Homeಕರ್ನಾಟಕಮೋದಿ-ಶಾರನ್ನು ಬಗ್ಗಿಸಿ ಸಿಎಂ ಆದ ಮೊದಲ ವ್ಯಕ್ತಿ ಯಡಿಯೂರಪ್ಪ

ಮೋದಿ-ಶಾರನ್ನು ಬಗ್ಗಿಸಿ ಸಿಎಂ ಆದ ಮೊದಲ ವ್ಯಕ್ತಿ ಯಡಿಯೂರಪ್ಪ

- Advertisement -
- Advertisement -

ಜುಲೈ 23ರ ಮಂಗಳವಾರ ರಾತ್ರಿ ಎಚ್.ಡಿ ಕುಮಾರಸ್ವಾಮಿ ವಿಶ್ವಾಸಮತ ಸೋತಕೂಡಲೇ ಯಡಿಯೂರಪ್ಪ ನಾಳೆಯಿಂದ ಅಭಿವೃದ್ದಿಪರ್ವ ಎಂದು ಹೇಳಿಕೆ ಕೊಟ್ಟರು. ಅಂದರೆ ನಾಳೆಯೇ ನಾವು ಸರ್ಕಾರ ರಚಿಸುತ್ತೇವೆ ಎಂಬ ಆತ್ಮ ವಿಶ್ವಾಸ ಅವರದ್ದಾಗಿತ್ತು. ಆದರೆ ಜುಲೈ 23ರ ಬುಧವಾರ ಅಂತಹ ಯಾವುದೇ ಘಟನೆಗಳು ನಡೆಯಲಿಲ್ಲ.

ಅಂದರೆ ಸರ್ಕಾರ ರಚನೆಗೆ, ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವುದಕ್ಕೆ ಹೈಕಮಾಂಡ್ ತಡೆವೊಡ್ಡಿತ್ತು. ತಾನು ಮುಖ್ಯಮಂತ್ರಿ ಆಗಿಯೇ ತೀರಬೇಕು ತಾಳ್ಮೆಯಿಂದ ಕಾಯುತ್ತಿದ್ದ ಯಡಿಯೂರಪ್ಪನವರಿಗೆ ಇದು ಪ್ರತಿಕ್ಷಣವೂ ತಾಳಲಾರದ ನೋವಾಗಿತ್ತು. ಕಷ್ಟಪಟ್ಟು ಮೈತ್ರಿ ಸರ್ಕಾರ ಉರುಳಿಸಿದರೂ ತನಗೆ ಹೈಕಮಾಂಡ್ ಪಟ್ಟ ಕಟ್ಟಲು ಹಿಂದೇಟು ಹಾಕುತ್ತಿರುವುದು ಅವರಿಗೆ ಸಿಟ್ಟು ತರಿಸಿತ್ತು.
ಈ ನಡುವೆ ಪೂರ್ಣ ಬಹುಮತ ಇಲ್ಲದ ಕಾರಣಕ್ಕೆ ಈಗಲೇ ಸರ್ಕಾರ ರಚಿಸುವುದು ಬೇಡ, ರಾಷ್ಟ್ರಪತಿ ಆಡಳಿತ ತರೋಣ ಎಂಬ ಚರ್ಚೆಗಳು ಶುರುವಾದವು. ಇದಕ್ಕೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಮುಖ್ಯ ಕಾರಣರಾಗಿದ್ದರು ಎಂದು ಹೇಳಲಾಗುತ್ತಿತ್ತು.

ನಂತರ ಯಡಿಯೂರಪ್ಪ ಕೋಪಿಸಿಕೊಂಡು ಒಂದು ತಂಡವನ್ನು ದೆಹಲಿಗೆ ಕಳಿಸಿದರು. ಅಮಿತ್ ಶಾರನ್ನು ಭೇಟಿಯಾಗುವುದು ಈ ನಿಯೋಗದ ಕೆಲಸವಾಗಿತ್ತು. ಜಗದೀಶ್ ಶೆಟ್ಟರ್, ಅರವಿಂದ ಲಿಂಬಾವಳಿ, ಮಾಧುಸ್ವಾಮಿ, ವಿಜಯೇಂದ್ರ ಇಷ್ಟು ಜನ ನಿಯೋಗದಲ್ಲಿದ್ದರು. ಅಂದು ಬೆಳಿಗ್ಗೆ ಲೋಕಸಭೆಗೆ ಹೊರಡುವ ಮುನ್ನ ನಿಯೋಗವನ್ನು ಭೇಟಿ ಮಾಡಿದ ಅಮಿತ್ ಶಾ ಯಾವುದೇ ತೀರ್ಮಾನ ತೆಗೆದುಕೊಳ್ಳದೇ ಸಂಜೆ ಬರುತ್ತೇನೆ ಕಾಯಿರಿ ಎಂದು ಹೇಳಿಹೋದವರು ಸಂಜೆ ಬರಲೇ ಇಲ್ಲ.

