Homeಮುಖಪುಟಕಂಬಾಳು ಸಿದ್ದಗಂಗಯ್ಯನವರ ಎರಡು ಪ್ರಶ್ನೆಗಳು!

ಕಂಬಾಳು ಸಿದ್ದಗಂಗಯ್ಯನವರ ಎರಡು ಪ್ರಶ್ನೆಗಳು!

- Advertisement -
- Advertisement -

ನಮ್ಮ ನೆಲ ಮೂಲದ ಪ್ರತಿಭೆ ಸಿದ್ದಗಂಗಯ್ಯ ಕಂಬಾಳು ನಿರ್ಗಮಿಸಿದ್ದಾರೆ. ನಿಸರ್ಗಪ್ರಿಯ ಎಂಬ ಹೆಸರಿನಿಂದ ಬರೆಯುತ್ತಿದ್ದ ಕಂಬಾಳು ತಮ್ಮ ವಿಶಿಷ್ಟ ಪ್ರತಿಭೆಯಿಂದ ಸಾಹಿತ್ಯಾಸಕ್ತರ ಗಮನ ಸೆಳೆದಿದ್ದರು. ಅವರು ಸಾಹಿತ್ಯ ಪ್ರಕಾರದ ಎಲ್ಲಾ ಕ್ಷೇತ್ರಗಳಲ್ಲೂ ಕೃಷಿ ಮಾಡಿದ್ದರು. ಅವರ ಕೃಷಿಯ ಹೂರಣವೇ ನೆಲ ಮೂಲವಾಗಿದ್ದರಿಂದ ನಿಸರ್ಗಪ್ರಿಯ ಎಂಬ ಗೌಪ್ಯನಾಮಕ್ಕೆ ಗೌರವ ತಂದಿದ್ದರು. ಕ್ರಮೇಣ ಈ ನಿಸರ್ಗಪ್ರಿಯ ಯಾರು ಅಲ್ಲ ನಮ್ಮ ನಡುವೆ ಬಡಬೇಸಾಯಗಾರನಂತೆ ಕಾಣುವ ಸಿದ್ದಗಂಗಯ್ಯ ಕಂಬಾಳು ಎಂಬುದು ನಮ್ಮೆಲ್ಲರ ಅರಿವಿಗೆ ಬಂತು. ಅದೇ ಹೆಸರಿನಲ್ಲವರು ’ಮೈಥಲಿ’ ಎಂಬ ರಾಮಾಯಣ ಧಾರಾವಾಹಿಯನ್ನು ಸುಧಾ ವಾರಪತ್ರಿಕೆಯಲ್ಲಿ ಆರಂಭಿಸಿದರು. ಆಗ ಸೀತೆಯ ಬಗ್ಗೆ ಕನಿಕರಗೊಂಡಿದ್ದ ಮನಸ್ಸುಗಳೆಲ್ಲಾ ದಂಗುಬಡಿದು ಹೋದವು. ನಮ್ಮ ಮಹಿಳಾ ಹೋರಾಟಗಾರ್ತಿಯರಿಗೆ ಸೀತೆಯ ಅಂತರಾಳದ ನೋವುಗಳು ಅರಿವಿಗೆ ಬಂದು ಯಾರೀ ಸಿದ್ದಗಂಗಯ್ಯ ಎನ್ನುವಂತಾಯ್ತು. ಅದಾದ ಮೇಲೆ ಸಿದ್ದಗಂಗಯ್ಯನವರ ಮೇಲೆ ಪೇಜಾವರ ಶ್ರೀಗಳ ಕಣ್ಣು ಬಿತ್ತು.

