Homeಮುಖಪುಟಬಂಡವಾಳಶಾಹಿಯ ಬಿಕ್ಕಟ್ಟೂ... ಕೊರೊನಾ ಸಂಚೂ...

ಬಂಡವಾಳಶಾಹಿಯ ಬಿಕ್ಕಟ್ಟೂ… ಕೊರೊನಾ ಸಂಚೂ…

ಕೊರೊನಾ ಎಂಬ ಭೀತಿಗೆ ಸಮಾಜವನ್ನು ಖುದ್ಧು ಸರ್ಕಾರವೇ ದೂಡಿದೆ ಎನ್ನುವುದಕ್ಕೂ ಕೆಲವೊಂದು ಘಟನೆಗಳೂ ಪುಷ್ಟಿ ನೀಡುತ್ತಿದೆ- ಆಲುವಳ್ಳಿ ಆರ್ ಅಣ್ಣಪ್ಪ

- Advertisement -
- Advertisement -

ಕೊರೊನಾ ಕಾರಣದಿಂದ ಲಾಕ್‌ಡೌನ್ ಘೋಷಣೆಯಾದ ಆರಂಭದಲ್ಲಿ ಕೊರೊನಾಕ್ಕೆ ತಮ್ಮಲ್ಲಿ ಅದೆಷ್ಟು ಮಂದಿ ಬಲಿಯಾಗಿ ಹೋಗುತ್ತೇವೋ ಎಂಬ ಭೀತಿ-ಹತಾಶೆಗೆ ನಾವು ತಳ್ಳಲ್ಪಟ್ಟಿದ್ದೆವು. ಆದರೆ ದಿನಗಳುರುಳಿದಂತೆ ಕೊರೊನಾ ಎಂಬುದು ಒಂದು ರೋಗವೇ ಅಲ್ಲ ಎನ್ನುವ ಮನಃಸ್ಥಿತಿಗೆ ಜನತೆ ಬರುತ್ತಿದ್ದಾರೆ. ಕೊರೊನಾ ಕುರಿತಾಗಿ ಮೂಡಿಸಿದ್ದ ಭಯ ನಿಧಾನವಾಗಿ ಕರಗುತ್ತಿದೆ.

ದೇವಾಲಯಗಳಲ್ಲಿ ಮಾಮೂಲಿಯಂತೆ ಭಕ್ತಾದಿಗಳು ಕಿಕ್ಕಿರಿದಿದ್ದರೂ ರೋಗ ಕಾಣಿಸಿಕೊಳ್ಳದಿರುವುದು, ಯಾವುದೇ ಸುರಕ್ಷತೆ, ಮುಂಜಾಗರೂಕತೆ ಇರದಿದ್ದರೂ ಬಿಕ್ಷುಕರು, ಚಿಂದಿ ಆಯುವವರಲ್ಲಿ ಒಬ್ಬರೂ ಈ ರೋಗಕ್ಕೆ ತುತ್ತಾದವರು ಕಾಣದಿರುವುದು, ಇತ್ತೀಚೆಗೆ ನಡೆದ ಉಪ ಚುಣಾವಣೆ, ಬಿಹಾರ ಚುಣಾವಣೆಯಲ್ಲಿ ಸಾವಿರಾರು ಜನರಜಂಗುಳಿ ಇದ್ದರೂ ಕೊರೊನಾ ಸುಳಿಯದಿರುವುದು ಜನರಲ್ಲಿ ಕೊರೊನಾ ಕುರಿತಾದ ಭೀತಿ ದೂರಾಗಲು ಕಾರಣವಾಗುತ್ತಿದೆ.

