Homeಕರ್ನಾಟಕಕೃಷಿ ಕ್ಷೇತ್ರದ ಸಮಸ್ಯೆಗಳು: ಡಾ.ಕಮ್ಮರಡಿಯವರ ಲೇಖನ ಸರಣಿ -ಆಹಾರ ಭದ್ರತೆ ನೀಡಿದ ರೈತರ ಪಾಡೇನು?

ಕೃಷಿ ಕ್ಷೇತ್ರದ ಸಮಸ್ಯೆಗಳು: ಡಾ.ಕಮ್ಮರಡಿಯವರ ಲೇಖನ ಸರಣಿ -ಆಹಾರ ಭದ್ರತೆ ನೀಡಿದ ರೈತರ ಪಾಡೇನು?

ಭಾರತದ ಕೃಷಿ ವ್ಯವಸ್ಥೆಯಲ್ಲಿನ ಸಮಸ್ಯೆಗಳನ್ನು ಪರಿಹಾರ ಒದಗಿಸುವ ದೃಷ್ಟಿಯಿಂದ ಚಿಂತಿಸುವವರಲ್ಲಿ ಪ್ರಕಾಶ್‌ ಕಮ್ಮರಡಿಯವರೂ ಒಬ್ಬರು. ಏಕಕಾಲದಲ್ಲಿ ಕೃಷಿ ಅರ್ಥಶಾಸ್ತ್ರಜ್ಞ ಮತ್ತು ಸಮಾಜವಾದಿ ಚಿಂತಕರಾಗಿರುವುದೂ ಅದಕ್ಕೊಂದು ಕಾರಣವಿರಬಹುದು. ಭಾರತದ ಆಹಾರ ಭದ್ರತೆ, ಈಗಿನ ಸಮಸ್ಯೆ ಇತ್ಯಾದಿಗಳ ಕುರಿತು ಪ್ರಸ್ತುತ ಲೇಖನದಲ್ಲಿ ಚರ್ಚಿಸಿದ್ದಾರೆ. ಅವರು ಬರೆಯಲಿರುವ ಸರಣಿ ಲೇಖನಗಳಲ್ಲಿ ಇದು ಮೊದಲನೆಯದು

- Advertisement -
- Advertisement -


ಡಾ. ಟಿ. ಎನ್. ಪ್ರಕಾಶ್ ಕಮ್ಮರಡಿ

 

 

ಭಾರತವು ಸ್ವಾತಂತ್ರ್ಯ ಪಡೆದ ನಂತರದ ವರ್ಷಗಳಲ್ಲಿ ಆಹಾರದ ಉತ್ಪಾದನೆ ಅತೀ ಕಡಿಮೆಯಿದ್ದು, ಹಸಿದಹೊಟ್ಟೆಗೆ ಊಟ ನೀಡುವುದೇ ದೊಡ್ಡ ಸಮಸ್ಯೆಯಾಗಿತ್ತು. ಆಹಾರ ಭದ್ರತೆಯು ಅಂದಿನ ಪ್ರಧಾನ ಸಮಸ್ಯೆ ಹಾಗಾಗಿ ವಿದೇಶಗಳಿಗೆ ಕೈವೊಡ್ಡಿ ಆಹಾರದ ಆಮದು ಮಾಡಿಕೊಳ್ಳಬೇಕಾಗಿರುವ ಶೋಚನಿಯ ಪರಿಸ್ಥಿತಿಯನ್ನು ದೇಶ ಎದುರಿಸುತ್ತಿತ್ತು. ಆ ಸಮಯದಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನವು ಸಮೃದ್ಧ ಆಹಾರ ಧಾನ್ಯಗಳನ್ನು ಉತ್ಪಾದಿಸುತ್ತಿತ್ತು. ಆ ದೇಶದ ಗೋಧಿ ಧಾನ್ಯ ತುಂಬಿದ ಹಡಗುಗಳು ಭಾರತದ ಆಸುಪಾಸಿನಲ್ಲಿ ಹಾದು ಹೋಗುತ್ತಿರುವಾಗ ಅವು ದಾರಿ ತಪ್ಪಿ ನಮ್ಮ ಬಂದರುಗಳಿಗೆ ಬರಲಿ, ಆ ಮೂಲಕ “ಹಡಗಿನಿಂದ ಆಹಾರ ದೇಶದ ಜನರ ಬಾಯಿಗೆ” (Ship to Mouth) ಬಂದು ಬೀಳುವಂತಾಗಲಿ ಎಂದು ಹಾರೈಸುವ ಹೀನಾಯ ಪರಿಸ್ಥಿತಿ ದೇಶದಲ್ಲಿತ್ತು. ರಾಜತಾಂತ್ರಿಕವಾಗಿ ಭಾರತ ಅಂದಿನ ಸೋವಿಯತ್ ರಷ್ಯಾದ ಜೊತೆಗಿರುವುದನ್ನೇ ಹೆಳೆ ಮಾಡಿಕೊಂಡ ಅಮೇರಿಕಾ ಭಾರತದ ಈ ಪರಿಸ್ಥಿತಿಯ ಬಗ್ಗೆ, ಅವಕಾಶ ದೊರೆತಾಗಲೆಲ್ಲಾ ಅಣಕವಾಡುತ್ತಿತ್ತು.

