ್ಲಿ JAI BHIM ಸಿನಿಮಾವನ್ನು ಕನ್ನಡದಲ್ಲೇ ನೋಡಿ. (Audio Language – ಕನ್ನಡ ಆಯ್ಕೆ ಮಾಡಿಕೊಳ್ಳಬೇಕು) ಇಂದು ಸಂಜೆ 6.30 ಕ್ಕೆ ಈ ಸಿನಿಮಾ ಕುರಿತು ಒಂದು ಕ್ಲಬ್ ಹೌಸ್ ಚರ್ಚೆ ಇದೆ. ಭಾಗವಹಿಸಿ.

***

ನಾಗೇಗೌಡ ಕೀಲಾರ ಅವರ ಅಭಿಪ್ರಾಯ

ಕನ್ನಡ ಪಿಚ್ಚರ್ ಬಂದರೆ ಮೂಗು ಮುರಿಯುತ್ತಾರೆ ಅದೇ ತಮಿಳು, ಮಲಯಾಳಂ ಪಿಚ್ಚರ್ ಬರಲಿ ಅಪ್ಪಿ ಮುದ್ದಾಡುತ್ತಾರೆ ಅಂತ ಒಂದು ಕಂಪ್ಲೈಂಟ್ ಇದೆ. ಹಿಂಗೇ ಕಂಪ್ಲೈಂಟ್ ಮಾಡುವವರು ಈ ಸಿನಿಮಾ ನೋಡ್ರಪ್ಪಾ ಆಮೇಲೆ ಅರ್ಥ ಆಗುತ್ತೆ ಕನ್ನಡ ಸಿನಿಮಾ ಮೇಲೆ ಕಂಪ್ಲೈಂಟ್ ಮಾಡುವವರು ನಮ್ಮ ಕನ್ನಡದಲ್ಲೂ ಏಕೆ ಇಂತಹ ಸಿನಿಮಾಗಳು ಬರುತ್ತಿಲ್ಲ ಅನ್ನುವ ನೋವು ಹತಾಶೆಯಿಂದ ಕಂಪ್ಲೈಂಟ್ ಮಾಡುತ್ತಾರೆ ಅನ್ನುವುದು.


ಇದನ್ನೂ ಓದಿರಿ: ಅಪ್ಪು ಅಗಲಿಕೆ: ಎಲ್ಲಾ ನಟರ ಅಭಿಮಾನಿಗಳಿಂದ ’ಸ್ಟಾಪ್ ಫ್ಯಾನ್ಸ್ ವಾರ್’ ಅಭಿಯಾನ

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...