ಇದನ್ನೂ ಓದಿ: ಕಣ್ಣು ಕುರುಡಾಗಿ, ಕಿವಿ ಕಿವುಡಾಗಿ ಸಂವೇದನೆ ಹೊರಟುಹೋಗಿದೆಯೇ: ಭೈರಪ್ಪನವರಿಗೆ ತಿರುಗೇಟು ನೀಡಿದ ದೇವನೂರು

ವಾಸ್ತವದಲ್ಲಿ ಕೊರೊನಾಕ್ಕೆ ತುತ್ತಾಗಿ ಪ್ರಾಣ ಕಳೆದುಕೊಂಡವರೆಲ್ಲರೂ ಅನ್ಯ ರೋಗದಿಂದ ಬಳಲುತ್ತಿದ್ದವರೇ ಆಗಿದ್ದು, ಅವೆಲ್ಲವನ್ನೂ ಕೊರೊನಾದೊಂದಿಗೆ ತಳುಕು ಹಾಕಲಾಯಿತು. ಕೊರೊನಾಕ್ಕೆ ಯಾವುದೇ ಲಸಿಕೆ ಇಲ್ಲದಿದ್ದರೂ ಚಿಕಿತ್ಸೆ ನೀಡುವ ನಾಟಕ ಆಡಲಾಯಿತು ಮತ್ತು ಗುಣಪಡಿಸಲಾಗಿದೆ ಎಂದು ವರದಿ ಮಾಡಲಾಯಿತು. ಲಸಿಕೆಯಿಲ್ಲದೆ ಗುಣಪಡಿಸಲು ಸಾಧ್ಯವೆಂದಾದರೆ ಅಂಥಹ ರೋಗಕ್ಕೆ ಅಂಜಿ ಲಾಕ್‌ಡೌನ್ ಮಾಡುವ ಅವಶ್ಯಕತೆ ಈ ದೇಶಕ್ಕೆ- ಸಮಾಜಕ್ಕೆ ಇತ್ತೆ?

ಇಷ್ಟೇ ಅಲ್ಲದೆ ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಲಾಕ್‌ಡೌನ್ ಹೊರತಾಗಿ ಯಾವುದೇ ಕ್ರಮ ಕೈಗೊಳ್ಳದಿದ್ದದ್ದು, ಕೊರೊನಾ ಎಂಬ ಪಿಡುಗು ಈ ಸಮಾಜವನ್ನು ಕಾಡುತ್ತಿಲ್ಲ ಎಂಬ ಖಚಿತತೆ ಈ ಸರ್ಕಾರಕ್ಕೆ ಇತ್ತು ಎಂಬುದನ್ನು ಸ್ಪಷ್ಟಪಡಿಸುತ್ತಿಲ್ಲವೇ..? ದೇಹಲಿ ಗಡಿಯಲ್ಲಿ ಕೋಟ್ಯಾಂತರ ರೈತರು, ಸರ್ಕಾರ-ಆರೋಗ್ಯ ಇಲಾಖೆ ನೀಡಿರುವ ಎಲ್ಲ ಮಾರ್ಗದರ್ಶನಗಳನ್ನು ಧಿಕ್ಕರಿಸಿ, ಸಾಮೂಹಿಕ ಗುಂಪು ಹೂಡಿ ತಿಂಗಳು ಕಳೆದರೂ, ಅಲ್ಲಿ ಕೊರೊನಾ ಪ್ರಕರಣ ವರದಿಯಾಗಿಲ್ಲ. ಒಂದು ವೇಳೆ ಕೊರೊನಾವು ಪ್ರಚಾರ ಪಡಿಸಿದಷ್ಟು ಭೀಕರವಾಗಿದ್ದಿದ್ದರೆ ಅಲ್ಲಿ ಮರಣ ಮೃದಂಗವೇ ನಡೆಯಬೇಕಿತ್ತು. ಆದರೆ ಹೀಗಾಗದಿರುವುದು, ಆಲೋಚನೆ ಮಾಡುವ ಶಕ್ತಿ ಇರುವ ಮಾನವ ಸಮಾಜಕ್ಕೆ ಕೊರೊನಾ ಎಂಬ ರೋಗ ಈ ಭೂಮಿಯ ಮೇಲೆ ಇಲ್ಲ ಎಂದು ಖಚಿತ ಪಡಿಸಿಕೊಳ್ಳಲು ಆಧಾರ ಒದಗಿಸುತ್ತಿದೆ.