ಆಹಾರದ ತೀವ್ರ ಅಭಾವ ಹಾಗೇ ಮುಂದುವರಿದಲ್ಲಿ ಕಷ್ಟಪಟ್ಟು ಗಳಿಸಿದ ಸ್ವಾತಂತ್ರ್ಯಕ್ಕೇ ಕುತ್ತು ಬರುವ ಅಪಾಯ ದೇಶದ ಮುಂದಿತ್ತು.

ಆದರೆ ಅದೆಲ್ಲಾ ಈಗ ಇತಿಹಾಸ. ನಾವೀಗ ಆಹಾರ ಭದ್ರತೆ ಸಾಧಿಸಿದ್ದೇವೆ. ನಮ್ಮ ರೈತರು ಸುಧಾರಿಸಿದ ತಳಿ, ನೀರಾವರಿ, ಆಧುನಿಕ ತಂತ್ರಜ್ಞಾನ, ಯಂತ್ರಗಳನ್ನು ಸಮರ್ಥವಾಗಿ ಬಳಸಿ, ಬೆವರು ಹರಿಸಿ ದುಡಿದಿರುವ ಪರಿಣಾಮವಾಗಿ ಇಂದು ಆಹಾರದಲ್ಲಿ ಸ್ವಾವಲಂಬನೆ ಸಾಧಿಸಿರುವುದು ಮಾತ್ರವಲ್ಲ ಬಹುತೇಕ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಉತ್ಪಾದನೆಯಲ್ಲಿ ದೇಶ ಸಮೃದ್ಧಿಯನ್ನೇ ಸಾಧಿಸಿರುತ್ತದೆ. ಇದನ್ನೇ ಹಸಿರುಕ್ರಾಂತಿ (Green Revolution) ಎಂದು ವರ್ಣಮಯವಾಗಿ ಬಣ್ಣಿಸಲಾಗುತ್ತಿದೆ. ಈ ಮೂಲಕ ದೇಶಕ್ಕೆ ಆಹಾರದ ಉತ್ಪಾದನೆಯಲ್ಲಿ ಸ್ವಾವಲಂಬನೆ ಮಾತ್ರವಲ್ಲ ತರಕಾರಿ, ಹಣ್ಣು, ಹಾಲುಗಳ ಸಮೃದ್ಧ ಉತ್ಪಾದನೆ ಮೂಲಕ ಅರಿವಿಗೂ ಬಾರದ ಅಗಾಧ ಪ್ರಮಾಣದ ಪೌಷ್ಟಿಕಾಂಶ ಭದ್ರತೆ (Nutrition Security) ಕೂಡ ರೈತರು ಒದಗಿಸಿರುವುದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿ

ಇದನ್ನೂ ಓದಿ: ಕನಿಷ್ಠ ಬೆಲೆಯ ಗರಿಷ್ಠ ಸಮಸ್ಯೆಗಳು

ಭಾರತದ ಈಗಿನ ಆಹಾರ ಉತ್ಪಾದನೆಯ ಪ್ರಮಾಣ

ಇತ್ತೀಚೆಗಿನ ವರ್ಷಗಳಲ್ಲಿ (2018-19) ನಮ್ಮ ಆಹಾರ ಉತ್ಪಾದನೆ ದಾಖಲೆ ಪ್ರಮಾಣದ 281 ದಶಲಕ್ಷ ಟನ್ ಮೀರಿರುತ್ತದೆ. ಇದರಲ್ಲಿ ಭತ್ತ 116 ದಶಲಕ್ಷ ಟನ್, ಗೋಧಿ 99 ದಶಲಕ್ಷ ಟನ್, ಒರಟು ಧಾನ್ಯ 43 ದಶಲಕ್ಷ ಟನ್, ದ್ವಿದಳ ಧಾನ್ಯ 24 ದಶಲಕ್ಷ ಟನ್ ಹಾಗೂ ಎಣ್ಣೆಕಾಳು 32 ದಶಲಕ್ಷ ಟನ್‍ಗಳಾಗಿರುತ್ತದೆ. ಹಾಗೇ, ನಮ್ಮ ತರಕಾರಿ (187 ದಶಲಕ್ಷ ಟನ್), ಹಣ್ಣು (97 ದಶಲಕ್ಷ ಟನ್), ಹಾಲು (176 ದಶಲಕ್ಷ ಟನ್) ಮತ್ತು ಸಕ್ಕರೆ (132 ದಶಲಕ್ಷ ಟನ್) ಉತ್ಪಾದನೆ ಕೂಡ ದಾಖಲು ಪ್ರಮಾಣದ್ದಾಗಿವೆ. ಈ ಎಲ್ಲಾ ಉತ್ಪನ್ನಗಳನ್ನು ದೇಶದ 137 ಕೋಟಿ ಜನತೆಗೆ ಸಮಾನವಾಗಿ ಹಂಚಿದರೆ ಹಸಿವು, ಅಪೌಷ್ಟಿಕಾಂಶತೆಗಳು ಭಾರತದಲ್ಲಿ ಮಾಯವಾಗಲಿವೆ ಎನ್ನುವುದಕ್ಕೇ ಈ ಕೆಳಗಿನ ಚಿತ್ರದ ಅಂಕಿಅಂಶಗಳೇ ಸಾಕ್ಷಿ.

ಆಹಾರ ಭದ್ರತೆ

ಚಿತ್ರ: ಭಾರತದಲ್ಲಿ ತಲಾವಾರು ಲಭ್ಯವಿರುವ ಆಹಾರ, ಹಣ್ಣು, ತರಕಾರಿ ಪ್ರಮಾಣ (ಗ್ರಾಂ/ ಪ್ರತಿ ನಿತ್ಯ)

