Homeಅಂಕಣಗಳುಮಾತು ಮರೆತ ಭಾರತ; ಜಜ್ಜಾರ್ ಫೈಲ್: ದಲಿತರಿಗಿಂತ ಗೋವಿನ ಜೀವ ದೊಡ್ಡದು

ಮಾತು ಮರೆತ ಭಾರತ; ಜಜ್ಜಾರ್ ಫೈಲ್: ದಲಿತರಿಗಿಂತ ಗೋವಿನ ಜೀವ ದೊಡ್ಡದು

- Advertisement -
- Advertisement -

ಗೋವು ತಿಂದು ಗೋವಿನಂತಾದವನು
ನಿಮ್ಮಂತೆ ಮನುಷ್ಯರನ್ನು ಕೊಂದು
ಮನುಷ್ಯನಾಗಲಾರೆ

ಇದು ಕವಿ ಎನ್. ಕೆ. ಹನುಮಂತಯ್ಯನವರ ಕವಿತೆಯೊಂದರ ಸಾಲುಗಳು. ಈ ಸಾಲುಗಳು 2002ರಲ್ಲಿ ಹರ್‍ಯಾಣದ ಜಜ್ಜಾರಿನಲ್ಲಿ ನಡೆದ ದಲಿತರ ಹತ್ಯಾಕಾಂಡಕ್ಕೆ ಪ್ರತಿರೋಧವಾಗಿ ಕಾಣುತ್ತದೆ. ಸನಾತನ ಹಿಂದೂ ಧರ್ಮದಲ್ಲಿ ಗೋವಿನ ಕಳೇಬರವನ್ನು ವಿಲೇವಾರಿ ಮಾಡುವ ಕಾಯಕವನ್ನು ದಲಿತರಿಗೆ ಒಪ್ಪಿಸಿ ಅಸ್ಪೃಶ್ಯತೆಗೊಂದು ಕಾರಣ ಹುಡುಕಿಕೊಂಡ ಹಿಂದೂ ಮೇಲ್ಜಾತಿಗಳು ಮುಸ್ಲಿಮರನ್ನು ಗುರಿ ಮಾಡಿಕೊಳ್ಳುವ ಮುಂಚೆ ದಲಿತರನ್ನು ಗುರಿಯಾಗಿಸಿಕೊಂಡಿದ್ದರು. ಅಂತಹ ಲಿಂಚಿಂಗ್ ಪ್ರಕರಣಕ್ಕೆ ಉದಾಹರಣೆ ’ಜಜ್ಜಾರ್ ಫೈಲ್’ ಆಗಿದೆ.

ಅದು 2002ನೇ ಇಸವಿಯ ಅಕ್ಟೋಬರ್ 15, ದಸರಾ ನಡೆಯುತ್ತಿದ್ದ ದಿನವದು. ಹರ್‍ಯಾಣದ ಜಜ್ಜಾರ್‌ನಲ್ಲಿಯೂ ಅಂದು ಸಂಜೆ ದಸರಾ ಮೆರವಣಿಗೆಯನ್ನು ಮುಗಿಸಿಕೊಂಡು ಮರಳುತ್ತಿದ್ದ ಒಂದಷ್ಟು ’ವಿಶ್ವ ಹಿಂದೂ ಪರಿಷತ್’ ಕಾರ್ಯಕರ್ತರು ಏಕಾಏಕಿ ಪೊಲೀಸ್ ಠಾಣೆಗೆ ಐವರು ದಲಿತರನ್ನು ಕರೆದುತಂದರು. ಆ ಐವರ ಮೇಲೆ ಅವರು ಹೊರಿಸಿದ ಆರೋಪ, ಜೀವಂತ ದನವನ್ನು ಕೊಂದು ಅದರ ಚರ್ಮವನ್ನು ರಸ್ತೆ ಪಕ್ಕದಲ್ಲಿಯೇ ಸುಲಿಯುತ್ತಿದ್ದರು ಎಂಬುದಾಗಿದೆ. ಹೀಗೆ ಠಾಣೆಗೆ ಕರೆದುಕೊಂಡು ಬಂದ ವಿಶ್ವ ಹಿಂದೂ ಪರಿಷತ್ ಸಂಘಟನೆಯ ಗುಂಪು ಆ ಐವರ ಮೇಲೆ ಗೋ ಹತ್ಯಾ ನಿಷೇಧ ಕಾಯ್ದೆಯಡಿ ದೂರು ದಾಖಲಾಗುವಂತೆ ನೋಡಿಕೊಂಡಿದೆ. ಅಲ್ಲಿಂದ ಆ ಪ್ರಕರಣವನ್ನು ಪೊಲೀಸರಿಗೆ ಒಪ್ಪಿಸಿ ಹಿಂದೂ ಸಂಘಟನೆಯವರು ಮನೆಗೆ ಮರಳಿದ್ದರೆ ಇಂದು ಈ ಲೇಖನವನ್ನು ಬರೆಯಬೇಕಾಗಿಯೇ ಬರುತ್ತಿರಲಿಲ್ಲ. ಅದಕ್ಕೆ ಬದಲಾಗಿ ಆ ಐವರು ದಲಿತರನ್ನು ಪೊಲೀಸ್ ಠಾಣೆಯಿಂದ ಹೊರಗೆ ಎಳೆದುಕೊಂಡು ಬಂದ ಗುಂಪು ಥಳಿಸಿ, ಕ್ರೂರವಾಗಿ ಹಿಂಸಿಸಿ ಕೊಂದುಹಾಕಿತು.

