Homeಮುಖಪುಟ‘ತಿರುಚಿತ್ರಂಬಲಂ’: ಧನುಷ್‌- ನಿತ್ಯಾ ಮೆನನ್‌ ನಟನೆಯ ನವಿರು ಪ್ರೇಮಕಥೆ

‘ತಿರುಚಿತ್ರಂಬಲಂ’: ಧನುಷ್‌- ನಿತ್ಯಾ ಮೆನನ್‌ ನಟನೆಯ ನವಿರು ಪ್ರೇಮಕಥೆ

- Advertisement -
- Advertisement -

ಅದೊಂದು ಸುಂದರ ಕುಟುಂಬ. ಆಕಸ್ಮಿಕವಾಗಿ ಘಟಿಸುವ ಅಪಘಾತ. ತಂದೆ- ಮಗನ ನಡುವೆ ಬಗೆಹರಿಯದ ಮನಸ್ತಾಪ. ಅಜ್ಜ ಮತ್ತು ಮೊಮ್ಮಗನ ಆತ್ಮೀಯತೆ. ಚಿಕ್ಕನಿಂದಲೂ ಕಥಾನಾಯಕನ ಜೊತೆಗಿರುವ ಗೆಳತಿ, ಆತನ ಏಳು ಬೀಳುಗಳ ಜೊತೆಯಲ್ಲಿ ಸಾಗುತ್ತಾಳೆ. ಕೊನೆಯಲ್ಲೊಂದು ಟ್ವಿಸ್ಟ್‌. ಪ್ರೀತಿ, ಸ್ನೇಹ, ಕೋಪದೊಳಗೆ ಅವಿತಿರುವ ವಾತ್ಸಲ್ಯ- ಇತ್ಯಾದಿಗಳನ್ನು ಹದವಾಗಿ ಬೆರೆಸಿದ ಸಿನಿಮಾ ತಮಿಳಿನ ‘ತಿರುಚಿತ್ರಂಬಲಂ’

ಮಿತ್ರನ್ ಆರ್ ಜವಾಹರ್ ನಿರ್ದೇಶನದ ‘ತಿರುಚಿತ್ರಂಬಲಂ’- ಎಲ್ಲಿಯೂ ಭಾರವೆನಿಸದೆ, ಮೊದಲಿನಿಂದ ಕೊನೆಯವರೆಗೂ ನವಿರು ಹಾಸ್ಯ ಹಾಗೂ ನವಿರು ಸಂಭಾಷಣೆ ಮೂಲಕ, ಖುಷಿ, ಕೋಪ, ದುಃಖ, ಪ್ರೀತಿ, ಸ್ನೇಹ, ಸಂಬಂಧಗಳ ಏರಿಳಿತದೊಂದಿಗೆ ಸಾಗುತ್ತದೆ. ಮನಸ್ಸನ್ನು ಮುದಗೊಳಿಸುತ್ತದೆ.

ಧನುಷ್‌, ನಿತ್ಯಾ ಮೆನನ್‌, ಪ್ರಕಾಶ್ ರಾಜ್‌, ಭಾರತೀರಾಜ ಮೊದಲಾದ ಕಲಾವಿದರು ಹಠಕ್ಕೆ ಬಿದ್ದಂತೆ ನಟಿಸಿರುವ ‘ತಿರುಚಿತ್ರಂಬಲಂ’- ಲವ್‌ಸ್ಟೋರಿ ಆಧಾರಿತ ಸಿನಿಮಾಗಳನ್ನು ಇಷ್ಟಪಡುವ ಪ್ರೇಕ್ಷಕ ವರ್ಗಕ್ಕೆ ಭರಪೂರ ಮನರಂಜನೆ ನೀಡಬಲ್ಲದು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಕಥೆ ಸರಳವಾದರೂ ಚಿತ್ರಕಥೆಯ ನಿರೂಪಣಾ ಶೈಲಿ ಹೊಸ ಅನುಭವವನ್ನು ನೀಡುತ್ತದೆ. ಅನುರುದ್ಧ್ ಅವರ ಸಂಗೀತ- ಹಿತವೆನಿಸುತ್ತದೆ. ಕಥೆಯ ತೂಕವನ್ನು ಹೆಚ್ಚಿಸಿದೆ. ಪ್ರೀತಿಗಾಗಿ ಹಂಬಲಿಸುತ್ತಿರುವ ಪಡಮ್‌ (ತಿರುಚಿತ್ರಂಬಲಂ), ಸೋತು ಗೆಲ್ಲುತ್ತಾನೋ, ಪ್ರೀತಿಯನ್ನು ಧಕ್ಕಿಸಿಕೊಳ್ಳುತ್ತಾನೋ ಎಂಬುದು ಕಥೆ.

