Homeಸಿನಿಮಾಕ್ರೀಡೆಓಟ ಮತ್ತು ಹೋರಾಟದಲ್ಲಿ ಅಲ್ಲಿಸನ್ ಫೆಲಿಕ್ಸ್ ವಿಜಯಿ : ಉಸೇನ್ ಬೋಲ್ಟ್ ದಾಖಲೆ ಬ್ರೇಕ್

ಓಟ ಮತ್ತು ಹೋರಾಟದಲ್ಲಿ ಅಲ್ಲಿಸನ್ ಫೆಲಿಕ್ಸ್ ವಿಜಯಿ : ಉಸೇನ್ ಬೋಲ್ಟ್ ದಾಖಲೆ ಬ್ರೇಕ್

ಹತ್ತು ತಿಂಗಳ ಹಿಂದೆಯಷ್ಟೇ ಸಿಸೇರಿಯನ್‍ಗೆ ಒಳಗಾಗಿದ್ದ ಫೆಲಿಕ್ಸ್, ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಅದ್ಯಾವುದೂ ಅವರ ರೋಚಕ ಓಟಕ್ಕೆ ಅಡ್ಡಿಯಾಗಲಿಲ್ಲ.

- Advertisement -
- Advertisement -

ಉಸೇನ್ ಬೋಲ್ಟ್ ಅಂದರೆ ಕಣ್ಣಮುಂದೆ ಬರೋದು ಆತ ಗೆದ್ದ ಪ್ರಶಸ್ತಿಗಳು, ಪರಿಶ್ರಮವನ್ನು ಸಾರಿ ಸಾರಿ ಹೇಳುವ ಸಾಲುಸಾಲು ದಾಖಲೆಗಳು. ಆದರೆ ಈಗ ಅಮೆರಿಕದ 33 ವರ್ಷದ ಮಹಿಳಾ ಓಟಗಾರ್ತಿ ಅಲ್ಲಿಸನ್ ಫೆಲಿಕ್ಸ್, ಉಸೇನ್ ಬೋಲ್ಟ್ ಅವರ ಎಲ್ಲ ದಾಖಲೆಗಳನ್ನು ಹಿಂದಿಕ್ಕುವ ಮೂಲಕ ಶೇಷ್ಠ ಸಾಧನೆಗೈದಿದ್ದಾರೆ.

ಕತಾರ್‌ನ ದೋಹಾದಲ್ಲಿ ನಡೆದ ಐಎಎಫ್ ವಲ್ರ್ಡ್ ಅಥ್ಲೆಟಿಕ್ ಚಾಂಪಿಯನ್‍ಶಿಪ್‍ನಲ್ಲಿ 4*400 ಮೀಟರ್ ರಿಲೆ ಓಟದಲ್ಲಿ ಪ್ರಥಮ ಸ್ಥಾನದೊಂದಿಗೆ ಬಂಗಾರದ ಪದಕಕ್ಕೆ ಫೆಲಿಕ್ಸ್ ಕೊರಳೊಡ್ಡಿದ್ದಾರೆ. ಫೆಲಿಕ್ಸ್ 12ನೇ ವಿಶ್ವ ಚಾಂಪಿಯನ್‍ಶಿಪ್ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಉಸೇನ್ ಬೋಲ್ಟ್ ಅವರನ್ನು ಹಿಂದಿಕ್ಕಿದರು. ಟೂರ್ನಮೆಂಟ್‍ನ ಕೊನೆಯ ದಿನ ಮತ್ತೊಂದು ಚಿನ್ನವನ್ನು ಗೆಲ್ಲುವುದರೊಂದಿಗೆ ಅವರ ಹೆಸರಿಗೆ 13ನೇ ಚಿನ್ನವನ್ನು ಸೇರಿಸಿದರು. ಈಗಾಗಲೇ ಫೆಲಿಕ್ಸ್, ಹಲವು ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿದ್ದು, ನಾಲ್ಕು ಒಲಿಂಪಿಕ್ ಸ್ಪರ್ಧೆಯಲ್ಲಿ ಒಂಭತ್ತು ಪದಕ ಗೆದ್ದ ಸಾಧನೆ ಅವರದ್ದು.