ಅಂದು ಸಂಜೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಸಭೆ ಸೇರಿ ಅತೃಪ್ತರನ್ನು ಮನವೊಲಿಸುವ ಅಂತಿಮ ಪ್ರಯತ್ನ ಮಾಡುವ ನಿರ್ಣಯವಾಯಿತು. ಆ ಪ್ರಕಾರ ಈಶ್ವರ್ ಖಂಡ್ರೆ ಅತೃಪ್ತರನ್ನು ಭೇಟಿಯಾಗಲು ಅವರು ಪೂನಾದಲ್ಲಿದ್ದಾರೆ ಎಂಬ ಮಾಹಿತಿಯ ಮೇರೆಗೆ ಪೂನಾಗೆ ಹೊರಟರೆ, ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸಿದ್ದ ಅತೃಪ್ತ ಶಾಸಕರನ್ನು ಭೇಟಿ ಮಾಡಿ, ಅವರು ಕೇಸ್ ವಾಪಸ್ ಪಡೆದರೆ ಹೇಗೆ ಎಂದು ಚರ್ಚಿಸುವ ಉದ್ದೇಶದಿಂದ ಡಿ.ಕೆ ಶಿವಕುಮಾರ್ ದೆಹಲಿಗೆ ಹೊರಟರು.

ಸೋಮಶೇಖರ್, ಮುನಿರತ್ನ, ಭೈರತಿ ಬಸವರಾಜ್, ಎಂಟಿಬಿ ನಾಗರಾಜ್, ಸುಧಾಕರ್ ಮತ್ತು ಗೋಪಾಲಯ್ಯ ಮತ್ತೆ ವಾಪಸ್ ಮೈತ್ರಿ ಸರ್ಕಾರಕ್ಕೆ ಬರಲು ರೆಡಿ ಇದ್ದಾರೆ ಎನ್ನುವ ಮಾಹಿತಿ ಓಡಾಡಿತು. ಅತೃಪ್ತರ ಪೈಕಿ ಈ ಆರು ಜನರ ಮೇಲೆಯೇ ಬಿಜೆಪಿಗೂ ಡೌಟ್ ಇತ್ತು. ಇವರಲ್ಲಿ ಸುಧಾಕರ್ ಮತ್ತು ಗೋಪಾಲಯ್ಯ ಹಿಂದೆಯೂ ತಮ್ಮ ಪಕ್ಷಗಳ ವಿರುದ್ಧ ಮಾತಾಡಿದ್ದರು. ಉಳಿದ ನಾಲ್ಕು ಜನ ರಾಜೀನಾಮೆ ನೀಡಬಹುದು ಎಂಬ ನಿರೀಕ್ಷೆ ಮೊದಲು ಬಿಜೆಪಿಗೇ ಇರಲಿಲ್ಲ ಇಷ್ಟು ಜನ ಶಾಸಕರಿಗೆ ಕಾಂಗ್ರೆಸ್ ಒಂದು ಆಫರ್ ಸಹ ನೀಡಿತ್ತು. ಅದು ಡಿ.ಕೆ.ಶಿವಕುಮಾರ್ ಅಥವಾ ರಾಮಲಿಂಗಾರೆಡ್ಡಿ ಸಿಎಂ ಆಗುತ್ತಾರೆ ಎನ್ನುವ ಆಫರ್ ಅದಾಗಿತ್ತು. ಇದಕ್ಕೆ ಕೆಲವರಿಗೆ ಸಹಮತ ಸಹ ಇತ್ತು ಎನ್ನಲಾಗುತ್ತಿತ್ತು. ಈ ಸಂದರ್ಭದಲ್ಲಿ ಯಡಿಯೂರಪ್ಪ ಎಚ್ಚೆತ್ತುಕೊಂಡರು.

ಗುರುವಾರ ರಾತ್ರಿ ಅತೃಪ್ತರ ಜೊತೆ ಮಾತನಾಡಿದ ಯಡಿಯೂರಪ್ಪ ಒಂದು ಹೊಸ ದಾಳ ಉರುಳಿಸಿದರು. ಅತೃಪ್ತರ ಹತ್ತಿರ ‘ಸ್ಪೀಕರ್ ನಮ್ಮನ್ನು ಯಾವಾಗ ಅನರ್ಹಗೊಳಿಸುತ್ತಾರೆ ಹೇಳಲಿಕ್ಕೆ ಬರುವುದಿಲ್ಲ. ಹಾಗಾಗಿ ಅದಕ್ಕೂ ಮುಂಚೆ ಹೊಸ ಸರ್ಕಾರ ರಚಿಸಿಬಿಡಬೇಕು, ಇಲ್ಲದಿದ್ದರೆ ನಮ್ಮ ಪಾಡನ್ನು ನಾವು ನೋಡಿಕೊಳ್ಳುತ್ತೇವೆ’ ಎಂದು ಹೇಳಿಸಿದರು. ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಯಡಿಯೂರಪ್ಪನವರ ಪರವಾದ ನಿಯೋಗ ಜೆ.ಪಿ ನಡ್ಡಾ ಮನೆಗೆ ಹೋಯಿತು. ಶೆಟ್ಟರ್ ಮೂಲಕ ಅತೃಪ್ತ ಶಾಸಕರು ಜೆ.ಪಿ ನಡ್ಡಾರನ್ನು ಬ್ಲಾಕ್‍ಮೇಲ್ ಮಾಡಿದರು. ನಾಳೆ ಬೆಳಿಗ್ಗೆ ಒಳಗೆ ಯಡಿಯೂರಪ್ಪನವರು ಸಿಎಂ ಆಗಿಬಿಡಬೇಕು ಇಲ್ಲದಿದ್ದರೆ ನಾವು ವಾಪಸ್ ಹೋಗುತ್ತೇವೆ ಎಂದು ಬೆದರಿಕೆ ಹಾಕಿದರು.
ತದನಂತರವಷ್ಟೇ ಹೆದರಿದ ಬಿಜೆಪಿ ಹೈಕಮಾಂಡ್ ಶುಕ್ರವಾರ ಮಧ್ಯಾಹ್ನದ ವೇಳೆಗೆ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಬಹುದು ಎಂದು ಘೋಷಿಸಬೇಕಾಯ್ತು. ಅಂದರೆ ಮೊದಲ ಬಾರಿಗೆ ಹೈಕಮಾಂಡ್ ಅನ್ನು ಬಗ್ಗಿಸಿ ಯಡಿಯೂರಪ್ಪ ಮುಖ್ಯಮಂತ್ರಿಯಾದರು.