ಹಿಂದೂ ಧರ್ಮದ ಗರ್ಭಗುಡಿಯೊಳಗಿದ್ದ ಪೇಜಾವರಶ್ರೀಗಳು ತಾವು ಪೂಜಿಸುವ ಯಾವುದೇ ದೇವರ ಬಗ್ಗೆ ಸಣ್ಣ ಅಪಸ್ವರ ಟೀಕೆ ಬಂದರೂ ಅವರನ್ನು ವಿಚಾರಣೆಗೊಳಪಡಿಸುವ ಹಕ್ಕನ್ನು ತಮಗೆ ತಾವೇ ಆರೋಪಿಸಿಕೊಂಡಿದ್ದರು. ಆದ್ದರಿಂದ ಸಿದ್ದಗಂಗಯ್ಯನವರಿಗೆ ಪೇಜಾವರಶ್ರೀಗಳಿಂದ ಬುಲಾವ್ ಬಂತು. ಧರ್ಮನಿಂದನೆಯ ವಿಚಾರಣೆ ನಡೆಯುವ ಸ್ಥಳ ಯಾವುದೆಂದು ವಿಚಾರಿಸಿದರು. ಅದು ನಡೆಯುವುದು ವಿದ್ಯಾಪೀಠದಲ್ಲೆಂದು ತಿಳಿದು ಬಂತು. ಶ್ರೀನಿವಾಸನಗರದ ಬಸ್‌ಸ್ಟಾಪಿನಲ್ಲಿಳಿದು ಅಡ್ರೆಸ್ ಕೇಳಿಕೊಂಡು ವಿದ್ಯಾಪೀಠ ತಲುಪಿದರು. ಪೀಠದ ವರಾಂಡದಲ್ಲಿ ಅಡ್ಡಾಡುತ್ತಿದ್ದ ಮಾಣಿಗಳನ್ನು ವಿಚಾರಿಸಲಾಗಿ ಅವರು ಪೇಜಾವರ ಶ್ರೀ ಬಳಿ ಕರೆದುಕೊಂಡು ಹೋದರು. ಈಗಾಗಲೇ ಪುರುಷೋತ್ತಮರನ್ನ ಹೀಯಾಳಿಸಿದರು ಎಂಬ ಆರೋಪದ ಕಾರಣವಾಗಿ ಜೀವ ಬೆದರಿಕೆಗೆ ತುತ್ತಾಗಿರುವ ಭಗವಾನರ ಇನ್ನೊಂದು ಅವತಾರದಂತೆ ಕಾಣಬೇಕಿದ್ದ ಸಿದ್ದಗಂಗಯ್ಯ ತಪ್ಪಿಸಿಕೊಂಡ ಹಸು ಹುಡುಕುತ್ತ ಬಂದ ಬಡವನಂತೆ ಕಾಣುತ್ತಿದ್ದುದು ಮಠೋಪಜೀವಿಗಳಿಗೆ ಅಚ್ಚರಿಯುಂಟುಮಾಡಿತ್ತು. ಸಿದ್ದಗಂಗಯ್ಯನವರು ಪೇಜಾವರಶ್ರೀಗಳ ಪೀಠದೆದುರು ನಿಂತು ತಮ್ಮನ್ನು ಕರೆಸಿದ ಕಾರಣ ಕೇಳಿದರು.

“ನೋಡಿ ಸ್ವಾಮಿ ನಮ್ಮ ಆರಾಧ್ಯ ದೈವಗಳಾದ ರಾಮ ಕೃಷ್ಣರ ಬಗ್ಗೆ ಹಗುರವಾಗಿ ಮಾತನಾಡಿದ್ದೀರಿ, ಇದು ಕೂಡದು” ಎಂದರು.

“ನೋಡಿ ಸ್ವಾಮಿ ಕೃಷ್ಣ ನಮ್ಮವನು. ರಾಮ ಕ್ಷತ್ರಿಯ, ನೀವು ಬ್ರಾಹ್ಮಣರು, ನಿಮಗೂ ಅವರಿಗೂ ಏನು ಸಂಬಂಧ” ಎಂದರು. ಪೇಜಾವರಶ್ರೀ ಈ ಅನಿರೀಕ್ಷಿತ ಪ್ರಶ್ನೆಯಿಂದ ಗಲಿಬಿಲಿಯಾದರು.

