Homeಮುಖಪುಟರಾಹುಲ್ ಗಾಂಧಿ ಪಪ್ಪು ಅಲ್ಲ, ಅವರು ಬಿಜೆಪಿಗರನ್ನೇ ಪಪ್ಪು ಮಾಡಿದ್ದಾರೆ: ಆದಿರ್ ಚೌಧರಿ

ರಾಹುಲ್ ಗಾಂಧಿ ಪಪ್ಪು ಅಲ್ಲ, ಅವರು ಬಿಜೆಪಿಗರನ್ನೇ ಪಪ್ಪು ಮಾಡಿದ್ದಾರೆ: ಆದಿರ್ ಚೌಧರಿ

- Advertisement -
- Advertisement -

ಕಳೆದೆರಡು ದಿನಗಳಿಂದ ಲೋಕಸಭೆಯಲ್ಲಿ ವಿಪಕ್ಷ ನಾಯಕರು ತೀವ್ರ ತರಾಟೆಗೆ ತಗೆದುಕೊಂಡ ಬಳಿಕ ಕೇಂದ್ರ ಸರ್ಕಾರ ತೀವ್ರ ಮುಜುಗಕ್ಕಿಡಾಯಿತು. ಈ ವೇಳೆ ಕಾಂಗ್ರೆಸ್ ನಾಯಕ ಆದಿರ್ ಚೌಧರಿ ಅವರು, ರಾಹುಲ್ ಗಾಂಧಿಯವರನ್ನು ನೀವು ಎಷ್ಟೇ ‘ಪಪ್ಪು’ ಎಂದು ಹೇಳಿದರೂ ಸಾಬೀತುಮಾಡಲಾಗಲಿಲ್ಲ. ಆದರೆ ರಾಹುಲ್ ಗಾಂಧಿಯವರೇ ನಿಮ್ಮನ್ನು ‘ಪಪ್ಪು’ ಎಂದು ಸಾಬೀತುಪಡಿಸಿದ್ದಾರೆ ಎಂದು ಹೇಳಿದರು.

”ರಾಹುಲ್ ಗಾಂಧಿಯವರು ಸರಿಯಾದ ವಿಚಾರವನ್ನೇ ಆಯ್ಕೆ ಮಾಡಿಕೊಂಡು, ನಿಮ್ಮ ಮೇಲೆ ದಾಳಿ ಮಾಡಿದ್ದಾರೆ. ಅದರಿಂದ ಬಿಜೆಪಿಯಲ್ಲಿ ಕೋಲಾಹಲ ಎದ್ದಿದೆ. ಮೊದಲ ಬಾರಿಗೆ, ಆಡಳಿತ ಪಕ್ಷವು ಕೈಗಾರಿಕೋದ್ಯಮಿಗಾಗಿ ವಕಾಲತ್ತು ವಹಿಸುತ್ತಿದೆ. ‘ಇದನ್ನು ನಾವು ಹೇಳುತ್ತಿಲ್ಲ, ಇದು ಹಿಂಡೆನ್‌ಬರ್ಗ್ ವರದಿಯಲ್ಲಿ ಬಂದಿದೆ. ನಾವು ಆ ಸಮಸ್ಯೆಯನ್ನು ಎತ್ತುತ್ತಿದ್ದೇವೆ ಅದರಲ್ಲಿ ತಪ್ಪೇನು?” ಎಂದರು.

ಈ ವೇಳೆ ಚೀನಾ ವಿಷಯವನ್ನು ಪ್ರಸ್ತಾಪಿಸಿ, 1962ರ ಭಾರತ-ಚೀನಾ ಯುದ್ಧದ ನಂತರ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅವರು ಅಟಲ್ ಬಿಹಾರಿ ವಾಜಪೇಯಿ ಅವರ ಮನವಿಯ ಮೇಲೆ ಚರ್ಚೆಗೆ ಒಪ್ಪಿದರು, ಆದರೆ ಪ್ರಸ್ತುತ ಬಿಜೆಪಿ ಸರ್ಕಾರ ಚರ್ಚೆಯೇ ಬೇಡ ಎಂದು ಹೇಳುತ್ತದೆ.

“ಕೆಲವು ದಿನಗಳ ಹಿಂದೆ ದೆಹಲಿಯಲ್ಲಿ ಡಿಜಿಗಳು ಮತ್ತು ಐಜಿಗಳ ಸಭೆ ನಡೆಯಿತು, ಪೊಲೀಸ್ ಅಧಿಕಾರಿಗಳು ಸಂಶೋಧನಾ ಪ್ರಬಂಧವನ್ನು ಮಂಡಿಸಿದರು. ಅದರಲ್ಲಿ ನಾವು ಮೊದಲು ಪೂರ್ವ ಲಡಾಖ್‌ನಲ್ಲಿ 65 ಪಾಯಿಂಟ್‌ಗಳಲ್ಲಿ ಗಸ್ತು ತಿರುಗುತ್ತಿದ್ದೆವು ಆದರೆ ನಮಗೆ ಆನಂತರ ಗಸ್ತು ತಿರುಗಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗಿದೆ. ಏಕೆಂದರೆ ಭಾರತಕ್ಕೆ ಚೀನೀ ಆಕ್ರಮಣಗಳು ಹೆಚ್ಚಾಗಿವೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಕಡತದಿಂದ ರಾಹುಲ್ ಭಾಷಣ ಕಡಿತ; ಪ್ರಜಾಪ್ರಭುತ್ವ ದಹನ ಎಂದ ಕಾಂಗ್ರೆಸ್