ಕ್ಯಾಬಿನೆಟ್ ವಿಸ್ತರಣೆ ಮಾತ್ರ ಹೈಕಮಾಂಡ್ ಕೈಯಲ್ಲಿದೆ.

ಇದುವರೆಗೂ ಮೋದಿ-ಅಮಿತ್ ಶಾರನ್ನು ಬಗ್ಗಿಸಿ ಸಿಎಂ ಆದವರು ಯಾರು ಇರಲಿಲ್ಲ. ಮಾಸ್ ಫಾಲೋವರ್ಸ್ ಇಲ್ಲದವರನ್ನು ಮೋದಿ ಅಮಿತ್ ಶಾ ಮುಖ್ಯಮಂತ್ರಿಗಳನ್ನಾಗಿ ಮಾಡಿದ್ದರು. ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವಿಸ್, ಗುಜರಾತಿನಲ್ಲಿ ವಿಜಯ್ ರೂಪಾಣಿ, ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್, ಜಾರ್ಖಂಡ್‍ನಲ್ಲಿ ಆದಿವಾಸಿಯಲ್ಲದವರು ಸಿಎಂ, ಹರಿಯಾಣದಲ್ಲಿ ಪಂಜಾಬ್‍ನ ವ್ಯಕ್ತಿಯೊಬ್ಬನನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರಿಸಿತ್ತು, ಆದರೆ ಈಗ ಯಡಿಯೂರಪ್ಪ ಮಾತ್ರ ಅದಕ್ಕೆ ಬಗ್ಗಿಲ್ಲ.

ಪ್ರಾದೇಶಿಕವಾಗಿ ಪ್ರಬಲ ಮಾಸ್ ಲೀಡರ್ ಇರಬಾರದು ಎಂಬುದು ಸಾಮಾನ್ಯವಾಗಿ ದೆಹಲಿ ನಾಯಕರುಗಳ ಇರಾದೆಯಾಗಿರುತ್ತದೆ. ಈ ಸದ್ಯ ಮಧ್ಯಪ್ರದೇಶ ಮತ್ತು ರಾಜಸ್ತಾನದಲ್ಲಿ ಕಾಂಗ್ರೆಸ್ ಸರ್ಕಾರಗಳನ್ನು ಉರುಳಿಸುವುದು ಬಿಜೆಪಿಗೆ ಕಷ್ಟವೇನಲ್ಲ. ಅದರಲ್ಲೂ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ಸಿಗೆ ಸರಳ ಬಹುಮತವೂ ಇಲ್ಲ. ಆದರೆ, ಇಂತಹ ಸ್ಥಿತಿಯಲ್ಲಿ ಬಿಜೆಪಿ ಸರ್ಕಾರ ರಚಿಸಿದರೆ, ಪ್ರಾದೇಶಿಕವಾಗಿ ಪ್ರಬಲವಾಗಿರುವ ನರೇಂದ್ರ ಮೋದಿ ಮತ್ತು ಅಮಿತ್‍ಶಾ ಸಮಕಾಲೀನರಾಗಿರುವ ಶಿವರಾಜ್ ಚೌಹಾಣ್ ಮತ್ತು ವಸುಂದರರಾಜೇ ಸಿಂಧಿಯಾ ಅವರನ್ನೇ ಸಿಎಂಗಳನ್ನಾಗಿಸಬೇಕಾಗುತ್ತದೆ. ಅದು ಬೇಡ ಎಂಬ ಕಾರಣಕ್ಕೂ ಅಲ್ಲಿ ಸರ್ಕಾರ ಉರುಳಿಸುವ ಕೆಲಸಕ್ಕೆ ಕೈ ಹಾಕುತ್ತಿಲ್ಲ.

