Homeಸಾಹಿತ್ಯ-ಸಂಸ್ಕೃತಿಕವನನ್ಯಾಯ "ಮಂದಿರ" : ಅಯೋಧ್ಯೆ ತೀರ್ಪು ಕುರಿತು ಚಿಂತಕ ಶಿವಸುಂದರ್ ಕವನ

ನ್ಯಾಯ “ಮಂದಿರ” : ಅಯೋಧ್ಯೆ ತೀರ್ಪು ಕುರಿತು ಚಿಂತಕ ಶಿವಸುಂದರ್ ಕವನ

- Advertisement -
- Advertisement -

ಆಹಾ! ಈಗ ಎಲ್ಲಾ ಸರಿಹೋಯಿತು..
ಮಂದಿರಕ್ಕೆ ಜಾಗವಾಯಿತು
ನ್ಯಾಯಕ್ಕೂ ಐದು ಎಕರೆ ಪರಿಹಾರ ಸಿಕ್ಕಿತು …
ಸರ್ವೇ ಜನಾ ಸುಖೀನೋ ಭವಂತು!

ಅವರಿರುವುದು ಹಾಗೆ!
ಕೇಳುತ್ತಾರೆ
ಕೊಡದಿದ್ದರೆ ಕೊಲ್ಲುತ್ತಾರೆ
ನಿಮಗೇನಾಗಿದೆ ಧಾಡಿ?
ಕೇಳಿದ್ದನ್ನು ಕೊಟ್ಟು ಶಾಂತಿ ಕಾಪಾಡಿ….

ಇನ್ನು ಚಿಂತೆ ಇಲ್ಲ,
ಸತ್ಯಕ್ಕೀಗ ಸಾಕ್ಷಿ ಪುರಾವೆಗಳ ಕಾವಲಿಲ್ಲ.
ಸತ್ಯಾಪಹರಣ ಈಗ ತುಂಬಾ ಸಲೀಸು,
ಕಾಯುವ ಲಕ್ಷಣ ರೇಖೆ ಮೊದಲಿಗಿಂತ ಮಸುಕು…

ಇನ್ನು ನಂಬಿಕೆಯೇ ಸಂವಿಧಾನ,
ರಣ ಘೋಷಗಳೇ ವೇದವಾಕ್ಯ
ನಂಬಿಕೆಯಂತೆ ನಡೆದರೆ ಮೋಕ್ಷ,
ಇಲ್ಲವೇ ನಿಜ ನಿರ್ವಾಣ..
ಪುರಾಣ ಮಂತ್ರ ತಂತ್ರ ಕವಡೆ
ಜನಸಂಖ್ಯೆಗೆ ಅನುಗುಣವಾಗಿ ನ್ಯಾಯದ ಬಟವಾಡೆ….

ರಾಮರಾಜ್ಯ ಸ್ವಾಮಿ…
ಶಂಬೂಕರಾದರೆ ನರಕ
ಸಹಿಸಿಕೊಂಡು ಬಾಳಿ…. ಸ್ವರ್ಗಸುಖ!

-ಶಿವಸುಂದರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಸತ್ಯಕ್ಕೆ ಸೋಲಾದರೂ ಪರವಾಗಿಲ್ಲ. ಆದರೆ ಪುರಾಣಕ್ಕೆ ಗೆಲುವಾಗಬೇಕು. ಇದು ಇಂದಿನ ನಮ್ಮ ನ್ಯಾಯ.

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...