Homeಮುಖಪುಟಬಂಡವಾಳಶಾಹಿಯ ಬಿಕ್ಕಟ್ಟೂ... ಕೊರೊನಾ ಸಂಚೂ...

ಬಂಡವಾಳಶಾಹಿಯ ಬಿಕ್ಕಟ್ಟೂ… ಕೊರೊನಾ ಸಂಚೂ…

ಕೊರೊನಾ ಎಂಬ ಭೀತಿಗೆ ಸಮಾಜವನ್ನು ಖುದ್ಧು ಸರ್ಕಾರವೇ ದೂಡಿದೆ ಎನ್ನುವುದಕ್ಕೂ ಕೆಲವೊಂದು ಘಟನೆಗಳೂ ಪುಷ್ಟಿ ನೀಡುತ್ತಿದೆ- ಆಲುವಳ್ಳಿ ಆರ್ ಅಣ್ಣಪ್ಪ

- Advertisement -
- Advertisement -

ಕೊರೊನಾ ಕಾರಣದಿಂದ ಲಾಕ್‌ಡೌನ್ ಘೋಷಣೆಯಾದ ಆರಂಭದಲ್ಲಿ ಕೊರೊನಾಕ್ಕೆ ತಮ್ಮಲ್ಲಿ ಅದೆಷ್ಟು ಮಂದಿ ಬಲಿಯಾಗಿ ಹೋಗುತ್ತೇವೋ ಎಂಬ ಭೀತಿ-ಹತಾಶೆಗೆ ನಾವು ತಳ್ಳಲ್ಪಟ್ಟಿದ್ದೆವು. ಆದರೆ ದಿನಗಳುರುಳಿದಂತೆ ಕೊರೊನಾ ಎಂಬುದು ಒಂದು ರೋಗವೇ ಅಲ್ಲ ಎನ್ನುವ ಮನಃಸ್ಥಿತಿಗೆ ಜನತೆ ಬರುತ್ತಿದ್ದಾರೆ. ಕೊರೊನಾ ಕುರಿತಾಗಿ ಮೂಡಿಸಿದ್ದ ಭಯ ನಿಧಾನವಾಗಿ ಕರಗುತ್ತಿದೆ.

ದೇವಾಲಯಗಳಲ್ಲಿ ಮಾಮೂಲಿಯಂತೆ ಭಕ್ತಾದಿಗಳು ಕಿಕ್ಕಿರಿದಿದ್ದರೂ ರೋಗ ಕಾಣಿಸಿಕೊಳ್ಳದಿರುವುದು, ಯಾವುದೇ ಸುರಕ್ಷತೆ, ಮುಂಜಾಗರೂಕತೆ ಇರದಿದ್ದರೂ ಬಿಕ್ಷುಕರು, ಚಿಂದಿ ಆಯುವವರಲ್ಲಿ ಒಬ್ಬರೂ ಈ ರೋಗಕ್ಕೆ ತುತ್ತಾದವರು ಕಾಣದಿರುವುದು, ಇತ್ತೀಚೆಗೆ ನಡೆದ ಉಪ ಚುಣಾವಣೆ, ಬಿಹಾರ ಚುಣಾವಣೆಯಲ್ಲಿ ಸಾವಿರಾರು ಜನರಜಂಗುಳಿ ಇದ್ದರೂ ಕೊರೊನಾ ಸುಳಿಯದಿರುವುದು ಜನರಲ್ಲಿ ಕೊರೊನಾ ಕುರಿತಾದ ಭೀತಿ ದೂರಾಗಲು ಕಾರಣವಾಗುತ್ತಿದೆ.