ಇದನ್ನೂ ಓದಿ: ‘ಲಸಿಕೆಯಲ್ಲಿ ಹಂದಿ ಮಾಂಸವಿಲ್ಲ’ – ಆಧಾರರಹಿತ ಸುದ್ದಿ ಕಡೆಗಣಿಸಲು ಮುಸ್ಲಿಂ ವಿದ್ವಾಂಸರ ಕರೆ

ಜೊತೆಗೆ ಕೊರೊನಾ ಎಂಬ ಭೀತಿಗೆ ಸಮಾಜವನ್ನು ಖುದ್ದು ಸರ್ಕಾರವೇ ದೂಡಿದೆ ಎನ್ನುವುದಕ್ಕೂ ಕೆಲವೊಂದು ಘಟನೆಗಳೂ ಪುಷ್ಟಿ ನೀಡುತ್ತಿದೆ.

ಮೊದಲನೆಯದಾಗಿ ಹೇಳಬೇಕೆಂದರೆ, ಸಮಾಜ ಕೊರೊನಾ ಭೀತಿಯಲ್ಲಿ ಸಂತ್ರಸ್ಥವಾಗಿ ಅಸಹಾಯಕ ಸ್ಥಿತಿಯಲ್ಲಿರುವಾಗಲೇ ತುರಾತುರಿಯಲ್ಲಿ ಕಾರ್ಮಿಕ ಕಾನೂನು, ಭೂ ಸುಧಾರಣಾ ಕಾಯಿದೆ, APMC ಕಾಯಿದೆಗಳಿಗೆ ತಿದ್ದುಪಡಿ ತಂದು ಜಾರಿ ಮಾಡ ಹೊರಟಿರುವುದು.

ಎರಡನೆಯದಾಗಿ ಪಟ್ಟಿ ಮಾಡಬಹುದಾದದ್ದೆಂದರೆ, ಬೆಳಕಿಗೆ ಬರುತ್ತಿರುವ ಕೈಗಾರಿಕೋತ್ಪನ್ನಗಳ ಅತಿಯಾದ ಉತ್ಪಾದನೆ ಮತ್ತು ಸಂಗ್ರಹ. ಒಮ್ಮೆ ಮಾರುಕಟ್ಟೆಯ ಪರಿಸ್ಥಿತಿಯನ್ನು ಅವಲೋಕಿಸಿದಾಗ ಇದರ ಅರಿವಾಗುತ್ತದೆ. ನಿರಂತರವಾಗಿ 9 ತಿಂಗಳಿನಿಂದ ಉತ್ಪಾದನೆ ಸ್ಥಗಿತಗೊಂಡಿದ್ದರೂ ಇಂದು ಮಾರುಕಟ್ಟೆಯಲ್ಲಿ ಯಾವುದೆ ವಸ್ತುಗಳ ಕೊರತೆ ಕಾಣುತ್ತಿಲ್ಲ. ಎಲ್ಲ ಮಾರಾಟ ಮಳಿಗೆಳಲ್ಲಿ ಲಾಕ್‌ಡೌನ್ ಪೂರ್ವದಲ್ಲಿದ್ದಂತೆಯೇ ವಸ್ತುಗಳ ಲಭ್ಯತೆಯಿದೆ. ಬಟ್ಟೆ ಖರೀದಿಸಲು ಹೋದರೆ ಯಾವುದೆ ಕೊರತೆಯಿಲ್ಲ. ದೂರದರ್ಶನ, ಫ್ರಿಡ್ಜ್, ವಾಹನ, ಶೃಂಗಾರ ಸಾಮಗ್ರಿ, ಪಾದರಕ್ಷೆ ಯಾವುದರಲ್ಲಿಯೂ ಕೊರತೆ ಕಾಣುತ್ತಿಲ್ಲ. ಎಲ್ಲದರ ಸರಬರಾಜು ನಿರಂತರವಾಗಿದೆ. ಎಂದಿನಂತೆ ವಿದ್ಯುತ್ ಸರಬರಾಜು ಇದೆ. ನಿರ್ಮಾಣ ಕಾರ್ಯಕ್ಕೆ ಬೇಕಾಗುವ ಸಿಮೆಂಟ್, ಕಬ್ಬಿಣ, ಸ್ಯಾನಿಟರಿಗೆ ಸಂಬಂಧಿಸಿದ ವಸ್ತುಗಳು, ಗೃಹಲಂಕಾರ ವಸ್ತುಗಳು ಹೀಗೆ ಯಾವುದರಲ್ಲಿಯೂ ಕೊರತೆಯಿಲ್ಲ. ಎಲ್ಲವೂ ಎಲ್ಲ ಅಂಗಡಿಗಳಲ್ಲಿ ತುಂಬಿ ತುಳುಕುತ್ತಿವೆ. ಜೊತೆಗೆ ಹೊಸ ಹೊಸ ವ್ಯಾಪಾರ ಮಳಿಗೆಗಳನ್ನೂ ತೆರೆಯಲಾಗುತ್ತಿದೆ.

