Homeರಾಜಕೀಯಅಧ್ಯಕ್ಷ ಮ್ಯಾಕ್ರೋನ್ ವಿರುದ್ಧ ಫ್ರಾನ್ಸ್ ನಲ್ಲಿ ಪ್ರತಿರೋಧದ ಅಲೆ

ಅಧ್ಯಕ್ಷ ಮ್ಯಾಕ್ರೋನ್ ವಿರುದ್ಧ ಫ್ರಾನ್ಸ್ ನಲ್ಲಿ ಪ್ರತಿರೋಧದ ಅಲೆ

- Advertisement -
- Advertisement -
  • ಡಾ. ಸ್ವಾತಿ ಶುಕ್ಲಾ |

ಮೇ 25ರ ಶನಿವಾರ, ಫ್ರಾನ್ಸ್‍ನ ಬೀದಿಗಳಲ್ಲಿ ಲಕ್ಷಾಂತರ ಜನರ ‘ಜನಪ್ರಿಯ ಅಲೆ’ಯ ಪ್ರತಿರೋಧ. ಫ್ರಾನ್ಸ್‍ನ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರೋನ್‍ರ ಕಾರ್ಮಿಕ ವಿರೋಧಿ ಸುಧಾರಣೆಗಳು ಆ ಜನರನ್ನು ಬೀದಿಗೆ ತಂದಿದ್ದವು. ಸಿಜಿಟಿ ಎಂಬ ಅಲ್ಲಿನ ಅತೀ ದೊಡ್ಡ ಕಾರ್ಮಿಕ ಸಂಘಟನೆಗಳ ಒಕ್ಕೂಟವು ಈ ಪ್ರತಿಭಟನೆಗೆ ಕರೆ ಕೊಟ್ಟಿತ್ತು. ಅಧ್ಯಕ್ಷರ ಪ್ರಸ್ತಾಪಿತ ಜನವಿರೋಧಿ ಆರ್ಥಿಕ ಸುಧಾರಣೆಗಳ ವಿರುದ್ಧ ಶಿಕ್ಷಕರು, ಪೊಲೀಸ್ ಅಧಿಕಾರಿಗಳು ಮತ್ತು ಸಾರಿಗೆ ನೌಕರರು ಪ್ರತಿಭಟಿಸುತ್ತಲೇ ಇದ್ದಾರೆ. ಕಳೆದ ಮೇನಲ್ಲಿ ಮ್ಯಾಕ್ರೋನ್ ಅಧಿಕಾರಕ್ಕೆ ಬಂದ ನಂತರ ಸರ್ಕಾರೀ ಸೇವೆಯಲ್ಲಿನ ನೌಕರರ ಮೂರನೇ ಅತೀ ದೊಡ್ಡ ಮುಷ್ಕರ ಇದಾಗಿದೆ.

ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆಯಲು ತಂದಿರುವ ಹೊಸ ನಿಯಮಗಳು, ವಲಸೆ ಕುರಿತ ಕಾನೂನುಗಳು ಮತ್ತು ಪೊಲೀಸರಿಗೆ ಹೆಚ್ಚು ಅಧಿಕಾರವನ್ನು ನೀಡುವ ನೀತಿಯ ವಿರುದ್ಧ ಶನಿವಾರದ ಪ್ರತಿಭಟನೆ ದನಿಯೆತ್ತಿತ್ತು. ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಸರ್ಕಾರೀ ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆಯುವುದಕ್ಕೆ ಹೊಸ ನಿಯಮಗಳು ಅಡ್ಡಿಯಾಗಿದ್ದವು ಮತ್ತು ಪೊಲೀಸರಿಗೆ ನೀಡಲಾದ ಹೆಚ್ಚಿನ ಅಧಿಕಾರವು ಅಲ್ಲಿನ ಶೋಷಿತ ಸಮುದಾಯಗಳ ವಸತಿ ಪ್ರದೇಶಗಳಲ್ಲಿ ಪೊಲೀಸ್ ದೌರ್ಜನ್ಯವನ್ನು ಹೆಚ್ಚಿಸುವ ಸಾಧ್ಯತೆ ಇದೆ. ಇದುವರೆಗಿನ ಕಾರ್ಮಿಕ ಕಾನೂನುಗಳು ಮತ್ತು ಕಾರ್ಮಿಕ ಸಂಘಗಳಿಂದ ಕಾರ್ಮಿಕರಿಗೆ ಸಿಗುವ ರಕ್ಷಣೆಯ ಕಾರಣದಿಂದಲೇ ಫ್ರಾನ್ಸ್‍ನಲ್ಲಿ ಹೆಚ್ಚು ಆರ್ಥಿಕ ವ್ಯವಹಾರವೂ ನಡೆಯುತ್ತಿಲ್ಲ ಮತ್ತು ಉದ್ಯೋಗ ಸೃಷ್ಟಿಯೂ ಆಗುತ್ತಿಲ್ಲವೆಂದು ಹೇಳುವ ಮ್ಯಾಕ್ರೋನ್ ಕಾರ್ಮಿಕಪರ ಕಾನೂನುಗಳನ್ನು ಕಿತ್ತುಹಾಕುವ ‘ಮಹತ್ವದ’ ಕ್ರಮಕ್ಕೆ ಮುಂದಾಗಿದ್ದಾರೆ. ಹೊಸ ನೀತಿಯ ಪ್ರಕಾರ, ಕಂಪೆನಿಗಳು ಆಯಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇದುವರೆಗೆ ಇರುವ ಒಪ್ಪಂದಗಳನ್ನು ಪಾಲಿಸಬೇಕಿಲ್ಲ; ಹೊಸ ಆರ್ಥಿಕ ನೀತಿಯ ವಿಧಾನಗಳಾದ ಹೈರ್ & ಫೈರ್ – ಬೇಕೆಂದಾಗ ತೆಗೆದುಕೋ ಇಲ್ಲವಾದರೆ ಮನೆಗೆ ಕಳಿಸು – ನೀತಿಯನ್ನೂ, ಕೆಲಸದ ಸ್ಥಳದ ಸೌಲಭ್ಯಗಳನ್ನೂ ಮತ್ತು ಕೆಲಸದ ಅವಧಿಯನ್ನೂ ತಮಗೆ ಇಷ್ಟಬಂದ ರೀತಿಯಲ್ಲಿ ಬದಲಾಯಿಸಬಹುದು. ಏಕಪಕ್ಷೀಯವಾಗಿ ಕೆಲಸದಿಂದ ಕಿತ್ತು ಹಾಕಿದಾಗ ಕೊಡಬೇಕಿದ್ದ ಪರಿಹಾರದ ಮೊತ್ತವನ್ನೂ ಕಡಿಮೆ ಮಾಡಿರುವುದು ಯೂನಿಯನ್ನುಗಳಲ್ಲಿ ಆಕ್ರೋಶ ಮೂಡಿಸಿದೆ. ವಿದೇಶೀ ನೆಲೆಯ ಕಂಪೆನಿಗಳಲ್ಲೂ ಕಾರ್ಮಿಕರನ್ನು ಬೇಕಾಬಿಟ್ಟಿ ಕಿತ್ತು ಹಾಕುವುದಕ್ಕೆ ಇದು ಅವಕಾಶ ಮಾಡಿಕೊಟ್ಟಿದೆ. ಮ್ಯಾಕ್ರೋನ್ ಪ್ರಕಾರ ಇವೆಲ್ಲದರಿಂದ ಫ್ರಾನ್ಸ್‍ನ ಜಾಗತಿಕ ಸ್ಪರ್ಧಾ ಸಾಮಥ್ರ್ಯ ಹೆಚ್ಚಲಿದೆ.

ಪ್ಯಾರಿಸ್, ಮರ್ಸೆಲ್ಲಿ ಮತ್ತು ನ್ಯಾಂಟೆಸ್ ಒಳಗೊಂಡಂತೆ 160 ಕಡೆಗಳಲ್ಲಿ ಪ್ರತಿಭಟನೆಗಳು ನಡೆದವು. ಪ್ಯಾರಿಸ್ ಒಂದರಲ್ಲೇ 80,000 ಜನರು ಪಾಲ್ಗೊಂಡರು. ಪ್ರತಿಭಟನಾಕಾರರು ಹಿಂಸೆಗಿಳಿಯಬಹುದೆಂಬ ಸಂಶಯದ ಮೇಲೆ ಪೊಲೀಸರು ಬಲಪ್ರಯೋಗ ನಡೆಸಿದರು ಮತ್ತು ಅಶ್ರುವಾಯು ಸಿಡಿಸಿದರು. 43 ಜನರನ್ನು ಬಂಧಿಸಿ, 26 ಜನರನ್ನು ಇನ್ನೂ ತಮ್ಮ ವಶದಲ್ಲೇ ಇರಿಸಿಕೊಂಡಿದ್ದಾರೆ.