ಇದನ್ನೂ ಓದಿ: ಕಣ್ಣು ಕುರುಡಾಗಿ, ಕಿವಿ ಕಿವುಡಾಗಿ ಸಂವೇದನೆ ಹೊರಟುಹೋಗಿದೆಯೇ: ಭೈರಪ್ಪನವರಿಗೆ ತಿರುಗೇಟು ನೀಡಿದ ದೇವನೂರು

ವಾಸ್ತವದಲ್ಲಿ ಕೊರೊನಾಕ್ಕೆ ತುತ್ತಾಗಿ ಪ್ರಾಣ ಕಳೆದುಕೊಂಡವರೆಲ್ಲರೂ ಅನ್ಯ ರೋಗದಿಂದ ಬಳಲುತ್ತಿದ್ದವರೇ ಆಗಿದ್ದು, ಅವೆಲ್ಲವನ್ನೂ ಕೊರೊನಾದೊಂದಿಗೆ ತಳುಕು ಹಾಕಲಾಯಿತು. ಕೊರೊನಾಕ್ಕೆ ಯಾವುದೇ ಲಸಿಕೆ ಇಲ್ಲದಿದ್ದರೂ ಚಿಕಿತ್ಸೆ ನೀಡುವ ನಾಟಕ ಆಡಲಾಯಿತು ಮತ್ತು ಗುಣಪಡಿಸಲಾಗಿದೆ ಎಂದು ವರದಿ ಮಾಡಲಾಯಿತು. ಲಸಿಕೆಯಿಲ್ಲದೆ ಗುಣಪಡಿಸಲು ಸಾಧ್ಯವೆಂದಾದರೆ ಅಂಥಹ ರೋಗಕ್ಕೆ ಅಂಜಿ ಲಾಕ್‌ಡೌನ್ ಮಾಡುವ ಅವಶ್ಯಕತೆ ಈ ದೇಶಕ್ಕೆ- ಸಮಾಜಕ್ಕೆ ಇತ್ತೆ?

ಇಷ್ಟೇ ಅಲ್ಲದೆ ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಲಾಕ್‌ಡೌನ್ ಹೊರತಾಗಿ ಯಾವುದೇ ಕ್ರಮ ಕೈಗೊಳ್ಳದಿದ್ದದ್ದು, ಕೊರೊನಾ ಎಂಬ ಪಿಡುಗು ಈ ಸಮಾಜವನ್ನು ಕಾಡುತ್ತಿಲ್ಲ ಎಂಬ ಖಚಿತತೆ ಈ ಸರ್ಕಾರಕ್ಕೆ ಇತ್ತು ಎಂಬುದನ್ನು ಸ್ಪಷ್ಟಪಡಿಸುತ್ತಿಲ್ಲವೇ..? ದೇಹಲಿ ಗಡಿಯಲ್ಲಿ ಕೋಟ್ಯಾಂತರ ರೈತರು, ಸರ್ಕಾರ-ಆರೋಗ್ಯ ಇಲಾಖೆ ನೀಡಿರುವ ಎಲ್ಲ ಮಾರ್ಗದರ್ಶನಗಳನ್ನು ಧಿಕ್ಕರಿಸಿ, ಸಾಮೂಹಿಕ ಗುಂಪು ಹೂಡಿ ತಿಂಗಳು ಕಳೆದರೂ, ಅಲ್ಲಿ ಕೊರೊನಾ ಪ್ರಕರಣ ವರದಿಯಾಗಿಲ್ಲ. ಒಂದು ವೇಳೆ ಕೊರೊನಾವು ಪ್ರಚಾರ ಪಡಿಸಿದಷ್ಟು ಭೀಕರವಾಗಿದ್ದಿದ್ದರೆ ಅಲ್ಲಿ ಮರಣ ಮೃದಂಗವೇ ನಡೆಯಬೇಕಿತ್ತು. ಆದರೆ ಹೀಗಾಗದಿರುವುದು, ಆಲೋಚನೆ ಮಾಡುವ ಶಕ್ತಿ ಇರುವ ಮಾನವ ಸಮಾಜಕ್ಕೆ ಕೊರೊನಾ ಎಂಬ ರೋಗ ಈ ಭೂಮಿಯ ಮೇಲೆ ಇಲ್ಲ ಎಂದು ಖಚಿತ ಪಡಿಸಿಕೊಳ್ಳಲು ಆಧಾರ ಒದಗಿಸುತ್ತಿದೆ.