ಆ ಐವರು ದಲಿತ ಯುವಕರಿಗೆ ಇನ್ನೂ 20 ತುಂಬಿರಲಿಲ್ಲ. ವೀರೆಂದರ್, ದಯಾನಂದ್, ತೋಟ ರಾಮ್, ರಾಜು ಮತ್ತು ಕೈಲಾಶ್ ಇವರೇ ಆ ನತದೃಷ್ಟ ದಲಿತ ಯುವಕರು. ಈ ಐವರ ಕೆಲಸ ಕಸಾಯಿ ಖಾನೆಯ ಪ್ರಾಣಿಗಳ ಮೂಳೆಯನ್ನು ಸಂಗ್ರಹಿಸುವುದು ಹಾಗೂ ಸತ್ತ ಪ್ರಾಣಿಗಳ ಚರ್ಮ ಸುಲಿದು ವ್ಯಾಪಾರ ಮಾಡುವುದು. ಈ ಕಾಯಕವನ್ನು ಸೊಹ್ನಾ ಪಂಚಾಯತ್ ಸಮಿತಿ ಹಾಗೂ ಆದರ್ಶ ಗೋಶಾಲೆಯು ಇವರಿಗೆ ಲೈಸೆನ್ಸ್ ನೀಡಿ ನಡೆಸುತ್ತಿತ್ತು. ಈ ಐವರು 35,000 ಹಣ ನೀಡಿ ಲೈಸೆನ್ಸ್ ಪಡೆದಿದ್ದರು. ಈ ಕಾಯಕವನ್ನು ಅವರ ಕುಟುಂಬ ಕಳೆದ 35 ವರ್ಷಗಳಿಂದ ಮಾಡಿಕೊಂಡು ಬರುತ್ತಿತ್ತು.