ಗಮನಿಸಬೇಕಾದ ಅತೀ ಮುಖ್ಯ ವಿಚಾರವೆಂದರೆ ವ್ಯಕ್ತಿ ಒಬ್ಬ ಆರೋಗ್ಯಕರ ಬದುಕು ನಡೆಸಲು ಅಗತ್ಯವಿರುವ ಪ್ರಮಾಣಕ್ಕಿಂತ ಅಧಿಕ ಆಹಾರ, ಹಣ್ಣು, ಹಾಲು, ತರಕಾರಿಗಳನ್ನು ಈ ದೇಶದ ಜನತೆಗೆ ನಮ್ಮ ರೈತಾಪಿ ವರ್ಗ ನೀಡಿರುತ್ತದೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ಪೌಷ್ಟಿಕಾಂಶ ನಿರ್ವಹಣಾ ಬ್ಯೂರೋ” (National Nutrition Monitoring Bureau) ಪ್ರತಿ ವ್ಯಕ್ತಿ ದಿನನಿತ್ಯ 400 ಗ್ರಾಂ ಏಕದಳ ಧಾನ್ಯ, 80 ಗ್ರಾಂ ದ್ವಿದಳ ಧಾನ್ಯ, 30 ಗ್ರಾಂ ಎಣ್ಣೆಕಾಳು, 300 ಗ್ರಾಂ ತರಕಾರಿ ಹಾಗು 300 ಗ್ರಾಂ ಹಾಲು ಸೇವಿಸುವಂತೆ ಶಿಫಾರಸ್ಸು ಮಾಡಿರುತ್ತದೆ. ಅಂದರೆ ದ್ವಿದಳಧಾನ್ಯದ ಹೊರತಾಗಿ ಬೇರೆಲ್ಲಾ ಉತ್ಪನ್ನಗಳ ತಲಾವಾರು ಲಭ್ಯತೆ ದೇಶದಲ್ಲಿ ಅಗತ್ಯಕ್ಕಿಂತ ಅಧಿಕವಾಗಿದೆ ಎಂದಾಯ್ತು. ಹಾಗಿದ್ದರೂ, ದೇಶದಲ್ಲಿ ಹಸಿವು, ಅಪೌಷ್ಟಿಕತೆ ತಾಂಡವಾಡುತ್ತಿರಲು ಸಮಾನ ಹಂಚಿಕೆ ಮಾಡುವುದರಲ್ಲಿ ಸರ್ಕಾರ ಸೋತಿರುತ್ತದೆಯೇ ಹೊರತು ಅವುಗಳನ್ನು ಉತ್ಪಾದಿಸಿ, ಪೂರೈಕೆ ಮಾಡುವಲ್ಲಿ ದೇಶದ ರೈತ ಹಿಂದೆ ಬಿದ್ದಿಲ್ಲ. ಆದರೆ, ಇದಕ್ಕೆ ಪ್ರತಿ ಫಲವಾಗಿ ದೇಶ ರೈತಾಪಿ ವರ್ಗಕ್ಕೆ ನೀಡಿರುವುದಾದರು ಏನು ಎಂಬ ಪ್ರಶ್ನೆಗೆ ಪಟ್ಟಣ ಪ್ರದೇಶಗಳ ಕಡೆಗಿನ ವಲಸೆ, ಬೇಸಾಯ ಮಾಡದೆ ಭೂಮಿಯನ್ನು ಬೀಳುಬಿಡುತ್ತಿರುವುದರಿಂದ ದೇಶದಾದ್ಯಂತ ನಡೆಯುತ್ತಿರುವ ರೈತರ ಅವ್ಯಾಹತ ಆತ್ಮಹತ್ಯೆಗಳು ಉತ್ತರ ನೀಡುತ್ತಿವೆ.

ಇದನ್ನೂ ಓದಿ: ಲಾಕ್‌ ಡೌನ್‌ ಮತ್ತು ಕೃಷಿ ಕ್ಷೇತ್ರದ ಸಮಸ್ಯೆ – ಸಿಎಂ ತರಾಟೆಗೆ

(ಲೇಖಕರು ಕೃಷಿ ಆರ್ಥಿಕ ತಜ್ಣರು ಮತ್ತು ಕರ್ನಾಟಕ ಬೆಲೆ ಆಯೋಗದ ಮಾಜಿ ಅಧ್ಯಕ್ಷರು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೈಸೂರು| ಒಳಮೀಸಲಾತಿ ಹೋರಾಟ ಹತ್ತಿಕ್ಕಲು ನಿಷೇಧಾಜ್ಞೆ ಹೇರಿದ ಕಾಂಗ್ರೆಸ್ ಸರ್ಕಾರ

ಪೂರ್ಣ ಪ್ರಮಾಣದ ಒಳಮೀಸಲಾತಿ ಜಾರಿಗೆ ಆಗ್ರಹಿಸಿ 'ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿ' ನಡೆಸುತ್ತಿದ್ದ ಹೋರಾಟಕ್ಕೆ ಜಿಲ್ಲಾ ಪೊಲೀಸರು ಅನುಮತಿ ನಿರಾಕರಿಸಿದ್ದು, ಸಿದ್ದರಾಮನಹುಂಡಿಯಿಂದ ಮೈಸೂರಿಗೆ ಇಂದು ಪಾದಯಾತ್ರೆ ಆರಂಭಿಸಿದ ಹೋರಾಟಗಾರರನ್ನು...

‘ನಕಲಿ ಬ್ಯಾಂಕ್ ಗ್ಯಾರಂಟಿ’ ಪ್ರಕರಣ : ರಿಲಯನ್ಸ್ ಪವರ್, ಇತರ ಸಂಸ್ಥೆಗಳ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದ ಇಡಿ

ರಿಲಯನ್ಸ್ ಪವರ್ ಕಂಪನಿಯು ಭಾರತೀಯ ಸೌರಶಕ್ತಿ ನಿಗಮಕ್ಕೆ (ಎಸ್‌ಇಸಿಐ) ಟೆಂಡರ್ ಪಡೆಯಲು ಸಲ್ಲಿಸಿದ 68 ಕೋಟಿ ರೂಪಾಯಿಗಳ ನಕಲಿ ಬ್ಯಾಂಕ್ ಗ್ಯಾರಂಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲಯನ್ಸ್ ಪವರ್ ಲಿಮಿಟೆಡ್ ಮತ್ತು ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್‌ನ...