ಹತ್ತು ತಿಂಗಳ ಹಿಂದೆಯಷ್ಟೇ ಸಿಸೇರಿಯನ್‍ಗೆ ಒಳಗಾಗಿದ್ದ ಫೆಲಿಕ್ಸ್, ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆಯ ವೇಳೆ ಸಾಕಷ್ಟು ತೊಂದರೆ ಅನುಭವಿಸಿದ್ದರು ಕೂಡ. ಆದರೆ ಅದ್ಯಾವುದೂ ರೋಚಕ ಓಟಕ್ಕೆ ಅಡ್ಡಿಯಾಗಲಿಲ್ಲ. ಆದರೆ ಸಾಧಕಿ ಫೆಲಿಕ್ಸ್‍ಗೆ ಕ್ರೀಡಾಜಗತ್ತಿನಲ್ಲಿ ತಾವು ಕಂಡು, ಅನುಭವಿಸಿದ ತಾರತಮ್ಯ ನೀತಿ ಇನ್ನಿಲ್ಲದಂತೆ ಕಾಡುತ್ತಿತ್ತು. ಸಾಹಸಿ ಮಹಿಳಾ ಆಟಗಾರ್ತಿಯರಿಗೆ ವೇತನ ತಾರತಮ್ಯ ಮಾಡುತ್ತಿರುವ ವಿಷಯ ಹಿಂಸಿಸುತ್ತಿತ್ತು. ಇದನ್ನು ಸ್ವತಃ ಅನುಭವಿಸಿದ್ದ ಫೆಲಿಕ್ಸ್, ವಿಶ್ವದ ಮಹಿಳಾ ಕ್ರೀಡಾಪಟುಗಳಿಗಾಗಿ ಆಗಸ್ಟ್‍ನಲ್ಲಿ ಹೋರಾಟ ನಡೆಸಿದ್ದರು.

ಪ್ರಸಿದ್ಧ ನೈಕ್ ಸಂಸ್ಥೆ, ಗರ್ಭಿಣಿ ಕ್ರೀಡಾಪಟುಗಳು ಮತ್ತು ಹೊಸ ತಾಯಂದಿರಿಗೆ ಅವರ ಸಹವರ್ತಿಗಳಿಗಿಂತ ಕಡಿಮೆ ಸಂಬಳ ನೀಡುತ್ತಿರುವುದನ್ನು ಮನಗಂಡಿದ್ದರು. ನೈಕ್ ಕಂಪನಿಯ ನಿಯಮಾವಳಿಯಂತೆ ಗರ್ಭಿಣಿ ಆಟಗಾರ್ತಿಯರು ಮತ್ತು ತಾಯಂದಿರಿಗೆ ಶೇಕಡಾ 70ಕ್ಕಿಂತ ಕಡಿಮೆ ಹಣ ಪಾವತಿಸಲಾಗುತ್ತದೆ. ನೈಕ್ ಕಂಪನಿಯ ಪ್ರಾಯೋಜಕರಾಗಿದ್ದ ಫೆಲಿಕ್ಸ್, ತಾಯಿಯಾಗಿದ್ದರಿಂದ ಶೇ. 70ಕ್ಕಿಂತ ಕಡಿಮೆ ಸಂಬಳ ಪಾವತಿ ಮಾಡಲಾಗಿತ್ತು. ಈ ಬಗ್ಗೆ ಇತರೆ ಮಹಿಳಾ ಕ್ರೀಡಾಪಟುಗಳ ಗುಂಪಿನೊಂದಿಗೆ ಫೆಲಿಕ್ಸ್ ಚರ್ಚಿಸಿದ್ದರು. ನೈಕ್ ನೀತಿ ಗರ್ಭಧಾರಣೆ ನಂತರ ಕನಿಷ್ಠ 18 ತಿಂಗಳವರೆಗೆ ಪ್ರಾಯೋಜಕರ ಮೇಲೆ ಆರ್ಥಿಕವಾಗಿ ಪರಿಣಾಮ ಬೀರುವುದಿಲ್ಲ ಎಂದು ಹೊಸ ನೀತಿ ಹೇಳುತ್ತದೆ ಎಂಬುದನ್ನು ಖಚಿತಪಡಿಸಿಕೊಂಡರು. ನಂತರ ನೈಕ್ ನಿಯಮಾವಳಿಯ ವಿರುದ್ಧ ವೇತನ ತಾರತಮ್ಯದ ವಿರುದ್ಧ ಹೋರಾಟ ಆರಂಭಿಸಿದರು.

