Homeಕರ್ನಾಟಕಕುಂಕುಮ ವಿಚಾರ: ಮಹಿಳೆಯನ್ನು ನಿಂದಿಸಿದ ಮುನಿಸ್ವಾಮಿಗೆ ಜನರಿಂದ ತರಾಟೆ

ಕುಂಕುಮ ವಿಚಾರ: ಮಹಿಳೆಯನ್ನು ನಿಂದಿಸಿದ ಮುನಿಸ್ವಾಮಿಗೆ ಜನರಿಂದ ತರಾಟೆ

- Advertisement -
- Advertisement -

”ಏನಮ್ಮ ನಿನ್ನ ಹೆಸರು, ಹಣೆಗೆ ಯಾಕೆ ಕುಂಕುಮ ಹಾಕಿಲ್ಲ? ಹಣ ಕೊಟ್ಟು ಬಲವಂತವಾಗಿ ಮತಾಂತರ ಮಾಡಿದ್ದಾರೆ ಅಲ್ಲವಾ? ವೈಷ್ಣವಿ ಎಂಬುದಾಗಿ ಅಂಗಡಿ ಹೆಸರನ್ನು ಯಾಕೆ ಇಟ್ಟುಕೊಂಡಿದ್ದೀಯಾ? ಯಾರೊ ಕಾಸು ಕೊಡುತ್ತಾರೆ ಅಂತ ಸುಜಾತ ಅಂತ ಹೆಸರು ಇಟ್ಟುಕೊಂಡಿದ್ದೀಯಾ? ಗಂಡ ಬದುಕಿದ್ದಾನೆ ತಾನೇ? ನಿನಗೆ ಕಾಮನ್ ಸೆನ್ಸ್ ಇಲ್ಲ. ತಂದೆ ಹೆಸರು ಬದಲಾಯಿಸುತ್ತೀಯಾ ನೀನು? ಅದನ್ನೆಲ್ಲ ಇಟ್ಟುಕೊಳ್ಳುವುದಕ್ಕೆ ಯೋಗ್ಯತೆ ಇಲ್ಲ ನಿನಗೆ..”- ಹೀಗೆ ಕೋಲಾರ ಸಂಸದ ಮುನಿಸ್ವಾಮಿಯವರು ದುಡಿಯುವ ಮಹಿಳೆಯೊಬ್ಬರನ್ನು ನಿಂದಿಸಿದ್ದಾರೆ.

ಸಾಂವಿಧಾನಿಕ ಮೌಲ್ಯಗಳನ್ನು ಮರೆತು ಮುನಿಸ್ವಾಮಿ ವರ್ತಿಸಿರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಮುನಿಸ್ವಾಮಿಯವರ ಹೇಳಿಕೆಯನ್ನು ಹಂಚಿಕೊಂಡು ಬುದ್ಧಿಮಾತು ಹೇಳುತ್ತಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾ ದಿನದಂದೇ ಈ ಘಟನೆ ನಡೆದಿರುವುದನ್ನು ಉಲ್ಲೇಖಿಸಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ವಕೀಲರಾದ ಅಖಿಲಾ ವಿದ್ಯಾಸಂದ್ರ ಈ ಕುರಿತು ಪೋಸ್ಟ್ ಮಾಡಿದ್ದು, “ಇಂತಹ ಅಧಿಕ ಪ್ರಸಂಗ ಮೆರೆಯಲು ಈ ಸಂಸದನಿಗೆ ಅಧಿಕಾರ ಕೊಟ್ಟವರು ಯಾರು? ಪ್ರತಿಸಲ ಮುಖ ತೊಳೆದಾಗ ಹರಿದು ಚರಂಡಿನೀರಿನೊಂದಿಗೆ ಮಿಳಿತವಾಗುವ ಕುಂಕುಮದಲ್ಲಿದೆಯೇ ಆಕೆಯ ಗಂಡನ ಜೀವ? ತಲೆಯೊಳಗೆ ಮತಿಯಿಲ್ಲದ ಕೂಪಮಂಡೂಕಗಳಿವು. ಆ ಸ್ವಾವಲಂಬಿ ಮಹಿಳೆಯರನ್ನು ಅವಮಾನಗೊಳಿಸಲೆಂದೇ ಅಂತಾರಾಷ್ಟ್ರೀಯ ಮಹಿಳಾ ದಿನದ ಆ ಕಾರ್ಯಕ್ರಮಕ್ಕೆ ಹೋಗಿದ್ದೇನು ಈ ‘ಮನು’ಜ? ಛೀ ಧಿಕ್ಕಾರವಿರಲಿ ಈತನ ವ್ಯಕ್ತಿತ್ವಕ್ಕೆ” ಎಂದಿದ್ದಾರೆ.