ಮಧ್ಯಮ ವರ್ಗದ ಕುಟುಂಬಗಳ ಸುತ್ತ ನಡೆಯುವ ಈ ಸಿನಿಮಾದಲ್ಲಿ ಧನುಷ್‌ (ಪಡಂ) ಒಬ್ಬ ಡೆಲಿವರಿ ಬಾಯ್‌. ಅಪ್ಪ (ಪ್ರಕಾಶ್ ರಾಜ್‌) ಪೊಲೀಸ್‌ ಅಧಿಕಾರಿ. ತಾತ (ಭಾರತೀರಾಜ) ಜನರೇಷನ್‌ ಗ್ಯಾಪ್ ದಾಟಿ ಮೊಮ್ಮಗನೊಂದಿಗೆ ಜಾಲಿಯಾಗಿರುವ ವ್ಯಕ್ತಿ. ಜೊತೆಯಲ್ಲೇ ಕೂತು ಬಿಯರ್‌ ಹೀರುವ ಪ್ರೀತಿ. ಚಿಕ್ಕಂದಿನಿಂದಲೂ ಜೊತೆಯಲ್ಲೇ ಬೆಳೆದಿರುವ ಗೆಳತಿ ಶೋಭನಾ (ನಿತ್ಯಾ ಮೆನನ್‌), ಪಡಂನ ಎಲ್ಲ ಸುಖ, ದುಃಖ, ನೋವು, ನಲಿವು, ಇಷ್ಟ-ಕಷ್ಟಗಳ ಭಾಗ.

ಈ ಸಿನಿಮಾ ಕೇವಲ ಪ್ರೀತಿಯ ಹುಡುಕಾಟದ ಕಥೆಯಾಗಿಯಷ್ಟೇ ಉಳಿಯದೆ ಜನರೇಷನ್‌ಗಳ ನಡುವೆ ಇರುವ ಗೋಡೆಗಳನ್ನು ಕೆಡವುತ್ತ ಹೋಗುತ್ತದೆ. ಚಿತ್ರಕತೆಯ ಜೊತೆಗೆ ಕಥೆಗೆ ಪೂರಕವಾದ ಸಂಭಾಷಣೆ ಇಲ್ಲಿನ ಮತ್ತೊಂದು ಹೈಲೈಟ್‌. ಒಳ್ಳೆಯ ಕಥೆಗೆ ದೊಡ್ಡ ಬಜೆಟ್ ಬೇಕಿಲ್ಲ ಎಂಬುದನ್ನು ತಿರುಚಿತ್ರಂಬಲಂ ಮತ್ತೊಮ್ಮೆ ಸಾಬೀತು ಮಾಡಿದೆ.

ಇದನ್ನೂ ಓದಿರಿ: ಗಾಳಿಪಟ-2: ಯೋಗರಾಜ ಭಟ್ರ ಕಥೆಯಲ್ಲಿ ಲಾಜಿಕ್ಕೂ ಇಲ್ಲ ಮ್ಯಾಜಿಕ್ಕೂ ಇಲ್ಲ!

ವಿವಾದಿತ ಆಧಾತ್ಮಿಕ ಗುರುವೆನಿಸಿದ ಓಶೋ ರಜನೀಶ್‌, “ಪ್ರೀತಿ ಕೊಟ್ಟು ಸಂತೋಷ ಪಡುತ್ತದೆ. ಅಹಂಕಾರ ಕಿತ್ತುಕೊಂಡು ಸಂತೋಷಪಡುತ್ತದೆ (Love is happy when it is able to give something. The ego is happy when it is able to take something)” ಎಂದಿದ್ದರು. ಇಲ್ಲಿಯೂ ಅಷ್ಟೇ- ಕೊಟ್ಟು ಸಂತೋಷಪಡುವ ತಾತ್ವಿಕತೆಯೇ ಮೇಲುಗೈ ಸಾಧಿಸುತ್ತದೆ.

