Homeಅಂಕಣಗಳುಕಾನೂನುಗಳಿಗಿಂತ ಧರ್ಮವೇ ದೊಡ್ಡದಂತಲ್ಲಾ!

ಕಾನೂನುಗಳಿಗಿಂತ ಧರ್ಮವೇ ದೊಡ್ಡದಂತಲ್ಲಾ!

- Advertisement -
- Advertisement -

ಕಾನೂನುಗಳಿಗಿಂತ ನನ್ನ ಧರ್ಮವೇ ದೊಡ್ಡದು, ಆದ್ದರಿಂದ ನಾನು ಕಾನೂನುಗಳಿಗೆ ಹೆದರುವುದಿಲ್ಲ ಎಂಬಂತಹ ಮಾತೊಂದು ಪತ್ರಿಕೆಗಳಲ್ಲಿ ಹರಿದಾಡಿದಾಗ ಗ್ಯಾರಂಟಿ ಈ ಮಾತನ್ನು ತಾಲೀಬಾನಿಗಳು ಆಡಿರಬಹುದು ಅಥವ ಯಾವುದಾದರೂ ಮೂಲಭೂತಾವಾದಿ ಸಂಘಟನೆಯ ಲೀಡರು ಆಡಿರಬಹುದೆಂದು ಅಷ್ಟೇನು ಗಾಬರಿಯಿಲ್ಲದೆ ಹುಡುಕಿದಾಗ ಈ ಮಾತನ್ನಾಡಿದವರು ನಮ್ಮ ಶರಣ ಪರಂಪರೆಯ ಪ್ರಖರ ವಿಚಾರವಾದಿ ಸ್ವಾಮಿಜಿಯೊಬ್ಬರು ಎಂಬುದು ಗೊತ್ತಾದಾಗ ಏರಿ ನೀರುಂಬೊಡೆ, ಬೇಲಿ ಹೊಲ ಮೇಯ್ದೊಡೆ, ನಾರಿ ತನ್ನ ಮನೆಯಲ್ಲಿ ಕದ್ದೊಡೆ ಬದುಕುವುದೇನಯ್ಯ ಎಂಬಂತಾಯ್ತಲ್ಲಾ.

ಮಧ್ಯ ಕರ್ನಾಟಕದ ಒಂದೆರಡು ಜಿಲ್ಲಾ ಪ್ರದೇಶದಲ್ಲಿ ಗೊತ್ತಿರುವ ಜಗದ್ಗುರುವೊಬ್ಬರು ಹೀಗೆ ಮಾತಾಡುತ್ತಿರಬೇಕಾದರೆ, ಅವರು ಕಾನೂನು ಮೀರಿ ಬಹಳ ವರ್ಷಗಳೇ ಆಗಿರಬೇಕು. ಮಠದ ಸಂವಿಧಾನದ ಪ್ರಕಾರ ಅರವತ್ತು ವರ್ಷಕ್ಕೆ ನಿವೃತ್ತಿ ಪಡೆದು, ಮರಿ ಸ್ವಾಮಿಗೆ ಪಟ್ಟಕಟ್ಟಿ ತಾವು ಪಕ್ಕದಲ್ಲಿ ನಿಲ್ಲಬೇಕಿತ್ತು. ಆದರೆ ಮಠದ ಪರಂಪರೆ ಬದಿಗೊತ್ತಿ, ಅರವತ್ತು ವರ್ಷವನ್ನ ಹಿಂದಿಕ್ಕಿ ಮುಂದುವರಿದ ಜಗದ್ಗುರುವಿನ ನಡೆಗೆ ಬೇಸತ್ತ ಭಕ್ತಾದಿಗಳು ಕಾನೂನು ಮೊರೆಹೋಗಿದ್ದಾರಂತಲ್ಲಾ! ಅದಕ್ಕೆ ಹೆದರಿದ ಜಗದ್ಗುರು ನಾನು ಕಾನೂನಿಗೆ ಹೆದರುವುದಿಲ್ಲ ಎಂದರಂತಲ್ಲಾ ಥೂತ್ತೇರಿ.

