Homeಮುಖಪುಟ"ಕಾಂಗ್ರೆಸ್ ಅಧೋಗತಿಗಿಳಿದದೆ; ಎಡೂರಪ್ಪನ ಬೆನ್ನಿಗೆ ಮಠಮಾನ್ಯಗಳವೆ'': ಕಾಗೋಡು ತಿಮ್ಮಪ್ಪ ಸಂದರ್ಶನ

“ಕಾಂಗ್ರೆಸ್ ಅಧೋಗತಿಗಿಳಿದದೆ; ಎಡೂರಪ್ಪನ ಬೆನ್ನಿಗೆ ಮಠಮಾನ್ಯಗಳವೆ”: ಕಾಗೋಡು ತಿಮ್ಮಪ್ಪ ಸಂದರ್ಶನ

- Advertisement -
- Advertisement -

ಕಾಗೋಡು ತಿಮ್ಮಪ್ಪನವರು ನಮ್ಮ ನಡುವಿನ ವಿಶಿಷ್ಟ ರಾಜಕಾರಣಿ. ಚುನಾವಣೆಯ ಸೋಲು ಗೆಲುವುಗಳನ್ನ ಬದಿಗಿಟ್ಟು, ಈ ವ್ಯವಸ್ಥೆಯ ಬಗ್ಗೆ ಗಾಢವಾಗಿ ಚಿಂತಿಸುವವರು. ಆ ಕಾರಣಕ್ಕೆ ಇವರನ್ನು ಕಂಡರೆ ಪಾರ್ಟಿಯ ಕಾರ್ಯಕರ್ತರಿಗೆ ಮತ್ತು ಸರಕಾರದ ಕರ್ಮಾಚಾರಿಗಳಿಗೆ ಅಷ್ಟೊಂದು ಇಷ್ಟವಿಲ್ಲ. ಪಾರ್ಟಿ ಕಾರ್ಯಕರ್ತರಿಂದ ಇವರು ನಿರೀಕ್ಷಿಸುವುದು ಕ್ಷೇತ್ರಕ್ಕೆ ಆಗಬೇಕಾದ ಅಭಿವೃದ್ಧಿ ಕೆಲಸಗಳ ಬಗ್ಗೆ. ಆದ್ದರಿಂದ ವಿನಾಕಾರಣದ ಕಾಡುಹರಟೆಗೆ ಅಲ್ಲಿ ಅವಕಾಶವಿಲ್ಲ. ಇನ್ನ ಸರ್ಕಾರದ ಕರ್ಮಾಚಾರಿಗಳು ಬಂದರೆ ಆಗುತ್ತಿರುವ ಕೆಲಸದ ಪ್ರಗತಿ ಎಲ್ಲಿಗೆ ಬಂತು, ನಿಂತಿದ್ದರೆ ಆದ ತೊಡಕೇನು, ಮುಂದೇನು ಮಾಡಬೇಕು ಎಂಬ ಸಲಹೆ. ಈ ಸಮಯದಲ್ಲಿ ಅಧಿಕಾರಿಯ ದಕ್ಷತೆ ಅದಕ್ಷತೆ ಗುರುತಿಸಿಬಿಡುವ ತಿಮ್ಮಪ್ಪನವರು ಕೆಲಸಗಾರನಿಗೆ ಮಾತ್ರ ಮನ್ನಣೆ ಕೊಡುತ್ತಾರೆ. ಇಲ್ಲವಾದರೆ ಬೈಗುಳ ಗ್ಯಾರಂಟಿ ಅವರೆಂದೂ ಮತದಾರನನ್ನ ಓಲೈಸಿದವರಲ್ಲ. ಓಟಿಗಾಗಿ ಹಲ್ಲು ಗಿಂಜಿದವರಲ್ಲ. ಚುನಾವಣೆ ಸಮಯದಲ್ಲಿ ಎದುರು ಸಿಕ್ಕವರ ಯೋಗಕ್ಷೇಮ ವಿಚಾರಿಸಬೇಕೆಂಬ ಸಲಹೆ ಕೇಳಿ ನಕ್ಕಂತವರು. ರಾಜಕಾರಣ ಆರಂಭವಾದದ್ದು ಸಮಾಜವಾದಿ ಪಾರ್ಟಿ ಮುಖಾಂತರ ದೇವರಾಜ ಅರಸು ಇಷ್ಟವಾದರೂ ಅವರ ಪಾರ್ಟಿ ಸೇರಲಿಲ್ಲ. ಆದರೂ ಗುಂಡೂರಾಯರ ಕಾಲದಲ್ಲಿ ಕಾಂಗ್ರೆಸ್ ಸೇರಿದ ತಿಮ್ಮಪ್ಪ ಇಂದಿಗೂ ಮನಸ್ಸು ಬದಲಿಸಿದವರಲ್ಲ. ಪಾರ್ಟಿ ಮತ್ತು ಕಾರ್ಯಕ್ರಮ ಬದ್ಧತೆ ಎಂದರೇನೆಂದು ತಿಮ್ಮಪ್ಪನವರನ್ನ ನೋಡಿದರೆ ತಿಳಿಯುತ್ತದೆ. ಒಬ್ಬ ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆ ಅನುಭವಗಳಿದ್ದರೂ ತಮ್ಮ ಭಾಗದ ಕೆಲಸ ನಿರ್ವಹಿಸಿದವರು. ಎಷ್ಟೇ ಸವಲತ್ತುಗಳನ್ನು ತಂದುಕೊಟ್ಟರೂ, ದ್ರೋಹ ಬಗೆಯುವ ಸಾಮಾನ್ಯ ಜನರ ನಡವಳಿಕೆ ಬಗ್ಗೆ ಎಂದೂ ಅಚ್ಚರಿಗೊಳ್ಳದವರು. ಜನರೇನೆಂಬುದನ್ನು ಲೋಹಿಯಾ, ಗೋಪಾಲಗೌಡರಿಂದ ತಿಳಿದವರು. ಆದ್ದರಿಂದ ಚುನಾವಣೆಯ ಸೋಲು ಅವರನ್ನು ಕಂಗೆಡಿಸಿಲ್ಲ. ದೇಶ ಮತ್ತು ಕರ್ನಾಟಕ ಹತ್ತಿ ಉರಿಯುತ್ತಿರುವ ಈ ಸಮಯದಲ್ಲಿ ಅವರನ್ನ ಮಾತನಾಡಿಸಬೇಕೆನಿಸಿತು. ಸಾಗರದ ಅವರ ಮನೆಗೆ ಹೋದಾಗ ಈ ಹಿಂದಿನಂತೆ ಹಲವಾರು ಕಾರುಗಳು ನಿಂತಿರಲಿಲ್ಲ. ಆ ಸಾಲಿನಲ್ಲಿ ಅವರದ್ದೂ ಒಂದು ಸಾಮಾನ್ಯ ಮನೆಯಂತೆ ಕಂಡಿತು. ಒಳಗೋದಾಗ ಆರಾಮವಾಗಿ ಟಿವಿ ನೋಡುತ್ತಾ ಕುಳಿತಿದ್ದರು.