ಮತ್ತೂ ವಿಚಿತ್ರವೆಂದರೆ, ಆರ್ಥಿಕ ಕುಸಿತ ಕಾಣುತ್ತಿದೆ ಎನ್ನಲಾಗುತ್ತಿದ್ದ ವ್ಯವಸ್ಥೆಯಲ್ಲಿ ಕುಸಿತ ಕಾಣ ಬೇಕಾಗಿದ್ದ ಬೆಲೆ, ಏರಿಕೆ ಕಾಣುತ್ತಿರುವುದು. ಸಾಮಾನ್ಯವಾಗಿ ಆರ್ಥಿಕ ಕುಸಿತಕ್ಕೆ ತುತ್ತಾದ ಸಮಾಜದಲ್ಲಿ ಎಂದೂ ಬೆಲೆಯೇರಿಕೆ ಕಾಣಲಾರದು. ಅಂತಹ ಸಮಾಜದಲ್ಲಿ ಆರ್ಥಿಕತೆಯ ಪುನಃಶ್ಚೇತನಕ್ಕೆ ಸರ್ಕಾರದ ವತಿಯಿಂದ ನಾನಾ ಕಸರತ್ತು ನಡೆಯುತ್ತಿರುತ್ತದೆ. ಆರ್ಥಿಕ ಶಕ್ತಿಗಳಿಂದ ಸರ್ಕಾರದ ಮೇಲೆ ಅಂತಹ ಕಾರ್ಯಕ್ರಮಗಳಿಗೆ ನಿರಂತರವಾದ ಒತ್ತಡವಿರುತ್ತದೆ. ನಮ್ಮಲ್ಲಿ ಸರ್ಕಾರಗಳು ತಟಸ್ಥವಾಗಿರುವುದನ್ನು ಗಮನಿಸಿದರೆ ಈ ಬಿಕ್ಕಟ್ಟು ಪಟ್ಟಭದ್ರ ಹಿತಾಸಕ್ತಿಗಳ ಕೃಪಾಪೋಷಿತ ಎನಿಸುತ್ತದೆ.

ಇದನ್ನೂ ಓದಿ: ಸ್ಥಾನಮಾನ ಸಿಕ್ಕರೆ ಬಿಜೆಪಿ ಸೇರ್ಪಡೆ ಖಚಿತ: ಶಾಸಕ ಎನ್‌ ಮಹೇಶ್

ಹಾಗೆಯೇ ಲಾಕ್ ಡೌನ್ ತೆರವಾಗಿ ಕೊರೊನಾ ಭೀತಿಯಿಂದ ಜನತೆ ಹೊರಬಂದು ಉದ್ಯೋಗ ಅರಸುತ್ತಿದ್ದಾಗ್ಯೂ ಕೈಗಾರಿಕೆಗಳು ಮಾತ್ರ ಉತ್ಪಾದನೆಗೆ ಇಳಿಯದಿರುವುದೂ ಹಲವು ಅನುಮಾನಗಳನ್ನೂ ಹುಟ್ಟು ಹಾಕುತ್ತಿದೆ. ಈಗಾಗಲೇ ಇವರ ಗೋದಾಮುಗಳಲ್ಲಿ ಮಿತಿ ಮೀರಿ ಸಂಗ್ರಹಗೊಂಡಿರುವ ಉತ್ಪನ್ನಗಳೆಲ್ಲ ಬಿಕರಿಯಾಗಿ ಖಾಲಿಯಾಗುವುದಕ್ಕಾಗಿ ಕಾದುಕುಳಿತಿರುವುದನ್ನು ಸ್ಪಷ್ಟ ಪಡಿಸುತ್ತಿದೆ.

