Homeಕರ್ನಾಟಕಬೆಂಗಳೂರಿನ ESI ಆಸ್ಪತ್ರೆ ನಿರ್ಲಕ್ಷ್ಯ: ಒಂದೂವರೆ ವರ್ಷದ ಬಳಿಕ ಶವಾಗಾರದಿಂದ ಕೊರೊನಾ ಪೀಡಿತರ ಮೃತದೇಹ ಹೊರ...

ಬೆಂಗಳೂರಿನ ESI ಆಸ್ಪತ್ರೆ ನಿರ್ಲಕ್ಷ್ಯ: ಒಂದೂವರೆ ವರ್ಷದ ಬಳಿಕ ಶವಾಗಾರದಿಂದ ಕೊರೊನಾ ಪೀಡಿತರ ಮೃತದೇಹ ಹೊರ ತೆಗೆದ ಸಿಬ್ಬಂದಿ

- Advertisement -
- Advertisement -

ಕೊರೊನಾದಿಂದ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಸುಮಾರು ಒಂದೂವರೆ ವರ್ಷಗಳ ನಂತರ ಅವರ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಕುಟುಂಬದವರಿಗೆ ದೊರಕಿರುವ ಹೃದಯವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ರಾಜಾಜಿನಗರದಲ್ಲಿರುವ ESI ಆಸ್ಪತ್ರೆಯ ಶವಾಗಾರದಲ್ಲಿ ಕಳೆದ ಒಂದೂವರೆ ವರ್ಷದ ಹಿಂದೆ ಕೊರೊನಾದಿಂದ ಮೃತಪಟ್ಟಿದ್ದ ದುರ್ಗಾ ಸುಮಿತ್ರಾ (40) ಮತ್ತು ಮುನಿರಾಜು (50) ಎಂಬುವವರ ಮೃತದೇಹಗಳನ್ನಿಟ್ಟು ಆಸ್ಪತ್ರೆ ಸಿಬ್ಬಂದಿ ಮರೆತುಬಿಟ್ಟಿದ್ದಾರೆ. ಮೊನ್ನೆ ಶವಾಗಾರ ಸ್ವಚ್ಛಗೊಳಿಸುವ ವೇಳೆ ಸಿಬ್ಬಂದಿಗೆ ಕೊಳೆತ ಸ್ಥಿತಿಯಲ್ಲಿ ಮೃತದೇಹಗಳು ಪತ್ತೆಯಾಗಿವೆ.

ESI ಆಸ್ಪತ್ರೆಯ ದಾಖಲೆಗಳ ಪ್ರಕಾರ, ದುರ್ಗಾ ಸುಮಿತ್ರಾ (40) ಮತ್ತು ಮುನಿರಾಜು (50) ಕಳೆದ ವರ್ಷ ಜುಲೈ 2 ರಂದು ನಿಧನರಾಗಿದ್ದಾರೆ. ಆ ಸಮಯದಲ್ಲಿ, ನಗರದಲ್ಲಿ ಕೊರೊನಾ ಪ್ರಕರಣಗಳು ಉಲ್ಬಣಗೊಂಡಿದ್ದವು. ಆರೋಗ್ಯ ಮೂಲಸೌಕರ್ಯ ವ್ಯವಸ್ಥೆ ತೀವ್ರ ಒತ್ತಡದಲ್ಲಿದ್ದ ಸಮಯವಾಗಿತ್ತು. ಬೆಂಗಳೂರು ಸಾಲು ಸಾಲು ಸಾವಿನ ಮೆರವಣಿಗೆಗೆ ಸಾಕ್ಷಿಯಾಗಿದ್ದ ಸಮಯವದು. ಕೊರೊನಾದಿಂದ ಸಾವನ್ನಪ್ಪಿದವರ ಕುಟುಂಬಗಳ ನೋವು ಇನ್ನು ರಾಜ್ಯದ ಜನರ ಕಣ್ಣೇದುರಿಗಿದೆ.

ಇಂತಹ ಸಮಯದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಇವರುಗಳು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದರು. ಆದರೆ, ಸೋಂಕು ಹರಡುವ ಅಪಾಯವಿದೆ ಎಂದು ತಿಳಿಸಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಆಸ್ಪತ್ರೆಯ ಅಧಿಕಾರಿಗಳು ದೇಹವನ್ನು ಅವರಿಗೆ ಹಸ್ತಾಂತರಿಸಲಿಲ್ಲ. ಜೊತೆಗೆ ಇಬ್ಬರ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ಎರಡು ಕುಟುಂಬದ ಸದಸ್ಯರಿಗೆ ತಿಳಿಸಲಾಗಿತ್ತು ಎಂದು ಕುಟುಂಬಸ್ಥರು ಹೇಳಿದ್ದಾರೆ.

ಇದನ್ನೂ ಓದಿ: ಅಮೆರಿಕ, ಯೂರೋಪ್ ದೇಶಗಳಲ್ಲಿ ಕೊರೊನಾ ನಾಲ್ಕನೇ ಅಲೆ; ಭಾರತ ಎಚ್ಚೆತ್ತುಕೊಳ್ಳುವ ಸಮಯ ಬಂದಿದೆಯೇ?