ಪಡಂನ ಮೂರು ಪ್ರೇಮ ಕಥೆಗಳು ಇಲ್ಲಿವೆ. ಸಿದ್ಧಮಾದರಿಗಳನ್ನು ಒಪ್ಪಿಕೊಂಡಿರುವ ವ್ಯವಸ್ಥೆಯಲ್ಲಿ ಮೂರನೇ ಪ್ರೇಮಕಥೆ- ತುಸು ಅವಸರವಾಯಿತೇನೋ ಎಂಬ ಅಳುಕು ಪ್ರೇಕ್ಷಕನನ್ನು ಕಾಡುವ ಹೊತ್ತಿಗೆ ಅದನ್ನು ಭಾವುಕ ಸನ್ನಿವೇಶಗಳ ಮೂಲಕ ಭಾರವೆನಿಸದಂತೆ ಕಟ್ಟಿಕೊಟ್ಟಿರುವುದು ಮಿತ್ರನ್‌ ಅವರ ನಿರೂಪಣಾ ಜಾಣ್ಮೆಗೆ ಕನ್ನಡಿ ಹಿಡಿದಿದೆ. ಕ್ಲೈಮ್ಯಾಕ್ಸ್‌ ನಿರೀಕ್ಷಿತವೆನಿಸಿದರೂ ಅದು ಪ್ರೇಕ್ಷಕನಿಗೆ ಒಪ್ಪಿತವಾಗುವುದು ಹೆಚ್ಚುಗಾರಿಕೆ. ಮನೆಮಂದಿಯೆಲ್ಲ ಒಟ್ಟಿಗೆ ಕೂತು ನೋಡಬಹುದಾದ ನವಿರು ಪ್ರೇಮಕಥೆ- ‘ತಿರುಚಿತ್ರಂಬಲಂ’.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ನೋಟಿಸ್ ನೀಡಿದರೆ ಸಾಲದು, ಹೊರಗಿಟ್ಟ ಮತದಾರರ ಲೆಕ್ಕ ಕೊಡಿ ಚುನಾವಣಾ ಆಯೋಗಕ್ಕೆ ಜಾಗೃತ ಕರ್ನಾಟಕ ಒತ್ತಾಯ

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಭಾಗವಾಗಿ ಲಕ್ಷಾಂತರ ಮತದಾರರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗಳನ್ನು ನಡೆಸಿದ ನಂತರ, ಅಂತಿಮವಾಗಿ ಎಷ್ಟು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ...

ಗಣೇಶ ಮೆರವಣಿಗೆ ಡಿಜೆ ವಿಚಾರಕ್ಕೆ ಗಲಾಟೆ : ದಲಿತರ ಮೇಲೆ ಹಲ್ಲೆ, ಜಾತಿ ನಿಂದನೆ; 31 ಜನರ ಮೇಲೆ ಎಫ್‌ಐಆರ್

ಗಣೇಶ ಮೆರವಣಿಗೆಯ ಡಿಜೆ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ದಲಿತರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ ಆರೋಪದ ಮೇಲೆ 31 ಜನರ ವಿರುದ್ಧ ಕೊಪ್ಪಳದ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ....

ಚಿಕ್ಕಬಳ್ಳಾಪುರ: ಮೂಲ ಗಣಿತ, ಕನ್ನಡ ಬಾರದ 7ನೇ ತರಗತಿ ವಿದ್ಯಾರ್ಥಿಗಳು: 180 ಶಿಕ್ಷಕರಿಗೆ ನೋಟಿಸ್‌ ಜಾರಿ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 7ನೇ ತರಗತಿಯ ಕೆಲವು ವಿದ್ಯಾರ್ಥಿಗಳಿಗೆ ಮೂಲ ಗಣಿತದ ಲೆಕ್ಕಗಳನ್ನು ಮಾಡಲು ಮತ್ತು ಕನ್ನಡ ಅಕ್ಷರಗಳನ್ನು ಬರೆಯಲು ಬರುವುದಿಲ್ಲ ಎಂಬುದು ತಿಳಿದುಬಂದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು 180 ಸರ್ಕಾರಿ ಶಾಲೆಗಳ ಶಿಕ್ಷಕರಿಗೆ...

ಕರಾವಳಿಯನ್ನು ‘ಕೋಮುವಾದದ ಪ್ರಯೋಗಶಾಲೆ’ ಮಾಡಿದ್ದ ಬಿಜೆಪಿಗೆ ನಮ್ಮ ಅಭಿವೃದ್ಧಿ ಕಂಡು ಅಸ್ತಿತ್ವದ ಭಯ: ಪ್ರಿಯಾಂಕ್ ಖರ್ಗೆ

ಮಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆ ಹಾಗೂ ಕರಾವಳಿಯ ಮೂರು ಜಿಲ್ಲೆಗಳಿಗೆ ₹32,611 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ನೀಡಿರುವುದನ್ನು ಬಿಜೆಪಿ ಟೀಕಿಸಿರುವ ಬೆನ್ನಲ್ಲೇ, ಗೃಹ ಸಚಿವ ಪ್ರಿಯಾಂಕ್ ಖರ್ಗೆ...

KPSC ಅಕ್ರಮ: ಮೀಟರ್ ಬಡ್ಡಿ ದಂಧೆಯಿಂದ ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನದವರೆಗೆ – ಅಧ್ಯಕ್ಷ ಸಾಹುಕಾರ್ ಬಿಜೆಪಿ ಅವಧಿಯಲ್ಲಿ ನೇಮಕ, ಕಾಂಗ್ರೆಸ್ ಆಡಳಿತದಲ್ಲಿ ರಕ್ಷಣೆ

ಶಿವಶಂಕರಪ್ಪ ಸಾಹುಕಾರ್ ಅವರ ಈ ಇಡೀ ಕಥನವು ಕರ್ನಾಟಕದ ಕಾರ್ಯಾಂಗ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಎಷ್ಟು ಆಳವಾಗಿ ಬೇರೂರಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಬಿಜೆಪಿ ಸರ್ಕಾರವು ನಿಯಮಗಳನ್ನು ಗಾಳಿಗೆ ತೂರಿ, ಒಬ್ಬ ಕನಿಷ್ಠ...