ಸದ್ಯದ ಪರಿಸ್ಥಿತಿ ಗಮನಿಸಿದರೆ ಯಾವ ಕೈಗಾರಿಕೆಗಳೂ ಸದ್ಯಕ್ಕೆ ಉತ್ಪಾದನೆ ಆರಂಭಿಸುವ ಲಕ್ಷಣಗಳಂತೂ ಕಂಡುಬರುತ್ತಿಲ್ಲ. ಹೇಳಬೇಕೆಂದರೆ ಇವರ ಗೋದಾಮುಗಳಲ್ಲಿ ತುಂಬಿರುವ ಎಲ್ಲ ಸರಕುಗಳೂ ಮುಗಿಯುವವರೆಗೂ ಉತ್ಪಾದನೆ ಆರಂಭಿಸಲಾರವು ಎನಿಸುತ್ತಿದೆ.

ಈ ಹಿನ್ನೆಲೆಯಿಂದ ನೋಡಿದಾಗ ಬಂಡವಾಳಿಗರು ತಮ್ಮ ಬಿಕ್ಕಟ್ಟನ್ನು ಕೊರೊನಾ-ಲಾಕ್‌ಡೌನ್ ಹೆಸರಿನಲ್ಲಿ ಜನತೆಯ ಮೇಲೆ- ಸಮಾಜದ ಮೇಲೆ ಹೇರಿರುವುದು ಸ್ಪಷ್ಟವಾಗುತ್ತಿದೆ.

ಇದನ್ನೂ ಓದಿ: ಪುರಸಭೆ ಸದಸ್ಯೆಯನ್ನು ಎಳೆದಾಡಿದ್ದ ಬಿಜೆಪಿ ಶಾಸಕ ಸಿದ್ದು ಸವದಿ: 31 ಜನರ ವಿರುದ್ಧ FIR

ಮಾರುಕಟ್ಟೆಯಲ್ಲಿ ತುಂಬಿ ತುಳುಕುತ್ತಿರುವ ಸರಕುಗಳು ಮತ್ತು ಪರಿಸ್ಥಿತಿ ತಿಳಿಯಾಗಿರುವ ಎಲ್ಲ ಲಕ್ಷಣ ಇದ್ದರೂ, ಉತ್ಪಾದನೆ ಆರಂಭಿಸದಿರುವ ಇವರ ಮನಸ್ಥಿತಿ ಗಮನಿಸಿದರೆ ದೇಶವನ್ನು ಮುಂಬರಲಿರುವ ದಿನಗಳಲ್ಲಿ ಬೀಕರವಾದ ಆರ್ಥಿಕ ಕುಸಿತದೆಡೆಗೆ ಕೊಂಡೊಯ್ಯುತ್ತಿರುವಂತಿದೆ. ಇದು ಭಾರತದ ಜನಸಾಮಾನ್ಯರನ್ನು ಮತ್ತಷ್ಟು ಸಂಕಷ್ಟಗಳಿಗೆ ದೂಡುವ ಸಾಧ್ಯತೆ ಎದ್ದು ಕಾಣುತ್ತಿದೆ.

ಇದರಿಂದ ಸಮಾಜ ಕಲಿಯಬೇಕಿರುವುದೂ ಇದೆ. ಕೊರೊನಾ ಲಾಕ್‌ಡೌನ್ ನಂತಹ ಬಿಕ್ಕಟ್ಟುಗಳು, ಬಿಕ್ಕಟ್ಟುಗಳನ್ನು ತನ್ನೊಡಲಲ್ಲಿ ಇಟ್ಟುಕೊಂಡಿರುವ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಆಗಿಂದಾಗ್ಗೆ ಮರುಕಳಿಸುತ್ತಲೆ ಇರುತ್ತದೆ. ಆಳುವ ಹಾಗು ವಿರೋಧ ಪಕ್ಷಗಳು ಬಂಡವಾಳಶಾಹಿ ಪಕ್ಷಗಳೇ ಆಗಿರುವುದರಿಂದ ಈ ಸತ್ಯ ಜನರ ಗಮನಕ್ಕೆ ಬರದಂತೆ ತಡೆಯುವಲ್ಲಿ ಯಶಸ್ವಿಯಾಗುತ್ತವೆ.