ಕರ್ನಾಟಕದಲ್ಲಿ ಯಡಿಯೂರಪ್ಪನವರು ಅಷ್ಟು ಕಾಯಲು ಸಿದ್ಧರಿಲ್ಲ. ಜೊತೆಗೆ ದಕ್ಷಿಣ ಭಾರತದ ಒಂದು ರಾಜ್ಯದಲ್ಲಾದರೂ ಸರ್ಕಾರ ಇರುವುದು ಬಿಜೆಪಿಗೂ ಬೇಕು. ಹೀಗಾಗಿ ಕರ್ನಾಟಕ ಸರ್ಕಾರ ಉರುಳಿಸಿ ಚುನಾವಣೆಗೆ ಹೋಗೋಣ ಎಂಬ ಬಗ್ಗೆ ದೆಹಲಿ ನಾಯಕರು ಯೋಚಿಸುತ್ತಿದ್ದರು. ಅಂತಹ ಸಂದರ್ಭದಲ್ಲಿ ಅತೃಪ್ತರ ಮೂಲಕ ಯಡಿಯೂರಪ್ಪನವರು ಒಂದು ಷಾಕ್ ಟ್ರೀಟ್‍ಮೆಂಟ್ ಕೊಟ್ಟಿದ್ದಲ್ಲದೇ ಇನ್ನೂ ಖಚಿತವಾದ ಸಂದೇಶವನ್ನೂ ನೀಡಿದರು ಎನ್ನಲಾಗುತ್ತದೆ.

ಅಲ್ಲಿಂದಾಚೆಗೆ ಅಮಿತ್ ಶಾಗೆ ಹೆಚ್ಚಿನ ಸಾಧ್ಯತೆಗಳಿರಲಿಲ್ಲ. ಗವರ್ನರ್ ಮತ್ತು ಯಡಿಯೂರಪ್ಪ ಇಬ್ಬರಿಗೂ ಗೋ ಅಹೆಡ್ ಎಂಬ ಸೂಚನೆಯನ್ನು ರವಾನಿಸಿದರು. ಆದರೆ, ಅಲ್ಲಿಂದ ಮುಂದಕ್ಕೆ ಎಲ್ಲಾ ವಿಚಾರಗಳೂ ಯಡಿಯೂರಪ್ಪ ಹೇಳಿದಂತೆ ನಡೆಯಲು ಬಿಡಬಾರದು ಅಂತಲೂ ತೀರ್ಮಾನಿಸಿದರು. ಹಾಗಾಗಿಯೇ ಯಡ್ಡಿ ಒಬ್ಬರನ್ನೇ ಪ್ರಮಾಣವಚನ ಸ್ವೀಕರಿಸಲು ಹೇಳಿದರು. ಸ್ಪೀಕರ್ ರಮೇಶ್‍ಕುಮಾರ್ ರಾಜೀನಾಮೆ ನೀಡಿದ ನಂತರ, ಆ ಸ್ಥಾನಕ್ಕೆ ಬೋಪಯ್ಯನವರನ್ನು ತರಬೇಕು ಎಂಬ ಯಡಿಯೂರಪ್ಪನವರ ಇರಾದೆಗೂ ಸೊಪ್ಪು ಹಾಕಲಿಲ್ಲ. ಸಂಘಪರಿವಾರಕ್ಕೆ ನಿಷ್ಠರಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಯಡಿಯೂರಪ್ಪನವರ ಆಯ್ಕೆಯಾಗಿರಲಿಲ್ಲ.

ಹೊಸ ಮುಖ್ಯಮಂತ್ರಿಗೆ ಇನ್ನು ಮುಂದೆ ಅಡಿಗಡಿಗೂ ತೊಡಕುಂಟಾಗಲಿರುವುದು ವಿರೋಧ ಪಕ್ಷಗಳಲ್ಲ. ಬದಲಿಗೆ ಬಿಜೆಪಿ ಹೈಕಮಾಂಡ್ ಮತ್ತು ಅದರ ದಾಳಗಳಾಗಿ ಕರ್ನಾಟಕದಲ್ಲಿ ಬಳಕೆಯಾಗಲಿರುವ ಬಿಜೆಪಿ ನಾಯಕರುಗಳು. ಇದನ್ನು ಬಲ್ಲ ಯಡ್ಡಿ, ಅಗತ್ಯಕ್ಕಿಂತಲೂ ಹೆಚ್ಚೇ ವಿರೋಧ ಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸುವ ಮಾತುಗಳನ್ನು ವಿಶ್ವಾಸಮತಯಾಚನೆಯ ಸಂದರ್ಭದಲ್ಲಿ ಆಡಿದರು. ದ್ವೇಷದ ಕ್ರಮಗಳಿಗೆ ತಾನು ಮುಂದಾಗುವುದಿಲ್ಲ ಎಂತಲೂ ಹೇಳಿದರು.

