Homeಕರ್ನಾಟಕಎದಿ ಬ್ಯಾನಿಯ ಹಾಡಿ ತೋರಿದ ಚೆನ್ನಣ್ಣ ವಾಲೀಕಾರರ ಸ್ಮರಣೆ - ಭಗತರಾಜ ನಿಜಾಮಕಾರಿ

ಎದಿ ಬ್ಯಾನಿಯ ಹಾಡಿ ತೋರಿದ ಚೆನ್ನಣ್ಣ ವಾಲೀಕಾರರ ಸ್ಮರಣೆ – ಭಗತರಾಜ ನಿಜಾಮಕಾರಿ

- Advertisement -
- Advertisement -

ಮರದ ಮೇಲಿನ ಗಾಳಿಗೆ ಹಕ್ಕಿಯೊಂದು ರೆಕ್ಕೆ ಬಿಚ್ಚಿ `ಕರಿತೆಲೆ ಮಾನವನ ಜೀಪದ’ ಹಾಡು ಹಾಡುತ್ತಿತ್ತು. `ಬಂಡೆದ್ದ ದಲಿತರ ಬೀದಿಹಾಡುಗಳು’, `ಪ್ಯಾಂಥರ್ಸ್ ಪದ್ಯಗಳು’, `ಧಿಕ್ಕಾರದ ಹಾಡುಗಳು’, `ಡಪ್ಪಿನಾಟ’ಗಳೊಂದಿಗೆ ಆ ಭೀಮಕಾಯ `ಬೆಳ್ಯ’ ಕುಣಿಯುತ್ತಲಿದ್ದ. ದಣಿವರಿವು ಅವನಿಗೆ ಗೊತ್ತಿಲ್ಲ. ಊಟಕ್ಕೆ ಕರೆದರೆ ಶತಮಾನದ ಸೇಡು ತೀರಿಸಿಕೊಳ್ಳುತಿದ್ದ. ರಾಯಚೂರಿನ ಕಡುಬಿಸಿಲಲ್ಲಿ ಬರೆಯಲು ಕುಳಿತರೆ, ಬರಿಮೈ, ಸುರಿವ ಬೆವರು, ಬಣ್ಣಬಣ್ಣದ ಹೂವುಗಳ ಲುಂಗಿ, ಬೆರಳಲ್ಲಿ ಪೆನ್ನು, ಸರಸರನೆ ಬಿಳಿಹಾಳೆಯ ತುಂಬ ಹಾವಿನಂತೆ ಹರಿದಾಡುತ್ತಿತ್ತು. ಹೆಪ್ಪುಗಟ್ಟಿದ ಸಮುದ್ರ, ಬೋಧಿವೃಕ್ಷದ ಹೂವು ಅರಳುತ್ತಿದ್ದವು.