ಕಮ್ಯುನಿಸ್ಟ್‌ ದೃಷ್ಟಾರ ಮಾರ್ಕ್ಸ್ ಹೇಳುವಂತೆ ಬಂಡವಾಳಶಾಹಿ ಬೆಳೆದಂತೆಲ್ಲ ಬಿಕ್ಕಟ್ಟನ್ನೂ ತನ್ನೊಂದಿಗೆ ತರುತ್ತಾನೆ ಮತ್ತು ಒಂದು ಹಂತದಲ್ಲಿ ಅದು ಹತೋಟಿ ಮೀರಿ, ಅದೇ ಕ್ರಾಂತಿಗೆ ಹಾದಿ ಮಾಡಿಕೊಟ್ಟು ಬಂಡವಾಳವಾದ ಅಂತ್ಯ ಕಾಣುತ್ತದೆ. ಆದರೆ ಮಾರ್ಕ್ಸ್ ಅವರ ಈ ಎಲ್ಲ ಗ್ರಹಿಕೆಳನ್ನೂ ಸುಳ್ಳಾಗಿಸುವ ಎಲ್ಲಾ ಚಾಲಾಕಿತನವನ್ನು ಬಂಡವಾಳಿಗರು ಇಂದು ಮೈಗೂಡಿಸಿಕೊಂಡಿಸಿದ್ದಾರೆ. ಮಾರ್ಕ್ಸ್ ವಾದದಿಂದ ಕಮ್ಯುನಿಸ್ಟರಿಗಿಂತಲೂ ಬಂಡವಾಳಶಾಹಿಗಳು ತಮ್ಮ ಸಾಮ್ರಾಜ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕೆಂಬುದನ್ನು ಕಲಿತುಕೊಂಡಿದ್ದಾರೆ. ಇಲ್ಲಿ ಕಮ್ಯುನಿಸ್ಟರು ತುಂಬ ಎಳಸು ಎನಿಸುತ್ತದೆ.


ಇದನ್ನೂ ಓದಿ: ಕಾಡನ್ನೂ ಖಾಸಗೀಕರಣಗೊಳಿಸುತ್ತಿರುವ ಸರ್ಕಾರ: ಅಕೇಶಿಯಾ ಮರ ಬೇಡ ಹೋರಾಟ ಒಕ್ಕೂಟ ಆರೋಪ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೊಸ ಕಾರ್ಮಿಕ ಕಾನೂನು ಶ್ರಮಿಕರ ಮೂಲಭೂತ ಹಕ್ಕುಗಳಿಗೆ ಕತ್ತರಿ!

"8 ಗಂಟೆ ಕೆಲಸ, 8 ಗಂಟೆ ಮನರಂಜನೆ, 8 ಗಂಟೆ ವಿಶ್ರಾಂತಿ" ಎಂಬ ತತ್ವವು ಸುಲಭವಾಗಿ ದೊರೆತದ್ದಲ್ಲ, ಇದು ದೀರ್ಘಕಾಲದ ಹೋರಾಟ, ತ್ಯಾಗ ಮತ್ತು ಏಕತೆಯ ಫಲವಾಗಿದೆ. ಕೆಲಸದ ಹೊರೆ ಅತಿಯಾಗಿ ಇದ್ದ...