“ಹಾಗಲ್ಲ ಅವರು ಸರ್ವಜನಾಂಗಕ್ಕೂ ಪೂಜನೀಯ ದೇವರುಗಳು. ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಬರೆಯುವುದು ನಾವು ಸಹಿಸುವುದಿಲ್ಲ” ಎಂದರು.

“ಅಲ್ಲಾ ಸ್ವಾಮಿ ನಾನಂದ ಮಾತ ಪುನಃ ಅನ್ನಬೇಕಾಗುತ್ತೆ. ಕೃಷ್ಣ ಗೊಲ್ಲರವನು, ಅಂದ್ರೆ ನಮ್ಮವನು. ರಾಮ ಕ್ಷತ್ರಿಯ. ರಾಜನ ತಪ್ಪನ್ನ ಪ್ರಶ್ನೆ ಮಾಡೋ ಅಂತ ಹಕ್ಕನ್ನ ರಾಮನೆ ಕೊಟ್ಟಿದ್ದ. ಇನ್ನ ರಾಮಾಂಜನೇಯರಿಗೆ ಯುದ್ಧ ಆದಾಗ ರಾಮ ಎಷ್ಟೇ ಆಗಲಿ ನೀವು ಕಪಿಗಳು ಅಂತ ಮೂದಲಿಸಿದ. ಆಗ ಆಂಜನೇಯ ಆ ಕಪಿಗಳೇ ಅಲ್ಲವ ಯುದ್ಧ ಮಾಡಿ ಸೀತೆಯನ್ನು ತಂದು ನಿಮಗೊಪ್ಪಿಸಿದ್ದು ಪ್ರಭು ಅಂದ. ರಾಮ ಸತ್ಯಸಂಗತಿಗಳ ಒಪ್ಪಿಗತಿದ್ದ. ಅದಕೆ ಅಲವ ಅವನು ಪುರುಷೋತ್ತಮನಾಗಿದ್ದು. ಇವ್ಲೆಲ್ಲ ನಿಮಗೆ ಗೊತ್ತಿರಬೇಕು” ಅಂದರು. ಪೇಜಾವರ ವಿಚಾರಣಾ ಸಭೆ ದಂಗುಬಡಿದುಹೋಯ್ತು. ಕೃಷ್ಣ ನಮ್ಮವನು ಎಂದ ಈತ ಗೊಲ್ಲರವನಿರಬೇಕೆಂದು ಜಗದ್ಗುರುಗಳು ಗಲಿಬಿಲಿಗೊಳಗಾದರು.

“ನೋಡಿ ಹೀಗೆಲ್ಲ ಮಾತನಾಡುವುದು ಬೇಡ. ನೀವು ನಮ್ಮ ದೈವಗಳ ಬಗ್ಗೆ ಹಗುರವಾಗಿ ವಾದಿಸುವುದು ಬೇಡ, ಈಗ ಹೋಗಿ” ಎಂದುಬಿಟ್ಟರು. ಪೇಜಾವರರು ಹಾಗನ್ನಬೇಕಾದರೆ, ಈ ಮನುಷ್ಯ ಮತ್ತೆ ಕೆದಕುವಂತೆ ಕೃಷ್ಣ ರಾಮರ ಮತ್ತು ತಮ್ಮ ಸಂಬಂಧದ ವಿಷಯ ಹೇಳುವಂತೆ ಸವಾಲಾಕಲು ತಯಾರಾಗುವಂತೆ ಕಂಡರು. ಆದ್ದರಿಂದ ಬೇಗ ಸಾಗಹಾಕಲು ಪೇಜಾವರರು ಹವಣಿಸಿದರು. ತಾವಾಡಿದ ಮಾತು ಪೇಜಾವರರಿಗೆ ತಾಕಿದೆ ಇಷ್ಟು ಸಾಕು ಎಂದು ಗ್ರಹಿಸಿದ ಕಂಬಾಳರು ಅಲ್ಲಿಂದ ನಿರ್ಗಮಿಸಿದರು.