ಲೇಖಕಿ ಮಮತಾ ಅರಸೀಕೆರೆ ಪ್ರತಿಕ್ರಿಯಿಸಿ, “ಹಣೆಗೆ ಕುಂಕುಮ ಇಟ್ಟುಕೊಂಡಿಲ್ಲ ಎಂದು ಸಂಸದರೊಬ್ಬರು ಮಹಿಳೆಯರೊಬ್ಬರನ್ನು ದಬಾಯಿಸಿದ್ದಾರೆ. ನಿನ್ನ ಗಂಡ ಬದುಕಿದ್ದಾನೆ ತಾನೆ ಕುಂಕುಮ ಇಟ್ಟುಕೊ ಅಂದಿದ್ದಾರೆ. ಈ ಅಂಶಗಳೆಲ್ಲ ವೈಯಕ್ತಿಕ ವಿಷಯಗಳು. ಭಾರತೀಯ ಸಂಸ್ಕೃತಿ ಹೆಸರಲ್ಲಿ ಹೇರುವ ಪ್ರವೃತ್ತಿ ಸಲ್ಲದು. ಅದರಲ್ಲೂ ಹೆಣ್ಣುಮಕ್ಕಳೆಂದರೆ ಸಾಕು ಅವರನ್ನೇ ಸತತ ಗಮನಿಸುವ, ಕಾಯ್ದುಕೊಂಡಿದ್ದು ಯಾವುದಾದರೂ ವಿಷಯವನ್ನೆತ್ತಿ ತಿವಿಯುವ ಈ ಪುರುಷರ ಮನಃಸ್ಥಿತಿ ಅದ್ಯಾವಾಗ ಬದಲಾಗುವುದೊ ತಿಳಿಯದು. ಬಾಹ್ಯ ಲಕ್ಷಣಗಳು , ಸಂಕೇತಗಳ ಮೂಲಕ ಮಹಿಳೆಯರನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ನಡೆಗಳನ್ನು ಯಾವತ್ತೂ ವಿರೋಧಿಸಬೇಕು” ಎಂದು ತಿಳಿಸಿದ್ದಾರೆ.

ಮುಂದುವರಿದು, “ಸಂಸ್ಕೃತಿ ಹೆಸರಲ್ಲಿ ಮಾಡುವ ಅನಾಚಾರಗಳನ್ನು ಮೊದಲು ಬದಲಾಯಿಸಲಿ. ಅಷ್ಟಕ್ಕೂ ಸಂಸ್ಕೃತಿ ಉಳಿಸುವ ಜವಾಬುದಾರಿಕೆಯನ್ನು ಯಾರು ಯಾರಿಗೂ ಕೊಟ್ಟಿಲ್ಲ. ದಬಾಯಿಸುವ ಹಕ್ಕು ಯಾರಿಗೂ ಇಲ್ಲ. ದಬಾಯಿಸಲು, ಬದಲಾಯಿಸಲು, ಬೇಕಾದಷ್ಟು ಸಮಾಜ ಬಾಹಿರ ಅಪಸವ್ಯಗಳಿವೆ. ಮಹಿಳೆಯರ ಮೇಲೆ ಆಗುವ ದೌರ್ಜನ್ಯಗಳ ಬಗ್ಗೆ ಖಂಡತುಂಡವಾಗಿ ಮಾತನಾಡಲಿ ನೋಡುವ. ಅಂತಹ ಕಡೆಯೆಲ್ಲಾ ಈ ಜೋರು ಮನೋಭಾವ ಮಾಡಿ ತೋರಿಸಲಿ. ಹೊರಗೊಂದು ಒಳಗೊಂದು ಪ್ರವೃತ್ತಿಯನ್ನು ಬಿಟ್ಟು ನಡೆ ನುಡಿ ಸಮತೋಲದಲ್ಲಿಟ್ಟುಕೊಂಡಿರಲಿ ಸಾಕು ಈ ಪುರುಷವರ್ಗಗಳೆಲ್ಲ” ಎಂದಿದ್ದಾರೆ.