ಮಹಿಳಾ ಕ್ರೀಡಾಪಟುಗಳಿಗೆ ಆಗುತ್ತಿರುವ ಅನ್ಯಾಯ ಹಾಗೂ ತಾರತಮ್ಯ ಹೋಗಲಾಡಿಸಲು ಮತ್ತು ಸಮಾನ ವೇತನಕ್ಕಾಗಿ ಹೋರಾಟಗಳು ನಡೆಯುತ್ತಲೇ ಇವೆ. ಇದರಲ್ಲಿ ಮೇಗನ್ ರಾಪಿನೋ ತಂಡ, 2019ರಲ್ಲಿ ನಡೆದ ವಿಶ್ವಕಪ್ ಪ್ರಶಸ್ತಿಯ ಮೊದಲು ಮತ್ತು ನಂತರದ ಸಮಯದಲ್ಲಿ ಪುರುಷರು ಮತ್ತು ಮಹಿಳೆಯರ ಫುಟ್ಬಾಲ್ ತಂಡದ ನಡುವೆ ನಡೆದ ವೇತನ ತಾರತಮ್ಯದ ಮೇಲೆ ಬೆಳಕು ಚೆಲ್ಲುತ್ತದೆ. ಮಹಿಳಾ ಮತ್ತು ಪುರುಷ ಸಹವರ್ತಿ ಕ್ರೀಡಾಪಟುಗಳ ವೇತನದಲ್ಲಿ ತಾರತಮ್ಯ ಮಾಡುತ್ತಿರುವ ವಿಷಯ ಈಗ ಗುಟ್ಟಾಗಿ ಉಳಿದಿಲ್ಲ. ವೇತನ ತಾರತಮ್ಯ ಎಲ್ಲಾ ಕ್ಷೇತ್ರಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಆದರೆ ಅದು ಕ್ರೀಡಾಜಗತ್ತಿಗೂ ಅಂಟಿಕೊಂಡಿರುವುದು ಶೋಚನೀಯ. ಅದರಲ್ಲೂ ಗರ್ಭಿಣಿ ಹಾಗೂ ತಾಯಂದಿರಾದ ನಂತರ ಕೆಲಸ ಮಾಡುವ ಮಹಿಳೆಯರು, ಕೆಲಸಕ್ಕೆ ಯೋಗ್ಯರಾಗಿರುವುದಿಲ್ಲ ಎಂದೇ ಯೋಚಿಸಲಾಗುತ್ತದೆ. ಆದರೆ ಅಲ್ಲಿಸನ್ ಫೆಲಿಕ್ಸ್ ಇದೆಲ್ಲವನ್ನೂ ಸುಳ್ಳಾಗಿಸಿ ಬಿಟ್ಟರು. ದೋಹಾದಲ್ಲಿ ನಡೆದ ಒಲಿಂಪಿಕ್‍ನಲ್ಲಿ ಗೆಲುವು ಸಾಧಿಸುವ ಮೂಲಕ ತಾಯಿಯಾದ ಬಳಿಕವೂ ಮಹಿಳೆಯರು ಸ್ಟ್ರಾಂಗ್ ಮತ್ತು ಹೆಲ್ತಿ ಅಂಡ್ ಫಿಟ್ ಆಗಿರುತ್ತಾರೆ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಈಗ ಸಮಾನ ವೇತನಕ್ಕಾಗಿ ನೈಕ್ ಸಂಸ್ಥೆಯ ನಿಯಮಾವಳಿ ವಿರುದ್ಧ ನಡೆಸಿದ ಫೆಲಿಕ್ಸ್ ಹೋರಾಟ ಸಫಲವಾಗಿದ್ದು, ಎಲ್ಲ ಆಟಗಾರ್ತಿ ತಾಯಂದಿರಲ್ಲಿ ಸಂತಸ ತಂದಿದೆ. ಫೆಲಿಕ್ಸ್ ಓಟ ಮತ್ತು ಹೋರಾಟದಲ್ಲಿ ವಿಜಯಿಯಾಗಿದ್ದಾರೆ. ನೈಕ್ ಜಗತ್ತಿನ ಎಲ್ಲ ಮಹಿಳೆಯರಿಗೆ ಭರವಸೆ ನೀಡಿದೆ. ಇನ್ನು ಫೆಲಿಕ್ಸ್ ಈಗ 2020ರ ಬೇಸಿಗೆಯಲ್ಲಿ ನಡೆಯಲಿರುವ ಟೋಕಿಯೋ ಒಲಿಂಪಿಕ್‍ಗಾಗಿ ತಯಾರಿ ನಡೆಸುತ್ತಿದ್ದಾರೆ. 2020ರಲ್ಲೂ ಚಿನ್ನವನ್ನು ತನ್ನದಾಗಿಸಿಕೊಳ್ಳಲಿದ್ದಾರೆ ಎಂಬ ವಿಶ್ವಾಸ ಮೂಡಿಸಿದ್ದಾರೆ. ಫೆಲಿಕ್ಸ್ ಒಬ್ಬ ಪ್ರತಿಭಾವಂತ ಆಟಗಾರ್ತಿ. ತನ್ನ 18ನೇ ವರ್ಷ ವಯಸ್ಸಿನಲ್ಲೇ ಒಲಿಂಪಿಕ್ ಪದಕ ತಮ್ಮದಾಗಿಸಿಕೊಂಡಿದ್ದರು. ಈಗ ಟೋಕಿಯೋ ಒಲಿಂಪಿಕ್‍ನತ್ತ ಚಿತ್ತ ನೆಟ್ಟಿದ್ದಾರೆ. ಈಗ ಫೆಲಿಕ್ಸ್ ಹೋರಾಟ, ಪ್ರತಿಭೆ ಮತ್ತು ಕ್ರಿಯಾಶೀಲ ಮಹಿಳೆಯರ ದೃಢ ಹೆಜ್ಜೆಗೆ ಕಾರಣವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ಬಳಿಕ ಒಡಿಶಾದ ಕರಡು ಮತದಾರರ ಪಟ್ಟಿ ಪ್ರಕಟ : 20 ಲಕ್ಷ ಹೆಸರುಗಳು ಡಿಲೀಟ್

ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಗಣತಿ ಹಂತದ ಬಳಿಕ ಚುನಾವಣಾ ಆಯೋಗ ಭಾನುವಾರ (ಜು.5) ಒಡಿಶಾದ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು, ಇದರಲ್ಲಿ 20 ಲಕ್ಷಕ್ಕೂ ಹೆಚ್ಚು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...

SIR: ಟಾರ್ಗೆಟ್ ಮತ್ತು ಒತ್ತಡದ ಕೆಲಸದಿಂದ ಮೂವರು ಸಿಬ್ಬಂದಿ ಸಾವು

ಕರ್ನಾಟಕದಲ್ಲಿ ನಡೆಯುತ್ತಿರುವ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯು ಕೆಳಹಂತದ ನೌಕರರ ಪಾಲಿಗೆ ಮರಣಶಾಸನವಾಗುತ್ತಿದೆಯೇ ಎಂಬ ಗಂಭೀರ ಪ್ರಶ್ನೆಯೊಂದು ಎದ್ದಿದೆ. ಅಧಿಕಾರಿಗಳು ನೀಡುತ್ತಿರುವ ಅತಿಯಾದ ಒತ್ತಡ ಮತ್ತು ಟಾರ್ಗೆಟ್ ಬೆನ್ನತ್ತುವ ಧಾವಂತದಿಂದಾಗಿ...

