Homeಕರೋನಾ ತಲ್ಲಣಮೇ 10 ರಿಂದ ಲಾಕ್‌ಡೌನ್‌‌‌ - ‘ಜನ ಹೊಟ್ಟೆಗೆ ಏನು ತಿಂತಾರೆ?’; ಆಕ್ರೋಶ

ಮೇ 10 ರಿಂದ ಲಾಕ್‌ಡೌನ್‌‌‌ – ‘ಜನ ಹೊಟ್ಟೆಗೆ ಏನು ತಿಂತಾರೆ?’; ಆಕ್ರೋಶ

ತಮಿಳುನಾಡು ಮತ್ತು ಕೇರಳ ರಾಜ್ಯಗಳು ಲಾಕ್‌ಡೌನ್‌ ಹೇರುವುದರ ಜೊತೆಗೆ ಜನರಿಗೆ ಕೊರೊನಾ ಪರಿಹಾರವಾಗಿ ನಗದು ಮತ್ತು ದಿನಸಿಗಳನ್ನು ಪಡಿತರ ವ್ಯವಸ್ಥೆಯ ಮೂಲಕ ನೀಡುತ್ತಿದೆ.

- Advertisement -
- Advertisement -

ರಾಜ್ಯದಲ್ಲಿ ಕೊರೊನಾ ಎರಡನೆ ಅಲೆಯು ತೀವ್ರಗೊಂಡ ಪರಿಣಾಮ ಆರೋಗ್ಯ ಸೌಲಭ್ಯಗಳು ಸಿಗದೆ ಜನರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇದುವರೆಗೂ ರಾಜ್ಯದಲ್ಲಿ ಅಘೋಷಿತ ಲಾಕ್‌ಡೌನ್ ಇದೆ. ಶುಕ್ರವಾರ ಸಚಿವ ಸಂಪುಟ ಹಾಗೂ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಯಡಿಯೂರಪ್ಪ ಮೇ 10 ರಿಂದ 24 ರವೆಗೆ ‘ಸಂಪೂರ್ಣ ಲಾಕ್‌ಡೌನ್‌’ ಹೇರಿದ್ದಾರೆ. ಆದರೆ ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರವಾಗಿ ಆಕ್ರೋಶಗಳೆದ್ದಿದ್ದು ಸರ್ಕಾರವನ್ನು ತಾರಾಟೆಗೆ ತೆಗೆದುಕೊಂಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಅಘೋಷಿತ ಲಾಕ್‌ಡೌನ್‌ ಬಗ್ಗೆ ಮಾತನಾಡಿದ ಸಿಎಂ, “ಕರ್ಫ್ಯೂ ವಿಧಿಸಿರುವುದು ಹೆಚ್ಚಿನ ಪರಿಣಾಮ ಬೀರಿಲ್ಲ. ಜನರು ನಿಯಮ ಉಲ್ಲಂಘಿಸಿ ಓಡಾಡುತ್ತಿರುವುದು ಕಂಡು ಬಂದಿದೆ. ಆದ್ದರಿಂದ 10 ರಿಂದ 24 ರವರೆಗೆ ಲಾಕ್‌ಡೌನ್‌ ಘೋಷಿಸಲಾಗುವುದು. ಈ ಸಮಯದಲ್ಲಿ ಹಾಲು, ಹಣ್ಣು, ತರಕಾರಿ, ಮಾಂಸ, ದಿನಸಿ ವಸ್ತುಗಳ ಮಾರಾಟಕ್ಕೆ ಬೆಳಿಗ್ಗೆ 6 ರಿಂದ 10 ರವರೆಗೆ ಅವಕಾಶವಿದೆ. ತಳ್ಳು ಗಾಡಿಯ ಮೂಲಕ ಹಣ್ಣು ತರಕಾರಿ ಮಾರಾಟಕ್ಕೆ ಅವಕಾಶ ಇದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಂಸ್ಕಾರಕ್ಕೆ ಬರುವವರಿಗೆ ಉಚಿತ ಟಿ,ಕಾಫಿ ನೀಡುತ್ತೇವೆಂದು ನಗುಮುಖದ ಫ್ಲೆಕ್ಸ್‌; ಕನಿಷ್ಠ ಸಂವೇದನೆ ಮರೆತ BJP

ಉಳಿದಂತೆ, ಲಾಕ್‌ಡೌನ್‌ನಲ್ಲಿ ಏನಿದೆ ಏನಿಲ್ಲ ಎಂದು ಮುಖ್ಯಮಂತ್ರಿ ಟ್ವೀಟ್ ಮಾಡಿದ್ದರು. ಅದನ್ನು ಕೆಳಗಿನ ಚಿತ್ರದಲ್ಲಿ ನೋಡಬಹುದಾಗಿದೆ.

