Homeಮುಖಪುಟಜಾರ್ಖಂಡ್‌ನಲ್ಲಿ ಹುಲ್ ಜೋಹಾರ್! ಬಿರ್ಸಾ ನೆಲ ಆಯ್ದುಕೊಂಡಿದ್ದು ಜಲ್ ಜಂಗಲ್ ಜಮೀನ್..

ಜಾರ್ಖಂಡ್‌ನಲ್ಲಿ ಹುಲ್ ಜೋಹಾರ್! ಬಿರ್ಸಾ ನೆಲ ಆಯ್ದುಕೊಂಡಿದ್ದು ಜಲ್ ಜಂಗಲ್ ಜಮೀನ್..

ದೇಶಾದ್ಯಂತ ಪೌರತ್ವ ಕಾಯಿದೆ(ಸಿಏಏ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯ ವಿರುದ್ಧ ಆಗುತ್ತಿರುವ ಪ್ರತಿಭಟನೆಗಳ ನಡುವೆಯೇ ಈ ಫಲಿತಾಂಶಗಳು ಬಂದಿವೆ. ಹಾಗಾಗಿ ಈ ಪ್ರಯೋಗದ ರೂವಾರಿಗಳಾದ ಮೋದಿ-ಶಾ ಜೋಡಿಗೆ ಇದು ಡಬಲ್ ಹಿನ್ನಡೆಯಾಗಿದೆ

- Advertisement -
- Advertisement -

ರಘುಬರ್ ದಾಸ್ ನೇತೃತ್ವದ ಬಿಜೆಪಿ ಸರಕಾರವು ಜಾರ್ಖಂಡ್‌ನಲ್ಲಿ ಸೋಲು ಕಂಡಿದೆ. ಇದನ್ನು ಆರ್‌ಎಸ್‌ಎಸ್‌ನ ಹಿಂದುತ್ವ ಪ್ರಯೋಗಶಾಲೆಗಳಲ್ಲಿ ಒಂದೆಂದೂ ಕರೆಯಲಾಗಿತ್ತು. ಹಾಗಾಗಿ ಈ ಚುನಾವಣೆ ಕೇವಲ ರಾಜ್ಯದ ಆದಿವಾಸಿ ವರ್ಗಕ್ಕೆ ಸೇರದ ಮೊದಲ ಮುಖ್ಯಮಂತ್ರಿಯ ನಿರ್ಗಮನವಷ್ಟೇ ಅಲ್ಲದೇ, ಬಿಜೆಪಿಯ ಸಾಮಾಜಿಕ ಸಮೀಕರಣದ ವಿನ್ಯಾಸಗಳಿಗೂ ಸೋಲು ಎನ್ನಬಹುದಾಗಿದೆ. ಇದು ಕೇವಲ ಬಿಜೆಪಿಯ ಬೆಂಬಲಿಗರಿಗೆ ಮಾತ್ರವಲ್ಲ, ಮೋದಿ ಮತ್ತು ಅಮಿತ್ ಶಾರ ಚಾಣಕ್ಯ ನೀತಿ ಮತ್ತು ಅವರ ಸೋಲಲಾರರು ಎಂದು ನಂಬಿದವರಿಗೂ ಆಘಾತ ತಂದುಕೊಟ್ಟಿದೆ.

ಆಡಳಿತವಿರೋಧಿ ಅಲೆ, ಆದಿವಾಸಿ ಸಮುದಾಯಕ್ಕೆ ಸೇರದ ಮುಖ್ಯಮಂತ್ರಿ ಮತ್ತು ಬುಡಕಟ್ಟು ನೀತಿಗಳು

ಜಾರ್ಖಂಡ್‌ನಲ್ಲಿ ಬುಡಕಟ್ಟು ಸಮುದಾಯಗಳ ಅನುಪಾತ 26-30%ರಷ್ಟು. ಪರಿಶಿಷ್ಟ ಸಮುದಾಯಗಳಿಗೆ ಮೀಸಲಾದ 28 ಕ್ಷೇತ್ರಗಳಲ್ಲಿ ಜೆಎಮ್‌ಎಮ್-ಆರ್‌ಜೆಡಿ-ಕಾಂಗ್ರೆಸ್ ಮೈತ್ರಿಯು 25ರಲ್ಲಿ ಗೆಲುವು ಸಾಧಿಸಿದೆ. 2014ರಲ್ಲಿ ಬಿಜೆಪಿಯು 11 ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು.