ಎಲ್ಲರಿಗೂ ತಿಳಿದಿರುವ ಸತ್ಯವೆಂದರೆ, ಸತ್ತ ಗೋವುಗಳ ಚರ್ಮವನ್ನು ದೂರದ ಕಾಡಿನಲ್ಲಿಯೋ ಅಥವಾ ಪ್ರತ್ಯೇಕ ಕೊಠಡಿಗಳಲ್ಲಿಯೋ ಸುಲಿಯುತ್ತಾರೆ ಎಂಬುದು. ಆದರೆ ಅಕ್ಟೋಬರ್ 15ರ ಸಂಜೆ 6 ಗಂಟೆ ಸಮಯದಲ್ಲಿ ವ್ಯಾನ್ ಮೂಲಕ ಚರ್ಮವನ್ನು ಹೊತ್ತೊಯ್ಯುತ್ತಿದ್ದ ದಲಿತರನ್ನು ಅಡ್ಡಗಟ್ಟಿದ ವಿಹೆಚ್‌ಪಿಯವರಿಗೆ ದನದ ಚರ್ಮ ಇರುವುದು ಕಂಡುಬಂದಿದೆ. ಇದೇನು ಹೊಸ ಸುದ್ದಿಯಲ್ಲದಿದ್ದರೂ, ಉನ್ಮಾದದಲ್ಲಿದ್ದ ಗುಂಪಿಗೆ ಗಲಾಟೆ ಮಾಡಲು ಅಥವಾ ಗೋರಕ್ಷಕರಂತೆ ಪೋಸು ಕೊಡಲು ಅದಷ್ಟು ಸಾಕಾಗಿದೆ. ಥಳಿತದಲ್ಲಿ ಒಬ್ಬ ದಲಿತ ಅಲ್ಲಿಯೇ ಅಸುನೀಗಿದ್ದಾನೆ. ಆಗ ಈ ಪ್ರಕರಣಕ್ಕೆ ಗೋವನ್ನು ಕೊಂದು ಬಹಿರಂಗವಾಗಿ ಚರ್ಮ ಸುಲಿಯುತ್ತಿದ್ದವರನ್ನು ಥಳಿಸಲಾಗಿದೆ ಎಂಬ ಬಣ್ಣ ಹಚ್ಚಲಾಗಿದೆ. ನಂತರ ಪೊಲೀಸ್ ಠಾಣೆಗೆ ಎಳೆದೊಯ್ದಿದ್ದಾರೆ. ಪೊಲೀಸರು ಸಹ ಈ ಕೃತ್ಯಕ್ಕೆ ಸಹಕಾರ ನೀಡಿದ್ದಾರೆ ಎಂದು ಹಲವು ಪತ್ರಿಕೆಗಳು ಸಾಕ್ಷಿ ಸಮೇತ ಸಾಬೀತುಮಾಡಿವೆ. ಪೊಲೀಸರು, ಬಹುದೊಡ್ಡ ಗುಂಪು ಬಂದು ಆ ಐವರನ್ನು ಎಳೆದೊಯ್ದಿತು; ನಾವು ಏನು ಮಾಡಲಾಗಲಿಲ್ಲ ಎಂದು ಕೋರ್ಟಿನಲ್ಲಿ ಉತ್ತರಿಸಿದ್ದಾರಾದರೂ ಪೊಲೀಸ್ ಸ್ಟೇಷನ್ನಿನಲ್ಲಿ ಗಾಳಿಯಲ್ಲಿ ಗುಂಡು ಹಾರಿಸಲು ಬಂದೂಕುಗಳಿರಲಿಲ್ಲವೇ ಎಂಬ ಪ್ರಶ್ನೆಗೆ ಅವರ ಬಳಿ ಉತ್ತರವಿಲ್ಲ. ಅತ್ಯಂತ ನೋವು ತರುವ ಹಾಗೂ ಕಣ್ಣು ಕೆಂಪಗಾಗಿಸುವ ವಿಚಾರವೇನೆಂದರೆ ದಲಿತರನ್ನು ವಿಹೆಚ್‌ಪಿಯವರು ಥಳಿಸುವಾಗ ಸ್ಥಳದಲ್ಲಿ 50ಕ್ಕೂ ಹೆಚ್ಚು ಪೊಲೀಸರೊಂದಿಗೆ ಡೆಪ್ಯೂಟಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಸಹ ಅಲ್ಲಿದ್ದರು! ಅವರೆಲ್ಲರ ಸಮ್ಮುಖದಲ್ಲಿಯೇ ಐವರು ದಲಿತರನ್ನು ಥಳಿಸಿದರು. ಅದೆಷ್ಟರ ಮಟ್ಟಿಗೆ ಥಳಿಸಿದರೆಂದರೆ ನೆಲದ ಮೇಲೆ ಮೆತ್ತಿಕೊಂಡಿದ್ದ ರಕ್ತದ ಕಲೆಗಳು ಮಾಯವಾಗಲು ವಾರಗಳೇ ಬೇಕಾದವಂತೆ. ಇಬ್ಬರ ಕಣ್ಣು ಕಿತ್ತರು. ಇಬ್ಬರ ಮುಖದ ಮೇಲೆ ಪೆಟ್ರೋಲ್ ಸುರಿದು ಸುಡುತ್ತಾ ಕೇಕೆ ಹಾಕಿದರು. ಈ ಹತ್ಯಾಕಾಂಡ ಪೊಲೀಸರ ಸಮ್ಮುಖದಲ್ಲಿಯೇ ನಡೆದಿದ್ದರೂ, ಅವರು ದಲಿತ ಯುವಕರ ಕುಟುಂಬಗಳಿಗೆ ತಿಳಿಸಿದ್ದು ಆಕ್ಸಿಡೆಂಟ್ ಆಗಿದೆ ಎಂದು. ಇಷ್ಟರಲ್ಲಿಯೇ ದಲಿತ ಕುಟುಂಬಗಳಿಗೆ ಅರ್ಥವಾಗಿ ಹೋಯಿತು. ತಮ್ಮ ಮಕ್ಕಳ ಹತ್ಯೆಯಲ್ಲಿ ಪೊಲೀಸರ ಪಾತ್ರವೂ ಸಹ ಇದೆ ಎಂಬುದು. ಇದನ್ನು ಕುಟುಂಬದವರು ಒಪ್ಪದಿದ್ದಾಗ ’ನಿಮ್ಮ ಮಕ್ಕಳನ್ನು ಮುಸ್ಲಿಮರೆಂದು ಭಾವಿಸಿ ಕೊಂದಿದ್ದಾರೆ’ ಎಂಬ ಸಬೂಬನ್ನೂ ನೀಡಿದರು. ಆದರೆ ದಲಿತ ಕುಟುಂಬಗಳು ಅದಕ್ಕೆ ಒಪ್ಪಲಿಲ್ಲ. ’ಮುಸ್ಲಿಮರೂ ನಮ್ಮಂತೆ ಮನುಷ್ಯರಲ್ಲವೇ’ ಎಂದು ಪೊಲೀಸರನ್ನೇ ಪ್ರಶ್ನಿಸಿದವು.

