ಭಾರತೀಯ ಜನತಾ ಪಕ್ಷದಿಂದ (ಬಿಜೆಪಿ) ಇಂದು ಶಿವಮೊಗ್ಗದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಮಾವೇಶದ ಕುರಿತು ರಾಜ್ಯ ಕಾಂಗ್ರೆಸ್ ಟೀಕೆ ನಡೆಸಿದೆ. ಮೋದಿಯವರೊಂದಿಗೆ ವೇದಿಕೆಯಲ್ಲಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಇಬ್ಬರು ಮಕ್ಕಳು ಇರುವ ಫೋಟೋ ಶೇರ್ ಮಾಡಿರುವ ಪಕ್ಷವು, ‘ಹಿಪಾಕ್ರಸಿಗೆ ಮತ್ತೊಂದು ಹೆಸರೇ ಮೋದಿ’ ಎಂದು ವಾಗ್ದಾಳಿ nನಡೆಸಿದೆ.
ಹಿಪಾಕ್ರಸಿಗೆ ಮತ್ತೊಂದು ಹೆಸರೇ ಮೋದಿ!
ಶಿವಮೊಗ್ಗದಲ್ಲಿ ವೇದಿಕೆ ಮೇಲೆ ಯಡಿಯೂರಪ್ಪರನ್ನು ಕೂರಿಸಿಕೊಂಡು, ಆ ಕಡೆ ಅಭ್ಯರ್ಥಿಯಾಗಿರುವ ದೊಡ್ಡ ಮಗ, ಈ ಕಡೆ ರಾಜ್ಯಾಧ್ಯಕ್ಷನಾದ ಚಿಕ್ಕ ಮಗನನ್ನು ಕೂರಿಸಿಕೊಂಡಿದ್ದ @narendramodi ಅವರೇ,
ನಿಮ್ಮ ಡೋಂಗಿತನ ಬಯಲಾಗಿದೆ.ನಿಮ್ಮ ಟೆಲಿಪ್ರಾಂಪ್ಟರ್ ನಿಂದ “ಕುಟುಂಬ ರಾಜಕೀಯ“ ಎಂಬ ಪದವನ್ನು… pic.twitter.com/ru9C58OwVG
— Karnataka Congress (@INCKarnataka) March 18, 2024
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, ‘ಹಿಪಾಕ್ರಸಿಗೆ ಮತ್ತೊಂದು ಹೆಸರೇ ಮೋದಿ.. ಶಿವಮೊಗ್ಗದಲ್ಲಿ ವೇದಿಕೆ ಮೇಲೆ ಯಡಿಯೂರಪ್ಪರನ್ನು ಕೂರಿಸಿಕೊಂಡು, ಆ ಕಡೆ ಅಭ್ಯರ್ಥಿಯಾಗಿರುವ ದೊಡ್ಡ ಮಗ, ಈ ಕಡೆ ರಾಜ್ಯಾಧ್ಯಕ್ಷನಾದ ಚಿಕ್ಕ ಮಗನನ್ನು ಕೂರಿಸಿಕೊಂಡಿದ್ದ ನರೇಂದ್ರ ಮೋದಿಯವರೆ, ನಿಮ್ಮ ಡೋಂಗಿತನ ಬಯಲಾಗಿದೆ. ನಿಮ್ಮ ಟೆಲಿಪ್ರಾಂಪ್ಟರ್ ನಿಂದ “ಕುಟುಂಬ ರಾಜಕೀಯ” ಎಂಬ ಪದವನ್ನು ಅಳಿಸಿಬಿಡಿ. ಅಥವಾ,
ರಾಜ್ಯ ಬಿಜೆಪಿಗೆ “ಬಿಎಸ್ವೈ & ಸನ್ಸ್ ಪಾರ್ಟಿ” ನಾಮಕರಣ ಮಾಡಿಬಿಡಿ’ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
‘@narendramodi ಅವರೇ,
ನೀವು ಮತ ಕೇಳುತ್ತಿರುವ @BYRBJP ಯಡಿಯೂರಪ್ಪನವರ ಮಗ ಎನ್ನುವುದು ತಿಳಿದಿದೆಯೇ?
ನಿಮ್ಮ ಪಕ್ಷದ ರಾಜ್ಯಾಧ್ಯಕ್ಷ @BYVijayendra ಯಡಿಯೂರಪ್ಪನವರ ಮಗ ಎನ್ನುವುದು ತಿಳಿದಿದೆಯೇ?
ಇದು ಕುಟುಂಬ ರಾಜಕಾರಣ ಅಲ್ಲವೇ?
“ಕುಟುಂಬ ರಾಜಕಾರಣ“ ಎಂದು ಟೀಕಿಸಿ ಈಗ ರಾಜಕೀಯ ಕುಟುಂಬದ ಪರ ಮತ ಕೇಳುವ ಮೋದಿಯದ್ದು ಹಿಪಾಕ್ರಸಿ ಅಲ್ಲದೆ…
— Karnataka Congress (@INCKarnataka) March 18, 2024
‘ನರೇಂದ್ರ ಮೋದಿಯರೇ, ನೀವು ಮತ ಕೇಳುತ್ತಿರುವ ಬಿವೈ ರಾಘವೇಂದ್ರ ಯಡಿಯೂರಪ್ಪನವರ ಮಗ ಎನ್ನುವುದು ತಿಳಿದಿದೆಯೇ? ನಿಮ್ಮ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಯಡಿಯೂರಪ್ಪನವರ ಮಗ ಎನ್ನುವುದು ತಿಳಿದಿದೆಯೇ? ಇದು ಕುಟುಂಬ ರಾಜಕಾರಣ ಅಲ್ಲವೇ? “ಕುಟುಂಬ ರಾಜಕಾರಣ” ಎಂದು ಟೀಕಿಸಿ ಈಗ ರಾಜಕೀಯ ಕುಟುಂಬದ ಪರ ಮತ ಕೇಳುವ ಮೋದಿಯದ್ದು ಹಿಪಾಕ್ರಸಿ ಅಲ್ಲದೆ ಇನ್ನೇನು’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಇದನ್ನೂ ಓದಿ; ದೆಹಲಿ ಅಬಕಾರಿ ನೀತಿ ಪ್ರಕರಣ: ಸಂಜಯ್ ಸಿಂಗ್ ಅವರನ್ನು ಸಂಸತ್ತಿಗೆ ಕರೆದೊಯ್ಯುವಂತೆ ಕೋರ್ಟ್ ನಿರ್ದೇಶನ