Homeಮುಖಪುಟ99.94 ರೂ ತಲುಪಿದ ಪೆಟ್ರೋಲ್ ದರ: ಬ್ಯಾಟಿಂಗ್ ದೈತ್ಯ ಡಾನ್ ಬ್ರಾಡಮನ್‌ಗೆ ಮುಂಬೈ ಶ್ರದ್ದಾಂಜಲಿ!

99.94 ರೂ ತಲುಪಿದ ಪೆಟ್ರೋಲ್ ದರ: ಬ್ಯಾಟಿಂಗ್ ದೈತ್ಯ ಡಾನ್ ಬ್ರಾಡಮನ್‌ಗೆ ಮುಂಬೈ ಶ್ರದ್ದಾಂಜಲಿ!

- Advertisement -
- Advertisement -

ಪೆಟ್ರೋಲ್ ರೇಟು ಏರಿಕೆಯಾಗುವುದೇ ನಡೆದೇ ಇದೆ. ಆದರೆ ಇವತ್ತು ಮುಂಬೈನಲ್ಲಿ ತಲುಪಿದ ಪೆಟ್ರೋಲ್‌ನ ಗರಿಷ್ಠ ಮಟ್ಟ ಕುರಿತಂತೆ ಅಸಹಾಯಕ ಮುಂಬೈಗರು ಟ್ವೀಟ್‌ಗಳನ್ನು ಮಾಡುತ್ತ, ಡಾನ್ ಬ್ರಾಡ್‌ಮನ್ ಎಂಬ ಕ್ರಿಕೆಟ್ ದಂತವ್ಯಕ್ತಿಗೆ ಶ್ರದ್ದಾಂಜಲಿ ಸಲ್ಲಿಸಿದ್ದಾರೆ!

ಏಕೆಂದರೆ ಇವತ್ತು ಮುಂಬೈನ ಪೆಟ್ರೋಲ್ ರೇಟು ಮತ್ತು ಡಾನ್ ಬ್ರಾಡ್‌ಮನ್ ಎಂಬ ಅಪ್ರತಿಮ ಬ್ಯಾಟ್ಸ್ಮನ್‌ನ ಟೆಸ್ಟ್ ಸರಾಸರಿ ಬ್ಯಾಟಿಂಗ್ ಒಂದೇ ಆಗಿವೆ. ಅಂದರೆ ಇಂದು ಮುಂಬೈನಲ್ಲಿ ಲೀಟರ್ ಪೆಟ್ರೋಲ್ ಬೆಲೆ 99.94 ರೂ ತಲುಪಿದೆ. ಬ್ರಾಡ್‌ಮನ್ ಅವರ ವೃತ್ತಿಜೀವನದ ಟೆಸ್ಟ್ ಬ್ಯಾಟಿಂಗ್ ಸರಾಸರಿ ಸಹ 99.94 ಆಗಿದೆ.

ಸಚಿನ್ ತೆಂಡೂಲ್ಕರ್ ನೆಲೆಸಿರುವ, ಮುಂಬೈ ಇಂಡಿಯನ್ಸ್ ಐಪಿಎಲ್ ತಂಡವನ್ನು ಮುನ್ನಡೆಸುತ್ತಿರುವ ಅಂಬಾನಿ ಕುಟುಂಬ ವಾಸಿಸುವ ಮುಂಬೈನಲ್ಲಿ ಈಗ ಪೆಟ್ರೋಲ್ ದರ ಸೆಂಚುರಿ ಸಮೀಪ ಬಂದು ನಿಂತಿದೆ.

ತೆಂಡೂಲ್ಕರ್, ರಿಕಿ ಪಾಂಟಿಂಗ್ ಅವರಿಗೆ ಸಾಧ್ಯವಾಗದೇ ಹೋಗಿದ್ದನ್ನು ಈಗ ಮೋದಿ ಸಾಧಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗುತ್ತಿದೆ.
ಕ್ರಿಕೆಟ್ ಮತ್ತು ಮೋದಿ ಎರಡರ ಆರಾಧಕರೂ ಆದ ಭಕ್ತರಿಗೆ ಇದು ಮುಜುಗರ ಉಂಟು ಮಾಡುತ್ತಿದೆ.

ಸರ್ ಡೊನಾಲ್ಡ್ ಜಾರ್ಜ್ ಬ್ರಾಡ್‌ಮನ್ ಆಸ್ಟ್ರೇಲಿಯಾದ ಮಾಜಿ ಅಂತರರಾಷ್ಟ್ರೀಯ ಕ್ರಿಕೆಟಿಗ. ಈತನನ್ನು ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್ಮನ್ ಎಂದು ವ್ಯಾಪಕವಾಗಿ ಅಂಗೀಕರಿಸಲಾಗಿದೆ. ಬ್ರಾಡ್‌ಮನ್ ಅವರ ವೃತ್ತಿಜೀವನದ ಟೆಸ್ಟ್ ಬ್ಯಾಟಿಂಗ್ ಸರಾಸರಿ 99.94 ಅನ್ನು ಕ್ರೀಡಾಪಟು ಒಬ್ಬರು ಪಡೆದ ದೊಡ್ಡ ಸಾಧನೆ ಎಂದು ಉಲ್ಲೇಖಿಸಲಾಗಿದೆ.

ಹಿಂದೆಲ್ಲಾ ಪೆಟ್ರೋಲ್ ಡಿಸೇಲ್ ದರ ಪೈಸೆಗಳಲ್ಲಿ ಹೆಚ್ಚಾದರೂ ಭಾರೀ ಪ್ರತಿಭಟನೆಗಳು ದಾಖಲಾಗುತ್ತಿದ್ದವು. ಈಗ ಕೋವಿಡ್ ಕಾಲದಲ್ಲಿ ಪ್ರತಿಭಟನೆ ನಿಷಿದ್ದ. ಹಾಗಾಗಿ ನೆಟ್ಟಿಗರು ಟ್ವೀಟ್ ಮೂಲಕ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ. ಅಂತಹ ಕೆಲವು ಟ್ವೀಟ್‌ಗಳು ಇಲ್ಲಿವೆ.


ಇದನ್ನೂ ಓದಿ: ಯಾರು ಈ ಬಾಬಾ ರಾಮದೇವ್? ಏನು ಈ ಪತಂಜಲಿ?: ಆಧ್ಯಾತ್ಮಿಕ ಬಂಡವಾಳಶಾಹಿಯ ಸಂಪೂರ್ಣ ಡಿಟೇಲ್ಸ್….

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...