ಅಲ್ಲಿ ಆಗಿದ್ದೇನು?

ಆದಿವಾಸಿಗಳ ಭೂಮಿಯನ್ನು ಕಬಳಿಸಲು ಸುಲಭವಾಗುವಂತೆ ಮಾಡಿದ ರಘುಬರ್ ದಾಸ್ ಅವರ ಕ್ರಮಗಳಿಂದ ಸಿಟ್ಟು ಮತ್ತು ತೀವ್ರ ಅಸಮಾಧಾನ ಉಂಟಾಗಿತ್ತು. ಪರಿಶಿಷ್ಟ ಸಮುದಾಯಗಳ ಭೂಕಬಳಿಕೆಯನ್ನು ತಡೆಯಲು ಇದ್ದ ಬುಡಕಟ್ಟು ಟೆನನ್ಸಿ ಕಾಯಿದೆಗೆ 2017ರಲ್ಲಿ ತಿದ್ದುಪಡಿ ತರಲು ಪ್ರಯತ್ನಿಸಿದರು. ಇದರಿಂದ ಬುಡಕಟ್ಟು ಸಮುದಾಯಗಳ ವಿಶ್ವಾಸವನ್ನು ಕಳೆದುಕೊಳ್ಳವಂತಾಯಿತು. ಈ ಕಾಯಿದೆಯನ್ನು ಬದಲಿಸಿ, ಆದಿವಾಸಿ ಭೂಮಿಯ ವಾಣಿಜ್ಯ ಬಳಕೆಗಾಗಿ ಛೋಟಾನಾಗಪುರ್ ಟೆನನ್ಸಿ ಕಾಯಿದೆ (ಸಿಎನ್‌ಟಿಏ) ಮತ್ತು ಸಂಥಲ್ ಪರಗನಾಸ್ ಟೆನನ್ಸಿ ಕಾಯಿದೆ (ಎಸ್‌ಪಿಟಿಏ)ಗಳಿಗೆ ತಿದ್ದುಪಡಿ ತರಲು ಪ್ರಯತ್ನಿಸಿದರು. ಈ ಕ್ರಮವನ್ನು ಕಾರ್ಪೋರೇಟ್ ಪರ ಮತ್ತು ಆದಿವಾಸಿ ವಿರೋಧಿ ಎಂದು ನೋಡಲಾಯಿತು. ಕಾಂಗ್ರೆಸ್-ಜೆಮ್‌ಎಮ್ಎಮ್‌ ಪಕ್ಷಗಳು ಅಲ್ಲಿಯ ಚರ್ಚಿನೊಂದಿಗೆ ಸೇರಿಕೊಂಡು ಈ ತಿದ್ದುಪಡಿಗಳನ್ನು ವಿರೋಧಿಸಿದವು. ಆದಿವಾಸಿ ಸಮುದಾಯಗಳ ವಿರೋಧ ಮತ್ತು ಸಿಟ್ಟನ್ನು ನೋಡಿ ಲೋಕಸಭೆ ಚುನಾವಣೆಗೆ ಮುನ್ನ ಈ ತಿದ್ದುಪಡಿಗಳನ್ನು ಕೈಬಿಡಲಾಯಿತು. ಆದರೆ ಅಷ್ಟರಲ್ಲಿ ಅಲೆ ತಿರುಗಿತ್ತು.

