- Advertisement -
- Advertisement -
ಉನ್ನತ ಹಂತದ ಸಚಿವರ ಮತ್ತು ಅಧಿಕಾರಗಳ ಸಭೆ ನಡೆಯುತ್ತಿದ್ದು ಈ ವಾರದಲ್ಲಿ ಪ್ರವಾಹ ಪರಿಹಾರವನ್ನು ಕೇಂದ್ರ ಸರ್ಕಾರ ಕೊಡುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎನ್.ಡಿ.ಆರ್.ಎಫ್ ಹಣ ಬಿಡುಗಡೆ ಮಾಡಬೇಕಾದರೆ ಅದರದೇ ಆದ ನಿಯಮಾವಳಿಗಳಿವೆ ಅದಕ್ಕಾಗಿ ಹಣ ಬಿಡುಗಡೆ ತಡವಾಗಿದೆ. ಕಳೆದ ಬಾರಿ ಪ್ರವಾಹ ಬಂದಾಗಲೂ ಸಹ ಕೇಂದ್ರ ಸರ್ಕಾರ ಒಂದೂವರೆ ತಿಂಗಳ ನಂತರ ಹಣ ಬಿಡುಗಡೆ ಮಾಡಿದ್ದರು ಎಂದಿದ್ದಾರೆ.
ಕಳೆದ ಬಾರಿ ರಾಜ್ಯ ಸರ್ಕಾರ ೧೭ಸಾವಿರ ಕೋಟಿ ಮನವಿ ಮಾಡಿತ್ತು. ಮೊದಲು ಕೇಂದ್ರ ಸರ್ಕಾರ ೫೦೦ ಕೋಟಿ ರೂ ಬಿಡುಗಡೆ ಮಾಡಿದ್ದರು. ನಂತರ ಒಟ್ಟು ೧೪೦೦ ಕೋಟಿ ಹಣ ಬಂದಿತ್ತು ಎಂದಿದ್ದಾರೆ.