ಮದುವೆ ಮನೆಯಲ್ಲಿ ತಟ್ಟೆಗಳನ್ನು ಕೊಂಡೊಯ್ಯವಾಗ ಅತಿಥಿಗಳಿಗೆ ತಾಗಿತೆಂಬ ಕಾರಣಕ್ಕೆ ವೇಟರ್ನನ್ನು ಥಳಿಸಿ ಹತ್ಯೆಗೈದಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಘಾಝಿಯಾಬಾದ್ನಲ್ಲಿ ಕಳೆದ ತಿಂಗಳು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮೃತ ವ್ಯಕ್ತಿಯನ್ನು ಪಂಕಜ್ ಎಂದು ತಿಳಿದು ಬಂದಿದೆ. ನವೆಂಬರ್ 17ರಂದು ಗಾಝಿಯಾಬಾದ್ನ ಅಂಕುರ್ ವಿವಾಹ್ಸ್ ಸಿಜಿಎಸ್ ವಾಟಿಕಾದಲ್ಲಿ ಈ ಘಟನೆ ನಡೆದಿದೆ ಎಂದು ವರದಿಗಳು ಹೇಳಿವೆ. ವಿವಾಹ ಕಾರ್ಯಕ್ರಮದಲ್ಲಿ ಬಳಸಿದ್ದ ತಟ್ಟೆಗಳನ್ನು ಪಂಕಜ್ ಹೊತ್ತೊಯ್ಯುತ್ತಿದ್ದ. ಈ ವೇಳೆ ಅದು ರಿಷಭ್, ಮನೋಜ್ ಹಾಗೂ ಅಮಿತ್ ಎಂಬವರಿಗೆ ತಾಗಿದೆ.
ಈ ವಿಚಾರಕ್ಕೆ ತಗಾದೆ ತೆಗೆದ ಮೂವರು ಪಂಕಜ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಪಂಕಜ್ ಮೃತಪಟ್ಟ ಬಳಿಕ ಆರೋಪಿಗಳು ಮೃತದೇಹವನ್ನು ಹತ್ತಿರದ ಅರಣ್ಯವೊಂದರಲ್ಲಿ ಅವಿತಿಟ್ಟಿದ್ದರು. ಘಟನೆ ಬೆಳಕಿಗೆ ಬಂದ ನಂತರ ಪೊಲೀಸರು ನವೆಂಬರ್ 18ರಂದು ಮೃತದೇಹವನ್ನು ವಶಪಡಿಸಿಕೊಂಡಿದ್ದಾರೆ. ಮೂವರು ಆರೋಪಿಗಳನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ : ಲಿವ್-ಇನ್ ಸಂಬಂಧ ಅಪಾಯಕಾರಿ ಕಾಯಿಲೆ, ಇದರ ವಿರುದ್ಧ ಕಾನೂನು ತನ್ನಿ: ಬಿಜೆಪಿ ಸಂಸದ ಆಗ್ರಹ