ಇದನ್ನೂ ಓದಿ: ‘ಲಸಿಕೆಯಲ್ಲಿ ಹಂದಿ ಮಾಂಸವಿಲ್ಲ’ – ಆಧಾರರಹಿತ ಸುದ್ದಿ ಕಡೆಗಣಿಸಲು ಮುಸ್ಲಿಂ ವಿದ್ವಾಂಸರ ಕರೆ

ಜೊತೆಗೆ ಕೊರೊನಾ ಎಂಬ ಭೀತಿಗೆ ಸಮಾಜವನ್ನು ಖುದ್ದು ಸರ್ಕಾರವೇ ದೂಡಿದೆ ಎನ್ನುವುದಕ್ಕೂ ಕೆಲವೊಂದು ಘಟನೆಗಳೂ ಪುಷ್ಟಿ ನೀಡುತ್ತಿದೆ.

ಮೊದಲನೆಯದಾಗಿ ಹೇಳಬೇಕೆಂದರೆ, ಸಮಾಜ ಕೊರೊನಾ ಭೀತಿಯಲ್ಲಿ ಸಂತ್ರಸ್ಥವಾಗಿ ಅಸಹಾಯಕ ಸ್ಥಿತಿಯಲ್ಲಿರುವಾಗಲೇ ತುರಾತುರಿಯಲ್ಲಿ ಕಾರ್ಮಿಕ ಕಾನೂನು, ಭೂ ಸುಧಾರಣಾ ಕಾಯಿದೆ, APMC ಕಾಯಿದೆಗಳಿಗೆ ತಿದ್ದುಪಡಿ ತಂದು ಜಾರಿ ಮಾಡ ಹೊರಟಿರುವುದು.

ಎರಡನೆಯದಾಗಿ ಪಟ್ಟಿ ಮಾಡಬಹುದಾದದ್ದೆಂದರೆ, ಬೆಳಕಿಗೆ ಬರುತ್ತಿರುವ ಕೈಗಾರಿಕೋತ್ಪನ್ನಗಳ ಅತಿಯಾದ ಉತ್ಪಾದನೆ ಮತ್ತು ಸಂಗ್ರಹ. ಒಮ್ಮೆ ಮಾರುಕಟ್ಟೆಯ ಪರಿಸ್ಥಿತಿಯನ್ನು ಅವಲೋಕಿಸಿದಾಗ ಇದರ ಅರಿವಾಗುತ್ತದೆ. ನಿರಂತರವಾಗಿ 9 ತಿಂಗಳಿನಿಂದ ಉತ್ಪಾದನೆ ಸ್ಥಗಿತಗೊಂಡಿದ್ದರೂ ಇಂದು ಮಾರುಕಟ್ಟೆಯಲ್ಲಿ ಯಾವುದೆ ವಸ್ತುಗಳ ಕೊರತೆ ಕಾಣುತ್ತಿಲ್ಲ. ಎಲ್ಲ ಮಾರಾಟ ಮಳಿಗೆಳಲ್ಲಿ ಲಾಕ್‌ಡೌನ್ ಪೂರ್ವದಲ್ಲಿದ್ದಂತೆಯೇ ವಸ್ತುಗಳ ಲಭ್ಯತೆಯಿದೆ. ಬಟ್ಟೆ ಖರೀದಿಸಲು ಹೋದರೆ ಯಾವುದೆ ಕೊರತೆಯಿಲ್ಲ. ದೂರದರ್ಶನ, ಫ್ರಿಡ್ಜ್, ವಾಹನ, ಶೃಂಗಾರ ಸಾಮಗ್ರಿ, ಪಾದರಕ್ಷೆ ಯಾವುದರಲ್ಲಿಯೂ ಕೊರತೆ ಕಾಣುತ್ತಿಲ್ಲ. ಎಲ್ಲದರ ಸರಬರಾಜು ನಿರಂತರವಾಗಿದೆ. ಎಂದಿನಂತೆ ವಿದ್ಯುತ್ ಸರಬರಾಜು ಇದೆ. ನಿರ್ಮಾಣ ಕಾರ್ಯಕ್ಕೆ ಬೇಕಾಗುವ ಸಿಮೆಂಟ್, ಕಬ್ಬಿಣ, ಸ್ಯಾನಿಟರಿಗೆ ಸಂಬಂಧಿಸಿದ ವಸ್ತುಗಳು, ಗೃಹಲಂಕಾರ ವಸ್ತುಗಳು ಹೀಗೆ ಯಾವುದರಲ್ಲಿಯೂ ಕೊರತೆಯಿಲ್ಲ. ಎಲ್ಲವೂ ಎಲ್ಲ ಅಂಗಡಿಗಳಲ್ಲಿ ತುಂಬಿ ತುಳುಕುತ್ತಿವೆ. ಜೊತೆಗೆ ಹೊಸ ಹೊಸ ವ್ಯಾಪಾರ ಮಳಿಗೆಗಳನ್ನೂ ತೆರೆಯಲಾಗುತ್ತಿದೆ.

