Homeಸಾಹಿತ್ಯ-ಸಂಸ್ಕೃತಿಕವನಎರಿನ್ ಹ್ಯಾನ್ಸನ್ ಅವರ ನಾಲ್ಕು ಪದ್ಯಗಳ ಅನುವಾದ

ಎರಿನ್ ಹ್ಯಾನ್ಸನ್ ಅವರ ನಾಲ್ಕು ಪದ್ಯಗಳ ಅನುವಾದ

- Advertisement -
- Advertisement -

1.

ನೀನು,
ನಿನ್ನ ವಯಸ್ಸಲ್ಲ,
ನಿನ್ನ ಎತ್ತರವಲ್ಲ,
ನೀನು ಧರಿಸುವ ಉಡುಪೂ ಅಲ್ಲ,
ನಿನ್ನ ತೂಕವಲ್ಲ,
ನಿನ್ನ ಕೂದಲಿನ ಬಣ್ಣವೂ ಅಲ್ಲ.

ನೀನು ನಿನ್ನ ಹೆಸರಲ್ಲ,
ನಿನ್ನ ಕೆನ್ನೆಯಲಿ ಬೀಳುವ ಗುಳಿಯೂ ಅಲ್ಲ.

ಆದರೆ ನೀನು,
ನೀನು ಓದಿದ ಎಲ್ಲ ಪುಸ್ತಕಗಳು,
ನೀನು ಆಡಿದ ಎಲ್ಲ ಮಾತುಗಳು,
ನಿನ್ನ ಮುಂಜಾನೆಯ ಗಡಸು ದನಿ ಮತ್ತು
ನೀನು ಮುಚ್ಚಿಟ್ಟುಕೊಳ್ಳಲು ಪ್ರಯತ್ನಿಸುವ
ನಿನ್ನ ಮುಗುಳ್ನಗು.

ನೀನು,
ನಿನ್ನ ನಗೆಯೊಳಗಿನ ಮಾಧುರ್ಯ ಮತ್ತು
ನೀನು ಅತ್ತ ಎಲ್ಲ ಕಣ್ಣೀರು.

ನೀನು,
ಗಟ್ಟಿಯಾಗಿ ನೀನು ಹಾಡುವ ಹಾಡುಗಳು,
ನಿನಗೆ ಮಾತ್ರ ಗೊತ್ತಿರುವ ನಿನ್ನ ಏಕಾಂತ,
ನೀನು ಭೇಟಿ ಮಾಡಿದ ಎಲ್ಲ ಸ್ಥಳಗಳು ಮತ್ತು
ನೀನು ಮನೆ ಎಂದು ಕರೆಯುವ ಜಾಗ.

ನೀನು,
ನೀನು ನಂಬಿಕೆಯಿಟ್ಟಿರುವ ಸಂಗತಿಗಳು,
ನೀನು ಪ್ರೀತಿಸುವ ಎಲ್ಲ ಜನಗಳು ಮತ್ತು,
ನಿನ್ನ ಬೆಡ್ರೂಮಿನಲ್ಲಿರುವ ಎಲ್ಲ ಫೋಟೋಗಳು ಮತ್ತು
ನೀನು ಕನಸುಗಾಣುವ ಭವಿಷ್ಯ.

ಎಷ್ಟೊಂದು ಚೆಲುವುಗಳಿಂದ
ಸೃಷ್ಟಿಯಾಗಿರುವೆ ನೀನು
ಆದರೂ
ಬಹುಶಃ ಎಲ್ಲ ಮರೆತಿರುವೆ,
ಯಾವಾಗ ಜನ
ನೀನು ಯಾವುದಲ್ಲವೋ ಆ ಸಂಗತಿಗಳಿಂದಲೇ
ನಿನ್ನನ್ನು ಗುರುತಿಸುತ್ತಿದ್ದಾರೆ ಎನ್ನುವುದು
ಗೊತ್ತಾದಾಗ ನಿನಗೆ.
________________________________

2.