ಫ್ರಾನ್ಸ್‍ನ ಎಡ ಪಕ್ಷದ ನಾಯಕ ಜ್ಚಾನ್ -ಲು ಮೆಲೆನ್ಕೋ ದಕ್ಷಿಣದ ಬಂದರು ನಗರ ಮರ್ಸೆಲ್ಲಿಯಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಹೇಳಿದ ಮಾತುಗಳು ಹೀಗಿವೆ. ‘ಬಡವರ, ಶೋಷಿತರ, ಸೂರು ರಹಿತರ ಮತ್ತು ನಿರುದ್ಯೋಗಿಗಳ ಪರವಾಗಿ ನಾವಿಂದು ಹೇಳುವ ಮಾತು ಒಂದೇ. ಸಾಕು, ಸಾಕು, ಸಾಕು. ಈ ರೀತಿಯ ಜಗತ್ತು ನಮಗೆ ಸಾಕಾಗಿದೆ’.

ಈ ಮಧ್ಯೆ ಸರ್ಕಾರದ ನೀತಿಯ ವಿರುದ್ಧ ಫ್ರಾನ್ಸ್‍ನ ರೈಲು ಚಾಲಕರ ಮುಷ್ಕರ ಮೂರನೆಯ ತಿಂಗಳಿಗೆ ಕಾಲಿಟ್ಟಿದೆ. ಅವರ ಸೇವಾ ನಿಯಮಗಳನ್ನು ಬದಲಿಸುವ, ಬದುಕಿರುವ ಕಾಲ ಭದ್ರತೆ ಕಲ್ಪಿಸುತ್ತಿದ್ದ ಅನುಕೂಲ ಕಿತ್ತು ಹಾಕುವ ಮತ್ತು ಅವಧಿಪೂರ್ವವಾಗಿ ನಿವೃತ್ತಗೊಳಿಸುವ ನೀಯ ವಿರುದ್ಧ ಅವರು ಮುಷ್ಕರ ಹೂಡಿದ್ದಾರೆ. ಇತ್ತೀಚೆಗಿನ ಪ್ರತಿಭಟನೆಗಳಲ್ಲಿ ಅವರ ಜೊತೆ ಏರ್‍ಫ್ರಾನ್ಸ್‍ನ ಸಿಬ್ಬಂದಿ ವಿದ್ಯಾರ್ಥಿಗಳು ಮತ್ತು ಮ್ಯಾಕ್ರೋನ್‍ರ ನೀತಿಯನ್ನು ವಿರೋಧಿಸುವ ಇತರ ಕಾರ್ಮಿಕರೂ ಸಹಾ ಸೇರಿಕೊಂಡಿದ್ದಾರೆ.