ಅಸ್ತಿತ್ವ ಲೀಗಲ್ ಟ್ರಸ್ಟ್ ಸಂಸ್ಥಾಪಕರು ಹಾಗೂ ವಕೀಲರಾದ ಅಂಜಲಿ ರಾಮಣ್ಣ ಪ್ರತಿಕ್ರಿಯಿಸಿ, “ಸಿರಿವಂತರು ಅವರ ಧಿರಿಸಿಗೆ match ಆಗಲ್ಲ ಅಂತ ಕುಂಕುಮ ಇಟ್ಟುಕೊಂಡಿರಲ್ಲ. ಮಧ್ಯಮದವರು matching ಬೊಟ್ಟು ಇಟ್ಟುಕೊಂಡಿರುತ್ತಾರೆ. ದುಡಿಯುವ ಮಹಿಳೆಯರು ಕುಂಕುಮ, ಬಳೆ ಏನೂ ತೊಟ್ಟಿರುವುದಿಲ್ಲ, ಅವರ ಕೈ ಬಿರುಕುಗಳಿಂದ, ಹಣೆ ಧೂಳಿನಿಂದ, ಕೂದಲು ಬಿಸಿಲಿನಿಂದ ತುಂಬಿರುತ್ತದೆ. ಇವರೆಲ್ಲರ ಗಂಡಂದಿರು ಪೂರ್ತಿ ಆಯುಷ್ಯ ಬದುಕಿದವರನ್ನು ಕಂಡಿದ್ದೇನೆ. ಸಂಸದ ಮುನಿಸ್ವಾಮಿ ಮಹಾಶಯರು ಚಿತ್ರಗುಪ್ತನ ಕೆಲಸ ಬಿಟ್ಟು ಜನರ ಜವಾಬ್ದಾರಿ ನೋಡುವುದು ಒಳಿತು” ಎಂದು ಬುದ್ಧಿ ಹೇಳಿದ್ದಾರೆ.

ಲೇಖಕಿ ಭಾರತಿ ಹೆಗಡೆಯವರು ಪ್ರತಿಕ್ರಿಯಿಸಿ, “ಪರವಾಗಿಲ್ಲ ಸಂಸದರೇ‌. ಇದು ಬಹಳ ಬೇಗ ಕಣ್ಣಿಗೆ ಬೀಳತ್ತೆ. ಹಾಸಿ ಹೊದೆಯಷ್ಟಿರುವ ಬಡತನ, ನೀರಿನ ಸಮಸ್ಯೆ, ಹೆಚ್ಚುತ್ತಾ ಇರೋ ಹೆಣ್ಣಿನ ಮೇಲಿನ ದೌರ್ಜನ್ಯ ಅತ್ಯಾಚಾರಗಳು, ಇದ್ಯಾವುದೂ ತಮ್ಮ ಗಮನಕ್ಕೆ ಬರೋದಿಲ್ಲ. ಕುಂಕುಮ ಇಟ್ಗೊಳೋದು ಬಿಡೋದು ಅವರವರ ವೈಯಕ್ತಿಕ ನಿಲುವು. ಅದಕ್ಕಾಗಿ ಸರ್ವಾಜನಿಕವಾಗಿ ಒಬ್ಬ ಮಹಿಳೆಯನ್ನು ನಿಂದಿಸಿದ ತಮ್ಮ ಕುರಿತು ಏನೆನ್ನಬೇಕು?” ಎಂದು ಪ್ರಶ್ನಿಸಿದ್ದಾರೆ.

ಪ್ರಕಾಶಕಿ ಅಕ್ಷತಾ ಹುಂಚದಕಟ್ಟೆ ಘಟನೆಯನ್ನು ಖಂಡಿಸಿದ್ದು, “ಈ ಮನಃಸ್ಥಿತಿಗೆ ಧಿಕ್ಕಾರ ಹೇಳುತ್ತಲೇ. ಇದರ ಮೂಲ ಹುಡುಕಿ ಅದನ್ನು ಸಂಪೂರ್ಣ ತೊಲಗಿಸುವ ಪ್ರಯತ್ನ ಮಾಡದೇ ಹೋದರೆ ಇಂಥ ಮನಃಸ್ಥಿತಿಗಳು ಮತ್ತೆ ಮತ್ತೆ ಎದ್ದು ನಮಗೆ ಜಾಡಿಸುವ ಸಂಭವ ಸೃಷ್ಟಿಯಾಗುತ್ತಲೇ ಇರುತ್ತದೆ. ಇದು ನನ್ನ ಪ್ರಕಾರ ಈ ಮಹನೀಯರ ಹೆಗಲ ಮೇಲಿಟ್ಟು ಬೇರೆಯವರು ಗುರಿ ಇಟ್ಟು ಹೊಡೆದ ಪಿಸ್ತೂಲ್. ಹೆಗಲು ಕೊಟ್ಟವರನ್ನು ಧಿಕ್ಕರಿಸುತ್ತಲೇ , ಬೇರೆಯವರ ಹೆಗಲ ಮೇಲೆ ತಮ್ಮ ಸಿದ್ಧಾಂತದ ಗುರಿಯನ್ನು ಇಟ್ಟು ಹೊಡೆವ ಮನಸ್ಥಿತಿಯನ್ನು ಸಂಪೂರ್ಣ ಧಿಕ್ಕರಿಸಬೇಕಾಗಿದೆ. ಮಹಿಳೆಯರ ಸ್ವಯಂ ಅಸ್ಮಿತೆಯನ್ನು ಒಪ್ಪದ ಎಲ್ಲ ಜಾತಿ ಧರ್ಮದ ಮೂಲಭೂತವಾದಿ ಮನಃಸ್ಥಿತಿಗಳಿಗೆ ಧಿಕ್ಕಾರ ಹೇಳಬೇಕಾಗಿದೆ” ಎಂದಿದ್ದಾರೆ.