ಟಿಎಂಸಿ ಪಕ್ಷದ ಹೆಸರು, ಚಿಹ್ನೆ ಫ್ರೀಝ್ : ಚು. ಆಯೋಗದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ತೃಣಮೂಲಕ ಕಾಂಗ್ರೆಸ್ (ಟಿಎಂಸಿ) ಪಕ್ಷದ ಚಿಹ್ನೆ ಮತ್ತು ಹೆಸರನ್ನು ಭಾರತೀಯ ಚುನಾವಣಾ ಆಯೋಗ ಫ್ರೀಝ್ ಮಾಡಿರುವುದನ್ನು ಪ್ರಶ್ನಿಸಿ, ಪಕ್ಷದ ಸಂಸ್ಥಾಪಕಿ ಹಾಗೂ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್‌...

ನಂದಿಗ್ರಾಮದ ಬೆನ್ನಲ್ಲೇ ರೆಜಿನಗರ ಅಭ್ಯರ್ಥಿಯಿಂದಲೂ ನಾಮಪತ್ರ ವಾಪಸ್ : ಬಂಗಾಳ ಉಪ ಚುನಾವಣೆ ಕಣದಲ್ಲಿ ಮಮತಾ ಬ್ಯಾನರ್ಜಿ ಬಣಕ್ಕೆ ಮತ್ತೊಂದು ಹಿನ್ನಡೆ

ಪಶ್ಚಿಮ ಬಂಗಾಳದ ಉಪಚುನಾವಣಾ ಕಣದಲ್ಲಿ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಂದು ಹಿನ್ನಡೆಯಾಗಿದೆ. ನಂದಿಗ್ರಾಮದ ಬಳಿಕ ರೆಜಿನಗರ ವಿಧಾನಸಭಾ ಕ್ಷೇತ್ರದಲ್ಲೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿ ತನ್ನ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ...

ಅಮಾನವೀಯ ಕೃತ್ಯ : ಮಹಿಳೆಗೆ ಥಳಿಸಿ, ಕೂದಲು ಹಿಡಿದು ಎಳೆದೊಯ್ದ ಪೊಲೀಸ್ ಸಿಬ್ಬಂದಿ

ತೆಲಂಗಾಣದ ಹಫೀಝ್‌ಪೇಟ್ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಮಹಿಳೆಗೆ ಥಳಿಸಿ, ಆಕೆಯ ತಲೆಕೂದಲು ಹಿಡಿದು ಎಳೆದೊಯ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಶುಕ್ರವಾರ (ಸೆ.18) ರಾತ್ರಿ ರೈಲ್ವೆ...

ರಾಮಮಂದಿರ ದೇಣಿಗೆ ಕಳವು ಪ್ರಕರಣ: ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ರಾಮಮಂದಿರದಲ್ಲಿ ದೇಣಿಗೆ ಹಣ ಕಳವು ಮಾಡಿದ ಆರೋಪದ ಮೇಲೆ ಬಂಧಿಸಲಾಗಿರುವ ಎಲ್ಲಾ ಎಂಟು ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 21ರವರೆಗೆ ವಿಸ್ತರಿಸಲಾಗಿದೆ ಎಂದು ಅವರ ವಕೀಲರು (ಸೆ.18) ತಿಳಿಸಿದ್ದಾರೆ. ಅಯೋಧ್ಯೆಯ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯದ...

ಬಂಗಾಳದಲ್ಲಿ ಬಿಜೆಪಿ ದ್ವೇಷ ರಾಜಕಾರಣ: ಮಾಮತಾ ಬ್ಯಾನರ್ಜಿ ಬೆಂಬಲ ಘೋಷಿಸಿದ ಬೆನ್ನಲ್ಲೇ ನಂದಿಗ್ರಾಮ ಕಾಂಗ್ರೆಸ್ ಅಭ್ಯರ್ಥಿ ಬಂಧನ

ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರನ್ನು ಹಳೆಯ ಪ್ರಕರಣವೊಂದರಲ್ಲಿ ಶುಕ್ರವಾರ (ಸೆ.18) ಬಂಧಿಸಲಾಗಿದೆ ಎಂದು ಪೂರ್ವ ಮೇದಿನಿಪುರ ಜಿಲ್ಲಾ ಪೊಲೀಸ್...