ಫ್ರಾನ್ಸ್‍ನ ಇತಿಹಾಸದಲ್ಲೇ ಅತೀ ಕಿರಿಯ ಅಧ್ಯಕ್ಷರಾಗಿರುವ ಇಮ್ಯಾನ್ಯುಯಲ್ ಮ್ಯಾಕ್ರೋನ್ ಅವರಿಗೆ 40 ವರ್ಷ ವಯಸ್ಸು. ನಡುಪಂಥೀಯರಾದ ಅವರು, ಈ ಹಿಂದೆ ಬ್ಯಾಂಕಿಂಗ್ ಉದ್ದಿಮೆಯಲ್ಲಿದ್ದರು. ‘ಎಲ್ಲರಿಗೂ ಉದ್ಯೋಗ’ದ ಭರವಸೆ ಮತ್ತು ಆರ್ಥಿಕತೆಯ ಪುನಶ್ಚೇತನದ ಘೋಷಣೆಯೊಂದಿಗೆ ಅವರು ಅಧಿಕಾರಕ್ಕೆ ಬಂದರು. ಪ್ರಪಂಚದ ಮಟ್ಟದಲ್ಲಿ ಒಬ್ಬ ಪ್ರಮುಖ ನಾಯಕನಾಗಿ ಗುರುತಿಸಲ್ಪಡುತ್ತಿರುವ ಆತ, ಆಗಾಗ್ಗೆ ಇತರ ವಿಶ್ವ ನಾಯಕರೊಂದಿಗೆ ಕಾಣಿಸಿಕೊಳ್ಳುತ್ತಿರುತ್ತಾರೆ. ಆದರೆ, ತನ್ನ ತವರಿನಲ್ಲೇ ದೊಡ್ಡ ಸವಾಲನ್ನು ಎದುರಿಸಬೇಕಾಗಿ ಬಂದಿದೆ. ನಿವೃತ್ತಿ ವೇತನ ಪಡೆಯುತ್ತಿರುವವರಿಗೆ ತೆರಿಗೆ ಹಾಕಿ ಸರ್ಕಾರೀ ಸಾಲವನ್ನು ತೀರಿಸಬೇಕೆಂದು ಹೇಳುವ ಆತ, ಶ್ರೀಮಂತರಿಗೆ ತೆರಿಗೆ ಕಡಿಮೆ ಮಾಡಬೇಕೆಂಬ ನೀತಿಯನ್ನು ಪ್ರತಿಪಾದಿಸುತ್ತಾರೆ. ಇವೆಲ್ಲದರಿಂದ ಆತನನ್ನು ‘ಶ್ರೀಮಂತರ ಅಧ್ಯಕ್ಷ’ ಎಂದು ಕರೆಯಲಾಗುತ್ತದೆ. ಕಾರ್ಮಿಕ ವಿರೋಧಿ ನೀತಿಗಳು ಮತ್ತು ವಿಶ್ವವಿದ್ಯಾಲಯಗಳಿಗೆ ದಾಖಲಾತಿಯನ್ನು ಕಷ್ಟವಾಗಿಸಿರುವುದರಿಂದ, ವಯಸ್ಸಾದವರು ಮತ್ತು ಯುವಜನರೆಲ್ಲರಿಂದ ವಿರೋಧ ಎದುರಿಸಬೇಕಾಗಿ ಬಂದಿದ್ದು, ಆತನ ಮಾನ್ಯತೆ ಕಡಿಮೆಯಾಗುತ್ತಿದೆ.

ಫ್ರಾನ್ಸ್‍ನ ಕಾರ್ಮಿಕ ಸಂಘಗಳೆಂದರೆ ಯಾರೂ ಮುಟ್ಟಲಾಗದ ಶಕ್ತಿಶಾಲಿ ಸಂಘಗಳಾಗಿ ದಶಕಗಳಿಂದ ಸ್ಥಾಪಿತವಾಗಿವೆ. 1995ರಲ್ಲಿ ಸಂಪ್ರದಾಯವಾದಿ ನಾಯಕತ್ವವು ತರಲು ಹೊರಟಿದ್ದ ಇದೇ ಬಗೆಯ ಜನವಿರೋಧಿ ನೀತಿಗಳನ್ನು ರಾಷ್ಟ್ರವ್ಯಾಪಿ ಮುಷ್ಕರಗಳು ಹಿಮ್ಮೆಟ್ಟಿಸಿದ್ದವು. 1968ರ ನಂತರ ನಡೆದ ಅತೀ ದೊಡ್ಡ ಸಾಮಾಜಿಕ ಹೋರಾಟ ಅದಾಗಿದ್ದು, ಕಾರ್ಮಿಕರು ಮತ್ತು ವಿದ್ಯಾರ್ಥಿಗಳು ಒಟ್ಟು ಸೇರಿ ಸರ್ಕಾರವನ್ನೇ ಕೆಳಗಿಳಿಸುವ ಮಟ್ಟ ತಲುಪಿದ್ದವು.

