Homeಸಾಹಿತ್ಯ-ಸಂಸ್ಕೃತಿಕಥೆಮನುಷ್ಯರನ್ನು ಮನುಷ್ಯರನ್ನಾಗಿ ನೋಡಲು ಕಲಿಸುವ ಮನುಷ್ಯತ್ವದ ನಾಟಕ 'ನಗ್ನ 99'

ಮನುಷ್ಯರನ್ನು ಮನುಷ್ಯರನ್ನಾಗಿ ನೋಡಲು ಕಲಿಸುವ ಮನುಷ್ಯತ್ವದ ನಾಟಕ ‘ನಗ್ನ 99’

ಈ ರಂಗಕೃತಿಯು ನಾಟಕಕಾರರ "ಸಕಲರೊಳು ಲಿಂಗಾತ್ಮ ಕಾಣಾ" ಎಂಬ ಕಥೆಯನ್ನು ಆಧರಿಸಿದ್ದುದಾಗಿದೆ.

- Advertisement -
- Advertisement -

| ನಾನುಗೌರಿ ಡೆಸ್ಕ್ |

ಹನಮಂತ ಹಾಲಿಗೇರಿ

ಕನ್ನಡದ ಯುವ ಬರಹಗಾರ ಹನಮಂತ ಹಾಲಿಗೇರಿಯವರ ಇದುವರೆಗಿನ ಸಾಹಿತ್ಯ ಅದು ಸಮಾಜಮುಖಿಯಾಗಿರುವಂತದ್ದು. ಬದುಕು ಮತ್ತು ಬರಹ ಸಮಾಜಕ್ಕೆ ಒಳಿತನ್ನು ಮಾಡಬೇಕೆಂಬ ಆಶಯ ಅವರದು. ಅವರ ಕೆಂಗುಲಾಬಿ ಕಾದಂಬರಿ ಬಹಳ ಪ್ರಸಿದ್ದಿ ಪಡೆದು ಸಿನಿಮಾ ಆಗುವತ್ತ ಹೆಜ್ಜೆ ಇಟ್ಟರೆ, ಊರು ಸುಟ್ಟರೂ ಹನಮಪ್ಪ ಹೊರಗ ಎಂಬ ನಾಟಕ ಇದವರೆಗು 320 ಪ್ರದರ್ಶನಗಳನ್ನು ಕಂಡಿದ್ದು ಜೈ ಕೇಸರಿನಂದನ ಎಂಬ ಸಿನೆಮಾ ಆಗಿಯೂ ತೆರೆಕಂಡಿದೆ. ಇಂತಹ ಯುವಪ್ರತಿಭೆಯ ಹೊಸ ಕಥೆ ನಗ್ನ 99 ಎಂಬುದು ನಾಟಕರೂಪಕ್ಕೆ ಬಂದು ಪ್ರದರ್ಶನಕ್ಕೆ ಸಿದ್ದವಾಗಿದೆ.

ಏನಿದು ನಗ್ನ 99?

ಅರೆಹುಚ್ಚನೊಬ್ಬನ ಮಾನಸಿಕ ತೊಳಲಾಟಗಳ ಸುತ್ತ ಇರುವ ಈ ನಾಟಕ, ಸಮಾಜದ ತುಂಬಿಕೊಂಡಿರುವ ಹುಚ್ಚತನಗಳನ್ನು ಬಯಲಿಗೆಳೆಯುವ ಆಶಯ ಹೊಂದಿರುವಂಥದ್ದು. ಬುದ್ಧಿಮಾಂದ್ಯರಿಗೆ ಮತ್ತು ಅಂಗವಿಕಲರಿಗೂ ನಿಸರ್ಗದತ್ತ ಲೈಂಗಿಕ ಬದುಕು ದಕ್ಕಬೇಕು ಎಂಬ ಮನೋವೈಜ್ಞಾನಿಕ ನೆಲೆಯ ಆಶಯವನ್ನು ನಾಟಕ ಹೊಂದಿದೆ.

