Homeರಾಷ್ಟ್ರೀಯಶಾಲೆ ಮುಚ್ಚಿಸಲು ಬಂದ ಎಬಿವಿಪಿ ಮುಖಂಡನಿಗೆ ಕಪಾಳಮೋಕ್ಷ ಮಾಡಿ ವಾಪಾಸು ಕಳುಹಿಸಿದ ಮುಖ್ಯೋಪಾಧ್ಯಾಯಿನಿ

ಶಾಲೆ ಮುಚ್ಚಿಸಲು ಬಂದ ಎಬಿವಿಪಿ ಮುಖಂಡನಿಗೆ ಕಪಾಳಮೋಕ್ಷ ಮಾಡಿ ವಾಪಾಸು ಕಳುಹಿಸಿದ ಮುಖ್ಯೋಪಾಧ್ಯಾಯಿನಿ

- Advertisement -
- Advertisement -

ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ರಾಜಂಪೇಟೆ ಪಟ್ಟಣದ ಜಿಲ್ಲಾ ಪಂಚಾಯತ್‌‌ ಬಾಲಕಿಯರ ಪ್ರೌಢಶಾಲೆಯಲ್ಲಿ, ಶಾಲೆ ಮುಚ್ಚುವಂತೆ ಒತ್ತಾಯಿಸಿ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನಾಯಕ ದಾಸರಿ ಅಶೋಕ್ ಎಂಬವರಿಗೆ ಶಾಲಾ ಮುಖ್ಯೋಪಾಧ್ಯಾಯಿನಿ ಕಪಾಳ ಮೋಕ್ಷ ಮಾಡಿದ ಘಟನೆ ನಡೆದಿದೆ.

ಎಬಿವಿಪಿ ಆಂಧ್ರಪ್ರದೇಶದ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿರುವ ಅಶೋಕ್‌ ಅವರು ಶಾಲೆಯ ಮುಖ್ಯೋಪಾಧ್ಯಾಯಿನಿ ಲಕ್ಷ್ಮಿದೇವಿ ಅವರೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದರಿಂದ ಕಪಾಲ ಮೋಕ್ಷ ಮಾಲಾಗಿದೆ ಎಂದು ಸಾಕ್ಷಿ ಪತ್ರಿಕೆ ವರದಿ ಮಾಡಿದೆ. ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಶಾಲೆಗಳ ವಿಲೀನಕ್ಕೆ ಸಂಬಂಧಿಸಿದ ವಿಚಾರದಲ್ಲಿ ಎಬಿವಿಪಿ ಮುಖಂಡರು ಮಂಗಳವಾರ ಪ್ರತಿಭಟನೆ ನಡೆಸಿ, ಶಿಕ್ಷಣ ಸಂಸ್ಥೆಗಳನ್ನು ಮುಚ್ಚಿಸಿದ್ದರು. ಇದೆ ವೇಳೆ ಎಬಿವಿಪಿ ನಾಯಕ ಅಶೋಕ್ ಅವರು ತಮ್ಮ ಇತರ ಮುಖಂಡರೊಂದಿಗೆ ಗರ್ಲ್ಸ್ ಹೈಸ್ಕೂಲ್‌ಗೆ ಬೆಳಿಗ್ಗೆ 11 ಗಂಟೆಗೆ ಶಾಲೆಗೆ ತಲುಪಿದ್ದರು. ಅಲ್ಲಿ ಮುಖ್ಯೋಪಾಧ್ಯಾಯಿನಿ ಲಕ್ಷ್ಮಿದೇವಿ ಅವರೊಂದಿಗೆ ತಕ್ಷಣ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿ ಶಾಲೆ ಮುಚ್ಚುವಂತೆ ಕೇಳಿದ್ದರು.

ಇದನ್ನೂ ಓದಿ: ವಿಜಯಪುರ: ಮುಸ್ಲಿಮರ ನರಮೇಧಕ್ಕೆ ಕರೆ ನೀಡಿದ್ದ ಎಬಿವಿಪಿ ಸದಸ್ಯೆ ಮೇಲೆ ಎಫ್‌ಐಆರ್‌