ನಾನು ಗಮನಿಸಿದಂತೆ ಕಂಬಾಳರು ಈ ಪ್ರಸಂಗವನ್ನು ಎಲ್ಲೂ ಹೇಳಿಕೊಳ್ಳಲಿಲ್ಲ. ಆ ರೂಪದ ಪ್ರಚಾರವೂ ಅವರಿಗೆ ಬೇಕಿರಲಿಲ್ಲ. ಆ ದಿನ ನಾಗತಿಹಳ್ಳಿ ಚಂದ್ರಶೇಖರನ ಆಫೀಸಿನಲ್ಲಿ ಕುಳಿತು ಅವಿದ್ಯಾವಂತರ ಅವಿವೇಕವನ್ನು ಹೇಳಿದಂತೆ ಸಹಜವಾಗಿ ಹೇಳಿದ್ದರು. ಅವತ್ತು ನಾಗತಿಹಳ್ಳಿ ಚಂದ್ರಶೇಖರನ ಕೋರಿಕೆಯಂತೆ ಕರಿಭಂಟ ಎನ್ನುವ ಜನಪದ ನಾಟಕ ಬರೆದುಕೊಟ್ಟರು. ಅದೊಂದು ಅದ್ಭುತ ನಾಟಕ; ನಾಗರಿಕ ಜಗತ್ತಿನ ನರರನ್ನು ಕಂಡರಾಗದ ಕಾಡಿನ ಜನರು ಅವರ ವಾಸನೆಗೂ ಕೆರಳುವಂತೆ ವ್ಯಗ್ರಗೊಳ್ಳುವ ಕಥಾವಸ್ತು. ಇವತ್ತಿಗೂ ನಮ್ಮ ಕಾಡೊಳಗಿನ ಅದಿವಾಸಿಗಳು ಹೆದರುವುದು ಕಾಡುಪ್ರಾಣಿಗಳಿಗಲ್ಲ ಬದಲಿಗೆ ಕಾಡಿನ ಇಲಾಖೆಯ ಜನರಿಗೆ. ಇಂತಹ ವಸ್ತುವಿದ್ದ ನಾಟಕವನ್ನು ನಾಗತಿಹಳ್ಳಿ ಹೆಣ್ಣುಮಕ್ಕಳು ಮನಮುಟ್ಟುವಂತೆ ಅಭಿನಯಿಸಿ ದೆಹಲಿಯವರೆಗೂ ಹೋಗಿಬಂದರು. ಮನೆಯ ಹೊಸಲಿಂದ ಈಚೆ ಬರದಂತಿದ್ದ ಹೆಣ್ಣುಮಕ್ಕಳೆಲ್ಲಾ ಮನಬಿಚ್ಚಿ ಅಭಿನಯಿಸಿದ್ದು ಒಂದು ದಾಖಲೆಯಾಗಿತ್ತು. ತಾನು ಬರೆದದ್ದನ್ನು ಈ ಲೋಕಕ್ಕೆ ಅರ್ಪಿಸಿದ ನಂತರ ಸಿದ್ದಗಂಗಯ್ಯ ಅತ್ತ ಸುಳಿಯುತ್ತಿರಲಿಲ್ಲ. ಅದೇನಿದ್ದರೂ ಈಗ ಆ ಲೋಕಕ್ಕೆ ಸೇರಿದ್ದು ಎನ್ನುವಂತಿದ್ದರು. ಈಗ ನಮ್ಮೆಲ್ಲಾ ಪ್ರತಿಭಾವಂತರನ್ನು, ದೇವರುಗಳನ್ನು ಮತ್ತು ಐತಿಹಾಸಿಕ ವ್ಯಕ್ತಿಗಳನ್ನ ಅಪಹರಿಸಿ ತಮ್ಮವರನ್ನಾಗಿಸಿಕೊಳ್ಳುತ್ತಿರುವವರ ವಿರುದ್ಧ ಕಂಬಾಳರಂತೆ ಪ್ರಶ್ನೆಮಾಡಿ ದಕ್ಕಿಸಿಕೊಳ್ಳಬೇಕಿದೆ. ಅದು ನಾವು ಸಿದ್ದಗಂಗಯ್ಯನವರಿಗೆ ಸಲ್ಲಿಸುವ ಗೌರವ.