ಮೃತರ ಡೆಡ್ ಸರ್ಟಿಫಿಕೆಟ್ ಕೂಡ ಪಡೆದಿದ್ದ ಕುಟುಂಬಸ್ಥರಿಗೆ ಈಗ ಒಂದೂವರೆ ವರ್ಷದ ನಂತರ, ತಮ್ಮವರ ಮೃತದೇಹಗಳು ಆಸ್ಪತ್ರೆಯ ಶವಾಗಾರದಲ್ಲೇ ಇವೆ ಎಂಬ ಆಘಾತಕಾರಿ ಸುದ್ದಿ ತಿಳಿದು ಬಂದಿದೆ. ಅದು ಕೂಡ ಹೌಸ್ ಕೀಪಿಂಗ್ ಸಿಬ್ಬಂದಿ ಹಳೆಯ ಶವಾಗಾರವನ್ನು ಸ್ವಚ್ಛಗೊಳಿಸುವಾಗ ಕೊಳೆತ ಸ್ಥಿತಿಯಲ್ಲಿ ಮೃತದೇಹಗಳನ್ನು ಕಂಡು ಅಧಿಕಾರಿಗಳಿಗೆ ಮಾಹಿತಿ ನೀಡಿದ ಬಳಿಕ ಅಧಿಕಾರಿಗಳು ಕುಟುಂಬಸ್ಥರಿಗೆ ತಿಳಿಸಿದ್ದಾರೆ.

ಆಸ್ಪತ್ರೆಯ ನಿರ್ಲಕ್ಷ್ಯದ ಕೃತ್ಯಕ್ಕೆ ಆಸ್ಪತ್ರೆಯ ಅಧಿಕಾರಿಗಳು, ಸಿಬ್ಬಂದಿ ಟೀಕೆಗೆ ಗುರಿಯಾಗಿದ್ದಾರೆ. ಘಟನೆ ಬಗ್ಗೆ ನಡೆದಿದೆ ಎಂಬುದನ್ನು ಕಂಡುಹಿಡಿಯಲು ತನಿಖೆಯನ್ನು ಪ್ರಾರಂಭಿಸಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದೆ.

“ಕಳೆದ ವರ್ಷ ಅನಾರೋಗ್ಯಕ್ಕೆ ಒಳಗಾಗಿದ್ದ ದುರ್ಗಾಗಾಗಿ ತೀವ್ರ ಹುಡುಕಾಟದ ನಂತರ ಇಎಸ್‌ಐ ಆಸ್ಪತ್ರೆಯಲ್ಲಿ ಹಾಸಿಗೆ ಸಿಕ್ಕಿತ್ತು. ಆಸ್ಪತ್ರೆಯಲ್ಲಿ 4 ದಿನಗಳ ನಂತರ ಆಕೆ ಮೃತಪಟ್ಟಿದ್ದರು. ಕೋವಿಡ್ ಆಗಿದ್ದರಿಂದ ಅವರು ದೇಹವನ್ನು ನಮಗೆ ಹಸ್ತಾಂತರಿಸಲಿಲ್ಲ, ನಾವು ಮನೆಗೆ ಮರಳಿದ್ದೇವು. ಕೆಲವು ದಿನಗಳ ನಂತರ, ನಮಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿಂದ ಕರೆ ಬಂದಿತು, ಅವರು ಅಂತ್ಯಸಂಸ್ಕಾರ ಮಾಡಿರುವುದಾಗಿ ತಿಳಿಸಿದ್ದರು. ಈಗ 15 ತಿಂಗಳ ನಂತರ ನಮಗೆ ಕರೆ ಬಂದಾಗ, ಅದು ನಿಜವೋ ಸುಳ್ಳೋ ಎಂದು ನಾವು ಹೆದರಿದ್ದೆವು” ಎಂದು ಮೃತ ದುರ್ಗ ಅವರ ಅಕ್ಕ ಸುಜಾತಾ ಹೇಳಿದ್ದಾರೆ.

ಮೃತ ಮುನಿರಾಜು ಅವರ ಪುತ್ರ ಸತೀಶ್ ಅವರಿಗೂ ಕೂಡ ಇದೇ ರೀತಿಯ ಅನುಭವವಾಗಿದೆ. “ಆಸ್ಪತ್ರೆಯವರು ಕರೆ ಮಾಡಿ ಅವರು ಇನ್ನಿಲ್ಲ ಎಂದು ಹೇಳಿದಾಗ, ನಾವು ಶವವನ್ನು ಕೇಳಿದ್ದೇವು. ಆದರೆ ಬಿಬಿಎಂಪಿ ಅಧಿಕಾರಿಗಳು ಮೃತದೇಹವನ್ನು ಸುಡಲಾಯಿತು ಎಂದು ಹೇಳಿದ್ದರು. ನಾವು ಮರಣ ಪ್ರಮಾಣಪತ್ರವನ್ನು ಪಡೆಯಲು ಹೋದಾಗ ಕೂಡ ಅವರು ಅದನ್ನೇ ಮತ್ತೆ ಹೇಳಿದ್ದರು” ಎಂದಿದ್ದಾರೆ.

ಇನ್ನು ಘಟನೆ ಸಂಬಂಧ ರಾಜಾಜಿನಗರದ ಬಿಜೆಪಿ ಶಾಸಕ ಸುರೇಶ್ ಕುಮಾರ್, ಕಾರ್ಮಿಕ ಸಚಿವ ಎ.ಶಿವರಾಮ್ ಹೆಬ್ಬಾರ್ ಅವರಿಗೆ ಪತ್ರ ಬರೆದಿದ್ದು, ಈ ವಿಷಯವನ್ನು ಕೇಂದ್ರ ಕಾರ್ಮಿಕ ಸಚಿವಾಲಯಕ್ಕೆ ತಿಳಿಸುವಂತೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳೂವಂತೆ ಮನವಿ ಮಾಡಿದ್ದಾರೆ.


ಇದನ್ನೂ ಓದಿ: ವಿಶ್ವದೆಲ್ಲೆಡೆ ಕೊರೊನಾ ಹೊಸ ರೂಪಾಂತರ ‘ಓಮಿಕ್ರಾನ್’ ಆತಂಕ: ತಜ್ಞರು ಹೇಳುವುದೇನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...