ಈ ನೆಲದ ಕಾನೂನಿಗಾಗಲಿ ಮಠದ ಕಾನೂನಿಗಾಗಲಿ ಹೆದರುವುದಿಲ್ಲ ಎಂದಮೇಲೆ ಭಂಡತನ ಆವರಿಸುತ್ತೆ. ಆನಂತರ ಮಾಡುವ ಎಲ್ಲ ಕೆಲಸಗಳು ಭಂಡತನದಿಂದಲೇ ಕೂಡಿರುತ್ತವೆ. ಬಹು ಹಿಂದೆ ಜಗದ್ಗುರುಗಳೇ ಬಿಗಿದ ಭಾಷಣವಿದು. ಆ ಮಾತಿನ ಪ್ರಯೋಗಕ್ಕಿಳಿದಂತಿರುವ ಜಗದ್ಗುರುಗಳು ಮಠದ ಆಸ್ತಿಯನ್ನೇ ಸ್ವಂತದ ಆಸ್ತಿಯನ್ನಾಗಿ ಮಾಡಿಕೊಳ್ಳುತ್ತ ಅದನ್ನ ದಕ್ಕಿಸಿಕೊಳ್ಳಲು ಟ್ರಸ್ಟು ಮಾಡಿಕೊಂಡು, ಪ್ರತಿಭಟಿಸುವಂತಹ ಭಕ್ತಾದಿಗಳನ್ನು ಬೆದರಿಸಲು ಶಿವಸೈನ್ಯವನ್ನೇ ಕಟ್ಟಿದ್ದಾರಂತಲ್ಲಾ! ಇಂತಹ ಸಾಹಸಗಳನ್ನು ಮಾಡಿದ ಮೇಲೆ ಪ್ರಭುತ್ವದ ರಕ್ಷಣೆ ಬೇಕಿರುತ್ತದೆ. ಅದಕ್ಕಾಗಿ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳನ್ನು ಕರೆದು ಹಿಗ್ಗಾಮುಗ್ಗ ಹೊಗಳಿದರಂತಲ್ಲಾ! ಹಿಂದೆ ರಾಜಕಾರಣಿಗಳನ್ನು ನಿರ್ದಾಕ್ಷಿಣ್ಯವಾಗಿ ಟೀಕಿಸುತ್ತಾ, ಅವರ ಕರ್ತವ್ಯಗಳನ್ನು ಅರಿವು ಮಾಡಿಕೊಡುತ್ತಿದ್ದ ಜಗದ್ಗುರುಗಳಿಂದ ಹೊಗಳಿಸಿಕೊಂಡ ಹಾಲಿ ಮತ್ತು ಮಾಜಿಗಳು ಗಲಿಬಿಲಿಗೊಂಡು, ಮತ್ತೊಮ್ಮೆ ಪಾದಗಳಿಗೆ ಪೊಡಮರುವಷ್ಟರಲಿ, ಪೊಲೀಸ್ ಅಧಿಕಾರಿಯೊಬ್ಬರು ಅನಾಮತ್ತು ಜಗದ್ಗುರುವಿನ ಪದತಳಕ್ಕೆ ಡೈ ಹೊಡೆದು ಇಲ್ಲದ ಬಾಲವಾಡಿಸಿದರಂತಲ್ಲಾ.. ಥೂತ್ತೇರಿ.