ಹೇಮಂತ್‌ ಸೊರೆನ್‌ ಮತ್ತು ಶಿಬು ಸೊರೆನ್‌

ಈ ತಿದ್ದುಪಡಿಗಳು ಸೃಷ್ಟಿಸಿದ ಆತಂಕಗಳು ‘ಪಥಾಲ್‌ರ‍್ಹಿ ಆಂದೋಲನ’ ಎಂಬ ಚಳವಳಿ (ಹುಲ್ ಜೋಹಾರ್ ಎಂಬುದು ಅವರ ಘೋಷವಾಕ್ಯ) ಹುಟ್ಟಲು ಕಾರಣವಾದವು. ಈ ಚಳವಳಿಯನ್ನು ಹತ್ತಿಕ್ಕಲು ದಾಸ್ ಸರಕಾರವು ಕನಿಷ್ಠ 10,000 ಜನರ ಮೇಲೆ ಪ್ರಕರಣ ದಾಖಲಿಸಿತು; ಅವರಲ್ಲಿ ಅನೇಕರು ಇನ್ನೂ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಹೋರಾಟಗಾರ್ತಿ ದಯಾಮಣಿ ಬಾರ್ಲಾ ಚುನಾವಣೆಗೆ ಸ್ಪರ್ಧಿಸಿದ ಕ್ಷೇತ್ರದ ಜಿಲ್ಲೆ ಖುಂಟಿಯಲ್ಲಿಯೇ 26 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಅವುಗಳಲ್ಲಿ ದೇಶದ್ರೋಹ, ಅಪಹರಣ, ಬಲಾತ್ಕಾರ ಮತ್ತು ಇತರ ಗಂಭೀರ ಆರೋಪಗಳನ್ನು ಆದಿವಾಸಿ ಮುಖಂಡರ ವಿರುದ್ಧ ದಾಖಲಿಸಲಾಗಿದೆ. ಪೊಲೀಸ್ ದಬ್ಬಾಳಿಕೆಯ ವಿರುದ್ಧ ಪ್ರತಿಭಟಿಸುತ್ತ ತಮ್ಮ ಆಧಾರ್ ಕಾರ್ಡಗಳನ್ನು ನೆಲದಲ್ಲಿ ಹೂತು, ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿದ್ದರು. ಮೀಸಲು ಕ್ಷೇತ್ರದಿಂದಲೇ ಬಿಜೆಪಿಯ ರಾಜ್ಯ ಅಧ್ಯಕ್ಷ ಲಕ್ಷ್ಮಣ ಗಿಲುವಾ ಸೋತಿರುವುದು ಆದಿವಾಸಿಗಳ ಸಿಟ್ಟಿನ ಪ್ರಮಾಣವನ್ನು ತೋರಿಸುತ್ತದೆ. ಪಥಾಲ್‌ರ‍್ಹಿ ಆಂದೋಲನದಲ್ಲಿ ಪಾಲ್ಗೊಂಡ ಜನರ ಮೇಲೆ ಪೊಲೀಸರು ಕೈಗೊಂಡ ಕ್ರಮಕ್ಕೆ ಅವರು ಗಟ್ಟಿಯಾಗಿ ಸಮರ್ಥಕರಾಗಿದ್ದರು.

ದಯಾಮಣಿ ಬಾರ್ಲಾ

ದೇಶದಲ್ಲೇ ಅತಿ ಹೆಚ್ಚು ಗುಂಪು ಹಲ್ಲೆ (ಮಾಬ್ ಲಿಂಚಿಂಗ್)ಗಳು ಆದ ರಾಜ್ಯ ಝಾರ್ಖಂಡ್; 20 ಇಂತಹ ಪ್ರಕರಣಗಳು ದಾಖಲಾಗಿವೆ. ಮತಾಂತರ ಮತ್ತು ಗೋ ಸಂಬಂಧಿತ ವಿಷಯಗಳ ಬಗ್ಗೆ ಮುಖ್ಯಮಂತ್ರಿ ತೋರಿದ ಸೈದ್ಧಾಂತಿಕ ಪ್ರತಿಪಾದನೆಯೂ ಅಲ್ಲಿಯ ಹಿಂದು, ಕ್ರಿಶ್ಚಿಯನ್ ಮತ್ತು ಆದಿವಾಸಿ ಸಮುದಾಯಗಳಿಗೆ ಒಪ್ಪಿಗೆಯಾಗಲಿಲ್ಲ.

ಮೋದಿ ಅಲೆ ಕಣ್ಮರೆಯಾಗುತ್ತಿದೆಯೇ?