ಇದನ್ನೂ ಓದಿ: ಮುರುಘಾ ಶರಣರ ಮರುಳು ಮಾತು ನಿಜವೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಗಳ ವಿಚ್ಛೇದನ: ಸಿಹಿ ಹಂಚಿ, ಮೆರವಣಿಗೆಯಲ್ಲಿ ಆಕೆಯನ್ನು ಮನೆಗೆ ಕರೆತಂದ ನೀವೃತ್ತ ನ್ಯಾಯಾದೀಶ ಮತ್ತು ಕುಟುಂಬ

ಮೀರತ್: ಕೌಟುಂಬಿಕ ನ್ಯಾಯಾಲಯದಲ್ಲಿ ಮಗಳ ವಿಚ್ಛೇದನ ಅಂತಿಮವಾದ ನಂತರ ಆಕೆಯನ್ನು ಡೋಲು, ನೃತ್ಯಗಳ ಮೆರವಣಿಗೆಯಲ್ಲಿ ಸಂಭ್ರಮದಿಂದ ತಂದೆ ಮನೆಗೆ ಕರೆತಂದ ಘಟನೆ ಮೀರನ್ ನಲ್ಲಿ ನಡೆದಿದೆ.  ಪೋಷಕರ ಬೆಂಬಲದ ಅಪರೂಪದ ಮತ್ತು ಹೃದಯಸ್ಪರ್ಶಿ ಪ್ರದರ್ಶನದಲ್ಲಿ,...

“ನೀನು ನಿಜವಾಗಿಯೂ ಅಂಬೇಡ್ಕರ್ ಮಗಳಾ ಎಂದು ತಿಳಿಯಲು ನಾವು ನಿನ್ನ ಡಿಎನ್‌ಎ ಟೆಸ್ಟ್ ಮಾಡುತ್ತೇವೆ” ದೆಹಲಿ ಸಭೆಯಲ್ಲಿ ದಲಿತ ಟ್ರಾನ್ಸ್ ಹೋರಾಟಗಾರ್ತಿ ಗ್ರೇಸ್ ಬಾನುಗೆ ಜಾತಿ ನಿಂದನೆ ಆರೋಪ

ಕೇಂದ್ರ ಸರ್ಕಾರದ ವಿವಾದಾತ್ಮಕ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಕಾಯ್ದೆ, 2026ರ ವಿರುದ್ಧ ಕಳೆದ ಕೆಲ ವಾರಗಳಿಂದ ಇಡೀ ಟ್ರಾನ್ಸ್‌ಜೆಂಡರ್ ಮತ್ತು ಪ್ರಗತಿಪರ ಸಮುದಾಯ ಪ್ರತಿಭಟನೆ ನಡೆಸುತ್ತಿದೆ. ಈ ನಡುವೆ ಶುಕ್ರವಾರ...

‘ಮೋದಿ ಕ್ರಿಶ್ಚಿಯನ್ ಸಂಸ್ಥೆಗಳಲ್ಲಿ ಭಯ ಹುಟ್ಟಿಸಲು ಪ್ರಯತ್ನಿಸುತ್ತಿದ್ದಾರೆ’: ಎಫ್‌ಸಿಆರ್‌ಎ ತಿದ್ದುಪಡಿ ಕುರಿತು ಮಲ್ಲಿಕಾರ್ಜುನ ಖರ್ಗೆ

ಇಡುಕ್ಕಿ (ಕೇರಳ): ಸಾರ್ವಜನಿಕ ಮತ್ತು ಸಾಮಾಜಿಕ ಕಲ್ಯಾಣ ಕ್ಷೇತ್ರದಲ್ಲಿ ಕೆಲಸ ಮಾಡುವ ಕ್ರಿಶ್ಚಿಯನ್ ಸಂಸ್ಥೆಗಳು, ಎನ್‌ಜಿಒಗಳು ಮತ್ತು ನಾಗರಿಕ ಸಮಾಜದ ಮೇಲೆ ದಾಳಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಎಫ್‌ಸಿಆರ್‌ಎ (ವಿದೇಶಿ ದೇಣಿಗೆ...