ಮತ್ತೂ ವಿಚಿತ್ರವೆಂದರೆ, ಆರ್ಥಿಕ ಕುಸಿತ ಕಾಣುತ್ತಿದೆ ಎನ್ನಲಾಗುತ್ತಿದ್ದ ವ್ಯವಸ್ಥೆಯಲ್ಲಿ ಕುಸಿತ ಕಾಣ ಬೇಕಾಗಿದ್ದ ಬೆಲೆ, ಏರಿಕೆ ಕಾಣುತ್ತಿರುವುದು. ಸಾಮಾನ್ಯವಾಗಿ ಆರ್ಥಿಕ ಕುಸಿತಕ್ಕೆ ತುತ್ತಾದ ಸಮಾಜದಲ್ಲಿ ಎಂದೂ ಬೆಲೆಯೇರಿಕೆ ಕಾಣಲಾರದು. ಅಂತಹ ಸಮಾಜದಲ್ಲಿ ಆರ್ಥಿಕತೆಯ ಪುನಃಶ್ಚೇತನಕ್ಕೆ ಸರ್ಕಾರದ ವತಿಯಿಂದ ನಾನಾ ಕಸರತ್ತು ನಡೆಯುತ್ತಿರುತ್ತದೆ. ಆರ್ಥಿಕ ಶಕ್ತಿಗಳಿಂದ ಸರ್ಕಾರದ ಮೇಲೆ ಅಂತಹ ಕಾರ್ಯಕ್ರಮಗಳಿಗೆ ನಿರಂತರವಾದ ಒತ್ತಡವಿರುತ್ತದೆ. ನಮ್ಮಲ್ಲಿ ಸರ್ಕಾರಗಳು ತಟಸ್ಥವಾಗಿರುವುದನ್ನು ಗಮನಿಸಿದರೆ ಈ ಬಿಕ್ಕಟ್ಟು ಪಟ್ಟಭದ್ರ ಹಿತಾಸಕ್ತಿಗಳ ಕೃಪಾಪೋಷಿತ ಎನಿಸುತ್ತದೆ.