ಆದರೆ ಅವರು ತೆಗೆದುಕೊಳ್ಳುತ್ತಿರುವ ಕ್ರಮಗಳು ಮಾತ್ರ ವಿರೋಧ ಪಕ್ಷಗಳ ಹಿತಾಸಕ್ತಿಗಳನ್ನು ಸಿಟ್ಟಿಗೇಳಿಸುವ ರೀತಿಯೇ ಇದೆ. ಇನ್ನೂ ನಿಯೋಜಿತ ಮುಖ್ಯಮಂತ್ರಿಯಾಗಿದ್ದಾಗಲೇ, ಹಿಂದಿನ ಸರ್ಕಾರದ ಆದೇಶಗಳನ್ನು ಪೆಂಡಿಂಗ್ ಇರಿಸಿದರು; ಕುಮಾರಸ್ವಾಮಿಯವರ ಬಜೆಟ್‍ಗೆ ಮೂರು ತಿಂಗಳ ಲೇಖಾನುದಾನ ಮಾತ್ರ ಪಡೆದುಕೊಂಡು, ಇನ್ನೊಂದು ಬಜೆಟ್ ಮಂಡಿಸುವ ಸುಳಿವು ನೀಡಿದ್ದಾರೆ. ಇನ್ನೂ ಸಚಿವ ಸಂಪುಟ ರಚನೆಯಾಗುವ ಮೊದಲೇ, ಸಚಿವ ಸಂಪುಟದ ತೀರ್ಮಾನವಾಗಿ ಟಿಪ್ಪು ಜಯಂತಿಯನ್ನು ರದ್ದು ಮಾಡಿದ್ದಾರೆ. ಕೆಜೆಪಿಗೆ ಹೋದಾಗ ಟಿಪ್ಪು ಟೋಪಿಯನ್ನು ಹಾಕಿಕೊಂಡು, ಖಡ್ಗ ಹಿಡಿದುಕೊಂಡು ಮಿಂಚಿದ್ದ ಯಡಿಯೂರಪ್ಪನವರ ಮೇಲೆ ಬಿಜೆಪಿಯ ಬೇರೆ ಶಕ್ತಿಗಳ ಒತ್ತಡದ ಪರಿಣಾಮವೂ ಇವಾಗಿರುವ ಸಾಧ್ಯತೆ ಇದೆ.

ಈ ಸಾರಿ ಆಪರೇಷನ್ ಮಾಡಿದ್ದು ಯಡ್ಡಿಯೇ
ಸ್ಥಳೀಯ ಬಿಜೆಪಿಗೆ ಗೊತ್ತಿಲ್ಲದೆಯೇ ಡೀಲ್ ನಡೆದಿದೆಯಂತೆ, ಹೈಕಮಾಂಡೇ ಎಲ್ಲರನ್ನೂ ಸಂಪರ್ಕಿಸಿ ಬುಟ್ಟಿಗೆ ಹಾಕಿಕೊಂಡಿದೆಯಂತೆ ಎಂಬ ವದಂತಿಗಳು ಸಾಕಷ್ಟು ಹರಿದಾಡಿದ್ದವು. ಆದರೆ ಇದು ಯಡಿಯೂರಪ್ಪ ಮತ್ತು ಹೈಕಮಾಂಡ್ ಜೊತೆ ಸೇರಿ ನಡೆಸಿದ ಆಪರೇಷನ್ ಆಗಿತ್ತು. ಅರವಿಂದ ಲಿಂಬಾವಳಿ, ಯಡ್ಡಿ ಪಿ.ಎ. ಸಂತೋಷ್, ಡಾ.ಸಿ.ಎನ್.ಅಶ್ವತ್ಥನಾರಾಯಣ, ಯೋಗೇಶ್ವರ್ ಮತ್ತು ಆರ್.ಅಶೋಕ್ ಅವರುಗಳು ಇದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಫೈನಾನ್ಸ್ ಡೀಲ್ ಮಾಡಿದ್ದು ಪಿಯೂಷ್ ಗೋಯೆಲ್ ಎಂದು ಬಿಜೆಪಿ ಮೂಲಗಳು ಹೇಳುತ್ತವೆ.