ವಯೋಮಾನಕ್ಕೆ ತಕ್ಕಂತೆ ಸಹಜ ಲೈಂಗಿಕತೆಗಾಗಿ ಹಪಹಪಿಸುತ್ತಿರುವ ಅರೆಹುಚ್ಚನ ವಯಕ್ತಿಕ ಬದುಕನ್ನು ಜಗಜ್ಜಾಹೀರುಗೊಳಿಸಲು ಸ್ಪರ್ಧೆಗಿಳಿಯುವ ಇಂದಿನ ದೃಶ್ಯ ಮಾದ್ಯಮಗಳ ಕ್ರೌರ್ಯದ ಹಸಿವನ್ನೂ ಸಹ ಈ ಕಥನ ಬೆತ್ತಲುಗೊಳಿಸುತ್ತದೆ. ಹುಚ್ಚನೊಬ್ಬ ಕಾಲೇಜು ಹುಡುಗಿಯರನ್ನ ದಾರಿಯಲ್ಲಿ ನಿಂತು ನೋಡುತ್ತಿದ್ದ ಎಂಬ ಏಕೈಕ ಕಾರಣಕ್ಕೆ ಅವನನ್ನು ಗಿಡಕ್ಕೆ ಕಟ್ಟಿಸುವ ಟಿವಿ ರಿಪೋರ್ಟರ್ ನಿತೀಶ್, ಕಾಲೇಜು ಹುಡುಗರಿಂದ ಆ ಹುಡುಗನ ಮುಖಮೋತಿಯೆನ್ನದೇ ರಕ್ತ ಒಸರುವಂತೆ ಹೊಡೆಸುವ ದೃಶ್ಯದಿಂದ ನಾಟಕ ಶುರುವಾಗುತ್ತದೆ.

ಮುಂದೆ ಹಲವಾರು ತಿರುವುಗಳನ್ನು ಪಡೆದುಕೊಂಡು ಸಮಾಜದ ಒರೆಕೋರೆಗಳನ್ನು ವಿಡಂಭಿಸುವ ಈ ನಾಟಕ ಪ್ರೇಕ್ಷಕರನ್ನು ಚಿಂತನೆಗೆ ಹಚ್ಚುತ್ತದೆ, ತನ್ನ ಮನೆಯಲ್ಲಿನ ಸಾಕುಪ್ರಾಣಿಗಳು ಬೆದೆ ಬಂದಿದ್ದರೆ ಅವುಕ್ಕೆ ಊರೆಲ್ಲ ಹುಡುಕಾಡಿ ಸಂಗಾತಿಯನ್ನು ಕರೆತಂದು ಸಂಯೋಗ ಮಾಡಿಸುವ ಮನುಷ್ಯ, ತನ್ನ ಮನೆಯಲ್ಲಿನ ಬುದ್ಧಿ ಮಾಂದ್ಯರನ್ನು ಮಾತ್ರ ಪ್ರಾಣಿಗಳಿಗಿಂತ ಕಡೆಯಾಗಿ ನೋಡುವ ಮನೋ ಸ್ಥಿತಿ ಸಮಾಜದಲ್ಲಿದೆ. ಈ ವೈಪರಿತ್ಯದ ನಿಷ್ಕರುಣೆಯನ್ನು ಎತ್ತಿ ತೋರಿಸುವ ರಂಗಕೃತಿಯು ನಾಟಕಕಾರರ “ಸಕಲರೊಳು ಲಿಂಗಾತ್ಮ ಕಾಣಾ” ಎಂಬ ಕಥೆಯನ್ನು ಆಧರಿಸಿದ್ದುದಾಗಿದೆ.

ಹೇಮಂತ್ ಕುಮಾರ್

ಮೊದಲ ಪ್ರದರ್ಶನ ಇದೇ ಭಾನುವಾರ

ಹೆಜ್ಜೆ ಥಿಯೇಟರ್ (ರಿ) ನಿರ್ಮಾಣದಲ್ಲಿ ಮೂಡಿಬರಲಿರುವ ನಗ್ನ 99 ನಾಟಕದ ನಿರ್ದೇಶನದ ಜಬಾಬ್ದಾರಿಯನ್ನು ಸಂವಾದ ಸಂಸ್ಥೆಯಲ್ಲಿ ತೊಡಗಿಸಿಕೊಂಡಿರುವ ಹೇಮಂತ್ ಕುಮಾರ್ ರವರು ಹೊತ್ತಿದ್ದಾರೆ. ಈ ಮೊದಲು ಅವರು ‘ಕರ್ಣಭಾರ’ ನಾಟಕವನ್ನು ನಿರ್ದೇಶಿಸಿ ಪ್ರಸಂಶೆ ಪಡೆದಿದ್ದರು. ಜೂನ್ 02ರ ಭಾನುವಾರ ಸಂಜೆ 7:30ಕ್ಕೆ ಮಲ್ಲೇಶ್ವರಂನ ಸೇವಾಸದನದಲ್ಲಿ ನಗ್ನ 99 ನಾಟಕದ ಮೊದಲ ಪ್ರದರ್ಶನವಿದೆ. ಆಸಕ್ತರು ಟಿಕೆಟ್ ಗಾಗಿ 9535253595 ಈ ನಂಬರ್ ಗೆ ಸಂಪರ್ಕಿಸಬಹುದಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

‘ನನ್ನ ಮತ ಉಳಿಸಿ ಎಂದು ಜನ ಬೇಡಿಕೊಳ್ಳುವಂತೆ ಮಾಡಬೇಡಿ’: ಇದು ನನ್ನ ವೈಯಕ್ತಿಕ ಸಮಸ್ಯೆ ಅಲ್ಲ, ಇಡೀ ದೇಶದ ಸಮಸ್ಯೆ: ಬಹುಭಾಷಾ ನಟ ಪ್ರಕಾಶ್ ರಾಜ್

ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ವಿಧಾನದ ಬಗ್ಗೆ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಕರೆದಿದ್ದ ಮಹತ್ವದ ಪತ್ರಿಕಾಗೋಷ್ಠಿ ಆಗಸ್ಟ್ 14, 2026ರಂದು ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ...