ಇದಾದ ಮಾರನೇ ದಿನ ಅಂದರೆ ಅಕ್ಟೋಬರ್ 16ರಂದು ಜಜ್ಜಾರ್‌ನ ಬೀದಿಗಳಲ್ಲಿ ವಿಶ್ವ ಹಿಂದೂ ಪರಿಷತ್ತಿನ ಹಾಗೂ ಭಜರಂಗ ದಳದ ಕಾರ್ಯಕರ್ತರು ದಿಗ್ವಿಜಯದ ಮೆರವಣಿಗೆ ನಡೆಸಿದರು. ಅವರೆಲ್ಲರೂ ಬಹಿರಂಗವಾಗಿಯೇ ಐವರು ದಲಿತ ಯುವಕರ ಕೊಲೆಯನ್ನು ಸಮರ್ಥಿಸಿಕೊಂಡರು. ದೆಹಲಿಯ ವಿಹೆಚ್‌ಪಿಯ ಪ್ರಮುಖ ಮುಖಂಡ ಆಚಾರ್ಯ ಗಿರಿರಾಜ್ ಕಿಶೋರ್ ’ನಮಗೆ ದಲಿತರ ಜೀವಕ್ಕಿಂತ ಗೋವಿನ ಜೀವ ದೊಡ್ಡದು’ ಎಂದು ಬಹಿರಂಗವಾಗಿ ಹೇಳಿದ.

ಈ ಪ್ರಕರಣದ ತನಿಖೆ ನಡೆಸಿ ವರದಿ ನೀಡಲು ಸಮಿತಿ ರಚಿಸಲಾಯಿತು. ಆದರೆ ಅದರಿಂದ ಹೆಚ್ಚೇನು ಪ್ರಯೋಜನವಾಗಲಿಲ್ಲ. ಪೊಲೀಸರು ದೊಂಬಿ ಪ್ರಕರಣ ದಾಖಲಿಸಿಕೊಂಡರು. ಕೋರ್ಟುಗಳಿಗೆ ಸಾಕ್ಷಿ ಬೇಕು. ಆರೋಪಿಗಳು ಬೇಕು. ಆದರೆ ಪೊಲೀಸರೇ ದೊಂಬಿ ಎಂದ ಮೇಲೆ ಆರೋಪಿಗಳನ್ನು ಹಿಡಿದು ಕೊಡುವವರಾರು?


