Homeಕರ್ನಾಟಕ‘ಯಡಿಯೂರಪ್ಪ ಕಿಂಗ್ ಮೇಕರ್‌’ ಎಂದ ರೇಣುಕಾಚಾರ್ಯ!

‘ಯಡಿಯೂರಪ್ಪ ಕಿಂಗ್ ಮೇಕರ್‌’ ಎಂದ ರೇಣುಕಾಚಾರ್ಯ!

- Advertisement -
- Advertisement -

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಆಯ್ಕೆಯಾಗಿದ್ದಾರೆ. ಮಂಗಳವಾರ ರಾತ್ರಿ ಎಂಟು ಗಂಟೆಗೆ ನಡೆದ ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿಯ ವೀಕ್ಷಕರಾಗಿ ರಾಜ್ಯಕ್ಕೆ ಆಗಮಿಸಿದ್ದ ಒಕ್ಕೂಟ ಸರ್ಕಾರದ ಸಚಿವ ಧರ್ಮೇಂದ್ರ ಪ್ರಧಾನ್‌ ಅಧೀಕೃತವಾಗಿ ನೂತನ ಮುಖ್ಯಮಂತ್ರಿಯ ಆಯ್ಕೆಯನ್ನು ಘೋಷಿಸಿದ್ದಾರೆ. ನಾಳೆ ಬೆಳಿಗ್ಗೆ 11 ಗಂಟೆಗೆ ರಾಜ್ಯದ ಮುಖ್ಯಮಂತ್ರಿಯಾಗಿ ಬೊಮ್ಮಾಯಿ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಈ ಮಧ್ಯೆ ಮಾಜಿ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ, ಶಾಸಕ ಎಂಪಿ ರೇಣುಕಾಚಾರ್ಯ ಅವರು ಟ್ವಿಟರ್‌ನಲ್ಲಿ “ಕಿಂಗ್ ಮೇಕರ್‌ ಬಿಎಸ್‌ ಯಡಿಯೂರಪ್ಪ” ಎಂದು ಬರೆದಿದ್ದು ಆಶ್ಚರ್ಯಕ್ಕೆ ಕಾರಣವಾಗಿದೆ.

ಯಡಿಯೂರಪ್ಪ ಅವರು ಅಧಿಕಾರಕ್ಕೆ ಏರಿದ ದಿನದಿಂದಲೂ ಪಕ್ಷದೊಳಗೆ ಅವರ ಬಗ್ಗೆ ಅಸಮಾಧಾನಗಳು ಸ್ಪೋಟಗೊಳ್ಳುತ್ತಲೆ ಬಂದಿದೆ. ಹಲವಾರು ಬಿಜೆಪಿ ಶಾಸಕರು ಬಹಿರಂಗವಾಗಿಯೆ ಯಡಿಯೂರಪ್ಪ ಅವರ ವಿರುದ್ದ ಆಕ್ರೋಶವನ್ನೂ ವ್ಯಕ್ತಪಡಿಸಿದ್ದರು. ಹಲವು ಬಾರಿ ಯಡಿಯೂರಪ್ಪ ರಾಜೀನಾಮೆ ಕೊಟ್ಟೇ ಬಿಟ್ಟರು ಎನ್ನುವಷ್ಟು ಮಟ್ಟಕ್ಕೆ ಕಚ್ಛಾಟಗಳು ನಡೆಯುತ್ತಿದ್ದವು.

ಇದನ್ನೂ ಓದಿ: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್‌ ಬೊಮ್ಮಾಯಿ!

ಅದಲ್ಲದೆ ಸೋಮವಾರ ರಾಜೀನಾಮೆ ಘೋಷಿಸಿದ ಭಾಷಣದಲ್ಲೂ ಯಡಿಯೂರಪ್ಪ ಅವರು ಕೇಂದ್ರದ ಬಿಜೆಪಿ ನಾಯಕತ್ವ ತನಗೆ ಮಂತ್ರಿ ಮಂಡಲ ರಚನೆ ಮಾಡದಂತೆ ಎರಡು ತಿಂಗಳು ಸತಾಯಿಸಿದ್ದರ ಬಗ್ಗೆ ಹೇಳಿದ್ದರು. ಸೋಮವಾರದಂದು ರಾಜ್ಯದ ಪ್ರಬಲ ಸಮುದಾಯ ಲಿಂಗಾಯತದ ನಾಯರಾದ ಯಡಿಯೂರಪ್ಪ ಅವರ ರಾಜಕೀಯ ಪರ್ವ ಮುಗೀತು ಎಂದು ಲೆಕ್ಕಾಚಾರಗಳನ್ನು ಮಾಡಲಾಗಿತ್ತು.