ಇದೇ ಮಠದ ಭವ್ಯಪರಂಪರೆಯಲ್ಲಿ ಹಿಂದಿನ ಜಗದ್ಗುರುಗಳು ನಡೆಸುತ್ತಿದ್ದ ಸಮಾರಂಭಕ್ಕೆ ಸಮವಸ್ತ್ರದಲ್ಲಿ ಬಂದ ಪೊಲೀಸ್ ಅಧಿಕಾರಿ ಸ್ವಾಮೀಜಿ ಕಾಲಿಗೆ ಬೀಳಲು ಹೋದಾಗ ಸ್ವಾಮಿಗಳು ಅದನ್ನ ತಡೆದು “ನೀವು ಸಮವಸ್ತ್ರದಲ್ಲಿರುವ ಸರಕಾರಿ ಅಧಿಕಾರಿ, ಕಾನೂನು ರಕ್ಷಿಸಬೇಕಾದವರು, ಆದ್ದರಿಂದ ಒಂದು ಮಠದ ಸ್ವಾಮಿ ಕಾಲಿಗೆ ಬೀಳಬಾರದು. ಹಾಗೆ ಗೌರವ ಕೊಡುವುದಿದ್ದರೆ ಸಮವಸ್ತ್ರ ತೆಗೆದು ಖಾಸಗಿ ಕಾರಿನಲ್ಲಿ ಬಂದು ಆಶೀರ್ವಾದ ಪಡೆಯಿರಿ” ಎಂದದ್ದು ಮಠದ ಪರಂಪರೆಯಲ್ಲಿ ಐತಿಹಾಸಿಕ ಘಟನೆಯಾಗಿ ಉಳಿದಿದೆಯಲ್ಲಾ. ಆದರೇನು ಈಚೆಗೆ ಇಲ್ಲಿಗೆ ಬಂದ ಐಪಿಎಸ್ ಅಧಿಕಾರಿಯೊಬ್ಬ ಜಗದ್ಗುರುವಿನ ಕಾಲಿಗೆ ದೀರ್ಘ ದಂಡ ಹೊಡೆದುದ್ದಲ್ಲದೆ ಧರ್ಮವೇ ದೊಡ್ಡದು ಎಂದುಬಿಟ್ಟರಲ್ಲಾ. ಈ ಅಧಿಕಾರಿಯ ಮಾತನ್ನ ಅನುಮೋದಿಸುವುದಾದರೆ, ಆಯ್ತು ಕಾನೂನಿಗಿಂತ ಧರ್ಮ ದೊಡ್ಡದು ಅಂದುಕೊಂಡರೆ, ಸದ್ಯ ತಮ್ಮ ಧರ್ಮ ಹಿಡಿದುಕೊಂಡು ಭಂಡತನ ಪ್ರದರ್ಶನ ಮಾಡುತ್ತಿರುವ ಜಗದ್ಗುರುವಿನ ಎದುರು ಭಕ್ತಾದಿಗಳು ಸಿಡಿದೆದ್ದರೆ ಧರ್ಮವಿರೋಧಿ ಕಾನೂನನ್ನ ಮುಲಾಜಿಲ್ಲದೆ ಜಾರಿ ಮಾಡಲು ರೆಡಿಯಿರುವ ಈ ಪೊಲೀಸ್ ಅಧಿಕಾರಿ ಮತ್ತು ಜಗದ್ಗುರುಗಳ ಪಾದವನ್ನೆ ನೋಡುವ ಜಿಲ್ಲಾಧಿಕಾರಿಗಳ ದೆಸೆಯಿಂದ ನೆಲದ ಕಾನೂನು ನೆಲಸಮವಾಗುತ್ತಿದೆಯಂತಲ್ಲಾ, ಥೂತ್ತೆರಿ.

ದೆಹಲಿಯ ಕೆಂಪುಕೋಟೆಯ ಮೇಲೆ ಕೇಸರಿ ಬಾವುಟ ಹಾರಿಸುತ್ತೇವೆ ಆದರೆ ನೂರು ವರ್ಷದ ನಂತರ ಅಥವ ಐನೂರು ವರ್ಷಗಳೂ ಆಗಬಹುದೆಂದು ಘಂಟಾಘೋಷವಾಗಿ ಹೇಳುತ್ತ ಅದನ್ನ ಸಮರ್ಥಿಸುತ್ತಿರುವ ಬಿಜೆಪಿಯ ಮೇಧಾವಿ ಮಂತ್ರಿಗಳಾದ ಈಶ್ವರಪ್ಪನ ಕೇಸರಿ ಮಾತುಗಳ ಬಗ್ಗೆ ಪತ್ರಕರ್ತರು ಜೆಡಿಎಸ್ ನಾಯಕ ಕುಮಾರಣ್ಣನಿಗೆ ಕೇಳಲಾಗಿ, ಕುಮಾರಣ್ಣ ಥೇಟ್ ಈಶ್ವರಪ್ಪನಂತೆಯೇ ಮಾತನಾಡಿದರಲ್ಲಾ.

“ಕೇಸರಿ ಅನತಕ್ಕಂತದ್ದೇನಿದೆ, ಅದು ಒಂದು ಬಟ್ಟೆ ಅಂತ ನಾವು ಪರಿಗಣಿಸಿ ಮಾತನಾಡತಕ್ಕಂತದ್ದೇನಿದೆ, ಆ ಒಂದು ವಿಷಯ ಇವತ್ತು ಪಡಕಂತಿರತಕ್ಕಂತ ಪ್ರಚಾರಯೇನಿದೆ, ಅದನ್ನ ನಾವು ಪರಿಶೀಲನೆ ಮಾಡಿದ್ರೆ ಈ ಕೇಸರಿ ಸಾಮಾನ್ಯದಾದಂತಹ ಜನ ಧರಸತಕ್ಕಂತ ಬಟ್ಟೆ ಅಲ್ಲ. ಅದೊಂದು ಶ್ರೇಷ್ಠವಾದ ಬಟ್ಟೆ ಅನತಕ್ಕಂತ ವಿಷಯವನ್ನ ನಮ್ಮ ಪರಂಪರೆಲಿ ನಮ್ಮ ಹಿರಿಯರು ತೋರಿಸಿಕೊಟ್ಟಿರತಕ್ಕಂತ ವಿಷಯ ಏನಿದೆ ಆ ಬಗ್ಗೆ ನಾವು ಹಗುರವಾಗಿ ಮಾತನಾಡಕ್ಕಂತದ್ದು ಸರಿಕಾಣದಿಲ್ಲ, ಅನತಕ್ಕಂತದ್ದು ನನ್ನ ಅಭಿಪ್ರಾಯ” ಎಂದರಂತಲ್ಲಾ. ಈ ಮಾತನ್ನ ಕೇಳಿಸಿಕೊಂಡ ಶಿವಮೊಗ್ಗದ ಕಡೆ ಜೆಡಿಎಸ್‌ನವರು ಕುಮಾರಣ್ಣ ಈಶ್ವರಪ್ಪನಂತೆ ಮಾತನಾಡುವುದಾದರೆ ನಾವ್ಯಾಕೆ ಜೆಡಿಎಸ್‌ನಲ್ಲಿರಬೇಕು ಎಂದು ಅನ್ಯ ಪಾರ್ಟಿಯ ಕಡೆ ಗುಳೆ ಹೊರಟಿದ್ದಾರಂತಲ್ಲಾ..