ಹೈಕಮಾಂಡ್ ನೇರವಾಗಿ ಇಳಿದು ಕಾರ್ಯಾಚರಣೆ ನಡೆಸಲಾರಂಭಿಸಿದ್ದು, ರಾಜೀನಾಮೆಗಳ ನಂತರವೇ. ರಾಜೀನಾಮೆಯ ನಂತರ ಮಹಾರಾಷ್ಟ್ರಕ್ಕೆ ಬರುವುದು ಮತ್ತು ಅಲ್ಲಿ ಬೇಕಾದ ರಕ್ಷಣೆಯ ವ್ಯವಸ್ಥೆಯನ್ನು ಮಾಡಿದ್ದು ಕೇಂದ್ರ ಬಿಜೆಪಿ – ಸ್ಥಳೀಯ ಸರ್ಕಾರದ ನೆರವಿನೊಂದಿಗೆ. ಅಲ್ಲಿಂದಾಚೆಗೆ ಆ ಎಲ್ಲಾ ಶಾಸಕರೂ ಗಟ್ಟಿಯಾಗಿ ಉಳಿಯುತ್ತಾರೆ ಎಂಬ ಭರವಸೆ ಬಿಜೆಪಿಗೇ ಇರಲಿಲ್ಲ. ಆಗ ಶಾಸಕರಿಗೆ ಪರೋಕ್ಷವಾಗಿ ಇಡಿ-ಐಟಿಯ ಭಯವನ್ನು ಹುಟ್ಟಿಸಲಾಯಿತು. ಅದರಲ್ಲೂ ಹೈಕಮಾಂಡ್‍ನ ನೇರ ಭಾಗವಹಿಸುವಿಕೆ ಇತ್ತು. ಎಂಟಿಬಿ ನಾಗರಾಜ್‍ರ ವಿಚಾರದಲ್ಲೂ ಬಿಜೆಪಿಯ ಕೇಂದ್ರ ನಾಯಕರ ಪಾತ್ರವಿತ್ತು (ಕಳೆದ ಸಂಚಿಕೆಯಲ್ಲಿ ಈ ಕುರಿತು ಬರೆಯಲಾಗಿದೆ)
ಇದೆಲ್ಲಾ ಏನೇ ಇದ್ದರೂ, ಈ ಸಾರಿಯ ಆಪರೇಷನ್‍ನ ಮೂಲ ಸೂತ್ರಧಾರಿ ಸ್ವತಃ ಯಡಿಯೂರಪ್ಪನವರೇ ಆಗಿದ್ದರು. ಆಪರೇಷನ್ ನಡೆಯಲಿ ಎಂಬ ಅಭಿಪ್ರಾಯ ಬಿಜೆಪಿ ಹೈಕಮಾಂಡ್‍ದಾಗಿತ್ತಾದರೂ, ಕೂಡಲೇ ಬಿಜೆಪಿ ಸರ್ಕಾರ ರಚಿಸಬೇಕೇ ಎಂಬ ಕುರಿತು ಅಂತಿಮ ತೀರ್ಮಾನ ತೆಗೆದುಕೊಂಡಿರಲಿಲ್ಲ. ಯಡಿಯೂರಪ್ಪನವರನ್ನು ಈಗಲೇ ಪಕ್ಕಕ್ಕೆ ಸರಿಸುವುದು ಕಷ್ಟ; ಆದರೆ ಅವರನ್ನೇ ಕರ್ನಾಟಕದ ಬಲಿಷ್ಠ ನಾಯಕನನ್ನಾಗಿ ಬಿಂಬಿಸಬಾರದು ಎಂಬುದು ಅವರ ಲೆಕ್ಕಾಚಾರವಿದ್ದಂತೆ ತೋರುತ್ತದೆ.

ವಿರೋಧ ಪಕ್ಷದ ನಾಯಕ ಯಾರು?
ಯಡಿಯೂರಪ್ಪನವರು ವಿಶ್ವಾಸಮತ ಯಾಚನೆ ಮಾಡುವಾಗ, ಉಪಸಭಾಧ್ಯಕ್ಷರ ಪಕ್ಕದ ಸೀಟು – ಅಂದರೆ ವಿರೋಧ ಪಕ್ಷದ ನಾಯಕರ ಸೀಟು – ಯಾರಿಗೆ ಎಂಬುದು ನಿರ್ಧಾರವಾಗಿರಲಿಲ್ಲ. ಸಮ್ಮಿಶ್ರ ಸರ್ಕಾರವಿದ್ದಾಗ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯನವರು ಅದು ತನಗೇ ಮೀಸಲಾದದ್ದು ಎಂಬ ರೀತಿಯಲ್ಲಿ ಅಲ್ಲಿ ಕೂತರು. ವಿರೋಧ ಪಕ್ಷದ ನಾಯಕನಿಗಿಂತಲೂ ತಾನೇ ಮುಖ್ಯಮಂತ್ರಿ ಎಂಬ ರೀತಿಯಲ್ಲಿ ಸಿದ್ದರಾಮಯ್ಯನವರ ಬಾಡಿ ಲಾಂಗ್ವೇಜ್ ಮತ್ತು ನಡವಳಿಕೆ ಇತ್ತು. ಒಮ್ಮೆ ಯಡಿಯೂರಪ್ಪನವೂ ಬಾಯಿ ತಪ್ಪಿ, ‘ಮಾನ್ಯ ಮುಖ್ಯಮಂತ್ರಿಗಳೇ’ ಎಂದು ಸಿದ್ದರಾಮಯ್ಯನವರನ್ನು ಸಂಬೋಧಿಸಿದರು.

ಸರ್ಕಾರ ಉಳಿಯುವವರೆಗೆ ಸಿದ್ದರಾಮಯ್ಯನವರನ್ನು ವಿರೋಧಿಸದಿದ್ದ, ಇತರ ಕಾಂಗ್ರೆಸ್ ನಾಯಕರು ಇದೀಗ ‘ಸರ್ಕಾರ ಉರುಳಲು ಸಿದ್ದರಾಮಯ್ಯನವರು ತಮ್ಮ ಆಪ್ತರನ್ನು ಹಿಡಿದಿಟ್ಟುಕೊಳ್ಳದಿದ್ದುದೂ ಕಾರಣ’ ಎಂದು ಪಕ್ಷದ ವಲಯಗಳೊಳಗೆ ಮಾತಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಈಗಾಗಲೇ ‘ಪಕ್ಷ ಹೇಳಿದರೆ, ಸದನದಲ್ಲಿ ಪಕ್ಷವನ್ನು ಮುನ್ನಡೆಸುತ್ತೇನೆ’ ಎಂದೂ ಹೇಳಿಯಾಗಿದೆ.