ಇಂತಪ್ಪ ನಮ್ಮ ಚೆನ್ನಣ್ಣ ವಾಲೀಕಾರರು ಮೂಲತಃ ಜಾನಪದ ಲೋಕದ ಮನುಷ್ಯ. ಜಾನಪದದಲ್ಲಿಯೇ ಸಂಶೋಧನೆ ಮಾಡುತ್ತಿದ್ದರೆ ಅವರಿಗೆ ದೊಡ್ಡ ಪ್ರಶಸ್ತಿ ತಪ್ಪದೇ ಬರುತ್ತಿತ್ತು. ಆದರೆ ಅವರಿಗೆ ಪ್ರಶಸ್ತಿ, ಬಿರುದು-ಬಾವಲಿಗಳಿಗಿಂತ ತನ್ನ ಜನರ ನೋವಿಗೆ ಮಿಡಿಯುವ ಪ್ರಾಣಮಿತ್ರನಾಗುವುದು ಮುಖ್ಯವಾಗಿತ್ತು. “ಯಾವ ಅP್ಷÀರದಿಂದ ಬರೆದು ತೋರಿಸಲಯ್ಯ ನನ್ನ ಜನಗಳಿಗಾದ ಎದೆಯ ಬ್ಯಾನಿ” ಎಂದು ಕೈಯಲ್ಲಿ ಡಪ್ಪು ಹಿಡಿದು, ಸಾರ್ವಜನಿಕ ವೇದಿಕೆಗಳ ಮೇಲೆ ಧ್ವನಿ ಎತ್ತಿ ಹಾಡುತ್ತಿದ್ದ ಚೆನ್ನಣ್ಣ, ಹೈದ್ರಾಬಾದ ಕರ್ನಾಟಕ ಪ್ರದೇಶದ ದಲಿತರ ದನಿಯಾಗಿ ಹಗಲಿರುಳು ಶೋಷಿತರ ಬಗ್ಗೆ ಚಿಂತಿಸುತ್ತಿದ್ದರು. ಅವರ ಬಗ್ಗೆ ಹಲವಾರು ಕವನ, ಕಾವ್ಯ, ಕಥೆ, ಕಾದಂಬರಿ, ನಾಟಕ, ಪ್ರವಾಸಕಥನ ಬರೆದುದಲ್ಲದೆ ಅವರೊಂದಿಗೆ ಪ್ರಾಮಾಣಿಕವಾಗಿ ಬದುಕಿದರು. ದೇಶದಲ್ಲಿರುವ ಅಸಹಿಷ್ಣುತೆ, ಜಾತೀಯತೆ, ಶೋಷಕರ ಬಲ, ಅವನತಿಗೆ ಜಾರುತ್ತಿರುವ ಮನುಕುಲದ ಮೌಲ್ಯಗಳನ್ನು ತಮ್ಮ ಸಾಹಿತ್ಯ ಬೋಧನೆಗಳಲ್ಲಿ ತರುತ್ತಿದ್ದರು.

ಧರ್ಮಸ್ಥಳದಲ್ಲಿ ಜರುಗುತ್ತಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ (1979) ದಲಿತರಿಗಾಗಿ ಒಂದು ಗೋಷ್ಠಿ ಏರ್ಪಡಿಸಲು ವಿನಂತಿಸಿಕೊಂಡರೆ, ಅಂದಿನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು `ಸಾಹಿತ್ಯದಲ್ಲಿ ದಲಿತ-ಬಲಿತ-ಕಲಿತ ಎನ್ನುವುದಿಲ್ಲ’ ಎಂದು ಹೀಯಾಳಿಸಿದರು. ಆಗ ಜಂಬಣ್ಣ ಅಮರಚಿಂತ, ಬೋಳಬಂಡೆಪ್ಪ ಮತ್ತು ವಾಲೀಕಾರ ಧಿಕ್ಕಾರದ ಕೂಗು ಪತ್ರಿಕೆಯಲ್ಲಿ ಬಂದಿತು. ಸಾರಸ್ವತ ಲೋಕದಲ್ಲಿ ಅಲ್ಲೋಲ ಕಲ್ಲೋಲ ಎದ್ದಿತು. ಅದುವೇ ಬಂಡಾಯ ಸಾಹಿತ್ಯ ಚಳವಳಿಯ ಹುಟ್ಟಿಗೆ ಪ್ರೇರಣೆಯಾಯಿತು. ಈ ಚಳವಳಿಯ ಹುಟ್ಟಿಗೆ ಕಾರಣರಾದ ರಾಯಚೂರಿನ ಮೂವರು ಸಾಹಿತಿಗಳಲ್ಲಿ ಮೊದಲಿಬ್ಬರು ಬಾರದ ಲೋಕಕ್ಕೆ ಹೋಗಿಯಾಗಿದೆ.