ಆದರೆ, ಈ ಸಾರಿಯ ಗೆಲುವಿನ ತಕ್ಕಡಿ ಮ್ಯಾಕ್ರೋನ್ ಕಡೆಗೇ ಬಾಗುವ ಸಾಧ್ಯತೆ ಇದೆ. ಏಕೆಂದರೆ, ಸತತ ಮುಷ್ಕರಗಳಿಂದ ಇತರ ಸಾರ್ವಜನಿಕರ ಬೆಂಬಲವು ಕಡಿಮೆಯಾಗುತ್ತಿದೆ ಮತ್ತು ಈಗಲೂ ಮ್ಯಾಕ್ರೋನ್ ಒಬ್ಬ ಒಳ್ಳೆಯ ಸುಧಾರಣಾವಾದಿ ಎಂದು ನಂಬುವವರ ಸಂಖ್ಯೆಯೂ ಸಾಕಷ್ಟಿದೆ. ಕಾರ್ಮಿಕ ಸಂಘಗಳೂ ಈ ಹಿಂದಿನಷ್ಟು ಸದೃಢವಾಗಿಲ್ಲ. 60 ವರ್ಷಗಳ ಹಿಂದೆ ಒಟ್ಟು ಕಾರ್ಮಿಕರಲ್ಲಿ ಮೂರನೇ ಒಂದು ಭಾಗದಷ್ಟು ಕಾರ್ಮಿಕ ಸಂಘಗಳ ಸದಸ್ಯತ್ವ ಪಡೆದುಕೊಂಡಿದ್ದರೆ, ಈಗದು ಬಹಳ ಕಡಿಮೆಯಾಗಿದೆ.

ಮ್ಯಾಕ್ರೋನ್ ಇವೆಲ್ಲದರಿಂದ ಅಲುಗಾಡಿದಂತಿಲ್ಲ ಮತ್ತು ‘ಈ ಆಂದೋಲನಗಳು ನನ್ನನ್ನು ತಡೆಯಲು ಸಾಧ್ಯವಿಲ್ಲ’ ಎಂದು ಘೋಷಿಸಿದ್ದಾರೆ. ಏನಾಗಬಹುದು ಎಂಬುದಕ್ಕೆ ಕಾಲವೇ ಉತ್ತರವನ್ನು ಹೇಳಬಲ್ಲದು….

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಕಾನೂನುಗಳು ನಾಗರಿಕರ ಅನುಕೂಲಕ್ಕಾಗಿ ಇರಬೇಕು, ಕಿರುಕುಳ ನೀಡಬಾರದು’: ಪ್ರಧಾನಿ ಮೋದಿ 

ಪ್ರಧಾನಿ ನರೇಂದ್ರ ಮೋದಿ ಅವರು ಶಾಸಕರು ಜನರಿಗೆ ಹೊರೆಯಾಗದಂತೆ ನೋಡಿಕೊಳ್ಳುವ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸುಧಾರಣೆಗಳನ್ನು ಕೈಗೊಳ್ಳುವಂತೆ ಕರೆ ನೀಡಿದ್ದಾರೆ. ‘ದೇಶದ ಯಾವುದೇ ವ್ಯಕ್ತಿ ಕಾನೂನು ಅಥವಾ ನಿಯಮಗಳಿಂದಾಗಿ ಕಿರುಕುಳ, ಅನಾನುಕೂಲತೆಯನ್ನು ಎದುರಿಸಬಾರದು. ಅಂತಹ...

ನ್ಯಾಯಮೂರ್ತಿ ಸ್ವಾಮಿನಾಥನ್ ಪದಚ್ಯುತಿಗೆ ಪ್ರಸ್ತಾವ ಮಂಡಿಸಿದ ವಿಪಕ್ಷ ಸಂಸದರು

ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರ ಪದಚ್ಯುತಿ ಕೋರಿ ಡಿಎಂಕೆ ಮತ್ತು ಇತರ ವಿರೋಧ ಪಕ್ಷಗಳ ಸಂಸದರು ಲೋಕಸಭಾ ಸ್ಪೀಕರ್ ಮುಂದೆ ಪ್ರಸ್ತಾವ ಮಂಡಿಸಿದ್ದಾರೆ. ಡಿಸೆಂಬರ್ 9ರಂದು ಸಂವಿಧಾನದ 124ನೇ ವಿಧಿಯೊಂದಿಗೆ...

