Homeಕರೋನಾ ತಲ್ಲಣರಾಜಸ್ಥಾನ: ಲಸಿಕೆ ಪಡೆಯುವಂತೆ ಉತ್ತೇಜಿಸಲು ಬುಡಕಟ್ಟು ಜನರಿಗೆ ಪಡಿತರ ವಿತರಣೆ

ರಾಜಸ್ಥಾನ: ಲಸಿಕೆ ಪಡೆಯುವಂತೆ ಉತ್ತೇಜಿಸಲು ಬುಡಕಟ್ಟು ಜನರಿಗೆ ಪಡಿತರ ವಿತರಣೆ

- Advertisement -
- Advertisement -

ಕೊರೊನಾ ಲಸಿಕೆ ಬಗ್ಗೆ ಹಲವು ಅನುಮಾನಗಳನ್ನು ಹೊಂದಿರುವವರಲ್ಲಿ ಅರಿವು ಮೂಡಿಸಿ, ಲಸಿಕೆ ಪಡೆಯುವಂತೆ ಮನವೊಲಿಸುವ ಕೆಲಸ ಬೂತ್ ಮಟ್ಟದ ಅಧಿಕಾರಿಗಳದ್ದಾಗಿದೆ. ಹೀಗೆ ಲಸಿಕೆ ಪಡೆಯದ ಬುಡಕಟ್ಟು ಜನರ ಮನವೊಲಿಸಲು ಉಚಿತ ಪಡಿತರ ನೀಡುವುದು, ಕೋವಿಡ್ ಲಸಿಕಾ ಕೇಂದ್ರಗಳಿಗೆ ಉಚಿತ ಪ್ರಯಾಣ ಒದಗಿಸುವಂತಹ ಕೆಲಸಗಳನ್ನು ರಾಜಸ್ಥಾನದ ಉದಯಪುರ ಹಳ್ಳಿಯಲ್ಲಿ ಮಾಡಲಾಗುತ್ತಿದೆ.

ಜೂನ್ 21 ರಿಂದ ದೇಶದಲ್ಲಿ ಎಲ್ಲಾ ವಯಸ್ಕಿಗೆ ಉಚಿತ ಲಸಿಕೆ ನೀಡುವ ಅಭಿಯಾನ ಆರಂಭವಾಗಿದ್ದು, ಉದಯಪುರದ ಬುಡಕಟ್ಟು ಜನರನ್ನು ಮನವೊಲಿಸಲು ಬೂತ್ ಮಟ್ಟದ ಅಧಿಕಾರಿ ದಿನೇಶ್ ಚಂದ್ರ ಜೋಶಿ, ಉಚಿತ ಪಡಿತರ, ಉಚಿತ ಪ್ರಯಾಣ ವ್ಯವಸ್ಥೆ, ಬುಡಕಟ್ಟು ಜನರ ಪುರೋಹಿತರನ್ನು ಒಳಗೊಳ್ಳುವ ಕೆಲಸವನ್ನು ಮಾಡುತ್ತಿದ್ದಾರೆ.

ಉದಯಪುರದ ಹಳ್ಳಿಯ ಬುಡಕಟ್ಟು ಜನರಲ್ಲಿ ಕೊರೊನಾ ವ್ಯಾಕ್ಸಿನೇಷನ್‌ನಿಂದ ಜನರು ಸಾವನ್ನಪ್ಪುತ್ತಿದ್ದಾರೆ ಎಂಬ ಬಗ್ಗೆ ವದಂತಿಗಳಿವೆ. ಇದಕ್ಕೆ ಉತ್ತರಿಸಿರುವ ಅಧಿಕಾರಿ ದಿನೇಶ್ ಚಂದ್ರ ಜೋಶಿ,“ಇದು ಕೇವಲ ವದಂತಿಯಾಗಿದೆ. ಜನರು ಸತ್ತದ್ದು ಲಸಿಕೆಗಳಿಂದಲ್ಲ, ಕೊರೊನಾ ಸೋಂಕಿನಿಂದ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೀದಿಬದಿಯ ಬಡ ವ್ಯಾಪಾರಿಗಳ ಮೇಲೆ ದರ್ಪ ತೋರಿದ ಪಿಎಸ್‌ಐ ಅಮಾನತು

45 ವರ್ಷಕ್ಕಿಂತ ಮೇಲಪಟ್ಟವರಲ್ಲಿ ಲಸಿಕೆ ತೆಗೆದುಕೊಂಡ ಸರಾಸರಿ ಪ್ರಮಾಣ 78.3% ರಷ್ಟಿರುವ ರಾಜಸ್ಥಾನದಲ್ಲಿ, ಬುಡಕಟ್ಟು ಜಿಲ್ಲೆಗಳಾದ ಉದಯಪುರ (63.9%), ಡುಂಗರಪುರ (62.7%) ಮತ್ತು ಪ್ರತಾಪಗಢ (59.3%) ಜಿಲ್ಲೆಗಳು ಕಡಿಮೆ ಲಸಿಕೆ ಪ್ರಮಾಣ ದಾಖಲಿಸಿವೆ.