ನನ್ನನ್ನು ಕಂಡು, “ಬನ್ರೀ” ಎಂದರು. ನಂತರ ‘ಯೇಯ್’ ಎಂದರು. ಹಾಗೆಂದರೆ ಸಹಾಯಕ ಬಂದು ಟಿವಿ ಆಫ್ ಮಾಡಬೇಕು. ಅದನ್ನು ಆತ ಮಾಡಿದ. ಈ ಹಿಂದೆ ಮನೆಗೋದಾಗ ‘ಯೇಯ್’ ಎನ್ನುತ್ತಿದ್ದರು. ಹಾಗಂದರೆ ಕಾಫಿ ತಂದು ಕೊಡು ಅಂತ. ಹೀಗೆ ತಿಮ್ಮಪ್ಪನವರ ಏಕಕ್ಷರದ ಸೂಚನೆಯಲ್ಲಿ ಒಂದೊಂದು ಸಲಹೆ ಸೂಚನೆ ವಾಕ್ಯಗಳೇ ಅಡಗಿರುತ್ತವೆ. ಇಲ್ಲಿ ಮೌನದ ಭಾಷೆಯೂ ಅಧಿಕ, ಕೆಲವೊಂದು ಪ್ರಶ್ನೆಗೆ ಅವರು ಉತ್ತರಿಸುವುದಿಲ್ಲ. ಮೌನವೇ ಉತ್ತರ ನೀಡುತ್ತದೆ.

ಪ್ರಶ್ನೆ: ಏನ್ ಸಾರ್ ದೇಶ ಹಿಂಗೆ ಮಾಡಿದ್ರು?
ಉತ್ತರ: ಮಾಡ್ತರೆ, ಅವುರಿಬ್ರು ಜೊತೆಯಾಗ್ಯವುರೆ, ಅವುರ್ಯಂಗೆ ಜೊತೆಯಾಗ್ಯವುರೆ ಅಂದ್ರೇ ಅವುರಿಗೆ ಕೌಂಟ್ರು ಕೊಡಕ್ಕೆ ನಮ್ಮಲ್ಯಾರು ಇಲ್ಲ. ಪಾಪ ಆ ಯಮ್ಮ ಮಮತಾ ಬ್ಯಾನರ್ಜಿ ಒಬ್ಬಳೆ ಎಷ್ಟು ಅಂತ ಹೋರಾಟ ಕೊಡಕ್ಕಾಯ್ತದೆ. ಒಂದು ಎಂಟತ್ತು ಸ್ಟೇಟಲ್ಲಿ ಅವುಳ ತರ ಹೋರಾಟ ಕೊಡೋರಿದ್ರೆ ಇವುರಿಂಗಾಡಕ್ಕಾಯ್ತಿರಲಿಲ್ಲ.