‘ನಲ್ಸಾರ್’ ವಿದ್ಯಾರ್ಥಿಗಳ ವೃತ್ತಿಜೀವನಕ್ಕೆ ಅಡ್ಡಬಂದ BCI ನಡೆಗೆ CJI ಗರಂ

ಹೈದರಾಬಾದ್‌ನ 'ನಲ್ಸಾರ್' (NALSAR) ಕಾನೂನು ವಿಶ್ವವಿದ್ಯಾಲಯದ ಪದವೀಧರರ ಸನ್ನದು (ಎನ್‌ರೋಲ್‌ಮೆಂಟ್) ನೋಂದಣಿಯನ್ನು ಅಮಾನತಿನಲ್ಲಿಡುವಂತೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ನೀಡಿದ್ದ ವಿವಾದಾತ್ಮಕ ನಿರ್ದೇಶನದ ವಿರುದ್ಧ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್,...

ಉತ್ತರ ಪ್ರದೇಶದಲ್ಲಿ ಮುಸ್ಲಿಮರ ಮೇಲಿನ ದೌರ್ಜನ್ಯ: ಯೋಗಿ ಆದಿತ್ಯನಾಥ್ ಸೇರಿ 8 ಅಧಿಕಾರಿಗಳ ನಿರ್ಬಂಧಕ್ಕೆ ಕೆನಡಾ ಮಾನವ ಹಕ್ಕುಗಳ ಸಂಸ್ಥೆ ಆಗ್ರಹ

ಉತ್ತರ ಪ್ರದೇಶದಲ್ಲಿ ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸಿಕೊಂಡು ನಿರಂತರವಾಗಿ ನಡೆಸಲಾಗುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ರಾಜ್ಯ ಬೆಂಬಲಿತ ದೌರ್ಜನ್ಯಗಳನ್ನು ಖಂಡಿಸಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಎಂಟು ಪ್ರಮುಖ...

SIR: ಬೆಂಗಳೂರಿನ ಸರ್ವಜ್ಞನಗರದ ಒಂದೇ ಬೂತ್‌ನಲ್ಲಿ ಶೇ.93.71ರಷ್ಟು ಮತದಾರರ ಹೆಸರು ನಾಪತ್ತೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಹೆಸರಿನಲ್ಲಿ ರಾಜಧಾನಿ ಬೆಂಗಳೂರಿನ ಸರ್ವಜ್ಞನಗರ ಕ್ಷೇತ್ರದ ಒಂದೇ ಮತಗಟ್ಟೆಯಲ್ಲಿ ಬರೋಬ್ಬರಿ ಶೇ. 93.71ರಷ್ಟು ಮತದಾರರ ಹೆಸರುಗಳನ್ನು ಮತಪಟ್ಟಿಯಿಂದ ತೆಗೆಯಲಾಗಿದೆ ಎಂಬ ಆಘಾತಕಾರಿ ಸಂಗತಿಯೊಂದು...

ASDDO ಪಟ್ಟಿ ಸಾರ್ವಜನಿಕ ಪ್ರಕಟಣೆ ಬಗ್ಗೆ ಚುನಾವಣಾ ಆಯೋಗ ನಿರ್ಲಕ್ಷ್ಯ! ಆರೋಪ

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಬರೋಬ್ಬರಿ 1.08 ಕೋಟಿ ಮತದಾರರ ಹೆಸರನ್ನು ಎಎಸ್‌ಡಿಡಿಒ (ASDDO) ಪಟ್ಟಿಗೆ ಸೇರಿಸಿ ಆತಂಕ ಸೃಷ್ಟಿಸಿದ್ದ ಚುನಾವಣಾ ಆಯೋಗ, ಈಗ ಆ ಪಟ್ಟಿಯ ಸಾರ್ವಜನಿಕ ಪ್ರಕಟಣೆಯ...