ಪ್ರೊ.ಪುರುಷೋತ್ತಮ ಬಿಳಿಮಲೆಯವರು ಹೀಗೆ ಪೋಸ್ಟ್ ಮಾಡಿದ್ದಾರೆ:

ಅಯ್ಯಾ ಮುನಿಸ್ವಾಮೀ,
ಬಡ ಮಹಿಳೆಯರ ಕುಂಕುಮ ಬೆವರಲ್ಲಿ ಕರಗಿ ಹೋಗುತ್ತೆ.
ಕುಂಕುಮ ತರಲು ಮತ್ತೆ ಗಂಡನಿಗೆ ಹೇಳಬೇಕು,
ನಿನ್ನ ಕುಂಕುಮ ನಿನ್ನ ಹಣೆಯಲಿ ಭದ್ರವಾಗಿರಲಿ
ಕಂಡ ಕಂಡವರಿಗೆಲ್ಲ ನಾಮ ಹಾಕಲು ಬೇಕಾಗಬಹುದು ನಿನಗೆ
ದುಡಿವ ಮಹಿಳೆಯ ಬಳೆಗಳು ಕೆಲಸದ ನಡುವೆ ಒಡೆದು ಚೂರಾಗುತ್ತವೆ.
ಮತ್ತೆ ಕೊಳ್ಳಲು ಊರ ಜಾತ್ರೆಗೆ ಕಾಯಬೇಕು.
ಹಬ್ಬದಲಿ ಬಳೆಮಾರುವನಿಗೆ ತಡೆ ಒಡ್ಡಲಾಗಿದೆಯಂತೆ
ಈಗ ನಿನ್ನ ಬಳೆಗಳ ನೀನೇ ಇಟ್ಟುಕೋ
ಜಾತಿ ಮತಗಳ ಹೆಸರಿನಲಿ ಜನಗಳಿಗೆ ತೊಡಿಸಲು ಬೇಕಾಗಬಹುದು ನಿನಗೆ
ತಾಯಂದಿರ ಹೊಟ್ಟೆ ಬೆನ್ನಿಗಂಟಿದ್ದು ನಿನಗೆ ಕಾಣಲಿಲ್ಲ
ಎಣ್ಣೆಯಿಲ್ಲದೆ ಅವರ ನೆತ್ತಿ ಒಣಗಿದ್ದು ನಿನಗೆ ಗೊತ್ತಿಲ್ಲ
ಗುಡಿಸಲುಗಳು ಸೋರುತ್ತಿರುವುದ ನೀನು ನೋಡಲಿಲ್ಲ,
ಮಕ್ಕಳು ಶಾಲೆಕಾಣದ ಬಗೆಗೆ ನಿನಗೆ ಅರಿವು ಮೂಡಲಿಲ್ಲ.
ವಯಸಾದರೂ ನಿನಗೆ ತಾಯಿಯ ಮುಖ ದರ್ಶನವಾಗಲೇ ಇಲ್ಲ.

ಕವಿತಾ ಕವಿ ಎಂಬವರು ಪ್ರತಿಕ್ರಿಯಿಸಿ, “ನನ್ನಂಥವರನ್ನು ಕೇಳಬೇಕಿತ್ತು. ಗ್ರಹಚಾರ ಬಿಡಿಸ್ತಿದ್ದೆ. ಜನಪ್ರತಿನಿಧಿಯಾಗಿರುವುದು ಜನಸೇವೆ ಮಾಡಲೆಂದೇ ಹೊರತು ದಬ್ಬಾಳಿಕೆ ನಡೆಸಲು ಅಲ್ಲ. ಮೊದಲು ನಿಮ್ಮನ್ನು ಗಾದಿಗೇರಿಸಿದ ಸಂವಿಧಾನ ಓದಿ. ನಂತರ ಮತ ಕೇಳಲು ಬನ್ನಿ” ಎಂದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...