ಈ ವೇಳೆ ಪ್ರತಿಕ್ರಿಯಿಸಿದ ಅಮಿತ್ ಶಾ, ”ಅಧಿರ್ ರಂಜನ್ ಜೀ ಇದನ್ನು ಈಗ ಏಕೆ ಚರ್ಚೆ ಮಾಡುತ್ತಿಲ್ಲ ಎಂದು ಕೇಳುತ್ತಿದ್ದಾರೆ. ಏಕೆಂದರೆ ಆಗ ನ್ಯೂನತೆಗಳಿದ್ದವು ಮತ್ತು ಈಗ ಯಾವುದೂ ಇಲ್ಲ. ಆಗ (ನೆಹರು-ವಾಜಪೇಯಿ) ಸಾವಿರಾರು ಹೆಕ್ಟೇರ್ ನಷ್ಟವಾದ ನಂತರ ಚರ್ಚೆ ಪ್ರಾರಂಭವಾಯಿತು” ಎಂದು ಹೇಳಿದರು.

ಲೋಕಸಭೆಯಿಂದ ಹೊರಬಂದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅಧೀರ್ ರಂಜನ್ ಚೌಧರಿ, ಬಿಜೆಪಿ ಸಂಸದರನ್ನು ಗೇಲಿ ಮಾಡಿ, ಪ್ರಧಾನಿ ನರೇಂದ್ರ ಮೋದಿಯವರ ‘ಚಾಮ್ಚೆ’ ಎಂದು ಕರೆದಿದ್ದಾರೆ.

”ಪ್ರಧಾನಿಯವರು ತಪ್ಪುದಾರಿಗೆಳೆಯುವ ಭಾಷಣಕ್ಕೆ ಎಲ್ಲ ಬಿಜೆಪಿ ಸಂಸದರು ಚಪ್ಪಾಳೆ ತಟ್ಟಿದರು. ಪ್ರಧಾನಿ ಹೋದ ನಂತರ (ಲೋಕಸಭೆಯಿಂದ) ಎಲ್ಲಾ ‘ಚಾಮ್ಚೆ’ಗಳು ಹೋದವು. ಇದರಿಂದಾಗಿ ಸದನವನ್ನು ನಡೆಸಲು ಅಗತ್ಯವಿರುವ ಕನಿಷ್ಠ ಬಲ ಇರಲಿಲ್ಲ ಹಾಗಾಗಿ ಸದನವನ್ನು ಮುಂದೂಡಲಾಯಿತು. ಇದು ಸರ್ಕಾರದ ಅಸಮರ್ಥತೆಯನ್ನು ತೋರಿಸುತ್ತದೆ ಎಂದು ಹೇಳಿದರು.

ಪ್ರಧಾನಿ ಮೋದಿ ಭಾಷಣದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ಶಶಿ ತರೂರ್, ”ಪ್ರಧಾನಿ ಉತ್ತಮ ಭಾಷಣ ಮಾಡಿದರು ಆದರೆ ಪ್ರತಿಪಕ್ಷಗಳು ಕೇಳಿದ ಯಾವುದೇ ಪ್ರಶ್ನೆಗಳಿಗೆ ಅವರು ಉತ್ತರಿಸಲಿಲ್ಲ” ಎಂದು ಹೇಳಿದರು.

“ಪ್ರಧಾನಿಯವರ ಭಾಷಣವು ​​ಪುನರಾವರ್ತಿತ, ವಾಕ್ಚಾತುರ್ಯ ಮತ್ತು ಪ್ರತಿಪಕ್ಷಗಳ ವಿರುದ್ಧ ವ್ಯಂಗ್ಯದಿಂದ ಕೂಡಿತ್ತು. ಪ್ರತಿಪಕ್ಷಗಳನ್ನು ಕೆಣಕುವುದರಿಂದ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ. ದೇಶವು ನಿಮ್ಮನ್ನು ನೋಡುತ್ತಿದೆ ಮತ್ತು ಮುಂದಿನ ಚುನಾವಣೆಯಲ್ಲಿ ಜನರು ಉತ್ತರ ನೀಡುತ್ತಾರೆ ಎಂದು ಬಿಆರ್‍‌ಎಸ್‌ ನಾಯಕಿ ಕವಿತಾ ಕಲ್ವಕುಂಟ್ಲ ಹೇಳಿದರು.

ಪ್ರಧಾನಿ ಮೋದಿಯವರ ಭಾಷಣದಿಂದ ತೃಪ್ತರಾಗಿಲ್ಲ, ಪ್ರತಿಪಕ್ಷಗಳು ಎತ್ತುವ ಪ್ರಶ್ನೆಗಳಿಗೆ ಪ್ರಧಾನಿ ಉತ್ತರಿಸಲಿಲ್ಲ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ಹೇಳಿದ್ದಾರೆ.

”ನನಗೆ (ಪ್ರಧಾನಿ ಭಾಷಣ) ​​ತೃಪ್ತಿ ಇಲ್ಲ. ಅದಾನಿ ವಿರುದ್ಧದ ತನಿಖೆ ಬಗ್ಗೆ ಏನೂ ಮಾತನಾಡಲಿಲ್ಲ. ಅವರು (ಗೌತಮ್ ಅದಾನಿ) ಸ್ನೇಹಿತರಲ್ಲದಿದ್ದರೆ ಪ್ರಧಾನ ಮಂತ್ರಿಯವರು ತನಿಖೆ ನಡೆಸಲು ಸೂಚಿಸಿಬೇಕು. ಪ್ರಧಾನಿ ಅವರನ್ನು (ಗೌತಮ್ ಅದಾನಿ) ರಕ್ಷಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ.” ಪ್ರಧಾನಿ ಭಾಷಣದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ರಾಹುಲ್ ಗಾಂಧಿ ಹೇಳಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...