ವೈದ್ಯಕೀಯ, ತಾಂತ್ರಿಕ ಶಿಕ್ಷಣದಲ್ಲಿ ಎಸ್‌ಸಿ/ಎಸ್‌ಟಿ ಮೀಸಲಾತಿ ಹೆಚ್ಚಿಸಿದ ಒಡಿಶಾ ಸರ್ಕಾರ, ಒಬಿಸಿ ವಿದ್ಯಾರ್ಥಿಗಳಿಗೆ ಹೊಸ ಕೋಟಾ

ಮಹತ್ವದ ನಿರ್ಧಾರ ಕೈಗೊಂಡಿರುವ ಒಡಿಶಾ ಸರ್ಕಾರ, ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ಇತರ ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣ ಕೋರ್ಸ್‌ಗಳಲ್ಲಿ ಪರಿಶಿಷ್ಟ ಪಂಗಡ (ಎಸ್‌ಟಿ), ಪರಿಶಿಷ್ಟ ಜಾತಿ (ಎಸ್‌ಸಿ) ಅಭ್ಯರ್ಥಿಗಳಿಗೆ ಮೀಸಲಾತಿಯನ್ನು ಗಣನೀಯವಾಗಿ ಹೆಚ್ಚಿಸಿದೆ....

ಶಾಲಾ ವಾರ್ಷಿಕೋತ್ಸವದಲ್ಲಿ ಲವಲವಿಕೆಯಿಂದ ಭಾಗವಹಿಸಿದ್ದ 6 ಮಕ್ಕಳು, ತಡರಾತ್ರಿ ಹೊತ್ತಿಗೆ ಶವವಾದರು : ಮಹಾರಾಷ್ಟ್ರದಲ್ಲೊಂದು ಹೃದಯ ವಿದ್ರಾವಕ ಘಟನೆ

ಶಾಲಾ ವಾರ್ಷಿಕೋತ್ಸವದಲ್ಲಿ ಬಹಳ ಉತ್ಸಾಹದಿಂದ ಭಾಗವಹಿಸಿದ್ದ ಆರು ಮಂದಿ ಮಕ್ಕಳು, ತಡ ರಾತ್ರಿ ಹೊತ್ತಿಗೆ ಶವವಾದ ಹೃದಯ ವಿದ್ರಾವಕ ಘಟನೆಯೊಂದು ಮಹಾರಾಷ್ಟ್ರದ ದಿಂಡೋರಿಯಲ್ಲಿ ಶುಕ್ರವಾರ (ಏ.3) ನಡೆದಿದೆ. ನಾಸಿಕ್‌ ನಗರದಿಂದ 20 ಕಿಲೋ...

ಕೇರಳ: ಕೊಲ್ಲಂನಲ್ಲಿ ಟಿವಿ ಚಾನೆಲ್ ಕಚೇರಿ ಮೇಲೆ ಸ್ಫೋಟಕ ವಸ್ತು ಎಸೆತ

ಕೊಲ್ಲಂ: ಇಲ್ಲಿನ ಟಿವಿ ಚಾನೆಲ್ ಒಂದರ ಕಚೇರಿಯ ಮೇಲೆ ಭಾನುವಾರ ಬೆಳಿಗ್ಗೆ ಸ್ಫೋಟಕ ವಸ್ತು ಎಸೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಆ ಪ್ರದೇಶ ಮತ್ತು ಚಾನೆಲ್ ಕಚೇರಿಯ ಸಿಸಿಟಿವಿ ದೃಶ್ಯಗಳಲ್ಲಿ ಇಬ್ಬರು...