ಖಮೇನಿ ಅಂತ್ಯಕ್ರಿಯೆ ವೇಳೆ ಟ್ರಂಪ್ ಉದ್ಧಟತನದ ಹೇಳಿಕೆ: “ಇತಿಹಾಸ, ಗೌರವವಿಲ್ಲದ ದೇಶ ಅಮೆರಿಕ” ಎಂದು ಇರಾನ್ ತೀಕ್ಷ್ಣ ತಿರುಗೇಟು

ಟೆಹ್ರಾನ್: ಇರಾನ್‌ನ ಮಾಜಿ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ನಿಧನದ ನಂತರ ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಭಾರೀ ವಾಕ್ಸಮರ ಉಂಟಾಗಿದೆ. ಖಮೇನಿ ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಒಟ್ಟುಗೂಡಿರುವ ಇರಾನ್‌ನ ಇಡೀ...

ಮ್ಯಾಚ್ ಮಧ್ಯೆ ಕಾಂಡೊಮ್ ಜಾಹೀರಾತು: ಬಿಸಿಸಿಐ ವಿರುದ್ಧ ಕಿಡಿಕಾರಿದ ಮಾಜಿ ಕ್ರಿಕೆಟಿಗ, TMC ಸಂಸದ ಕೀರ್ತಿ ಆಜಾದ್

ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ಅಂತರರಾಷ್ಟ್ರೀಯ ಪಂದ್ಯದ ನೇರ ಪ್ರಸಾರದ ವೇಳೆ ಕಾಂಡೊಮ್ ಜಾಹೀರಾತುಗಳನ್ನು ಪ್ರಸಾರ ಮಾಡಿದ್ದನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಮತ್ತು ಮಾಜಿ...

ಒಂದೇ ಒಂದು ಇಟ್ಟಿಗೆ ಇಟ್ಟಿಲ್ಲ : ಕಳೆದ ಆರು ವರ್ಷಗಳಿಂದ ಕಾಗದದ ಮೇಲೆಯೇ ಕಾರ್ಯ ನಿರ್ವಹಿಸುತ್ತಿರುವ 100 ಹಾಸಿಗೆಗಳ ಆಸ್ಪತ್ರೆ!

ಮಧ್ಯ ಪ್ರದೇಶದ ಇಂದೋರ್‌ನ ಖಜರಾನಾದಲ್ಲಿ ಮಂಜೂರಾದ 100 ಹಾಸಿಗೆಗಳ ಸಿವಿಲ್ ಆಸ್ಪತ್ರೆಯು ಕಳೆದ 6 ವರ್ಷಗಳಿಂದ ಕೇವಲ ಕಾಗದದ ಮೇಲಷ್ಟೇ (ದಾಖಲೆಗಳಲ್ಲಿ) ಅಸ್ತಿತ್ವದಲ್ಲಿರುವುದು ವರದಿಯಾಗಿದೆ. ಈ ವಿಲಕ್ಷಣ ಮತ್ತು ಆಘಾತಕಾರಿ ಆಡಳಿತಾತ್ಮಕ ವೈಫಲ್ಯದ ಪ್ರಕರಣವು...

ವೋಟ್‌ಯಿಂದ ಹಿಡಿದು ಮಂದಿರದ ಚಂದಾದವರೆಗೆ ಬಿಜೆಪಿಯದ್ದು ಬರೀ ‘ಚೋರಿ’ ಎಂದ ಕಾಂಗ್ರೆಸ್

ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆದಿದೆ ಎನ್ನಲಾದ ದೇಣಿಗೆ ದುರುಪಯೋಗದ ವಿಚಾರವಾಗಿ ಭಾನುವಾರ ಕಾಂಗ್ರೆಸ್ ಪಕ್ಷವು ಬಿಜೆಪಿ-ಆರ್‌ಎಸ್‌ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಇದು ಅವರದೇ ಆದ ಇಕೋ ಸಿಸ್ಟಮ್‌ನ ದೊಡ್ಡ "ಹಗರಣ"ವಾಗಿದ್ದು, ಈ...