SIR: 62 ವರ್ಷದ ಜೀವಂತ ವ್ಯಕ್ತಿಯನ್ನು ‘ಮೃತ’ ಎಂದು ಪಟ್ಟಿ ಮಾಡಿದ ಆಯೋಗದ ಕುತಂತ್ರ ಬಯಲು

ರಾಜ್ಯಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಜಾಪ್ರಭುತ್ವದ ಮೂಲ ಆಶಯಕ್ಕೇ ಮಾರಕವಾಗಿ ಪರಿಣಮಿಸುತ್ತಿದೆ. ದೋಷಮುಕ್ತ ಪಟ್ಟಿ ಸಿದ್ಧಪಡಿಸುವ ನೆಪದಲ್ಲಿ ಚುನಾವಣಾ ಆಯೋಗವು ಬರೋಬ್ಬರಿ 1.08 ಕೋಟಿ ಮತದಾರರನ್ನು...

‘ಸಿದ್ದಾರ್ಥ ವಿಹಾರ ಟ್ರಸ್ಟ್’ ನ ದಾಖಲೆ ನೀಡುತ್ತೇನೆ: ಆರ್‌ಎಸ್‌ಎಸ್, ರಾಮಮಂದಿರದ ಲೆಕ್ಕ ನೀಡಲು ಸಿದ್ಧವಿದ್ದೀರಾ?: ಬಿಜೆಪಿ ಆರೋಪಕ್ಕೆ ಪ್ರಿಯಾಂಕ್ ಖರ್ಗೆ ಸವಾಲು

ಬೆಂಗಳೂರು: ‘ಸಿದ್ದಾರ್ಥ ವಿಹಾರ ಟ್ರಸ್ಟ್‌’ ವಿರುದ್ಧ ಭೂ ಅಕ್ರಮದ ಆರೋಪ ಮಾಡಿ ತಮ್ಮ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದ ಬಿಜೆಪಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನೇರ...

ಕ್ಯೂಬಾ ಎಂದರೆ ಫಿಡೆಲ್, ಅಮೆರಿಕದ ಕುತಂತ್ರದ ವಿರುದ್ಧ ಪುಟ್ಟ ರಾಷ್ಟ್ರ ಕ್ಯೂಬಾದ ಸುದೀರ್ಘ ಕ್ರಾಂತಿ

ಆಗಸ್ಟ್ 13, 2026 ರಂದು ಕ್ಯೂಬಾ ತನ್ನ ಕ್ರಾಂತಿಕಾರಿ ನಾಯಕ, ಕಮಾಂಡರ್-ಇನ್-ಚೀಫ್ ಫಿಡೆಲ್ ಕ್ಯಾಸ್ಟ್ರೋ ರೂಜ್ ಅವರ ಜನ್ಮ ಶತಮಾನೋತ್ಸವವನ್ನು ಆಚರಿಸುತ್ತಿದೆ. ಐದು ದಶಕಗಳ ಕಾಲ ದೇಶವನ್ನು ಮುನ್ನಡೆಸಿದ ನಾಯಕನ ಶಾಶ್ವತ ಸಿದ್ಧಾಂತಗಳು...

‘ರೋಹಿತ್ ಕಾಯ್ದೆ’ ಜಾರಿಗೆ ಆಗ್ರಹ: ಚಾಲ್ತಿಯಲ್ಲಿರುವ ಅಧಿವೇಶನದಲ್ಲೇ ವಿಧೇಯಕ ಮಂಡಿಸಲು ಸರ್ಕಾರಕ್ಕೆ ‘ರೋಹಿತ್ ಕಾಯ್ದೆಗಾಗಿ ಜನಾಂದೋಲನ’ ಸಂಘಟನೆ ಒತ್ತಾಯ

ಬೆಂಗಳೂರು: ದೇಶದ ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ದಲಿತ ಮತ್ತು ಆದಿವಾಸಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಾಂಸ್ಥಿಕ ಜಾತಿ ತಾರತಮ್ಯ, ಕಿರುಕುಳ ಹಾಗೂ ವಂಚನೆಯನ್ನು ತಡೆಗಟ್ಟಲು ಅತ್ಯಂತ ನಿರ್ಣಾಯಕವಾಗಿರುವ 'ಕರ್ನಾಟಕ ರೋಹಿತ್ ವೇಮುಲಾ...

SIR: ತೆಲಂಗಾಣ ಸರ್ಕಾರ ಮತದಾರರಿಗೆ ನೀಡಿದ್ದ FRC ಯನ್ನು , ನಿರಾಕರಿಸಿದ ಕೇಂದ್ರ ಚುನಾವಣಾ ಆಯೋಗ

ಮತದಾರರ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ತೆಲಂಗಾಣ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿದ್ದ ‘ಫ್ಯಾಮಿಲಿ ರಿಜಿಸ್ಟರ್ ಸರ್ಟಿಫಿಕೇಟ್’ (FRC) ಅನ್ನು ಮತದಾರರ ದಾಖಲೆಯನ್ನಾಗಿ ಸ್ವೀಕರಿಸಲು ಕೇಂದ್ರ ಚುನಾವಣಾ ಆಯೋಗ ನಿರಾಕರಿಸಿದೆ. FRC...