ಈಗ ಮೂರನೆಯವರಾದ ಚೆನ್ನಣ್ಣ 24-11-2019 ರಂದು ರಾತ್ರಿ ಅವರನ್ನು ಕೂಡಿಕೊಂಡರು. ಕಲಬುರ್ಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಶಂಕರವಾಡಿ ಗ್ರಾಮದ ತಳವಾರ ಜನಾಂಗದ ಸಾಬಮ್ಮ-ಧೂಳಪ್ಪನ ಮಗನಾಗಿ (1943) ಚೆನ್ನಣ್ಣ ಜನಿಸಿದರು. ರಾಯಚೂರಿನ ಹಮದರ್ದ್ ಶಾಲೆಗೆ ಕನ್ನಡ ಮಾಸ್ತರರಾಗಿ ಬಂದು ಸೇರಿದರು. ಬಳಿಕ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪಡೆದು, ರಾಯಚೂರಿನ ಎಲ್.ವಿ.ಡಿ. ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಬಳಿಕ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರರಾಗಿ ನಿವೃತ್ತರಾದರು. ಅವರು ತಮ್ಮ ಸೃಜನಶೀಲ ಬರವಣಿಗೆ ಮತ್ತು ಪ್ರಗತಿಪರ ಚಿಂತನೆಗಳಿಂದಾಗಿ ನಾಡಿನ ಎಲ್ಲ ಭಾಗದ ಲೇಖಕರಿಗೂ ಸಾಹಿತ್ಯಾಭಿಮಾನಿಗಳಿಗೂ ಚಿರಪರಿಚಿತರು. ಕನ್ನಡ ಸಾಹಿತ್ಯದಲ್ಲಿ ದಲಿತ ಪ್ರಜ್ಞೆ ಮತ್ತು ಬಂಡಾಯ ಚಿಂತನೆಗೆ ಅಡಿಪಾಯ ಹಾಕಿದವರು. ಈ ಭಾಗದ ಜನಪದ ಸಾಹಿತ್ಯಕ್ಕೆ ಜೀವ ತುಂಬಲು, ಹಗಲಿರುಳು ಎನ್ನದೆ ತಿರುಗಾಡಿ ಗ್ರಾಮದೇವತೆಗಳ ಬಗ್ಗೆ ಅಧ್ಯಯನ ಮಾಡಿ ಪಿಹೆಚ್.ಡಿ., ಪಡೆದವರು. ದೇವದಾಸಿಯವರ, ಆದಿವಾಸಿಗಳ, ಜೋಗತಿಯವರ ಜೀವನವನ್ನು ಅಭ್ಯಸಿಸಿ, ಕೆಳಜನರ ನೋವು ಕುಂಡುಂಡ, ಹಿಂದುಳಿದ ವರ್ಗಗಳ ದಲಿತ ಸಾಹಿತಿಯೆಂದು ಗುರುತಿಸಿಕೊಂಡವರು. ಎಂ.ಎಲ್.ಸಿ.ಯಾಗಿಯೊ, ವಿಶ್ವವಿದ್ಯಾಲಯವೊಂದರ ಉಪ-ಕುಲಪತಿಯಾಗಿ ನೇಮಕವಾಗುವ ಅವಕಾಶ ಅವರಿಗಿತ್ತು. ರಾಯಚೂರಿನಲ್ಲಿ ನಡೆದ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗುವ ಅವಕಾಶವಿತ್ತು. ಇದರಿಂದ ವಂಚಿತರಾದರು. ಯಾವುದನ್ನೂ ಬಯಸದೆ ಇದ್ದಂತೆ ಇರಲಿ ಬಂದಂತೆ ಬರಲಿ ಎಂದು ಬದುಕಿದರು.

