Homeಕರ್ನಾಟಕಕೃಷಿ ಕ್ಷೇತ್ರದ ಸಮಸ್ಯೆಗಳು: ಡಾ.ಕಮ್ಮರಡಿಯವರ ಲೇಖನ ಸರಣಿ -ಆಹಾರ ಭದ್ರತೆ ನೀಡಿದ ರೈತರ ಪಾಡೇನು?

ಕೃಷಿ ಕ್ಷೇತ್ರದ ಸಮಸ್ಯೆಗಳು: ಡಾ.ಕಮ್ಮರಡಿಯವರ ಲೇಖನ ಸರಣಿ -ಆಹಾರ ಭದ್ರತೆ ನೀಡಿದ ರೈತರ ಪಾಡೇನು?

ಭಾರತದ ಕೃಷಿ ವ್ಯವಸ್ಥೆಯಲ್ಲಿನ ಸಮಸ್ಯೆಗಳನ್ನು ಪರಿಹಾರ ಒದಗಿಸುವ ದೃಷ್ಟಿಯಿಂದ ಚಿಂತಿಸುವವರಲ್ಲಿ ಪ್ರಕಾಶ್‌ ಕಮ್ಮರಡಿಯವರೂ ಒಬ್ಬರು. ಏಕಕಾಲದಲ್ಲಿ ಕೃಷಿ ಅರ್ಥಶಾಸ್ತ್ರಜ್ಞ ಮತ್ತು ಸಮಾಜವಾದಿ ಚಿಂತಕರಾಗಿರುವುದೂ ಅದಕ್ಕೊಂದು ಕಾರಣವಿರಬಹುದು. ಭಾರತದ ಆಹಾರ ಭದ್ರತೆ, ಈಗಿನ ಸಮಸ್ಯೆ ಇತ್ಯಾದಿಗಳ ಕುರಿತು ಪ್ರಸ್ತುತ ಲೇಖನದಲ್ಲಿ ಚರ್ಚಿಸಿದ್ದಾರೆ. ಅವರು ಬರೆಯಲಿರುವ ಸರಣಿ ಲೇಖನಗಳಲ್ಲಿ ಇದು ಮೊದಲನೆಯದು

- Advertisement -
- Advertisement -


ಡಾ. ಟಿ. ಎನ್. ಪ್ರಕಾಶ್ ಕಮ್ಮರಡಿ

 

 

ಭಾರತವು ಸ್ವಾತಂತ್ರ್ಯ ಪಡೆದ ನಂತರದ ವರ್ಷಗಳಲ್ಲಿ ಆಹಾರದ ಉತ್ಪಾದನೆ ಅತೀ ಕಡಿಮೆಯಿದ್ದು, ಹಸಿದಹೊಟ್ಟೆಗೆ ಊಟ ನೀಡುವುದೇ ದೊಡ್ಡ ಸಮಸ್ಯೆಯಾಗಿತ್ತು. ಆಹಾರ ಭದ್ರತೆಯು ಅಂದಿನ ಪ್ರಧಾನ ಸಮಸ್ಯೆ ಹಾಗಾಗಿ ವಿದೇಶಗಳಿಗೆ ಕೈವೊಡ್ಡಿ ಆಹಾರದ ಆಮದು ಮಾಡಿಕೊಳ್ಳಬೇಕಾಗಿರುವ ಶೋಚನಿಯ ಪರಿಸ್ಥಿತಿಯನ್ನು ದೇಶ ಎದುರಿಸುತ್ತಿತ್ತು. ಆ ಸಮಯದಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನವು ಸಮೃದ್ಧ ಆಹಾರ ಧಾನ್ಯಗಳನ್ನು ಉತ್ಪಾದಿಸುತ್ತಿತ್ತು. ಆ ದೇಶದ ಗೋಧಿ ಧಾನ್ಯ ತುಂಬಿದ ಹಡಗುಗಳು ಭಾರತದ ಆಸುಪಾಸಿನಲ್ಲಿ ಹಾದು ಹೋಗುತ್ತಿರುವಾಗ ಅವು ದಾರಿ ತಪ್ಪಿ ನಮ್ಮ ಬಂದರುಗಳಿಗೆ ಬರಲಿ, ಆ ಮೂಲಕ “ಹಡಗಿನಿಂದ ಆಹಾರ ದೇಶದ ಜನರ ಬಾಯಿಗೆ” (Ship to Mouth) ಬಂದು ಬೀಳುವಂತಾಗಲಿ ಎಂದು ಹಾರೈಸುವ ಹೀನಾಯ ಪರಿಸ್ಥಿತಿ ದೇಶದಲ್ಲಿತ್ತು. ರಾಜತಾಂತ್ರಿಕವಾಗಿ ಭಾರತ ಅಂದಿನ ಸೋವಿಯತ್ ರಷ್ಯಾದ ಜೊತೆಗಿರುವುದನ್ನೇ ಹೆಳೆ ಮಾಡಿಕೊಂಡ ಅಮೇರಿಕಾ ಭಾರತದ ಈ ಪರಿಸ್ಥಿತಿಯ ಬಗ್ಗೆ, ಅವಕಾಶ ದೊರೆತಾಗಲೆಲ್ಲಾ ಅಣಕವಾಡುತ್ತಿತ್ತು.