ಮುಖ್ಯಮಂತ್ರಿ ಲಾಕ್‌ಡೌನ್‌ ಹೇರುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಗಳೆದ್ದಿದೆ. ಕೇವಲ ಲಾಕ್‌ಡೌನ್‌ ಹೇರಿದರೆ ಮುಗಿಯಿತೆ, ಜನರು ಕೆಲಸವಿಲ್ಲದೆ ಬದುಕುವುದಾರೂ ಹೇಗೆ? ತಮಿಳುನಾಡು ಮತ್ತು ಕೇರಳ ರಾಜ್ಯಗಳು ಲಾಕ್‌ಡೌನ್‌ ಹೇರುವುದರ ಜೊತೆಗೆ ಜನರಿಗೆ ಕೊರೊನಾ ಪರಿಹಾರವಾಗಿ ನಗದು ಮತ್ತು ದಿನಸಿಗಳನ್ನು ಪಡಿತರ ವ್ಯವಸ್ಥೆಯ ಮೂಲಕ ನೀಡುತ್ತಿದೆ. ಆದರೆ ಯಡಿಯುರಪ್ಪ ನೇತೃತ್ವದ ರಾಜ್ಯ ಸರ್ಕಾರ ಇದು ಯಾವುದನ್ನೂ ಮಾಡದೆ ಕೇವಲ ಲಾಕ್‌ಡೌನ್‌ ಹೇರಿ ಸುಮ್ಮನಿದ್ದರೆ ಸಾಕೆ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಬೆಡ್‌‌ಗೆ ಪರದಾಟ; ತನ್ನ ಪತಿಗಾಗಿ ಮುಖ್ಯಮಂತ್ರಿ ನಿವಾಸದ ಎದುರು ಪ್ರತಿಭಟಿಸಿದ ಮಹಿಳೆ

ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿರುವ ಇರ್ಫಾನ್ ಹಕ್, “ಮುಖ್ಯಮಂತ್ರಿ ಬಡ ಜನರಿಗೆ ಪರಿಹಾರವೇನು ಎಂದು ಕೇಳಿದರೆ, ಮಾರ್ಗಸೂಚಿ ಆಮೇಲೆ ಬಿಡುಗಡೆ ಮಾಡ್ತೀವಿ ಅಂತ ಮುಖ ತಿರುಗಿಸಿ ಹೋಗುತ್ತಾರೆ. ಪರಿಹಾರಗಳಿಲ್ಲದ ಲಾಕ್‌ಡೌನ್‌ ಬಡವರಿಗೆ ಬಹಳ ತೊಂದರೆ ನೀಡಲಿದೆ. ನೆರೆಯ ಸರಕಾರಗಳು ಜನರ ಕಷ್ಟಗಳಿಗೆ ಈ ರೀತಿ ಸ್ಪಂದಿಸುತ್ತಿದ್ದಾರೆ. ನಮ್ಮವರು ಬೆಳಿಗ್ಗೆಯೊಮ್ಮೆ, ಸಂಜೆಗೊಮ್ಮೆ ಮಾರ್ಗಸೂಚಿ ಬದಲಾಯಿಸಲು ಲಾಯಕ್ಕು” ಎಂದು ತಮಿಳುನಾಡು ಮತ್ತು ಕೇರಳ ಸರ್ಕಾರದ ಕೊರೊನಾ ಪರಿಹಾರದ ಸುದ್ದಿಯ ಚಿತ್ರವನ್ನು ಹಂಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ನಮ್ಮ ಮಾತನ್ನೂ ಕೇಳಿ’- ಪ್ರಧಾನಿ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಜಾರ್ಖಂಡ್ ಸಿಎಂ