ನಿನ್ನ ಕಣ್ಣುಗಳ ದಿಟ್ಟಿಸುತ್ತ,
ನಿನ್ನ ಎಲ್ಲ ಮಾತುಗಳಿಗೆ ಕಿವಿಯಾಗಬಲ್ಲೆನೇ ಹೊರತು
ಎಂದೂ ನಿನ್ನೆದುರು ನನ್ನ ಎದೆಯ ಬಿಚ್ಚಿಡುವುದಿಲ್ಲ.
ನಾನು ಬದಲಾಗಬೇಕು ಎನ್ನುವ
ನಿನ್ನ ಬೇಡಿಕೆಯಲ್ಲಿ ಇರುವ ಕಳಕಳಿ
ಗೊತ್ತಾಗುತ್ತದೆ ನನಗೆ.
ಆದರೆ ಈ ಬದಲಾಗುವುದನ್ನ
ಎಲ್ಲಿಂದ ಮೊದಲು ಮಾಡಲಿ ನಾನು?
ನನ್ನ ನಗು ಲೋಕಕ್ಕೆ ಕಾಣುವುದಕ್ಕಿಂತ ಹೆಚ್ಚಾಗಿ
ನನಗೆ ಕಾಣಿಸಿದ್ದೇ ಹೆಚ್ಚು.
ಕಾರಣ ಅಂಥ ವಿಶೇಷವೇನಿಲ್ಲ,
ನನ್ನ ನಗು
ನಾನು ನನ್ನ ಜೊತೆ ಇರುವಾಗ ಮಾತ್ರ ಸಾಚಾ.
ಅರ್ಥವಾಗುವುದಿಲ್ಲ ಜನರಿಗೆ ನನ್ನ ಭಾವನೆಗಳು
ಮತ್ತು ಈಗೀಗ ಅವರು ಅರ್ಥ ಕೇಳುವುದಿಲ್ಲ ಕೂಡ,

ಏಕೆಂದರೆ
ಮೂರ್ಖರನ್ನಾಗಿಸಿದ್ದೇನೆ ಅವರನ್ನೆಲ್ಲ ನಾನು
ಎನ್ನುವ ಅನುಮಾನ
ಅವರಿಗಷ್ಟೇ ಅಲ್ಲ ಇದೆ ನನಗೂ.
ಮುಖವಾಡದಾಚೆಗಿನ ನನ್ನ ಮುಖ
ಕಾಣಿಸುವುದಿಲ್ಲ ಅವರಿಗೆ.
ಲೋಕ ಇನ್ನೂ ನಿದ್ದೆಯಲ್ಲಿರುವಾಗ,

ರಾತ್ರಿಯನ್ನು ಸಾಕ್ಷಿಯಾಗಿಟ್ಟುಕೊಂಡು
ಜನ ನನ್ನೆದುರು
ತಮ್ಮ ಕುತೂಹಲಗಳನ್ನು ತೋಡಿಕೊಂಡಾಗಲೆಲ್ಲ,
ನನ್ನ ರಹಸ್ಯಗಳನ್ನ ಅವರೆದುರು ಬಿಚ್ಚಿಟ್ಟು
ಹಾಕಿದ್ದೇನೆ ಸವಾಲು,
ಆದರೆ ನನ್ನ ಕಣ್ಣಿನ ಹಸಿ ಆರಿ ಹೋಗುವ ಮುನ್ನವೇ
ಅವರು ಎದ್ದು ಹೋದಾಗ ಖಾತ್ರಿ ಮಾಡಿಕೊಂಡಿದ್ದೇನೆ,
ಜನರಿಗೆ ಬಾಡಿಗೆ ಕುತೂಹಲ ಮಾತ್ರ
ಸ್ವಂತಿಕೆಯಿಲ್ಲ ಒಬ್ಬರಲ್ಲೂ
ನನ್ನ ಬಗ್ಗೆ

ನನ್ನ ನಗು ನಕಲಿ ಎನ್ನುವ
ಲೋಕದ ಆಪಾದನೆಗಳನ್ನು ಕೇಳಿದಾಗಲೆಲ್ಲ
ನಗುತ್ತೇನೆ ಬಿದ್ದು ಬಿದ್ದು ಮತ್ತು
ಬಾಕಿ ಉಳಿದ ರಾತ್ರಿಗಳ ಕತ್ತಲನ್ನು ಮಡಿಚಿಟ್ಟು
ಬೆಚ್ಚಿ ಬೀಳಿಸುತ್ತೇನೆ
ಗಂಡು ಜಾತಿಯ ತಿಳಿವಳಿಕೆಯನ್ನ.
________________________________

3.