ಯಡಿಯೂರಪ್ಪ ಅವರ ರಾಜೀನಾಮೆಗೆ ಮುಂಚೆಯೆ ಬಿಜೆಪಿಯ ಯಡಿಯೂರಪ್ಪ ಅವರ ವಿರೋಧಿ ಬಣದವರೇ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ವರದಿಗಳು ಹರಡಿತ್ತು. ಪ್ರಮುಖವಾಗಿ ಬಿಎಲ್ ಸಂತೋಷ್ ಅವರ ಹೆಸರು ಮುನ್ನಲೆಗೆ ಬಂದಿತ್ತು. ಅಲ್ಲದೆ ನಳಿನ್ ಕುಮಾರ್‌ ಕಟೀಲ್ ಅವರದ್ದು ಎನ್ನಲಾದ ಆಡಿಯೋದಲ್ಲೂ ದೆಹಲಿಯ ಕಡೆಯವರು ಮುಖ್ಯಮಂತ್ರಿಯಾಗಲಿದ್ದಾರೆ ಎನ್ನಲಾಗಿತ್ತು. ನಳಿನ್ ಕುಮಾರ್‌ ಕಟೀಲ್ ಬಿಎಸ್‌ವೈ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿರುವುದರಿಂದ ಈ ಹೇಳಿಕೆಗೆ ಬಲ ಬಂದಿತ್ತು.

ಅದಾಗ್ಯೂ, ಎಲ್ಲಾ ಲೆಕ್ಕಾಚಾಗಳನ್ನು ತಲೆಕೆಳಗಾಗಿಸಿ ಮಂಗಳವಾರ ಸಂಜೆ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಬಸವರಾಜ ಬೊಮ್ಮಾಯಿ ಅವರ ಹೆಸರನ್ನು ಸ್ವತಃ ಯಡಿಯೂರಪ್ಪ ಅವರೇ ಘೋಷಿಸಿದ್ದಾರೆ. ಅಲ್ಲದೆ ಬೊಮ್ಮಾಯಿ ಯಡಿಯೂರಪ್ಪ ಅವರ ಆಪ್ತನೇ ಆಗಿದ್ದು, ಜೊತೆಗೆ ಲಿಂಗಾಯತ ಸಮುದಾಯಕ್ಕೂ ಸೇರಿದವರಾಗಿದ್ದಾರೆ.

ಇದನ್ನೂ ಓದಿ: ಉಪ ಮುಖ್ಯಮಂತ್ರಿಗಳಾಗಿ ಗೋವಿಂದ ಕಾರಜೋಳ, ಆ‌‌ರ್‌‌. ಅಶೋಕ್, ಶ್ರೀರಾಮುಲು?

ಇಷ್ಟೇ ಅಲ್ಲದೆ ಹೊಸದಾಗಿ ಉಪ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ ಎನ್ನಲಾಗಿರುವ ಆರ್‌. ಅಶೋಕ್ ಮತ್ತು ಗೋವಿಂದ ಕಾರಜೋಳ ಕೂಡಾ ಯಡಿಯೂರಪ್ಪ ಬಣದವರೇ ಆಗಿದ್ದಾರೆ. ಉಪ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನಲಾಗಿರುವ ಮತ್ತೊಬ್ಬ ಬಿಜೆಪಿ ನಾಯಕ ಶ್ರೀರಾಮುಲು ಅವರು ಯಡಿಯೂರಪ್ಪ ಅವರ ಬಣದವರು ಅಲ್ಲವಾಗಿದ್ದರೂ, ಯಡಿಯೂರಪ್ಪ ಅವರ ವಿರೋದಿ ಕೂಡಾ ಅಲ್ಲ. ಹೀಗಾಗಿ ಹೊಸ ಮುಖ್ಯಮಂತ್ರಿಯ ರಾಜಕೀಯದಾಟದಲ್ಲಿ ಯಡಿಯೂರಪ್ಪ ಅವರೇ ಮುಖ್ಯಪಾತ್ರ ವಹಿಸಿದ್ದಾರೆ ಎನ್ನಬಹುದು. ಈ ಹೇಳಿಕೆಗೆ ರೇಣುಕಾಚಾರ್ಯ ಅವರ ಟ್ವೀಟ್‌ ಬಲ ನೀಡುತ್ತದೆ.

ಇದನ್ನೂ ಓದಿ: ರಾಜ್ಯಕ್ಕೆ ನೂತನ ಮುಖ್ಯಮಂತ್ರಿ; ಗಣ್ಯರು ಹೇಳಿದ್ದೇನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಶಿವಸೇನೆಯನ್ನು ವಿಭಜಿಸಿ, ಇಲ್ಲವೇ ಬಂಧನ ಎದುರಿಸಿ ಎಂದು ಏಕನಾಥ್ ಶಿಂದೆಗೆ ಕೇಂದ್ರ ಸರ್ಕಾರ ಬೆದರಿಕೆ...

0
ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ಏಕನಾಥ್ ಶಿಂದೆ ಸಚಿವರಾಗಿದ್ದಾಗ, ಅವರನ್ನು ಬಂಧಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯೋಜಿಸಿತ್ತು ಎಂದು ಮಂಗಳವಾರ ಶಿವಸೇನೆ (ಯುಬಿಟಿ) ನಾಯಕ...