ಚೆನ್ನಣ್ಣ `ಮರದ ಮೇಲಿನ ಗಾಳಿ’ ಕವನ ಸಂಕಲನದಿಂದ ಸಾಹಿತ್ಯ ರಚನೆ ಪ್ರಾರಂಭಿಸಿ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿದರು. ಕಾವ್ಯ ಸಣ್ಣಕಥೆ, ವಚನ, ಕಾದಂಬರಿ, ನಾಟಕ, ಡಪ್ಪಿನ ಹಾಡು, ಮೊಹರಂ ಪದಗಳು, ಪ್ರವಾಸ ಕಥನಗಳು, ಸಂಶೋಧನೆ ಮುಂತಾದ ಪ್ರಕಾರಗಳಲ್ಲಿ 66 ಕೃತಿಗಳನ್ನು ಪ್ರಕಟಿಸಿದರು. ಇವರ `ಕರಿತಲಿ ಮಾನವನ ಜೀಪದ’ (ಕಾವ್ಯ) `ಬೆಳ್ಯ’ (ಕಾದಂಬರಿ) ಅಪರೂಪದ ಕೃತಿಗಳು. ಸಾವಿರ ಪುಟಗಳ `ವೋಮಾ-ವೋಮ’ವು, ಎಲ್ಲೂ ಅರ್ಧವಿರಾಮ ಪೂರ್ಣವಿರಾಮವಿಲ್ಲದೆ, ಯಾವುದೇ ಅಧ್ಯಾಯಗಳಿಲ್ಲದೆ ಸಾಗುವ ಮಹಾಕಾವ್ಯ. ಚೆನ್ನಣ್ಣ ಇತ್ತೀಚೆಗೆ ಬುದ್ಧನ ತತ್ವಗಳಿಗೆ ಮಾರುಹೋಗಿದ್ದರು. ಧರ್ಮ ಎಂದರೆ ಮನುಷ್ಯ. ಮನುಷ್ಯನೆಂದರೆ ಸಹಿಷ್ಣುತೆಯ ತೋಟ ಎನ್ನುತ್ತಿದ್ದರು. ಜೀವನದ ಕೊನೆಯ ದಿನಗಳಲ್ಲಿ ಬುದ್ಧನ ಕುರಿತು ಕೃತಿ ರಚನೆಯಲ್ಲಿ ತೊಡಗಿಸಿಕೊಂಡಿದ್ದರು.

ಚೆನ್ನಣ್ಣ ಈ ಭಾಗದ ಸೃಜನಶೀಲ ದೈತ್ಯ ಲೇಖಕರು. ಆದರೆ ಅವರ ಸಾಹಿತ್ಯವನ್ನು ಓದುವ ವ್ಯವಧಾನ ಕಳೆದುಕೊಂಡಿರುವ ಪ್ರಸಿದ್ಧ ಲೇಖಕರು ಅವರ ಬಗ್ಗೆ ಉದಾಸೀನ ತಾಳಿದರು. ಕೆಲವು ಮಹನೀಯರು ಅವರ `ಮ್ಯೋಮಾ-ಮ್ಯೋಮ’ವನ್ನು ತಲೆದಿಂಬಿಗೆ ಹೋಲಿಸಿದರು. ಚೆನ್ನಣ್ಣ ಓದಲು ಕಳುಹಿಸಿದ ಕೃತಿಯನ್ನು ಕೆಲವರು ತಾವು ಓದದೆ ತಮ್ಮ ವಿದ್ಯಾರ್ಥಿನಿಯರಿಗೆ ಕೊಟ್ಟು ಹೀಯಾಳಿಸುತ್ತಿದ್ದರು. ಹೈದ್ರಾಬಾದ್-ಕರ್ನಾಟಕ ಪ್ರದೇಶದ ಪ್ರಸಿದ್ಧ ಲೇಖಕರು ಚೆನ್ನಣ್ಣನವರ ಕೃತಿಯ ಬಗ್ಗೆ ಮಾತಾಡದೆ ಅವರ ವ್ಯಕ್ತಿಗತ ಸಂಗತಿಗಳನ್ನೇ ಹೇಳುತ್ತಿದ್ದರು. ಆದರೂ ಚನ್ನಣ್ಣ ನಗುನಗುತ್ತಲೆ ಕೊನೆಯ ಉಸಿರು ಇರುವ ಶುದ್ಧಮನಸ್ಸಿನ ಬದ್ಧ ಲೇಖಕರಾಗಿ ಉಳಿದರು.