ಹೃದಯಗಳಿಗಾಗಿಯೇ ಎಂಬಂತೆ
ಮಾಡಿಸಿಟ್ಟುಕೊಂಡಿದ್ದಾಳೆ ಒಂದು ಬುಕ್ ಶೆಲ್ಫ್,
ಮತ್ತು ಬರೆಯುವ ಶಾಯಿ
ತುಂಬಿಕೊಂಡಿದೆ ಅವಳ ನರನಾಡಿಗಳಲ್ಲಿ.
ಅವಳ ಮೆದುಳಿನಲ್ಲಿ ಕುಟ್ಟುವ
ಟೈಪ್ ರೈಟರ್‌ನ ಕೀಗಳು ನಿನ್ನನ್ನು
ಅವಳ ಕಥೆಯಲ್ಲಿ ಪ್ರಕಟ ಮಾಡುತ್ತವೆ.
ಅವಳ ಪುಟಗಳನ್ನು ತಿರುವಿಹಾಕಿದ,
ಆದರೆ ಕೊನೆಯ ಪುಟ ಮುಟ್ಚುವ ಮುನ್ನವೇ
ಪುಸ್ತಕ ಮುಚ್ಚಿಬಿಟ್ಟವರ ಕಥೆಗಳ ನೂಕುನುಗ್ಗಲಿನಿಂದಾಗಿ
ತುಂಬಿಹೋಗಿದೆ ಅವಳ ಬುಕ್ ಶೆಲ್ಫ್.

ಕೆಲವು ಪುಸ್ತಕಗಳು ಡಸ್ಟ ಬಿನ್ ಸೇರಿರುವಾಗಲೂ
ಆ ಒಂದು ಪುಸ್ತಕ ಮಾತ್ರ
ಅವಳ ಫೈನೆಸ್ಟ್ ರೈಟಿಂಗ್
‘The One’s Who Lost My Trust’
ಧೂಳು ತಿನ್ನುತ್ತ ಬುಕ್ ಶೆಲ್ಫ್‌ನ ತುದಿಯಲ್ಲಿ
ಕೈಗೆಟುಕುವ ಹಾಗೆ ಬಾಗಿದೆ.

ಅವಳಿಗೆ ಕೆಲ ಪುಸ್ತಕಗಳನ್ನ
ಓಪನ್ ಮಾಡಲು ಭಯ ಮತ್ತು
ಕೆಲ ಪುಸ್ತಕಗಳನ್ನು ಮುಚ್ಚಲು ಬೇಸರ.
ಭೇಟಿ ಮಾಡಿದ ಪ್ರತೀ ಮನುಷ್ಯನ ಕಥೆಗಳು
ಪುಸ್ತಕದ ಕೊನೆಯಿಲ್ಲದ ಸಾಲುಗಳಲ್ಲಿ
ಹಿಗ್ಗಿಸಿಕೊಂಡಿವೆ ತಮ್ಮನ್ನು ತಾವು.

ಕೆಲವರು ಒಂದು ವಾಕ್ಯದಲ್ಲಿ ಮಾತ್ರ
ಮತ್ತು ಕೆಲವರು ಒಮ್ಮೆ ಕಥೆಯ ಮುಖ್ಯ ಭಾಗದಲ್ಲಿ,
ಅವಳ ಎದೆಯ ಮೇಲೆ ಬಿಟ್ಟು ಹೋಗಿದ್ದಾರೆ
ಶಾಯಿಯ ಹೆಜ್ಜೆ ಗುರುತುಗಳ.

ನಿಮಗೆ ಆಶ್ಚರ್ಯ ಆಗಬಹುದು
ಯಾಕೆ ಹೀಗೆ ಅವಳು?
ಯಾಕೆ ತನಗೆ ಎದುರಾದವರನ್ನ
ಕಟ್ಟಿ ಹಾಕುತ್ತಾಳೆ ತನ್ನ ಕಥೆಗಳಲ್ಲಿ?
ಅವಳಿಗೊಂದು ಭರವಸೆ;

ಮುಂದೆ ಒಂದು ದಿನ ತಾನೂ ಇನ್ನೊಬ್ಬರನ್ನು
ತಾಕಬಹುದು,
ಅವರೂ ಪಾತ್ರವಾಗಿಸಬಹುದು ತನ್ನ
ಅವರ ಕಥೆಗಳಲ್ಲಿ, ಕವಿತೆಗಳಲ್ಲಿ,
ಪ್ರೀತಿಯಾಗಿ, ಸಂಕಟವಾಗಿ, ಅಸೂಯೆಯಾಗಿ,
ಅಥವಾ ಸಾಧ್ಯವಾಗದಿದ್ದರೆ
ಪ್ರಶ್ನಾರ್ಥಕದಂತೆ, ಉದ್ಘಾರ ವಾಚಕದಂತೆ
ಅಲ್ಪ ವಿರಾಮದಂತೆ, ಪೂರ್ಣ
ವಿರಾಮವಾಗಿ.
_____________________________

4.