ಪ್ರಶ್ನೆ: ಕಾಂಗ್ರೆಸ್ ಏನ್ ಸಾರ್ ಹಿಂಗಾಯ್ತು?
ಉತ್ತರ: ಬಣ ಮಾಡಿಕಂಡು ಕಿತ್ತಾಡ್ತಾ ಅವೆ. ಮೋದಿಗೆ ಉತ್ತರ ಕೊಡೋನು ಯಾರು ಇಲ್ಲ. ಕಾಂಗ್ರೆಸ್ ಅಧೋಗತಿಗಿಳಿದದೆ ಏನು ಮಾಡದು. ಆಗ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹತ್ತು ವರ್ಷ ಪ್ರಧಾನಿಯಾಗಿದ್ದೋರು. ಮೋದಿ ಎದುರಿಗೆ ಮಾತಾಡಲಿಲ್ಲ. ಈಗ್ಲು ಯಾರೂ ಮಾತಾಡಲಿಲ್ಲ.

ಪ್ರಶ್ನೆ: ಜನಗಳಿಗೆ ದುಡ್ಡು ಕೊಡ್ತಾ ಅವುರೆ ಸಾರ್, ದುಡ್ಡು ತಗಂಡು ಓಟು ಮಾಡ್ತರೆ, ಇನ್ನ ನಿಮ್ಮಂಥೋರು ಗೆಲ್ಲಕ್ಕಾಗಲ್ಲ ಅಲವೆ?
ಉತ್ತರ: ದುಡ್ಡು ತಗೋಬ್ಯಾಡಿ ಅಂತ ಹೇಳಬೇಕು. ಒಂಥರದ ಜನಾಂದೋಲನ ನ್ಯಡಿ ಬೇಕು. ಆಗ ದುಡ್ಡಿದ್ದೋರ ಸೋಲಸಬವುದು.

ಪ್ರಶ್ನೆ: ಜನ ಸಾರ್, ನಾನು ಮಂಡ್ಯದ ಲೋಕಸಭಾ ಚುನಾವಣೆ ನೋಡಿದೆ. ಕಾಂಗ್ರೆಸ್ಸಿನೋರು ನೋರ್ರುಪಾಯಿ ಕೊಟ್ಟು ಕುಮಾರಸ್ವಾಮಿ ಕಡಿಯೋರು ಐದು ನೂರ್ರುಪಾಯಿ ಕೊಟ್ರು. ಆದ್ರು ಜನ ನೂರ್ರುಪಾಯಿ ಕಡಿಕೆ ಓಟು ಮಾಡಿದ್ರು. (ನಗು)
ಉತ್ತರ: ಥೂ ಅವ್ಯಲ್ಲ ಅಲ್ಲ, ಹಣ ತಗಂಡು ಓಟು ಮಾಡಿದ ಅಪಾಯನ ನಮ್ಮ ಜನಗಳಿಗೆ ಹೇಳಬೇಕು ಕೇಳ್ತರೆ.

ಪ್ರಶ್ನೆ: ಎಡೂರಪ್ಪನ ಆಡಳಿತದ ಬಗ್ಗೆ ಏನನ್ನಸತ್ತೆ ಸಾರ್?
ಉತ್ತರ: ಅವುನ ರಾಜಕಾರಣನೆ ಬೇರೆ ಕಂಡ್ರೀ ಮೊನ್ನೆ ಅವುನ್ಯಾರೋ ಸ್ವಾಮಿ ಯಾರವುನು?
ನಾನು: ವಚನಾನಂದ
ಉತ್ತರ: ಹಾ| ಅವನು ಏನೊ ಅಂದ ಅಂತ ಉಳದೋರೆಲ್ಲ ಯಂಗೆ ಮ್ಯಾಲೆ ಬಿದ್ರು. ಅಂಗೆ ಮಠಮಾನ್ಯ ಎಡೂರಪ್ಪನ ಬೆನ್ನಿಗವೆ. ಟೀಕೆ ಮಾಡಿದೊರು ಓಲೈಸೋರು ಯಲ್ರು ಅವುನ ಕಡಿಕವುರೆ ಆದ್ರಿಂದ ಆತನ ರಾಜಕಾರಣದ ಆಲೋಚನೆ ಬೇರೆ. ನಾವು ನಿರೀಕ್ಷೆ ಮಾಡೋದೆ ಬೇರೆ.