ಶಾಸಕರು ರಾಜೀನಾಮೆ ಕೊಟ್ಟ ನಂತರ, ಸರ್ಕಾರ ಬೀಳುವವರೆಗೆ ಅಪೂರ್ವ ಒಗ್ಗಟ್ಟು ಪ್ರದರ್ಶಿಸಿದ್ದ ಕಾಂಗ್ರೆಸ್ ನಾಯಕರು ಮತ್ತು ಕಾಂಗ್ರೆಸ್-ಜೆಡಿಎಸ್ ನಾಯಕರ ಮುಂದಿನ ನಡವಳಿಕೆ ಹೇಗಿರುತ್ತದೆ ಎಂಬುದನ್ನು ಈಗಲೇ ಹೇಳಲಾಗದು. ಆದರೆ, ಆ ಒಂದು ವಾರದ ಒಗ್ಗಟ್ಟಂತೂ ಉಳಿಯುವುದಿಲ್ಲ ಎಂಬುದಕ್ಕೆ ಸೂಚನೆಗಳು ಈಗಾಗಲೇ ಸಿಕ್ಕಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬೀದಿಬದಿ ವ್ಯಾಪಾರಿಗಳ ಒಕ್ಕಲೆಬ್ಬಿಸುವಿಕೆ ಖಂಡಿಸಿ ಸರ್ಕಾರದ ವಿರುದ್ದ ಬೃಹತ್ ಪ್ರತಿಭಟನೆ

ಬೆಂಗಳೂರು ನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರವಿನ ಹೆಸರಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ನಡೆಸುತ್ತಿರುವ ಏಕಪಕ್ಷೀಯ ಕಾರ್ಯಾಚರಣೆ ಬಡ ಬೀದಿಬದಿ ವ್ಯಾಪಾರಿಗಳ ಬದುಕನ್ನು ಬೀದಿಗೆ ತಳ್ಳಿದೆ. ಪ್ರಾಧಿಕಾರದ ಈ ಜನವಿರೋಧಿ ‘ಆಪರೇಷನ್’ ಖಂಡಿಸಿ,...

ಬಿಹಾರ| ಹಿಜಾಬ್ ತೆಗೆದು ಹಣೆಗೆ ಸಿಂಧೂರ ಇಟ್ಟುಕೊಳ್ಳುವಂತೆ ಮುಸ್ಲಿಂ ಮಹಿಳೆಗೆ ಒತ್ತಾಯಿಸಿದ ಗುಂಪು

ಪುರುಷರ ಗುಂಪೊಂದು ದಾರಿಯಲ್ಲಿ ಹೋಗುತ್ತಿದ್ದ ಮುಸ್ಲಿಂ ಮಹಿಳೆಯನ್ನು ತಡೆದು ದೌರ್ಜನ್ಯ ಎಸಗಿದ್ದು, ಆಕೆ ಧರಿಸಿದ್ದ ಹಿಜಾಬ್ ತಗೆದು ಹಣೆಗೆ ಸಿಂಧೂರ ಇಟ್ಟುಕೊಳ್ಳುವಂತೆ ಹಿಂದುತ್ವ ಕಿಡಿಗೇಡಿಗಳು ಒತ್ತಾಯಿಸಿರುವ ವಿಡಿಯೊ ವೈರಲ್ ಆಗಿದೆ. ಜುಲೈ 8 ರ...

ಕೃಷಿ ಭೂಮಿ ಉಳಿಸಲು ರೈತ ಸಂಘಟನೆಗಳಿಂದ ಜುಲೈ 11ಕ್ಕೆ ‘ಬಿಡದಿ ಚಲೋ’

ಬಿಡದಿ ಉಪನಗರ (ಟೌನ್‌ಶಿಪ್) ಯೋಜನೆಗಾಗಿ ರೈತರ ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರದ ಜನವಿರೋಧಿ ಧೋರಣೆಯನ್ನು ಖಂಡಿಸಿ, ಜುಲೈ 11 ರಂದು ಬೃಹತ್ ‘ಬಿಡದಿ ಚಲೋ’ ಹಸಿರು ಹೆದ್ದಾರಿ ಪ್ರತಿಭಟನೆಯನ್ನು...

ಅಮೆರಿಕ-ಇರಾನ್ ನಡುವೆ ಮತ್ತೆ ಕಾಳಗ : ಕದನ ವಿರಾಮ ಮುಕ್ತಾಯಗೊಂಡಿದೆ ಎಂದ ಟ್ರಂಪ್

ಮಂಗಳವಾರ ರಾತ್ರಿಯಿಂದ (ಭಾರತೀಯ ಕಾಲಮಾನ) ಅಮೆರಿಕ-ಇರಾನ್ ನಡುವೆ ಮತ್ತೆ ಕಾಳಗ ಶುರುವಾಗಿದ್ದು, ಕದನ ವಿರಾಮ ಮುಕ್ತಾಯಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಟರ್ಕಿಯಲ್ಲಿ ನಡೆದ ನ್ಯಾಟೋ ಶೃಂಗಸಭೆಯಲ್ಲಿ ಮಾತನಾಡಿದ ಟ್ರಂಪ್...