ಉದಯಪುರದ ಜೋದೊಲ್ ಬ್ಲಾಕ್‌ನಲ್ಲಿ ಕೇವಲ 34% ಲಸಿಕೆ ಪಡೆಯಲಾಗಿದೆ. ಹೀಗಾಗಿ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ (SDM) ಗುಂಜನ್ ಸಿಂಗ್ ಸುಮಾರು 2,000 ಉಚಿತ ಪಡಿತರ ಕಿಟ್‌ಗಳನ್ನು ವಿತರಿಸಿದ್ದಾರೆ. ಈ ಕಿಟ್‌ಗಳಲ್ಲಿ ಅಡುಗೆ ಎಣ್ಣೆ, ಅವಲಕ್ಕಿ, ಅಕ್ಕಿ, ದಾಲ್ ಮತ್ತು ಗೋಧಿ ಹಿಟ್ಟು ಸೇರಿವೆ. ಈ ಪಡಿತರ ಕಿಟ್‌ಗಳು, ಕೊರೊನಾ ಕಾರಣದಿಂದ ಮುಚ್ಚಲ್ಪಟ್ಟಿರುವ 12 ರಿಂದ 13 ಬುಡಕಟ್ಟು ಹಾಸ್ಟೆಲ್‌ಗಳಿಂದ ತರಲಾಗಿದೆ. ಜೊತೆಗೆ ಹಲವು ಎನ್‌ಜಿಒಗಳು ಸಹಾಯಕ್ಕೆ ನಿಂತಿವೆ ಎಂದು ಗುಂಜನ್ ಸಿಂಗ್ ಹೇಳಿದ್ದಾರೆ.

“ನಾವು ಹಳ್ಳಿಗಳಿಗೆ ಭೇಟಿ ನೀಡಿದಾಗ, ಜನರು ವ್ಯಾಕ್ಸಿನೇಷನ್ ಪಡೆದ ಬಳಿಕ ಸಾವು ಸಂಭವಿಸುವುದಿಲ್ಲವೇ ಎಂದು ಪ್ರಶ್ನಿಸುತ್ತಾರೆ. ಕೆಲವೊಮ್ಮೆ ನಮಗೆ ಹಳ್ಳಿ ಒಳಗೆ ಪ್ರವೇಶಿಸಲು ಅವಕಾಶ ಕೂಡ ನೀಡುವುದಿಲ್ಲ. ಲಸಿಕೆ ತೆಗೆದುಕೊಂಡ ಬಳಿಕ ಏನಾದರೂ ಸಂಭವಿಸಿದಲ್ಲಿ, ನಾವು ಪರಿಹಾರ ನೀಡುತ್ತೇವೆ ಎಂಬ ಆಶ್ವಾಸನೆ ನೀಡಿ, ಲಸಿಕೆ ನೀಡಲಾಗುತ್ತಿದೆ” ಎಂದು ಅಧಿಖಾರಿಯೊಬ್ಬರು ತಿಳಿಸಿದ್ದಾರೆ. ಜೊತೆಗೆ ಮುಂದಿನ ಎರಡು ವಾರಗಳಲ್ಲಿ 100% ಲಸಿಕೆ ನೀಡುವ ಪ್ರತಿಜ್ಞೆ ಮಾಡಿದ್ದಾರೆ.

ಇದು ಕೇವಲ ರಾಜಸ್ಥಾನದ ಹಳ್ಳಿಗಳ ಸ್ಥಿತಿಯಲ್ಲ. ದೇಶದ ಕುಗ್ರಾಮಗಳಲ್ಲಿ ಈಗಲೂ ಲಸಿಕೆ ಕುರಿತು ಇಂತಹದ್ದೇ ಅಭಿಪ್ರಾಯಗಳಿವೆ. ಉಚಿತ ಲಸಿಕೆ ನೀಡುವುದು ಮಾತ್ರ ಸರ್ಕಾರದ ಕೆಲಸವಲ್ಲ. ಇದರ ಜೊತೆಗೆ ಲಸಿಕೆ 100% ಸುರಕ್ಷಿತ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡುವುದು ಅವಶ್ಯಕ ಎಂದು ಸಾಮಾಜಿಕ ಹೋರಾಟಗಾರರು ತಿಳಿಸುತ್ತಾರೆ.


 ಇದನ್ನೂ ಓದಿ: ಇಲ್ಲಿರುವ ಜಾತಿ ಸಮಸ್ಯೆಯನ್ನು ಮುಚ್ಚಿಡಬೇಕೆ? ಜಾತಿ ಬಗ್ಗೆ ಮಾತನಾಡಬಾರದೇ?: ಸತೀಶ್ ನಿನಾಸಂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ: ಎಕ್ಸಿಟ್ ಪೋಲ್ ಪ್ರಸಾರ ಮಾಡದಂತೆ ನಿಷೇಧ ವಿಧಿಸಿದ ಚುನಾವಣಾ ಆಯೋಗ

0
ಲೋಕಸಭೆ ಚುನಾವಣೆ ಮತ್ತು ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಹಿನ್ನೆಲೆ ಏಪ್ರಿಲ್ 19ರಂದು ಬೆಳಿಗ್ಗೆ 7ರಿಂದ ಜೂನ್ 1ರ ಸಂಜೆ 6.30ರವರೆಗೆ ಸಮೀಕ್ಷೆಗಳನ್ನು ನಡೆಸುವುದು ಮತ್ತು ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ಪ್ರಕಟಿಸುವುದನ್ನು ನಿಷೇಧಿಸಿ...