ಇದು ಕೇವಲ ಜನಪ್ರಿಯತೆ ಕಳೆದುಕೊಂಡ ಮುಖ್ಯಮಂತ್ರಿಯ ಸೋಲೇ ಹೊರತು ಮೋದಿ ಅಲೆಯ ಬಗ್ಗೆ ಇದು ಏನನ್ನೂ ಹೇಳುವುದಿಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಪ್ರಚಾರವನ್ನು ನೋಡಿದಾಗ, ಮೋದಿ ಮತ್ತು ಶಾ ಇಬ್ಬರೂ ಪ್ರತ್ಯೇಕವಾಗಿ 9 ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದರು. ರಾಮ ಮಂದಿರದ ಬಗ್ಗೆ, ಆರ್ಟಿಕಲ್ 370ಅನ್ನು ಹಿಂಪಡೆದ ಬಗ್ಗೆ ತಮ್ಮ ಸಾಧನೆಗಳ ಬಗ್ಗೆ ಮತ್ತು ಕಾಂಗ್ರೆಸ್‌ನ ವಿಫಲತೆಗಳ ಬಗ್ಗೆ ಭಾಷಣ ಬಿಗಿದರು. ಪೌರತ್ವ ಕಾನೂನಿನ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದಾಗಲೇ ಕೆಲವು ರ‍್ಯಾಲಿಗಳಾದವು. ‘ಗಲಭೆ ಮಾಡುವವರನ್ನು ಅವರ ಬಟ್ಟೆ ನೋಡಿ ಗುರುತಿಸಬಹುದು’ ಎಂದು ಮೋದಿ ಧಾರ್ಮಿಕ ನೆಲೆಯ ಮೇಲೆ ವಿಭಜನಾ ತಂತ್ರವನ್ನೂ ಬಳಸಿದರು. ಈ ರ‍್ಯಾಲಿಗಳಲ್ಲಿ ಇವರು ತಲುಪಿದ 16 ಕ್ಷೇತ್ರಗಳಲ್ಲಿ 11 ಕ್ಷೇತ್ರಗಳಲ್ಲಿ ಸೋಲನ್ನು ಕಂಡಿದ್ದಾರೆ.

ಇದರೊಂದಿಗೆ ದೇಶಾದ್ಯಂತ ಪೌರತ್ವ ಕಾಯಿದೆ(ಸಿಏಏ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯ ವಿರುದ್ಧ ಆಗುತ್ತಿರುವ ಪ್ರತಿಭಟನೆಗಳ ನಡುವೆಯೇ ಈ ಫಲಿತಾಂಶಗಳು ಬಂದಿವೆ. ಹಾಗಾಗಿ ಈ ಪ್ರಯೋಗದ ರೂವಾರಿಗಳಾದ ಮೋದಿ-ಶಾ ಜೋಡಿಗೆ ಇದು ಡಬಲ್ ಹಿನ್ನಡೆಯಾಗಿದೆ.

ಇದರೊಂದಿಗೆ, ಅಸೆಂಬ್ಲಿ ಚುನಾವಣೆಗಳಲ್ಲಿ ಸ್ಥಳೀಯ ವಿಷಯಗಳ ಮೇಲೆಯೇ ಜನರು ಮತ ಚಲಾಯಿಸುತ್ತಾರೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಭೂಮಿ ಹಕ್ಕುಗಳು ಮತ್ತು ನಿರುದ್ಯೋಗದ ಸಮಸ್ಯೆಗಳನ್ನು ನಿರ್ಲಕ್ಷಿಸಿ ಆರ್ಟಿಕಲ್ 370, ರಾಮಮಂದಿರದಂತಹ ವಿಷಯಗಳನ್ನಿಟ್ಟುಕೊಂಡು ಪ್ರಚಾರ ಮಾಡಿದ ಬಿಜೆಪಿಗೆ ಇದು ಉತ್ತರವೇ ಎಂಬ ಪ್ರಶ್ನೆಯೂ ಎದ್ದಿದೆ. ಅಂತಿಮವಾಗಿ ಒಂದಂತೂ ಸತ್ಯ; ರಾಜ್ಯಗಳಿಗೆ ಒಂದು ರೀತಿಯಲ್ಲಿ, ಲೋಕಸಭೆಗೆ ಇನ್ನೊಂದು ರೀತಿಯಲ್ಲಿ ಮತದಾರರು ಮತ ಚಲಾಯಿಸುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ಚಿಂತಕ ಪರಕಾಲ ಪ್ರಭಾಕರ್‌ಗೆ ಚುನಾವಣಾ ಆಯೋಗದಿಂದ ನೋಟಿಸ್

ಅರ್ಥಶಾಸ್ತ್ರಜ್ಞ, ರಾಜಕೀಯ ವಿಶ್ಲೇಷಕ ಡಾ. ಪರಕಾಲ ಪ್ರಭಾಕರ್ ಅವರಿಗೂ ಈಗ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಡಿ ಚುನಾವಣಾ ಆಯೋಗದ ನೋಟಿಸ್ ಜಾರಿಯಾಗಿದೆ. ವೋಟರ್ ಐಡಿ ಪರಿಶೀಲನೆಯಲ್ಲಿ ‘Logical Discrepancy’ (ತಾರ್ಕಿಕ ಅಸಂಗತತೆ)...