ಉತ್ತರ ಪ್ರದೇಶ| ಬಾಬರಿ ಮಸೀದಿ ಮೇಲಿನ ದಾಳಿಗೆ 33 ವರ್ಷ; ಅಯೋಧ್ಯೆ-ವಾರಣಾಸಿಯಲ್ಲಿ ಬಿಗಿ ಭದ್ರತೆ

ಬಾಬರಿ ಮಸೀದಿ ಧ್ವಂಸವಾಗಿ 33ನೇ ವರ್ಷ ತುಂಬುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಅಯೋಧ್ಯೆ ಮತ್ತು ಉತ್ತರ ಪ್ರದೇಶದ ಇತರ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಜಾಗರೂಕರಾಗಿದ್ದು, ಎಲ್ಲಾ ಮಾರ್ಗಗಳಲ್ಲಿ ವಾಹನಗಳ ಸಂಪೂರ್ಣ ತಪಾಸಣೆ ನಡೆಸುತ್ತಿವೆ. ಈ ಕುರಿತು...

ನ್ಯಾಷನಲ್ ಹೆರಾಲ್ಡ್‌ಗೆ ದೇಣಿಗೆ: ‘ಡಿಕೆ’ ಸಹೋದರರಿಗೆ ಇಡಿ-ದೆಹಲಿ ಪೊಲೀಸರಿಂದ ಸಮನ್ಸ್

ನ್ಯಾಷನಲ್ ಹೆರಾಲ್ಡ್ ಮತ್ತು ಯಂಗ್ ಇಂಡಿಯಾ ಸಂಸ್ಥೆಗಳಿಗೆ ನೀಡಿದ ದೇಣಿಗೆಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಕೈಗೊಂಡಿರುವ ತನಿಖೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮತ್ತು ಜಾರಿ ನಿರ್ದೇಶನಾಲಯವು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು...

ಇಂಡಿಗೋ ಹಾರಾಟದಲ್ಲಿ ಐದನೇ ದಿನವೂ ವ್ಯತ್ಯಯ: ವಿಮಾನ ದರಕ್ಕೆ ತಾತ್ಕಾಲಿಕ ಮಿತಿ ವಿಧಿಸಿದ ಕೇಂದ್ರ

ಇಂಡಿಗೋದ ದೇಶೀಯ ಕಾರ್ಯಾಚರಣೆಗಳು ಸತತ ಐದನೇ ದಿನವೂ ಅಸ್ತವ್ಯಸ್ತಗೊಂಡಿದ್ದರಿಂದ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಶನಿವಾರ (ಡಿಸೆಂಬರ್ 6) ವಿಮಾನ ಟಿಕೆಟ್ ದರಗಳ ಮೇಲೆ ತಾತ್ಕಾಲಿಕ ಮಿತಿಯನ್ನು ವಿಧಿಸಿದೆ. ನಿಗದಿತ ಮಾನದಂಡಗಳ ಯಾವುದೇ...

ಪಶ್ಚಿಮ ಬಂಗಾಳ| ಎಸ್‌ಐಆರ್‌ನಲ್ಲಿ ಹೆಸರು ನೋಂದಾಯಿಸಲು ನಿರಾಕರಿಸಿದ 79 ಬುಡಕಟ್ಟು ಜನಾಂಗಗಳು

ಪಶ್ಚಿಮ ಬಂಗಾಳದ ಬಂಕುರಾದ ಮುಚಿಕಟಾ ಮತ್ತು ವೆದುವಾಶೋಲ್ ಗ್ರಾಮಗಳ ಬುಡಕಟ್ಟು ಜನಾಂಗದವರು 'ಸಮಾಜ್ವಾದ್ ಅಂತರ-ರಾಜ್ಯ ಮಾಝಿ ಸರ್ಕಾರ್'ಗೆ ನಿಷ್ಠೆಯನ್ನು ಉಲ್ಲೇಖಿಸಿ, ಚುನಾವಣಾ ಆಯೋಗ್ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ಭಾಗವಹಿಸಲು ನಿರಾಕರಿಸಿದ್ದಾರೆ...