ಆಹಾರದ ತೀವ್ರ ಅಭಾವ ಹಾಗೇ ಮುಂದುವರಿದಲ್ಲಿ ಕಷ್ಟಪಟ್ಟು ಗಳಿಸಿದ ಸ್ವಾತಂತ್ರ್ಯಕ್ಕೇ ಕುತ್ತು ಬರುವ ಅಪಾಯ ದೇಶದ ಮುಂದಿತ್ತು.

ಆದರೆ ಅದೆಲ್ಲಾ ಈಗ ಇತಿಹಾಸ. ನಾವೀಗ ಆಹಾರ ಭದ್ರತೆ ಸಾಧಿಸಿದ್ದೇವೆ. ನಮ್ಮ ರೈತರು ಸುಧಾರಿಸಿದ ತಳಿ, ನೀರಾವರಿ, ಆಧುನಿಕ ತಂತ್ರಜ್ಞಾನ, ಯಂತ್ರಗಳನ್ನು ಸಮರ್ಥವಾಗಿ ಬಳಸಿ, ಬೆವರು ಹರಿಸಿ ದುಡಿದಿರುವ ಪರಿಣಾಮವಾಗಿ ಇಂದು ಆಹಾರದಲ್ಲಿ ಸ್ವಾವಲಂಬನೆ ಸಾಧಿಸಿರುವುದು ಮಾತ್ರವಲ್ಲ ಬಹುತೇಕ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಉತ್ಪಾದನೆಯಲ್ಲಿ ದೇಶ ಸಮೃದ್ಧಿಯನ್ನೇ ಸಾಧಿಸಿರುತ್ತದೆ. ಇದನ್ನೇ ಹಸಿರುಕ್ರಾಂತಿ (Green Revolution) ಎಂದು ವರ್ಣಮಯವಾಗಿ ಬಣ್ಣಿಸಲಾಗುತ್ತಿದೆ. ಈ ಮೂಲಕ ದೇಶಕ್ಕೆ ಆಹಾರದ ಉತ್ಪಾದನೆಯಲ್ಲಿ ಸ್ವಾವಲಂಬನೆ ಮಾತ್ರವಲ್ಲ ತರಕಾರಿ, ಹಣ್ಣು, ಹಾಲುಗಳ ಸಮೃದ್ಧ ಉತ್ಪಾದನೆ ಮೂಲಕ ಅರಿವಿಗೂ ಬಾರದ ಅಗಾಧ ಪ್ರಮಾಣದ ಪೌಷ್ಟಿಕಾಂಶ ಭದ್ರತೆ (Nutrition Security) ಕೂಡ ರೈತರು ಒದಗಿಸಿರುವುದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿ

ಇದನ್ನೂ ಓದಿ: ಕನಿಷ್ಠ ಬೆಲೆಯ ಗರಿಷ್ಠ ಸಮಸ್ಯೆಗಳು

ಭಾರತದ ಈಗಿನ ಆಹಾರ ಉತ್ಪಾದನೆಯ ಪ್ರಮಾಣ

ಇತ್ತೀಚೆಗಿನ ವರ್ಷಗಳಲ್ಲಿ (2018-19) ನಮ್ಮ ಆಹಾರ ಉತ್ಪಾದನೆ ದಾಖಲೆ ಪ್ರಮಾಣದ 281 ದಶಲಕ್ಷ ಟನ್ ಮೀರಿರುತ್ತದೆ. ಇದರಲ್ಲಿ ಭತ್ತ 116 ದಶಲಕ್ಷ ಟನ್, ಗೋಧಿ 99 ದಶಲಕ್ಷ ಟನ್, ಒರಟು ಧಾನ್ಯ 43 ದಶಲಕ್ಷ ಟನ್, ದ್ವಿದಳ ಧಾನ್ಯ 24 ದಶಲಕ್ಷ ಟನ್ ಹಾಗೂ ಎಣ್ಣೆಕಾಳು 32 ದಶಲಕ್ಷ ಟನ್‍ಗಳಾಗಿರುತ್ತದೆ. ಹಾಗೇ, ನಮ್ಮ ತರಕಾರಿ (187 ದಶಲಕ್ಷ ಟನ್), ಹಣ್ಣು (97 ದಶಲಕ್ಷ ಟನ್), ಹಾಲು (176 ದಶಲಕ್ಷ ಟನ್) ಮತ್ತು ಸಕ್ಕರೆ (132 ದಶಲಕ್ಷ ಟನ್) ಉತ್ಪಾದನೆ ಕೂಡ ದಾಖಲು ಪ್ರಮಾಣದ್ದಾಗಿವೆ. ಈ ಎಲ್ಲಾ ಉತ್ಪನ್ನಗಳನ್ನು ದೇಶದ 137 ಕೋಟಿ ಜನತೆಗೆ ಸಮಾನವಾಗಿ ಹಂಚಿದರೆ ಹಸಿವು, ಅಪೌಷ್ಟಿಕಾಂಶತೆಗಳು ಭಾರತದಲ್ಲಿ ಮಾಯವಾಗಲಿವೆ ಎನ್ನುವುದಕ್ಕೇ ಈ ಕೆಳಗಿನ ಚಿತ್ರದ ಅಂಕಿಅಂಶಗಳೇ ಸಾಕ್ಷಿ.