ಕರ್ನಾಟಕ ಎಸ್‌ಐಆರ್: ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ನೋಟಿಸ್ ನೀಡಿದ ಚುನಾವಣಾ ಆಯೋಗ

ಮಂಗಳೂರು: ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮ ವಿಶಿಷ್ಟ ಸೇವೆಯ ಮೂಲಕ ದೇಶ-ವಿದೇಶಗಳಲ್ಲಿ ಗುರುತಿಸಿಕೊಂಡಿರುವ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ...

SIR ಸೂತ್ರದಿಂದ ಬದಲಾಗುತ್ತಾ ಬೆಂಗಳೂರಿನ 28 ಕ್ಷೇತ್ರಗಳ ಗೆಲುವಿನ ಸಮೀಕರಣ?

ರಾಜ್ಯ ರಾಜಕೀಯದ ಶಕ್ತಿಕೇಂದ್ರವಾದ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ‘ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR)’ ಪ್ರಕ್ರಿಯೆಯು ಮಹತ್ವದ ರಾಜಕೀಯ ಮತ್ತು ಆಡಳಿತಾತ್ಮಕ ಚರ್ಚೆಯನ್ನು ಹುಟ್ಟುಹಾಕಿದೆ. ಎಸ್‌ಐಆರ್‌ಗೂ ಮುನ್ನ ನಗರದಲ್ಲಿದ್ದ ಸುಮಾರು 1.03...

ಮಣಿಪುರದಲ್ಲಿ ಹಿಂಸಾಚಾರಕ್ಕೆ 306 ಬಲಿ, 49 ಮಂದಿ ನಾಪತ್ತೆ: ವಿಧಾನಸಭೆಯಲ್ಲಿ ಗೃಹ ಸಚಿವರ ಸ್ಪಷ್ಟನೆ

ಇಂಫಾಲ್: ಮಣಿಪುರದಲ್ಲಿ 2023ರ ಮೇ ತಿಂಗಳಲ್ಲಿ ಭುಗಿಲೆದ್ದ ಜನಾಂಗೀಯ ಹಿಂಸಾಚಾರಕ್ಕೆ ಮೂರು ವರ್ಷಗಳಿಗೂ ಹೆಚ್ಚು ಕಾಲ ಕಳೆದಿದ್ದರೂ, ಅದರ ಪರಿಣಾಮದಿಂದ ರಾಜ್ಯ ಸಂಪೂರ್ಣವಾಗಿ ಹೊರಬಂದಿಲ್ಲ. ಹಿಂಸಾಚಾರ ಆರಂಭವಾದ ಬಳಿಕ ಇದುವರೆಗೆ ಕನಿಷ್ಠ 306...

ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ನಿಧಿ ದುರ್ಬಳಕೆ; ಜನವಸತಿಯೇ ಇಲ್ಲದ ಜಾಗದಲ್ಲಿ ರೂ. 50 ಲಕ್ಷದ ಸಿ.ಸಿ. ರಸ್ತೆ ನಿರ್ಮಾಣ!

ಸಮಾಜ ಕಲ್ಯಾಣ ಇಲಾಖೆಯ 'ಪ್ರಗತಿ ಕಾಲೋನಿ' ಯೋಜನೆಯ ನಿಧಿ ದುರ್ಬಳಕೆಯಾಗಿರುವ ಆರೋಪ ಕೇಳಿಬಂದಿದ್ದು, ಜನವಸತಿಯೇ ಇಲ್ಲದ ಜಾಗದಲ್ಲಿ ರೂ. 50 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಿರುವ ಪ್ರಕರಣ ಬೆಂಗಳೂರು...

SIR: ‘ಚುನಾವಣಾ ಆಯೋಗದಿಂದ ನೋಟಿಸ್‌’ ಇಲ್ಲದಿರುವ ದಾಖಲೆಗಳನ್ನು ಎಲ್ಲಿಂದಾ ತರೋದು? ಸಾರ್ವಜನಿಕರ ಪ್ರಶ್ನೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗವು ಬಳಸುತ್ತಿರುವ 'Logical Discrepancy' (ತಾರ್ಕಿಕ ವ್ಯತ್ಯಾಸ) ಎಂಬ ಸಾಫ್ಟ್‌ವೇರ್ ಆಧಾರಿತ ಪರಿಶೀಲನೆಯು ತಾಂತ್ರಿಕವಾಗಿ ದೋಷರಹಿತವೆಂದು ತೋರಿದರೂ, ವಾಸ್ತವದಲ್ಲಿ ಲಕ್ಷಾಂತರ ನೈಜ...