ಅಯೋಧ್ಯೆ ದೇಣಿಗೆ ಹಗರಣ: ಕೇವಲ 45 ದಿನಗಳಲ್ಲಿ 70 ಬಾರಿ ಕಳ್ಳತನ, SIT ವರದಿ

ಅಯೋಧ್ಯೆಯ ರಾಮಮಂದಿರಕ್ಕೆ ಬಂದ ಸಾರ್ವಜನಿಕರ ದೇಣಿಗೆ ದುರುಪಯೋಗದ ಆರೋಪದ ಕುರಿತು ವಿಶೇಷ ತನಿಖಾ ತಂಡ (SIT) ನಡೆಸಿದ ಪ್ರಾಥಮಿಕ ತನಿಖೆಯಲ್ಲಿ, ಕೇವಲ 45 ದಿನಗಳಲ್ಲಿ ಸುಮಾರು 70 ಸಂಶಯಾಸ್ಪದ ಕಳ್ಳತನಗಳು ನಡೆದಿರುವುದಕ್ಕೆ ಪ್ರಾಥಮಿಕ...

ಬರುಯಿಪುರ ಅತ್ಯಾಚಾರ-ಕೊಲೆ ಪ್ರಕರಣ: ಪ್ರಮುಖ ಆರೋಪಿಯ ಎನ್‌ಕೌಂಟರ್; ‘ನನ್ನ ಮಗನ ಶವ ನನಗೆ ಬೇಡ’ ಎಂದ ಹೆತ್ತ ತಾಯಿ!

ಬರುಯಿಪುರ/ಕೋಲ್ಕತ್ತಾ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಬರುಯಿಪುರದಲ್ಲಿ 12 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಮತ್ತು ಕ್ರೂರ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪ್ರಭಾಸ್ ಮೊಂಡೋಲ್ ಬುಧವಾರ...

ವಯನಾಡ್ ಭೂಕುಸಿತ: ಕಾಣೆಯಾದ ಐವರಿಗಾಗಿ ಮುಂದುವರೆದ ಹುಡುಕಾಟ

ಬೆಟ್ಟದ ಜಿಲ್ಲೆಯ ವಯನಾಡ್‌ನಲ್ಲಿ ನಡೆಯುತ್ತಿರುವ ಸುರಂಗ ರಸ್ತೆ ನಿರ್ಮಾಣ ಸ್ಥಳದಲ್ಲಿ ಭೂಕುಸಿತ ಸಂಭವಿಸಿ ಮೂರು ಜೀವಗಳು ಬಲಿಯಾದ ಒಂದು ದಿನದ ನಂತರ, ಕಾಣೆಯಾಗಿರುವ ಐವರಿಗಾಗಿ ಹುಡುಕಾಟ ಮುಂದುವರೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ವಯನಾಡ್...

ನನ್ನನ್ನು ಕೊಂಡುಕೊಳ್ಳಲು ಯಾರ ಕೈಲೂ ಸಾಧ್ಯವಿಲ್ಲ: ಮಹುವಾ ಮೋಯಿತ್ರಾ ವಿಶೇಷ ಸಂದರ್ಶನ

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಜಯಭೇರಿ ಬಾರಿಸಿದ ಬೆನ್ನಲ್ಲೇ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಭದ್ರಕೋಟೆ ಧೂಳೀಪಟವಾಗಿದೆ. ಚುನಾವಣಾ ಸೋಲಿನ ನಂತರ ಸಾಲು...

ಕೋರ್ಟ್ ರಾಜಕೀಯ ಅಖಾಡ ಅಲ್ಲ: ಸಿಎಂ ವಿಜಯ್ ವಿರುದ್ಧ ಅರ್ಜಿ ಸಲ್ಲಿಸಿದ್ದ ಡಿಎಂಕೆಗೆ ಸುಪ್ರೀಂ ತರಾಟೆ

ತಮಿಳುನಾಡಿನ ಕರೂರ್ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರನ್ನು ಭೇಟಿ ಮಾಡದಂತೆ ಮುಖ್ಯಮಂತ್ರಿ ವಿಜಯ್ ಅವರಿಗೆ ನಿರ್ಬಂಧ ಹೇರಬೇಕೆಂದು ಕೋರಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಜನರಿಂದ...

ಸುರಂಗ ರಸ್ತೆ ಕಾಮಗಾರಿ ವೇಳೆ ವಯನಾಡಿನಲ್ಲಿ ಭೂಕುಸಿತ: ಜನರು ಜೀವ ಉಳಿಸಿಕೊಳ್ಳಲು ಓಡಿದ ಭಯಾನಕ ದೃಶ್ಯ ಸೆರೆ

ಕೇರಳದ ವಯನಾಡ್ ಜಿಲ್ಲೆಯ ಮೇಪ್ಪಾಡಿಯಲ್ಲಿ ಮಂಗಳವಾರ (ಇಂದು) ಭೀಕರ ಭೂಕುಸಿತ ಸಂಭವಿಸಿದ್ದು, ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಏಳು ಜನರು ಗಾಯಗೊಂಡಿದ್ದಾರೆ. ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಕಾರ್ಯಾಚರಣೆ ಮುಂದುವರಿದಿದ್ದು, ಈ...