ಮುಸ್ಲಿಮರನ್ನು ಮಾದಕ ದ್ರವ್ಯ, ಭಯೋತ್ಪಾದನೆಗೆ ಲಿಂಕ್ ಮಾಡಿ ಪೋಸ್ಟ್: ಕೇರಳ ಹಿಂದೂ ಐಕ್ಯ ವೇದಿಕೆ ಮುಖ್ಯಸ್ಥ ಆರ್‌ವಿ ಬಾಬು ವಿರುದ್ಧ ಪ್ರಕರಣ ದಾಖಲು

ಕೊಚ್ಚಿ: ಮುಸ್ಲಿಂ ಸಮುದಾಯ ಮತ್ತು ಅದರ ಧಾರ್ಮಿಕ ಮುಖಂಡರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಹಾಗೂ ಕೋಮು ಪ್ರಚೋದನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಕ್ಕಾಗಿ ಕೇರಳದ ಹಿಂದೂ ಐಕ್ಯ ವೇದಿಕೆಯ ರಾಜ್ಯ ಅಧ್ಯಕ್ಷ ಆರ್.ವಿ. ಬಾಬು...

ಇರಾನ್ ಜನರು ಅವರನ್ನು ದ್ವೇಷಿಸುತ್ತಾರೆ ಅಂದುಕೊಂಡಿದ್ದೆ: ಖಮೇನಿ ಅಂತ್ಯಕ್ರಿಯೆಯ ಜನಸಾಗರ ನೋಡಿ ಶಾಕ್ ಆದ ಟ್ರಂಪ್

ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಲಕ್ಷಾಂತರ ಜನರು ಭಾಗವಹಿಸಿ ಕಣ್ಣೀರು ಹಾಕುತ್ತಿರುವುದನ್ನು ನೋಡಿ ತಮಗೆ ತೀವ್ರ ಆಘಾತವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ....

‘ನಿಮ್ಮ ಮೌನ ಯುವಜನರನ್ನು ಕೇವಲ ಕೀಟಗಳಂತೆ ನೋಡುತ್ತೀರಿ ಎಂಬುದಕ್ಕೆ ಒಪ್ಪಿಗೆಯಾಗಿದೆ’: ಮೋದಿಗೆ ಬಹಿರಂಗ ಪತ್ರ ಬರೆದ ಸಿಜೆಪಿ

"ಈ ದೇಶದ ಯುವಜನರನ್ನು ನೀವು ಕೇವಲ ನಿರ್ಲಕ್ಷಿಸಬೇಕಾದ ಕೀಟಗಳಂತೆ ನೋಡುತ್ತಿದ್ದೀರಾ?" ಎಂದು ಪ್ರಶ್ನಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶನಿವಾರ (ಜುಲೈ 4) ಬಹಿರಂಗ ಪತ್ರ ಬರೆದಿದೆ. ದೇಶದ...

ಮಮತಾ ಬ್ಯಾನರ್ಜಿಗೆ ಬಿಗ್ ಶಾಕ್: ನೇಮಕಗೊಂಡ ತಿಂಗಳಲ್ಲೇ ಟಿಎಂಸಿ ರಾಜ್ಯಾಧ್ಯಕ್ಷೆ ಚಂದ್ರಿಮಾ ಭಟ್ಟಾಚಾರ್ಯ ರಾಜೀನಾಮೆ

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಹಿನ್ನೆಲೆಯಲ್ಲಿ, ಅತ್ಯಂತ ನಿರ್ಣಾಯಕವಾದ ಸಾಂಸ್ಥಿಕ ಜವಾಬ್ದಾರಿಗೆ ನೇಮಕಗೊಂಡ ಕೇವಲ ಒಂದು ತಿಂಗಳ ಒಳಗಾಗಿಯೇ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ರಾಜ್ಯ ಘಟಕದ ಅಧ್ಯಕ್ಷೆ ಚಂದ್ರಿಮಾ...