ಇದನ್ನೂ ಓದಿ: ಮಾತು ಮರೆತ ಭಾರತ; ರೋಹಿತ್ ವೇಮುಲ ಫೈಲ್: ದಲಿತ ವಿದ್ಯಾರ್ಥಿಯನ್ನು ಬಲಿ ಪಡೆದ ಪ್ರಭುತ್ವ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಗಳ ವಿಚ್ಛೇದನ: ಸಿಹಿ ಹಂಚಿ, ಮೆರವಣಿಗೆಯಲ್ಲಿ ಆಕೆಯನ್ನು ಮನೆಗೆ ಕರೆತಂದ ನೀವೃತ್ತ ನ್ಯಾಯಾದೀಶ ಮತ್ತು ಕುಟುಂಬ

ಮೀರತ್: ಕೌಟುಂಬಿಕ ನ್ಯಾಯಾಲಯದಲ್ಲಿ ಮಗಳ ವಿಚ್ಛೇದನ ಅಂತಿಮವಾದ ನಂತರ ಆಕೆಯನ್ನು ಡೋಲು, ನೃತ್ಯಗಳ ಮೆರವಣಿಗೆಯಲ್ಲಿ ಸಂಭ್ರಮದಿಂದ ತಂದೆ ಮನೆಗೆ ಕರೆತಂದ ಘಟನೆ ಮೀರನ್ ನಲ್ಲಿ ನಡೆದಿದೆ.  ಪೋಷಕರ ಬೆಂಬಲದ ಅಪರೂಪದ ಮತ್ತು ಹೃದಯಸ್ಪರ್ಶಿ ಪ್ರದರ್ಶನದಲ್ಲಿ,...

“ನೀನು ನಿಜವಾಗಿಯೂ ಅಂಬೇಡ್ಕರ್ ಮಗಳಾ ಎಂದು ತಿಳಿಯಲು ನಾವು ನಿನ್ನ ಡಿಎನ್‌ಎ ಟೆಸ್ಟ್ ಮಾಡುತ್ತೇವೆ” ದೆಹಲಿ ಸಮಾಲೋಚನಾ ಸಭೆಯಲ್ಲಿ ದಲಿತ ಟ್ರಾನ್ಸ್ ಹೋರಾಟಗಾರ್ತಿ ಗ್ರೇಸ್ ಬಾನುಗೆ ಆಘಾತಕಾರಿ ಜಾತಿ ನಿಂದನೆ-ವರದಿ

ಕೇಂದ್ರ ಸರ್ಕಾರದ ವಿವಾದಾತ್ಮಕ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಕಾಯ್ದೆ, 2026ರ ವಿರುದ್ಧ ಕಳೆದ ಕೆಲ ವಾರಗಳಿಂದ ಇಡೀ ಟ್ರಾನ್ಸ್‌ಜೆಂಡರ್ ಸಮುದಾಯ ಮತ್ತು ಪ್ರಗತಿಪರ ಸಮುದಾಯ ಪ್ರತಿಭಟನೆ ನಡೆಸುತ್ತಿದೆ. ಈ ನಡುವೆ...