ಇದನ್ನೂ ಓದಿ: ಸ್ಥಾನಮಾನ ಸಿಕ್ಕರೆ ಬಿಜೆಪಿ ಸೇರ್ಪಡೆ ಖಚಿತ: ಶಾಸಕ ಎನ್‌ ಮಹೇಶ್

ಹಾಗೆಯೇ ಲಾಕ್ ಡೌನ್ ತೆರವಾಗಿ ಕೊರೊನಾ ಭೀತಿಯಿಂದ ಜನತೆ ಹೊರಬಂದು ಉದ್ಯೋಗ ಅರಸುತ್ತಿದ್ದಾಗ್ಯೂ ಕೈಗಾರಿಕೆಗಳು ಮಾತ್ರ ಉತ್ಪಾದನೆಗೆ ಇಳಿಯದಿರುವುದೂ ಹಲವು ಅನುಮಾನಗಳನ್ನೂ ಹುಟ್ಟು ಹಾಕುತ್ತಿದೆ. ಈಗಾಗಲೇ ಇವರ ಗೋದಾಮುಗಳಲ್ಲಿ ಮಿತಿ ಮೀರಿ ಸಂಗ್ರಹಗೊಂಡಿರುವ ಉತ್ಪನ್ನಗಳೆಲ್ಲ ಬಿಕರಿಯಾಗಿ ಖಾಲಿಯಾಗುವುದಕ್ಕಾಗಿ ಕಾದುಕುಳಿತಿರುವುದನ್ನು ಸ್ಪಷ್ಟ ಪಡಿಸುತ್ತಿದೆ.

ಸದ್ಯದ ಪರಿಸ್ಥಿತಿ ಗಮನಿಸಿದರೆ ಯಾವ ಕೈಗಾರಿಕೆಗಳೂ ಸದ್ಯಕ್ಕೆ ಉತ್ಪಾದನೆ ಆರಂಭಿಸುವ ಲಕ್ಷಣಗಳಂತೂ ಕಂಡುಬರುತ್ತಿಲ್ಲ. ಹೇಳಬೇಕೆಂದರೆ ಇವರ ಗೋದಾಮುಗಳಲ್ಲಿ ತುಂಬಿರುವ ಎಲ್ಲ ಸರಕುಗಳೂ ಮುಗಿಯುವವರೆಗೂ ಉತ್ಪಾದನೆ ಆರಂಭಿಸಲಾರವು ಎನಿಸುತ್ತಿದೆ.

ಈ ಹಿನ್ನೆಲೆಯಿಂದ ನೋಡಿದಾಗ ಬಂಡವಾಳಿಗರು ತಮ್ಮ ಬಿಕ್ಕಟ್ಟನ್ನು ಕೊರೊನಾ-ಲಾಕ್‌ಡೌನ್ ಹೆಸರಿನಲ್ಲಿ ಜನತೆಯ ಮೇಲೆ- ಸಮಾಜದ ಮೇಲೆ ಹೇರಿರುವುದು ಸ್ಪಷ್ಟವಾಗುತ್ತಿದೆ.

ಇದನ್ನೂ ಓದಿ: ಪುರಸಭೆ ಸದಸ್ಯೆಯನ್ನು ಎಳೆದಾಡಿದ್ದ ಬಿಜೆಪಿ ಶಾಸಕ ಸಿದ್ದು ಸವದಿ: 31 ಜನರ ವಿರುದ್ಧ FIR

ಮಾರುಕಟ್ಟೆಯಲ್ಲಿ ತುಂಬಿ ತುಳುಕುತ್ತಿರುವ ಸರಕುಗಳು ಮತ್ತು ಪರಿಸ್ಥಿತಿ ತಿಳಿಯಾಗಿರುವ ಎಲ್ಲ ಲಕ್ಷಣ ಇದ್ದರೂ, ಉತ್ಪಾದನೆ ಆರಂಭಿಸದಿರುವ ಇವರ ಮನಸ್ಥಿತಿ ಗಮನಿಸಿದರೆ ದೇಶವನ್ನು ಮುಂಬರಲಿರುವ ದಿನಗಳಲ್ಲಿ ಬೀಕರವಾದ ಆರ್ಥಿಕ ಕುಸಿತದೆಡೆಗೆ ಕೊಂಡೊಯ್ಯುತ್ತಿರುವಂತಿದೆ. ಇದು ಭಾರತದ ಜನಸಾಮಾನ್ಯರನ್ನು ಮತ್ತಷ್ಟು ಸಂಕಷ್ಟಗಳಿಗೆ ದೂಡುವ ಸಾಧ್ಯತೆ ಎದ್ದು ಕಾಣುತ್ತಿದೆ.