ಥಟ್ ಅಂತ ನೋಡಿದ ಕ್ಷಣ
ಬಯಲಾಟದ ಭೀಮನು
ದೊಡ್ಡಾಟದ ಬಕಾಸುರನು
ನಾಟಕದ ಖಳನಾಯಕನು
ಸ್ವಲ್ಪ ಸಮೀಪ ಹೋದರೆ-
ಗೆಳೆಯರೆ ಮಾವಂದಿರರು
ಮಕ್ಕಳಿಗೆ ಚಂದಮಾಮಾ ಇವನು

ಇನ್ನೂ ಹತ್ತಿರ ಹೋಗಿ ಇಣುಕಿದರೆ-
ಜನಪದ ಲೋಕವೇ ತೆರೆದುಕೊಳ್ಳುತ್ತದೆ
ಕಲ್ಲು ದೇವ-ದೇವತೆಯರಿಗೆ ಮಾತು ಬರುತ್ತದೆ
ಕಳಸ ಹೊತ್ತ ಗುಡಿಗಳು ಏಳುತ್ತವೆ
ನಮ್ಮ-ನಿಮ್ಮ ನಡುವೆ ಇರುವ ಇವನು
ಜೀವಂತ-ಜೀವಸೆಲೆ ಹುಡುಕುತ್ತಿರುವ ಜಲಗಾರನು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...

ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ: ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ

ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಹೋರಾಟವನ್ನು ಕುಹಕವಾಡಿರುವ ವಿಧಾನ ಪರಿಷತ್ ಬಿಜೆಪಿ...

ಪ್ರತಿಭಟನೆಯನ್ನು ಹತ್ತಿಕ್ಕಲು ಅಕ್ಕಾಡಕ್ಕಿಳಿದಿವೆ ಹಿಂದುತ್ವವಾದಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್‌ ಮತ್ತು ಉಗ್ರ ಗೂಂಡಾ ಪಡೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಜೂನ್ 20ರಂದು ಶುರುವಾಗಿದ್ದ ಈ ಆಂದೋಲನ ಇದೀಗ ದೇಶಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಸಿಜೆಪಿ ಪಟ್ಟು ಹಿಡಿದಿದ್ದು, ಇಂದು...

ಜಿರಳೆಗಳನ್ನು ಸಾಯಿಸಿ ಎಂದು ವಿವಾದಾತ್ಮಕ ಪೋಸ್ಟ್‌ ಹಾಕಿದ ಪ್ರಜ್ಞಾ ಸಿಂಗ್ ಠಾಕೂರ್

ಮಾಜಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ದೇಶದಿಂದ ಜಿರಳೆಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ವ್ಯವಸ್ಥೆ ಮಾಡುವಂತೆ ದೇಶದ ನಾಯಕರಿಗೆ ಮನವಿ ಮಾಡಿದ್ದಾರೆ. X (ಟ್ವಿಟರ್) ನಲ್ಲಿ ಮಾಡಿದ ಪೋಸ್ಟ್‌ನಲ್ಲಿ, 2008 ರ...

ಸೋನಮ್ ವಾಂಗ್ಚುಕ್ ಮತ್ತು ಸರ್ಕಾರದ ಡೀಲ್‌ನಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಅಂಶವೇ ಇಲ್ಲ

ಕೇಂದ್ರದ ಮೋದಿ ಸರ್ಕಾರ ತನ್ನ ಮೂರು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡ ನಂತರ, ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಜುಲೈ 23ರ ಗುರುವಾರ ತಮ್ಮ 26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ....

“50 ಗ್ರಾಂ ಡ್ರಗ್ಸ್ ಇಟ್ಟು ಕೇಸ್ ಹಾಕ್ತೀನಿ!”: ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಮಾದಕದ್ರವ್ಯ ಪ್ರಕರಣದ ಬೆದರಿಕೆಯೊಡ್ಡಿದ ಮುಂಬೈ ಪೊಲೀಸ್!

ಮುಂಬೈ: ದೇಶಾದ್ಯಂತ ವಿದ್ಯಾರ್ಥಿ ಸಮುದಾಯದ ಆಕ್ರೋಶ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿರುವ ಯುವಜನರನ್ನು ಹತೋಟಿಗೆ ತರಲು ಪೊಲೀಸರು ಯಾವ ಮಟ್ಟದ ದಮನಕಾರಿ ಮಾರ್ಗಗಳನ್ನು ತುಳಿಯುತ್ತಿದ್ದಾರೆ ಎಂಬುದಕ್ಕೆ ಮುಂಬೈನಲ್ಲಿ ನಡೆದ ಘಟನೆಯೊಂದು...