ಆಹಾರ ಭದ್ರತೆ

ಚಿತ್ರ: ಭಾರತದಲ್ಲಿ ತಲಾವಾರು ಲಭ್ಯವಿರುವ ಆಹಾರ, ಹಣ್ಣು, ತರಕಾರಿ ಪ್ರಮಾಣ (ಗ್ರಾಂ/ ಪ್ರತಿ ನಿತ್ಯ)

ಗಮನಿಸಬೇಕಾದ ಅತೀ ಮುಖ್ಯ ವಿಚಾರವೆಂದರೆ ವ್ಯಕ್ತಿ ಒಬ್ಬ ಆರೋಗ್ಯಕರ ಬದುಕು ನಡೆಸಲು ಅಗತ್ಯವಿರುವ ಪ್ರಮಾಣಕ್ಕಿಂತ ಅಧಿಕ ಆಹಾರ, ಹಣ್ಣು, ಹಾಲು, ತರಕಾರಿಗಳನ್ನು ಈ ದೇಶದ ಜನತೆಗೆ ನಮ್ಮ ರೈತಾಪಿ ವರ್ಗ ನೀಡಿರುತ್ತದೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ಪೌಷ್ಟಿಕಾಂಶ ನಿರ್ವಹಣಾ ಬ್ಯೂರೋ” (National Nutrition Monitoring Bureau) ಪ್ರತಿ ವ್ಯಕ್ತಿ ದಿನನಿತ್ಯ 400 ಗ್ರಾಂ ಏಕದಳ ಧಾನ್ಯ, 80 ಗ್ರಾಂ ದ್ವಿದಳ ಧಾನ್ಯ, 30 ಗ್ರಾಂ ಎಣ್ಣೆಕಾಳು, 300 ಗ್ರಾಂ ತರಕಾರಿ ಹಾಗು 300 ಗ್ರಾಂ ಹಾಲು ಸೇವಿಸುವಂತೆ ಶಿಫಾರಸ್ಸು ಮಾಡಿರುತ್ತದೆ. ಅಂದರೆ ದ್ವಿದಳಧಾನ್ಯದ ಹೊರತಾಗಿ ಬೇರೆಲ್ಲಾ ಉತ್ಪನ್ನಗಳ ತಲಾವಾರು ಲಭ್ಯತೆ ದೇಶದಲ್ಲಿ ಅಗತ್ಯಕ್ಕಿಂತ ಅಧಿಕವಾಗಿದೆ ಎಂದಾಯ್ತು. ಹಾಗಿದ್ದರೂ, ದೇಶದಲ್ಲಿ ಹಸಿವು, ಅಪೌಷ್ಟಿಕತೆ ತಾಂಡವಾಡುತ್ತಿರಲು ಸಮಾನ ಹಂಚಿಕೆ ಮಾಡುವುದರಲ್ಲಿ ಸರ್ಕಾರ ಸೋತಿರುತ್ತದೆಯೇ ಹೊರತು ಅವುಗಳನ್ನು ಉತ್ಪಾದಿಸಿ, ಪೂರೈಕೆ ಮಾಡುವಲ್ಲಿ ದೇಶದ ರೈತ ಹಿಂದೆ ಬಿದ್ದಿಲ್ಲ. ಆದರೆ, ಇದಕ್ಕೆ ಪ್ರತಿ ಫಲವಾಗಿ ದೇಶ ರೈತಾಪಿ ವರ್ಗಕ್ಕೆ ನೀಡಿರುವುದಾದರು ಏನು ಎಂಬ ಪ್ರಶ್ನೆಗೆ ಪಟ್ಟಣ ಪ್ರದೇಶಗಳ ಕಡೆಗಿನ ವಲಸೆ, ಬೇಸಾಯ ಮಾಡದೆ ಭೂಮಿಯನ್ನು ಬೀಳುಬಿಡುತ್ತಿರುವುದರಿಂದ ದೇಶದಾದ್ಯಂತ ನಡೆಯುತ್ತಿರುವ ರೈತರ ಅವ್ಯಾಹತ ಆತ್ಮಹತ್ಯೆಗಳು ಉತ್ತರ ನೀಡುತ್ತಿವೆ.

ಇದನ್ನೂ ಓದಿ: ಲಾಕ್‌ ಡೌನ್‌ ಮತ್ತು ಕೃಷಿ ಕ್ಷೇತ್ರದ ಸಮಸ್ಯೆ – ಸಿಎಂ ತರಾಟೆಗೆ

(ಲೇಖಕರು ಕೃಷಿ ಆರ್ಥಿಕ ತಜ್ಣರು ಮತ್ತು ಕರ್ನಾಟಕ ಬೆಲೆ ಆಯೋಗದ ಮಾಜಿ ಅಧ್ಯಕ್ಷರು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...