ಸಮುದ್ಯತಾ ರಾಜೇಶ್ ಅವರು, “ಹೀಗೇ ಲಾಕ್‌ಡೌನ್ ಮಾಡ್ತಾ ಇದ್ರೆ. ಆಮೇಲೆ ಜನರು #Act1978 ಸಿನಿಮಾದಲ್ಲಿ ಬರುವ ದೃಶ್ಯದ ಥರ ಬಾಂಬ್ ಕಟ್ಕೊಂಡು ಬಂದು ಮನೆ ಅಡ್ರೆಸ್ ಕೊಟ್ಟು ಬಾಡಿಗೆ, ಕರೆಂಟ್ ಬಿಲ್, ವಾಟರ್ ಬಿಲ್ ಕಟ್ಟಿ ಅಂತ ರಾಜಕಾರಣಿಗಳಿಗೆ ಹೇಳಬಹುದು. ಇರೋ ಅಕ್ಕಿನೂ ಕಿತ್ಕೊಂಡು ಏನೂ ನೆರವಾಗದೇ ಮನೆಲಿ‌ ಇರು ಅಂದ್ರೆ ಜನ ಹೊಟ್ಟೆಗೆ ಏನು ತಿಂತಾರೆ?? ಲಾಕ್‌ಡೌನ್ ಒಂದೇ ಪರಿಹಾರ ಅಂತಾದ್ರೆ‌ ಅದಕ್ಕೆ ಸರಿಯಾದ ವ್ಯವಸ್ಥೆ ಕೂಡ ಮಾಡಬೇಕಲ್ವಾ?” ಎಂದು ಪ್ರಶ್ನಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತರಾದ ಸಾಹಕಾರ್‌ ಅಚ್ಚು, “ನಿರ್ದಿಷ್ಟ ಸಮಯದ ನಂತರ ಜನರು ರಸ್ತೆಗಿಳಿಯುವಂತಿಲ್ಲ. ಹಾಲಿನ ಬೂತ್ ಪೂರ್ತಿ ತೆರೆದಿರುತ್ತದೆ. ಬಹುಷಃ ಬೆಕ್ಕಿಗಾಗಿ ಇರಬಹುದು” ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ರಾಜ್ಯಕ್ಕೆ ಆಮ್ಲಜನಕ ನೀಡುವಂತೆ ಕೇಂದ್ರಕ್ಕೆ ಸುಪ್ರೀಂಕೋರ್ಟ್ ಆದೇಶ- ’ಬೆಡ್’ ವಿಚಾರದಲ್ಲೇ ಇರುವ BJP ಸಂಸದರು!

ಕನ್ನಡಪರ ಹೋರಾಟಗಾರ ದಿನೇಶ್ ಕುಮಾರ್‌ ಅವರು, “ಲಾಕ್ ಡೌನ್ ಮಾಡಿದ್ದೀರಿ, ಮಾಡ್ಕೊಳ್ಳಿ. ನಿಮ್ದು,‌ ಮೀಡಿಯಾಗಳದ್ದು ಬಿಟ್ಟಿ ಉಪದೇಶಗಳ ಜಾತ್ರೆ ನಡೀತಾ ಇದೆ. ನಡೀಲಿ. ನಮ್ಮ ಜವಾಬ್ದಾರಿ ನಾವು ಪಾಲಿಸುತ್ತೇವೆ. ನೀವು ಒಂದೇ ಒಂದು‌ ಕೆಲಸ ಮಾಡಿಬಿಡಿ. ಹೇಗೂ ಈ ತಿಂಗಳ ಅಂತ್ಯದವರೆಗೆ ಲಾಕ್ ಡೌನ್ ಇರುತ್ತೆ.‌ ನಾವು ಮನೆಗಳ ಒಳಗೆ ಇರ‌್ತೀವಿ. ಅದೇನು ಮಾಡ್ತೀರೋ ಮಾಡಿ, ಹದಿನೆಂಟು ವಯಸ್ಸು ದಾಟಿದ ರಾಜ್ಯದ ಪ್ರತಿಯೊಬ್ಬ ನಾಗರಿಕನಿಗೆ ಮನೆಮನೆಗೆ ಹೋಗಿ ಕೋವಿಡ್ ಲಸಿಕೆ ಕೊಟ್ಟುಬಿಡಿ. ಎರಡನೇ ಅಲೆಯಿಂದ ಬದುಕಿ‌ ಉಳಿದವರು ಮೂರನೇ ಅಲೆಯಲ್ಲಿ ಜೀವ ಉಳಿಸಿಕೊಳ್ಳುವ ಪ್ರಯತ್ನನಾದ್ರೂ ಮಾಡ್ತೀವಿ. ಇದೊಂದೇ ಕೆಲಸ ಮಾಡಿಬಿಡಿ. ಎಲ್ಲ ಜನಗಳ ಮೇಲೆ ಜವಾಬ್ದಾರಿ ಹೊರೆಸಿದರೆ ಮುಗೀತಾ? ನೀವು ಏನನ್ನೂ ಮಾಡೋದಿಲ್ವಾ? ನಾಚಿಗೆಗೆಟ್ಟೋರೇ, ಇಷ್ಟನ್ನಾದ್ರೂ ಮಾಡಿ ಅಥವಾ ನಾವು ಅಯೋಗ್ಯರು ಅಂತ ಒಪ್ಪಿಕೊಂಡು ತಲೆತಗ್ಗಿಸಿ ನಿಂತುಕೊಳ್ಳಿ” ಎಂದು ಕಿಡಿ ಕಾರಿದ್ದಾರೆ.

ಇದನ್ನೂ ಓದಿ: ಆಮ್ಲಜನಕ ಪೂರೈಕೆಯ ಹೊಣೆ ಹೊರಬೇಕಾದ ಕೈಗಾರಿಕಾ ಸಚಿವ ಶೆಟ್ಟರ್ ಎಲ್ಲಿ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...