ಮನರೇಗಾ ಯಶೋಗಾಥೆ: ಭಾಗ-1 ದಲಿತರು-ಮಹಿಳೆಯರಿಗೆ ಆರ್ಥಿಕ ಭದ್ರತೆ; ಗ್ರಾಮ ಸಬಲೀಕರಣಕ್ಕೆ ಮನರೇಗಾ ಕೊಟ್ಟ ಕೊಡುಗೆ ಅಪಾರ

2001-2004 ರವರೆಗಿನ ನಿರಂತರ ಬರ ಕರ್ನಾಟಕದ ಬಹುತೇಕ ಹಳ್ಳಿಗಳನ್ನು ಕಂಗಾಲಾಗಿಸಿದ್ದಂತೂ ನಿಜ. ಎಲ್ಲ ಕೆರೆಗಳು ಬತ್ತಿಹೋಗಿದ್ದರಿಂದ ದನಕರುಗಳಿಗೆ ನೀರು ಕುಡಿಸಲೂ ಜನ ಅಲೆದಾಡುತ್ತಿದ್ದರು. ಜನರಿಗೆ ಕುಡಿಯುವ ನೀರು ಪೂರೈಕೆ ಸಹ ಆ ಸಂದರ್ಭದಲ್ಲಿ...

ಮಣಿಪುರ: ಬುಡಕಟ್ಟು ಚರ್ಚ್ ನಾಯಕರ ಮೇಲೆ ಉಗ್ರ ದಾಳಿ:  ಹಲವೆಡೆ ಮೇಣದ ಬತ್ತಿಯ ಜೊತೆಗೆ ಶೋಕ ವ್ಯಕ್ತ ಪಡಿಸಿದ ಕುಕಿ ಸಮುದಾಯ 

ಇಂಫಾಲ್: ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೂವರು ಪ್ರಮುಖ ಕುಕಿ ಚರ್ಚ್ ನಾಯಕರನ್ನು ಹೊಂಚು ಹಾಕಿ ದಾಳಿ ನಡೆಸಿ ಕೊಲ್ಲಲಾಗಿದೆ. ಈ ಘಟನೆಯು ರಾಜ್ಯದಲ್ಲಿ ಜನಾಂಗೀಯ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.  ಮೇ 13ರಂದು ಬೆಳಿಗ್ಗೆ ಚುರಾಚಂದ್‌ಪುರನಲ್ಲಿ...

ಗುಜರಾತ್| ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡಿದ ದಲಿತ ವರನ ಮೇಲೆ ಹಲ್ಲೆ

ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಮಡಿ ಗ್ರಾಮದಲ್ಲಿ ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡುತ್ತಿದ್ದ ದಲಿತ ವರನ ಮೇಲೆ ಮೇಲ್ಜಾತಿಯ ಪುರುಷರ ಗುಂಪೊಂದು ಜಾತಿ ನಿಂದನೆ ಮಾಡಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮೇ 10 ರಂದು...

ಆತಂಕಕಾರಿಯಾದ ಆನೆ ದಾಳಿ

ಆನೆ ದಾಳಿ ಹಿಂದೆಂದಿಗಿಂತಲೂ ದುಪ್ಪಟ್ಟಾಗಿದೆ. ಅರಣ್ಯಮಂತ್ರಿ ಈಶ್ವರ್ ಖಂಡ್ರೆಯವರ ಪ್ರಕಾರ ಆನೆಗಳ ಸಂಖ್ಯೆ ದುಪ್ಪಟ್ಟಾಗಿದೆ. ಕಾಡಿನ ಪ್ರಮಾಣ ಅಷ್ಟೆ ಇದೆ. ಅಂದರೆ ಕಾಡಿನ ಪ್ರಮಾಣ ಹೆಚ್ಚು ಮಾಡಬೇಕೆಂದರೆ ಮನುಷ್ಯರ ಆವಾಸ ಇಲ್ಲದೆ ಆನೆಗಳಿಗಾಗಿ...