‘ಮೋದಿ ಕ್ರಿಶ್ಚಿಯನ್ ಸಂಸ್ಥೆಗಳಲ್ಲಿ ಭಯ ಹುಟ್ಟಿಸಲು ಪ್ರಯತ್ನಿಸುತ್ತಿದ್ದಾರೆ’: ಎಫ್‌ಸಿಆರ್‌ಎ ತಿದ್ದುಪಡಿ ಕುರಿತು ಮಲ್ಲಿಕಾರ್ಜುನ ಖರ್ಗೆ

ಇಡುಕ್ಕಿ (ಕೇರಳ): ಸಾರ್ವಜನಿಕ ಮತ್ತು ಸಾಮಾಜಿಕ ಕಲ್ಯಾಣ ಕ್ಷೇತ್ರದಲ್ಲಿ ಕೆಲಸ ಮಾಡುವ ಕ್ರಿಶ್ಚಿಯನ್ ಸಂಸ್ಥೆಗಳು, ಎನ್‌ಜಿಒಗಳು ಮತ್ತು ನಾಗರಿಕ ಸಮಾಜದ ಮೇಲೆ ದಾಳಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಎಫ್‌ಸಿಆರ್‌ಎ (ವಿದೇಶಿ ದೇಣಿಗೆ...

ವೈದ್ಯಕೀಯ, ತಾಂತ್ರಿಕ ಶಿಕ್ಷಣದಲ್ಲಿ ಎಸ್‌ಸಿ/ಎಸ್‌ಟಿ ಮೀಸಲಾತಿ ಹೆಚ್ಚಿಸಿದ ಒಡಿಶಾ ಸರ್ಕಾರ, ಒಬಿಸಿ ವಿದ್ಯಾರ್ಥಿಗಳಿಗೆ ಹೊಸ ಕೋಟಾ

ಮಹತ್ವದ ನಿರ್ಧಾರ ಕೈಗೊಂಡಿರುವ ಒಡಿಶಾ ಸರ್ಕಾರ, ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ಇತರ ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣ ಕೋರ್ಸ್‌ಗಳಲ್ಲಿ ಪರಿಶಿಷ್ಟ ಪಂಗಡ (ಎಸ್‌ಟಿ), ಪರಿಶಿಷ್ಟ ಜಾತಿ (ಎಸ್‌ಸಿ) ಅಭ್ಯರ್ಥಿಗಳಿಗೆ ಮೀಸಲಾತಿಯನ್ನು ಗಣನೀಯವಾಗಿ ಹೆಚ್ಚಿಸಿದೆ....

ಶಾಲಾ ವಾರ್ಷಿಕೋತ್ಸವದಲ್ಲಿ ಲವಲವಿಕೆಯಿಂದ ಭಾಗವಹಿಸಿದ್ದ 6 ಮಕ್ಕಳು, ತಡರಾತ್ರಿ ಹೊತ್ತಿಗೆ ಶವವಾದರು : ಮಹಾರಾಷ್ಟ್ರದಲ್ಲೊಂದು ಹೃದಯ ವಿದ್ರಾವಕ ಘಟನೆ

ಶಾಲಾ ವಾರ್ಷಿಕೋತ್ಸವದಲ್ಲಿ ಬಹಳ ಉತ್ಸಾಹದಿಂದ ಭಾಗವಹಿಸಿದ್ದ ಆರು ಮಂದಿ ಮಕ್ಕಳು, ತಡ ರಾತ್ರಿ ಹೊತ್ತಿಗೆ ಶವವಾದ ಹೃದಯ ವಿದ್ರಾವಕ ಘಟನೆಯೊಂದು ಮಹಾರಾಷ್ಟ್ರದ ದಿಂಡೋರಿಯಲ್ಲಿ ಶುಕ್ರವಾರ (ಏ.3) ನಡೆದಿದೆ. ನಾಸಿಕ್‌ ನಗರದಿಂದ 20 ಕಿಲೋ...

ಕೇರಳ: ಕೊಲ್ಲಂನಲ್ಲಿ ಟಿವಿ ಚಾನೆಲ್ ಕಚೇರಿ ಮೇಲೆ ಸ್ಫೋಟಕ ವಸ್ತು ಎಸೆತ

ಕೊಲ್ಲಂ: ಇಲ್ಲಿನ ಟಿವಿ ಚಾನೆಲ್ ಒಂದರ ಕಚೇರಿಯ ಮೇಲೆ ಭಾನುವಾರ ಬೆಳಿಗ್ಗೆ ಸ್ಫೋಟಕ ವಸ್ತು ಎಸೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಆ ಪ್ರದೇಶ ಮತ್ತು ಚಾನೆಲ್ ಕಚೇರಿಯ ಸಿಸಿಟಿವಿ ದೃಶ್ಯಗಳಲ್ಲಿ ಇಬ್ಬರು...