ಪ್ರಶ್ನೆ: ಮಂತ್ರಿಗಳು ಎಮ್ಮೆಲ್ಲೆಗಳು ನೇರವಾಗಿ ಮತೀಯವಾಗಿ ಮಾತಾಡ್ತರಲ್ಲ ಸಾರ್?
ಉತ್ತರ: ಮಾತಾಡ್ತರೆ, ಅವುರ ಮನಸಲ್ಲಿ ಇದ್ದದ್ದೇ ಅದಲ್ವ. ಈಗ ಬಾಯಿ ಬಿಡ್ತರಷ್ಟೇಯ ಯಾವನಾದ್ರು ಎಂಪಿ ಬಾಯಿ ಬಿಡ್ತನ ಮೋದಿ ಶಾ ಇಬ್ರೆ ಇರದೀಗ, ಏನು ಮಾಡಿದ್ರು ಜೊತೆಲಿ ಮಾಡ್ತರೆ, ಈ ದೇಶಕ್ಕೆ ಏನು ಮಾಡದಕ್ಕೂ ಜೊತೆಯಾಗ್ಯವುರೆ, ನೋಡನ ಇರಿ ಅದೇನಾಯ್ತದೊ ನೋಡನ.”

ನಾನು: ನಮಸ್ಕಾರ ಸರ್ ಬರ್ತೀನಿ.
ತಿಮ್ಮಪ್ಪನವರು: ಆಯ್ತು ಹೋಗಿ ಬನ್ನಿ.

ಬಿ.ಚಂದ್ರೇಗೌಡ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...

ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್, ಆಧಾರ್, ಜಮೀನಿನ ಹಕ್ಕು ಪತ್ರ ಇದ್ದ ಮಾತ್ರಕ್ಕೆ ಭಾರತೀಯ ಪ್ರಜೆಯಾಗಲ್ಲ: ಕಲ್ಕತ್ತಾ ಹೈಕೋರ್ಟ್

ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಪಿತ್ರಾರ್ಜಿತ ಜಮೀನಿನ ದಾಖಲೆಗಳು ಭಾರತೀಯ ಪೌರತ್ವವನ್ನು ನಿರೂಪಿಸಲು ಅಂತಿಮ ಅಥವಾ ನಿರ್ಣಾಯಕ ಪುರಾವೆಗಳಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ...

‘ನಿಮ್ಮ ಸಮಯ ಬಂದಿದೆ’: ಟೌನ್‌ಶಿಪ್ ಯೋಜನೆ ವಿರುದ್ಧದ ಪ್ರತಿಭಟನೆಗೆ 500 ದಿನ: ‘Gen-Z’ ಯುವಕರ ಬೆಂಬಲ ಕೋರಿದ ಬಿಡದಿ ರೈತರು

ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಕೃಷಿ ಭೂಮಿ ಉಳಿವಿಗಾಗಿ ನಡೆಯುತ್ತಿರುವ ರೈತರ ಸುದೀರ್ಘ ಹೋರಾಟವು ಇದೀಗ ಒಂದು ಪ್ರಮುಖ ಘಟ್ಟಕ್ಕೆ ಬಂದು ತಲುಪಿದೆ. ಭೂಸ್ವಾಧೀನದ ವಿರುದ್ಧ ಸತತವಾಗಿ ನಡೆಯುತ್ತಿರುವ ಈ...

ಕೊಡಗಿನ ಆದಿವಾಸಿ ಹಾಡಿಗಳಲ್ಲಿ ಎಸ್‌ಐಆರ್ ಅವ್ಯವಸ್ಥೆ : ಬಿಎಲ್‌ಒಗಳಿಗೆ ತರಬೇತಿಯ ಕೊರತೆ, ಇನ್ನೂ ತಲುಪದ ಗಣತಿ ಫಾರಂ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಬಹಳ ಯಶಸ್ವಿಯಾಗಿ ನಡೆಯುತ್ತಿದೆ, ಮತದಾರರಿಗೆ ಎಲ್ಲಾ ರೀತಿಯ ಸಹಾಯಗಳನ್ನು ಒದಗಿಸಲಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಅವರು ಪದೇ...

SIR: ಉಡುಪಿಯಲ್ಲಿ ಕರ್ತವ್ಯನಿರತ BLO ಮೇಲೆ ಹಲ್ಲೆಗೆತ್ನಿಸಿದ ಮಾಜಿ ಪಂಚಾಯತ್ ಅಧ್ಯಕ್ಷ, FIR ದಾಖಲು

ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ (SIR) ಕರ್ತವ್ಯದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆ ಹಾಗೂ ಬಿಎಲ್‌ಒ (BLO) ಮಹಿಳೆ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಗಂಭೀರ ಆರೋಪ ಉಡುಪಿ...

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...