ಕೇರಳ ಎಸ್‌ಐಆರ್ ಗಡುವು ವಿಸ್ತರಿಸಲು ಸುಪ್ರೀಂ ಕೋರ್ಟ್ ನಕಾರ

ಕೇರಳದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಎಣಿಕೆ ನಮೂನೆಗಳನ್ನು ಸಲ್ಲಿಸುವ ಗಡುವು ವಿಸ್ತರಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಪ್ರಸ್ತುತ ಗಡುವಾದ ಡಿಸೆಂಬರ್ 18ರವರೆಗೆ ವಿಷಯವನ್ನು ಮುಂದೂಡಿ, ಆ ನಂತರ ಗಡುವನ್ನು...

‘ಎಷ್ಟೇ ದೊಡ್ಡ ಸಂಸ್ಥೆಯಾದರೂ ಪ್ರಯಾಣಿಕರಿಗೆ ತೊಂದರೆ ನೀಡುವಂತಿಲ್ಲಾ’: ಇಂಡಿಗೋ ಸಂಸ್ಥೆಗೆ ಎಚ್ಚರಿಕೆ ನೀಡಿದ ವಿಮಾನಯಾನ ಸಚಿವ

ಡಿಸೆಂಬರ್ ಆರಂಭದಿಂದಲೂ ಬಿಕ್ಕಟ್ಟು ಎದುರಿಸುತ್ತಿರುವ ಇಂಡಿಗೋ ಏರ್ ಲೈಲ್ಸ್ ಸಂಸ್ಥೆಗೆ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಎಚ್ಚರಿಕೆ ನೀಡಿದ್ದಾರೆ.  "ಇಂಡಿಗೋದಲ್ಲಿನ ಅಡಚಣೆಗಳು ಸ್ಥಿರವಾಗುತ್ತಿವೆ; ದೇಶಾದ್ಯಂತ ಎಲ್ಲಾ ಇತರ ವಿಮಾನಯಾನ ಸಂಸ್ಥೆಗಳು ಸರಾಗವಾಗಿ ಕಾರ್ಯನಿರ್ವಹಿಸುತ್ತಿವೆ....

ಜಾರ್ಖಂಡ್‌| ದಲಿತರಿಗೆ ಸೇವೆ ಬಹಿಷ್ಕರಿಸಿದ ಕ್ಷೌರಿಕರು; ಪೊಲೀಸರ ಎಚ್ಚರಿಕೆ ಹೊರತಾಗಿಯೂ ಅಂಗಡಿಗಳು ಬಂದ್

ಜಾರ್ಖಂಡ್‌ನ ಪೂರ್ವ ಸಿಂಗ್‌ಭೂಮ್‌ನ ಬಹರಗೋರಾ ಬ್ಲಾಕ್‌ನ ಜಯಪುರ ಗ್ರಾಮದಲ್ಲಿ ನಮಗೆ ಕ್ಷೌರಿಕರು ಸೇವೆಗಳನ್ನು ನೀಡುವುದನ್ನು ನಿಲ್ಲಿಸಿದ್ದಾರೆ ಎಂದು ಪರಿಶಿಷ್ಟ ಜಾತಿ ಸಮುದಾಯದ ಸದಸ್ಯರು ಆರೋಪಿಸಿದ್ದಾರೆ. ಕಳೆದ ನಾಲ್ಕು ವಾರಗಳಿಂದ ಹಳ್ಳಿಯಲ್ಲಿರುವ ಎಲ್ಲ ಆರು...

ಕಸಾಪ ಅಕ್ರಮ | 17 ಆರೋಪಗಳ ಪೈಕಿ 14ರ ವಿಚಾರಣೆ ಪೂರ್ಣ : ಹೈಕೋರ್ಟ್‌ಗೆ ಸರ್ಕಾರ ಮಾಹಿತಿ

ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ (ಕಸಾಪ) ನಡೆದಿದೆ ಎನ್ನಲಾದ ಆರ್ಥಿಕ ಅವ್ಯವಹಾರಕ್ಕೆ ಸಂಬಂಧಿಸಿದ 17 ಆರೋಪಗಳ ಪೈಕಿ 14ರ ವಿಚಾರಣೆ ಮುಕ್ತಾಯಗೊಂಡಿದ್ದು, ಉಳಿದ 3 ಅಂಶಗಳ ವಿಚಾರಣೆಯನ್ನು 10 ದಿನಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ರಾಜ್ಯ...