ಬಿಡದಿ ಟೌನ್‌ಶಿಪ್: 80% ರೈತರ ಒಪ್ಪಿಗೆ ಇದೆ ಎಂಬ ವಾದ ಸಾಬೀತುಪಡಿಸಿ – ಸರ್ಕಾರಕ್ಕೆ ಸಂಯುಕ್ತ ಹೋರಾಟ ಸವಾಲು

ಬಿಡದಿ ಟೌನ್‌ಶಿಪ್ ಯೋಜನೆಗೆ ಭೂಮಿ ನೀಡಲು ಉದ್ದೇಶಿತ ಪ್ರದೇಶದ ಶೇಕಡಾ 80 ರಷ್ಟು ರೈತರು ಒಪ್ಪಿದ್ದಾರೆ ಎಂಬ ಸರ್ಕಾರದ ವಾದಕ್ಕೆ ಯಾವುದೇ ವಾಸ್ತವಿಕ ಆಧಾರವಿಲ್ಲ. ಸರ್ಕಾರಕ್ಕೆ ಧೈರ್ಯವಿದ್ದರೆ ತನ್ನ ಈ ಹೇಳಿಕೆಯನ್ನು ಜನರ...

ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯ: ವಿಚಾರಣೆ ತಿರಸ್ಕರಿಸಿದ ಸುಪ್ರೀಂ; “ವಿಡಿಯೋ ನೋಡಲು ನಮಗೆ ಆಸಕ್ತಿಯೂ ಇಲ್ಲ, ಸಮಯವೂ ಇಲ್ಲ” ಎಂದ ನ್ಯಾಯಮೂರ್ತಿ ಸೂರ್ಯಕಾಂತ್

ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಶಾಂತಿಯುತವಾಗಿ ಹೋರಾಡುತ್ತಿದ್ದ ಯುವ ಸಮೂಹದ ಮೇಲೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯದ ವಿರುದ್ಧ ನ್ಯಾಯದ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ದೇಶದ ಅತ್ಯುನ್ನತ ನ್ಯಾಯಾಲಯದಿಂದ...

ರಾಹುಲ್ ಗಾಂಧಿ ವಿದ್ಯಾರ್ಥಿಗಳನ್ನು ‘ರಾಜಕೀಯ ದಾಳ’ವಾಗಿ ಬಳಸುತ್ತಿದ್ದಾರೆ ಎಂದ ಧರ್ಮೇಂದ್ರ ಪ್ರಧಾನ್ ವಿರುದ್ಧ ವ್ಯಾಪಕ ಆಕ್ರೋಶ

ನವದೆಹಲಿ: ದೇಶಾದ್ಯಂತ ನೀಟ್ (NEET) ಪರೀಕ್ಷೆಯ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ಇಲಾಖೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ವಿದ್ಯಾರ್ಥಿಗಳು ಮತ್ತು ವಿರೋಧ ಪಕ್ಷಗಳು ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಶಿಕ್ಷಣ ಸಚಿವ ಧರ್ಮೇಂದ್ರ...

ಸಿಜೆಪಿ ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್ ಬಳಕೆ, ವಿದ್ಯುತ್ ಲಾಠಿ ಪ್ರಹಾರ: ಆರೋಪ ನಿರಾಕರಿಸಿದ ಪೊಲೀಸರು

ಸೋಮವಾರ (ಜುಲೈ 20) ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಕರೆ ನೀಡಿದ್ದ ಸಂಸತ್ ಚಲೋ ಮೆರವಣಿ ಸಂದರ್ಭದಲ್ಲಿ ನಡೆದ ಪೊಲೀಸರ ದೌರ್ಜನ್ಯದಲ್ಲಿ ಗಾಯಗೊಂಡ 80 ಪ್ರತಿಭಟನಾಕಾರರಲ್ಲಿ ಕನಿಷ್ಠ ಒಬ್ಬರಿಗೆ ಪೆಲೆಟ್ ಗನ್ ಗಾಯಗಳಾಗಿವೆ...