SIR ರಗಳೆ: ಕೊನೆಗೂ 43.81 ಲಕ್ಷ ಮತದಾರರ ನೋಟಿಸ್ ಪಟ್ಟಿ ಬಹಿರಂಗಪಡಿಸಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ಭಾರಿ ಸದ್ದು ಮಾಡುತ್ತಿರುವ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯಲ್ಲಿ ನೋಟಿಸ್‌ಗೆ ಗುರಿಯಾಗಿರುವ 43.81 ಲಕ್ಷ ಮತದಾರರ ಪಟ್ಟಿಯನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಕೊನೆಗೂ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ...

‘ಆರ್‌ಎಸ್‌ಎಸ್‌ ಅಡಗಿಕೊಂಡಿದೆ’: ಮೋಹನ್ ಭಾಗವತ್‌ ಯುಕೆ ಭೇಟಿ ವಿರೋಧಿಸಿ ಲಂಡನ್‌ನಲ್ಲಿ ಪ್ರತಿಭಟನೆ

ಲಂಡನ್: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರ ಯುನೈಟೆಡ್ ಕಿಂಗ್‌ಡಮ್‌ ಭೇಟಿಯನ್ನು ವಿರೋಧಿಸಿ ಲಂಡನ್‌ನ ಪಾರ್ಲಿಮೆಂಟ್ ಸ್ಕ್ವೇರ್‌ನಲ್ಲಿ ನೂರಾರು ಜನರು ಪ್ರತಿಭಟನೆ ನಡೆಸಿದ್ದಾರೆ. ಭಾಗವತ್ ಅವರ ಯುಕೆ ಪ್ರವಾಸದ...

ಪಂಚಾಯಿತಿಯಲ್ಲಿ ಅಸ್ಪೃಶ್ಯತೆ ಆಚರಣೆ-ಪ್ರತ್ಯೇಕ ಟೀ ಲೋಟ; ಆತ್ಮಹತ್ಯೆಗೆ ಯತ್ನಿಸಿದ ಪೌರಕಾರ್ಮಿಕ ಮಹಿಳೆ

ಕೆಲಸದ ಸ್ಥಳದಲ್ಲಿ ನಡೆಯುತ್ತಿದ್ದ ಅಸ್ಪೃಶ್ಯತೆ ಆಚರಣೆಯಿಂದ ಮನನೊಂದ 37 ವರ್ಷದ ದಲಿತ ನೈರ್ಮಲ್ಯ ಕಾರ್ಮಿಕರೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮತ್ಯೆಗೆ ಯತ್ನಿಸಿರುವ ಘಟನೆ ತಮಿಳುನಾಡಿನ ಮೇಲೂರು ಸಮೀಪದ ಕಂಬೂರ್ ಪಂಚಾಯತ್‌ನಲ್ಲಿ ಬೆಳಕಿಗೆ ಬಂದಿದೆ. ...

ಗೌರಿ, ಗಾಂಧಿಯನ್ನು ಕೊಂದದ್ದು ಬರೀ ಬುಲೆಟ್‌ಗಳಲ್ಲ, ಕೋಮುವಾದಿ ಸಿದ್ಧಾಂತ: ವಿದ್ಯಾರ್ಥಿ ನಾಯಕಿ ದಾನಿಶ್ ಅಲಿ

"ಗಾಂಧಿ, ಗೌರಿಯನ್ನು ಕೊಂದಿದ್ದು ಬರೀ ಬುಲೆಟ್‌ಗಳಲ್ಲ, ಅದು ಸಿದ್ಧಾಂತ ಎಂಬುದನ್ನು ನಾವು ನೆನಪಿಡಬೇಕು. ಈ ಸಿದ್ಧಾಂತಗಳ ವಿರುದ್ಧವಾಗಿ ನಾವು ಇಂದು ಹೋರಾಡಬೇಕಿದೆ” ಎಂದು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ವಿದ್ಯಾರ್ಥಿ ನಾಯಕಿ...