ವೇತನ ಸಹಿತ ಮುಟ್ಟಿನ ರಜೆ : ಸರ್ಕಾರದ ಅಧಿಸೂಚನೆಗೆ ಹೈಕೋರ್ಟ್ ತಡೆ

ಸರ್ಕಾರಿ ಕಚೇರಿಗಳು, ಗಾರ್ಮೆಂಟ್ಸ್‌, ಬಹುರಾಷ್ಟ್ರೀಯ ಕಂಪನಿಗಳು, ಐಟಿ ಮತ್ತು ಇತರ ಖಾಸಗಿ ಕೈಗಾರಿಕೆಗಳು ಸೇರಿ ಎಲ್ಲಾ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ಮುಟ್ಟಿನ ರಜೆ...

‘ಸಿಎಂ ಹುದ್ದೆಗೆ 500 ಕೋಟಿ’ ಹೇಳಿಕೆ : ನವಜೋತ್ ಕೌರ್ ಸಿಧು ಕಾಂಗ್ರೆಸ್‌ನಿಂದ ಅಮಾನತು

"500 ಕೋಟಿ ರೂಪಾಯಿಯ ಸೂಟ್‌ಕೇಸ್ ನೀಡುವ ವ್ಯಕ್ತಿ ಮುಖ್ಯಮಂತ್ರಿಯಾಗುತ್ತಾರೆ" ಎಂದು ಹೇಳಿಕೆ ನೀಡಿದ ಎರಡು ದಿನಗಳ ನಂತರ, ಮಾಜಿ ಕ್ರಿಕೆಟಿಗ ಮತ್ತು ಪಕ್ಷದ ನಾಯಕ ನವಜೋತ್ ಸಿಂಗ್ ಸಿಧು ಅವರ ಪತ್ನಿ ನವಜೋತ್...

ಜಪಾನ್‌ನಲ್ಲಿ ಪ್ರಬಲ ಭೂಕಂಪ : ಕನಿಷ್ಠ 30 ಜನರಿಗೆ ಗಾಯ, ಸಾವಿರಾರು ಜನರ ಸ್ಥಳಾಂತರ

ಸೋಮವಾರ (ಡಿಸೆಂಬರ್ 8) ರಾತ್ರಿ (ಭಾರತೀಯ ಕಾಲಮಾನ ಸಂಜೆ 7.45) ಈಶಾನ್ಯ ಜಪಾನ್‌ನಲ್ಲಿ ಸಂಭವಿಸಿದ 7.5 ತೀವ್ರತೆಯ ಪ್ರಬಲ ಭೂಕಂಪದಲ್ಲಿ ಕನಿಷ್ಠ 30 ಜನರು ಗಾಯಗೊಂಡಿದ್ದು, ಸಾವಿರಾರು ಜನರು ತಮ್ಮ ಮನೆಗಳನ್ನು ತೊರೆದು...

ಸ್ವಾತಂತ್ರ್ಯ ಬಂದು 79 ವರ್ಷಗಳ ನಂತರ ‘ವಂದೇ ಮಾತರಂ’ ಕುರಿತು ಚರ್ಚೆ ಏಕೆ? ಪ್ರಿಯಾಂಕಾ ಗಾಂಧಿ

ಸೋಮವಾರ ಲೋಕಸಭೆಯಲ್ಲಿ 'ವಂದೇ ಮಾತರಂನ 150 ವರ್ಷಗಳು' ಕುರಿತ ಚರ್ಚೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಭಾರತಕ್ಕೆ ಸ್ವಾತಂತ್ರ್ಯ ಬಂದು 79 ವರ್ಷಗಳ ನಂತರ, ಚರ್ಚಿಸಲು ಹೆಚ್ಚು ಮುಖ್ಯವಾದ ವಿಷಯಗಳಿರುವಾಗ, ಈ...