ವಿದ್ಯಾರ್ಥಿಗಳಿಗೆ ಭಗವದ್ಗೀತೆ ಬೋಧಿಸುವಂತೆ ಪತ್ರ ಬರೆದ ‘ಜಾತ್ಯತೀತ ಜನತಾದಳ’ ನಾಯಕ ಕುಮಾರಸ್ವಾಮಿ

ಭಗವದ್ಗೀತೆಯನ್ನು 'ಪವಿತ್ರ ಗ್ರಂಥ' ಎಂದಿರುವ ಜಾತ್ಯತೀತ ಜನತಾದಳ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ. ಕುಮಾರಸ್ವಾಮಿ, ವಿದ್ಯಾರ್ಥಿಗಳಿಗೆ ಪಠ್ಯದಲ್ಲಿ ಭಗವದ್ಗೀತೆ ಬೋಧಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಕೇಂದ್ರ ಶಿಕ್ಷಣ...

‘ಲವ್ ಜಿಹಾದ್’ ಕಾರ್ಯಕ್ರಮಗಳನ್ನು ತೆಗೆದು ಹಾಕಲು ಐದು ಚಾನೆಲ್‌ಗಳಿಗೆ ಎನ್‌ಬಿಡಿಎಸ್‌ಎ ಆದೇಶ

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ (ಎನ್‌ಸಿಆರ್‌ಟಿ) ಪಠ್ಯಪುಸ್ತಕವನ್ನು 'ಲವ್ ಜಿಹಾದ್' ಪಿತೂರಿಯೊಂದಿಗೆ ಜೋಡಿಸುವ ಎಂಟು ಕಾರ್ಯಕ್ರಮಗಳನ್ನು ತೆಗೆದುಹಾಕುವಂತೆ ಸುದ್ದಿ ಪ್ರಸಾರ ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರವು (ಎನ್‌ಬಿಡಿಎಸ್‌ಎ) ಮಂಗಳವಾರ (ಡಿಸೆಂಬರ್...

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಪ್ರಪ್ರಥಮ ‘ಫಿಫಾ ಶಾಂತಿ’ ಪ್ರಶಸ್ತಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರಿಗೆ ಹೊಸ ಫಿಫಾ ಶಾಂತಿ ಪ್ರಶಸ್ತಿಯನ್ನು ಶುಕ್ರವಾರ ನೀಡಲಾಯಿತು. ನೊಬೆಲ್ ಶಾಂತಿ ಪ್ರಶಸ್ತಿಗಾಗಿ ಬಹಿರಂಗವಾಗಿ ಆಸೆ ವ್ಯಕ್ತಪಡಿಸಿದ್ದ ಅವರಿಗೆ, ಹೊಸದಾಗಿ ರಚಿಸಲಾದ ಫಿಫಾ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಟ್ರಂಪ್...

ಬಾಬಾ ಸಾಹೇಬರ ಪರಿನಿಬ್ಬಾಣ ಜಗತ್ತಿನ ಕವಲುದಾರಿಗೊಂದು ಕೈಮರದಂತೆ ಕಾಣಿಸುತ್ತಿದೆ

ಬುದ್ಧನ ತತ್ವಗಳು, ಬಸವ- ಅಲ್ಲಮರ ಚಿಂತನೆಗಳು, ಬಾಬಾ ಸಾಹೇಬರ ವಿಚಾರಗಳು , ನಮ್ಮ ಸಂವಿಧಾನದ ದಿಕ್ಸೂಚಿಗಳು ಹಾಗೂ ಕಳೆದ 75 ವರ್ಷಗಳಿಂದ ಸ್ಕ್ಯಾಂಡಿನೇವಿಯನ್ ದೇಶಗಳು ಒಂದು ಮಟ್ಟಿಗೆ ಸಾಧಿಸಿದ ಆಧುನಿಕ‌ ಮಾನವೀಯ‌- ವೈಜ್ಞಾನಿಕ...