ಇದರಿಂದ ಸಮಾಜ ಕಲಿಯಬೇಕಿರುವುದೂ ಇದೆ. ಕೊರೊನಾ ಲಾಕ್‌ಡೌನ್ ನಂತಹ ಬಿಕ್ಕಟ್ಟುಗಳು, ಬಿಕ್ಕಟ್ಟುಗಳನ್ನು ತನ್ನೊಡಲಲ್ಲಿ ಇಟ್ಟುಕೊಂಡಿರುವ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಆಗಿಂದಾಗ್ಗೆ ಮರುಕಳಿಸುತ್ತಲೆ ಇರುತ್ತದೆ. ಆಳುವ ಹಾಗು ವಿರೋಧ ಪಕ್ಷಗಳು ಬಂಡವಾಳಶಾಹಿ ಪಕ್ಷಗಳೇ ಆಗಿರುವುದರಿಂದ ಈ ಸತ್ಯ ಜನರ ಗಮನಕ್ಕೆ ಬರದಂತೆ ತಡೆಯುವಲ್ಲಿ ಯಶಸ್ವಿಯಾಗುತ್ತವೆ.

ಕಮ್ಯುನಿಸ್ಟ್‌ ದೃಷ್ಟಾರ ಮಾರ್ಕ್ಸ್ ಹೇಳುವಂತೆ ಬಂಡವಾಳಶಾಹಿ ಬೆಳೆದಂತೆಲ್ಲ ಬಿಕ್ಕಟ್ಟನ್ನೂ ತನ್ನೊಂದಿಗೆ ತರುತ್ತಾನೆ ಮತ್ತು ಒಂದು ಹಂತದಲ್ಲಿ ಅದು ಹತೋಟಿ ಮೀರಿ, ಅದೇ ಕ್ರಾಂತಿಗೆ ಹಾದಿ ಮಾಡಿಕೊಟ್ಟು ಬಂಡವಾಳವಾದ ಅಂತ್ಯ ಕಾಣುತ್ತದೆ. ಆದರೆ ಮಾರ್ಕ್ಸ್ ಅವರ ಈ ಎಲ್ಲ ಗ್ರಹಿಕೆಳನ್ನೂ ಸುಳ್ಳಾಗಿಸುವ ಎಲ್ಲಾ ಚಾಲಾಕಿತನವನ್ನು ಬಂಡವಾಳಿಗರು ಇಂದು ಮೈಗೂಡಿಸಿಕೊಂಡಿಸಿದ್ದಾರೆ. ಮಾರ್ಕ್ಸ್ ವಾದದಿಂದ ಕಮ್ಯುನಿಸ್ಟರಿಗಿಂತಲೂ ಬಂಡವಾಳಶಾಹಿಗಳು ತಮ್ಮ ಸಾಮ್ರಾಜ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕೆಂಬುದನ್ನು ಕಲಿತುಕೊಂಡಿದ್ದಾರೆ. ಇಲ್ಲಿ ಕಮ್ಯುನಿಸ್ಟರು ತುಂಬ ಎಳಸು ಎನಿಸುತ್ತದೆ.


ಇದನ್ನೂ ಓದಿ: ಕಾಡನ್ನೂ ಖಾಸಗೀಕರಣಗೊಳಿಸುತ್ತಿರುವ ಸರ್ಕಾರ: ಅಕೇಶಿಯಾ ಮರ ಬೇಡ ಹೋರಾಟ ಒಕ್ಕೂಟ ಆರೋಪ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...