ಆದರೆ ಮುಖ್ಯೋಪಾಧ್ಯಾಯಿನಿ ಲಕ್ಷ್ಮಿದೇವೆ ಅವರು ಇದಕ್ಕೆ ಒಪ್ಪದೆ, ಮಧ್ಯಾಹ್ನದ ಊಟದ ನಂತರ ಮಕ್ಕಳನ್ನು ಮನೆಗೆ ಕಳುಹಿಸುವುದಾಗಿ ಎಬಿವಿಪಿ ಮುಖಂಡರಿಗೆ ತಿಳಿಸಿದ್ದರು. ಆದರೆ ಇದಕ್ಕೆ ಒಪ್ಪದ ಅಶೋಕ್ ಅವರು ವಿದ್ಯಾರ್ಥಿನಿಯರನ್ನು ತಕ್ಷಣವೆ ಮನೆಗೆ ಕಳುಹಿಸುವಂತೆ ಒತ್ತಾಯಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯೋಪಾಧ್ಯಾಯಿನಿ ವಿದ್ಯಾರ್ಥಿಗಳನ್ನು ಈಗಲೇ ಮನೆಗೆ ಕಳುಹಿಸಿದರೆ ಮಧ್ಯಾಹ್ನದ ಊಟ ಮತ್ತು ಅವರಿಗಾಗಿ ಬೇಯಿಸಿ ಸಿದ್ಧಪಡಿಸಿದ ಮೊಟ್ಟೆಗಳು ವ್ಯರ್ಥವಾಗುತ್ತವೆ ಎಂದು ವಿವರಿಸಲು ಪ್ರಯತ್ನಿಸಿದ್ದಾರೆ. ಅಲ್ಲದೆ ಅನೇಕ ವಿದ್ಯಾರ್ಥಿಗಳ ಪೋಷಕರು ಮನೆಯಲ್ಲಿ ಇರುವುದಿಲ್ಲ, ಕೆಲಸಕ್ಕೆ ಹೋಗಿರುತ್ತಾರೆ. ಹಾಗಾಗಿ ಈಗಲೇ ಮಕ್ಕಳನ್ನು ಕಳುಹಿಸಿದರೆ ಅವರು ಊಟವಿಲ್ಲದೆ ಹೋಗಬೇಕಾಗುತ್ತದೆ ಎಂದು ಸಮರ್ಥಿಸಿಕೊಂಡಿದ್ದರು.

ಆದರೆ ಅಶೋಕ್ ಇದನ್ನು ಒಪ್ಪದೆ ಹಠಮಾರಿ ದೋರಣೆ ತೆಳೆದು ಮುಖ್ಯೋಪಾಧ್ಯಾಯಿನಿ ಮೇಲೆ ರೇಗಲು ಪ್ರಾರಂಭಿಸಿ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂದು ಸಾಕ್ಷಿ ಪತ್ರಿಕೆ ವರದಿ ಮಾಡಿದೆ. ಈ ವೇಳೆ ಅವರ ಮಾತಿಗೆ ಕುಪಿತಗೊಂಡ ಲಕ್ಷ್ಮಿದೇವಿ ಅವರು ಬಿಗಿಯಾಗಿ ಕಪಾಳ ಮೋಕ್ಷ ಮಾಡಿ ಅವರನ್ನು ವಾಪಾಸು ಕಳುಹಿಸಿದ್ದಾರೆ.

ಇದನ್ನೂ ಓದಿ: 60 ವರ್ಷದ ಮಹಿಳೆಗೆ ಕಿರುಕುಳ: ಎಬಿವಿಪಿ ಮಾಜಿ ರಾಷ್ಟ್ರೀಯ ಅಧ್ಯಕ್ಷನ ಬಂಧನ

ಘಟನೆಯ ವೇಳೆ ಪೊಲೀಸರು ಕೂಡಾ ಸ್ಥಳದಲ್ಲಿ ಇದ್ದರು. “ವಿದ್ಯಾರ್ಥಿಗಳಿಗೆ ಊಟ ನೀಡಿದ ನಂತರ ಅವರನ್ನು ಮನೆಗೆ ಕಳುಹಿಸಿ ನಂತರ ಶಾಲೆಯನ್ನು ಮುಚ್ಚಲು ಮುಖ್ಯೋಪಾಧ್ಯಾಯಿನಿ ಸಿದ್ದರಿದ್ದರು. ಆದರೆ ಅಶೋಕ್ ಹಠಮಾರಿ ಧೋರಣೆ ತೆಳೆದು ಅಸಭ್ಯವಾಗಿ ನಡೆದಿದ್ದರಿಂದ ಇದು ನಡೆದಿದೆ” ಎಂದು ಪ್ರತ್ಯಕ್ಷದರ್ಶಿಗಳು ಮುಖ್ಯೋಪಾಧ್ಯಾಯಿನಿಯ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ಸಾಕ್ಷಿ ಪತ್ರಿಕೆ ಹೇಳಿದೆ.

ವಿಡಿಯೊ ನೋಡಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಶಾಲಾ ಮುಖ್ಯೋಪಾಧ್ಯಾಯರು ಆ ದರಿದ್ರ ಮುಂಡೆಮಗನಿಗೆ ತಕ್ಕ ಶಾಸ್ತಿಯನ್ನೇ ಮಾಡಿದ್ದಾರೆ. ಈ ಎಬಿವಿಪಿ ಲೋಫರ್ಸ್‌ಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಒದ್ದು ಒಳಗೆ ಹಾಕಿ ಎಲುಬು ಮರಿಬೇಕು.

  2. Inviting troubles ಅನ್ನೋದು ಇದಕ್ಕೇ. ಸಂಘಿಗಳು ತೀರಾ ನೀಚ ಮತ್ತು ಕೊಳಕು ಸ್ವಭಾವದವರು. ಆ ಶಿಕ್ಷಕಿಗೆ ಸರಕಾರ ಸೂಕ್ತ ರಕ್ಷಣೆ ಒದಗಿಸಲಿ.

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...