ನೀವು
ಯಾವುದೇ ಮೂಲೆಯನ್ನ ನೋಡಿ,
ಅಲ್ಲಿ ಅವಳು ಸಿಕ್ಕೇ ಸಿಗುತ್ತಾಳೆ ನಿಮಗೆ,
ಕತ್ತಲು, ತನ್ನೊಳಗೆ ಅಡಗಿಸಿಕೊಂಡ
ಗುಂಗುರು ಕೂದಲಿನ ಹುಡುಗಿ.

ಪುಸ್ತಕದಲ್ಲಿ ಮೂಗು ತೂರಿಸಿಕೊಂಡ,
ಮೋಡಗಳಲ್ಲಿ ಕೈಚಾಚಿಕೊಂಡ,
ಸಂತೆಗಳಿಂದ ದೂರ ನಿಂತುಕೊಂಡ,
ನಗು, ಅಳು, ನಾಚಿಕೆಗಳ ಮುಚ್ಚಿಟ್ಟುಕೊಂಡ
ಗುಂಗುರು ಕೂದಲಿನ ಹುಡುಗಿ.

ಜಗತ್ತು ನಿಮ್ಮನ್ನು ದಾಟಿ ಹೋಗುತ್ತಿರುವಾಗ
ಕುಳಿತುಕೊಳ್ಳಿ ಪಕ್ಕ, ಅವಳ ಕೈ ಹಿಡಿದುಕೊಂಡು.
ನಿಮ್ಮ ಐದೇ ಐದು ನಿಮಿಷ
ಅವಳದಾಗಬಹುದಾದರೆ,
ನೀವೇ ನೋಡುತ್ತೀರಿ, ಹೇಗೆ ಅವಳ ನಗು
ಜಗತ್ತಿನ ಅತ್ಯಂತ ಕೆಟ್ಟ ಸಂಗತಿಗಳನ್ನೂ
ಬೇಕೆನಿಸುವಂತೆ ಮಾಡುತ್ತದೆ,
ಮತ್ತೆ ಮತ್ತೆ ನಿಮಗೆ.

ಆದರೆ ನೀವು
ಕತ್ತಲ ಮೂಲೆಗಳನ್ನು ನೋಡುವುದಿಲ್ಲ,
ಆ ದಿಕ್ಕಿನಲ್ಲಿ ಹೊರಳುವುದೂ ಇಲ್ಲ.
ಆದರೂ ಅವಳು ನಿಮ್ಮ ಒಂದು ನೋಟಕ್ಕಾಗಿ
ಕಾಯುತ್ತಲೇ ಇದ್ದಾಳೆ ಇನ್ನೂ,
ತನ್ನ ನಗು, ಅಳು, ನಾಚಿಕೆಗಳ ಮುಚ್ಚಿಟ್ಟುಕೊಂಡ,
ಪುಸ್ತಕದಲ್ಲಿ ಮೂಗು ತೂರಿಸಿಕೊಂಡ,
ಗುಂಗುರು ಕೂದಲಿನ ಹುಡುಗಿ.
—————————

ಎರಿನ್ ಹ್ಯಾನ್ಸನ್
ಅಸ್ಟ್ರೇಲಿಯಾ ಮೂಲದ ಕವಿ. ತಮ್ಮ 11ನೆಯ ವಯಸ್ಸಿನಲ್ಲಿಯೇ ಬ್ಲಾಗ್‌ನಲ್ಲಿ ಅಭಿವ್ಯಕ್ತಿಸುತ್ತಿದ್ದ ಅವರ ಪದ್ಯಗಳು ಭಾರಿ ಜನಪ್ರಿಯತೆ ಪಡೆದು ಕವಿಯಾಗಿ ಗುರುತಿಸಿಕೊಂಡವರು.

(ಕನ್ನಡಕ್ಕೆ): ಚಿದಂಬರ ನರೇಂದ್ರ
ಕವಿ, ಅನುವಾದಕ. ’ಚಿಕ್ಕಿ ತೋರಿಸ್ತಾವ ಚಾಚಿ ಬೆರಳ’, ’ಹೂಬಾಣ’, ’ಗಾಳೀ ಕೆನೆ’ ಪ್ರಕಟಿತ ಕವನ ಸಂಕಲನಗಳು.


ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-1; ಭಾಗ-1)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....