ವೈದ್ಯಕೀಯ ಸೀಟುಗಳ ಹಂಚಿಕೆ ಕೇಂದ್ರೀಕರಣಕ್ಕೆ ದಕ್ಷಿಣದ ವಿರೋಧ; ನೀಟ್ ಪರೀಕ್ಷೆಯನ್ನೇ ರದ್ದುಗೊಳಿಸಲು ಇದು ಸಕಾಲ

ರಾಜ್ಯಪಟ್ಟಿಯಲ್ಲಿದ್ದ ಶಿಕ್ಷಣದ ಹಕ್ಕನ್ನು ನೀಟ್‌ ಹೆಸರಿನಲ್ಲಿ ಕೇಂದ್ರದ ಜಂಟಿ ಪಟ್ಟಿಗೆ ಸೇರಿಸುವ ಒಕ್ಕೂಟ ಸರ್ಕಾರದ ನಿರ್ಧಾರದಿಂದ ದಕ್ಷಿಣದ ರಾಜ್ಯಗಳು ಭಾರಿ ನಷ್ಟ ಅನುಭವಿಸುತ್ತಿವೆ. ಜೊತೆಗೆ, ನೀಟ್ ಪಾಸ್‌ ಮಾಡುವ ಒತ್ತಡ ತಾಳಲಾರದೆ ದೇಶದಾದ್ಯಂತ...

‘ಮತ’ ವ್ಯರ್ಥ ಮಾಡದ ಮತದಾರ: 2026ರಲ್ಲಿ ಕುಸಿಯಿತು ‘ನೋಟಾ’ ಅಬ್ಬರ

2026ರ ವಿಧಾನಸಭಾ ಚುನಾವಣೆಯಲ್ಲಿ ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಾದ್ಯಂತ ಸುಮಾರು 10.9 ಲಕ್ಷ ಮತಗಳು 'ನೋಟಾ' (ಯಾರಿಗೂ ಮತವಿಲ್ಲ) ಪಾಲಾಗಿವೆ. ಆದರೆ, 2016 ಮತ್ತು 2021ರ ಚುನಾವಣೆಗಳಿಗೆ ಹೋಲಿಸಿದರೆ...

ಕೇರಳದ 13ನೇ ಮುಖ್ಯಮಂತ್ರಿ ವಿ.ಡಿ. ಸತೀಶನ್: ವಿದ್ಯಾರ್ಥಿ ನಾಯಕನಿಂದ ಸಿಎಂ ಸ್ಥಾನದವರೆಗೆ ಸತೀಶನ್ ಪಯಣ

ತಿರುವನಂತಪುರಂ: ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಆ ಮೂಲಕ ಹಲವು ದಿನಗಳಿಂದ ಈ ಬಗ್ಗೆ ನಡೆಯುತ್ತಿದ್ದ ಕುತೂಹಲ ಮತ್ತು ಚರ್ಚೆಗಳಿಗೆ ತೆರೆ ಬಿದ್ದಿದೆ.  ಅಖಿಲ ಭಾರತ...

ದಲಿತರ ನ್ಯಾಯಕ್ಕೆ ಹೊಸ ಅಡ್ಡಿಯಾಗಲಿದೆಯೇ ‘ಸಾರ್ವಜನಿಕ ವೀಕ್ಷಣೆ’ ನಿಯಮ? ಪರಿಶಿಷ್ಟರನ್ನು ಆತಂಕಕ್ಕೆ ತಳ್ಳಿದ ಸುಪ್ರೀಂ ತೀರ್ಪು

ಸಾರ್ವಜನಿಕರು ನೋಡದ ಜಾಗದಲ್ಲಿ, ಅಂದರೆ ಯಾರೂ ನೋಡದ ಜಾಗದಲ್ಲಿ ಜಾತಿ ನಿಂದನೆ ಅಥವಾ ಅವಮಾನ ನಡೆದರೆ, ಅದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿಯಲ್ಲಿ ಅಪರಾಧ...

ಪಶ್ಚಿಮ ಬಂಗಾಳ: “ಇದು ಬುಲ್ಡೋಜರ್ ರಾಜ್ಯವಲ್ಲ”: ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಗುರುವಾರ ವಕೀಲರ ನಿಲುವಂಗಿಯನ್ನು ಧರಿಸಿ ಕಲ್ಕತ್ತಾ ಹೈಕೋರ್ಟ್‌ಗೆ ಬಂದ ಅವರು ವಿಧಾನಸಭಾ...