ಥೂತ್ತೇರಿ.


ಇದನ್ನೂ ಓದಿ: ಸತ್ಯ ಹೇಳಿದ್ರೆ ಪಾರ್ಟಿಯಿಂದ್ಲೆ ತಗೀತರಲ್ರಿ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...

ನೀಟ್‌ ಪ್ರತಿಭಟನೆಯಲ್ಲಿ ಉಮರ್ ಖಾಲಿದ್‌ಗೆ ಬೆಂಬಲ; ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ ಗೋವಾ ಪೊಲೀಸರು

ಗೋವಾದ ಪಣಜಿಯಲ್ಲಿ ನಡೆದ ನೀಟ್-ಯುಜಿ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಘೋಷಣೆಗಳನ್ನು ಕೂಗಿದ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿನ ಹಣಕಾಸು ಮತ್ತು ಉದ್ದೇಶದ ಬಗ್ಗೆ ಗೋವಾ ಪೊಲೀಸರು ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು...

ಅಸ್ಸಾಂ ಪ್ರವಾಹದ ಭೀಕರತೆ: 78 ಬಲಿ, 3 ಲಕ್ಷ ಜನರ ಬದುಕು ಸಂಕಷ್ಟಕ್ಕೆ: ವ್ಯವಸ್ಥೆಯ ವೈಫಲ್ಯಕ್ಕೆ ಬೆಲೆ ತೆತ್ತುತ್ತಿರುವ ನಾಗರಿಕರು

ಈಶಾನ್ಯ ಭಾರತದ ಗೇಟ್‌ವೇ ಎಂದೇ ಕರೆಯಲ್ಪಡುವ ಅಸ್ಸಾಂನಲ್ಲಿ ಪ್ರವಾಹದ ಅಟ್ಟಹಾಸ ಮುಂದುವರಿದಿದ್ದು, ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ, ಶಿವಸಾಗರ್ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗೋಲಾಘಾಟ್‌ನಲ್ಲಿ ಒಬ್ಬರು ನೀರಿನಲ್ಲಿ...

ನೀಟ್ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ ಆರೋಪ; RAF ಮದ್ದುಗುಂಡುಗಳ ದಾಖಲೆ ಕೇಳಿದ ಸುಪ್ರೀಂ ಕೋರ್ಟ್

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ನಿಯೋಜಿಸಲಾಗಿದ್ದ ಕ್ಷಿಪ್ರ ಕಾರ್ಯ ಪಡೆ (RAF) ಯ ಮದ್ದುಗುಂಡುಗಳ ದಾಖಲೆಯನ್ನು ಸಂರಕ್ಷಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ (ಜುಲೈ...

ಕ್ರಿಸ್ತನಿಗಿಂತ ಮೊದಲೇ ಇಲ್ಲಿದ್ದೇವೆ..ನಮಗೆ ಯಾವುದೇ ದಾಖಲೆಗಳು ಬೇಡ : ಎಸ್‌ಐಆರ್ ತಿರಸ್ಕರಿಸಿದ ಜಾರ್ಖಂಡ್‌ನ ಆದಿವಾಸಿಗಳು

ಜಾರ್ಖಂಡ್‌ನ ಖುಂತಿ ಜಿಲ್ಲೆಯ ದಟ್ಟ ಅರಣ್ಯ ಭಾಗದಲ್ಲಿ ವಾಸಿಸುವ ಮುಂಡಾ ಬುಡಕಟ್ಟು ಸಮುದಾಯದ ಒಂದು ವರ್ಗವು ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದು, ಆಧುನಿಕ...