- Advertisement -
- Advertisement -
ನರೇಂದ್ರ ಮೋದಿಯವರ ಹೊಸ ಪೌರತ್ವ ಕಾನೂನಿನ ವಿರುದ್ಧ ಸಿಡಿದೆದ್ದಿರುವ ಹೈದರಾಬಾದ್ ಜನತೆ, ಘೋಷಣೆಗಳನ್ನು ಕೂಗುತ್ತಾ ನಡೆಸಿದ ಶಾಂತಿಯುತ ಪ್ರತಿಭಟನಾ ಮೆರವಣಿಗೆಯಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಹಲವು ಧರ್ಮದ ಜನತೆ ಭಾಗವಹಿಸಿ ಭಾರೀ ಪ್ರತಿರೋಧ ವ್ಯಕ್ತಪಡಿಸಿದ್ದಾರೆ.
ಮಿಲಿಯನ್ ಮಾರ್ಚ್ ಎಂದ ಕರೆಯಲಾದ ಈ ಪ್ರತಿಭಟನೆಯು ದೇಶದಲ್ಲಿಯೇ ಸಿಎಎ, ಎನ್ಆರ್ಸಿ ವಿರುದ್ಧದ ನಡೆದ ಬಹುದೊಡ್ಡದು ಎಂದು ಹೇಳಲಾಗುತ್ತಿದೆ. ನಾಗರಿಕ ಸಮಾಜ ಸಂಸ್ಥೆಗಳು ಮತ್ತು ಮುಸ್ಲಿಂ ಸಂಘಟನೆಗಳ ಒಕ್ಕೂಟದಿಂದ ಆಯೋಜಿಸಿದ್ದ ಪ್ರತಿಭಟನೆಯು ದೇಶದ ಗಮನ ಸೆಳೆದಿದೆ.
ಹೈದರಾಬಾದ್ ಪ್ರತಿಭಟನಾಕಾರರು “ಸಿಎಎ ಅನ್ನು ತಕ್ಷಣ ಹಿಂತೆಗೆದುಕೊಳ್ಳಿ” ಮತ್ತು “ಭಾರತದ ಏಕೈಕ ಧರ್ಮ ಜಾತ್ಯತೀತತೆ” ಸೇರಿದಂತೆ ಘೋಷಣೆಗಳೊಂದಿಗೆ ಫಲಕಗಳನ್ನು ಹಿಡಿದಿದ್ದರು. ಇಷ್ಟೆಲ್ಲಾ ಜನರಿದ್ದರೂ ಯಾವುದೇ ಹಿಂಸೆ ನಡೆದ ಘಟನೆಗಳು ಉಲ್ಲೇಖವಾಗಿಲ್ಲ. ಬಹುತೇಕ ಶಾಂತಿಯುತವಾಗಿ ಪ್ರತಿಭಟನೆ ನಡೆದಿದ್ದಕ್ಕೆ ಜನತೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಜಾತ್ಯಾತೀತ>ಜಾತಿಮೀರಿದ,ಪಂಗಡಮೀರಿದ