ಹತ್ಯೆಯಾದ ಇರಾನ್ ಕಮಾಂಡರ್ ಖಾಸಿಮ್ ಸುಲೈಮಾನಿ ಅವರ ಸೊಸೆ, ಮೊಮ್ಮಗಳನ್ನು ಬಂಧಿಸಿದ ಅಮೆರಿಕ

ನವದೆಹಲಿ: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಶುಕ್ರವಾರ ತಮ್ಮ ಶಾಶ್ವತ ನಿವಾಸಿ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ನ ದಿವಂಗತ ನಾಯಕ ಖಾಸಿಮ್ ಸೊಲೈಮಾನಿ ಅವರ...

ಇರಾನ್ ಮೇಲೆ ಬೃಹತ್ ದಾಳಿ: ಹಲವು ಉನ್ನತ ನಾಯಕರನ್ನು ಕೊಲ್ಲಲಾಗಿದೆ ಎಂದು ವಿಡಿಯೋ ಹಂಚಿಕೊಂಡ ಟ್ರಂಪ್

ಟೆಹ್ರಾನ್ ಮೇಲೆ ನಡೆದ ದಾಳಿಯ ವೀಡಿಯೊವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಂಚಿಕೊಂಡಿದ್ದು, ಹಲವಾರು ಇರಾನ್ ಮಿಲಿಟರಿ ನಾಯಕರ ಸಾವಿಗೆ ಅದು ಕಾರಣ ಎಂದು ಹೇಳಿಕೊಂಡಿದ್ದಾರೆ. "ಟೆಹ್ರಾನ್‌ನಲ್ಲಿ ನಡೆದ ಈ ಬೃಹತ್ ದಾಳಿಯೊಂದಿಗೆ, ಇರಾನ್‌ನ...

ಅಸ್ಸಾಂ ಚುನಾವಣೆ : ನುಸುಳುಕೋರರಿಂದ ಯುವ ಕಲ್ಯಾಣಕ್ಕೆ ವರಸೆ ಬದಲಿಸಿದ ಬಿಜೆಪಿ

ಅಸ್ಸಾಂ ವಿಧಾನಸಭಾ ಚುನಾವಣೆಗೆ ನಾಲ್ಕು ದಿನಗಳು ಬಾಕಿ ಇರುವಾಗ ಬಿಜೆಪಿ ತನ್ನ ಪ್ರಚಾರದ ವರಸೆಯನ್ನು ಬದಲಿಸಿಕೊಂಡಿದೆ. ನುಸುಳುಕೋರರನ್ನು ಹೊರಹಾಕುತ್ತೇವೆ, ಅಕ್ರಮ ವಲಸೆಗೆ ಕಡಿವಾಣ ಹಾಕುತ್ತೇವೆಂದು ಅಬ್ಬರಿಸುತ್ತಿದ್ದ ಬಿಜೆಪಿಗರು, ಈಗ ನುಸುಳಕೋರರ ವಿಷಯವನ್ನು ಬದಿಗೊತ್ತಿದ್ದಾರೆ....

ಕುಡಿದ ಮತ್ತಿನಲ್ಲಿ ಕಾರು ಚಾಲನೆ: ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ 19ವರ್ಷದ ಯುವಕ ಸಾವು 

ಬೆಂಗಳೂರು: ಕುಡಿದ ಮತ್ತಿನಲ್ಲಿ ಹದಿಹರೆಯದ ಯುವಕನೊಬ್ಬ ಚಲಾಯಿಸುತ್ತಿದ್ದ ಕಾರು, 19 ವರ್ಷದ ಯುವಕನ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಆತ ಸಾವನ್ನಪ್ಪಿದ್ದಾನೆ. ಮಲ್ಲೇಶಪಾಳ್ಯದ ಮಾರುತಿನಗರದ 10 ನೇ ಮುಖ್ಯ ರಸ್ತೆಯಲ್ಲಿ ಶುಕ್ರವಾರ ತಡರಾತ್ರಿ...