ಹತ್ಯೆಯಾದ ಇರಾನ್ ಕಮಾಂಡರ್ ಖಾಸಿಮ್ ಸುಲೈಮಾನಿ ಅವರ ಸೊಸೆ, ಮೊಮ್ಮಗಳನ್ನು ಬಂಧಿಸಿದ ಅಮೆರಿಕ

ನವದೆಹಲಿ: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಶುಕ್ರವಾರ ತಮ್ಮ ಶಾಶ್ವತ ನಿವಾಸಿ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ನ ದಿವಂಗತ ನಾಯಕ ಖಾಸಿಮ್ ಸೊಲೈಮಾನಿ ಅವರ...

ಇರಾನ್ ಮೇಲೆ ಬೃಹತ್ ದಾಳಿ: ಹಲವು ಉನ್ನತ ನಾಯಕರನ್ನು ಕೊಲ್ಲಲಾಗಿದೆ ಎಂದು ವಿಡಿಯೋ ಹಂಚಿಕೊಂಡ ಟ್ರಂಪ್

ಟೆಹ್ರಾನ್ ಮೇಲೆ ನಡೆದ ದಾಳಿಯ ವೀಡಿಯೊವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಂಚಿಕೊಂಡಿದ್ದು, ಹಲವಾರು ಇರಾನ್ ಮಿಲಿಟರಿ ನಾಯಕರ ಸಾವಿಗೆ ಅದು ಕಾರಣ ಎಂದು ಹೇಳಿಕೊಂಡಿದ್ದಾರೆ. "ಟೆಹ್ರಾನ್‌ನಲ್ಲಿ ನಡೆದ ಈ ಬೃಹತ್ ದಾಳಿಯೊಂದಿಗೆ, ಇರಾನ್‌ನ...

ಅಸ್ಸಾಂ ಚುನಾವಣೆ : ನುಸುಳುಕೋರರಿಂದ ಯುವ ಕಲ್ಯಾಣಕ್ಕೆ ವರಸೆ ಬದಲಿಸಿದ ಬಿಜೆಪಿ

ಅಸ್ಸಾಂ ವಿಧಾನಸಭಾ ಚುನಾವಣೆಗೆ ನಾಲ್ಕು ದಿನಗಳು ಬಾಕಿ ಇರುವಾಗ ಬಿಜೆಪಿ ತನ್ನ ಪ್ರಚಾರದ ವರಸೆಯನ್ನು ಬದಲಿಸಿಕೊಂಡಿದೆ. ನುಸುಳುಕೋರರನ್ನು ಹೊರಹಾಕುತ್ತೇವೆ, ಅಕ್ರಮ ವಲಸೆಗೆ ಕಡಿವಾಣ ಹಾಕುತ್ತೇವೆಂದು ಅಬ್ಬರಿಸುತ್ತಿದ್ದ ಬಿಜೆಪಿಗರು, ಈಗ ನುಸುಳಕೋರರ ವಿಷಯವನ್ನು ಬದಿಗೊತ್ತಿದ್ದಾರೆ....

ಕುಡಿದ ಮತ್ತಿನಲ್ಲಿ ಕಾರು ಚಾಲನೆ: ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ 19ವರ್ಷದ ಯುವಕ ಸಾವು 

ಬೆಂಗಳೂರು: ಕುಡಿದ ಮತ್ತಿನಲ್ಲಿ ಹದಿಹರೆಯದ ಯುವಕನೊಬ್ಬ ಚಲಾಯಿಸುತ್ತಿದ್ದ ಕಾರು, 19 ವರ್ಷದ ಯುವಕನ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಆತ ಸಾವನ್ನಪ್ಪಿದ್ದಾನೆ. ಮಲ್ಲೇಶಪಾಳ್ಯದ ಮಾರುತಿನಗರದ 10 ನೇ ಮುಖ್ಯ ರಸ್ತೆಯಲ್ಲಿ ಶುಕ್ರವಾರ ತಡರಾತ್ರಿ...